Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಪುಣೆ-ಬೆಳಗಾವಿ ಯ ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ ಅಧ್ಯಕ್ಷ ಡಾ.ಶಶಿಕಾಂತ ಪಟ್ಟಣ ಕರೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಇತ್ತೀಚಿನ ದಿನಗಳಲ್ಲಿ ಕೆಲ ಕೋಮುವಾದಿ ಸಂಘಟನೆಗಳು ವಚನ ಸಾಹಿತ್ಯದ ಮೇಲೆ ದಾಳಿ ನಡೆಸಿ ವರ್ಗ ವರ್ಣ ಲಿಂಗ ಭೇದ ಆಶ್ರಮ ರಹಿತ ಸಾಂಸ್ಥಿಕರಣವಲ್ಲದ ಬಹು ದೊಡ್ಡ ಆಂದೋಲನವನ್ನು ಯಾಮಾರಿಸಿ ವಚನ ಚಳುವಳಿಯು ವೇದ ಆಗಮ ಶಾಸ್ತ್ರ ಉಪನಿಷದ್ ಪೂರ್ಣಾಗಳನ್ನು ಧಿಕ್ಕರಿಸಿ ಸ್ವಾನುಭಾವದ ನೆಲೆಯಲ್ಲಿ ವಚನಗಳನ್ನು ರಚಿಸಿದ್ದಾರೆ ಎಂದುಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ ಪುಣೆ-ಬೆಳಗಾವಿ ಯ ಅಧ್ಯಕ್ಷ ಡಾ.ಶಶಿಕಾಂತ ಪಟ್ಟಣ ಆರೋಪಿಸಿದ್ದಾರೆ.ಈ ಕುರಿತು ಸೋಮವಾರ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಹಲವಾರು ಒಳ್ಳೆಯ ವಿಚಾರಗಳನ್ನು ಬುದ್ಧ ಮಹಾವೀರ ಬಸವಣ್ಣ ಹೇಳಿದ್ದಾರೆ. ಅವುಗಳಲ್ಲಿ ಅನೇಕ ಸಾಮ್ಯತೆಗಳು ಇರುತ್ತವೆ ಹಾಗೆಂದ ಮಾತ್ರಕ್ಕೆ ಒಬ್ಬರ ವೈಚಾರಿಕ ಪ್ರೇರಣೆ ಇನ್ನೊಬ್ಬರ ಮೇಲೆ ಆಗಿದೆ ಎಂದರ್ಥವಲ್ಲ. ಭಾಷೆ ಬೇರೆ ಸಂಸ್ಕೃತಿ ಬೇರೆ ಎಲ್ಲರೂ ಮಾನವ ಕಾಳಜಿಯನ್ನು ಬಯಸಿದವರು.ವಚನ ದರ್ಶನ ಎಂಬ ಪೂರ್ವ ನಿಯೋಜಿತ ಪೂರ್ವಗ್ರಹ ಪೀಡಿತ ಪುಸ್ತಕದ ಬಿಡುಗಡೆ ಪುಸ್ತಕ…
ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ | ಕಾಂಗ್ರೆಸ್ ಸರ್ಕಾರದಿಂದ ‘ಲ್ಯಾಂಡ್ ಜಿಹಾದಿ’ ಆರೋಪ | ವಕ್ಫ್ ಖಾತೆ ಸಚಿವ ಜಮೀರ್ ಅಹ್ಮದ್ ಖಾನ್ ವಜಾಗೊಳಿಸಲು ಆಗ್ರಹ ಬೆಂಗಳೂರು: ರಾಜ್ಯದ ವಿವಿಧೆಡೆ ರೈತರ ಜಮೀನನ್ನು ವಕ್ಶ್ ಆಸ್ತಿ ಎಂದು ನಮೂದಿಸಿರುವ ಆರೋಪ ಕೇಳಿಬಂದ ನಂತರ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ‘ಲ್ಯಾಂಡ್ ಜಿಹಾದಿ’ಯಲ್ಲಿ ತೊಡಗಿದೆ ಎಂದು ಆರೋಪಿಸಿ ಬಿಜೆಪಿ ಸೋಮವಾರ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿತು. ವಕ್ಫ್ ಖಾತೆ ಸಚಿವ ಜಮೀರ್ ಅಹ್ಮದ್ ಖಾನ್ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಪ್ರತಿಪಕ್ಷ ಆಗ್ರಹಿಸಿತು.ವಕ್ಫ್ ಗೆಜೆಟ್ ನೋಟಿಫಿಕೇಷನ್ ರದ್ದತಿಗೆ ಆಗ್ರಹಿಸಿ ವಿಜಯಪುರದ ಜಿಲ್ಲಾಧಿಕಾರಿ ಕಚೇರಿ ಬಳಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರೊಂದಿಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.ಬಳ್ಳಾರಿಯಲ್ಲಿ ಬಿ. ವೈ. ವಿಜಯೇಂದ್ರ, ಕೆಆರ್ ಪುರಂನಲ್ಲಿ ವಿಪಕ್ಷ ನಾಯಕ ಆರ್. ಅಶೋಕ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ರಾಜ್ಯದ ವಿವಿಧೆಡೆ ನಡೆದ ಪ್ರತಿಭಟನೆಯಲ್ಲಿ ಪಕ್ಷದ ವಿವಿಧ ನಾಯಕರು ಪಾಲ್ಗೊಂಡಿದ್ದರು.ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, ಖಾನ್ನಂತಹ…
ಉದಯರಶ್ಮಿ ದಿನಪತ್ರಿಕೆ ಯಡ್ರಾಮಿ: ಪಟ್ಟಣದ ಹೊರವಲಯದ ಕಡಕೋಳ ಕ್ರಾಸ್ ಹತ್ತಿರ ನೂತನವಾಗಿ ನಿರ್ಮಿಸಿದ ಜನನಿ ಮಂಗಲ ಕಾರ್ಯಾಲಯ ಲೋಕಾರ್ಪಣೆ ಕಾರ್ಯಕ್ರಮ ನಿಮಿತ್ತ ನ.೧೨ ಮತ್ತು ನ.೧೩ ರಂದು ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಂಗಲ ಕಾರ್ಯಾಲಯ ಉದ್ಘಾಟನೆ ಸಮಾರಂಭದ ಸ್ವಾಗತ ಸಮಿತಿ ಅಧ್ಯಕ್ಷ ದೇವಿಂದ್ರಪ್ಪಗೌಡ ಸರಕಾರ ತಿಳಿಸಿದರು.ಯಡ್ರಾಮಿ ಪಟ್ಟಣದ ಜನನಿ ಮಂಗಲ ಕಾರ್ಯಾಲಯದಲ್ಲಿ ಸೋಮವಾರ ಪತ್ರಿಕಾಘೋಷ್ಟಿಯನ್ನು ಉದ್ದೇಶಿಸಿ ಮಾತನಾಡಿ, ನ.೧೨ರಂದು ಬೆ.೭ಕ್ಕೆ ಆಲೂರು ಸಂಸ್ಥಾನ ಮಠದ ಶ್ರೀ ಕೆಂಚವೃಷಭೇಂದ್ರ ಶಿವಾಚಾರ್ಯರು ಇವರಿಂದ ಜಂಗಮ ವಟುಗಳಿಗೆ ಅಯ್ಯಾಚಾರ ಹಾಗೂ ಲಿಂಗದೀಕ್ಷೆ ಕಾರ್ಯಕ್ರಮ ನಡೆಯಲಿದೆ. ಮದ್ಯಾಹ್ನ ೩ಕ್ಕೆ ಯಡ್ರಾಮಿಯ ಶ್ರೀ ಮುರಘೇಂದ್ರ ಶಿವಯೋಗಿ ವಿರಕ್ತಮಠದಿಂದ ಜನನಿ ಮಂಗಲ ಕಾರ್ಯಾಲಯದವರೆಗೆ ಮುತ್ತೈದೆಯರ ಕುಂಭ, ಕಳಸ, ವಾಧ್ಯ, ಭಜನೆ ವೈಭವದೊಂದಿಗೆ ಉಜ್ಜಯಿನಿ ಜಗದ್ಗುರುಗಳ ಸಾರೋಟು ಮೆರವಣಿಗೆ ನಡೆಯಲಿದೆ. ಸಾಯಂಕಾಲ ೬.೩೦ಕ್ಕೆ ಉಜ್ಜಯಿನಿ ಪೀಠದ ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ಪರುಷ ಹಸ್ತದಿಂದ ಮಂಗಲ ಕಾರ್ಯಾಲಯ ಉದ್ಘಾಟನೆ ನೆರವೇರಲಿದೆ. ಸಾ.೭ಕ್ಕೆ ಧರ್ಮಸಭೆ ನಡೆಯಲಿದ್ದು, ಧಿವ್ಯ ಸಾನಿಧ್ಯವನ್ನು…
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಮೊದನಲಿನಿಂದಲೂ ನಾಟಕಗಳು ಗ್ರಾಮೀಣ ಜನರ ಮನರಂಜನೆ ಕೇಂದ್ರಗಳಾಗಿದ್ದವು. ವೈಜ್ಞಾನಿಕವಾಗಿ ಬೆಳವಣಿಗೆಯಾದಂತೆ ನಾಟಕಗಳು ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತಿವೆ. ಕಲಾವಿದರ ಹಾಗು ಪ್ರೇಕ್ಷಕರ ಸಂಖ್ಯೆ ಕುಸಿಯುತ್ತಿರುವದು ಅತ್ಯಂತ ಶೋಚನಿಯ ಸಂಗತಿ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ ಅಭಿಪ್ರಾಯ ವ್ಯಕ್ತಪಡಿಸಿದರು.ತಾಲೂಕಿನ ಟಕ್ಕಳಕಿ ಗ್ರಾಮದಲ್ಲಿ ಕರಿಸಿದ್ದೇಶ್ವರ ಜಾತ್ರಾ ಮಹೋತ್ಸವದಂಗವಾಗಿ ಗ್ರಾಮದ ಕರಿಸಿದ್ದೇಶ್ವರ ನಾಟ್ಯ ಸಂಘದಡಿ ಹಮ್ಮಿಕೊಂಡಿದ್ದ ರೈತನ ಹೆಸರು ನಾಡಿನ ಹೆಸರು ಎಂಬ ಸಾಮಾಜಿಕ ನಾಟಕದ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ನಡೆಯುವ ಜಾತ್ರೆ, ಉತ್ಸವ ಹಾಗೂ ಹಬ್ಬಗಳಲ್ಲಿ ನಾಟಕವನ್ನು ಸ್ಥಳೀಯ ಕಲಾವಿದರು ರಂಗಭೂಮಿ ಶಿಕ್ಷಕರಿಂದ ತರಬೇತಿ ಪಡೆದು ಪ್ರದಶ೯ನ ಮಾಡುತ್ತಿದ್ದರು. ಸಿನೆಮಾ ಹಾಗು ಮೊಬೈಲ್ ಭರಾಟೆಯಲ್ಲಿ ನಾಟಕಗಳು ಮಾಯವಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದರು.ಮುಖಂಡ ಸಂಗಮೇಶ ಓಲೇಕಾರ ಮಾತನಾಡಿ, ಹಳ್ಳಿಗಳಲ್ಲಿ ಜಾತ್ರೆಗಳು ಯಶಸ್ವಿಗೆ ನಾಟಕಗಳ ಪ್ರದಶ೯ನ ಅವಲಂಬಿತವಾಗಿದ್ದವು. ನಾಟಕಗಳಿಲ್ಲದೇ ಜಾತ್ರೆ ನಡೆಯುತ್ತಿರಲಿಲ್ಲ. ನಾಟಕಗಳು ಸಮಾಜದ ನ್ಯೂನತೆಗಳನ್ನು ಸರಿಪಡಿಸಿ ಸನ್ಮಾಗ೯ ತೋರಿಸುತ್ತವೆ ಎಂದರು.ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ…
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪಟ್ಟಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕು ಘಟಕವು ತಲೆ-ತಲಾಂತರಗಳಿಂದ ಉಳುಮೆ ಮಾಡಿಕೊಂಡು ಬರುತ್ತಿರುವ ರೈತ ಬಾಂಧವರ ಜಮೀನುಗಳ ಪಹಣಿಯಲ್ಲಿ ಕರ್ನಾಟಕ ವಕ್ಪ್ ಮಂಡಳಿ ಎಂದು ನಮೂದಿಸುತ್ತಿರುವದನ್ನು ಸರ್ಕಾರ ರದ್ದುಪಡಿಸಬೇಕು. ವಕ್ಪ್ ಕಾಯ್ದೆಯನ್ನು ರದ್ದು ಪಡಿಸಬೇಕೆಂದು ಆಗ್ರಹಿಸಿ ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ ಅವರ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿತು.ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಜಮಾಯಿಸಿದ ರೈತ ಬಾಂಧವರು ಮೆರವಣಿಗೆ ಮೂಲಕ ತಹಸೀಲ್ದಾರ ಕಚೇರಿಗೆ ಆಗಮಿಸಿ ಕೆಲ ಹೊತ್ತು ಧರಣಿ ನಡೆಸಿ ವಕ್ಪ್ ಕಾಯ್ದೆ ವಿರುದ್ಧ ಘೋಷಣೆ ಕೂಗಿದರು.ಈ ಸಂದರ್ಭದಲ್ಲಿ ರೈತ ಸಂಘದ ತಾಲೂಕಾಧ್ಯಕ್ಷ ವಿನೋದ ಪವಾರ ಮಾತನಾಡಿ, ರೈತರ ಜಮೀನುಗಳ ಪಹಣಿಯ ಹಕ್ಕುಗಳ ಕಾಲಂನಲ್ಲಿ ಕರ್ನಾಟಕ ವಕ್ಪ್ ಮಂಡಳಿ ಹೆಸರು ನಮೂದಿಸುವ ಮೂಲಕ ರೈತರನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆಯುತ್ತಿದೆ. ರೈತರಿಗೆ ಆಗುತ್ತಿರುವ ಅನ್ಯಾಯವನ್ನು ತಡೆಗಟ್ಟಲು ವಕ್ಪ್ ಮಂಡಳಿಯ ೧೯೯೫ ರ ಕಾಯ್ದೆಯನ್ನು ರದ್ದುಪಡಿಸಬೇಕು. ಇದು ಸಮಾನತೆ, ಏಕತೆ, ನ್ಯಾಯದ ತತ್ವಗಳಿಗೆ ನೇರ ಸಂಘರ್ಷಕ್ಕಿಡು ಮಾಡಿದಂತಾಗಿದೆ. ರೈತರ…
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ರೈತರ ಜಮೀನುಗಳ ಉತಾರೆಯಲ್ಲಿ ವಕಪ್ ಎಂದು ನಮೂದಾಗಿರುವ ಹಿನ್ನೆಲೆ ಆಕ್ರೋಶಗೊಂಡ ತಾಲೂಕಿನ ಕುಂಟೋಜಿ ಗ್ರಾಮದ ರೈತರು ಸೋಮವಾರ ಗ್ರಾಮದಿಂದ ಬೈಕ್ ರ್ಯಾಲಿ ಮೂಲಕ ಪಟ್ಟಣಕ್ಕೆ ಆಗಮಿಸಿ ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸುವ ಮೂಲಕ ತಹಶೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದರು.ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಡಾ.ಬಾಬಾ ಸಾಹೇಬರ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಸಂಗೊಳ್ಳಿ ರಾಯಣ್ಣ ವೃತ್ತ, ಬಸವೇಶ್ವರ ವೃತ್ತ, ಕಿತ್ತೂರು ರಾಣಿ ಚನ್ನಮ್ಮ ವೃತ್ತ ಮಾರ್ಗವಾಗಿ ತಹಶೀಲ್ದಾರ ಕಚೇರಿಯವರೆಗೆ ಸಾಗಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.ನಮ್ಮ ಸ್ವಂತ ಮಾಲ್ಕಿ ಕಬ್ಜಾವಹಿವಾಟಿನ ಜಮೀನುಗಳ ಪೈಕಿ ಕೆಲವನ್ನು ಖರೀದಿ ಮಾಡಿದ್ದು ಇನ್ನೂ ಕೆಲವು ಪಿತ್ರಾರ್ಜಿತ ಆಸ್ತಿಗಳಿವೆ. ರ.ಸ.ನಂ ೨೭೭, ೨೭೮, ೨೭೯, ೨೮೯, ೨೯೦, ೨೯೧, ೩೦೦, ೩೦೧, ೩೦೨, ೩೦೩, ೩೦೪, ೩೦೫, ೩೧೧, ೩೧೨, ೩೧೩ ಮತ್ತು ೪೬೬/೨ ಈ ಎಲ್ಲ ಜಮೀನಿಗಳ ಉತಾರೆಯ ೧೧ ನೇ ಕಾಲಂ ನಲ್ಲಿ ವಕ್ಫ್ ಆಸ್ತಿ ಕರ್ನಾಟಕ ಸರ್ಕಾರ ಎಂದು ನಮೂದಿಸಲಾಗಿದೆ. ಇದರಿಂದ ನಮಗೆ…
ವಿಜಯಪುರದ ಪಿಡಿಜೆ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಭಗವದ್ಗೀತಾ ಅಭಿಯಾನಕ್ಕೆ ಚಾಲನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಶಿಕ್ಷಣದಲ್ಲಿ ಆಧ್ಯಾತ್ಮಿಕ ಕೊರತೆ ಪರಿಣಾಮ ಅನೇಕ ವಿದ್ಯಾವಂತರು ಆತಂಕವಾದಿಗಳಾಗುತ್ತಿದ್ದಾರೆ, ನೈತಿಕತೆ ಪತನವಾಗುತ್ತಿದೆ, ಹೀಗಾಗಿ ಅಪರಾಧಿಕ ಮನೋಸ್ಥಿತಿ ಬಾರದಂತೆ ಮಾಡಲು ಶಿಕ್ಷಣದಲ್ಲಿ ಆಧ್ಯಾತ್ಮಿಕತೆಯ ಸ್ಪರ್ಶ ಅಗತ್ಯವಾಗಿದೆ ಎಂದು ಶಿರಸಿಯ ಶಂಕರಾಚಾರ್ಯ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮೀಜಿ ಹೇಳಿದರು.ವಿಜಯಪುರದ ಪಿಡಿಜೆ ಶಿಕ್ಷಣ ಸಂಸ್ಥೆ ಆವರಣದಲ್ಲಿ ಶ್ರೀ ಸರ್ವಜ್ಞೇನಂದ್ರ ಸರಸ್ವತಿ ಪ್ರತಿಷ್ಠಾನ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಭಗವದ್ಗೀತಾ ಅಭಿಯಾನಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದ ಶ್ರೀಗಳು, ಆತಂಕವಾದಿಗಳ ಶೈಕ್ಷಣಿಕ ಹಿನ್ನೆಲೆ ನೋಡಿದರೆ ಎಲ್ಲರೂ ಉನ್ನತ ಪದವಿ ಪಡೆದವರಾಗಿದ್ದಾರೆ, ಶಿಕ್ಷಣದಲ್ಲಿ ಆಧ್ಯಾತ್ಮ ಹಾಗೂ ಸಂಸ್ಕಾರಗಳ ಕೊರತೆ ಎದ್ದು ಕಾಣುತ್ತಿದೆ ಎಂದರು.ಇಂದು ನೈತಿಕತೆಯ ಪತನ ಉದ್ದಗಲಕ್ಕೂ ಕಂಡು ಬರುತ್ತಿದೆ, ಪ್ರಾಮಾಣಿಕರ ಸಂಖ್ಯೆ ವಿರಳವಾಗುತ್ತಿದೆ, ಅಪರಾಧಿಕ ಪ್ರಕರಣಗಳು ಹೇರಳವಾಗುತ್ತಿವೆ, ಒಂದು ವರದಿ ಪ್ರಕಾರ ೧ ಲಕ್ಷ ಮಹಿಳೆಯರು ನಾಪತ್ತೆಯಾಗುತ್ತಾರೆ ಎಂದರೆ ಎಷ್ಟೊಂದು ನೋವಿನ ಸಂಗತಿ, ಯಾರೊಬ್ಬರು ಅಪರಾಧ ಮನೋಸ್ಥಿತಿಯಲ್ಲಿ ತೊಡಗದಂತೆ ಮಾಡುವುದು ಅವಶ್ಯವಾಗಿದೆ, ಹದಗೆಟ್ಟಿರುವ ಮನುಷ್ಯನ ಮನಸ್ಥಿತಿ…
ಉದಯರಶ್ಮಿ ದಿನಪತ್ರಿಕೆ ಕೆಂಭಾವಿ: ಕನ್ನಡ ಸಾಹಿತ್ಯ ಪರಿಷತ್ತು ಸುರಪುರ ತಾಲೂಕು ಘಟಕದ ವತಿಯಿಂದ ಪ್ರತಿ ವರ್ಷ ಕೊಡಲ್ಪಡುವ ವರ್ಷದ ವ್ಯಕ್ತಿ ಪುರಸ್ಕಾರಕ್ಕೆ ಈ ಬಾರಿಯ 2024ಕ್ಕೆ ಕೆಂಭಾವಿ ಪುರಸಭೆ ವ್ಯಾಪ್ತಿಯ ಪರಸನಹಳ್ಳಿಯ ಸಂಶೋಧಕ ಸಾಹಿತಿ ನಿಂಗನಗೌಡ ದೇಸಾಯಿ ಭಾಜನರಾಗಿದ್ದು ಸಂತಸ ತಂದಿದೆ ಎಂದು ವಲಯ ಕಸಾಪ ಅಧ್ಯಕ್ಷ ಮಡಿವಾಳಪ್ಪ ಪಾಟೀಲ ಹೇಳಿದರು.ಈ ಕುರಿತು ಮಾತನಾಡಿದ ಅವರು ನಿಂಗನಗೌಡ ದೇಸಾಯಿ ಅವರು ಕನ್ನಡ ಸಾಹಿತ್ಯದ ಕಾವ್ಯ, ನಾಟಕ ಸಂಶೋಧನೆ, ಸಂಪಾದನೆ, ಚರಿತ್ರೆ ಹೀಗೆ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೃತಿಗಳನ್ನು ಹೊರತಂದಿದ್ದಾರೆ. ಐತಿಹಾಸಿಕ ಶಿಲ್ಪಗಳ ಕುರಿತು ಸುಮಾರು 60ಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ಬರೆದಿರುವರು. ಪ್ರಸ್ತುತ ಕರ್ನಾಟಕ ಇತಿಹಾಸ ಅಕಾಡೆಮಿ ರಾಜ್ಯ ಸಮಿತಿ ಸದಸ್ಯರಾಗಿರುವರು ಎಂದು ತಿಳಿಸಿದರು.ಹರ್ಷ: ನಿಂಗನಗೌಡ ದೇಸಾಯಿಯವರು ಕಸಾಪ ತಾಲೂಕು ಘಟಕದಿಂದ ಕೊಡಲ್ಪಡುವ ವರ್ಷದ ವ್ಯಕ್ತಿ ಪುರಸ್ಕಾರಕ್ಕೆ ಭಾಜನರಗಿದ್ದಕ್ಕೆ ಹಿರೇಮಠದ ಪೀಠಾಧಿಪತಿ ಚನ್ನಬಸ ಶಿವಾಚಾರ್ಯರು,ಹಿರಿಯ ಸಾಹಿತಿ ಲಿಂಗನಗೌಡ ಮಾಲಿ ಪಾಟೀಲ್, ಜಿಪಂ ಮಾಜಿ ಅಧ್ಯಕ್ಷ ಸಿದ್ದನಗೌಡ ಪೊ. ಪಾಟೀಲ್, ಸುಮಿತ್ರಪ್ಪ ಅಂಗಡಿ,…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮಹರಾಷ್ಟ್ರದ ಫಂಡರಪುರದಲ್ಲಿ ದಿನಾಂಕ:೦೯-೧೧-೨೦೨೪ ರಿಂದ ೧೪-೧೧-೨೦೨೪ರವರೆಗೆ ನಡೆಯುವ ಕಾರ್ತಿಕ ಏಕಾದಶಿ ಜಾತ್ರೆಯ ಅಂಗವಾಗಿ ಜಿಲ್ಲೆಯ ಯಾತ್ರಾರ್ಥಿಗಳಿಗೆ ಉತ್ತಮ ಸಾರಿಗೆ ಸೌಲಭ್ಯ ಕಲ್ಪಿಸುವ ದೃಷ್ಟಿಯಿಂದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಜಯಪುರ ವಿಭಾಗದ ವಿಜಯಪುರ, ಇಂಡಿ, ಸಿಂದಗಿ, ತಾಳಿಕೋಟೆ, ಮುದ್ದೇಬಿಹಾಳ, ಬಸವನ ಬಾಗೇವಾಡಿ ಘಟಕದ ಕೇಂದ್ರ ನಿಲ್ದಾಣದಿಂದ ವಿಶೇಷ ಸಾರಿಗೆ ಕಾರ್ಯಾಚರಣೆ ಮಾಡಲಾಗುವುದು. ಒಂದೇ ಗುಂಪಿನಿಂದ ಪ್ರಯಾಣಿಸುವ ಕನಿಷ್ಟ ೫೫ ಜನ ಪ್ರಯಾಣಿಕರು ಲಭ್ಯವಾದಲ್ಲಿ ಅವರ ಸ್ವ-ಸ್ಥಳದಿಂದಲೇ ನೇರವಾಗಿ ಫಂಡರಾಪುರಕ್ಕೆ ಬಸ್ಸಿನ ವ್ಯವಸ್ಥೆ ಕಲ್ಪಿಸಲಾಗುವುದು.ಪ್ರಯಾಣಿಕರು ಸಾರಿಗೆ ಸೌಲಭ್ಯ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಹಾಯಕ ಸಂಚಾರ ವ್ಯವಸ್ಥಾಪಕರು ಕೇಂದ್ರ ಬಸ್ ನಿಲ್ದಾಣ ವಿಜಯಪುರ (ಮೊ: ೭೭೬೦೯೯೨೨೫೮), ವಿಜಯಪುರ ಘಟಕ-೧ರ (೭೭೬೦೯೯೨೨೬೩), ವಿಜಯಪುರ ಘಟಕ-೨ರ (೭೭೬೦೯೯೨೨೬೪), ವಿಜಯಪುರ ಘಟಕ-೩ರ (೭೭೬೦೯೧೪೦೦೮), ಇಂಡಿ ಘಟಕ (೭೭೬೦೯೯೨೨೬೫), ಸಿಂದಗಿ ಘಟಕ (೭೭೬೦೯೯೨೨೬೬) ಮುದ್ದೇಬಿಹಾಳ ಘಟಕ (೭೭೬೦೯೯೨೨೬೭), ತಾಳಿಕೋಟಿ ಘಟಕ (೭೭೬೦೯೯೨೨೬೮), ಬಸವನ ಬಾಗೇವಾಡಿ (೭೭೬೦೯೯೨೨೬೯) ಕೇಂದ್ರ ಬಸ್ ನಿಲ್ದಾಣ ವಿಜಯಪುರದ ದೂರವಾಣಿ ಸಂಖ್ಯೆ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮಹಾನಗರ ಪಾಲಿಕೆಯ ವಿವಿಧ ಕಾರಣಗಳಿಂದ ಖಾಲಿ ಇರುವ ವಾರ್ಡ ನಂ.೨೯ರ ಸ್ಥಾನಕ್ಕೆ ಉಪ ಚುನಾವಣೆಗೆ ಜಿಲ್ಲಾ ಚುನಾವಣಾಧಿಕಾರಿಗಳೂ ಆದ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಅಧಿಸೂಚನೆ ಹೊರಡಿಸಿದ್ದಾರೆ.ನಾಮಪತ್ರ ಸಲ್ಲಿಸಲು ನವೆಂಬರ್ ೧೧, ೨೦೨೪ ಕೊನೆಯ ದಿನವಾಗಿದ್ದು, ನಾಮಪತ್ರಗಳ ಪರಿಶೀಲನಾ ಕಾರ್ಯ ನವೆಂಬರ್ ೧೨,೨೦೨೪ ರಂದು ನಡೆಯಲಿದೆ. ನವೆಂಬರ್ ೧೪,೨೦೨೪ರಂದು ಉಮೇದುವಾರಿಕೆ ಹಿಂಪಡೆಯಲು ಕೊನೆಯ ದಿನವಾಗಿದ್ದು, ಅವಶ್ಯವಿದ್ದಲ್ಲಿ ನವೆಂಬರ್ ೨೩, ೨೦೨೪ ರಂದು ಬೆಳಿಗ್ಗೆ ೭ ರಿಂದ ಸಂಜೆ ೫ ಗಂಟೆವರೆಗೆ ಮತದಾನ ನಡೆಯಲಿದೆ. ನವೆಂಬರ್ ೨೬,೨೦೨೪ ರಂದು ಚುನಾವಣೆ ಕಾರ್ಯ ಮುಕ್ತಾಯಗೊಳ್ಳುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
