ರಚನೆ
– ಜಿ.ಬಿ.ಸಾಲಕ್ಕಿ
ವಿಜಯಪುರ
ಉದಯರಶ್ಮಿ ದಿನಪತ್ರಿಕೆ
ಹಾರ ಹಾಕೋಳಿಲ್ಲ
ಶಾಲತೊಡಲಿಲ್ಲ
ಜಾಗಟೆ, ಪಲ್ಲಕ್ಕಿ ಮೊದಲೇ ಇಲ್ಲ
ಹಾರ ಹಾಕೋಳಿಲ್ಲ
ಶಾಲತೊಡಲಿಲ್ಲ
ಜಾಗಟೆ, ಪಲ್ಲಕ್ಕಿ ಮೊದಲೇ ಇಲ್ಲ
ಕಾವೀನೂ ಧರಿಸಲಿಲ್ಲ
ಜೇಬಿಲ್ಲದ ಶ್ವೇತ ವಸ್ತ್ರಧಾರಿ
ಜ್ಞಾನ ದಾಸೋಹವೇ ಬದುಕಿನ ಆಶೆ ಎಂದವರು.
ಅಂತಿಮ ಅಭಿನಂದನೆ ತಿಳಿಸಿ ವಿಶ್ವದಾರ್ಶನಿಕ ಅರಿಸ್ಟಾಟಲ್, ಝೆನ್, ಅಲ್ಲಮ, ಬಸವಣ್ಣನ ಸಾಲಿಗೆ ಹೋದವರು.
ಮಂಟಪವೂ ಬೇಡ,
ಸ್ಮಾರಕವೂ ಬೇಡವೆಂದು
ಅಗ್ನಿಗಾಹುತಿಯಾಗಿ
ಆಶ್ರಮದ ಗಿಡ ಗಂಟಿ, ಹೂ,ಟೊಂಗೆಗಳ ಮೇಲಿನ ಹಕ್ಕಿ ಪಕ್ಷಿಗಳೊಂದಿಗೆ ಒಂದಾದ ಅಲ್ಲಮನ ವಾರಸುದಾರ ಶ್ರೀ ಸಿದ್ದೇಶ್ವರ ಶ್ರೀಗಳ ನೆನಹೇ ಮಹಾ ಮಂತ್ರ…
