Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಬಸವನಬಾಗೇವಾಡಿ: ವಿದ್ಯಾರ್ಥಿಗಳಲ್ಲಿ ಕ್ರೀಡಾಮನೋಭಾವ ಬೆಳೆಸುವಲ್ಲಿ ದೈಹಿಕ ಶಿಕ್ಷಕರ ಪಾತ್ರ ಬಹಳಷ್ಟು ಮಹತ್ವವಿದೆ. ವಿದ್ಯಾರ್ಥಿಗಳು ಸೋಲು-ಗೆಲುವು ಸಮಾನವಾಗಿ ಸ್ವೀಕರಿಸುವ ಮೂಲಕ ಕ್ರೀಡಾಕೂಟಗಳಲ್ಲಿ ಭಾಗವಹಿಸಬೇಕೆಂದು ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ ಹೇಳಿದರು.ತಾಲೂಕಿನ ಇವಣಗಿ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮತ್ತು ಕ್ಷೇತ್ರಸಮನ್ವಾಧಿಕಾರಿಗಳ ಕಾರ್ಯಾಲಯ, ನರಲಸಗಿ ಸಮೂಹ ಸಂಪನ್ಮೂಲ ಕೇಂದ್ರ ಹಾಗೂ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ನರಸಲಗಿ ಗ್ರಾಮ ಪಂಚಾಯಿತಿ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಶಿಕ್ಷಣದಷ್ಟೇ ಕ್ರೀಡೆಗೂ ಮಹತ್ವ ನೀಡಬೇಕು. ಎಲ್ಲ ಮಕ್ಕಳು ತಮ್ಮ ಪಠ್ಯ ಚಟುವಟಿಕೆಗಳೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಭಾಗವಹಿಸುವ ಮೂಲಕ ತಮ್ಮಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸಬೇಕೆಂದರು.ಧ್ವಜಾರೋಹಣ ನೆರವೇರಿಸಿದ ಕ್ಷೇತ್ರಶಿಕ್ಷಣಾಧಿಕಾರಿ ವಸಂತ ರಾಠೋಡ ಮಾತನಾಡಿ, ಕ್ರೀಡೆಗಳು ಮಕ್ಕಳಲ್ಲಿ ಕಲಿಯುವ ಚೈತನ್ಯ ಮೂಡಿಸುತ್ತವೆ. ಮಕ್ಕಳು ಕ್ರೀಯಾಶೀಲತೆಯಿಂದ ಆಟೋಟಗಳಲ್ಲಿ ಭಾಗವಹಿಸುವಂತಾಗಬೇಕು. ನಿರ್ಣಾಯಕರು ನಿರ್ಣಯವನ್ನು ಪ್ರಾಮಾಣಿಕವಾಗಿ ನೀಡುವ ಮೂಲಕ ಉತ್ತಮ ಕ್ರೀಡಾಪಟುವನ್ನು ಆಯ್ಕೆ ಮಾಡಬೇಕೆಂದರು.ನರಸಲಗಿ ಗ್ರಾಮ…
“ಜಯ್ ನುಡಿ” (ವ್ಯಕ್ತಿತ್ವ ವಿಕಸನ ಲೇಖನ ಮಾಲಿಕೆ)-ಜಯಶ್ರೀ.ಜೆ. ಅಬ್ಬಿಗೇರಿ,ಇಂಗ್ಲೀಷ್ ಉಪನ್ಯಾಸಕರು, ಬೆಳಗಾವಿ. ಮೊ: ೯೪೪೯೨೩೪೧೪೨ ಗೆಳೆತನವೆಂದರೆ?ಗೆಳೆತನವೆಂದರೆ ನಾವು ಚಿಕ್ಕಮಕ್ಕಳಿದ್ದಾಗ ಚಿಟ್ಟೆಯ ಬೆನ್ನತ್ತಿ ಅದು ಕೈಗೆ ಸಿಕ್ಕಾಗ ಕುಣಿದು ಕುಪ್ಪಳಿಸಿದ ರೀತಿಯಂತಹದು. ಗೆಳೆತನ ಅತಿ ಶ್ರೇಷ್ಠವಾದ ಸಂಗತಿಯಾಗಿದೆ. ಗೆಳೆತನವನ್ನು ಯಾರು ಬೇಕಾದರೂ ಮಾಡಬಹುದು. ಗೆಳೆತನವನ್ನು ಕಾರ್ಯರೂಪಕ್ಕೆ ತರುವಲ್ಲಿ ಸತ್ವ ಪರೀಕ್ಷೆ ಜರುಗುತ್ತದೆ. ಗೆಳೆತನಕ್ಕೆ ಎಲ್ಲೂ ಅಬ್ಬರ ಆರ್ಭಟವಿರಬಾರದು. ಅದು ಸಹಜವಾಗಿ ಹರಿದು ಹೋಗುವ ಪುಟ್ಟ ತೊರೆಯಂತಿರಬೇಕು. ಅದರ ಜುಳು ಜುಳು ನಾದ ಕೇಳಿ ಮನಸ್ಸು ಉಲ್ಲಾಸಗೊಳ್ಳಬೇಕು. ಹರಿವ ನೀರಿನ ಸೊಂಪಾದ ಸುಳಿಗಾಳಿಯ ಸೊಗಸಾದ ಸಂತಸ ತುಂಬುತಲಿರಬೇಕು. ಗೆಳೆಯರೆಂದರೆ ಹೂವು ಮತ್ತು ಸುವಾಸನೆಯಂತೆ ಒಂದನ್ನು ಬಿಟ್ಟು ಇನ್ನೊಂದು ಇರಲಾರದು. ಬದುಕಿನಲ್ಲಿ ಬೆಲೆಯೇ ಕಟ್ಟಲಾಗದ ಬಂಧವೇ ಗೆಳೆತನ. ಮುತ್ತು, ರತ್ನ, ವಜ್ರ, ವೈಡೂರ್ಯ, ಹಣ, ಆಸ್ತಿ ಇವೆಲ್ಲ ಬದುಕಿನ ನಿಜವಾದ ಸಿರಿತನಗಳಲ್ಲ. ನಿಜವಾದ ಗೆಳೆತನವೇ ಬದುಕಿನ ಸಿರಿತನ.ಲಾಭಕ್ಕೆ ಅಸ್ತ್ರಇಂದು ಸ್ನೇಹ ಲೋಕ ಹೆಚ್ಚು ಹೆಚ್ಚು ಲಾಭಕ್ಕೆ ಅಸ್ತ್ರವಾಗಿ ಬಳಸಲ್ಪಡುತ್ತಿದೆ. ಹೀಗಾಗಿ ಗೆಳೆತನದ ಕಡೆಗೆ ಗಮನಹರಿಸಲೆಬೆಕು. ಒತ್ತಡದ…
ಢವಳಗಿ: ಗ್ರಾಮದ ಬಸವ ಬಾಲ ಭಾರತಿ ಶಾಲೆಯಲ್ಲಿ ಅಗಸ್ಟ 6ರಂದು ನಡೆದ ಢವಳಗಿ ಕ್ಲಸ್ಟರ್ ಮಟ್ಟದ ಕ್ರೀಡಾಕೂಟದಲ್ಲಿ ಢವಳಗಿ ಗ್ರಾಮದ ಸರಕಾರಿ ಕನ್ನಡ ಮಾದರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಬಾಲಕರ ವಿಭಾಗದಲ್ಲಿ ಗುಂಪು ಆಟಗಳಾದ 4×100ರೀಲೆ ಓಟ, ಖೋಖೋ,ಕಬ್ಬಡ್ಡಿ, ವ್ಹಾಲಿಬಾಲ ಆಟದಲ್ಲಿ ಪ್ರಥಮ ಹಾಗೂ ವ್ಯಯಕ್ತಿಕ ಆಟದಲ್ಲಿ 200 ಮೀಟರ್ ಓಟದಲ್ಲಿ ಪ್ರಥಮ ಮತ್ತು ದ್ವೀತಿಯ, 100 ಓಟದಲ್ಲಿ ತೃತೀಯ,600 ಮೀಟರ್ ಓಟದಲ್ಲಿ ದ್ವೀತಿಯ ಮತ್ತು ತೃತೀಯ, ಹಾಗೂ ಗುಂಡು ಎಸೆತದಲ್ಲಿ ಪ್ರಥಮ ಮತ್ತು ತೃತೀಯ, ಚಕ್ರ ಎಸೆತದಲ್ಲಿ ಪ್ರಥಮ ಮತ್ತು ತೃತೀಯ ಸ್ಥಾನವನ್ನು ಬಾಲಕರ ವಿಭಾಗದಲ್ಲಿ ಪಡೆದರೆ,ಬಾಲಕಿಯರ ವಿಭಾಗದಲ್ಲಿ ಕೂಡಾ 4×100 ರೀಲೆ,ಖೋಖೋ, ಕಬ್ಬಡ್ಡಿ ಆಟದಲ್ಲಿ ಪ್ರಥಮ ಸ್ಥಾನ ಪಡೆದರೆ ವ್ಯಯಕ್ತಿಕ ಆಟದಲ್ಲೂ 100 ಮೀಟರ್ ಓಟದಲ್ಲಿ ಪ್ರಥಮ ಮತ್ತು ದ್ವೀತಿಯ, 200 ಮೀಟರ್ ಓಟದಲ್ಲಿ ದ್ವೀತಿಯ, 400 ಮೀಟರ್ ಓಟದಲ್ಲಿ ಪ್ರಥಮ, 600 ಮೀಟರ್ ಓಟದಲ್ಲಿ ಪ್ರಥಮ ಮತ್ತು ದ್ವೀತಿಯ ಹಾಗೂ ಗುಂಡು ಎಸೆತದಲ್ಲಿ ತೃತೀಯ ಹಾಗೂ ಚಕ್ರ…
ವಿಜಯಪುರ: ಉತ್ತರ ಕರ್ನಾಟಕದಿಂದ ಬೆಂಗಳೂರಿಗೆ ರಾಜ್ಯ ಸಾರಿಗೆ ಬಸ್ಸುಗಳಲ್ಲಿ ಸಂಚರಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ಮಧ್ಯ ಕರ್ನಾಟಕದಲ್ಲಿ ಸಾರಿಗೆ ಇಲಾಖೆಯಿಂದ ಮೂಲಭೂತ ಸೌಕರ್ಯಗಳುಳ್ಳ ವಿಶ್ರಾಂತಿ ದಾಮ ಆರಂಭಿಸಬೇಕು ಎಂದು ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ಅವರು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ.ಬುಧವಾರ ಬೆಂಗಳೂರಿನಲ್ಲಿ ಸಚಿವರನ್ನು ಭೇಟಿ ಮಾಡಿದ ಅವರು, ಉತ್ತರ ಕರ್ನಾಟಕದ ವಿಜಯಪುರ, ಬಾಗಲಕೋಟೆ, ಬೆಳಗಾವಿ, ಗದಗ, ಹಾವೇರಿ, ಕಲಬುರಗಿ, ರಾಯಚೂರು, ಕೊಪ್ಪಳ, ಯಾದಗಿರಿ ಮುಂತಾದ ಜಿಲ್ಲೆಗಳಿಂದ ಪ್ರತಿನಿತ್ಯ ಸಾವಿರಾರು ಪ್ರಯಾಣಿಕರು ರಾಜ್ಯ ಸರಕಾರಿ ಬಸ್ಸುಗಳಲ್ಲಿ ಬೆಂಗಳೂರಿಗೆ ಸಂಚರಿಸುತ್ತಾರೆ. ಅದರಲ್ಲೂ ರಾತ್ರಿ ವೇಳೆ ಸಂಚರಿಸುವಾಗ ಸಾರಿಗೆ ಇಲಾಖೆ ಬಸ್ಸುಗಳು ಊಟ, ಉಪಹಾರಕ್ಕಾಗಿ ನಿಲ್ಲುವ ಖಾಸಗಿ ಹೋಟೇಲು ಮತ್ತೀತರ ಸ್ಥಳಗಳಲ್ಲಿ ಸೂಕ್ತವಾದ ಮೂಲಭೂತ ಸೌಕರ್ಯಗಳು ಇರುವುದಿಲ್ಲ. ಅಲ್ಲದೇ, ಅಲ್ಲಿ ದೊರೆಯುವ ಖಾದ್ಯ ಪದಾರ್ಥಗಳ ಬೆಲೆಯೂ ಹೆಚ್ಚಿರುತ್ತದೆ. ಮತ್ತೋಂದೆಡೆ ಕೆಲವು ಖಾಸಗಿ ಬಸ್ಸುಗಳು ಅಲ್ಲಲ್ಲಿ ಅವರದೇ ಆದ ಬಸ್ ನಿಲ್ದಾಣ, ಶೌಚಾಲಯಗಳನ್ನು ಹೊಂದಿವೆ.ಹೀಗಾಗಿ, ರಾತ್ರಿ ವೇಳೆ ತಡವಾಗಿ ಹೊರಡುವ…
ಯಾದಗಿರಿ ಶಾಸಕ ಚನ್ನಾರಡ್ಡಿ ಹಾಗೂ ಆತನ ಮಗನನ್ನು ಕೂಡಲೇ ಬಂಧಿಸಲು ಆಗ್ರಹ ವಿಜಯಪುರ: ನಗರದಲ್ಲಿ ದಲಿತ ಸಂಘಟನೆಗಳ ಒಕ್ಕೂಟ ವಿಜಯಪುರ ಸಂಚಾಲಕ ಪರಶುರಾಮ ಲಂಬು ಅವರ ನೇತೃತ್ವದಲ್ಲಿ ಯಾದಗಿರಿ ನಗರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಾಗಲೇ ಅನುಮಾನಾಸ್ಪದ ಸಾವಿಗೀಡಾದ ಪಿಎಸ್ ಆಯ್ ಪರಶುರಾಮ ಚಲವಾದಿ ಇವರ ಸಾವು ಖಂಡಿಸಿ ಬುಧವಾರ ಡಾ ಬಿ ಆರ್ ಅಂಬೇಡ್ಕರ್ ವೃತ್ತದಿಂದ ಬಸವೇಶ್ವರ ವೃತ್ತದ ಮೂಲಕ ರ್ಯಾಲಿ ಹೊರಟು ಜಿಲ್ಲಾಧಿಕಾರಿಕಾರಿಗಳ ಮುಖಾಂತರ ಗೃಹ ಸಚಿವರಿಗೆ ಮನವಿ ಸಲ್ಲಿಸಲಾಯಿತು.ಪರಶುರಾಮ ಸಾವಿನ ತನಿಖೆಯನ್ನಿ CID ಯಿಂದ CBI ಗೆ ವಹಿಸಬೇಕು ಹಾಗೂ ಯಾದಗಿರಿಯ ಶಾಸಕ ಚನ್ನಾರಡ್ಡಿ ಹಾಗೂ ಆತನ ಮಗ ಹಂಪನಗೌಡ ಇವರನ್ನುಕೂಡಲೇ ಬಂದಿಸಬೇಕು ಎಂದು ಆಗ್ರಹಿಸಲಾಯಿತು.ಈ ಸಂದರ್ಭದಲ್ಲಿ ಪರಶುರಾಮ ಲಂಬು, ರಮೇಶ ಕೌಲಗಿ, ಮತೀನ ದೆವಧರ, ಪರಶುರಾಮ ಚಲವಾದಿ, ಅಜಯ ಬೋರಗಿ, ವಿರೇಶ ವಾಲಿಕಾರ, ಮಾರುತಿ ಬುದಿಹಾಳ, ಶಾಸ್ತ್ರಿ ಹೊಸಮನಿ, ಹಣಮಂತ ನಾಟಿಕಾರ, ಚನ್ನು ಕಟ್ಟಿಮನಿ, ಯಮನಪ್ಪ ಸಿದರಡ್ಡಿ ಹಾಗೂ ಇತರ ದಲಿತ ಮುಖಂಡರು ಭಾಗವಹಿಸಿದ್ದರು.
ಚಡಚಣ: ಜಗದ ಹೊಟ್ಟೆಗೆ ಹಿಟ್ಟು ನೀಡಿದವ ರೈತನಾದರೆ, ಮಾನವನ ಮಾನ ರಕ್ಷಣೆಗೆ ಬಟ್ಟೆ ನೀಡಿದವ ನೇಕಾರ. ನೇಕಾರರ ಬದುಕು ಹಸನಾಗಲೂ ಸರಕಾರ ಆರ್ಥಿಕ ಪ್ರೋತ್ಸಾಹ ಅಗತ್ಯ ಎಂದು ಸಮಾಜದ ಮುಖಂಡ ಮಹಾದೇವ ಯಂಕಂಚಿ ಹೇಳಿದರು.ಪಟ್ಟಣದ ಸರಕಾರಿ ಆಸ್ಪತ್ರೆಯ ಮುಂಭಾಗದಲ್ಲಿರುವ ದೇವರ ದಾಸಿಮಯ್ಯ ವೃತ್ತದಲ್ಲಿ ಆಯೋಜಿಸಲಾದ ರಾಷ್ಟ್ರೀಯ ಕೈ ಮಗ್ಗ ದಿನಾಚರಣೆಯಲ್ಲಿ ಅವರು ಮಾತನಾಡಿದರು.ಕೈಮಗ್ಗ ನೇಕಾರಿಕೆಯೇ ನಶಿಸಿ ಹೋಗುತ್ತಿದ್ದು ಅದಕ್ಕೆ ಸರಕಾರ ಹೆಚ್ಚಿನ ಪ್ರೋತ್ಸಾಹ ನೀಡಿ ಕೈಮಗ್ಗ ನೇಕಾರಿಕೆಯನ್ನು ಉಳಿಸಿ ಬೆಳೆಸಬೇಕಿದೆ ಎಂದರು.ನಿವೃತ್ತ ಶಿಕ್ಷಕ ಮಾಚನ್ನ ಮೇತ್ರಿ ಮಾತನಾಡಿ, ಕೈಮಗ್ಗ ನೇಕಾರಿಕೆ ಇತ್ತೀಚಿನ ದಿನಗಳಲ್ಲಿ ಕ್ಷೀಣಿಸುತ್ತಿದ್ದು, ಮೂಲ ನೇಕಾರರಿಗೇ ಸರಕಾರಿ ಸೌಲಭ್ಯಗಳು ದೊರೆಯದಂತಾಗಿದೆ ಎಂದು ವಿಷಾಧ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಹಿಟ್ನಳ್ಳಿ, ಬಸವರಾಜ ಭಂಡರಕವಟೆ, ರಾಜು ಕೋಟಿ, ದಯಾನಂದ ಕಟಗೇರಿ, ಚಿದಾನಂದ ಮಾಲಾಪುರ, ಗುರು ಅರಳಿಕಟ್ಟಿ, ಮಹೇಶ ಕಟಗೇರಿ, ರಾಜಶೇಖರ ಸದ್ದಲಗಿ, ಸಂತೋಷ ದಟ್ಟಿ, ಸೇರಿದಂತೆ ಸಮುದಾಯದ ಮುಖಂಡರು ಇದ್ದರು.
– ಡಾ.ಯಂಕನಗೌಡ ಪಾಟೀಲಕೆಂಭಾವಿ: ಪಟ್ಟಣದ ಪುರಸಭೆಗೆ ಜಿದ್ದಾ ಜಿದ್ದಿನ ಚುನಾವಣೆ ನಡೆದು ಎರಡೂವರೆ ವರ್ಷಗಳು ಕಳೆದಿವೆ, ಆಡಳಿತ ಮಂಡಳಿ ರಚನೆಯಾಗದೆ ಚುನಾಯಿತ ಪ್ರತಿನಿಧಿಗಳಿಗೆ ನಿರಾಶೆ ಮೂಡಿಸಿತ್ತು. ಇದೀಗ ರಾಜ್ಯ ಸರ್ಕಾರ ಸ್ಥಳೀಯ ಸಂಸ್ಥೆಗಳಾದ ನಗರಸಭೆ, ಪುರಸಭೆ, ಹಾಗೂ ಪಟ್ಟಣ ಪಂಚಾಯಿತಿ, ಅಧ್ಯಕ್ಷ ಉಪಾಧ್ಯಕ್ಷರ ಸ್ಥಾನಕ್ಕೆ ಮೀಸಲಾತಿ ಪಟ್ಟಿಯನ್ನು ಪ್ರಕಟಿಸುವ ಮೂಲಕ ಬಹುದಿನಗಳಿಂದ ನೆನೆಗುದಿಗೆ ಬಿದ್ದಿರುವ, ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಶೀಘ್ರದಲ್ಲೇ ಚುನಾವಣೆ ನಡೆಸಲು ಆದೇಶ ಹೊರಡಿಸಿದ ಹಿನ್ನಲೆಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಯ ಆಕಾಂಕ್ಷಿಗಳಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿ, ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದು, ತಮ್ಮ ತಮ್ಮ ನಾಯಕರ ಮೇಲೆ ಒತ್ತಡ ಹಾಕುವ ತೆರೆಮರೆಯ ಪ್ರಯತ್ನ, ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿದೆ.ನಗರಾಭಿವೃದ್ದಿ ಇಲಾಖೆ ಆದೇಶದನ್ವಯ ಪಟ್ಟಣದ ಪುರಸಭೆ ಅಧ್ಯಕ್ಷ, ಸ್ಥಾನ ಬಿಸಿಎ, ಹಾಗೂ ಉಪಾಧ್ಯಕ್ಷ, ಸ್ಥಾನ ಎಸ್ಸಿ ಮಹಿಳೆಗೆ, ಮೀಸಲು ನಿಗದಿಯಾಗಿದೆ. ಒಟ್ಟು 23, ಸದಸ್ಯರನ್ನು ಹೊಂದಿರುವ ಕೆಂಭಾವಿ ಪುರಸಭೆಯ ಪಕ್ಷಗಳ ಬಲಾಬಲ ಇಂತಿದೆ, ಬಿಜೆಪಿ -13, ಕಾಂಗ್ರೆಸ್ – 08, ಪಕ್ಷೇತರರು…
ರೋಟರಿ ಕ್ಲಬ್ ವಿಜಯಪುರ ನೂತನ ಅಧ್ಯಕ್ಷರಾಗಿ ಸಂದೀಪ ಪಾಟಿಲ್ (ಝಳಕಿ) ಆಯ್ಕೆ ವಿಜಯಪುರ: ನಗರದಲ್ಲಿ 1959 ರಲ್ಲಿ ಪ್ರಾರಂಭವಾದ ಪ್ರತಿಷ್ಠಿತ ಹಾಗೂ ಪುರಾತನ ಕ್ಲಬ್ ಜಗತ್ತಿನಲ್ಲಿ ರೋಟರಿ ಸಂಸ್ಥೆಯ ವಿವಿಧ ವೃತ್ತಿಯಲ್ಲಿ ಸೇವೆ ಸಲ್ಲಿಸುತ್ತಿರುವಕೋಟ್ಯಾಂತರ ಸದಸ್ಯರು, ತಮ್ಮ ತನುಮನ ಧನದೊಂದಿಗೆ ಹಾಗೂ ಪ್ರಬಲ ಇಚ್ಛಾಶಕ್ತಿಯೊಂದಿಗೆಸಮಾಜದಲ್ಲಿ ಬದಲಾವಣೆ ತರುತ್ತಿರುವುದು ಉತ್ತಮವಾದ ಬೆಳವಣಿಗೆಯಾಗಿದೆ. ಕಾರಣ ಪ್ರತಿಯೊಬ್ಬರು ಪ್ರತಿವ್ಯಕ್ತಿಗೆ ಸಹಾಯ ಮಾಡುವ ಮೂಲಕ ತಮ್ಮ ಅಳಲು ಸೇವೆ ಸಲ್ಲಿಸಬೇಕೆಂದು ರೋಟರಿ ಸಂಸ್ಥೆ ಪದಗ್ರಹಣಾಧಿಕಾರಿ ಡಾ.ವಾಸುದೇವ ಬೆಂಡಿಗೇರಿ ಹೇಳಿದರು.ಅವರು ನಿನ್ನೆ ರಾತ್ರಿ ನಗರದ ಖಾಸಗಿಹೊಟೇಲ್ನಲ್ಲಿ ಜರುಗಿದಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ನೂತನವಾಗಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಸಂದೀಪ ಪಾಟೀಲ ಝಳಕಿ ಮಾತನಾಡಿ, ಜನಸೇವೆ ಮಾಡಲು ಇದೊಂದು ಉತ್ತಮ ವೇದಿಕೆಯಾಗಿದ್ದು, ಜಗತ್ತಿನಲ್ಲಿ ಪೋಲಿಯೋ ನಿರ್ಮೂಲನೆ, ಕೃತಕಕಾಲು ಜೋಡಣೆ, ರಕ್ತಧಾನ, ಬಡವರಿಗೆ ಉಚಿತ ಶಸ್ತ್ರಚಿಕಿತ್ಸೆಯಂತಹ ಕಾರ್ಯಕ್ರಮಗಳ ಮೂಲಕ ರೋಟರಿಸಂಸ್ಥೆ ತನ್ನದೇ ಆದ ಹೆಸರು ಮಾಡಿದೆ. ಮುಂಬರುವ ದಿನಗಳಲ್ಲಿ ರೋಟರಿ ಸಂಸ್ಥೆಯಿಂದ ನಗರದಲ್ಲಿ ಪರಿಸರಜಾಗೃತಿ, ಶಾಲೆಗಳಗೆ ಶುದ್ಧ ಕುಡಿಯುವ ನೀರಿನ…
Udayarashmi kannada daily newspaper
ಬಿಜೆಪಿ & ಜೆಡಿಎಸ್ ನಾಯಕರು ಪರಸ್ಪರ ದೂಷಿಸುವ ಹಳೆಯ ವಿಡಿಯೋಗಳನ್ನು ಪ್ರದರ್ಶಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್ ಮಂಡ್ಯ: ಬಿಜೆಪಿ ಮತ್ತು ಜೆಡಿಎಸ್ ನಾಯಕರು ವಿವಿಧ ಸಂದರ್ಭಗಳಲ್ಲಿ ಒಬ್ಬರನ್ನೊಬ್ಬರು ದೂಷಿಸುವ ಹಳೆಯ ವಿಡಿಯೋಗಳನ್ನು ವೇದಿಕೆ ಮೇಲೆಯೇ ತೋರಿಸಿದ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ , ರಾಜ್ಯದ ಪ್ರತಿಪಕ್ಷಗಳನ್ನು “ಅವಕಾಶವಾದಿಗಳ ಗುಂಪು” ಎಂದು ಬಣ್ಣಿಸಿದ್ದಾರೆ.ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಶಿವಕುಮಾರ್, ಸರ್ಕಾರವನ್ನು ಗುರಿಯಾಗಿಸುವ ಪ್ರತಿಪಕ್ಷಗಳ ತಂತ್ರವು ಕೆಲಸ ಮಾಡುವುದಿಲ್ಲ ಮತ್ತು ಮುಂದಿನ ಹತ್ತು ವರ್ಷಗಳ ಕಾಲ ತಮ್ಮ ಪಕ್ಷ ರಾಜ್ಯದಲ್ಲಿ ಅಧಿಕಾರದಲ್ಲಿರುತ್ತದೆ ಎಂದು ಹೇಳಿದರು.ವೇದಿಕೆಯ ಮೇಲಿದ್ದ ದೊಡ್ಡ ಪರದೆಯ ಮೇಲೆ ಬಿಜೆಪಿ ಮತ್ತು ಜೆಡಿಎಸ್ ನಾಯಕರು ವಿವಿಧ ವಿಷಯಗಳ ಕುರಿತು ಪರಸ್ಪರ ವಾಗ್ದಾಳಿ ನಡೆಸುತ್ತಿರುವ ಹಳೆಯ ದೃಶ್ಯಾವಳಿಗಳನ್ನು ತೋರಿಸಿದರು.ಪ್ರತಿಪಕ್ಷಗಳನ್ನು ಅವಕಾಶವಾದಿಗಳ ಗುಂಪು ಎಂದು ಕರೆದ ಶಿವಕುಮಾರ್, ಹಿಂದುಳಿದ ಸಮುದಾಯದ ವ್ಯಕ್ತಿಯೊಬ್ಬರು ಪ್ರತಿಷ್ಠಿತ ಹುದ್ದೆಯನ್ನು ಅಲಂಕರಿಸುವುದನ್ನು ಸಹಿಸಲಾಗದ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸುವ ಉದ್ದೇಶದಿಂದ ಹಳೆಯ ವೈರಿಗಳು ಈಗ ಮಿತ್ರರಾಗಿದ್ದಾರೆ. ಈ ದೃಶ್ಯಾವಳಿಗೆ ಉತ್ತರ ನೀಡುವಂತೆ ಜನರನ್ನು ಕೇಳಿದರು.ಕಾಂಗ್ರೆಸ್…
