Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಚದುರಂಗ(ಚೆಸ್) ಆಟವು ನಮ್ಮ ಬೌದ್ಧಿಕ ಸಾಮರ್ಥ್ಯ ಹೆಚ್ಚಳಕ್ಕೆ ಸಹಕಾರಿಯಾದ ಕ್ರೀಡೆಯಾಗಿದೆ ಎಂದು ಸರ್ವೋದಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎನ್.ಬಿ.ಪಾಟೀಲ ಹೇಳಿದರು.ಪಟ್ಟಣದ ಜ್ಞಾನಜ್ಯೋತಿ ಪ್ರೌಢಶಾಲಾ ಆವರಣದಲ್ಲಿ ಶನಿವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಸಿಂದಗಿ, ಜ್ಞಾನಜ್ಯೋತಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ ಮತ್ತು ಪ್ರಿನ್ಸ್ ಪಬ್ಲಿಕ್ ಹೈಯರ್ ಪ್ರೈಮರಿ ಸ್ಕೂಲ್ ಹೊಸನಗರ ಇವುಗಳ ಅಡಿಯಲ್ಲಿ 2024–25 ನೇ ಸಾಲಿನ ದೈಹಿಕ ಶಿಕ್ಷಣ ಶಿಕ್ಷಕರ ವಿಷಯ ವೇದಿಕೆಯ ಚೆಸ್ ಕ್ರೀಡೆಯ ಕಾರ್ಯಗಾರದಲ್ಲಿ ಪಾಲ್ಗೊಂಡು ಮಾತನಾಡಿದರು. ಇಂದು ಚೆಸ್ ಎಂದು ಕರೆಯಲ್ಪಡುವ ಚದುರಂಗ ಮೂಲತ ಭಾರತದ ಕ್ರೀಡೆಯಾಗಿದೆ. ಈ ಆಟದ ಪ್ರತಿಭಾನ್ವಿತ ಆಟಗಾರರರಾದ ವಿಶ್ವನಾಥನ ಆನಂದ, ಕೊನೆರು ಹಂಪಿ, ಗುಕೇಶ ದೊಮ್ಮರಾಜು ಭಾರತವನ್ನು ಪ್ರತಿನಿಧಿಸುವ ಮೂಲಕ ದೇಶದ ಹೆಸರನ್ನು ಅಜರಾಮರವಾಗಿಸಿದ್ದಾರೆ ಎಂದರು.ಅಂತರಾಷ್ಟ್ರೀಯ ಚೆಸ್ ತೀಪುರ್ಗಾರ ಶಿವಮೊಗ್ಗಾದ ಪ್ರಾಣೇಶ ಯಾದವ್ ಮಾತನಾಡಿ, ಚದುರಂಗ ಆಟದ ಹಿನ್ನೆಲೆ, ಆಟ ಬೆಳೆದು ಬಂದ ಬಗೆ, ವೃಶಿಷ್ಟ್ಯತೆ, ಆಡುವ ವಿಧಾನಗಳ ಕುರಿತು ಸಮಗ್ರ ಮಾಹಿತಿ ನೀಡಿದರು. ನಂತರ ಕಾರ್ಯಾಗಾರದಲ್ಲಿ ತಾಲ್ಲೂಕಿನ ದೈಹಿಕ ಶಿಕ್ಷಕರ ಬಳಗದಿಂದ ಸನ್ಮಾನಿಸಲ್ಪಟ್ಟರು.ಕಾರ್ಯಕ್ರಮದ ಗೌರವಾಧ್ಯಕ್ಷ ಎನ್.ಆರ್.ಚವ್ಹಾಣ, ವಿಷಯವೇದಿಕೆಯ ಅಧ್ಯಕ್ಷ ಆರ್.ಎಂ. ಬಿರಾದಾರ ,…
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಮಹಿಳೆಯರ ಮತ್ತು ಮಕ್ಕಳ ರಕ್ಷಣೆ ಸಲುವಾಗಿ ಸರ್ಕಾರ ಅನೇಕ ಕಾನೂನು ಕಾಯಿದೆಗಳು ಜಾರಿಗೆ ತಂದರು ಮಕ್ಕಳ ಮೇಲೆ ಮತ್ತು ಮಹಿಳೆಯರ ಮೇಲೆ ನಿರಂತರ ದೌರ್ಜನ್ಯಗಳು ನಡೆಯುತ್ತಿವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಶಹಜಾದ್ ಕಾಗಲ್ ಹೇಳಿದರು.ತಾಲ್ಲೂಕಿನ ಕೋರವಾರ ಗ್ರಾಮದಲ್ಲಿ ಶನಿವಾರ ಗ್ರಾಮ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಉಜ್ವಲ ಸಂಸ್ಥೆಯ ಆಯ್ಎಲ್ಪಿ ಯೋಜನೆಯ ಸಹಯೋಗದಲ್ಲಿ ಜರುಗಿದ ಮಹಿಳೆಯರ ಮತ್ತು ಮಕ್ಕಳ ಕಾವಲು ಸಮಿತಿಯ ರಚನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.ದೇಶದಲ್ಲಿ ಬಾಲ ಕಾರ್ಮಿಕ, ಮಕ್ಕಳ ಕಳ್ಳ ಸಾಗಾಣಿಕೆ, ಬಾಲ್ಯ ವಿವಾಹ ಲೈಂಗಿಕ ದೌರ್ಜನ್ಯ, ವರದಕ್ಷಿಣೆ ಕಿರುಕುಳ, ಮಹಿಳೆಯರನ್ನು ವೇಶ್ಯಾವಾಟಿಕೆಗೆ ಬಳಸಿಕೊಳ್ಳುವುದು ಇಂತಹ ಪ್ರಕರಣಗಳು ಇನ್ನೂ ಜೀವಂತವಾಗಿವೆ ಇವುಗಳನ್ನು ಸಂಪೂರ್ಣವಾಗಿ ಅಳಿದು ಸುಸ್ಥಿರ ಸಮಾಜ ನಿರ್ಮಿಸಲು ಮಹಿಳೆಯರ ಮತ್ತು ಮಕ್ಕಳ ಕಾವಲು ಸಮಿತಿಯ ರಚನೆ ಅನಿವಾರ್ಯವಾಗಿದೆ ಈ ಸಮಿತಿಯಲ್ಲಿ ಒಟ್ಟು 17ಜನ ಸದಸ್ಯರಿದ್ದು ನಾವೆಲ್ಲರೂ ಸಮುದಾಯದ ಜನರಿಗೆ ತಿಳುವಳಿಕೆ ಹೇಳಿ ಮಹಿಳೆಯರ ಮತ್ತು ಮಕ್ಕಳ ರಕ್ಷಣೆಯ ಸಂಪೂರ್ಣ ಜವಾಬ್ದಾರರಾಗೋಣ ಎಂದರು ಉಜ್ವಲ…
ಉದಯರಶ್ಮಿ ದಿನಪತ್ರಿಕೆ ಚಡಚಣ: ಇಂದಿನ ತಂತ್ರಜ್ಞಾನದ ಯುಗದಲ್ಲಿ ನಾವೆಲ್ಲರೂ ಪ್ರಕೃತಿಯ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದೇವೆ. ಅದರಿಂದ ಪ್ರಕೃತಿ ವಿಕೋಪಗಳು ಸಂಭವಿಸುತ್ತಿವೆ. ಅವುಗಳನ್ನು ತಪ್ಪಿಸಲು ಪರಿಸರವನ್ನು ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಹೊಣೆಯಾಗಿದೆ ಎಂದು ಕ್ಷೇತ್ರ ಸಂಪನ್ಮೂಲ ವ್ಯಕ್ತಿ ರಾಜೇಶ್ವರಿ ಕಾಮಗೊಂಡ ಹೇಳಿದರು.ಅವರು ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ನಂ-೨ ಮರಡಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಇಕೋ ಕ್ಲಬ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.ಪರಿಸರದಲ್ಲಿ ಮರಗಳ ಪಾತ್ರ ಹಿರಿದಾದದ್ದು, ಅವು ಸಕಲ ಜೀವಿಗಳಿಗೆ ಜೀವಾಮೃತ ನೀಡುತ್ತವೆ. ಹಾಗಾಗಿ ನಾವೆಲ್ಲರೂ ಹೆಚ್ಚು ಹೆಚ್ಚು ಗಿಡ-ಮರಗಳನ್ನು ನೆಟ್ಟು ಬೆಳೆಸಿ ಪರಿಸರವನ್ನು ಉಳಿಸೋಣ ಎಂದು ಹೇಳಿದರು.ಶಿಕ್ಷಕ ಡಿ ಎಸ್ ಬಗಲಿ ಪ್ರಾಸ್ತಾವಿಕವಾಗಿ ಮಾತನಾಡಿ, ಮಕ್ಕಳಲ್ಲಿ ಪರಿಸರದ ಅರಿವು ಮೂಡಿಸುವ ಹಾಗೂ ನೈಸರ್ಗಿಕ ಸಂಪನ್ಮೂಲಗಳನ್ನು ಮಿತವಾಗಿ ಬಳಸಿ, ಪರಿಸರ ಸಂರಕ್ಷಿಸುವ ಹಾಗೂ ಅರಿವು ಮೂಡಿಸುವ ಉದ್ದೇಶದಿಂದ ಸರ್ಕಾರ ಇಕೋ ಕ್ಲಬ್ ಕಾರ್ಯಕ್ರಮ ರೂಪಿಸಿದೆ.ಈ ಕಾರ್ಯಕ್ರಮದಡಿಯಲ್ಲಿ ನಮ್ಮ ಶಾಲೆಯ ಮಕ್ಕಳಿಗೆ ರಸಪ್ರಶ್ನೆ, ಚಿತ್ರಕಲೆ, ಪ್ರಬಂಧ ಸ್ಪರ್ಧೆ ಇನ್ನೂ ಅನೇಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ ಎಂದು…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮಹಾನ್ ಸಂಶೋಧಕ, ಮಹಾಮಾರ್ಗದ ರೂವಾರಿ ಡಾ. ಎಂ. ಎಂ. ಕಲಬುರ್ಗಿಯವರು ಸಂಶೋಧನೆಯ ಜೊತೆಗೆ ಸೃಜನ ಸಾಹಿತ್ಯ ಕ್ಷೇತ್ರಕ್ಕೂ ಮಹತ್ತರವಾದ ಕೊಡುಗೆ ನೀಡಿದ್ದಾರೆ. ಇವರ ಸೃಜನಶೀಲ ಬರಹಗಳ ಸಾಲಿಗೆ ಸೇರುವ ಕೆಟ್ಟಿತು ಕಲ್ಯಾಣ ಎಂಬ ನಾಟಕ ಕೂಡಾ ಒಂದು. ಇದರಲ್ಲಿ ಬಸವಣ್ಣನವರ ಜೀವನ ಮೂರು ಸಂಸ್ಕೃತಿಗಳಲ್ಲಿ ಸಾಗಿ ಬಂದಿದೆ. ಬಾಗೇವಾಡಿಯ ಅಗ್ರಹಾರ ಸಂಸ್ಕೃತಿ, ಕೂಡಲಸಂಗಮದ ದೇವಾಲಯ ಸಂಸ್ಕೃತಿ ಮತ್ತು ಕಲ್ಯಾಣದ ರಾಜ ಸಂಸ್ಕೃತಿ. ಇಲ್ಲೆಲ್ಲ ಆತ ಸ್ಥಾವರದಿಂದ ಜಂಗಮದತ್ತ, ಸ್ಥಾವರವನ್ನು ಜಂಗಮಗೊಳಿಸುತ್ತ ಸಾಗಿಬರುವುದರ ಜೊತೆಗೆ ಮಾನವತೆಯ ಸಂದೇಶ ಸಾರುತ್ತದೆ ಎಂದು ಚಡಚಣದ ಸಂಗಮೇಶ್ವರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಎಂ. ಎಸ್. ಮಾಗಣಗೇರಿ ಹೇಳಿದರು.ನಗರದ ರಾಧಾಕೃಷ್ಣನ್ ನಗರದ ಶಿವಬಸವ ಯೋಗಾಶ್ರಮದಲ್ಲ್ಲಿ ಓದುಗರ ಚಾವಡಿ, ರಾಜೇಂದ್ರ ಕುಮಾರ್ ಬಿರಾದಾರ ಸಾಂಸ್ಕೃತಿಕ ವೇದಿಕೆಯಿಂದ ಹಮ್ಮಿಕೊಂಡ ಮಾಸಿಕ ಪುಸ್ತಕ ಪರಿಚಯ ಕಾರ್ಯಕ್ರಮದಲ್ಲಿ ಡಾ. ಎಂ. ಎಂ. ಕಲಬುರ್ಗಿಯವರ ಕೆಟ್ಟಿತ್ತು ಕಲ್ಯಾಣ ಕೃತಿ ಪರಿಚಯಿಸುತ್ತಾ ಅವರು ಮಾತನಾಡಿದರು.ಶರಣ ಪರಂಪರೆಯ ಬಗ್ಗೆ ಅಪಾರ…
ಉದಯರಶ್ಮಿ ದಿನಪತ್ರಿಕೆ ಕೆಂಭಾವಿ: ಪಟ್ಟಣದ ಹಿಲ್ ಟಾಪ್ ಕಾಲೋನಿಯಲ್ಲಿ ಶನಿವಾರ ನಡೆದ ಕೆಪಿಎಲ್ ಕ್ರಿಕೆಟ್ ಪಂದ್ಯಾವಳಿಗೆ ಮಾಜಿ ಜಿಪಂ ಅಧ್ಯಕ್ಷ ಸಿದ್ದನಗೌಡ ಪಾಟೀಲ ಉದ್ಘಾಟಿಸಿ ಮಾತನಾಡಿದ ಅವರು, ಯುವಕರು ಹೆಚ್ಚು ಹೆಚ್ಚು ಕ್ರೀಡಾಕೂಟಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಾಗ ದೈಹಿಕ ಮತ್ತು ಮಾನಸಿಕ ಆರೋಗ್ಯ ಬಲಗೊಳ್ಳುತ್ತದೆ ಎಂದರು.ಕ್ರಿಕೆಟ್ ಪಂದ್ಯಕ್ಕೆ ಟಾಸ್ಕ್ ಮೂಲಕ ಚಾಲನೆ ನೀಡಿ ಮಾತನಾಡಿದ ಮಹಿಪಾಲರೆಡ್ಡಿ ಡಿಗ್ಗಾವಿ ಆಟೋಟಗಳಲ್ಲಿ ಪಾಲ್ಗೊಳ್ಳುವುದರಿಂದ ಆರೋಗ್ಯ ವೃದ್ಧಿಯಾಗಿ ಉತ್ತಮ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಸೋಲು ಗೆಲುವು ಲೆಕ್ಕಿಸದೆ ಮುಂದುವರೆದರೆ ಸಹಬಾಳ್ವೆಗೆ ಸಹಕಾರಿಯಾಗುತ್ತದೆ ಎಂದರು.ಪ್ರಮುಖರಾದಪುರಸಭೆ ಸದಸ್ಯ ರಹೀಮಾನ ಪಟೀಲ್ ಯಲಗೋಡ, ರಾಘವೇಂದ್ರ ಕವಲ್ದಾರ, ಪತ್ರಕರ್ತ ಬಸನಗೌಡ ಪಾಟೀಲ ಪತ್ತೇಪೂರ, ರಂಗಪ್ಪ ವಡ್ಡರ, ಸಚಿನ್ ದೊರೆ, ಹನೀಫ್ ಸಾಸನೂರ, ಶಶಿಕುಮಾರ್ ಮ್ಯಾಗೇರಿ, ಶಿವು ಮಲ್ಲಿಬಾವಿ, ಸೋಹೆಲ್ ಸಾಸನೂರ ಕ್ರೀಡಾಪಟುಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬಬಲೇಶ್ವರ ಮತ್ತು ತಿಕೋಟಾ ತಾಲೂಕುಗಳ ಕಂದಾಯ ದಾಖಲೆಗಳ ಗಣಕೀಕರಣ ಕೇಂದ್ರವನ್ನು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಉದ್ಘಾಟಿಸಿದರು.ವಿಜಯಪುರ ನಗರದ ಹಳೆಯ ತಹಸೀಲ್ದಾರ್ ಕಚೇರಿಯಲ್ಲಿನೂತನವಾಗಿ ಪ್ರಾರಂಭಿಸಲಾಗಿರುವ ಈ ಕೇಂದ್ರವನ್ನು ಸಚಿವರು ಇಂದು ಶನಿವಾರ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಕೆ.ಎಸ್.ಡಿ.ಎಲ್ ಅಧ್ಯಕ್ಷ ಮತ್ತು ಶಾಸಕ ಸಿ. ಎಸ್. ನಾಡಗೌಡ, ಶಾಸಕ ವಿಠ್ಠಲ ಧೋ. ಕಟಕದೊಂಡ, ಜಿಲ್ಲಾಧಿಕಾರಿ ಟಿ. ಭೂಬಾಲನ್, ಜಿ. ಪಂ. ಸಿಇಓ ರಿಷಿ ಆನಂದ, ಅಪರ ಜಿಲ್ಲಾಧಿಕಾರಿ ಸೋಮನಿಂಗ ಗೆಣ್ಣೂರ, ಬಬಲೇಶ್ವರ ತಹಸೀಲ್ದಾರ ಸಂತೋಷ ಮ್ಯಾಗೇರಿ, ತಿಕೋಟಾ ತಹಸೀಲ್ದಾರ ಸುರೇಶ ಚವಲರ ಮುಂತಾದವರು ಉಪಸ್ಥಿತರಿದ್ದರು.ಭೂ ಸುರಕ್ಷಾ ಯೋಜನೆಯಡಿ ಹಳೆಯ ದಾಖಲೆಗಳನ್ನು ಡಿಜಟಲೀಕರಣ ಮಾಡಲಾಗುತ್ತಿದೆ. ಈ ಕೇಂದ್ರದಲ್ಲಿ ಬಬಲೇಶ್ವರ ಮತ್ತು ತಿಕೋಟಾ ಎರಡೂ ತಾಲೂಕುಗಳ ಹಳೆಯ ಎಲ್ಲ ಭೂ ದಾಖಲೆಗಳ ಗಣಕೀಕರಣ ನಡೆಯಲಿದ್ದು, ಇದರಿಂದ ದಾಖಲೆಗಳ ಸುರಕ್ಷತೆ ಮತ್ತು ಸುಲಭವಾಗಿ ಲಭ್ಯತೆ ಸಾಧ್ಯವಾಗಲಿದೆ.
ಇಟ್ಟಂಗಿಹಾಳ ಬಳಿ ಮೈಸೂರು ಸ್ಯಾಂಡಲ್ ಸೋಪ್ ಉತ್ಪಾದನೆ ಘಟಕ ಸ್ಥಾಪಿಸಲು 10 ಎಕರೆ ಜಮೀನು ನೀಡುವುದಾಗಿ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಭರವಸೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಹೊರವಲಯದ ಇಟ್ಟಂಗಿಹಾಳ ಬಳಿ ಮೈಸೂರು ಸ್ಯಾಂಡಲ್ ಸೋಪ್ ಉತ್ಪಾದನೆ ಘಟಕ ಸ್ಥಾಪಿಸಲು 10 ಎಕರೆ ಜಮೀನು ನೀಡುವುದಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಘೋಷಿಸಿದ್ದಾರೆ.ಶನಿವಾರ ನಗರದಲ್ಲಿ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ ಆಯೋಜಿಸಿರುವ ಮೈಸೂರು ಸ್ಯಾಂಡಲ್ ಸಾಬೂನು ಮೇಳ ಉದ್ಘಾಟಿಸಿ ಅವರು ಮಾತನಾಡಿದರು.ಕಾರ್ಯಕ್ರಮದ ಪ್ರಾರಂಭದಲ್ಲಿ ಮಾತನಾಡಿದ ನಾಗಠಾಣ ಶಾಸಕ ವಿಠ್ಠಲ ಧೋ. ಕಟಕದೊಂಡ, ಸಚಿವ ಎಂ.ಬಿ. ಪಾಟೀಲ ಅವರು ಕೈಗಾರಿಕೆ ಸಚಿವರಾಗಿ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಸಾಕಷ್ಟು ಒತ್ತು ನೀಡಿದ್ದು, ನಷ್ಟದಲ್ಲಿದ್ದ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತವನ್ನು ಲಾಭಕ್ಕೆ ತಂದಿದ್ದಾರೆ. ಮುಂದಿನ ಸಂಕ್ರಾಂತಿಯೊಳಗೆ ವಿಜಯಪುರ ಜಿಲ್ಲೆಯಲ್ಲಿಯೇ ಒಂದು ಸಾಬೂನು ಕಾರ್ಖಾನೆ ಘಟಕ ಪ್ರಾರಂಭಿಸಬೇಕು. ಇದರಿಂದ ನೂರಾರು ಯುವಕರಿಗೆ…
ಲೇಖನ- ಬಸವರಾಜ ನೀಲವಾಣಿಪತ್ರಕರ್ತರು ಚಡಚಣ ಉದಯರಶ್ಮಿ ದಿನಪತ್ರಿಕೆ ಗುರುದೇವ ರಾನಡೆಯವರ ಆಧ್ಯಾತ್ಮ ಗುರುಗಳೆಂದರೆ ಉಮದಿ ಗ್ರಾಮದ ಬಾವುಸಾಹೇಬ ಮಹಾ ರಾಜರು. ಬಾವುಸಾಹೇಬ ಮಹಾ ರಾಜರ ಗುರುಗಳೇ ದೇವರ ನಿಂಬರಗಿ ಗ್ರಾಮದ ಗುರುಲಿಂಗಜಂಗಮ ಮಹಾರಾಜರು. ಈ ಮಹಾರಾಜರ ನಿಜವಾದ ಹೆಸರು ನಾಗಪ್ಪ. ಅವರಿಗೆ ಗುರು ಲಿಂಜಂಗಮ ಮಹಾರಾಜರು ಎಂತಲೂ ಕರೆಯುತ್ತಾರೆ.ಶ್ರೀ ನಾರಾಯಣರಾವ್ ಭೌಸಾಹೇಬ್ (ಗುರುಲಿಂಗಜಂಗಂ) ಅವರು ನಿಂಬರಗಿ ಮಹಾರಾಜ್ ಎಂದು ಜನಪ್ರಿಯರಾಗಿದ್ದಾರೆ , “ನಿಂಬರಗಿ ಸಂಪ್ರದಾಯ” ಎಂದು ಕರೆಯಲ್ಪಡುವ ಆಧ್ಯಾತ್ಮಿಕ ಸಂಪ್ರದಾಯದ ಈ ಪಂಥದ ಸಂಸ್ಥಾಪಕ ಸಂತರು.ಶ್ರೀ ನಾರಾಯಣರಾವ್ ಭೌಸಾಹೇಬ್ (ಗುರುಲಿಂಗಜಂಗಂ) ಅವರು ನಿಂಬರಗಿ ಮಹಾರಾಜ್ ಎಂದು ಜನಪ್ರಿಯರಾಗಿದ್ದಾರೆ, “ನಿಂಬರಗಿ ಸಂಪ್ರದಾಯ” ಎಂದು ಕರೆಯಲ್ಪಡುವ ಆಧ್ಯಾತ್ಮಿಕ ಸಂಪ್ರದಾಯದ ಈ ಪಂಥದ ಸಂಸ್ಥಾಪಕ ಸಂತರು.ಗುರುಲಿಂಗಜಂಗಂ ಮಹಾರಾಜರು (ನಿಂಬರಗಿಯ ಸಂತ) (1712* ಸಲುವಾಗಿ – 1807 ಸಲುವಾಗಿ) ಸೊಲ್ಲಾಪುರದಲ್ಲಿ (ಮಹಾರಾಷ್ಟ್ರ) ಜನಿಸಿದರು. ಆದರೆ ತಮ್ಮ ಜೀವನವನ್ನು ಬಿಜಾಪುರ ಜಿಲ್ಲೆಯ (ಕರ್ನಾಟಕ) ದೇವರ ನಿಂಬರಗಿಯಲ್ಲಿ ಕಳೆದರು. ಅವರು ಲಿಂಗಾಯತ ಜಾತಿಯ ನೀಲವಾಣಿ ಉಪಜಾತಿಗೆ ಸೇರಿದವರು. ಅವನ ಉಪನಾಮ ಮಿಸಲ್ಕರ್. ನಾರಾಯಣ ಅಥವಾ ನಾಗಪ್ಪ ಅವರ ಜಾತಕ…
ಅಪ್ರತಿಮ ಮಹಿಳೆ ಲೇಖನ- ಸುಧಾ ಪಾಟೀಲವಿಶ್ವಸ್ಥರುಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರ – ಪುಣೆ ಉದಯರಶ್ಮಿ ದಿನಪತ್ರಿಕೆ ಬಚೇಂದ್ರಿ ಪಾಲ್ 1954 ರಲ್ಲಿ ಗದ್ವಾಲನ ನಕೋರಿ ಎಂಬ ಗ್ರಾಮದಲ್ಲಿ ಅತ್ಯಂತ ಸೀಮಿತ ಆರ್ಥಿಕ ಆದಾಯದ ಸ್ಥಿತಿಯ ಕುಟುಂಬದಲ್ಲಿ ಜನಿಸಿದರು. ಅವರ ತಂದೆ ಕಿಶನ್ ಸಿಂಗ್ ಪಾಲ್ ಸಣ್ಣ ಪ್ರಮಾಣದ ವ್ಯಾಪಾರಿಯಾಗಿದ್ದರು. ಇವರು ಗೋದಿಹಿಟ್ಟು ಮತ್ತು ಅಕ್ಕಿಯಂತಹ ದಿನಸಿ ಪದಾರ್ಥಗಳನ್ನು ಭಾರತದಿಂದ ಟಿಬೆಟ್ ಕಡೆಗೆ ಹೇಸರಗತ್ತೆ ಮತ್ತು ಮೇಕೆಗಳ ಮೇಲೆ ಸಾಗಿಸುತ್ತಿದ್ದರು. ಅಂತಿಮವಾಗಿ ಅವರು ಉತ್ತರ ಕಾಶಿಯಲ್ಲಿ ನೆಲೆಸಿದರು. ಅಲ್ಲಿ ಅವರಿಗೆ ವಿವಾಹವಾಗಿ ಐವರು ಮಕ್ಕಳಾದರು. ಇವರಲ್ಲಿ ಬಚೇಂದ್ರಿ ಪಾಲ್ ಮೂರನೆಯವರು. ಬಾಲ್ಯದಲ್ಲಿ ಬಚೇಂದ್ರಿ ಪಾಲ್ ಬಹಳ ಚುರುಕಿನಿಂದ ಇರುತ್ತಿದ್ದರು. ಅವರು ಶಾಲಾ ವ್ಯಾಸಂಗ ಹಾಗೂ ಕ್ರೀಡೆಗಳಲ್ಲಿ ಮುಂದಿದ್ದರು. ಆದರೂ ಕೆಲವೊಮ್ಮೆ ಸಣ್ಣಪುಟ್ಟ ತರಲೆ ಕೃತ್ಯಗಳಿಗಾಗಿ ಒಂಟಿಯಾಗಿರುತ್ತಿದ್ದರಲ್ಲದೆ ದಂಡನೆಗೆ ಗುರಿಯಾಗುತ್ತಿದ್ದರು.ಬಚೇಂದ್ರಿ ಪಾಲ್ ತಮ್ಮ 12ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಪರ್ವತಾರೋಹಣ ಮಾಡಿದರು ತಮ್ಮ ಸಹಪಾಠಿಗಳನ್ನೇ ಶಾಲೆಯಿಂದ ವಿಹಾರ ಪ್ರವಾಸ ಹೋಗಿದ್ದಾಗ 1323 ಅಡಿ…
ವಾರಣಾಸಿಯಲ್ಲಿ ರಾಷ್ಟ್ರಮಟ್ಟದ ’ಯುಗದರ್ಶಿನಿ ರತ್ನ’ ಪ್ರಶಸ್ತಿ ಪ್ರಧಾನ ಸಮಾರಂಭ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಾರಣಾಸಿಯಲ್ಲಿ ರಾಷ್ಟ್ರಮಟ್ಟದ ’ಯುಗದರ್ಶಿನಿ ರತ್ನ’ ಪ್ರಶಸ್ತಿ ಪ್ರಧಾನ ಸಮಾರಂಭವು ಇತ್ತೀಚಿಗೆ ಜರುಗಿತು.ಈ ಸಂದರ್ಭದಲ್ಲಿ ನಗರದ ಪಂಚಾಯತ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಸುಧಾ ರಬಿನಾಳ, ನ್ಯಾಯವಾದಿ ಶ್ರೀಶೈಲ ಗಬ್ಬೂರ ಇವರಿಗೆ ಕಾಶಿಯಲ್ಲಿ ರಾಷ್ಟ್ರಮಟ್ಟದ ’ಯುಗದರ್ಶಿನಿ ರತ್ನ’ ಪ್ರಶಸ್ತಿ ಪ್ರಧಾನ ಮಾಡಲಾಯಿತು.ವಾರಣಾಸಿ ಬನಾರಸ (ಕಾಶಿ) ಹಿಂದೂ ವಿಶ್ವವಿದ್ಯಾಲಯದಲ್ಲಿ ಅಖಿಲ ಭಾರತ ಮಹಿಳಾ ಸಾಹಿತ್ಯ ಸಮ್ಮೇಳನದಲ್ಲಿ ಕೇಂದ್ರ ಪಶು ಸಂಗೋಪನ ಸಚಿವೆ ರೇಣುದೇವಿ ಹಾಗೂ ಇದರ ಮುಖ್ಯಸ್ಥೆ, ಸಾಹಿತಿ ಡಾ.ಸರಸ್ವತಿ ಚಿಮ್ಮಲಗಿ, ಮಾಜಿ ಸಚಿವೆ ಲೀಲಾದೇವಿ ಆರ್. ಪ್ರಸಾದ, ಚಲನಚಿತ್ರ ನಟಿ ಪ್ರೇಮಾ, ಚೇತನಾ ಪೂಜಾರಿ, ವಿಜಯ ಪೂಜಾರಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.ಪ್ರಶಸ್ತಿ ಪುರಸ್ಕೃತರಿಗೆ ಮಹಾನಗರ ಪಾಲಿಕೆ ಸದಸ್ಯ ಕುಮಾರ ಗಡಗಿ, ವೀರಶೈವ ಲಿಂಗಾಯತ ಸೇವಾ ಟ್ರಸ್ಟ್ ಉಪಾಧ್ಯಕ್ಷ ಚನಬಸಯ್ಯ ಹಿರೇಮಠ, ಈಶ್ವರ ಹೂಗಾರ, ಸಾಯಿಬಣ್ಣ ಕಮತಗಿ, ಆರ್.ಎಸ್. ವಾಲೀಕಾರ, ಎಂ.ಐ.ಬಿರಾದಾರ, ಸಿದ್ದು ಇಜೇರಿ, ಪ್ರದೀಮ ಮಸ್ಕಿನ, ಬಳ್ಳೂರ ಸರ್ ಹಾಗೂ…
