ಅರಣ್ಯ ಕಾರ್ಮಿಕರಿಗೆ ಪಿಎಫ್, ವಿಮೆ ಒದಗಿಸಲು ಕ್ರಮ :ಮಹೇಶ

ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ಅರಣ್ಯ ಇಲಾಖೆಯ ಕಾರ್ಮಿಕರಿಗೆ ಭವಿಷ್ಯ ನಿಧಿ, ವೈದ್ಯಕೀಯ ವಿಮೆ ಸೇರಿದಂತೆ ನಾನಾ ಸೌಲಭ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ವಲಯ ಅರಣ್ಯಾಧಿಕಾರಿ ಮಹೇಶ ಪಾಟೀಲ ಭರವಸೆ ನೀಡಿದರು.ಆಲಮಟ್ಟಿಯ ಡ್ಯಾಂ ನರ್ಸರಿಯಲ್ಲಿ ಶುಕ್ರವಾರ ನಡೆದ ಕಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.“ನೂರಾರು ಅರಣ್ಯ ದಿನಗೂಲಿ ಕಾರ್ಮಿಕರು ತಮ್ಮ ಜೀವನದ ಬಹುಪಾಲು ಆಲಮಟ್ಟಿಯಲ್ಲಿಯೇ ಕಳೆದಿದ್ದಾರೆ. ಕಾರ್ಖಾನೆ, ಗಣಿ, ವಿದ್ಯುತ್ ಕ್ಷೇತ್ರಗಳಲ್ಲಿ ಕಾರ್ಮಿಕರಿಗೆ ಹೆಚ್ಚಿನ ಅಪಾಯವಿರುತ್ತದೆ. ಆದರೆ ನೀವು ನಿಸರ್ಗದೊಂದಿಗೆ ಕೆಲಸ ಮಾಡುತ್ತಿದ್ದು, ಅಪಾಯ ಕಡಿಮೆ, ಶ್ರಮ
ಗ್ರಾಮೀಣ ಜನತೆ ಕಾನೂನಿನ ಜ್ಞಾನ ಹೊಂದಬೇಕು :ನ್ಯಾ. ನಾಗೇಶ

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ; ಗ್ರಾಮೀಣ ಜನತೆ ಕಾನೂನಿನ ಜ್ಞಾನ ಹಾಗೂ ಅರಿವು ಹೊಂದುವುದು ಇಂದು ಅಗತ್ಯವಾಗಿದೆ ಎಂದು ಹಿರಿಯ ನ್ಯಾಯಾಧೀಶ ನಾಗೇಶ ಮೋಗೆರ್ ಹೇಳಿದರು.ತಾಲ್ಲೂಕಿನ ಚಿಕ್ಕರೂಗಿ ಗ್ರಾಮದಲ್ಲಿ ಸಿಂದಗಿ ತಾಲ್ಲೂಕು ವಕೀಲರ ಸಂಘದಡಿ ಗುರುವಾರ ಜರುಗಿದ ಕಾನೂನು ಅರಿವು, ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಕೊಡಿಸಬೇಕು. ಅಪರಾಧ ಚಟುವಟಿಕೆಗಳಿಂದ ದೂರವಿರಬೇಕು. ಇಂದು ವರದಕ್ಷಿಣೆ ನೀಡುವುದು ಹಾಗೂ ತೆಗೆದುಕೊಳ್ಳುವುದು ಎರಡು ಅಪರಾಧಗಳೆನ್ನಿಸಿವೆ. ಆದ್ದರಿಂದ ಗ್ರಾಮವನ್ನು ವರದಕ್ಷಿಣೆಮುಕ್ತವಾಗಿಸಲು ತಾವೆಲ್ಲರೂ ಮುಂದಾಗಬೇಕು ಎಂದು ಸಲಹೆ
ನಿಷ್ಕಳಂಕ ಸೇವೆ ಸಲ್ಲಿಸುವುದು ಇತರರಿಗೆ ಮಾದರಿ :ಮಹಾಂತೇಶ

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಇಲಾಖೆಯಲ್ಲಿ ಸೇವಾತತ್ಪರತೆಯ ಮೂಲಕ ನಿಷ್ಕಳಂಕ ಸೇವೆ ಸಲ್ಲಿಸುವುದು ಇತರರಿಗೆ ಮಾದರಿಯಾಗಿದೆ ಎಂದು ಜಿಲ್ಲಾ ಅಂಚೆ ಅಧಿಕ್ಷಕ ಮಹಾಂತೇಶ ತೊಗರಿ ಹೇಳಿದರು.ಪಟ್ಟಣದ ಅಂಚೆ ಕಚೇರಿಯಲ್ಲಿ ಗುರುವಾರ ಸೇವಾನಿವೃತ್ತರಾದ ಡಾಕ್ಸೇವಕ ವೆಂಕಟೇಶ ಕುಲಕರ್ಣಿ ಅವರ ಬೀಳ್ಕೊಡುವ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಪಟ್ಟಣದಲ್ಲಿ ತಮ್ಮ ಸತತ ೩೫ ವರ್ಷಗಳ ಕಾಲ ನಿಷ್ಕಳಂಕ ಸೇವೆಯ ಮೂಲಕ ಮನೆಮಾತಾಗಿರುವ ವೆಂಕಟೇಶ ಕುಲಕರ್ಣಿ ಅವರ ನಿವೃತ್ತಿ ಜೀವನ ಸುಖಮಯವಾಗಿರಲಿ ಎಂದರು.ಸನ್ಮಾನಿತರ ಪರ ಸುಪ್ರೀಯಾ ಕುಲಕರ್ಣಿ ಮಾತನಾಡಿ, ತಂದೆಯ ಸೇವೆಯ ಸಾರ್ಥಕತೆಗೆ ಇಲಾಖೆ
Subscribe to Updates
Get the latest creative news from FooBar about art, design and business.



