ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಿ :ಬಿಇಓ ತಳವಾರ
ಉದಯರಶ್ಮಿ ದಿನಪತ್ರಿಕೆ ತಿಕೋಟಾ: ಮಕ್ಕಳ ಕಲಿಕಾ ಗುಣಮಟ್ಟ ಹೆಚ್ಚಿಸಲು ಶಿಕ್ಷಕರು ಪಣ ತೊಡಬೇಕು, ಶಿಸ್ತು ಬದ್ದವಾಗಿ ಮಕ್ಕಳಿಗೆ ಕಲಿಸಬೇಕು ಎಂದು ವಿಜಯಪುರ ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ತಳವಾರ ಹೇಳಿದರು.ತಾಲ್ಲೂಕಿನ ಕೋಟ್ಯಾಳ ಗ್ರಾಮದಲ್ಲಿ ಮಂಗಳವಾರ ಜಿಲ್ಲಾ ಪಂಚಾಯತ, ಶಾಲಾ ಶಿಕ್ಷಣ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಗ್ರಾಮೀಣವಲಯ ವಿಜಯಪುರ ವತಿಯಿಂದ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯನ್ನು ಪ್ರೌಢ ಶಾಲೆಯಾಗಿ ಉನ್ನತಿಕರಿಸಿ ಒಂಬತ್ತನೇ ತರಗತಿ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.2025-26 ನೇ ಸಾಲಿನಲ್ಲಿ
ಕೃಷ್ಣ ಗಜಾನನ ಮಹಾಮಂಡಳದಿಂದ ಅನ್ನಪ್ರಸಾದ
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪಟ್ಟಣದ ಹಳೆ ಅಗ್ನಿಶಾಮಕ ಠಾಣೆಯ ಆವರಣದಲ್ಲಿ ಕೃಷ್ಣಾ ಗಜಾನನ ಮಹಾಮಂಡಳ ಪ್ರತಿಷ್ಠಾಪಿಸದ ಗಣಪತಿ ಮೂರ್ತಿ ಮಂಟಪದ ಮುಂಭಾಗ ಮಂಗಳವಾರ ಜನರಿಗೆ ಸಾಮೂಹಿಕ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಅಪಾರ ಸಂಖ್ಯೆಯ ಜನರು ಪ್ರಸಾದ ಸ್ವೀಕರಿಸಿದರು. ಕೃಷ್ಣಾ ಗಜಾನನ ಮಹಾಮಂಡವು ಹಾಕಿದ ಪ್ಲೆಕ್ಸಿನಲ್ಲಿ ನಮ್ಮ ಮಂಡಳ ನಮ್ಮ ಕುಟುಂಬ, ರಕ್ತ ಸಂಬಂಧಕ್ಕಿಂತ ಸ್ನೇಹದ ನಂಟು ಶಾಶ್ವತ ಎಂಬ ಬರಹ ನೋಡುಗರನ್ನು ಗಮನ ಸೆಳೆಯಿತು. ಪ್ರಸಾದಕ್ಕಾಗಿ ೫ ಕ್ವಿಂಟಾಲ್ ಸುರಾಮ,೧೧ ಕ್ವಿಂಟಾಲ್ ಅನ್ನ, ಸಾಂಬಾರು ತಯಾರಿಸಲಾಗಿದೆ ಎಂದು
ಬಸವ ಸಂಸ್ಕ್ರತಿ ಅಭಿಯಾನ ರಥಯಾತ್ರೆಗೆ ಮುಸ್ಲಿಂ ಬಾಂಧವರ ಗೌರವ
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಲಿಂಗಾಯತ ಮಠಾಧಿಪತಿಗಳ ಒಕ್ಕೂಟವು ರಾಜ್ಯಾದ್ಯಂತವಾಗಿ ಹಮ್ಮಿಕೊಂಡಿರುವ ಬಸವ ಸಂಸ್ಕ್ರತಿ ಅಭಿಯಾನದ ಭವ್ಯ ರಥಯಾತ್ರೆ ಸೋಮವಾರ ಪ್ರಮುಖ ಬೀದಿಗಳಲ್ಲಿ ಸಾಗಿ ಬರುವ ಸಂದರ್ಭದಲ್ಲಿ ಜಾಮೀಯ ಮಸೀದಿ ಹತ್ತಿರ ರಥ ಆಗಮಿಸಿದ ಸಂದರ್ಭದಲ್ಲಿ ಮುಸ್ಲಿಂ ಬಾಂಧವರು ರಥಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಮೆರವಣಿಗೆಯಲ್ಲಿ ಸಾಗಿದ ಶ್ರೀಗಳಿಗೆ,ಬಸವ ಭಕ್ತರಿಗೆ, ರಥಕ್ಕೆ ಪುಷ್ಪ ವೃಷ್ಟಿ ಮಾಡಿದರು.ಮೆರವಣಿಗೆಯಲ್ಲಿ ಸಾಗಿದ ಎಲ್ಲ ಜನರಿಗೆ ಶರಬತ್ತು, ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಮೂಲಕ ಗಮನ ಸೆಳೆದರು.ಈ ಸಂದರ್ಭದಲ್ಲಿ ಜಾಮೀಯಾ ಮಸೀದಿಯ ಅಧ್ಯಕ್ಷ
Subscribe to Updates
Get the latest creative news from FooBar about art, design and business.