ಶ್ರೀ ಗುರುಕೃಪಾ ಇಂಗ್ಲೀಷ ಮಾದ್ಯಮ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ | ಉಪನ್ಯಾಸಕ ಮಹಾಂತೇಶ ನೂಲಾನವರ ರಿಂದ ಉದ್ಘಾಟನೆ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ನಮ್ಮ ಮಕ್ಕಳಲ್ಲಿ ಉತ್ತಮ ಸಂಸ್ಕಾರವನ್ನು ಬೆಳೆಸಿ ಪ್ರತಿಭೆಯನ್ನು ಪ್ರೋತ್ಸಾಹಿಸುವ ಮೂಲಕ ದೇಶ ಕಟ್ಟುವ ಕಾರ್ಯ ಆಗಬೇಕು ಆ ಕಾರ್ಯ ಶ್ರೀ ಗುರುಕೃಪಾ ಶಿಕ್ಷಣ ಸಂಸ್ಥೆಯಲ್ಲಿ ನಡೆದು ಭವ್ಯ ಭಾರತದ ನಿರ್ಮಾಣಕ್ಕೆ ಇಲ್ಲಿಯ ವಿದ್ಯಾರ್ಥಿಗಳು ಬರುವಂತೆ ಕಾರ್ಯ ನಡೆಯುತ್ತದೆ ಎಂದು ವಿಜಯಪುರ ರಾಣಿ ಚೆನ್ನಮ್ಮಾ ವಿಶ್ವವಿದ್ಯಾಲಯದ ಬಿ.ಇ.ಒ ಸದಸ್ಯ ಮಂಜುನಾಥ ಜುನಗೊಂಡ ಅವರು ಹೇಳಿದರು.
ಸಿಂದಗಿ ಪಟ್ಟಣದ ಶ್ರೀ ಗುರುಕೃಪಾ ಇಂಗ್ಲೀಷ ಮಾದ್ಯಮ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಇಂದು ವಿಶ್ವ ಶಾಂತಿ ಅವಶ್ಯವಿದ್ದು ಅದರ ಆಧಾರದ ಮೇಲೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವ ಮೂಲಕ ಜಾತಿ, ಮತ, ಭೇದ ಹೋಗಬೇಕು ಮಾನವೀಯತೆಯನ್ನು ಬೆಳೆಸುವ ಪ್ರೀತಿ ಪ್ರೇಮ ಇಟ್ಟು ದೇಶ ಕಟ್ಟು ಕೆಲಸ ಆಗಬೇಕಿದೆ. ವಚನ, ಭಗವದ್ಗೀತೆ ಹೇಳುವ ಶಾಲೆಯು ದೇಶದ ಸಂಸ್ಕೃತಿ ಬಿತ್ತರಿಸುವದರ ಜೊತೆಗೆ ಜೀವನ ಹೇಗೆ ಎಂಬುದು ತಿಳಿಸಿ ಸಂಸ್ಕೃತಿ ಉಳಿಸಿ ಬೆಳೆಸುವದಾಗಿದೆ ಇಂತಹ ಮಹತ್ವದ ಕಾರ್ಯ ಎಚ್.ಟಿ.ಕುಲಕರ್ಣಿ ಅವರಂತಹ ಮಹಾನ್ ವ್ಯಕ್ತಿಗಳಿಂದ ಈ ಶಿಕ್ಷಣ ಸಂಸ್ಥೆ ಪಾಲಿಸಿಕೊಂಡು ಬರುತ್ತಿದೆ ಎಂಬುದರಲ್ಲಿ ಎರಡು ಮಾತಿಲ್ಲ ಎಂದರು. ಹೆಸರು ಬೇಕು ಆದರ್ಶ ಬೇಡ ಎನ್ನುವ ಸ್ಥಿತಿ ಈಗ ಇದೆ, ಗ್ರಂಥಾಲಯಗಳಲ್ಲಿ ಬುಕ್ಸ್ ಇವೆ, ಮಸ್ತಕ ತುಂಬಿಸುವ ಕಾರ್ಯ ನಡೆಯಬೇಕಿದೆ ಅದಕ್ಕಾಗಿ ಎಚ್ಟಿ ಅಂತಹವರ ಮಾರ್ಗದರ್ಶನದಲ್ಲಿ ನಡೆದರೆ ದಾರಿ ಸುಗಮವಾಗಲಿದೆ ಎಂದರು.
ಈ ವೇಳೆ ಪಾಲಕರ ಪ್ರತಿನಿಧಿಯಾಗಿ ಮಹಾಂತೇಶ ನೂಲಾನವರ, ಬಸವ ಸಮಿತಿ ಅಧ್ಯಕ್ಷ ಎನ್.ಎಸ್.ಪಾಟೀಲ, ಅಥರ್ಗಾ ಜ್ಞಾನ ಭಾರತಿ ಶಾಲೆಯ ಆಡಳಿತಾಧಿಕಾರಿ ಆರ್.ಬಿ.ಪುರೋಹಿತ ಮಾತನಾಡಿ, ನಿಮ್ಮ ಮಕ್ಕಳ ಪ್ರತಿಭೆಯನ್ನು ಹೊರಹಾಕಲು ಈ ಶಿಕ್ಷಣ ಸಂಸ್ಥೆ ಮುಂದೆಯಿದೆ. ಪಾಲಕರು ಎಲ್ಲ ಮಕ್ಕಳ ಪ್ರತಿಭೆಯನ್ನು ನೋಡಿ ಪುರಷ್ಕರಿಸುವದರ ಜೊತೆಗೆ ಉತ್ತಮ ಸಂಸ್ಕಾರ, ಸಂಸ್ಕೃತಿ ನೀಡುವುದರೊಂದಿಗೆ ಮಕ್ಕಳನ್ನು ಸುಂದರ ಸಮಾಜದಲ್ಲಿ ಬದುಕುವ ಕಲೆಯನ್ನು ಈ ಶಿಕ್ಷಣ ಸಂಸ್ಥೆ ಮಾಡುತ್ತಿದೆ ಅದಕ್ಕೆ ಪಾಲಕರ ಸಹಕಾರ ಅವಶ್ಯ. ಮಕ್ಕಳ ಬಗ್ಗೆ ಆತ್ಮೀಯ ಗೌರವ ಇಟ್ಟುಕೊಂಡೆ ಹೋಗಬೇಕು, ವಿದ್ಯಾರ್ಜನೆಗೆ ಬೆಲೆ ಕೊಟ್ಟು ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಅಧ್ಯಕ್ಷ ಎಚ್.ಟಿ.ಕುಲಕರ್ಣಿ ಮಾತನಾಡಿದರು. ವಾರ್ಷಿಕ ವರದಿಯನ್ನು ಮುಖ್ಯ ಗುರುಮಾತೆ ಹೇಮಾ ಪೊದ್ದಾರ ಮಂಡಿಸಿದರು. ವಾಸವಿ ಕುಲಕರ್ಣಿ, ಶೃತಿ ಕುಲಕರ್ಣಿ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಚೆನ್ನವೀರ ಆಕಸ್ತಿ ಹಾಗೂ ಶೀರಿನ ಸಿತನೂರ ನಿರೂಪಿಸಿದರು. ಹರೀಷ ಪೊದ್ದಾರ ವಂದಿಸಿದರು.
ವೇದಿಕೆಯ ಮೇಲೆ ಶ್ರೀಗುರು ಕೃಪಾ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಎಚ್.ಜಿ.ಪೊದ್ದಾರ, ಸೌಮ್ಯ ಪೋದ್ದಾರ, ಪ್ರಸನ್ನ ಕುಲಕರ್ಣಿ, ವಿಶಾಲ ಹಿರೇಮಠ, ಸವಿತಾ ಬನಗುಂಡಿ, ಪೂಜಾ ದಸ್ಮಾ, ರಾಜಶೇಖರ ಬಿರಾದಾಋ, ಆಲಿಯಾ ಸಿತನೂರ, ವರ್ಷಾ ಜೋಷಿ, ರೇಣುಕಾ, ಮಯೂರಿ ಜಮಾದಾರ, ನೇತ್ರಾ ವಸ್ತçದ, ಸಹನಾ ಪರುತಿ, ಸುರೇಶ, ಅನಿತಾ, ಜ್ಯೋತಿ, ಶಿವಲೀಲಾ ಸೇರಿದಂತೆ ಶಾಲೆಯ ಬೋಧಕ-ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಗೂ ಪಾಲಕರು ಇದ್ದರು.

