Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಅಕ್ಕಮಹಾದೇವಿ ಮಹಿಳಾ ವಿವಿಯ ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಡಿಜಿಟಲೀಕರಣ ವೇಗವಾಗಿ ಹೆಚ್ಚುತ್ತಿರುವ ಇಂದಿನ ಯುಗದಲ್ಲಿ ಸೈಬರ್ ಅಪರಾಧಗಳೂ ಆತಂಕಕಾರಿ ಮಟ್ಟಕ್ಕೆ ಏರಿದ್ದು, ಅದಕ್ಕೆ ಬಲಿಯಾಗುತ್ತಿರುವವರು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೇ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಮಹಿಳೆಯರಲ್ಲಿ ಸೈಬರ್ ಸುರಕ್ಷತೆ ಕುರಿತು ಜಾಗೃತಿ ಮೂಡಿಸುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಮಹಿಳಾ ವಿವಿಯ ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ ಹೇಳಿದರು.ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಮತ್ತು ಯುಜಿ ಬ್ಲಾಕ್ ಹಾಗೂ ಪ್ರಧಾನಮಂತ್ರಿ ಉಚ್ಛತರ ಶಿಕ್ಷಣ ಅಭಿಯಾನ, ಕೇಂದ್ರ ಸರ್ಕಾರದ ಉನ್ನತ ಶಿಕ್ಷಣ ಸಚಿವಾಲಯ ಮತ್ತು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತು ಇವರ ಸಹಯೋಗದೊಂದಿಗೆ ಶುಕ್ರವಾರ ಆಯೋಜಿಸಿದ್ದ “ಡಿಜಿಟಲ್ ಸುರಕ್ಷತೆ ಮತ್ತು ಸೈಬರ್ ಜಾಗೃತಿ” ಎಂಬ ವಿಷಯದ ಕುರಿತು ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಇಂದಿನ ಯುವಜನತೆ ಡಿಜಿಟಲ್ ವೇದಿಕೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸುತ್ತಿದ್ದು, ಡಿಜಿಟಲ್ ಸುರಕ್ಷತೆಯ ನಿರ್ಲಕ್ಷ್ಯದಿಂದ…
ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯಲ್ಲಿ ಕಾರ್ಯಾಗಾರ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬಿ.ಎಲ್.ಡಿ.ಇ. ಸಂಸ್ಥೆಯ ಎಸ್. ಬಿ. ಕಲಾ ಮತ್ತು ಕೆ. ಸಿ. ಪಿ. ವಿಜ್ಞಾನ ಕಾಲೇಜಿನಲ್ಲಿ ಐಕ್ಯೂಎಸಿ ಸಹಯೋಗದಲ್ಲಿ ಡಿ.೦೪ ರಂದು ‘ಸಾಧನೆ, ಮಾನ್ಯತೆ ಮತ್ತು ಗುಣಮಟ್ಟದ ಭರವಸೆಗಾಗಿ ಸಿಒ-ಪಿಒ ಮ್ಯಾಪಿಂಗ್ನಲ್ಲಿ ಪರಿಣಾಮಕಾರಿ ಅಭ್ಯಾಸಗಳು’ ಎಂಬ ವಿಷಯದ ಒಂದು ದಿನದ ಅಧ್ಯಾಪಕರ ಕಾರ್ಯಾಗಾರ ಹಮ್ಮಿಕೊಳ್ಳಲಾಯಿತು.ಈ ವೇಳೆಯಲ್ಲಿ ಬಿಎಲ್ಡಿಇ ಸಂಸ್ಥೆಯ ಜೆಎಸ್ಎಸ್ ಶಿಕ್ಷಣ ಮಹಾವಿದ್ಯಾಲಯ ಪ್ರಾಚಾರ್ಯೆ ಡಾ. ಬಿ. ವೈ. ಖಾಸ್ನಿಸ್ ಅವರು ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಅವರು ಫಲಿತಾಂಶ ಆಧಾರಿತ ಶಿಕ್ಷಣ (ಒಬಿಇ) ಮುಖ್ಯವಾಗಿದೆ. ಇದು ವಿದ್ಯಾರ್ಥಿ ಕೇಂದ್ರಿತವಾಗಿದ್ದು ಅವರಿಗೆ ತಮ್ಮದೇ ಆದ ವೇಗದಲ್ಲಿ ಕಲಿಯಲು ಅನುವು ಮಾಡಿಕೊಡುತ್ತದೆ, ವಿಭಿನ್ನ ಶೈಲಿಗಳನ್ನು ಅಳವಡಿಸಿಕೊಳ್ಳುವುದು ಮತ್ತು ಪ್ರೇರಣೆಯನ್ನು ಹೆಚ್ಚಿಸುತ್ತದೆ. ಅಗತ್ಯಕ್ಕೆ ಸಂಬಂಧಿತ ಕೌಶಲ್ಯಗಳನ್ನು ಬೆಳೆಸುವುದಾಗಿದೆ ಎಂದು ಹೇಳಿದರು.(ಒಬಿಇ)ಯ ಮೂಲಭೂತ ಅಂಶಗಳನ್ನು ಕೇಂದ್ರೀಕರಿಸುವ, ಸ್ಮಾರ್ಟ್ ಕೋರ್ಸ್ ಫಲಿತಾಂಶಗಳನ್ನು (ಸಿಒಎಸ್) ರೂಪಿಸುವುದು ಕಾರ್ಯಕ್ರಮದ ಫಲಿತಾಂಶಗಳನ್ನು (ಪಿಒಎಸ್) ಅರ್ಥಮಾಡಿಕೊಳ್ಳುವುದು, (ಸಿಒ-ಪಿಒ)ಮ್ಯಾಪಿಂಗ್…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕೆಪಿಟಿಸಿಎಲ್ ವತಿಯಿಂದ ೨೦ ಎಂವಿಎ ೧೧೦/೩೩ ಕೆವಿ ಪರಿವರ್ತಕ ಸೇರಿದಂತೆ ವಿವಿಧ ಕಾಮಗಾರಿ ಕೈಗೆತ್ತಿಕೊಂಡಿರುವುದರಿಂದ, ೧೧೦/೧೧ಕೆವಿ ವಿಜಯಪುರ ಕೆಐಎಡಿಬಿ ವಿದ್ಯುತ್ ವಿತರಣಾ ಉಪ ಕೇಂದ್ರದಿಂದ ಹೊರಹೋಗುವ ೩೩ ಕೆವಿ ಮಾರ್ಗಗಳಾದ ಹೊನ್ನುಟಗಿ, ನಾಗಠಾಣ ಮತ್ತು ಗುಡ್ಡೋಡಗಿ ಎಚ್ ಟಿ ಹಾಗೂ ಎಲ್ಲಾ ೩೩/೧೧ ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಹೋಗುವ ಎಲ್ಲಾ ೧೧ ಕೆವಿ ಮಾರ್ಗಗಳಲ್ಲಿ ಡಿಸೆಂಬರ್ ೬ರಂದು ಬೆಳಿಗ್ಗೆ ೧೦ ರಿಂದ ಸಂಜೆ ೬ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಆದ್ದರಿಂದ, ಗ್ರಾಹಕರು ಸಹಕರಿಸುವಂತೆ ವಿಜಯಪುರ ಹೆಸ್ಕಾಂನ ಕಾರ್ಯ ನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ಕೋರಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ೨೦೨೫-೨೬ನೇ ಸಾಲಿನ ಸ್ನಾತಕೋತ್ತರ ಎಂಸಿಎ ಕೋರ್ಸ್ಗಳ ವ್ಯಾಸಂಗಕ್ಕಾಗಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಎಂಸಿಎ ವಿಭಾಗದಲ್ಲಿ ಕೆಇಎಯಿಂದ ಭರ್ತಿಯಾಗದೇ ಬಾಕಿ ಉಳಿದಿರುವ ಸೀಟುಗಳ ಪ್ರವೇಶಕ್ಕಾಗಿ ಅರ್ಜಿಗಳನ್ನು ವಿಜಯಪುರದ ಗಣಕ ವಿಜ್ಞಾನ ವಿಭಾಗ ಸ್ನಾತಕೋತ್ತರ ಕೇಂದ್ರದಿಂದ ಪಡೆದುಕೊಳ್ಳಬಹುದಾಗಿದೆ.ಅರ್ಜಿಪಡೆದುಕೊಳ್ಳಲು ಕೊನೆಯ ದಿನಾಂಕ: ೧೦-೧೨-೨೦೨೫ ಆಗಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸಂಯೋಜಕರು, ಸ್ನಾತಕೋತ್ತರ ಕೇಂದ್ರ ವಿಜಯಪುರ ಇವರನ್ನು ಹಾಗೂ ಅಶೋಕ ಮೀಶಿ ಮೊ: ೯೯೦೦೭೬೨೮೮೮ ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ೨೦೨೫-೨೬ನೇ ಸಾಲಿನಲ್ಲಿ ಕರ್ನಾಟಕ ಸಂಗೀತ, ಹಿಂದುಸ್ತಾನಿ ಸಂಗೀತ ನೃತ್ಯ, ಸುಗಮ ಸಂಗೀತ, ಕಥಾ ಕೀರ್ತನ ಮತ್ತು ಗಮಕ ಕಲಾ ಕ್ಷೇತ್ರದಲ್ಲಿ ಅಭ್ಯಾಸ ಮಾಡುತ್ತಿರುವ ೧೬ ರಿಂದ ೨೪ ವರ್ಷ ವಯೋಮಾನದ ಅಭ್ಯರ್ಥಿಗಳಿಂದ ಶಿಷ್ಯ ವೇತನ ಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.ಅರ್ಜಿ ಸಲ್ಲಿಸಲು ೨೦-೧೨-೨೦೨೫ ಕೊನೆಯ ದಿನವಾಗಿದ್ದು, ಶಿಷ್ಯವೇತನದ ಬಗ್ಗೆ ಮಾಹಿತಿ ಹಾಗೂ ಅರ್ಜಿಯನ್ನು sangeeetanrityaacademy.karnataja.gov.inನಲ್ಲಿ ಪಡೆದುಕೊಳ್ಳಬಹುದು. ಜಿಲ್ಲೆಯ ಸಹಾಯಕ ನಿರ್ದೇಶಕರ ಕಚೇರಿ ,ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದಲೂ ಪಡೆಯಬಹುದಾಗಿದೆ. ಸಂದರ್ಶನದ ಬದಲಿಗೆ ಅಭ್ಯರ್ಥಿಗಳು ಅರ್ಜಿಯಲ್ಲಿ ನೀಡಿರುವ ಪಠ್ಯಕ್ರಮವನ್ನು ವಿಡಿಯೋ ಚಿತ್ರೀಕರಿಸಿ ಪೆನ್ ಡ್ರೈವ್ ನಲ್ಲಿ ರಿಜಿಸ್ಟರ್, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಕನ್ನಡ ಭವನ, ೨ನೆಯ ಮಹಡಿ, ಜೆಸಿ ರಸ್ತೆ ಬೆಂಗಳೂರು -೫೬೦೦೦೨ ಕಾರ್ಯಾಲಯಕ್ಕೆ ಅಂಚೆ ಅಥವಾ ಖುದ್ದಾಗಿ ತಲುಪಿಸಬಹುದು ಎಂದು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡಿ.೭ರಂದು ವೃಕ್ಷಥಾನ್ ಓಟ ಹಾಗೂ ೬೪ ಪರೀಕ್ಷಾ ಕೇಂದ್ರಗಳಲ್ಲಿ ಟಿಇಟಿ ಪರೀಕ್ಷೆ | ಜಿಲ್ಲಾಧಿಕಾರಿ ಡಾ. ಆನಂದ ಕೆ ಆದೇಶ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಡಿಸೆಂಬರ್ ೭ರಂದು ನಗರದಲ್ಲಿ ವೃಕ್ಷಥಾನ್ ಓಟ ಹಾಗೂ ಅದೇ ದಿನ ೬೪ ಪರೀಕ್ಷಾ ಕೇಂದ್ರಗಳಲ್ಲಿ ಟಿ.ಇ.ಟಿ ಪರೀಕ್ಷೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ವೃಕ್ಷಥಾನ್ ಓಟಗಾರರಿಗೆ ಹಾಗೂ ಟಿಇಟಿ ಪರೀಕ್ಷೆಗೆ ಹಾಜರಾಗುವ ಪರೀಕ್ಷಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಹಾಲಿ ಜಾರಿಯಲ್ಲಿರುವ ಸಾರ್ವಜನಿಕ ರಸ್ತೆ ಸಂಚಾರಿ ಮಾರ್ಗಗಳನ್ನು ಡಿಸೆಂಬರ್ ೭ರ ಬೆಳಿಗ್ಗೆ ೪ ರಿಂದ ಮಧ್ಯಾಹ್ನ ೧೨ ಗಂಟೆಯವರೆಗೆ ಮಾರ್ಗ ಬದಲಾಯಿಸಿ ಜಿಲ್ಲಾಧಿಕಾರಿ ಡಾ.ಆನಂದ ಕೆ ಅವರು ಆದೇಶ ಹೊರಡಿಸಿದ್ದಾರೆ.ವೃಕ್ಷಥಾನ ಹೆರಿಟೇಜ್ ರನ್ ಪ್ರಯುಕ್ತ ವಾಹನಗಳ ಸುಗಮ ಸಂಚಾರಕ್ಕೆ ಪರ್ಯಾಯ ಮಾರ್ಗಗಳುಜಮಖಂಡಿಯಿಂದ ಕೇಂದ್ರ ಬಸ್ ನಿಲ್ದಾಣದಿಂದ ಬರುವ ವಾಹನಗಳು ವಲ್ಲಬಬಾಯಿ ಸರ್ಕಲ್ – ನವಭಾಗ ಕ್ರಾಸ್ – ಬಬಲೇಶ್ವರ ನಾಕಾ -ಗುಂಡಬಾವಡಿ ಕ್ರಾಸ್ – ತಾಜ್ಬಾವಡಿ- ಜೋಡ ಗುಮ್ಮಟ – ಕೇಂದ್ರ ಬಸ್ ನಿಲ್ದಾಣದವರೆಗೆ, ಕೋಲ್ಹಾರ ಕಡೆಯಿಂದ ಕೇಂದ್ರ ಬಸ್ ನಿಲ್ದಾಣದ…
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಭೈರವಾಡಗಿ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ಆಡಳಿತ ಮಂಡಳಿಗೆ ಜರುಗಿದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಗುರುಪ್ರಸಾದ ಸ್ವಾಮೀಜಿ ಹಾಗೂ ಉಪಾಧ್ಯಕ್ಷರಾಗಿ ಈರಗಂಟೆಪ್ಪ ನಡಕೂರ ಅವಿರೋಧವಾಗಿ ಆಯ್ಕೆಯಾದರು.ತಾಲ್ಲೂಕಿನ ಭೈರವಾಡಗಿ ಗ್ರಾಮದಲ್ಲಿ ಗುರುವಾರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ಆಡಳಿತ ಮಂಡಳಿಯ ನಾಲ್ಕನೆಯ ಅವಧಿಗೆ ಜರುಗಿದ ಚುನಾವಣೆಯಲ್ಲಿ ಸಂಸ್ಥಾಪಕ ಅಧ್ಯಕ್ಷ ಗುರುಪ್ರಸಾದ ಸ್ವಾಮೀಜಿ ಗುಂಪಿಗೆ ಬೆಂಬಲಿಸಿ ಮತ್ತೋಮ್ಮೆ ಸೇವೆ ಮಾಡಲು ಅವಕಾಶ ನೀಡಲಾಯಿತು.ಅವಿರೋಧವಾಗಿ ಆಯ್ಕೆಗೊಂಡ ಸ್ವಾಮೀಜಿ ಮಾತನಾಡಿ, ಅಭಿವೃದ್ಧಿಪರ ಆಡಳಿತಕ್ಕೆ ಆಶೀರ್ವದಿಸಿದ ಎಲ್ಲ ಮತದಾರರ ಅಪೇಕ್ಷೆಯಂತೆ ಸಂಘದ ಆರ್ಥಿಕ ಅಭಿವೃದ್ಧಿಯೇ ನಮ್ಮ ಗುರಿ ಎಂದು ಹೇಳಿದರು.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಬಿರಾದಾರ, ಚುನಾವಣಾಧಿಕಾರಿ ಗೀತಾ ವಾಲಿಕಾರ, ನಿರ್ದೇಶಕರಾದ ಮಹೇಶ ಮುರಾಳ, ಸುನೀಲ ಉತ್ನಾಳ, ವೆಂಕಟೇಶ ಕುಲಕರ್ಣಿ, ಪ್ರೇಮಾವತಿ ಬಿರಾದಾರ, ಸಾಹೇಬಗೌಡ ಉತ್ನಾಳ, ಮಡಿವಾಳಪ್ಪ ಅವರಾದಿ, ಅಮೀನಸಾ ಡೋಣೂರ, ಶಾಂತಾಬಾಯಿ ದೇವೂರ, ಚನ್ನಪ್ಪ ಬಮ್ಮನಳ್ಳಿ, ಚಿದಾನಂದ ನಡಗೇರಿ, ಹಣಮಂತ್ರಾಯ ಬಿರಾದಾರ, ಸಿದ್ಧರಾಯ ಪಟೇದ, ಗುಂಡು ಅಂಗಡಿ, ಸಂತೋಷ…
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಪಟ್ಟಣದ ವ್ಯಾಪ್ತಿಯಲ್ಲಿ ಸಂಜೆ ಸುರಿದ ಅಕಾಲಿಕ ಮಳೆ ರೈತರಲ್ಲಿ ಆತಂಕಕ್ಕೆ ಕಾರಣವಾಯಿತು.ಗುರುವಾರ ಸಂಜೆ ದಿಡೀರನೆ ಆರಂಭಗೊಂಡ ಮಳೆ ರಭಸವಾಗಿ ಸುರಿದು ದ್ರಾಕ್ಷಿ, ಕಡಲೆ ಹಾಗೂ ತೊಗರಿ ಬೆಳೆಗಾರರಲ್ಲಿ ಕಸಿವಿಸಿ ಉಂಟುಮಾಡಿತು. ಈ ಕುರಿತು ರೈತನಾಯಕರಾದ ಜಯರಾಮ್ ನಾಡಗೌಡ ಮಾತನಾಡಿ, ತೊಗರಿ, ಮೆಕ್ಕೆಜೋಳ ಬೆಳೆಗಳು ರಾಶಿ ಮಾಡುವ ಹಂತದಲ್ಲಿದೆ. ಈ ಮಳೆಗೆ ಕಾಳು ಸಿಡಿದುಹೋಗುವ ಸಾಧ್ಯತೆಗಳಿವೆ. ಕಡಲೆ ಬೆಳೆಯು ಸಹ ತನ್ನ ಹುಳುಚು ಕಳೆದುಕೊಂಡು ಮುಂದೆ ಕಡಿಮೆ ಹೂ ಬಿಡುವ ಹಾಗೂ ಬಿಡದೇ ಇರಬಹುದು. ಇನ್ನೂ ಗೋಧಿ ಸಹ ಇಟ್ಟಂಗಿರೋಗ ಎಂಬ ಬಾಧೆಗೆ ಒಳಗಾಗಿ ಕೆಂಪಾಗುವ ಸಾಧ್ಯತೆಗಳಿವೆ. ಅಲ್ಲದೆ ಹೂ ಬಿಡುವ ದ್ರಾಕ್ಷಿ ಬೆಳೆಗೆ ಸಾಕಷ್ಟು ಹಾನಿಯಾಗುವದು. ಸರ್ಕಾರದಿಂದ ಬೆಳೆ ಪರಿಹಾರ ಸ್ವಲ್ಪವಾದರೂ ಬಂದಾಯಿತಲ್ಲ ಎಂದು ಸಮಾಧಾನ ಪಡುತ್ತಿರುವಂತೆಯೇ ಮತ್ತೇ ಮಳೆ ಆರಂಭಗೊಂಡು ಉಳಿದ ಬೆಳೆಗಳಿಗೆ ಮಾರಕವಾಗುತ್ತದೆಯೋ ಎಂಬ ಸಣ್ಣ ಭಯ ಆರಂಭವಾಗಿದೆ ಎನ್ನುತ್ತಾರೆ.ಮಳೆಯಿಂದ ರಸ್ತೆಯಲ್ಲಿ ಹರಿಯುವ ನೀರಿನ ಪ್ರಮಾಣ ನೋಡಿದಾಗ ಇನ್ನೂ ಸ್ವಲ್ಪ ದಿನ ಯಾವುದೇ ಮಳೆ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಭಾರತೀಯ ಕಿಸಾನ ಸಂಘ ಕರ್ನಾಟಕ ಪ್ರದೇಶ, ಉತ್ತರ ಪ್ರಾಂತ ವತಿಯಿಂದ ಗೋವಿನ ಜೋಳ ಮತ್ತು ತೊಗರಿ ಖರೀದಿ ಕೇಂದ್ರಗಳನ್ನು ಪ್ರತಿ ಪಂಚಾಯತಿ ಮಟ್ಟದಲ್ಲಿ ಕೇಂದ್ರ ತೆರೆಯಲು ಜಿಲ್ಲಾಧಿಕಾರಿ ಡಾ. ಆನಂದ ಅವರಿಗೆ ಮನವಿ ಸಲ್ಲಿಸಿದರು.ಈ ವೇಳೆ ಭಾರತೀಯ ಕಿಸಾನ ಸಂಘದ ಕರ್ನಾಟಕ ಪ್ರದೇಶ ಜಿಲ್ಲಾಧ್ಯಕ್ಷ ರವೀಂದ್ರ ಮೇಡೆಗಾರ ಮಾತನಾಡಿ, ರೈತರು ಬೆಳೆದ ಗೋವಿನ ಜೋಳ ಹಾಗೂ ತೊಗರಿ ಉತ್ಪನ್ನಗಳನ್ನು ಮಿತಿ ಹಾಕದೆ ಪ್ರತಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಸಹಕಾರಿ ಸಂಘಗಳ ಮೂಲಕ ಉತ್ಪನ್ನಗಳನ್ನು ಖರೀದಿಸಲು ಸಂಬಂಧ ಪಟ್ಟವರಿಗೆ ಅತಿ ಶೀಘ್ರದಲ್ಲಿ ಖರೀದಿಸಲು ಕ್ರಮ ಕೈಕೊಳ್ಳಬೇಕು. ಅದಕ್ಕೆ ಬೇಕಾದ ಮೈಸ್ಸನ ಚೆಕ್ ಮಾಡುವದನ್ನು ಖರೀದಿ ಕೇಂದ್ರಗಳಲ್ಲಿ ಪೂರೈಸಬೇಕು. ತಡ ಮಾಡಿದರೆ ರೈತರು ಬಿದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದರು.ಈ ಸಂದರ್ಭಧಲ್ಲಿ ಮಲ್ಲನಗೌಡ ಪಾಟೀಲ, ಗುರುನಾಥ ಬಗಲಿ, ಶ್ರೀಶೈಲ ಜಾಲಗೇರಿ, ಮಹಾಂತೇಶ ಬಾಗೇವಾಡಿ, ಸಿದರಾಯ ಕುಂಬಾರ, ಬಸವರಾಜ ಸುತಗುಂಡಿ, ಪುಟ್ಟಸ್ವಾಮಿ ಸಂಗಮೇಶ ಕುಂಬಾರ, ಶ್ರೀಶೈಲ ಜವಳಗಿ, ಚನ್ನಪ್ಪ ಮಿರಗಿ, ಚಿದನಂದ…
ಲೇಖನ- ವೀಣಾ ಹೇಮಂತ್ ಗೌಡ ಪಾಟೀಲ್ಮುಂಡರಗಿಗದಗ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ನಾವು ನಡೆದಾಡುವ ಈ ನೆಲ ಕುಡಿಯುವ ನೀರು , ಸೇವಿಸುವಾಗ ಗಾಳಿ ಎಲ್ಲವೂ ಈ ಪ್ರಕೃತಿಯ ಕೊಡುಗೆ ಅದಕ್ಕೆ ನಾವು ಸದಾ ಕೃತಜ್ಞರಾಗಿರಬೇಕು ಎಂಬ ಭಾವ ನಮ್ಮಲ್ಲಿ ಸದಾ ಮಿಡಿಯುತ್ತಿರುತ್ತದೆ. ಯಾವುದೇ ವಸ್ತುವಿರಲಿ ವ್ಯಕ್ತಿ ಇರಲಿ ಅವರಿಂದ ನಮಗೆ ದೊರೆಯುವ ಸಹಾಯ ಸಲಹೆ ಸಹಕಾರಗಳು ಅನುಕೂಲಕರವಾಗಿ ಪರಿಣಮಿಸಿದಾಗ ನಾವು ಅವರಿಗೆ ಗೌರವ ಮತ್ತು ಪ್ರೀತಿಪೂರ್ವಕವಾಗಿ ಧನ್ಯವಾದಗಳು ಅರ್ಪಿಸುತ್ತೇವೆ. ಇದನ್ನೇ ಕೃತಜ್ಞತೆ ಎಂದು ಹೇಳುವುದು..ಮನುಷ್ಯನಿಗೆ ಯಾವುದೇ ವಿಷಯದಲ್ಲಿ ಸಂತಸ ತೃಪ್ತಿಗಳು ಅತ್ಯವಶ್ಯಕ. ಈ ಸಂತಸ ಮತ್ತು ತೃಪ್ತಿಗಳಿಗೆ ಪೂರಕವಾಗಿ ಕೃತಜ್ಞತೆಯು ಕಾರ್ಯನಿರ್ವಹಿಸುತ್ತದೆ. ಹೊಲದಲ್ಲಿ ಕಾಲಿಡುವ ಮುನ್ನ ರೈತ ತನ್ನ ಭೂಮಿಗೆ ನಮಸ್ಕರಿಸಿ ಬಂಗಾರದ ಬೆಳೆ ಕೊಡು ಎಂದು ಬೇಡಿಕೊಂಡು ಬೀಜವನ್ನು ಬಿತ್ತುತ್ತಾನೆ, ನೀರು ಹಾಯ್ಸುತ್ತಾನೆ ಬೆಳೆ ಬೆಳೆಯುತ್ತಾನೆ. ಒಂದೊಳ್ಳೆಯ ಫಸಲು ಬೆಳೆದು ನಿಂತಾಗ ಸಕುಟುಂಬ ಪರಿವಾರ ಸಮೇತ ಅತ್ಯಂತ ವಿಜೃಂಭಣೆಯಿಂದ ಭೂಮಿ ತಾಯಿಗೆ ಪೂಜೆ ಸಲ್ಲಿಸಿ ಆಕೆಯ ಮಡಿಲಲ್ಲಿ ನೈವೇದ್ಯವನ್ನು ಇಟ್ಟು…
