Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಬಿಜೆಪಿ ಯುವ ಮೋರ್ಚಾ ನಿಕಟ ಪೂರ್ವ ಜಿಲ್ಲಾಧ್ಯಕ್ಷ ಬಸವರಾಜ ಹೂಗಾರ ಎಚ್ಚರಿಕೆ ಉದಯರಶ್ಮಿ ದಿನಪತ್ರಿಕೆ ಆಲಮೇಲ: ಹೊಸ ತಾಲೂಕು ಘೋಷಿಸಿದರೂ, ಆಲಮೇಲ ಜನತೆಗೆ ಸರ್ಕಾರ ಹಾಗೂ ಇಲಾಖೆಗಳಿಂದ ದೊರೆಯುತ್ತಿರುವುದು ಮಾತ್ರ ಭರವಸೆಗಳು, ಸೌಲಭ್ಯಗಳು ಅಲ್ಲ. ವಿಶೇಷವಾಗಿ ರಸ್ತೆ ಸಾರಿಗೆ ವಿಚಾರದಲ್ಲಿ ಜನರು ಪ್ರತಿದಿನ ಅನುಭವಿಸುತ್ತಿರುವ ಕಷ್ಟವು ಸರ್ಕಾರದ ಸಂಪೂರ್ಣ ನಿರ್ಲಕ್ಷ್ಯ ಮತ್ತು ಆಡಳಿತದ ತೀವ್ರ ವೈಫಲ್ಯವನ್ನು ಬಯಲಿಗೆಳೆಯುತ್ತದೆ ಎಂದು ಬಿಜೆಪಿ ಯುವ ಮೋರ್ಚಾ ನಿಕಟ ಪೂರ್ವ ಜಿಲ್ಲಾಧ್ಯಕ್ಷ ಬಸವರಾಜ ಹೂಗಾರ ಆರೋಪಿಸಿದ್ದಾರೆ.ಶುಕ್ರವಾರ ಈ ಕುರಿತು ಪ್ರಕಟಣೆಯಲ್ಲಿ ತಿಳಿಸಿದ ಅವರು, ಆಲಮೇಲದಲ್ಲಿ ಸಂಜೆ 7 ಗಂಟೆಯ ನಂತರ ಆಲಮೆಲ್ ರಸ್ತೆ ಮಾರ್ಗದಲ್ಲಿ ಬಸ್ ಸೌಲಭ್ಯವೇ ಇಲ್ಲದಿರುವುದು ವಿದ್ಯಾರ್ಥಿಗಳ ಭವಿಷ್ಯಕ್ಕೆ ಅಪಾಯ, ಮಹಿಳೆಯರ ಸುರಕ್ಷತೆಗೆ ಧಕ್ಕೆ, ಉದ್ಯೋಗಿಗಳ ಸಂಚಾರಕ್ಕೆ ಅಡಚಣೆ, ತುರ್ತು ಪರಿಸ್ಥಿತಿಯಲ್ಲಿ ಚಿಕಿತ್ಸೆ ದೊರೆಯದ ಸ್ಥಿತಿ ಎಂಬ ಗಂಭೀರ ಪರಿಸ್ಥಿತಿಯನ್ನು ಉಂಟುಮಾಡಿದೆ. ಇದು ಹೊಸ ತಾಲೂಕಿಗೆ ಬೇಕಾದ ಮೂಲಭೂತ ಸೌಕರ್ಯಗಳತ್ತ ಸರ್ಕಾರ ತೋರಿಸಿರುವ ಪರಮ ನಿರ್ಲಕ್ಷ್ಯಕ್ಕೆ ಸ್ಪಷ್ಟ ನಿದರ್ಶನ ವಾಗಿದೆ ಎಂದಿದ್ದಾರೆ.ಆಲಮೇಲಿನಿಂದ ಹತ್ತಿರದಲ್ಲಿರುವ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾ ಮಟ್ಟದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ೨೦೨೫-೨೬ನೇ ಒಂದನೇ ಹಾಗೂ ಎರಡನೇ ತ್ರೈಮಾಸಿಕದ ಸಭೆಯು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಖಾತೆಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಂ.ಬಿ.ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಡಿ.೨೨ ರಂದು ಬೆಳಿಗ್ಗೆ ೧೦:೩೦ಕ್ಕೆ ನಗರದ ಜಿಲ್ಲಾ ಪಂಚಾಯತಿಯ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ರಿಷಿ ಆನಂದ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಶಬರಿಮಲೆಯು ದಕ್ಷಿಣ ಭಾರತದ ಪ್ರಮುಖ ಧಾರ್ಮಿಕ ಕ್ಷೇತ್ರವಾಗಿದೆ. ಶಬರಿಮಲೆಯ ಅಯ್ಯಪ್ಪ ಸ್ವಾಮಿಯು (ಮಣಿಕಂಠ) ಕೋಟ್ಯಾನುಕೋಟಿ ಭಕ್ತರ ಆರಾಧ್ಯ ದೈವನಾಗಿದ್ದಾನೆ. ಅಲ್ಲಿ ಬೆಳಗುವ ಮಕರ ಜ್ಯೋತಿಯ ದರ್ಶನ ಭಾಗ್ಯದಿಂದ ಭಕ್ತರು ಪುನೀತರಾಗುತ್ತಾರೆ. ಅಯ್ಯಪ್ಪ ಸ್ವಾಮಿಯ ಭಕ್ತರು ೪೧ ದಿನಗಳವರೆಗೆ ಕಠಿಣ ವ್ರತಾಚರಣೆ ಮಾಡುತ್ತಾ, ಸ್ವಾಮಿಯ ನಾಮಸ್ಮರಣೆಯ ಮೂಲಕ ಭಕ್ತಿ-ಭಾವವನ್ನು ತೋರ್ಪಡಿಸುತ್ತಾರೆ ಎಂದು ವಿಜಯಪುರದ ಗುರುಸ್ವಾಮಿ ಅವರು ಅಭಿಪ್ರಾಯಪಟ್ಟರು.ನಗರದ ಅಥಣಿ ರಸ್ತೆಯ ಅಲ್-ಅಮೀನ್ ಆಸ್ಪತ್ರೆ ಎದುರಿಗೆ ಇರುವ ನವರಸಪುರದ ಏಕತಾ ನಗರದ ವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಡಿ.೧೦ ರಂದು ರಂದು ಜರುಗಿದ ಶ್ರೀ ಅಯ್ಯಪ್ಪ ಸ್ವಾಮಿ ಮಹಪೂಜೆ ಕರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.ಅವರು ಮಾತನಾಡುತ್ತಾ, ಮಣಿಕಂಠ (ಅಯ್ಯಪ್ಪ ಸ್ವಾಮಿ)ಯ ಅನುಗ್ರಹ ಪಡೆಯಲು ಮತ್ತು ಕರುಣಾಮೃತಕ್ಕೆ ಪಾತ್ರರಾಗಲು ಪವಿತ್ರವಾದ ೧೮ ಮೆಟ್ಟಿಲುಗಳನ್ನು ಹತ್ತಿ ಧನ್ಯತಾ ಭಾವ-ಭಕ್ತಿಯನ್ನು ಹೊಂದುತ್ತಾರೆ. ಪ್ರತಿಯೊಂದು ಮೆಟ್ಟಿಲು ವಿಶೇಷವಾದ ಪ್ರಾಮುಖ್ಯತೆಯನ್ನು ಹೊಂದಿದ್ದು, ಮೊದಲ ಐದು ಮೆಟ್ಟಿಲುಗಳು ಕಣ್ಣು, ಕಿವಿ, ಮೂಗು, ನಾಲಿಗೆ ಮತ್ತು ಸ್ಪರ್ಶ ಈ ಎಲ್ಲ ಪಂಚೇಂದ್ರಿಗಳು ಸದಾ ದೇವರ…
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ,ಡಿ.10ತಾಲೂಕಿನ ಇಂಗಳೇಶ್ವರ ಗ್ರಾಮದ ವಿರಕ್ತ ಮಠದ ಹಿರಿಯ ಶ್ರೀಗಳಾದ ಚನ್ನಬಸವ ಸ್ವಾಮೀಜಿ (93) ಗುರುವಾರ ಲಿಂಗೈಕ್ಯರಾದರು. ಪೂಜ್ಯರ ಅಂತಿಮ ವಿಧಿವಿದಾನ ಡಿ.11 ರಂದು ಇಂಗಳೇಶ್ವರ ವಿರಕ್ತಮಠದ ಆವರಣದಲ್ಲಿ ಸಂಜೆ 5 ಗಂಟೆಗೆ ನಡೆಯಲಿದೆ ಎಂದು ಶ್ರೀಮಠದ ಕಿರಿಯ ಶ್ರೀಗಳಾದ ಡಾ. ಸಿದ್ದಲಿಂಗಸ್ವಾಮೀಜಿ ತಿಳಿಸಿದ್ದಾರೆ.ಪಾದಯಾತ್ರೆ ಮೂಲಕವೇ ಇಡೀ ಭರತಖಂಡ ಸುತ್ತಿ ನಡೆದಾಡುವ ಬಸವೇಶ್ವರ ಎಂದೇ ಖ್ಯಾತರಾಗಿದ್ದ ಇಂಗಳೇಶ್ವರ ವಚನಶಿಲಾ ಮಂಟಪದ ನಿರ್ಮಾತೃಗಳೂ ಆಗಿದ್ದ ವಿರಕ್ತಮಠದ ಪೀಠಾಧಿಪತಿ ಚನಬಸವ ಶ್ರೀಗಳು ಅಪಾರ ಭಕ್ತಸಮೂಹ ಹೊಂದಿದ್ದಾರೆ. ಇವರ ಲಿಂಗೈಕ್ಯ ಸುದ್ದಿ ತಿಳಿಯುತ್ತಿದ್ದಂತೆ ಶ್ರೀಗಳ ಅಂತಿಮ ದರ್ಶನಕ್ಕಾಗಿವಿವಿಧೆಡೆಗಳಿಂದ ಇಂಗಳೇಶ್ವರ ಕಡೆಗೆ ಧಾವಿಸುತ್ತಿದ್ದಾರೆ.1932 ರಲ್ಲಿ ಅವಿಭಜಿತ ವಿಜಯಪುರ ಜಿಲ್ಲೆಯ ಬಿಳಗಿ ತಾಲೂಕಿನ ನಾಗರಾಳ ಗ್ರಾಮದಲ್ಲಿ ಹುಚ್ಚಮ್ಮ ಹಾಗೂ ವೀರಯ್ಯ ಎಂಬ ಪುಣ್ಯ ದಂಪತಿಗಳ ಉದರದಲ್ಲಿ ಚನ್ನಬಸವ ಶ್ರೀಗಳು ಜನಿಸಿದ್ದರು.ಬಾಗಲಕೋಟೆಯ ಟೀಕಿನಮಠ ಹಾಗೂ ಧಾರವಾಡ ಮುರುಘಾ ಮಠದಲ್ಲಿ ಗುರುಕುಲ ಪದ್ಧತಿಯಲ್ಲಿ ಮೃತ್ಯುಂಜಯ ಶ್ರೀಗಳ ಸೇವೆಯೊಂದಿಗೆ ಸಂಸ್ಕೃತದಲ್ಲಿ ಶಿಕ್ಷಣ ಪಡೆದು, ಭಾಷಾ ಪಾಂಡಿತ್ಯ ಪಡೆದಿದ್ದರು.ಈ ಹಂತದಲ್ಲೇ ಬಸವನಬಾಗೇವಾಡಿ ತಾಲೂಕಿನ…
ಅಧ್ಯಕ್ಷರಾಗಿ ಅವಧೂತ ಬಂಡಗರ, ಪ್ರಧಾನ ಕಾರ್ಯದರ್ಶಿಯಾಗಿ ಗುರು ಹಿರೇಮಠ ಆಯ್ಕೆ ಉದಯರಶ್ಮಿ ದಿನಪತ್ರಿಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಆಲಮೇಲ ತಾಲೂಕು ಘಟಕಕ್ಕೆ ಬುಧವಾರ ಅವಿರೋಧ ಆಯ್ಕೆ ನಡೆಯಿತು.ಅಧ್ಯಕ್ಷರಾಗಿ ಅವಧೂತ ಬಂಡಗರ, ಉಪಾಧ್ಯಕ್ಷರಾಗಿ ಸಿದ್ದಾರಾಮ ಬಿರಾದಾರ, ಪ್ರಧಾನ ಕಾರ್ಯದರ್ಶಿಯಾಗಿ ಗುರು ಹಿರೇಮಠ, ಕಾರ್ಯದರ್ಶಿಯಾಗಿ ಸಿದ್ದು ಕೆರಿಗೊಂಡ, ಖಜಾಂಚಿಯಾಗಿ ಉಮೇಶ ಕಟಬರ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಬ್ದುಲಗನಿ ದೇವರಮನಿ, ಸುನೀಲ ಉಪ್ಪಿನ, ಫಾರೂಕ್ ಸುಂಬಡ, ಮಲ್ಲಿಕಾರ್ಜುನ ತಳವಾರ, ಬಶೀರ ಅಹ್ಮದ ಮುಜಾವರ, ದತ್ತಾತ್ರೇಯ ಸೊನ್ನ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ದೇವೇಂದ್ರ ಹೆಳವರರಾಜು ಕೊಂಡಗೂಳಿಸದ್ದಾಂ ಜಮಾದಾರಚುನಾವಣಾ ಉಸ್ತುವಾರಿಗಳುಕಾನಿಪ ಸಂಘ ವಿಜಯಪುರ.ಚುನಾವಣೆಯಲ್ಲಿ ನಿಕಟಪೂರ್ವ ಅಧ್ಯಕ್ಷ ಸೈಯದ ದೇವರಮನಿ, ಹಿರಿಯ ಪತ್ರಕರ್ತರಾದ ಡಾ. ರಮೇಶ ಕತ್ತಿ, ಅಮರ ನಾರಯಣಕರ, ಸಿದ್ದು ಹಿರೇಮಠ, ಕಸಾಪ ಅಧ್ಯಕ್ಷರಾದ ಶಿವಶರಣ ಗುಂದಗಿ, ತಾಲೂಕಿನ ಪಂಚ ಗ್ಯಾರಂಟಿ ಸಮಿತಿ ಅದ್ಯಕ್ಷ ಅಶೋಕ ಕೊಳಾರಿ, ಕಡಣಿ ಪಿ.ಬಿ. ಶಿಕ್ಷಣ ಸಂಸ್ಥೆಯ ಪ್ರಾಚಾರ್ಯ ರಮೇಶ ಗಂಗನಳ್ಳಿ ಇದ್ದರು.
ಲೇಖನ- ಪ್ರಶಾಂತ ಕುಲಕರ್ಣಿಉಪನ್ಯಾಸಕರುಶ್ರೀ ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯಸಿಂದಗಿ. ಜಿಲ್ಲಾ: ವಿಜಯಪುರPh:9845442237 ಉದಯರಶ್ಮಿ ದಿನಪತ್ರಿಕೆ ಮಕ್ಕಳ ಜೀವನವನ್ನು ಕಟ್ಟಿಕೊಡುವ ಜವಾಬ್ದಾರಿ ಪೋಷಕರ ಮೇಲಿದೆ ಎಂಬುದು ನಾವು ಹಲವು ಬಾರಿ ಕೇಳಿರುವ ಸತ್ಯ. ಆದರೆ ಪೋಷಕರ ಪಾತ್ರವು ಕೇವಲ ಆಹಾರ, ಬಟ್ಟೆ, ಶಿಕ್ಷಣ ನೀಡುವುದಕ್ಕೆ ಸೀಮಿತವಲ್ಲ; ಅದು ಇನ್ನಷ್ಟು ಆಳವಾಗಿ, ಇನ್ನಷ್ಟು ಮೃದುವಾಗಿ, ಇನ್ನಷ್ಟು ಜವಾಬ್ದಾರಿಯಾಗಿ ಮಕ್ಕಳ ಮನಸ್ಸಿನಲ್ಲಿ ರೂಪುಗೊಳ್ಳುತ್ತದೆ ಮಗು ಜನಿಸಿದ ಕ್ಷಣದಿಂದಲೇ ಪೋಷಕರ ಕಣ್ಣಿನಲ್ಲಿ ಜಗತ್ತನ್ನು ನೋಡುವುದನ್ನು, ಅವರ ಹೃದಯದಲ್ಲಿ ಭಾವನೆಗಳನ್ನು ಅನುಭವಿಸುವುದನ್ನು, ಅವರ ನಡೆ–ನುಡಿಯಲ್ಲಿ ಜೀವನದ ಅರ್ಥವನ್ನು ಹುಡುಕುವುದನ್ನು ಆರಂಭಿಸುತ್ತದೆ.ಮನೆಯೇ ಮಕ್ಕಳ ಮೊದಲ ಪಾಠ ಶಾಲೆ; ಪೋಷಕರು ಮೊದಲ ಮತ್ತು ಅತ್ಯಂತ ಪರಿಣಾಮಕಾರಿ ಗುರುಗಳು. ಮನೆಯೊಳಗಿನ ಒಡನಾಟ, ಪ್ರೀತಿ, ಶಾಂತಿ, ಮಾತಿನ ಮಧುರತೆ—ಇವು ಮಕ್ಕಳ ಮನಸ್ಸಿನಲ್ಲಿ ಮೌಲ್ಯಗಳ ಬೀಜ ಬೀಳಿಸುತ್ತವೆ. ಸಲಹೆಗಳು, ಗದರಿಕೆಗಳು, ಪಾಠಗಳಿಗಿಂತಲೂ ಹೆಚ್ಚು, ಪೋಷಕರು ಹೇಗೆ ಬದುಕುತ್ತಾರೆಂಬುದೇ ಮಕ್ಕಳಿಗೆ ಜೀವನದ ದೊಡ್ಡ ಪಾಠ. ಹೀಗಾಗಿ ಮೌಲ್ಯಗಳನ್ನು ಕೇವಲ ಕಲಿಸುವುದಲ್ಲ; ಜೀವನದಲ್ಲಿ ನಾವೇ ಪಾಲಿಸುವುದರಿಂದಲೇ ಮಕ್ಕಳು ಅವನ್ನು ಸಹಜವಾಗಿ…
ಲೇಖನ- ವೀಣಾ ಹೇಮಂತಗೌಡ ಪಾಟೀಲಮುಂಡರಗಿಗದಗ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಈ ಪ್ರಪಂಚದ ಎಷ್ಟೋ ವಿಷಯಗಳು ನಮಗೆ ಗೊತ್ತಿಲ್ಲ. ಎಲ್ಲರಿಗೂ ಎಲ್ಲವೂ ಗೊತ್ತಿರಲೇಬೇಕು ಎಂದಿಲ್ಲ. ಈ ವಿಷಯದಲ್ಲಿ ಈ ಭೂಮಿಯ ಮೇಲಿರುವ ಯಾವೊಬ್ಬ ವ್ಯಕ್ತಿಯೂ ಪರಿಪೂರ್ಣನಲ್ಲ. ಎಲ್ಲರೂ ತಮಗೆ ಆಸಕ್ತಿ ಇರುವ ಒಂದಲ್ಲ ಒಂದು ವಿಷಯದಲ್ಲಿ ಪರಿಪೂರ್ಣತೆಯನ್ನು ಸಾಧಿಸಬಹುದೇ ಹೊರತು ಎಲ್ಲ ವಿಷಯಗಳಲ್ಲಿ ಒಂದೇ ಮಟ್ಟದ ಪರಿಣತಿಯನ್ನು ಸಾಧಿಸುವುದು ಖಂಡಿತವಾಗಿಯೂ ಅಸಾಧ್ಯ.ನಗರದ ಇಬ್ಬರು ಒಂದೇ ಸಮನೆ ಮಳೆ ಬರುತ್ತಿದ್ದರೆ ಅಯ್ಯೋ ಹಾಳು ಮಳೆ! ಒಂದೇ ಸಮನೆ ಹಿಡಿದಿದೆ. ಯಾವಾಗ ನಿಲ್ಲುತ್ತದೆಯೋ ಏನೋ? ಸಾಕಾಗಿ ಹೋಗಿದೆ ಎಂದು ಮಾತನಾಡಿದರೆ ಅಲ್ಲಿಯೇ ನಿಂತ ಮತ್ತೋರ್ವ ವ್ಯಕ್ತಿ ಹವಾಮಾನ ವೈಪರೀತ್ಯದಿಂದಾಗಿ ವಾತಾವರಣ ಹೀಗಿದ್ದು ಮಳೆ ಹುಯ್ಯುತ್ತಿದೆ. ಈ ಮಳೆ ಇನ್ನೂ ನಾಲ್ಕು ದಿನಗಳ ಕಾಲ ಹೀಗೆಯೇ ಸುರಿಯುತ್ತದೆ ಎಂದು ಹೇಳಬಹುದು. ಇದಕ್ಕೆ ಕಾರಣ ಮಳೆಯ ಕುರಿತು ಆತನಿಗೆ ಇರಬಹುದಾದ ಜ್ಞಾನ ಮತ್ತು ಮತ್ತು ಉಳಿದವರಿಗೆ ಅದರ ಕುರಿತಾದ ಮಾಹಿತಿ ಅಷ್ಟಾಗಿ ಇಲ್ಲದೆ ಇರುವುದು.ಇದರ ಅರ್ಥ ಇಷ್ಟೇ.. ಎಲ್ಲವನ್ನು…
ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: 2025 ರಿಂದ 2028 ರ ಅವಧಿಗೆ ನಡೆದ ಕೊಲ್ಹಾರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆಯಲ್ಲಿ ಪತ್ರಕರ್ತ ಅರುಣಕುಮಾರ ಬ ಔರಸಂಗ ಅವರು ನೂತನ ತಾಲ್ಲೂಕಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಉಸ್ತುವಾರಿಗಳಾದ ರಾಜ್ಯ ಕಾರ್ಯಕಾರಿ ಸದಸ್ಯ ಪ್ರಕಾಶ ಬೆಣ್ಣೂರ ಹಾಗೂ ಜಿಲ್ಲಾ ಉಪಾಧ್ಯಕ್ಷ ಬಸವರಾಜ ಉಳ್ಳಾಗಡ್ಡಿ ತಿಳಿಸಿದ್ದಾರೆ.ಪಟ್ಟಣದ ಯುಕೆಪಿ ಬಳಿ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಕಾ ನಿ ಪ ಸಂಘ ಹಾಗೂ ಕೊಲ್ಹಾರ ತಾಲೂಕು ಘಟಕದ ಸಹಯೋಗದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಚುನಾವಣೆ ಪ್ರಕ್ರಿಯೆ ಜರುಗಿತು. ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಎಲ್ಲಾ ಐದು ಪದಾಧಿಕಾರಿಗಳ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆಯಿತು. ತಾಲೂಕು ಅಧ್ಯಕ್ಷರಾಗಿ ಅರುಣಕುಮಾರ ಬ ಔರಸಂಗ, ಉಪಾಧ್ಯಕ್ಷರಾಗಿ ಮಲ್ಲಿಕಾರ್ಜುನ ಬ ಗಣಿ, ಪ್ರಧಾನ ಕಾರ್ಯದರ್ಶಿಯಾಗಿ ರವಿಕುಮಾರ ತುಪ್ಪದ, ಕಾರ್ಯದರ್ಶಿಯಾಗಿ ಸಿದ್ದಪ್ಪ ಗಣಿ, ಖಜಾಂಚಿಯಾಗಿ ಹಣಮಂತ ಛಬ್ಬಿ ಅವಿರೋಧವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಚುನಾವಣಾಧಿಕಾರಿ ಪ್ರಕಾಶ ಬೆನ್ನೂರ, ಉಸ್ತುವಾರಿ ಬಸವರಾಜ ಉಳ್ಳಾಗಡ್ಡಿ ಆದೇಶ ಪತ್ರ ನೀಡಿ…
ಉದಯರಶ್ಮಿ ದಿನಪತ್ರಿಕೆ ಇಂಡಿ: ಸತ್ಯ ಮಾರ್ಗ ಮನುಷ್ಯನನ್ನು ಬದಲಿಸುತ್ತದೆ. ಮನುಷ್ಯನ ನಡೆ ನುಡಿಗಳು ಜೀವನ ವಿಕಾಸಕ್ಕೆ ಅಡಿಪಾಯ. ಸಾಧನೆಯ ಹಾದಿಯಲ್ಲಿ ಎಷ್ಟೇ ಸಂಕಷ್ಟ ಬಂದರೂ ಬಿಡದಿರುವುದೇ ನಿಜವಾದ ಸಾಧನೆ ಎಂದು ಬಾಳೆಹೊನ್ನೂರು ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.ಅವರು ಬುಧವಾರ ಇಂಡಿ ನಗರದ ಸದಾಶಿವ ನಗರದ ಶಿರಶ್ಯಾಡ ಶಾಖಾ ಮಠದಲ್ಲಿ ನಿರ್ಮಾಣವಾಗುತ್ತಿರುವ ಬಡಮಕ್ಕಳ ಶಿಕ್ಷಣ ಹಾಗೂ ಉಚಿತ ಅನ್ನಪ್ರಸಾದ ಮತ್ತು ವಸತಿ ನಿಲಯದ ಮಹಾಧ್ವಾರದ ಪ್ರಥಮ ಹೊಸ್ತಿಲ (ಶಿಲಾಧ್ವಾರ)ದ ಪೂಜಾ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.ಬದುಕು ಸುಖ, ದು:ಖ, ನೋವು-ನಲಿವು, ಮಾನ-ಅಪಮಾನ, ಜಯ-ಅಪಜಯ ಮೊದಲಾದ ದ್ವಂದ್ವಗಳಿAದ ಕೂಡಿದೆ. ಸುಖ ಬಯಸುವುದು ಮನುಷ್ಯನ ಸಹಜ ಗುಣ. ಆದರೆ ಸುಖದ ಬದುಕಿಗೆ ಆಚರಿಸುವ ಮೌಲ್ಯಗಳನ್ನು ಮನುಷ್ಯ ಮರೆಯುತ್ತಿದ್ದಾನೆ. ಅಧಿಕಾರ ಕೀರ್ತಿ ಧನ ಕನಕ ವಸ್ತು ವಾಹನ ಮತ್ತು ದೇಹ ಸೌಖ್ಯಕ್ಕಾಗಿ ಬಡಿದಾಡಿ ಮಡಿದವರೆಷ್ಟೋ ಜನ. ಜಗದ ಜನರಿಗೆ ಬೆಳಕು ತೋರುವ ಜೀವನ ಸಾಗಿಸಿದ ಆಚಾರ್ಯರ ಮತ್ತು ಋಷಿ ಮುನಿಗಳ ಮಾತುಗಳನ್ನು ಯಾರೂ ಮರೆಯುವುದಿಲ್ಲ.…
ಉದಯರಶ್ಮಿ ದಿನಪತ್ರಿಕೆ ಇಂಡಿ: ಪಟ್ಟಣದ ಜಿ.ಆರ್.ಗಾಂಧಿ ಕಲಾ, ವೈ.ಎ.ಪಾಟೀಲ ವಾಣಿಜ್ಯ ಹಾಗೂ ಎಂ.ಎಫ್ ದೋಶಿ ವಿಜ್ಞಾನ ಮಹಾವಿದ್ಯಾಲಯದ ಆವರಣದಲ್ಲಿ ಡಿ ೧೪ ರಿಂದ ೩೧ ರವರೆಗೆ ಪ್ರತೀದಿನ ಬೆಳಿಗ್ಗೆ ೬.೩೦ ರಿಂದ ೭.೩೦ ರ ವರೆಗೆ ಕಾತ್ರಾಳ ಬಾಲಗಾಂವ ಮಠದ ಪೀಠಾಧಿಪತಿ ಅಮೃತಾನಂದ ಶ್ರೀಗಳಿಂದ ಆಧ್ಯಾತ್ಮಿಕ ಪ್ರವಚನ ಪ್ರಾರಂಭವಾಗಲಿದೆ.ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಅಮೃತಾನಂದ ಶ್ರೀಗಳ ವಾಣಿಯನ್ನು ಆಲಿಸಿ ಪುನೀತರಾಗಬೇಕೆಂದು ಆಧ್ಯಾತ್ಮಿಕ ಪ್ರವಚನ ಸೇವಾ ಸಮಿತಿ ಗುರುವಾರ ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿಕೊಂಡಿದೆ.ಈಗಾಗಲೇ ಕಾಲೇಜಿನ ಆವರಣ ಸ್ವಚ್ಛಗೊಳಿಸಿದ್ದು ಪ್ರತಿ ದಿನವೂ ಪ್ರವಚನ ಮುಗಿದ ನಂತರ ತಕ್ಷಣವೇ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ಭಕ್ತರು ಪ್ರಸಾದ ಸೇವನೆ ಮಾಡಿ ಆಧ್ಯಾತ್ಮಿಕ ಪ್ರವಚನದ ಸ್ಥಳ ಸ್ವಚ್ಛವಾಗಿಡಲು ಸಹಕಾರ ನೀಡಬೇಕೆಂದು ಮನವಿ ಮಾಡಿದರುಕೊನೆಯ ದಿನ ವಿಜಯಪುರ ನಗರದ ಶ್ರೀ ಸಿದ್ದೇಶ್ವರ ಶ್ರೀಗಳ ೩ ನೇ ವರ್ಷದ ಗುರುವಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವದು ಎಂದು ಸಮಿತಿ ತಿಳಿಸಿದೆ. ಆಧ್ಯಾತ್ಮ ಪ್ರವಚನ ನೀಡಲಿರುವ ಅಮೃತಾನಂದ ಶ್ರೀಗಳು ತಮ್ಮ ಬಾಲ್ಯದಲ್ಲಿಯೇ ತಂದೆ ತಾಯಿ…
