Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಕಳಪೆ ಈರುಳ್ಳಿ ಬೀಜದಿಂದ ನಷ್ಟಗೊಂಡ ಅಂಕಲಗಿ ಗ್ರಾಮದ ರೈತನ ಹೊಲಕ್ಕೆ ವಿಜ್ಞಾನಿಗಳ ತಂಡ ಬೇಟಿ | ವಿಜ್ಞಾನಿಗಳಿಂದ ಈರುಳ್ಳಿ ಶ್ಯಾಂಪಲ್ ಸಂಗ್ರಹ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಈರುಳ್ಳಿ ನಷ್ಟ ಕುರಿತು ಸಲ್ಲಿಸಿರುವ ದೂರಿಗೆ ಸಂಬಂಧಿಸಿದಂತೆ ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹಾಗೂ ವಿಜ್ಞಾನಿಗಳೊಡನೆ ಬೇಟಿ ನೀಡಿದ್ದೇವೆ. ವರದಿ ಬಂದ ತಕ್ಷಣ ಈರುಳ್ಳಿ ಬೀಜದ ಕಂಪನಿ ಬೀಜಗಳು ಕಳಪೆ ಅಂತಾ ಸಾಬೀತಾದರೆ ನಾವೇ ಸ್ವತಃ ದೂರನ್ನು ದಾಖಲಿಸಿ ಪರಿಹಾರ ಕೊಡಿಸುತ್ತೆವೆ ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಬಸನಗೌಡ ಪಾಟೀಲ ಅವರು ಭರವಸೆ ನೀಡಿದರು.ತಾಲೂಕಿನ ಅಂಕಲಗಿ ಗ್ರಾಮದ ಶಾರವ್ವ ಗುರಪ್ಪ ತಳವಾರ ಸರ್ವೇ ನಂ ೭೫/೫ ರ ಒಟ್ಟು ೪ ಎಕರೆ ಈರುಳ್ಳಿಯೂ ಸಂಪೂರ್ಣ ಹಾಳಾಗಿರುವ ಕುರಿತು ಜಿಲ್ಲಾಧಿಕಾರಿಗಳು, ಕೃಷಿ ಮತ್ತು ತೋಟಗಾರಿಕಾ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಪರಿಹಾರ ನೀಡುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು ಮನವಿ ಸಲ್ಲಿಸಿರುವ ಹಿನ್ನಲೆಯಲ್ಲಿ ಕೃಷಿ, ತೋಟಗಾರಿಕೆ ಇಲಾಖೆ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಲ ಸಂಪನ್ಮೂಲ ಇಲಾಖೆ ಹಾಗೂ ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತ ಇವರ ಸಹಯೋಗದಲ್ಲಿ ಸೆಪ್ಟೆಂಬರ್ ೬ರಂದು ಆಲಮಟ್ಟಿಯಲ್ಲಿ ಲಾಲ್ ಬಹಾದ್ದೂರ್ ಶಾಸ್ತ್ರಿ ಸಾಗರದಲ್ಲಿ ಕೃಷ್ಣೆಯ ಜಲಧಿಗೆ ಗಂಗಾಪೂಜೆ ಹಾಗೂ ಬಾಗಿನ ಅರ್ಪಣೆ ಸಮಾರಂಭ ಹಮ್ಮಿಕೊಳ್ಳಲಾಗಿದೆ.ಕನ್ನಡ ನಾಡಿನ ಪ್ರತಿಷ್ಠಿತ ಆಲಮಟ್ಟಿ ಆಣೆಕಟ್ಟೆಯಲ್ಲಿ ಗರಿಷ್ಠ ಮಟ್ಟಕ್ಕೆ ನೀರು ಸಂಗ್ರಹಣೆಯಾದ ಪ್ರಯುಕ್ತ ಅಂದು ಬೆಳಿಗ್ಗೆ ೧೧ ಗಂಟೆಗೆ ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರು ಜಲಾಶಯಕ್ಕೆ ಬಾಗಿನ ಅರ್ಪಣೆ ಮಾಡಲಿದ್ದಾರೆ.ಉಪ ಮುಖ್ಯಮಂತ್ರಿ ಹಾಗೂ ಜಲ ಸಂಪನ್ಮೂಲ ಮತ್ತು ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಡಿ.ಕೆ.ಶಿವಕುಮಾರ ಘನ ಉಪಸ್ಥಿತಿ ವಹಿಸಲಿದ್ದಾರೆ. ಜವಳಿ,ಕಬ್ಬು ಅಭಿವೃದ್ದಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಎಸ್.ಪಾಟೀಲ ಅವರು ಘನ ಅಧ್ಯಕ್ಷತೆ ವಹಿಸಲಿದ್ದಾರೆ.ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ದಿ ಖಾತೆ ಸಚಿವರಾದ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ, ಅಬಕಾರಿ ಖಾತೆ ಸಚಿವರಾದ ಹಾಗೂ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರು ಸೆಪ್ಟೆಂಬರ್ ೬ರಂದು ವಿಜಯಪುರ ಜಿಲ್ಲಾ ಪ್ರವಾಸ ಕೈಗೊಂಡು, ಆಲಮಟ್ಟಿಯಲ್ಲಿನ ಲಾಲ್ ಬಹಾದ್ದೂರ್ ಶಾಸ್ತ್ರೀ ಸಾಗರದ ಕೃಷ್ಣೆಯ ಜಲಧಿಗೆ ಗಂಗಾ ಪೂಜೆ ಹಾಗೂ ಬಾಗಿನ ಅರ್ಪಣೆ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.ಸೆಪ್ಟೆಂಬರ್ ೬ರ ಮಧ್ಯಾಹ್ನ ೧೨ಗಂಟೆಗೆ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಡ್ಯಾಂಗೆ ಹೆಲಿಕ್ಯಾಪ್ಟರ್ ಮೂಲಕ ಆಗಮಿಸುವ ಅವರು,ಕೃಷ್ಣೆಯ ಜಲಧಿಗೆ ಗಂಗಾ ಪೂಜೆ ಹಾಗೂ ಬಾಗಿನ ಅರ್ಪಣೆ ಸಮಾರಂಭ ನೆರವೇರಿಸಿ, ಅದೇ ದಿನ ಮಧ್ಯಾಹ್ನ ೩ಗಂಟೆಗೆ ಕೊಪ್ಪಳ ಜಿಲ್ಲೆಗೆ ತೆರಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಅನಾಮಧೇಯ ಅಂದಾಜು ೩೫ ರಿಂದ ೪೦ ವರ್ಷ ವಯಸ್ಸಿನ ವ್ಯಕ್ತಿ ಶವ ಪತ್ತೆಯಾಗಿರುವ ಕುರಿತು ವಿಜಯಪುರದ ಗೋಲಗುಮ್ಮಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅನಾಮಧೇಯ ವ್ಯಕ್ತಿ ವಾರಸುದಾರರ ಪತ್ತೆಗೆ ಸಾರ್ವಜನಿಕರಲ್ಲಿ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸಪೇಕ್ಟರ್ ಅವರು ಮನವಿ ಮಾಡಿಕೊಂಡಿದ್ದಾರೆ.ಪತ್ತೆಯಾದ ವ್ಯಕ್ತಿಯು ೫ ಪೂಟ್ ಎತ್ತರ, ಸಾಧಾರಣ ಮೈಕಟ್ಟು, ನೆಟ್ಟನೆಯ ಮೂಗು, ಕಪ್ಪು ಕೂದಲು, ಶರ್ಟ್, ಪ್ಯಾಂಟ್ ಧರಿಸಿದ್ದು, ಈ ಚಹರೆಯುಳ್ಳ ವ್ಯಕ್ತಿಯ ವಾರಸುದಾರರು ಪತ್ತೆಯಾದಲ್ಲಿ ಸಾರ್ವನಜಿಕರು ವಿಜಯಪುರ ಗೋಲಗುಮ್ಮಜ್ ಠಾಣೆಯ ದೂರವಾಣಿ ಸಂಖ್ಯೆ: ೦೮೩೫೨-೨೫೦೨೫೨, ೦೮೩೫೨-೨೫೩೧೦೦, ೦೮೩೫೨-೨೫೦೧೫೨ ಹಾಗೂ ೦೮೩೧-೨೪೦೫೨೦೧ಗೆ ಸಂಪರ್ಕಿಸಬಹುದಾಗಿದೆ ಎಂದು ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸಪೇಕ್ಟರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಚಡಚಣ ತಾಲೂಕಿನ ಗ್ರಾಮಗಳ ಜಮೀನುಗಳಿಗೆ ಇಂಡಿ ಉಪವಿಭಾಗಾಧಿಕಾರಿ ಭೇಟಿ; ಬೆಳೆ ಹಾನಿ ಪರಿಶೀಲನೆ ಉದಯರಶ್ಮಿ ದಿನಪತ್ರಿಕೆ ಚಡಚಣ: ತಾಲೂಕಿನಲ್ಲಿ ಸುಮಾರು ದಿನಗಳಿಂದ ಸುರಿದ ವಿಪರೀತ ಮಳೆಯಿಂದ ರೈತರ ಜಮೀನುಗಳಲ್ಲಿ ಬೆಳೆದ ಮುಂಗಾರು ಬೆಳೆ ಸಂಪೂರ್ಣ ನೀರಿನಲ್ಲಿ ನಿಂತ ಪರಿಣಾಮವಾಗಿ ಸುಮಾರು ಬೆಳೆ ಹಾನಿಯಾಗಿದೆ. ಹಾನಿಗೊಳಗಾದ ರೈತರಿಗೆ ಬೆಳೆ ಹಾನಿಯ ಪರಿಹಾರ ಸರಕಾರದಿಂದ ಕೊಡಿಸಬೇಕು ಎಂಬ ಕೂಗೂ ರೈತರು ಹಾಗೂ ರೈತಪರ ಸಂಘಟನೆಗಳು ಚಡಚಣ ತಹಶೀಲ್ದಾರ ಸಂಜಯ ಇಂಗಳೆ ಅವರಿಗೆ ಮನವಿ ಮಾಡಿಕೊಂಡಿದ್ದರು.ಚಡಚಣ ತಾಲೂಕಿನ ನಂದರಗಿ, ಚಣೇಗಾಂವ, ದೂಳಖೇಡ, ಶಿರಗೂರ ಖಾಲ್ಸಾ ಗ್ರಾಮ ಸೇರಿದಂತೆ ಜಿಗಜೇವಣಗಿ ಗ್ರಾಮಗಳಿಗೆ ಇಂಡಿ ಉಪವಿಭಾಗಾಧಿಕಾರಿ ಶ್ರೀಮತಿ ಅನುರಾಧ ವಸ್ತ್ರದ, ಚಡಚಣ ತಹಶೀಲ್ದಾರ ಸಂಜಯ ಇಂಗಳೆ ಅವರು ಕೃಷಿ ಹಾಗೂ ತೊಟಗಾರಿಕೆ ಬೆಳೆ ಹಾನಿ ಕುರಿತು ಸಮಗ್ರವಾಗಿ ಪರಿಶೀಲಿಸಿ ಫಸಲು(ಬೆಳೆ) ಹಾನಿಗೊಳಗಾದ ರೈತರ ಜಮೀನಿನ ಜಿಪಿಎಸ್ ಪೋಟೊ ದೊಂದಿಗೆ ಯಾವ ಬೆಳೆ ಹಾನಿಯಾಗಿದೆ, ಎಷ್ಟು ಹೆಕ್ಟೇರ್ ಹಾನಿಯಾಗಿದೆ, ರೈತನ ಹೆಸರು ಹೀಗೆ ಹತ್ತು ಹಲವಾರು ವಿಷಯವನ್ನು ಲ್ಯಾಪ್ ಟಾಪ್…
ಇಂಡಿ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಎಸಿ ಅನುರಾಧಾ ಹೇಳಿಕೆ ಉದಯರಶ್ಮಿ ದಿನಪತ್ರಿಕೆ ಇಂಡಿ: ತಾಲೂಕಿನ್ಯಾದಂತ ಭೀಮಾ ನದಿ ಪ್ರವಾಹದಿಂದ ಉಂಟಾದ ಬೆಳೆ ಹಾನಿಯ ಬಗ್ಗೆ ಜಂಟಿ ಸಮೀಕ್ಷೆ ನಡೆಸಲಾಗುತ್ತಿದ್ದು ಎನ್ಡಿಆರ್ಎಫ್ ಎಸ್ಡಿಆರ್ಎಫ್ ಸಮೀಕ್ಷೆ ಪಡೆದು ಭೀಮಾ ನದಿ ಭಾದಿತ ಪ್ರದೇಶಗಳ ಬೆಳೆ ಹಾನಿ ವರದಿ ಒಂದೆರಡು ದಿನದಲ್ಲಿ ಸಿಗಲಿದ್ದು ಶೀಘ್ರವೇ ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಸಲ್ಲಿಸಲಾಗುವದೆಂದು ಕಂದಾಯ ಉಪವಿಬಾಗಾಧಿಕಾರಿ ಅನುರಾಧಾ ವಸ್ತçದ ಹೇಳಿದರು.ತಾಲೂಕಿನ ಭೀಮಾ ನದಿ ದಂಡೆಯ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಎಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಭೀಮಾ ನದಿ ಪ್ರವಾಹದಿಂದ ಹಾನಿಯಾದ ಕೃಷಿ ಬೆಳೆಗಳನ್ನು ಜಂಟಿ ಸಮೀಕ್ಷೆ ಕೈಕೊಂಡ ಪಟ್ಟಿಯನ್ನು ಆಯಾ ಗ್ರಾ.ಪಂ ಗಳಲ್ಲಿ ಲಗ್ತಿಸಲಾಗಿದೆ. ಒಂದು ವಾರ ಕಾಲಾವಕಾಶ ಅಕ್ಷೇಪಣೆಗೆ ಸಲ್ಲಿಸಲು ನೀಡಿದೆ. ಅಂತಿಮ ವರದಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗುವದು ಎಂದರು.ಕಳೆದ ಹದಿನೈದು ದಿನಗಳಿಂದ ಮೇಲಿಂದ ಮೇಲೆ ಮಳೆ ಬರುತ್ತಿರುವದರಿಂದ ಸಮೀಕ್ಷೆಗೆ ಸೂಕ್ತ ಅವಕಾಶ ಸಿಗಲಿಲ್ಲ. ಈಗ ಸ್ವಲ್ಪ ಮಟ್ಟಿಗೆ ಮಳೆ ಕಡಿಮೆಯಾಗಿರುವದರಿಂದ ಸಮೀಕ್ಷೆ…
ಇಂದು (ಸೆಪ್ಟೆಂಬರ್ ೦೫, ಶುಕ್ರವಾರ) “ಶಿಕ್ಷಕರ ದಿನಾಚರಣೆ” ಪ್ರಯುಕ್ತ ಈ ವಿಶೇಷ ಲೇಖನ ಲೇಖನ- ಶೈಲಜಾ ಆಲಗೂರಉಪನ್ಯಾಸಕರುಶಿವಣಗಿವಿಜಯಪುರ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ “ಜ್ಞಾನದ ಜೊತೆಗೆ ಉತ್ತಮ ಮತ್ತು ನಿಷ್ಕಲ್ಮಶವಾದ ಮನಸುಳ್ಳವನು ಮಾತ್ರ ಒಬ್ಬ ಆದರ್ಶ ಶಿಕ್ಷಕನಾಗಲು ಸಾಧ್ಯ “ಎಂದು ಡಾ. ಸರ್ವಪಲ್ಲಿ ರಾಧಾಕೃಷ್ಣನವರು ಹೇಳಿದ ಮಾತಿನಂತೆ ಅವರು ಆದರ್ಶ ಶಿಕ್ಷಕರೆನಿಸಿಕೊಂಡರು. ಶಿಕ್ಷಕನಾದವನು ಮಕ್ಕಳಿಗೆ ಪುಸ್ತಕದಲ್ಲಿರುವುದನ್ನು ಯಥಾವತ್ತಾಗಿ ಹೇಳಿ ಪರೀಕ್ಷೆ, ಫಲಿತಾಂಶ, ಅಂಕ, ದರ್ಜೆ ಎಂದು ಹೇಳಿದರೆ ಅದು ಸಮಂಜಸವಾಗಲಾರದು. ಒಬ್ಬ ವ್ಯಕ್ತಿ ಪರಿಪೂರ್ಣ ಉತ್ತಮ ನಾಗರಿಕನೆನಿಸಿಕೊಳ್ಳಲು “ಮುಂದೆ ಗುರಿ ಇರಬೇಕು, ಹಿಂದೆ ಗುರು ಇರಬೇಕು ” ಎನ್ನುವ ಮಾತಿನಂತೆ ಮುಂದಿರುವ ಗುರಿಯನ್ನು ನೈತಿಕವಾಗಿ, ಸನ್ಮಾರ್ಗದಲ್ಲಿ ವ್ಯಕಕರೆದುಕೊಂಡು ಹೋಗಿ ಆ ವ್ಯಕ್ತಿಯನ್ನು ಆದರ್ಶ ವ್ಯಕ್ತಿಯನ್ನಾಗಿಸುವ ಮಾರ್ಗದರ್ಶಕನೇ ಗುರುವಾಗಿರುತ್ತಾನೆ. ವ್ಯಕ್ತಿಯನ್ನು ಅಥವಾ ವಿದ್ಯಾರ್ಥಿಯನ್ನು ಉತ್ತಮ ನಾಗರಿಕರನ್ನಾಗಿ ಅವರ ಜೀವನಕ್ಕೆ ಭದ್ರ ಬುನಾದಿ ಹಾಕಿಕೊಡುವವರೇ ಶಿಕ್ಷಕರು. ವಿದ್ಯಾರ್ಥಿಗಳಾಗಿ ಬಂದವರನ್ನು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ದೇಶದ ಪ್ರಗತಿಗೆ ಸಂಪತ್ತನ್ನಾಗಿ ಬದಲಾಸುವ ಮಹತ್ತರವಾದ ಕಾರ್ಯ ಸಾಧನೆ ಮಾಡುವ…
ಇಂದು (ಸೆಪ್ಟಂಬರ್ ೦೫, ಶುಕ್ರವಾರ) “ಶಿಕ್ಷಕರ ದಿನಾಚರಣೆ” ಪ್ರಯುಕ್ತ ಈ ವಿಶೇಷ ಲೇಖನ ಲೇಖನ- ಮಲ್ಲಪ್ಪ. ಸಿ. ಖೊದ್ನಾಪೂರತಿಕೋಟಾವಿಜಯಪುರ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಖ್ಯಾತ ತತ್ವಜ್ಞಾನಿ ಡಾರ್ವಿನ್ ಮಾರ್ಟಿನ್ ಅವರು, “ಒಳ್ಳೆಯ ಶಿಕ್ಷಕದು ಮೇಣಬತ್ತಿಯಂತೆ, ತಮ್ಮ ಜೀವವನ್ನು ಶ್ರವಿಸಿ ಇತರರಿಗೆ ಬೆಳಕು ನೀಡುವ ದೀಪವಿದ್ದಂತೆ” ಎಂದು ಹೇಳಿದ್ದಾರೆ. ಅಜ್ಞಾನದ ಕಳೆಯ ಕಿತ್ತಿ, ಸುಜ್ಞಾನದ ಬೀಜವ ಬಿತ್ತಿ, ಸದ್ಗುಣಗಳ ಗೊಬ್ಬರ ಹಾಕಿ, ಮನದಲ್ಲಿ ನವಚೈತನ್ಯದ ಫಲವ ತುಂಬಿ, ದೇಶಕ್ಕಾಗಿ ಸತ್ಪçಜೆಗಳನ್ನು ರೂಪಿಸುವವರೇ ಶಿಕ್ಷಕರು ಆಗಿದ್ದಾರೆ. ಶಿಕ್ಷಕರನ್ನು ಪೂಜ್ಯನೀಯ ಸ್ಥಾನದಲ್ಲಿಟ್ಟು ಗೌರವಿಸುವುದು ನಮ್ಮ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯಾಗಿದೆ. ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಗುರು ಅಮೂಲ್ಯ ಪಾತ್ರ ವಹಿಸುತ್ತಾನೆ. ಜನಿಸಿದಾಗ ತಾಯಿಯು ಮೊದಲ ಗುರುವಾದರೆ, ಮುಂದಿನ ಬದುಕಿನ ವಿವಿಧ ಘಟ್ಟಗಳಲ್ಲಿ, ಸಾಧನೆಯ ಪಥದಲ್ಲಿ ಗುರು ಎಂಬ ಎರಡಕ್ಷರದ ಶಕ್ತಿಯು ಒಂದು ಹೊಸತನದ ಬೆಳಕೇ ಆಗಿರುತ್ತದೆ. ಪ್ರತಿಯೊಂದು ಹೆಜ್ಜೆ ಹೆಜ್ಜೆಯಲ್ಲೂ ಬಾಳಗೆ ಬೆಳಕಾಗಿ ಸಾಧನೆಯ ಶಿಖರವನ್ನು ಮುಟ್ಟಲು ದಾರಿದೀಪವಾಗುತ್ತಾನೆ. ನಾವು ಬದುಕಿನಲ್ಲಿ ಎನನ್ನಾದರೂ ಸಾಧನೆ ಮಾಡುತ್ತೇವೆ…
ಇಂದು (ಸೆಪ್ಟೆಂಬರ್ ೦೫, ಶುಕ್ರವಾರ) “ಶಿಕ್ಷಕರ ದಿನಾಚರಣೆ” ನಿಮಿತ್ತ ಈ ವಿಶೇಷ ಲೇಖನ ಲೇಖನ- ಬಸವರಾಜ ಪೂಜಾರಭೂಮಾಪಕರುಯ ಬೂದಿಹಾಳಮೊ: 9535854360 ಉದಯರಶ್ಮಿ ದಿನಪತ್ರಿಕೆ ನಾನಾಗ ಆಗ ತಾನೆ ಆರನೇ ತರಗತಿಯಿಂದ ಏಳನೇ ತರಗತಿಗೆ ಸೇರಿದ ಪ್ರಾರಂಭದ ದಿನಗಳು. ಏನು ತಿಳಿಯದ ಮುಗ್ಧ ಮನಸ್ಸಿನ ಆಟೋಪಾಠಗಳ ಗಮನ ಹರಿಸುವ ಎಳೆ ವಯಸ್ಸು. ಹೊಸ ತರಗತಿಗೆ ಯಾವ ಕೋಣೆಯಲ್ಲಿ ಕೂಡಬೇಕೆಂಬ ಗೊಂದಲದ ನಡುವೆಯೂ ಶಾಲೆಗೆ ಹಾಜರಾದೇವು. ಕಡಿಮೆ ಕೋಣೆಗಳನ್ನೊಳಗೊಂಡ ಒಂದು ಪುಟ್ಟ ಹಳ್ಳಿಯ ಸರ್ಕಾರಿ ಶಾಲೆ. ಮೈದಾನದ ಬೆಂಗಾಳಿ ಮರ, ಬೇವಿನ ಮರದ ಕೆಳಗಡೆ ತರಗತಿಯನ್ನು ನಡೆಸುವ ಎಸಿ ಕ್ಲಾಸ್ ರೂಮಿನ ಕಾಲವದು. ಅಂತಹದರಲ್ಲಿ ನಮ್ಮ ಏಳನೇ ತರಗತಿಗೂ ಮುಖ್ಯೋಪಾಧ್ಯಾಯರ ಕೋಣೆಯ ನಡುವೆ ಟಿಜೂರಿಗಳಷ್ಟೇ (ಕಪಾಟಗಳು) ಅಡ್ಡಲಾಗಿ ನಿಂತಿದವು. ಹೀಗಾಗಿ ಈ ತರಗತಿಗೆ Z+ ಸೆಕ್ಯೂರಿಟಿ ತರ ಮುಖ್ಯೋಪಾಧ್ಯಾಯರ ಮತ್ತು ತರಗತಿ ಶಿಕ್ಷಕರ ಕಣ್ಣು ಸದಾ ನಮ್ಮ ಮೇಲೆಯೇ, ಬಾಯಿ ಬಿಡುವಂತಿಲ್ಲ, ಮಾತನಾಡುವಂತಿಲ್ಲ, ತಿರಗಾಡುವಂತಿಲ್ಲ, ಸುಮ್ಮನೆ ಶಿಕ್ಷಕರೇಳುವ ಪಿನ್ ಡ್ರಾಪ್ ಸೈಲೆಂಟ್ ಖಾಯಂವಾಗಿಬಿಡ್ತು. ಮಕ್ಕಳಾದ…
ನಗರಸಭೆ ಹಾಗೂ ವಿಡಿಎ ಮಾಜಿ ಅಧ್ಯಕ್ಷ ಪರಶುರಾಮಸಿಂಗ್ ರಜಪೂತ ಪ್ರಶ್ನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದಲ್ಲಿ ನಡೆದ ಗಣಪತಿ ವಿಸರ್ಜನಾ ಪೂರ್ವ ಮೆರವಣಿಗೆ ವೇಳೆ ವಿದ್ಯುತ್ ಅವಘಢ ಸಂಭವಿಸಿದ ಘಟನೆಗೆ ಯಾರು ಹೊಣೆ? ಎಂದು ನಗರಸಭೆ ಹಾಗೂ ವಿಡಿಎ ಮಾಜಿ ಅಧ್ಯಕ್ಷ ಪರಶುರಾಮಸಿಂಗ್ ರಜಪೂತ ಪ್ರಶ್ನಿಸಿದ್ದಾರೆ.ಈ ಕುರಿತು ಬುಧವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ನಾಲ್ಕೈದು ವರ್ಷಗಳ ಹಿಂದೆ ಅಂಡರ್ ಗ್ರೌಂಡ್ ಕೇಬಲ್ ಅಳವಡಿಸಲು ನೂರಾರು ಕೋಟಿ ರೂ. ತಂದಿದ್ದೇನೆ ಎಂದು ಜಂಬ ಕೊಚ್ಚಿಕೊಂಡ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಈ ಕಾರ್ಯ ಮಾಡಿದ್ದರೆ ಜೀವ ಉಳಿಯುತ್ತಿತ್ತಲ್ಲವೇ? ಕೇವಲ ಮಾತನಾಡುವುದು ಮಾತ್ರ ನಮ್ಮ ಶಾಸಕರಿಗೆ ಗೊತ್ತಿದೆ ಎಂದು ಪರಶುರಾಮಸಿಂಗ್ ರಜಪೂತ ಕಿಡಿಕಾರಿದ್ದಾರೆ.ಈ ವಿಷಯದಲ್ಲಿ ನಾನು ರಾಜಕಾರಣ ಮಾಡುತ್ತಿಲ್ಲ, ಆದರೆ ಓರ್ವ ಯುವಕ ಅಸುನೀಗಿರುವುದು ನನ್ನ ಮನಸ್ಸಿಗೆ ನೋವುಂಟು ಮಾಡಿದೆ, ಹೆತ್ತ ಮಗುವನ್ನು ಕಳೆದುಕೊಂಡ ಪಾಲಕರ ರೋಧನ ನೋಡಲಾಗುತ್ತಿಲ್ಲ, ಕೇವಲ ಹೇಳಿಕೆ ನೀಡುವಲ್ಲಿಯೇ ನಮ್ಮ ಶಾಸಕರು ಕಾಲಹರಣ ಮಾಡುವಲ್ಲಿ ತೊಡಗಿದ್ದಾರೆ,…
