ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಸೇವೆಯಿಂದ ನಿವೃತ್ತನಾದರೂ ಕೂಡಾ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡುವ ಕೆಲಸವನ್ನು ಮಾಡುತ್ತೇನೆ ಸರ್ಕಾರಿ ಶಾಲೆಯ ಮಕ್ಕಳ ಏಳಿಗೆಗಾಗಿ ಫಲಾಪೇಕ್ಷೆ ಬಯಸದೇ ಶ್ರಮಿಸುತ್ತೇನೆ ಎಂದು ನಿವೃತ್ತ ಶಿಕ್ಷಕ ಎಮ್.ಎಚ್. ಖಾದ್ರಿ ಹೇಳಿದರು.
ತಾಲ್ಲೂಕಿನ ಪಡಗಾನೂರ ಎಲ್ ಟಿ ಶಾಲೆಯಲ್ಲಿ ಶುಕ್ರವಾರ ಜರುಗಿದ ಬೀಳ್ಕೊಡುವ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ನಾನು ಸೇವೆ ಸಲ್ಲಿಸಿದ ಎಲ್ಲ ಶಾಲೆಗಳಲ್ಲಿ ಅತ್ಯುತ್ತಮವಾಗಿ ಸೇವೆ ಸಲ್ಲಿಸಿದ ಸಂತೃಪ್ತಿ ನನಗಿದೆ ಎಂದರು.
ತಾಲ್ಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಎ.ಎಚ್.ವಾಲೀಕಾರ ಮಾತನಾಡಿ, ಎಮ್.ಎಚ್.ಖಾದ್ರಿ ಶಿಕ್ಷಕರ ಆದರ್ಶಮಯ ವ್ಯಕ್ತಿತ್ವವು ಎಲ್ಲರಿಗೂ ಮಾದರಿಯಾಗಿದೆ. ಅವರ ನಿವೃತ್ತ ಜೀವನ ಸುಖಕರವಾಗಿರಲಿ ಎಂದು ಶುಭ ಹಾರೈಸಿದರು.
ತಾಲ್ಲೂಕು ಕಸಾಪ ಅಧ್ಯಕ್ಷ ಜಿ.ಪಿ.ಬಿರಾದಾರ, ವಿವಿಧ ಸಮುದಾಯಗಳ ಪ್ರಮುಖರಾದ ರಾಜಕುಮಾರ ಸಿಂದಗೇರಿ, ಬಾಳು ರಾಠೋಡ ಶಿಕ್ಷಕರಾದ ನಾಗೇಶ ನಾಗೂರ, ವಾಯ್.ಜಿ. ತಾವರಖೇಡ ಮಾತನಾಡಿದರು.
ನಿವೃತ್ತ ಶಿಕ್ಷಕರ ಕುರಿತು ಮಕ್ಕಳು ತಮ್ಮ ಅನಿಸಿಕೆ ಹಂಚಿಕೊಂಡರು.
ನಂತರ ದಂಪತಿ ಸಮೇತವಾಗಿ ನಿವೃತ್ತ ಶಿಕ್ಷಕರನ್ನು ಹಾಗೂ ಶಾಲೆಗೆ ಅವರ ಸ್ಥಾನದಲ್ಲಿ ಬಂದಂತ ಜಾನು ಶಿಕ್ಷಕರನ್ನು ಸ್ವಾಗತಿಸಲಾಯಿತು.
ಮುಖ್ಯಶಿಕ್ಷಕ ಎಸ್.ಪಿ.ಇಂಗಳೇಶ್ವರ, ಎಸ್ಡಿಎಮ್ಸಿ ಅಧ್ಯಕ್ಷ ಗಣೇಶ ರಾಠೋಡ, ಶಿಕ್ಷಕರ ಸಂಘದ ಕಾರ್ಯದರ್ಶಿ ಪಿ.ಸಿ.ತಳಕೇರಿ, ದಾನು ರಾಠೋಡ, ಜಿ.ಎಮ್.ಗುಡಿಮನಿ ,ಶ್ರೀಕಾಂತ ರಾಠೋಡ, ಎನ್. ಎಸ್.ಹಿರೇಮಠ, ಎ.ಟಿ.ಲಮಾಣಿ, ಶೃತಿ ಪಾಟೀಲ, ಅಮೃತಾ ಕರಾಬಿ, ಕವಿತಾ ಬ್ಯಾಳಿ, ಮಲ್ಲಿಕಾರ್ಜುನ ತಳಕೇರಿ ಸೇರಿದಂತೆ ವಿವಿಧ ಶಾಲೆಗಳ ಶಿಕ್ಷಕರು, ಶಿಕ್ಷಕಿಯರು, ತಾಂಡಾದ ಪ್ರಮುಖರು, ಮಕ್ಕಳು ಇದ್ದರು.

