Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಎಸ್.ಬಿ.ಕಲಾ ಹಾಗೂ ವಿಜ್ಞಾನ ಮಹಾವಿದ್ಯಾಲಯದಲ್ಲಿ ಸಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಉದ್ಘಾಟನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿದ್ಯಾರ್ಥಿಗಳು ಉತ್ಸಾಹದಿಂದ ಕ್ರೀಡೆಗಳಲ್ಲಿ ಭಾಗವಹಿಸಿದರೆ, ಉತ್ತಮ ಜ್ಞಾನ ಹಾಗೂ ಆರೋಗ್ಯ ಹೊಂದಬಹುದು ಎಂದು ಜ್ಞಾನಯೋಗಾಶ್ರಮದ ಪೀಠಾಧಿಪತಿ ಬಸವಲಿಂಗ ಸ್ವಾಮೀಜಿ ಹೇಳಿದರು.ನಗರದ ಎಸ್.ಬಿ.ಕಲಾ ಹಾಗೂ ವಿಜ್ಞಾನ ಮಹಾವಿದ್ಯಾಲಯದಲ್ಲಿ ಸಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಆಶೀರ್ವಾಚನ ನೀಡಿದರು. ವಿದ್ಯಾರ್ಥಿ ಜೀವನ ಅತ್ಯಂತ ಅಪರೂಪದ ವಯಸ್ಸು. ದೇವರು ಕೆಲವರಿಗೆ ಅಂಗ ವೈಕಲ್ಯದಿಂದ ಕಣ್ಣು, ಕಿವಿ ಕೊಟ್ಟಿರುವುದಿಲ್ಲ ಆದರೆ ನಮಗೆ ಎಲ್ಲವನ್ನು ಕೊಟ್ಟಾಗ ಕ್ರೀಡೆ ಹಾಗೂ ಸಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ, ಕ್ರೀಡೆಯಲ್ಲಿ ಉನ್ನತ ಸಾಧನೆ ಮಾಡಬೇಕು. ಇವತ್ತು ನೀವು ನೆರಳಲ್ಲಿ ಕುಳಿತು ಪಾಠ ಕೇಳುತ್ತಿದ್ದಿರಿ ಆದರೆ ನಿಮ್ಮ ತಂದೆ-ತಾಯಿಗಳು ಬಿಸಿಲಲ್ಲಿ ಕೃಷಿ ಕೆಲಸ ಮಾಡುತ್ತಿದ್ದಾರೆ. ನೀವು ಸಾಧನೆ ಮಾಡಿ ಉನ್ನತ ಹುದ್ದೆ ಅಲಂಕರಿಸಿದಾಗ ಅವರ ಶ್ರಮಕ್ಕೆ ನಿಜವಾದ ಸಾರ್ಥಕತೆ ಬರುತ್ತದೆ ಎಂದರು.ಕ್ರೀಡೆ ಇಲ್ಲದ ಜೀವನ ಕೀಟತಿಂದ ಹಣ್ಣಿನಂತೆ ಅದಕ್ಕೆ ಬೆಲೆ ಇರುವುದಿಲ್ಲ. ಹಾಗಾಗಿ ಸದಾ ಚಟುವಟಿಕೆಯಿಂದ ಇದ್ದರೆ,…
ಲೇಖನ- ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ-ಗದಗ ಉದಯರಶ್ಮಿ ದಿನಪತ್ರಿಕೆ ಆ ಪಾಠಶಾಲೆಯ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಅಬ್ರಾಹ್ಮಣನಾದ ವಿದ್ಯಾರ್ಥಿಯೋರ್ವನ ಮೇಲೆ ಯಾವತ್ತೂ ಅಸಮಾಧಾನ. ಇದನ್ನು ಪರಿಹರಿಸಲು ಜ್ಞಾನಿಯಾದ ಗುರುಗಳು ಎಲ್ಲರಿಗೂ ಒಂದೊಂದು ಬಾಳೆಹಣ್ಣನ್ನು ಕೊಟ್ಟು ಯಾರೂ ಇಲ್ಲದ ಜಾಗದಲ್ಲಿ ತಿಂದು ಬರಲು ಹೇಳಿದರು. ಅಂದು ಸಂಜೆ ಮತ್ತೆ ಎಲ್ಲರೂ ಸೇರಿದಾಗ ಗುರುಗಳು ಹಣ್ಣನ್ನು ಏನು ಮಾಡಿದಿರಿ? ಎಂದು ಕೇಳಿದಾಗ, ಒಬ್ಬೊಬ್ಬರೂ ತಾವು ತಿಂದ ರೀತಿಯನ್ನು ಸವಿಸ್ತಾರವಾಗಿ ಹೇಳಿದರು. ಗುರುಗಳ ನೆಚ್ಚಿನ ಶಿಷ್ಯ ಮಾತ್ರ ಬಾಳೆಹಣ್ಣನ್ನು ಗುರುಗಳಿಗೆ ಮರಳಿಸುತ್ತಾ ಆ ದೇವರು ಸರ್ವಾಂತರ್ಯಾಮಿ ಹಾಗಾಗಿ ಯಾರೂ ನೋಡದ ಸ್ಥಳ ಈ ಜಗದಲ್ಲಿ ಯಾವುದು ಇಲ್ಲ ಎಂದು ಹೇಳಿದರು. ಆ ಶಿಷ್ಯನ ಮಾತನ್ನು ಕೇಳಿದ ಉಳಿದೆಲ್ಲ ಮಕ್ಕಳು ಕಕ್ಕಾವಿಕ್ಕಿಯಾಗಿ ಆತನನ್ನೇ ನೋಡಿದರೆ ಗುರುಗಳು ಹೆಮ್ಮೆಯಿಂದ ತಮ್ಮ ಶಿಷ್ಯನ ತಲೆ ಸವರಿದರು.ಆ ಶಿಷ್ಯನೇ ನಮ್ಮ ವಿಶ್ವ ಬಂಧುವೆನಿಸಿದ, ಕುಲದ ನೆಲೆಯನ್ನೇ ಪ್ರಶ್ನಿಸಿದ ದಾಸ ಸಾಹಿತ್ಯದ ಶ್ರೇಷ್ಠರಾದ ಕನಕದಾಸರು. ಇನ್ನೊಂದು ಬಾರಿ ಕೂಡ ‘ಸ್ವರ್ಗಕ್ಕೆ ಯಾರು ಹೋಗುತ್ತಾರೆ?’…
Udayarashmi kannada daily newspaper
ಉದ್ಯಾನ ನಗರಿಯಲ್ಲಿ ರಾಜ್ಯ ಮಟ್ಟದ ಖೋಖೋ ನಿನಾದ | ಪಂದ್ಯಾವಳಿಗೆ ಅದ್ದೂರಿ ಚಾಲನೆ | ಕ್ರೀಡಾಪ್ರಿಯರು ಮಿಂಚಿನ ಆಟಕ್ಕೆ ಫಿದಾ ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ಇದೊಂದು ಶರೀರದ ಪ್ರತಿಯೊಂದು ಅಂಗಗಳು ಮಿಂಚಿನ ವೇಗದಲ್ಲಿ ಉನ್ಮಾದದಿಂದ ಚಲಿಸಿ ರೋಮರೋಮಗಳಲ್ಲಿ ರೋಚಕತೆಯ ಹುಮ್ಮಸ್ಸು ಹೆಚ್ಚಿಸುವ ಆಟ! ನೋಡುಗರ ಮನದಲ್ಲಿ ಕ್ಷಣಕ್ಷಣವೂ ಉತ್ಸುಕತೆಯ ರಮ್ಯತೆ ಮೇಳೈಸುವ ಆಟ. ಹೃದಯ ಬಡಿತದ ಏರಿಳಿತದೊಂದಿಗೆ ಕಣ್ಣುರೆಪ್ಪೆ ತೆರೆದು ಮುಚ್ಚುವಷ್ಟರಲ್ಲಿಯೇ ಆಟದ ಗತ ವೈಭವ ಬದಲಾಯಿಸುವಂಥ ವಿರೋಚಿತ ನೋಟ ಈ ಖೋಖೋ ಆಟೋಟದಲ್ಲಿ ಗೋಚರಿಸಲು ಸಾಧ್ಯ! ಇಂಥದೊಂದು ಕೌತಕ,ರಸದೌತಣದ ಸವಿ ಉಣಬಡಿಸುವ ವಿಭಾಗ,ರಾಜ್ಯ ಮಟ್ಟದ ಪ್ರಾಥಮಿಕ, ಪ್ರೌಢಶಾಲಾ ಹಂತದ ಖೋಖೋ ಕ್ರೀಡಾ ಸ್ಪರ್ಧೆಯೊಂದು ಜಂಗಮರ ತಾಣ ಖ್ಯಾತಿಯ ಆಲಮಟ್ಟಿಯಲ್ಲಿ ಸಂಭ್ರಮ, ಸಡಗರದ ವೈಭವ ಕಂಡಿದೆ.ಭೂಲೋಕದ ಹಸಿರು ಸ್ವರ್ಗಗೊಂದಿಗೆ ಹಸಿರೀಕರಣದ ನಯನ ವಯ್ಯಾರದದಿಂದ ಮೀರಿ ಮೀರಿ ಮಿನುಗಿ ವಿಶೇಷ ನಾಮಾಂಕಿತ ಹೊಂದಿರುವ ಆಲಮಟ್ಟಿ ಬಸವನಾಡಿನ ನೆಲದಲ್ಲಿಂದು ಹಚ್ಚು ಹಸಿರಾಗಿ ಮಿನುಗಿದೆ, ಕರುನಾಡು ಗಾಂಧಿ ಮಂಜಪ್ಪ ಹಡೇ೯ಕರ ಕಾಯಕ ಕೈಂಕರ್ಯ ಗೈದ ಪರಮ…
ಮೂರು ಕ್ಷೇತ್ರಗಳಲ್ಲಿ ಮತದಾನ ಅಂತ್ಯ | ಚನ್ನಪಟ್ಟಣದಲ್ಲಿ ದಾಖಲೆಯ ಶೇ.88 ರಷ್ಟು ಮತದಾನ | ಒಟ್ಟಾರೆ ಶೇ.76.9 ಮತದಾನ ಬೆಂಗಳೂರು: ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಬುಧವಾರ ಉಪ ಚುನಾವಣೆ ನಡೆದಿದ್ದು, ಸಂಡೂರು, ಶಿಗ್ಗಾಂವಿ ಹಾಗೂ ಚನ್ನಪಟ್ಟಣದಲ್ಲಿ ಮತದಾನ ಪ್ರಕ್ರಿಯೆ ಅಂತ್ಯಗೊಂಡಿದೆ. ಇದರೊಂದಿಗೆ ಅಭ್ಯರ್ಥಿಗಳ ಭವಿಷ್ಯ ಇವಿಎಂನಲ್ಲಿ ಭದ್ರವಾಗಿದೆ.ಬುಧವಾರ ಬೆಳಗ್ಗೆ 7 ಗಂಟೆಯಿಂದ ಆರಂಭವಾಗಿದ್ದ ಮತದಾನ ಸಂಜೆ 6 ಗಂಟೆಗೆ ಮುಕ್ತಾಯಗೊಂಡಿದ್ದು, ಮೂರು ಕ್ಷೇತ್ರಗಳಲ್ಲಿ ಒಟ್ಟಾರೆ ಶೇ. 76.9 ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.ಹೈವೋಲ್ಟೇಜ್ ಕ್ಷೇತ್ರಚನ್ನಪಟ್ಟಣದಲ್ಲಿ ಎನ್ಡಿಎ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ, ಕಾಂಗ್ರೆಸ್ನಿಂದ ಸಿ. ಪಿ. ಯೋಗೇಶ್ವರ್ ಸೇರಿದಂತೆ 31 ಮಂದಿ ಕಣದಲ್ಲಿದ್ದಾರೆ.ಇನ್ನು ಸಂಡೂರಿನಲ್ಲಿ ಶೇ.76.24 ರಷ್ಟು ಹಾಗೂ ಶಿಗ್ಗಾಂವಿಯಲ್ಲಿ ಶೇ.80.48ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ.ಸಂಡೂರಲ್ಲಿ ಕಾಂಗ್ರೆಸ್ನ ಇ. ಅನ್ನಪೂರ್ಣ, ಬಿಜೆಪಿಯಿಂದ ಬಂಗಾರು ಹನುಮಂತ ಸೇರಿ 6 ಹುರಿಯಾಳುಗಳು ಕಣದಲ್ಲಿದ್ದಾರೆ.ಶಿಗ್ಗಾಂವಿಯಲ್ಲಿ ಬಿಜೆಪಿಯಿಂದ ಭರತ್ ಬೊಮ್ಮಾಯಿ, ಕಾಂಗ್ರೆಸ್ನಿಂದ ಪಠಾಣ್ ಯಾಸೀರ್ ಅಹ್ಮದ್ಖಾನ್ ಸೇರಿದಂತೆ 8 ಅಭ್ಯರ್ಥಿಗಳಿದ್ದಾರೆ.ಉಪಚುನಾವಣೆಯನ್ನು…
ಉದಯರಶ್ಮಿ ದಿನಪತ್ರಿಕೆ ಇಂಡಿ: ತಾಲೂಕಿನ ಇಂಡಿ ಶಾಖಾ ಕಾಲುವೆಯ ಉಪ ಕಾಲುವೆಯಲ್ಲಿ ಸಧ್ಯ ನೀರಿನ ಹರಿವು ಕಟ್ ಆಗಿದೆ. ಪರಿಣಾಮ ಈ ನೀರನ್ನೆ ಅವಲಂಬಿಸಿದ ತೊಗರಿ ಬೆಳೆಗಾರರು ನೀರಿಲ್ಲದೆ ಕಂಗಾಲಾಗಿದ್ದಾರೆ.ಹೌದು, ತಾಲೂಕಿನಲ್ಲಿ ಈ ವರ್ಷ ಅಪಾರ ಪ್ರಮಾಣದ ತೊಗರಿ ಬೆಳೆ ಇದೆ. ಆರಂಭದಲ್ಲಿ ತಕ್ಕ ಮಳೆಯಾದ ಪರಿಣಾಮ ಈ ಬೆಳೆ ಇಲ್ಲಿಯವರೆಗೆ ಚೆನ್ನಾಗಿ ಬೆಳೆದಿತ್ತು. ಈಗ ತೊಗರಿ ಬೆಳೆ ಹೂ, ಕಾಯಿ ಕಟ್ಟುವ ಹಂತದಲ್ಲಿದೆ. ಸಧ್ಯ ಮಳೆ ಕೈಕೊಟ್ಟಿದೆ. ಕಾಲುವೆ ನೀರಾದರೂ ಬಿಟ್ಟು ಬೆಳೆ ಉಳಿಸಿಕೊಳ್ಳಬೇಕು ಎಂದರೆ ಕಾಲುವೆ ನೀರು ಕೈಕೊಟ್ಟಿದೆ. ಇದರಿಂದಾಗಿ ಉತ್ತಮ ಲಾಭದ ನಿರೀಕ್ಷೆಯಲ್ಲಿದ್ದ ರೈತರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ.ಬಡವರ ಬೆಳೆ ತೊಗರಿ ಬೆಳೆ ಕಡಿಮೆ ನೀರಿನಲ್ಲಿ ಉತ್ತಮ ಇಳುವರಿ ಪಡೆಯುವ ಬೆಳೆ. ಈಗಾಗಲೆ ರೈತರು ಬೀಜಕ್ಕೆ, ಗೊಬ್ಬರಕ್ಕೆ, ಕೀಟಗಳ ಬಾಧೆ ತಡೆಯಲು ಕ್ರಿಮಿನಾಶಕಕ್ಕೆ, ಎಡೆ ಹೊಡೆಯಲು, ಕಳೆ ತೆಗೆಯಲು ಸಾಕಷ್ಟು ಖರ್ಚು ಮಾಡಿದ್ದಾರೆ. ಇನ್ನೆನು ಬೆಳೆ ಹೂ, ಕಾಯಿ ಕಟ್ಟುವ ಹಂತದಲ್ಲಿದೆ. ಕಾಲುವೆಯ ಮೂಲಕ ಹರಿಯುವ ಕೃಷ್ಣೆಯ…
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಕಾಂಗ್ರೆಸ್ ಪಕ್ಷದ ಜೊತೆಗೆ ಗುರುತಿಸಿಕೊಂಡಿರುವ ಅಹಿಂದ ಮುಖಂಡ ಎಸ್. ಎಂ. ಪಾಟೀಲ ಗಣಿಯಾರ ಅವರು ಮಠಾಧೀಶರ ಬಗ್ಗೆ ಆಡಿದ ಮಾತುಗಳು ಹಿಂದು ಸಮಾಜಕ್ಕೆ ನೋವನ್ನುಂಟು ಮಾಡಿದೆ. ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಮಠಾಧೀಶರ ಬಗ್ಗೆ ಹಗುರವಾಗಿ ಮಾತನಾಡುವುದನ್ನು ತಕ್ಷಣವೇ ನಿಲ್ಲಿಸಬೇಕೆಂದು ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾದ ಕಾರ್ಯಕಾರಿಣಿ ಸಮಿತಿ ಸದಸ್ಯೆ ಸಾವಿತ್ರಿ ಕಲ್ಯಾಣಶೆಟ್ಟಿ ತಿಳಿಸಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕನ್ಹೇರಿ ಮಠದ ಶ್ರೀಗಳ ಬಗ್ಗೆ ಹಗುರವಾಗಿ ಮಾತನಾಡುವ ಮೂಲಕ ಹಿಂದು ಸಮಾಜಕ್ಕೆ ಅವಮಾನವಾಗುವಂತೆ ಮಾಡಿದ್ದಾರೆ. ಹೋರಾಟದಲ್ಲಿ ಕನ್ಹೇರಿ ಮಠದ ಶ್ರೀಗಳು, ಪಂಚಮಸಾಲಿ ಸಮಾಜದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಸೇರಿದಂತೆ ನಾಡಿನ ಹಲವಾರು ಮಠಾಧೀಶರು ಭಾಗವಹಿಸಿದ್ದರು ಎನ್ನುವ ಸತ್ಯ ನಿಮಗೆ ಗೊತ್ತಿರಬೇಕು. ಮಠಾಧೀಶರು ಕೇವಲ ಮಠದಲ್ಲಿ ಕುಳಿತುಕೊಳ್ಳದೆ ಸಮಾಜಕ್ಕೆ ಸ್ಪಂದಿಸುವ ಕೆಲಸವನ್ನು ಮಾಡಬೇಕಾಗುತ್ತದೆ. ಅನ್ಯಾಯವನ್ನು ಸರಿ ಪಡಿಸುವ ನಿಟ್ಟಿನಲ್ಲಿ ಹೋರಾಟ ಮಾಡುವುದರಲ್ಲಿ ತಪ್ಪೇನಿದೆ. ಮಠಾಧೀಶರು ಸಮಾಜದ ಒಂದು ಭಾಗವಾಗಿದ್ದಾರೆ ಅನ್ನೋ ಸಾಮಾನ್ಯ ಜ್ಞಾನ ಅವರಿಗೆ ಇದ್ದಂತಿಲ್ಲ.ನಿಮಗೆ…
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಜಗತ್ತಿನಲ್ಲಿ ಬಿದ್ದವರನ್ನು ಮೇಲೆತ್ತಿದ, ಧ್ವನಿ ಇಲ್ಲದವರಿಗೆ ಧ್ವನಿ ನೀಡಿದ, ಮಹಿಳೆಗೆ ಸ್ವಾತಂತ್ರ್ಯ ನೀಡಿದ ಬಸವಣ್ಣನವರು ನಮಗೆ ಇಂದಿಗೂ ಪ್ರಸ್ತುತವಾಗಿ ನಿಲ್ಲುತ್ತಾರೆ ಎಂದು ಹಂಗರಗಿಯ ಚನ್ನಬಸವೇಶ್ವರ ಪ್ರತಿಷ್ಠಾನ ಅಧ್ಯಕ್ಷ, ಸಾಹಿತಿ ವಿವೇಕಾನಂದ ಕಲ್ಯಾಣ ಶೆಟ್ಟಿ ಅಭಿಪ್ರಾಯ ಪಟ್ಟರು.ಪಟ್ಟಣದ ಲಕ್ಷ್ಮೀ ನಗರದ ಕ್ವಾಟಿ ಲಕ್ಷ್ಮೀ ಜಾತ್ರೋತ್ಸವದಂಗವಾಗಿ ಹನ್ನೊಂದು ದಿನಗಳ ಕಾಲ ಹಮ್ಮಿಕೊಂಡಿರುವ ಪ್ರವಚನ ಕಾರ್ಯಕ್ರಮದಲ್ಲಿ ಮಂಗಳವಾರ ಸಂಜೆ ಮಾತನಾಡಿದ ಅವರು, ಸಮಾಜದಲ್ಲಿರುವ ಮಡಿ-ಮೈಲಿಗೆಗಳನ್ನು ಯಾವುದೇ ಮುಚ್ಚು ಮರೆ ಇಲ್ಲದೇ ತಿದ್ದಿದ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ. ಜಗತ್ತಿನ ಇತಿಹಾಸದಲ್ಲಿ ಅದೆಷ್ಟೋ ಕ್ರಾಂತಿಗಳು ನಡೆದಿವೆ. ಆದರೆ ಬಸವಾದಿ ಶರಣರ ಕ್ರಾಂತಿ ಇಡೀ ಸಮಾಜವನ್ನೇ ಎತ್ತರದ ಮಟ್ಟಕ್ಕೆ ಒಯ್ಯುವ ಆಶಯದಿಂದ ನಡೆದ ಕ್ರಾಂತಿಯಾಗಿದೆ ಎಂದರು.ಬಸವಾದಿ ಶರಣರು ಕಾಯಕಕ್ಕೆ ಹೆಚ್ಚಿನ ಮಹತ್ವ ನೀಡುವ ಮೂಲಕ ಕಾಯಕ ಸಿದ್ಧಾಂತಕ್ಕೆ ಹೊಸ ಭಾಷೆ ಬರೆದರು. ಕಾಯಕ, ದಾಸೋಹ ಸಿದ್ದಾಂತ ಸಮಾನವಾಗಿ ನಿಲ್ಲುವಂತೆ ಮಾಡಿದ ಶ್ರೇಯಸ್ಸು ಶರಣರಿಗೆ ಸಲ್ಲುತ್ತದೆ. ಸಮ ಸಮಾಜ ನಿರ್ಮಿಸುವಲ್ಲಿ ಮೇಲು ಕೀಳು ಎನ್ನದೇ ಅನುಭವ ಮಂಟಪದಲ್ಲಿ…
ಸಿಂದಗಿ ಬಿಜೆಪಿ ಮಂಡಲದಿಂದ ೨೦೨೪ರ ಸದಸ್ಯತ್ವ ಅಭಿಯಾನ, ಸಂಘಟನಾ ಪರ್ವ ಕಾರ್ಯಕ್ರಮ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಪಿಎಂ ಮೋದಿ ಅವರ ನೇತೃತ್ವದಲ್ಲಿರುವ ಬಿಜೆಪಿ ಪಕ್ಷ ಬಲವಾಗುವುದರ ಜೊತೆಗೆ ದೇಶದ ಅಭಿವೃದ್ಧಿ ಉನ್ನತ ಮಟ್ಟದಲ್ಲಿ ಬೆಳೆಯುತ್ತಿದೆ. ಭಾರತ ವಿಶ್ವಗುರುವನ್ನಾಗಿಸಲು ಎಲ್ಲರೂ ಪಣತೊಟ್ಟು ಪಕ್ಷ ಸಂಘಟನೆ ಮಾಡಬೇಕಾಗಿದೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.ಸಿಂದಗಿ ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಸಿಂದಗಿ ಬಿಜೆಪಿ ಮಂಡಲ ವತಿಯಿಂದ ಹಮ್ಮಿಕೊಂಡ ೨೦೨೪ರ ಸದಸ್ಯತ್ವ ಅಭಿಯಾನ, ಸಂಘಟನಾ ಪರ್ವ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬರೂ ಸಹ ಬಿಜೆಪಿ ಪಕ್ಷದ ಸದಸ್ಯತ್ವವನ್ನು ಪಡೆದುಕೊಂಡು ಎಲ್ಲಾ ಕಾರ್ಯಕರ್ತರು ಸಕ್ರಿಯ ಸದಸ್ಯರಾಗಬೇಕು.ನಾನು ಸಂಸದನಾಗಿ, ಕೇಂದ್ರ ಸಚಿವನಾಗಿ ಹತ್ತು ಹಲವಾರು ಕಾರ್ಯಗಳನ್ನು ಜಿಲ್ಲೆಯಲ್ಲಿ ಮಾಡಿದ್ದೇನೆ ಎಂದರು.ಈ ವೇಳೆ ಮಾಜಿ ಶಾಸಕ ರಮೇಶ ಭೂಸನೂರ ಮಾತನಾಡಿ, ಪ್ರಸ್ತುತ ಸರ್ಕಾರ ಕೇವಲ ಮಾತಿಗಷ್ಟೇ ಸರ್ಕಾರವಾಗಿದ್ದು, ಕಾರ್ಯಗಳು ಮಾತ್ರ ಶೂನ್ಯ. ರೈತರ ಕಷ್ಟಗಳು ಕೇಳುವವರಿಲ್ಲ, ರೈತರು ಇಂದು ಜಮೀನಗಳನ್ನು ಕಳೆದುಕೊಂಡು ಬೀದಿ ಪಾಲಾಗುವ ಪರಿಸ್ಥಿತಿ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಗ್ರಾಮೀಣ ಭಾಗದ ಮಕ್ಕಳಿಗೆ ಶಿಕ್ಷಣದ ಸೌಲಭ್ಯ ಪಡೆಯಲು ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಹಣ ವಿನಿಯೋಗಿಸುತ್ತಿದೆ. ಮಕ್ಕಳ ವಿದ್ಯಾಭ್ಯಾಸದ ಅನುಕೂಲಕ್ಕಾಗಿ ೧ಕೋಟಿ ೨೦ಲಕ್ಷ ರೂ. ವೆಚ್ಚದಲ್ಲಿ ೪ ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ ಅವುಗಳ ಸದುಪಯೋಗವಾಗಬೇಕೆಂದು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಪಟ್ಟಣದ ಸರಕಾರಿ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ವಿಜಯಪುರ ಜಿಲ್ಲಾ ಪಂಚಾಯತ್, ಸಿಂದಗಿ ಪಂ.ರಾ.ಇಂ. ಉಪ ವಿಭಾಗ, ೨೦೨೩-೨೪ನೆಯ ಸಾಲಿನ ವಿವೇಕ ಯೋಜನೆ ಅಡಿಯಲ್ಲಿ ಪಟ್ಟಣದ ಸರಕಾರಿ ಪಪೂ ಕಾಲೇಜಿನಲ್ಲಿ ೧ಕೋಟಿ ೨೦ಲಕ್ಷ ರೂ.ವೆಚ್ಚದ ೪ ಕೊಠಡಿಗಳ ನಿರ್ಮಾಣದ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ನಮ್ಮೂರ ಮಹಾವಿದ್ಯಾಲಯ, ನಮ್ಮ ಕಾಲೇಜು ಎಂದು ಭಾವಿಸಬೇಕು. ಆರೋಗ್ಯ ಮತ್ತು ಶಿಕ್ಷಣಕ್ಕೆ ಮಹತ್ವ ನೀಡಿ ಉತ್ತಮ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಿದರೆ ಎಲ್ಲಾ ರೀತಿಯಲ್ಲೂ ಅಭಿವೃದ್ಧಿ ಸಾಧಿಸಬಹುದು. ಗ್ರಾಮೀಣ ಪ್ರದೇಶದ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಅಧ್ಯಯನ ಮಾಡುವ ಸರಕಾರಿ ಶಾಲೆ, ಕಾಲೇಜುಗಳ ಅಭಿವೃದ್ಧಿಗೆ ಹೆಚ್ಚಿನ ಗಮನ ನೀಡುತ್ತೇನೆ. ಮಕ್ಕಳು ಗುಣಮಟ್ಟದ ಶಿಕ್ಷಣವನ್ನು ಪಡೆದುಕೊಳ್ಳಬೇಕು. ಅಭಿವೃದ್ಧಿಯೇ ನನ್ನ…
