ಅಕ್ಕಮಹಾದೇವಿ ಮಹಿಳಾ ವಿವಿ ಕುಲಸಚಿವ ಶಂಕರಗೌಡ ಸೋಮನಾಳ ಸಲಹೆ
ವಿಜಯಪುರ: ನಗರದ ಸರಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನಲ್ಲಿ ೨೦೨೩-೨೪ನೇ ಸಾಲಿನ ಸಾಂಸ್ಕೃತಿಕ, ಕ್ರೀಡೆ, ಎನ್.ಎಸ್.ಎಸ್., ಸ್ಕೌಟ್ಸ್ ಮತ್ತು ಗೈಡ್ಸ್, ಇ.ಎಲ್.ಸಿ ಹಾಗೂ ರೆಡ್ಕ್ರಾಸ್ ಚಟುವಟಿಕೆಗಳ ಸಮಾರೋಪ ಹಾಗೂ ಪದವಿ ಅಂತಿಮ ವರ್ಷದ ವಿದ್ಯಾರ್ಥಿನಿಯರ ಬೀಳ್ಕೊಡುವ ಸಮಾರಂಭ ಆ.೨೧ರಂದು ಜರುಗಿತು.
ಸದರಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಕುಲಸಚಿವ ಶಂಕರಗೌಡ ಎಸ್. ಸೋಮನಾಳ ಮಾತನಾಡಿ, ವಿದ್ಯಾರ್ಥಿಗಳು ಬರಿ ಪದವಿ ಪಡೆಯುವುದು ಮುಖ್ಯವಲ್ಲ. ಅದರ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಕಲೆಯನ್ನು ರೂಪಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಪ್ರತಿನಿತ್ಯ ಒಂದಾದರೂ ದಿನ ಪತ್ರಿಕೆಯನ್ನು ಓದಬೇಕು ಎಂದು ತಿಳಿಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪ್ರಾಂಶುಪಾಲ ಡಾ. ಆರ್.ಎಸ್. ಕಲ್ಲೂರಮಠ ಮಾತನಾಡಿ, ವಿದ್ಯಾರ್ಥಿನಿಯರು ನಿಯಮಿತವಾಗಿ ಕಾಲೇಜಿಗೆ ಬರಬೇಕು. ಕಾಲೇಜಿನಲ್ಲಿರುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ಅತಿಥಿಗಳಾಗಿ ಭಾಗವಹಿಸಿದ ವಿಶ್ರಾಂತ ಪ್ರಾಧ್ಯಾಪಕ ಎಸ್.ಪಿ. ಬೀಡಗೊಂಡ ಮಾತನಾಡುತ್ತ ವಿದ್ಯಾರ್ಥಿನಿಯರು ಚೆನ್ನಾಗಿ ಅಧ್ಯಯನಗೈದು ಕಾಲೇಜು ಹಾಗೂ ತಮ್ಮ ಮನೆಗೆ ಕೀರ್ತಿ ತರುವಂತಹ ಕಾರ್ಯಮಾಡಬೇಕೆಂದು ಹೇಳಿದರು. ಕಲಾ ವಿಭಾಗದಿಂದ ಮಾಲಾ ನಡುವಿನಕೇರಿ, ವಿಜ್ಞಾನ ವಿಭಾಗದಿಂದ ಶಾಂಭವಿ ಹಾಗೂ ವಾಣಿಜ್ಯ ವಿಭಾಗದಿಂದ ಆಲಿಯಾ ಮುಲ್ಲಾ ವಿದ್ಯಾರ್ಥಿನಿಯರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಪ್ರಾರಂಭದಲ್ಲಿ ಕುಮಾರಿ ಮಹೇಶ್ವರಿ ಪ್ರಾರ್ಥನೆ ಸಲ್ಲಿಸಿದರು. ಡಾ. ಚಿದಾನಂದ ಎಸ್. ಆನೂರ ಅವರು ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ಪ್ರೊ. ಪಿ.ಬಿ. ಬಿರಾದಾರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶ್ರೀಮತಿ ಲಕ್ಷ್ಮೀ ಮೋರೆ ವಾರ್ಷಿಕ ವರದಿ ವಾಚಿಸಿದರು. ಡಾ. ರಾಜಶೇಖರ ಬೆನಕನಹಳ್ಳಿ ಅವರು ಬಹುಮಾನ ವಿತರಣೆ ಕಾರ್ಯಕ್ರಮ ನಡೆಸಿಕೊಟ್ಟರು.
ವೇದಿಕೆಯಲ್ಲಿ ಪ್ರೊ. ರಮೇಶ ಬಳ್ಳೊಳ್ಳಿ, ಪ್ರೊ. ಮಾರುತಿ ಜೋಶಿ ಉಪಸ್ಥಿತರಿದ್ದರು. ಡಾ. ಆನಂದ ಕುಲಕರ್ಣಿ ವಂದಿಸಿದರು. ಡಾ. ಭಾರತಿ ಹೊಸಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಡಾ. ನೀಲಕಂಠ ಹಳ್ಳಿ, ಡಾ. ದಾವಲಸಾ ಪಿಂಜಾರ, ಡಾ. ಎಂ.ಆರ್. ಕೆಂಭಾವಿ, ಡಾ. ರಾಮಣ್ಣ ಕಳ್ಳಿ, ಡಾ. ರಮೇಶ ಕುಮಟಗಿ, ಪ್ರೊ. ನಾತುರಾಮ ಜಾಧವ, ಪ್ರೊ. ತೌಸಿಫ ಗೊಡೆಸವಾರ, ಪ್ರೊ. ಮಂಜುನಾಥ ಗಾಣಿಗೇರ, ಪ್ರೊ. ಆಸೀಫ ರೋಜಿನದಾರ, ಪ್ರೊ. ಶೋಭಾ ರುದ್ರಗೌಡರ, ಪ್ರೊ. ರಶ್ಮಿ ಹೊನಕೇರಿ, ಡಾ. ಬೋರಮ್ಮ ಗಂಜ್ಯಾಳ, ಡಾ. ಸವಿತಾ ಚವ್ಹಾಣ, ಡಾ. ಎಸ್. ಎಂ. ಕಿತ್ತೂರ, ಡಾ. ರಾಜೇಶ್ವರಿ ಪುರಾಣಿಕ, ಪ್ರೊ. ಸದಾಶಿವ ಚಲವಾದಿ, ಡಾ. ರಾಘವೇಂದ್ರ ಗುರ್ಜಾಲ, ಡಾ. ಫೈರೋಜ ಪಠಾಣ, ಪ್ರೊ. ಅಸಾದುಲ್ಲಾ, ಶಿವಾನಂದ ಸಾಂಗೊಲಿ, ವೀರನಗೌಡ ಪಾಟೀಲ, ನವೀನಗೌಡ ಬಿರಾದಾರ, ಸುಜಾತಾ ಬಿರಾದಾರ, ಎಚ್.ಎಂ. ಉಕ್ಕಲಿ, ಡಾ. ಸವಿತಾ ಪಾಟೀಲ, ಪ್ರೊ. ನಿಲೋಫರ ಕಲಾದಗಿ, ಪ್ರೊ. ರಶ್ಮಿ ರೊಟ್ಟಿ, ಪ್ರೊ. ಶೃತಿ ಕದಮ ಹಾಗೂ ಕಾಲೇಜಿನ ಇತರ ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಂತರ ಮನೋರಂಜನೆ ಕಾರ್ಯಕ್ರಮ ಜರುಗಿತು.

