Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ವಿದ್ಯಾರ್ಥಿಯೊಳಗೆ ಹುದುಗಿದ ಪ್ರತಿಭೆಯನ್ನು ಹೊರತೆಗೆಯುವುದೇ ಗುರುವಿನ ಧ್ಯೇಯವಾಗಿರಬೇಕು. ಹಾಗಾದಲ್ಲಿ ಮಾತ್ರ ಅದ್ಭುತ ಪ್ರತಿಭೆಗಳು ಹೊರಬರಲು ಸಾಧ್ಯವಾಗುತ್ತದೆ” ಎಂದು ವಿಜಯಪುರ ಷಣ್ಮುಖಾರೂಢ ಮಠದ ಅಭಿನವ ಸಿದ್ಧಾರೂಢ ಸ್ವಾಮೀಜಿ ಹೇಳಿದರು.ತಾಲ್ಲೂಕಿನ ಮುಳವಾಡ ಗ್ರಾಮದ ಶ್ರೀ ಮಲ್ಲಿಕಾರ್ಜುನ ಪ್ರೌಢ ಶಾಲೆಯ ೧೯೯೨-೯೫ನೇ ಸಾಲಿನ ವಿದ್ಯಾರ್ಥಿಗಳು ಶನಿವಾರ ಹಮ್ಮಿಕೊಂಡ ಗುರುವಂದನಾ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ, “ಮುಳವಾಡ ಗ್ರಾಮ ಸಾಹಿತಿಗಳ ತವರೂರಾಗಿದೆ. ಪ.ಗು.ಸಿದ್ದಾಪೂರ, ಜಂಬುನಾಥ ಕಂಚ್ಯಾಣಿ, ಕಾಡಣ್ಣ ಹೊಸಟ್ಟಿಯವರಂತಹ ಸಾಹಿತಿಗಳನ್ನು ಕೊಟ್ಟ ಶಾಲೆಯ ವಿದ್ಯಾರ್ಥಿಗಳು ಹಲವು ಸಾಧನೆ ಮಾಡಿದ್ದು ಹೆಮ್ಮೆ ಎಣಿಸುತ್ತದೆ” ಎಂದರು.ಶಾಲಾ ವಿದ್ಯಾರ್ಥಿಗಳಿಂದ ಗುರುವಂದನೆ ಸ್ವೀಕರಿಸಿದ ನಿವೃತ್ತ ಶಿಕ್ಷಕರಾದ ಕಾಡಣ್ಣ ಹೊಸಟ್ಟಿ, ಜಂಬುನಾಥ ಕಂಚ್ಯಾಣಿ, ಪ.ಗು.ಸಿದ್ದಾಪೂರ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, “ಮೊಬೈಲ್ ಬಳಕೆ ಅಪಾಯಕಾರಿ, ಗುರು ಶಿಷ್ಯರ ನಡುವಿ ಅವಿನಾಭಾವ ಸಂಬಂಧ ಇರಬೇಕು. ಶಿಕ್ಷಕರು ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕಾರವನ್ನು ಕೊಡಬೇಕು” ಎಂಬ ಕಿವಿಮಾತು ಹೇಳಿದರು.ಕಾರ್ಯಕ್ರಮದಲ್ಲಿ ಗುರುಗಳಾದ ಜೆ ಎಸ್ ಕಂಚ್ಯಾಣಿ, ಕೆ ಜಿ ಹೊಸಟ್ಟಿ, ಪ.ಗು.ಸಿದ್ದಾಪೂರ, ಅನಸೂಯಾ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ೧೨ನೇ ಶತಮಾನದ ಬಸವಾದಿ ಶರಣರ ವಚನಗಳು ಪ್ರಪಂಚಕ್ಕೆ ಅಪೂರ್ವ ಕಾಣಿಕೆ ನೀಡಿವೆ. ಶರಣರ ಕಾಯಕ, ದಾಸೋಹ, ಸಮಾನತೆ, ಪರಿಶುದ್ಧತೆ ಎಲ್ಲವೂ ಶರಣರ ವಚನಗಳಲ್ಲಿ ಅಡಕವಾಗಿವೆ ಎಂದು ಪ್ರೊ. ಎನ್.ಜಿ. ಕರೂರ ಹೇಳಿದರು.ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ಇಲ್ಲಿನ ವೀರಶೈವ ಸಭಾಭವನದಲ್ಲಿ ಏರ್ಪಡಿಸಿದ್ದ ಶ್ರೀ ಸಿದ್ರಾಮಪ್ಪ ಚ. ಉಪ್ಪಿನ ಕೇಂದ್ರ ಸಮಿತಿಯ ಉಪಾಧ್ಯಕ್ಷರಾಗಿ ಆಯ್ಕೆಯಾದ ಪ್ರಯುಕ್ತ ಅಭಿನಂದನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಬಸವಾದಿ ತತ್ವ ಸಿದ್ಧಾಂತ ನಾವೆಲ್ಲ ಒಂದಾಗಿ ಅನುಸರಿಸಿ ಬಾಳಬೇಕು. ಅಂತರಂಗ, ಬಹಿರಂಗ ಶುದ್ಧವಾಗಿರಬೇಕು. ಇಂದಿನ ಯುವಕ-ಯುವತಿಯರು ಸಮಯಪಾಲನೆ ಸ್ವಚ್ಚತೆ ಸತ್ಯಶುದ್ಧ ಕಾಯಕ, ನಮ್ಮ ನಡೆ, ನುಡಿ ಮಾದರಿಯಾದಾಗ ಸಮಾಜದಲ್ಲಿ ನಮ್ಮ ಬದುಕಿಗೆ ಅರ್ಥಬರುತ್ತದೆ. ಭಾಗಿದ ತಲೆ ಮುಗಿದ ಕೈ ಭಗವಂತನಿಗೆ ಪ್ರಿಯ. ಕಾಯಕ, ದಾಸೋಹದಿಂದ ಶರಣ ಜೀವಿಗಳಾಗಿ ಬದುಕಿ ಸಮಾಜದ ಒಳತಿಗಾಗಿ ನಾವೆಲ್ಲ ಅಳವಡಿಸಿಕೊಳ್ಳಬೇಕಾಗಿದೆ ಎಂದರು.ಕೇಂದ್ರ ಸಮಿತಿಯ ಉಪಾಧ್ಯಕ್ಷ ಸಿದ್ರಾಮಪ್ಪ ಚ. ಉಪ್ಪಿನ ಸನ್ಮಾನ ಸ್ವೀಕರಿಸಿ ಮಾತನಾಡುತ್ತ, ನಿಯಮ, ನೀತಿ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬಡವಿದ್ಯಾರ್ಥಿಗಳಿಗೆ ವಿದ್ಯಾದಾನ, ಅನ್ನದಾನ ಮಾಡಿ ಸಮಾಜಮುಖಿ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಉನ್ನತಮಟ್ಟದ ಸಂಸ್ಕಾರಯುತ ಶಿಕ್ಷಣವನ್ನು ನೀಡುವಲ್ಲಿ ಜಿದ್ದಿಯವರ ಕಾರ್ಯ ಮೆಚ್ಚಲೇಬೇಕು ಎಂದು ಸಿಂದಗಿಯ ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು.ವಿಜಯಪುರದಲ್ಲಿ ಸೋಮವಾರ ಮಾಜಿ ವಿಧಾನಪರಿಷತ್ ಸದಸ್ಯ, ಶ್ರೀ ಕಾಳಿದಾಸ ಶಿಕ್ಷಣಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ದಿ. ಎಸ್. ಎ. ಜಿದ್ದಿಯ ಪ್ರತಿಮೆ ಅನಾವರಣ ಹಾಗೂ ಪ್ರಥಮ ಪುಣ್ಯಸ್ಮರಣೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡುತ್ತ, ಇಂದಿನ ಜೀವನದಲ್ಲಿ ಶಿಕ್ಷಣ ಒಂದು ವ್ಯಾಪಾರಿಕರಣವಾಗುತ್ತ ಹೊರಟಿದೆ ಎಂದು ಖೇದ ವ್ಯಕ್ತಪಡಿಸಿದ ಅವರು ಬಡವರಿಗಾಗಿಯೆ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಬಡ ವಿದ್ಯಾರ್ಥಿಗಳಿಗೂ ವಿದ್ಯಾರ್ಜನೆ ಬದುಕನ್ನು ಕಲ್ಪಿಸಿಕೊಟ್ಟು ಪ್ರೇರಣಾಶಕ್ತಿಯಾಗಿ ಜಿದ್ದಿಯವರು ನಡೆದುಕೊಂಡರು. ಸಮಾಜಕ್ಕಾಗಿ ದುಡಿಯುವ ವ್ಯಕ್ತಿ ಅಜರಾಮರವಾಗಿ ಇರುತ್ತಾರೆ ಎನ್ನುವುದಕ್ಕೆ ಜಿದ್ದಿಯರನ್ನೆ ಕಾಣಬೇಕು ಎಂದರು.ಉತ್ತಮ ಸಮಾಜಕ್ಕೆ ಕೊಡುಗೆಯನ್ನು ನೀಡುವಲ್ಲಿ ಸಂಸ್ಕಾರಯುತ ಶಿಕ್ಷಣ ನೀಡುವಲ್ಲಿ ಜಿದ್ದಿಯವರ ಕಾರ್ಯ ಅಪಾರ ಎಂದು ರೂಗಿ ಅಡವಿ ಸಿದ್ದೇಶ್ವರ ಆಶ್ರಮದ ಶ್ರೀ ನಿತ್ಯಾನಂದ ಮಹಾಸ್ವಾಮಿಗಳು ನುಡಿದರು.ನುಡಿನಮನ ಕಾರ್ಯಕ್ರಮದಲ್ಲಿ ಡಾ. ಕಂಠೀರವ…

Read More

ಲೇಖನ- ವೀಣಾ ಹೇಮಂತ್ ಗೌಡ ಪಾಟೀಲ್ಮುಂಡರಗಿಗದಗ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಗುಲ್ಬರ್ಗದ ಕೊಳಗೇರಿಯಲ್ಲಿ ತರಕಾರಿ ಮಾರುತ್ತಿದ್ದ ಹೆಣ್ಣುಮಗಳನ್ನು ಆಕೆಯ ಗಂಡನೇ ಆ ದಿನ ರಾತ್ರಿ ಆಕೆಯ ಕೊರಳಿನ ತಾಳಿಯನ್ನು ಕೊಡಲು ಕೇಳಿದ. ಇದ್ದುದು ಅದೊಂದೇ ಜೊತೆ ಚಿನ್ನದ ತಾಳಿ ಬೊಟ್ಟು. ಸಹಜವಾಗಿಯೇ ಸಂಪ್ರದಾಯಸ್ಥ ಮನಸ್ಥಿತಿಯ ಆ ಹೆಣ್ಣು ಮಗಳು ಕೊಂಚ ಹಿಂಜರಿದಾಗ ‘ಗಟ್ಟಿ ಗುಂಡು ಕಲ್ಲಿನಂಗ ನಾನ ಅದೀನಿ… ತಾಳಿ ಬೊಟ್ಟ ಮಾರಿದರೆ ನಿನ್ನ ಮಗಳ ಸಾಲಿ ಫೀಸ್ ಕಟ್ಟಾಕ ಬರ್ತೈತಿ’ ಎಂದು ಹೇಳಿದಾಗ ಮರು ಮಾತಿಲ್ಲದೆ ಕೊರಳ ತಾಳಿಯನ್ನು ಬಿಚ್ಚಿಕೊಟ್ಟ ಆಕೆ ಅರಿಶಿಣದ ಕೊಂಬನ್ನು ಕೊರಳಲ್ಲಿ ಧರಿಸಿದಳು.ಹೀಗೆ ಆಕೆಯಿಂದ ತಾಳಿಯ ಬೊಟ್ಟನ್ನು ಇಸಿದುಕೊಂಡು ಮಾರಿ ಮಗಳ ವೈದ್ಯಕೀಯ ಕಾಲೇಜಿನ ಫೀಸ್ ಕಟ್ಟಿದವರು ಬಾಬುರಾವ್ ದೇಶಮಾನೆ ಮತ್ತು ಆ ವೈದ್ಯಕೀಯ ಪದವಿಯನ್ನು ಪಡೆದು ಸ್ನಾತಕೋತ್ತರ ವೈದ್ಯಕೀಯದಲ್ಲಿ ಕ್ಯಾನ್ಸರ್ ಶಸ್ತ್ರಚಿಕಿತ್ಸಕಳಾದ ಆ ಮಗಳೇ ನಮ್ಮ ಇಂದಿನ ಕಥೆಯ ಸ್ಫೂರ್ತಿ ದೇವತೆ ಡಾ. ವಿಜಯಲಕ್ಷ್ಮಿ ದೇಶಮಾನೆ.ದೇಶಮಾನೆ ಎಂಬುದು ಅವರ ಮನೆತನದ ಅಡ್ಡ ಹೆಸರಲ್ಲ… ಅಂದಿನ…

Read More

ಕರ್ನಾಟಕ ಲಲಿತಕಲಾ ಅಕಾಡೆಮಿಯ ೫೨ ನೇ ವಾರ್ಷಿಕ ಕಲಾ ಪ್ರದರ್ಶನದಲ್ಲಿ ವಿಜಯಪುರದ ಕಲಾವಿದ ರಮೇಶ ಚವ್ಹಾಣ ಅವರ ಕಲಾಕೃತಿಗೆ ಬಹುಮಾನ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ಲಲಿತಕಲಾ ಅಕಾಡೆಮಿಯ ೫೨ ನೇ ವಾರ್ಷಿಕ ಕಲಾ ಪ್ರದರ್ಶನದಲ್ಲಿ ವಿಜಯಪುರದ ಕಲಾವಿದ ರಮೇಶ ಚವ್ಹಾಣ ಅವರ ಕಲಾಕೃತಿಯು ಪ್ರಶಸ್ತಿಗೆ ಆಯ್ಕೆಯಾಗಿದೆ‌.ನವ್ಯ ಕಲೆಯ ಕಲಾವಿದರಾಗಿ ಕಳೆದ ೨೬ ವರ್ಷಗಳಿಂದ ಕಲಾರಚನೆಯಲ್ಲಿ ತೊಡಗಿರುವ ರಮೇಶ ಚವ್ಹಾಣ ಅವರು ದೇಶದ ಪ್ರತಿಷ್ಠಿತ ಕಲಾ ಗ್ಯಾಲರಿಗಳಲ್ಲಿ ತಮ್ಮ ಕಲಾಕೃತಿಗಳ ಪ್ರದರ್ಶನ ಮಾಡಿದ್ದಾರೆ, ಕಲಾಕೃತಿ ರಚನೆಯ ಜೊತೆಯಲ್ಲಿ ಛಾಯಗ್ರಹಣ ಕ್ಷೇತ್ರದಲ್ಲಿಯೂ ಸಹ ತಮ್ಮ ಪ್ರತಿಭೆಯ ಮೂಲಕ ಹಲವಾರು ರಾಜ್ಯ ರಾಷ್ಟ್ರ, ಅಂತರ ರಾಷ್ಟ್ರೀಯ ಪ್ರದರ್ಶನದಲ್ಲಿ ಭಾಗವಹಿಸಿದ್ದಾರೆ. ಈಗ ಕರ್ನಾಟಕ ಲಲಿತಕಲಾ ಅಕಾಡೆಮಿಯ ೫೨ ನೇ ವಾರ್ಷಿಕ ಕಲಾ ಪ್ರದರ್ಶನದಲ್ಲಿ ಛಾಯಾಚಿತ್ರ ವಿಭಾಗದಲ್ಲಿ ಅವರ ಶಿರ್ಷಿಕೆ ರಹಿತ ಛಾಯಾಚಿತ್ರ ಕಲಾಕೃತಿಯು ಪ್ರಶಸ್ತಿಗೆ ಆಯ್ಕೆಯಾಗಿದೆ, ವಿಭಾಗದಲ್ಲಿ ಪ್ರಶಸ್ತಿಗೆ ಆಯ್ಕೆಯಾಗಿದೆ. ಮುಂದಿನ ತಿಂಗಳು ಚಾಮರಾಜ ನಗರ ಜಿಲ್ಲೆಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.ಅಕಾಡೆಮಿಯ ಪ್ರಶಸ್ತಿಗೆ ಆಯ್ಕೆಯಾದ…

Read More

ಉದಯರಶ್ಮಿ ದಿನಪತ್ರಿಕೆ ಕಲಕೇರಿ:ಕಲಕೇರಿ ಗ್ರಾಮದ ಮಲ್ಲಿಕಾರ್ಜುನ ವಿಧ್ಯಾವರ್ಧಕ ಸಂಘದ ಅಡಿಯಲ್ಲಿ ನಡೆಯುತ್ತಿರುವ ಅನುಧಾನಿತ ಶ್ರೀ ಬಸವೇಶ್ವರ ಪದವಿ ಪೂರ್ವ ಕಾಲೇಜಿನ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ದ್ವಿತೀಯ ಪಿಯುಸಿ ವಿಧ್ಯಾರ್ಥಿಗಳಿಗೆ ಶುಭಕೋರುವ ಸಮಾರಂಭ ಮಂಗಳವಾರ ಫೆ ೧೧ ರಂದು ಬೆಳಿಗ್ಗೆ ೧೦ ಘಂಟೆಗೆ ವಿಜಯಪುರ ರಸ್ತೆಯಲ್ಲಿರುವ ಬಸವೇಶ್ವರ ಮಂಗಲ ಭವನದಲ್ಲಿ ನಡೆಯಲಿದೆ.ಕಾರ್ಯಕ್ರಮದ ಸಾನಿಧ್ಯವನ್ನು ಕಲಕೇರಿ ಹಿರೇಮಠದ ಸಿದ್ದರಾಮ ಶಿವಾಚಾರ್ಯರು ವಹಿಸಲಿದ್ದು, ಪ್ರಾಚಾರ್ಯ ಸಿ ಎಸ್ ಹಿರೇಮಠ ಅಧ್ಯಕ್ಷತೆ ವಹಿಸುವರು, ಸಂಸ್ಥೆಯ ಕಾರ್ಯದರ್ಶಿ ಮಲ್ಲಿಕಾರ್ಜುನ ಜೋಗುರ, ಸಂಸ್ಥೆಯ ಅಧ್ಯಕ್ಷ ಶಾಂತಗೌಡ ಪಾಟೀಲ,ನಿರ್ದೇಶಕ ಷಣ್ಮುಕಪ್ಪ ಝಳಕಿ ಗೌರವ ಅಧ್ಯಕ್ಷತೆ ವಹಿಸುವರು, ನಿರ್ದೇಶಕರಾದ ಎಸ್ ಎಂ ಕಡಕೋಳ, ಜಿ ಎಂ ಗುಮಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸುವರು, ಚಿಕ್ಕಸಿಂದಗಿಯ ಕಾಯಕ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ವೇ.ರವಿಸ್ವಾಮಿ ಹತ್ತರಕಿಹಾಳಮಠ ಮುಖ್ಯ ಅಥಿತಿಗಳಾಗಿ ಬಾಗವಹಿಸಿ ವಿಶೇಷ ಉಪನ್ಯಾಸವನ್ನು ನೀಡುವರು. ಸಂಸ್ಥೆಯ ಆಡಳಿತ ಮಂಡಳಿಯ ಸರ್ವ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.ಇದೆ ವೇಳೆ ಸುಮಾರು ೩೫ ವರ್ಷಗಳ ಸೇವೆ ಸಲ್ಲಿಸಿ ನಿವೃತ್ತಿ ಹೊಂದುತ್ತಿರುವ ಸಿ…

Read More

ಉದಯರಶ್ಮಿ ದಿನಪತ್ರಿಕೆ ವರದಿ: ಸಿದ್ರಾಮ ಮಾಳಿಚಡಚಣ: ಸಮೀಪದ ಉಮರಜ ಗ್ರಾಮದಲ್ಲಿ ಶ್ರೀ ರೇವಣಸಿದ್ಧೇಶ್ವರ ಜಾತ್ರೆಯು ಇದೇ ಫೆ.೧೧ ರ ಮಂಗಳವಾರದ ಶ್ರೀ ಶಾಲಿವಾಹನ ಶಕೆ ೧೯೪೬ ಕ್ರೋಧಿನಾಮ ಸಂವತ್ಸರ ಮಾಘಮಾಸ ಶುಕ್ಲಪಕ್ಷ ಚತುರ್ಥಶಿ ತಿಥಿಯಂದು ನೆರವೇರಲಿದೆ. ಜಾತ್ರೆಯಲ್ಲಿ ಘೋಳೇಶ್ವರ ಮಹಾರಾಜರ ನುಡಿಮುತ್ತುಗಳನ್ನು ಕೇಳಲು ರಾಜ್ಯದ ಹಾಗೂ ಮಹಾರಾಷ್ಟ್ರ ಸೇರಿದಂತೆ ನಾನಾ ಭಾಗಗಳಿಂದ ಸುಮಾರು ಲಕ್ಷಾಂತರ ಭಕ್ತ ಸಾಗರವು ಹರಿದು ಬರಲಿದೆ.ಜಾತ್ರೆಯ ಹಿನ್ನಲೆ-೧೨ನೇ ಶತಮಾನದಲ್ಲಿ ಭೀಮಾ ನದಿಯ ದಡದಲ್ಲಿ ರೇವಣಸಿದ್ಧರ ಶಿಷ್ಯನಾದ ತುಕ್ಕಪ್ಪರಾಯನು ದೇವಾಸ್ಥಾನವನ್ನು ಕಟ್ಟಿಸಿದನೆಂದು ತಿಳಿಯಲಾಗಿದೆ. ಗರ್ಭ ಗುಡಿ. ಸುಕನಾಸಿ. ನವರಂಗ. ಸಭಾಮಂಟಪ. ಪ್ರದಕ್ಷಿಣಾ ಪಥ ಮತ್ತು ಚಂದ್ರ ಶಾಲೆಯನ್ನು ಒಳಗೊಂಡ ೫೦ ಅಡಿ ಎತ್ತರವಾದ ಶಿಖರವನ್ನು ಹೊಂದಿದ್ದು. ಚಾಲುಕ್ಯರ ಕಾಲದ ದ್ರಾವಿಡ ಶೈಲಿಯನ್ನು ಹೊಂದುತ್ತಿದೆ. ಬೃಹತ್ ಗಾತ್ರದ ಸಿದ್ಧೇಶ್ವರರ ಲಿಂಗವೂ ಇದೆ.ರೇವಪ್ಪನ ಜನ್ಮದ ರಹಸ್ಯ- ಗಿರಿಜೆಯು ಶಿವಗಣ ಪಾದರೇಣುವಿನಿಂದ ಗೊಂಬೆಯನ್ನು ಮಾಡಲು ಪರಶಿವನು ಆ ಗೊಂಬೆಗೆ ಜೀವ ಕಳೆಯನ್ನು ತುಂಬಿ ರೇಣುಕ ಗಣೇಶ್ವರನನ್ನು ಮಾಡಿದ. ಆತನು ಒಮ್ಮೆ ದೇವ ಸಭೆಯಲ್ಲಿ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ತಾಲ್ಲೂಕಿನ ಜಂಬಗಿ (ಆ)ಗ್ರಾಮ ಪಂಚಾಯತಿಯಲ್ಲಿ ತಾಲ್ಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಬಾಬು ರಾಠೋಡ ಅವರ ಉಪಸ್ಥಿತಿಯಲ್ಲಿ ಜರುಗಿದ ಅಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ‌ ನೂತನ ಅಧ್ಯಕ್ಷರಾಗಿ ಮಹ್ಮದ ಪೈಗಂಬರ ಜಾನೇಸಾಬ ಮುಲ್ಲಾ ಅವರು 13 ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ.ಪ್ರತಿಸ್ಪರ್ಧಿ ಬಸಮ್ಮ ಮುತ್ತಪ್ಪ ನಾಯ್ಕೋಡಿ 5 ಮತ ಪಡೆದುಕೊಂಡರು. ಚುನಾವಣೆಯಲ್ಲಿ ಗ್ರಾಮ ಪಂಚಾಯತ ಸದಸ್ಯರಾದ ಅಂಬಿಕಾ ಕಟಾಯಿ, ಲಕ್ಷ್ಮೀ ಮಸೂತಿ, ರೇಣುಕಾ ಪೂಜಾರಿ, ಸುರೇಸ ತಳವಾರ, ಸಿದ್ದು ನಾಯ್ಯೋಡಿ, ಯಲ್ಲವ್ವ ಭಾವಿಮನಿ, ಶ್ರೀಶೈಲ ತಳವಾರ, ಧರೆಪ್ಪ ಕಡಕೋಳ, ಲಕ್ಷ್ಮೀ ಹಚಡದ, ದಾವಲಸಾಬ ನದಾಫ, ಸಂಗೀತಾ ಅಶೋಕ ಹೊನ್ನಳ್ಳಿ, ಶ್ರೀಶೈಲ ತೊನಶ್ಯಾಳ ಇನ್ನಿತರರು ಉಪಸ್ಥಿತರಿದ್ದರು.

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಮನಗೂಳಿ ಪಟ್ಟಣದ ಉಕ್ಕಲಿ ರಸ್ತೆಯಲ್ಲಿರುವ ಕೆರೆ ಅಭಿವೃದ್ಧಿ, ಪಟ್ಟಣದ ಜನರಿಗೆ ಕುಡಿಯುವ ನೀರು ಪೂರೈಕೆ ಮಾಡಲು ಅಮೃತ ಯೋಜನೆ ೨.೦ ಅಡಿಯಲ್ಲಿ ಅಂದಾಜು ೩,೫೦೦ ನಲ್ಲಿ ಸಂಪರ್ಕ, ಭಜನಾ ಮಂಟಪದ ನವೀಕರಣ, ಅಗಸಿ ದ್ವಾರದ ಕಾಮಗಾರಿ ಸೇರಿದಂತೆ ಪಟ್ಟಣಕ್ಕೆ ಬೇಕಾಗಿರುವ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗಿದೆ. ಈ ಮೂಲಕ ಪಟ್ಟಣವು ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿದೆ ಎಂದು ಜವಳಿ, ಕಬ್ಬು ಮತ್ತು ಸಕ್ಕರೆ, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.ತಾಲೂಕಿನ ಮನಗೂಳಿ ಪಟ್ಟಣದ ವಿಠ್ಠಲ ಮಂದಿರದ ಹತ್ತಿರ ಮನಗೂಳಿ ಪಟ್ಟಣ ಪಂಚಾಯಿತಿಯ ಸನ್ ೨೦೨೩-೨೪ ನೇ ಸಾಲಿನ ಎಸ್.ಎಫ್.ಸಿ ವಿಶೇಷ ಅನುದಾನದಲ್ಲಿ ಅಂದಾಜು ಮೊತ್ತ ೨೦ ಲಕ್ಷ ರೂ.ಯಲ್ಲಿ ಕೈಗೊಂಡಿರುವ ವಿಠ್ಠಲ ಮಂದಿರದ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಭಾನುವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಪಟ್ಟಣದ ಉಕ್ಕಲಿ ರಸ್ತೆಯಲ್ಲಿರುವ ಕೆರೆ ಅಭಿವೃದ್ಧಿ ಮಾಡುವ ಜೊತೆಗೆ ಅಲ್ಲಿ ವಾಯು ವಿಹಾರ ಟ್ರ್ಯಾಕ್, ಮಕ್ಕಳಿಗೆ ಆಟಿಕೆ ಸಾಮಾನುಗಳ ಅಳವಡಿಕೆ,…

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಶ್ರೀಸಿದ್ಧಾರೂಢರ ಮಹಾಪುರಾಣ ಮಂಗಲ ಕಾರ್ಯಕ್ರಮದ ಅಂಗವಾಗಿ ಜೋಡಿ ಪಲ್ಲಕ್ಕಿ ಉತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜರುಗಿತು.ಗ್ರಾಮದ ಶ್ರೀಕಾಶೀ ವಿಶ್ವನಾಥ ಕೈಲಾಸ ಮಂದಿರದಲ್ಲಿ ಹಮ್ಮಿಕೊಂಡ ಸಿದ್ಧಾರೂಢರ ಮಹಾಪುರಾಣ ಮಂಗಲದ ಅಂಗವಾಗಿ ವಾಲಗ, ಕಳಸ,ಕುಂಭ, ಪುರವಂತರ ಸೇವೆಯೊಂದಿಗೆ ಆರಂಭಗೊಂಡ ಪಲ್ಲಕ್ಕಿ ಉತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಚೌಕಿಮಠದ ಅಭಿನವ ಮುರುಗೇಂದ್ರ ಸ್ವಾಮೀಜಿ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು.ಕಾರ್ಯಕ್ರಮದಲ್ಲಿ ಪುರಾಣಿಕ ರಮೇಶ ಶರಣರು, ನಿಂಗಣ್ಣ ಶರಣರು, ಶಿವಪ್ಪ ತಾಳಿಕೋಟಿ, ಗುರಣ್ಣ ಚಾಂದಕವಟೆ, ನಿಂಗಣ್ಣ ಸಜ್ಜನ, ಚನ್ನಪ್ಪ ಭದ್ರಗೊಂಡ, ಚಿದಾನಂದ ನಾಶೀ, ಭೀಮನಗೌಡ ಹಳವಣ್ಣಿ, ಬಸವರಾಜ ಸುಂಬಡ, ಚನ್ನಪ್ಪಗೌಡ ಬಿರಾದಾರ, ಅಶೋಕ ಹುಣಸಗಿ, ಸಂತೋಷ ಯತ್ನಾಳ, ಮಾಂತೇಶ ಜಂಬುಗೋಳ, ಎಂ.ಡಿ.ಮನಹಳ್ಳಿ , ರಾಮು ಯತ್ನಾಳ ಸೇರಿದಂತೆ ಮಹಿಳೆಯರು, ಮಕ್ಕಳು ಇದ್ದರು.

Read More