ಉದಯರಶ್ಮಿ ದಿನಪತ್ರಿಕೆ
ಇಂಡಿ: ವಚನಗಳು ಓದುವುದರಿಂದ ಮನುಷ್ಯನಲ್ಲಿ ಬದಲಾವಣೆಯನ್ನು ತರುತ್ತೇವೆ. ಇಂದಿನ ಮಕ್ಕಳಿಗೆ ವಚನಗಳು ದಾರಿ ದೀಪ. ಅಲ್ಲಮ ಪ್ರಭುಗಳು ಅಂದಿನ ಕಾಲದಲ್ಲಿ ದೀನ ದಲಿತ ಶೋಷಿತ ವರ್ಗದವರ ಜನರ ಧ್ವನಿಯಾಗಿದ್ದರು ಎಂದು ಶ್ರೀಮತಿ ಶಾಲಿನಿ ಮಾಣಿಕ್ ಚಂದ್ ದೋಶಿ ಮಹಿಳಾ ಕಾಲೇಜಿನ ಉಪನ್ಯಾಸಕ, ತಾಲೂಕ ಮಕ್ಕಳ ಸಾಹಿತ್ಯ ಸಂಗಮದ ಅಧ್ಯಕ್ಷ ಸದಾನಂದ ಎಸ್ ಈರನಕೇರಿ ಮಾತನಾಡಿದರು.
ಪಟ್ಟಣದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ ಘಟಕ, ತಾಲೂಕು ಮಹಿಳಾ ಕದಳಿ ವೇದಿಕೆ , ಮೆಟ್ರಿಕ್ ನಂತರದ ದಿ ದೇವರಾಜ ಅರಸ್ ವಿದ್ಯಾರ್ಥಿನಿಯರ ವಸತಿ ನಿಲಯ ಕಣ್ಣಿ ಬಿಲ್ಡಿಂಗ್ ಇಂಡಿ ಸಹಯೋಗದಲ್ಲಿ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.
12ನೇ ಶತಮಾನದ ಬಸವಕಲ್ಯಾಣದಲ್ಲಿರುವ ಅನುಭವ ಮಂಟಪದ ಅಧ್ಯಕ್ಷರಾಗಿದ್ದ ಶರಣರಾದ ಅಲ್ಲಮಪ್ರಭುಗಳ ಕುರಿತು ಮಾತನಾಡುತ್ತ ಅಲ್ಲಮಪ್ರಭುಗಳ ವಚನಗಳು ಸರ್ವಕಾಲಿಕ ಸತ್ಯ. ಅನುಭವ ಮಂಟಪದಲ್ಲಿರುವ ಶರಣ ಶರಣೆಯರ ಜೊತೆಗೂಡಿ ತಮ್ಮ ಅನುಭವದ ಸಾರವನ್ನು ಜನರಿಗೆ ತಿಳಿಸುತ್ತಿದ್ದರು. ಬಸವಣ್ಣನವರು, ಅಕ್ಕಮಹಾದೇವಿಯವರು, ಚನ್ನಬಸವಣ್ಣ ಸಿದ್ದರಾಮಯ್ಯ, ಮಾದರ ಚೆನ್ನಯ್ಯ, ಸಮಗಾರ ಹರಳಯ್ಯ ಇವರ ಜೊತೆಗೂಡಿ ಸಮಾಜವನ್ನು ತಿದ್ದುವ ಕೆಲಸ ಮಾಡಿದರು. ಮನುಷ್ಯ ಕಾಯಕದಿಂದ ಶ್ರೇಷ್ಠನಾಗುತ್ತಾನೆ ಎನ್ನುವ ತತ್ವವನ್ನು ಪ್ರತಿಪಾದಿಸಿದರು. ಮನುಷ್ಯ ಮಾದೇವನ ಸ್ವರೂಪಿಯಾಗಿದ್ದಾನೆ ಎಂದು ಹೇಳುತ್ತಾ ಮನಸೇ ಮಹಾದೇವ. ನಾವೆಲ್ಲರೂ ನಮ್ಮ ಪಂಚೇಂದ್ರಿಯಗಳನ್ನು ಹಿಡಿತದಲ್ಲಿಟ್ಟುಕೊಳ್ಳಬೇಕು. ಹೆಣ್ಣು ಮಣ್ಣು ಹೊನ್ನು ಮಾಯೆಯಲ್ಲ, ಮನದ ಮುಂದಣ ಆಸೆಯೇ ಮಾಯೆ. ಎಂದು ತಮ್ಮ ವಚನದಲ್ಲಿ ಹೇಳಿದ್ದಾರೆ. ಇಂತಹ ಹಲವಾರು ವಚನಗಳು ಮನುಷ್ಯನಲ್ಲಿರುವ ಅಂಧಕಾರವನ್ನು ತಿದ್ದುವ ಕೆಲಸವನ್ನು ಅಲ್ಲಮ ಪ್ರಭುದೇವರು ಮಾಡಿದರು ಎಂದು
ಹೇಳಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಪಾರ್ವತಿ ಸೋಮಶೇಖರ್ ಸುರಪುರ ದತ್ತಿಧಾನಿಗಳ ಫೋಟೋ ಪೂಜೆ ಹಾಗೂ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.
ಇದೇ ಸಂದರ್ಭದಲ್ಲಿ ತಾಲೂಕ ಕದಳಿ ವೇದಿಕೆ ಅಧ್ಯಕ್ಷೆಯಾದ ಗಂಗಾ ಗಲಗಲಿ ತಮ್ಮ ಆಶಯ ನುಡಿಯಲ್ಲಿ ಶರಣ ಸಾಹಿತ್ಯ ಬೆಳೆದು ಬಂದ ಕುರಿತು ಮಾತನಾಡಿದರು.
ಕಾರ್ಯಕ್ರಮದ ದತ್ತಿದಾನಿ ದಿ. ಸಂಗಮ್ಮ ಸುರಪುರ ಹಾಗೂ ದಿ. ಸಂದೇಶ್ ಸುರಪುರ ಇವರ ಕುರಿತು ಶರಣ ಸಾಹಿತ್ಯ ಅಧ್ಯಕ್ಷ ಶ್ರೀ ಬಿ ಎಸ್ ಪಾಟೀಲ್ ದತ್ತಿಸ್ಮರಣೆ ಮಾಡಿದರು.
ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಕುರಿತು ವಸತಿ ಮೇಲ್ವಿಚಾರಿಕಿ ಎಸ್ ಎಸ್ ಜಟಗೊಂಡ ಇವರು ಮಾತನಾಡುತ್ತಾ ಮಹಿಳೆ ಎಲ್ಲ ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡುತ್ತಿದ್ದಾಳೆ. ಮಹಿಳೆ ಅಬಲೆಯಲ್ಲ ಸಬಲೆ . ಎಂದು ಹೇಳುತ್ತಾ ಮಹಿಳೆಯರ ಹಾಗೂ ವಿದ್ಯಾರ್ಥಿನಿಯರನ್ನು ಉದ್ದೇಶಿಸಿ ಮಾತನಾಡಿದರು.
ಎಸ್ ಐ ಸೂಗೂರು ಸ್ವಾಗತಿಸಿದರೆ, ನಿರೂಪಣೆ ಕುಮಾರಿ ಐಶ್ವರ್ಯ ಮಾವಿನ ಮರ ಮಾಡಿದರು. ವಿದ್ಯಾರ್ಥಿನಿಯರು ಪ್ರಾರ್ಥನೆ ಗೀತೆ ಹಾಡಿದರು. ಇನ್ನೂ ಈ ಸಂದರ್ಭದಲ್ಲಿ ಸಾವಿತ್ರಿ ವಾಲಿಕಾರ್ ಸೇರಿದಂತೆ ಸಿಬ್ಬಂದಿಗಳು ಉಪಸ್ಥಿತರಿದ್ದರು.