Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಮುದ್ದೇಬಿಹಾಳ: ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ಇರುವ ಸಿದ್ದೇಶ್ವರ ಹೋಟಲ್ ನಲ್ಲಿ ಬುಧವಾರ ಸಂಜೆ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ತಾಲೂಕು ಅಧ್ಯಕ್ಷರಾಗಿ ಆಯ್ಕೆಯಾದ ಕಾಮರಾಜ ಬಿರಾದಾರ ಅವರನ್ನ ಸಾಹಿತಿಗಳು, ಕನ್ನಡಾಭಿಮಾನಿಗಳು, ಪ್ರಗತಿಪರ ಚಿಂತಕರು, ಅವರ ಅಭಿಮಾನಿಗಳು ಸೇರಿ ಸನ್ಮಾನಿಸಿ ಗೌರವಿಸಿದರು.ಈ ವೇಳೆ ಎಪಿಎಂಸಿ ನಿರ್ದೇಶಕ ವಾಯ್.ಎಚ್.ವಿಜಯಕರ ಮಾತನಾಡಿ ತಾಲೂಕಿನಲ್ಲಿ ಕನ್ನಡದ ರಥ ಎಳೆಯುವ ಸಾರಥ್ಯ ಸೂಕ್ತವಾಗಿರುವ ವ್ಯಕ್ತಿಗೆ ಸಿಕ್ಕಿರುವದು ಸಂತೋಷ ತಂದಿದೆ. ಹೋರಾಟಗಾರರಾಗಿ, ಮಾಜಿ ಪುರಸಭೆ ಸದಸ್ಯರಾಗಿ, ಯುವ ಮುಖಂಡರಾಗಿ ಕಾಮರಾಜ ಅವರು ಸಾಕಷ್ಟು ಕ್ಷೇತ್ರಗಳಲ್ಲಿ ಅನುಭವ ಹೊಂದಿದ್ದಾರೆ. ಅವರ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಿಕೊಂಡು ಹೋಗುವ ವಿಶ್ವಾಸ ನಮಗಿದೆ ಎಂದರು.ಸನ್ಮಾನ ಸ್ವೀಕರಿಸಿ ಮಾತನಾಡಿದ ಕಾಮರಾಜ ಅವರು, ಈ ಹುದ್ದೆಯನ್ನು ನಾನು ನಮ್ಮ ತಂದೆಯವರ ಪಾದಕ್ಕೆ ಅರ್ಪಿಸುವೆ. ನನ್ನ ಮೇಲೆ ವಿಶ್ವಾಸವಿಟ್ಟು ನನ್ನನ್ನು ಈ ಹುದ್ದೆಗೆ ಆಯ್ಕೆ ಮಾಡಿದ ಜಿಲ್ಲಾಧ್ಯಕ್ಷ ಹಾಸೀಂಪೀರ ವಾಲೀಕಾರ ಅವರನ್ನು ಮೊದಲು ಮಾಡಿ ಎಲ್ಲ ಕನ್ನಡಾಭಿಮಾನಿಗಳಿಗೆ, ಸಾಹಿತಿಗಳಿಗೆ ನಾನು ಕೃತಜ್ಞನಾಗಿದ್ದೇನೆ. ಯಾವುದೇ ಅಧ್ಯಕ್ಷ ಹುದ್ದೆಯಿದ್ದರೂ ಅದೊಂದು ಮುಳ್ಳಿನ…
ಮುದ್ದೇಬಿಹಾಳ: ಪೆಟ್ರೋಲ್, ಡೀಸಲ್ ಬೆಲೆ ಏರಿಕೆಯನ್ನು ಹಿಂದಕ್ಕೆ ಪಡೆದುಕೊಳ್ಳುವಂತೆ ಒತ್ತಾಯಿಸಿ ಪಟ್ಟಣದಲ್ಲಿ ಭಾಜಪಾ ಮಂಡಲದ ವತಿಯಿಂದ ಪ್ರತಿಭಟನೆ ನಡೆಸಿ ತಹಶೀಲ್ದಾರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.ಪಟ್ಟಣದ ಬಸವೇಶ್ವರ ವೃತ್ತದಿಂದ ಶುರುವಾದ ಪ್ರತಿಭಟನಾ ಮೆರವಣಿಗೆ, ಕಿತ್ತೂರು ರಾಣಿ ಚನ್ನಮ್ಮ ವೃತ್ತ ಮಾರ್ಗವಾಗಿ ತಹಶೀಲ್ದಾರ ಕಚೇರಿಯ ವರೆಗೆ ಸಾಗಿತು. ಅಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಜಗದಿಶ ಪಂಪಣ್ಣವರ, ಸಂಗಮ್ಮ ದೇವರಳ್ಳಿ, ಸಿದ್ದರಾಜ ಹೊಳಿ ಮತ್ತೀತರರು ಮಾತನಾಡಿ ಕಾಂಗ್ರೇಸ್ ಸರ್ಕಾರಕ್ಕೆ ಕುಟುಕಿದರು. ನೇಹಾ ಹತ್ಯೆ ಕೊಲೆ ಪ್ರಕರಣ ಪ್ರಕರಣ ಸೇರಿದಂತೆ ಬೆಲೆ ಏರಿಕೆ, ಗ್ಯಾರಂಟಿಗಳ ವಿರುದ್ಧ ಹರಿಹಾಯ್ದರು.ಪುರಸಭೆ ಸದಸ್ಯೆ ಸಹನಾ ಬಡಿಗೇರ ಮನವಿ ಪತ್ರ ಓದಿದರು.ಈ ವೇಳೆ ಮುತ್ತಣ್ಣ ಹುಗ್ಗಿ, ಸಂಜು ಬಾಗೇವಾಡಿ, ಹಣಮಂತ ನಲವಡೆ, ರಾಜು ಬಳ್ಳೊಳ್ಳಿ, ಶೇಖರ ಢವಳಗಿ, ಗುರು ರಾಯಗೊಂಡ, ಪರಶುರಾಮ ನಾಲತವಾಡ, ಮುತ್ತಣ್ಣ ಹುಗ್ಗಿ, ಪ್ರೀತಿ ಕಂಬಾರ, ಸುಭಾಷ ಕಟ್ಟಿಮನಿ, ಶಂಕರ ಡಮನಾಳ ಸೇರಿದಂತೆ ಮತ್ತೀತರರು ಇದ್ದರು.
ಆಲಮೇಲ: ಗುರುಗಳು ಉಪದೇಶಿಸಿದ ವಾಣಿಯನ್ನು ನಾವೆಲ್ಲ ಶ್ರದ್ಧೆಯಿಂದ ಕಾರ್ಯರೂಪಕ್ಕೆ ತಂದರೆ ನರ ಹೋಗಿ ನಾರಾಯಣನಾಗುವನು ಮಾನವನು ಮಾಧವನಾಗುವನು ಎಂದು ದತ್ತಾತ್ರೇಯ ಹಾಸಿಲಕರ ಹೇಳಿದರು.ಬುಧವಾರ ತಾಲೂಕಿನ ಗುಂದಗಿ ಗ್ರಾಮದಲ್ಲಿ ಹಿರಿಯ ಪತ್ರಕರ್ತ ಟಿ ಕೆ ಮಲಗೊಂಡ ಅವರ ತೋಟದಲ್ಲಿ ಹಮ್ಮಿಕೊಂಡಿದ್ದ ದಿ.ಅಯ್ಯವ್ವ ಕಲ್ಲಪ್ಪ ಮಲಗೊಂಡ ಪುಣ್ಯತಿಥಿ ಸಪ್ತಾಹದಲ್ಲಿ ಮಾತನಾಡಿದರು.ದಿ. ಕಲ್ಲಪ್ಫ ಮಲಗೊಂಡ ಹಾಗೂ ದಿ.ಅಯ್ಯವ್ವ ಕಲ್ಲಪ್ಪ ಮಲಗೊಂಡ ಇವರು ಐದು ದಶಕಗಳಿಂದ ಇಂಚಗೇರಿ ಸಂಪ್ರದಾಯದ ಪರಮ ಭಕ್ತರು. ಅವರು ನಡೆದ ಹಾದಿಯಲ್ಲಿ ಇಂದು ಟಿ ಕೆ ಮಲಗೊಂಡ ಅವರು ನಡೆಯುತ್ತಿದ್ದಾರೆ. ದಿ.ವಿಜಯಕುಮಾರ ಟಿ ಮಲಗೊಂಡ ನಮ್ಮಿಂದ ದೂರವಿದ್ದರು ಅವರು ಸದಾ ಅಮರವಾಗಿದ್ದಾರೆ. ಮರಣ ಹೊಂದಿದವರ ಸಪ್ತಾಹ ಸಹಜವಾಗಿ ಯಾರು ಮಾಡಲ್ಲ ಆದರೆ ದಿ.ಕಲ್ಲಪ್ಫ ಮಲಗೊಂಡ ಹಾಗೂ ದಿ.ಅಯ್ಯವ್ವ ಕಲ್ಲಪ್ಪ ಮಲಗೊಂಡ ಇವರ ಪುಣ್ಯತಿಥಿ ಸಪ್ತಾಹ ಆಗಿದೆ ಎಂದರೆ ಅವರು ಪೂರ್ವಜನ್ಮದಲ್ಲಿ ಪುಣ್ಯ ಮಾಡಿದ್ದರು. ಶ್ರೀ ಸ.ಸ ಮಾಧವಾನಂದರ ಆಶೀರ್ವಾದ ಸದಾ ಮಲಗೊಂಡ ಮನೆತನದ ಮೇಲೆ ಇರುತ್ತದೆ ಎಂದು ಹೇಳಿ ಅಯ್ಯವ ಮಲಗೊಂಡ ಅವರ…
ತಿಕೋಟಾ: ತಾಲೂಕು ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಒಟ್ಟು ೦೭ ಅಮೃತ ಸರೋವರಗಳನ್ನು ನಿರ್ಮಾಣ ಮಾಡಲಾಗಿದ್ದು, ಎಲ್ಲ ಅಮೃತ ಸರೋವರಗಳ ದಡದಲ್ಲಿ ಸರಕಾರದ ನಿರ್ದೇಶನದಂತೆ ಜೂ.೨೧ ರಂದು ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಣೆ ಮಾಡಲಾಗುತ್ತಿದೆ ಎಂದು ಕಾರ್ಯನಿರ್ವಾಹಕ ಅಧಿಕಾರಿಗಳಾದ ಬಸವರಾಜ ಐನಾಪುರ ತಿಳಿಸಿರುತ್ತಾರೆ.ಯೋಗ ದಿನವು ಎಲ್ಲರ ಆರೋಗ್ಯ, ಯೋಗಕ್ಷೇಮ ಮತ್ತು ಪ್ರಕೃತ್ತಿಯೊಂದಿಗಿನ ಸ್ವಾಮರಸ್ಯವನ್ನು ಉತ್ತೇಜಿಸಲು ಉತ್ತಮ ಅವಕಾಶವಾಗಿದೆ. ಆ ನಿಟ್ಟಿನಲ್ಲಿ ಎಲ್ಲ ಅಮೃತ ಸರೋವರದಲ್ಲಿ ಯೋಗ ದಿನಾಚರಣೆ ಆಚರಿಸಲಾಗುತ್ತಿದೆ. ಈ ದಿನದಂದು ಗ್ರಾಮದ ಎಲ್ಲಾ ಸ್ಥಳೀಯ ಸಮುದಾಯಗಳು, ಸರ್ಕಾರಿ ಅಧಿಕಾರಿಗಳು ಮತ್ತು ಪಾಲುದಾರರು ಒಳಗೊಂಡಂತೆ ಎಲ್ಲರೂ ಈ ಆಚರಣೆಯಲ್ಲಿ ತೊಡಗಿಸಿಕೊಂಡು ಆಸನಗಳು (ಭಂಗಿಗಳು), ಪ್ರಾಣಾಯಾಮ (ಉಸಿರಾಟದ ವ್ಯಾಯಾಮಗಳು) ಧ್ಯಾನಗಳು ಮತ್ತು ಯೋಗದ ಪ್ರಯೋಜನಗಳು ಹಾಗೂ ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳುವ ಮಹತ್ವದ ಕುರಿತು ಮಾತುಕತೆಗಳನ್ನು ಅಮೃತ ಸರೋವರ ಸ್ಥಳಗಳಲ್ಲಿ ಆಯೋಜಿಸಲು ಸರಕಾರದಂತೆ ಆದೇಶದಂತೆ ವ್ಯವಸ್ಥೆ ಮಾಡಿಕೊಳ್ಳಲು ಸಂಬಂಧಿಸಿದ ಎಲ್ಲ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಹೀಗಾಗಿ, ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು…
ಅಬಕಾರಿ ಇಲಾಖೆ ಅಧಿಕಾರಿ ಪೋಳ ಅಮಾನತಿಗೆ ಕೆಆರೆಸ್ ಆಗ್ರಹ ವಿಜಯಪುರ: ಎಂ.ಎಸ್.ಆಯ್.ಎಲ್. ಅಬಕಾರಿ ಇಲಾಖೆಯ ಪೋಳ ಇವರನ್ನು ಅಮಾನತ್ತುಗೊಳಿಸುವಂತೆ ಆಗ್ರಹಿಸಿ ಗುರುವಾರ ವಿಜಯಪುರ ಜಿಲ್ಲಾಧಿಕಾರಿಗಳಿಗೆ ಕರ್ನಾಟಕ ರಾಷ್ಟ್ರ ಸಮಿತಿ(ಕೆ.ಆರ್.ಎಸ್.) ಪಕ್ಷದ ವತಿಯಿಂದ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ವಿಜಯಪುರ ಜಿಲ್ಲೆಯ ಅಬಕಾರಿ ಇಲಾಖೆಯ ಎಂ.ಎಸ್.ಆಯ್.ಎಲ್. ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಪೋಳ ಎಂಬ ಅಧಿಕಾರಿಯು ಎಂ.ಎಸ್.ಆಯ್.ಎಲ್. ಸೆಲ್ ಶಾಪಗಳಲ್ಲಿ ಗುತ್ತಿಗೆ ಮೇಲೆ ಕೆಲಸಗಾರರನ್ನು ನೇಮಕ ಮಾಡಿಕೊಳ್ಳಲು ಪ್ರತಿ ಒಬ್ಬ ನೌಕರರಿಂದ ೧.೪ಲಕ್ಷ ರೂಪಾಯಿ ಲಂಚದ ರೂಪದಲ್ಲಿ (ಸುಮಾರು ೧.೫ಕೋಟಿ )ಹಣವನ್ನು ಪಡೆದು ಕೆಲಸವನ್ನು ಕೊಟ್ಟಿರುತ್ತಾರೆ. ನಂತರ ಪ್ರತಿ ವರ್ಷ ೬೦%ರಷ್ಟು ನೌಕರರಿಗೆ ವರ್ಗಾವಣೆ ಮಾನಸಿಕ ವೇತನ ಕೊಡದೆ ಕಿರುಕುಳ ನೀಡಿ ಕೆಲಸ ಬಿಡುವಂತೆ ಮಾಡಿ ಆ ಸ್ಥಳಕ್ಕೆ ಬೇರೆ ಹೊಸ ವ್ಯಕ್ತಿಗಳನ್ನು ಹಣ ಪಡೆದು ನೇಮಕ ಮಾಡಿಕೊಳ್ಳುತ್ತಾರೆ. ಹೀಗೆ ಪ್ರತಿ ವರ್ಷವು ೩೦ರಿಂದ ೪೦ಜನರನ್ನು ಕೆಲಸದಿಂದ ತೆಗೆಯೋದು ಮತ್ತೆ ಲಂಚ ಪಡೆದು ಕೆಲಸ ಕೊಡುವುದು ಮಾಡುತ್ತಾರೆ. ಇದು ಒಂದು ತಂಡರೂಪದಲ್ಲಿ ಕೆಲಸ ಮಾಡುತ್ತದೆ ಆದ್ದರಿಂದ್ದಾಗಿ…
ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಖಂಡಿಸಿ ಬಿಜೆಪಿ-ಜೆಡಿಎಸ್ ಪ್ರತಿಭಟನೆ ಇಂಡಿ: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಕ್ರಮ ಖಂಡಿಸಿ ಮೈತ್ರಿ ಪಕ್ಷದ ಕಾರ್ಯಕರ್ತರು ನಗರದ ಹೃದಯ ಭಾಗದ ಬಸವೇಶ್ವರ ವೃತ್ತದಲ್ಲಿ ಸುಮಾರು 10 ನಿಮಿಷಗಳ ಕಾಲ ಮಾನವ ಸರಪಳಿ ನಿರ್ಮಿಸಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.ಗುರುವಾರ ಪಟ್ಟಣದ ಡಾ.ಆರ್ ಅಂಬೇಡ್ಕರ್ ವೃತ್ ದಿಂದ ಬಸವೇಶ್ವರ ವೃತ್ತದ ವರಗೆ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ನಾನಾ ಘೋಷಣೆಗಳ ದಿಕ್ಕಾರ ಕೂಗಿ ನೂರಾರು ಕಾರ್ಯಕರ್ತರು ಜಮಾಯಿಸಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ವಿಧಾನಸಭಾ ಪರಾಜಿತ ಬಿಜೆಪಿ ಅಭ್ಯರ್ಥಿ ಕಾಸುಗೌಡ ಬಿರಾದಾರ ಹಾಗೂ ಜೆಡಿಎಸ್ ಪರಾಜಿತ ಅಭ್ಯರ್ಥಿ ಬಿ.ಡಿ ಪಾಟೀಲ ಅವರು ಮಾತನಾಡಿ, ಕಾಂಗ್ರೆಸ್ ದುರಾಡಳಿತ ನೀತಿ, ವಾಲ್ಮೀಕಿ ನಿಗಮದ ಹಗರಣ. ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ, ರೈತರ ಬಿತ್ತನೆ ಬೀಜಕ್ಕೆ ಬೆಲೆ ಏರಿಕೆ, ರಾಜ್ಯದಲ್ಲಿ ಸಂಪೂರ್ಣ ಭದ್ರತಾ ವೈಫಲ್ಯ, ಹದಗೆಟ್ಟ ರಸ್ತೆಗಳ ವ್ಯವಸ್ಥೆ ಹೀಗೆ ಸಂಪೂರ್ಣ…
ಕೊಲ್ಹಾರ: ರಾಜ್ಯ ಸರಕಾರ ಜನರ ಮೇಲೆ ಬೆಲೆ ಏರಿಕೆ ಮೂಲಕ ಹೊರೆ ಮಾಡುತ್ತಿರುವುದನ್ನು ಖಂಡಿಸಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಮತ್ತು ವಿವಿಧ ಸಂಘಟಣೆಗಳ ಮುಖಂಡರು ಕೊಲ್ಹಾರ ಪಟ್ಟಣದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು.ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ದೇವರಮನಿ ಮಾತನಾಡಿ, ಬ್ರಷ್ಟ ವ್ಯವಸ್ಥೆಯ ಆರ್ಥಿಕವಾಗಿ ರಾಜ್ಯವನ್ನು ಅಧೋಗತಿಗೆ ತರುತ್ತಿರುವ ಸರಕಾರಿ ನೌಕರರಿಗೆ ಅಭಿವೃದ್ದಿ ಕಾಮಗಾರಿಗಳಿಗೆ ಹಣಕಾಸು ವ್ಯವಸ್ಥೆಯನ್ನು ಕ್ರೂಢಿಕರಣಮಾಡಿ ಆಡಳಿತ ಯಂತ್ರ ಚುರುಕುಗೊಳಿಸಿ ಜನರಿಗೆ ಸಾರ್ವಜನಿಕರಿಗೆ ನಿತ್ಯ ನರಕ ಯಾತನೆಯ ಅನುಭವ ತೋರಿಸುತ್ತಿರುವ ಕಾಂಗ್ರೆಸ್ ಸರಕಾರದ ದುರಾಡಳಿತ ವ್ಯವಸ್ಥೆಯನ್ನು ನಾವು ಖಂಡಿಸುತ್ತೇವೆ ಎಂದು ಹೇಳಿದರು.ಜಿಲ್ಲಾ ಮುಖಂಡರಾದ ಟಿ.ಟಿ.ಹಗೇದಾಳ ಅವರು ಮಾತನಾಡಿ, ರಾಜ್ಯದಲ್ಲಿ ಅಧಿಕಾರಕ್ಕೆ ಬರಬೇಕು ಎನ್ನುವ ಸ್ವಾರ್ಥ ಮನೋಭಾವದಿಂದ ಜನರಿಗೆ ದಾರಿ ತಪ್ಪಿಸಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಪಕ್ಷದ ಆಡಳಿತ ವ್ಯವಸ್ಥೆಯ ಎಲ್ಲ ಆಯಾಮಗಳ ವಿರುದ್ದ ಮುಂದಿನ ದಿನಮಾನಗಳಲ್ಲಿ ಭಾರತೀಯ ಜನತಾ ಪಕ್ಷವು ಉಗ್ರವಾದ ಪ್ರತಿಭಟಣೆ ಹಮ್ಮಿಕೊಳ್ಳಲಾಗುವದು. ಕಳೆದ ಒಂದು ಅವಧಿಯ ಇವರ ಅಧಿಕಾರದಲ್ಲಿ ರೈತರಿಗೆ ಜನರಿಗೆ ಯಾವುದೇ ತೆರನಾದ ಉಪಯೋಗವಾಗುತ್ತಿಲ್ಲ ಆದ್ದರಿಂದ…
ಶಿಕ್ಷಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ನೌಕರ ಸಂಘದಿಂದ ಮನವಿ ವಿಜಯಪುರ: ಅಕ್ಷರ ದಾಸೋಹ ಯೋಜನೆಯಡಿಯಲ್ಲಿ ಶಾಲೆಯಲ್ಲಿ ಮಕ್ಕಳಿಗೆ ನೀಡುವ ಮೊಟ್ಟೆ, ಬಾಳೆ ಹಣ್ಣು, ಶೇಂಗಾ ಚಿಕ್ಕಿ ಹಾಗೂ ತರಕಾರಿ ದರಗಳು ಗಗನಕ್ಕೆ ಏರಿದ್ದು ಸರ್ಕಾರ ನೀಡುವ ಸಾದಿಲ್ವಾರು ಹಣ ಸಾಕಾಗುತ್ತಿಲ್ಲ. ಶಿಕ್ಷಕರಿಗೆ ಕಾರ್ಯ ನಿರ್ವಹಿಸುವದು ಕಷ್ಟ ಆಗುತ್ತಿದ್ದು, ದರವನ್ನು ಏರಿಸಿ ಹಣ ನಿಗದಿಗೊಳಿಸಬೇಕೆಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸುರೇಶ ಶಡಶ್ಯಾಳ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರಿಗೆ ಗುರುವಾರ ಮನವಿ ಸಲ್ಲಿಸಿತು.ನಂತರ ಮಾತನಾಡಿದ ಜಿಲ್ಲಾಧ್ಯಕ್ಷ 2023ನೇ ಸಾಲಿನಲ್ಲಿ ಬೇಸಿಗೆ ರಜೆಯಲ್ಲಿ ಬಿಲ್ಒ ಆಗಿ ಕಾರ್ಯ ನಿರ್ವಹಿಸಿದ ಶಿಕ್ಷಕರಿಗೆ ಗಳಿಕೆ ರಜೆ ಮಂಜೂರು ಮಾಡಬೇಕು. ದೈಹಿಕ ನ್ಯೂನತೆ ಹಾಗೂ ಐವತ್ತು ವರ್ಷ ಮೇಲ್ಪಟ್ಟ ಎಲ್ಲ ಶಿಕ್ಷಕರಿಗೆ ಬಿಎಲ್ಓ ಕಾರ್ಯದಿಂದ ವಿನಾಯಿತಿ ನೀಡಬೇಕು. ಹಲವು ಸರ್ಕಾರಿ ಶಾಲೆಗಳಲ್ಲಿ ಸರಿಯಾದ ಶೌಚಾಲಯ, ಮೂತ್ರಾಲಯ ವ್ಯವಸ್ಥೆ ಇರುವದಿಲ್ಲ, ಅನುದಾನ ಮಂಜೂರಾತಿಗಾಗಿ ಸರಕಾರಕ್ಕೆ ಶಿಫಾರಸ್ಸು ಮಾಡಬೇಕು ಎಂದರು.ವಿಜಯಪುರ ನಗರ ವಲಯದಲ್ಲಿ ಬೇಸಿಗೆ ಅವಧಿಯಲ್ಲಿ ವಿಶೇಷ ಮತದಾರರ…
ಕೊಲ್ಹಾರ: ಸರ್ವ ಸಮಾಜ ಸರ್ವ ಜನರ ಸಮುದಾಯದ ನಾಗರಿಕರ ಪ್ರೀತಿ ವಿಶ್ವಾಸ ನನ್ನ ಮೇಲಿನ ನಂಬಿಕೆಯ ದೃಡ ಸಂಕಲ್ಪ ನನ್ನನ್ನು ರಾಜ್ಯದ ಮತ್ತು ದೇಶದ ಆಡಳಿತ ವ್ಯವಸ್ಥೆಯಲ್ಲಿ ಪಾಲ್ಗೊಳ್ಳುವಂತೆ ಮಾಡಲು ಮತದಾರರ ಒಲುಮೆ ಒಂದೇ ಕಾರಣವಾಗಿದ್ದು ನನ್ನ ಜೀವಿತಾವಧಿಯ ಕೊನೆಯವರೆಗೂ ಚ್ಯುತಿ ಬರದಂತೆ ಸಾರ್ವಜನಿಕರ ಸೇವೆಯನ್ನು ಮಾಡುತ್ತೇನೆ ಎಂದು ನೂತನ ಸಂಸದ ರಮೇಶ ಜಿಗಜಿಣಗಿ ಹೇಳಿದರು.ವಿಜಯಪೂರ ಜಿಲ್ಲಾ ಆದಿಬಣಜಿಗ ಸಮಾಜದ ಜಿಲ್ಲಾ ಘಟಕದವರು ಏರ್ಪಡಿಸಿದ್ದ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಸನ್ಮಾನವನ್ನು ಸ್ವೀಕರಿಸಿ ಸಮಾಜದ ಮುಖಂಡರೊಂದಿಗೆ ಮಾತನಾಡಿದ ಅವರು ಆದಿ ಬಣಜಿಗ ಸಮಾಜದ ಹಿರಿಯರು ತಮ್ಮ ಸಮಾಜದ ಯಾವುದೇ ಕೆಲಸ ಕಾರ್ಯಗಳನ್ನು ಸಮಾಜಬಾಂಧವರ ಹಿತಕ್ಕಾಗಿ ಸರಕಾರದಿಂದ ಸಿಗಬೇಕಾದ ಸೌಲಭ್ಯಗಳನ್ನು ಪಡೆದುಕೊಳ್ಳಲು ನನ್ನ ಬಳಿ ಬಂದಾಗ ಸರ್ವರೀತಿಯಲ್ಲೂ ಸಹಕಾರವನ್ನು ನೀಡುತ್ತೇನೆ ಎಂದರು.ಈ ಸಂದರ್ರ್ಬದಲ್ಲಿ ಭಾರತೀಯ ಜನತಾಪಕ್ಷದ ರಾಜ್ಯ ನಾಯಕರಾದ ಚಂದ್ರಶೇಖರ ಕವಟಗಿ, ಸುರೇಶ ಪರಗೊಂಡ, ಬಸಲಿಂಗಪ್ಪ ಕಪಾಳಿ, ಸೋಮನಿಂಗ ಕಟಾವಿ, ಆಶೋಕ ಮುಚ್ಚಂಡಿ ಸಂಘದ ಅನೇಕ ಪದಾದಿಕಾರಿಗಳು ಹಾಗೂ ವಿಜಯಪೂರ ಜಿಲ್ಲೆಯ ಸಮಾಜಬಾಂಧವರು ಸನ್ಮಾನ…
ವಿಜಯಪುರ: ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಶ್ರೀ ಲಕ್ಕಮ್ಮದೇವಿ ಕಲಾ ಪೋಷಕ ಸಂಘ, ಬ್ಯಾಕೂಡ ಇವರು ಕೊಡುವ ” ಕೌಜಲಗಿ ನಿಂಗಮ್ಮ ಪ್ರಶಸ್ತಿ” ಯನ್ನು ಕನ್ನಡ ಜಾನಪದ ಪರಿಷತ್ ವಿಜಯಪುರ ಜಿಲ್ಲಾಧ್ಯಕ್ಷ ಸಾಹಿತಿ ಬಾಳನಗೌಡ ಪಾಟೀಲ ( ಪಡಗಾನೂರ) ಇವರ ಜಾನಪದ ಕ್ಷೇತ್ರದ ಸಂಘಟನೆಯನ್ನು ಪರಿಗಣಿಸಿ 2023 – 24 ನೇ ಸಾಲಿನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ದಿನಾಂಕ 23. ಜೂನ್ 2024 ರಂದು ಬದಾಮಿಯ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಘದ ಅಧ್ಯಕ್ಷ ಸಿದ್ರಾಮ ನಿಜಲಗಿ ತಿಳಿಸಿದ್ದಾರೆ.
