Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ನೆರೆಯ ಬಾಂಗ್ಲಾ ದೇಶದಲ್ಲಿ ಹಿಂದುಗಳ ಮೇಲಿನ ದೌರ್ಜನ್ಯ, ಹತ್ಯೆ ನಡೆದಿರುವದು ಖಂಡನೀಯ. ಇಂತಹ ಘಟನೆಗಳು ನಡೆದರೆ ದೇಶದ ಮಕ್ಕಳ, ಯುವಜನಾಂಗದ ಮೇಲೆ ಪ್ರಭಾವ ಬೀರುತ್ತದೆ. ಈ ನಿಟ್ಟಿನಲ್ಲಿ ಅಲ್ಲಿನ ಸರ್ಕಾರ ಇಂತಹ ಘಟನೆಗಳು ಆಗದಂತೆ ನೋಡಿಕೊಳ್ಳಬೇಕಿದೆ. ನಮ್ಮ ಸರ್ಕಾರವು ಇದರ ಕಡೆಗೆ ಗಮನ ಹರಿಸಬೇಕೆಂದು ಮನಗೂಳಿ ಹಿರೇಮಠದ ಅಭಿನವ ಸಂಗನಬಸವ ಸ್ವಾಮೀಜಿ ಹೇಳಿದರು.ಪಟ್ಟಣದ ಬಸವೇಶ್ವರ ವೃತ್ತದಲ್ಲಿ ವಿಶ್ವ ಹಿಂದು ಪರಿಷದ್, ಬಜರಂಗದಳವು ಬಾಂಗ್ಲಾದೇಶದಲ್ಲಿ ವಾಸಿಸುವ ಹಿಂದುಗಳ ಶೀಘ್ರ ರಕ್ಷಣೆ ಮಾಡುವಂತೆ ಆಗ್ರಹಿಸಿ ಬುಧವಾರ ಹಮ್ಮಿಕೊಂಡಿದ್ದ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಅವರು, ಹಿಂದುಗಳ ಮೇಲೆ ಇಂತಹ ಘಟನೆ ನಡೆದಿರುವದು ಖಂಡನೀಯ. ಹಿಂದುಗಳ ಮೇಲಿನ ಹತ್ಯಾಕಾಂಡ ನಿಲ್ಲಿಸಲು ಕ್ರಮಕೈಗೊಳ್ಳುವಂತೆ ಬಾಂಗ್ಲಾ ಸರ್ಕಾರದ ಮೇಲೆ ಕೇಂದ್ರ ಸರ್ಕಾರ ಒತ್ತಡ ಹೇರಬೇಕೆಂದು ಒತ್ತಾಯಿಸಿದರು.ವಕೀಲ ರಾಚಯ್ಯ ಗಣಕುಮಾರ ಮಾತನಾಡಿ, ಪಾಪಿ ಪಾಕಿಸ್ತಾನದ ಪ್ರಚೋದನೆಯಿಂದ ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ಇಂತಹ ಘಟನೆ ನಡೆಯುತ್ತಿದೆ. ನಮ್ಮ ದೇಶದಲ್ಲಿ ಎಲ್ಲ ಜಾತಿಯವರು ಒಂದಾಗಿ ಬಾಳುತ್ತಿದ್ದಾರೆ. ನಮ್ಮ ದೇಶದ ಸಂಸ್ಕ್ರತಿ…

Read More

ಉದಯರಶ್ಮಿ ದಿನಪತ್ರಿಕೆ ಅನುಭವಗಳ ಭಾರದಿಂದ ಭರವಸೆಯ ಬೆಳಕಿನತ್ತ2025ಕ್ಕೆ ವಿದಾಯ 2026ಕ್ಕೆ ಹಾರ್ದಿಕ ಸ್ವಾಗತ ಕಾಲ ಎಂದರೆ ನಿಲ್ಲದ ಪಯಣ.ನೋಡುತ್ತಲೇ 2025 ಎಂಬ ವರ್ಷ ನಮ್ಮ ಬದುಕಿನ ದಿನಚರಿಯಲ್ಲಿ ಒಂದು ನೆನಪಿನ ಪುಟವಾಗಿ ಮಡಚಿಕೊಳ್ಳುತ್ತಿದೆ.ಅದರ ಜೊತೆ ಸಂತೋಷ, ನೋವು, ಸಾಧನೆ, ಪಾಠಗಳು—ಎಲ್ಲವೂ ನೆನಪಾಗಿ ಉಳಿಯುತ್ತಿವೆ. 2025 ನಮ್ಮೆಲ್ಲರ ಬದುಕಿನಲ್ಲಿ ಕಲಿಕೆಯ ವರ್ಷ.ಕೆಲವರಿಗೆ ಸಾಧನೆಯ ಹಾದಿ, ಕೆಲವರಿಗೆ ಸಹನೆಯ ಪಾಠ, ಮತ್ತವರಿಗೆ ಹೊಸ ಕನಸುಗಳ ಆರಂಭ.ಬಿದ್ದರೂ ಮತ್ತೆ ಎದ್ದು ನಿಲ್ಲುವ ಧೈರ್ಯವನ್ನು ಈ ವರ್ಷ ನಮಗೆ ಕಲಿಸಿತು. ಬದುಕು ಎಂದರೆ ಕೇವಲ ಗೆಲುವಲ್ಲ, ಸೋಲಿನಲ್ಲೂ ಅರ್ಥ ಹುಡುಕುವ ಪ್ರಯತ್ನ ಎಂದು ಅರಿವುಗೊಳಿಸಿತು.ಇದೀಗ 2026 ನಮ್ಮ ಮುಂದೆ ನಿಂತಿದೆಹೊಸ ಭರವಸೆಗಳೊಂದಿಗೆ,ಹೊಸ ಅವಕಾಶಗಳೊಂದಿಗೆ,ಹೊಸ ಸಂಕಲ್ಪಗಳೊಂದಿಗೆ.ಈ ಹೊಸ ವರ್ಷದಲ್ಲಿಹಿಂದಿನ ತಪ್ಪುಗಳು ಪಾಠಗಳಾಗಲಿ,ನೋವುಗಳು ಶಕ್ತಿಯಾಗಲಿ,ಕನಸುಗಳು ಗುರಿಯಾಗಲಿ.ವೈಯಕ್ತಿಕ ಬದುಕಿನ ಜೊತೆಗೆಸಮಾಜದಲ್ಲಿ ಮಾನವೀಯತೆ ಹೆಚ್ಚಲಿ,ಸೌಹಾರ್ದತೆ ಬಲವಾಗಲಿ,ನೆಮ್ಮದಿ ಎಲ್ಲರ ಮನೆಬಾಗಿಲಿಗೂ ತಲುಪಲಿ. 2025ಕ್ಕೆ ಗೌರವಪೂರ್ವಕ ವಿದಾಯ ಹೇಳುತ್ತಾ,2026ನ್ನು ತೆರೆದ ಹೃದಯದಿಂದ ಸ್ವಾಗತಿಸೋಣ.ಸ್ವಾಗತ 2026 —ಹೊಸ ಬೆಳಕು, ಹೊಸ ದಾರಿ, ಹೊಸ ಬದುಕಿನ ಆಶಯ. -…

Read More

ವಿಜಯಪುರದಲ್ಲಿ ನಡೆದ ಕಾನಿಪ ಜಿಲ್ಲಾ ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಸಚಿವ ಡಾ.ಎಂ.ಬಿ. ಪಾಟೀಲ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬಡ ವಿದ್ಯಾರ್ಥಿಗಳಿಗೆ ಉಚಿತ ಸೀಟು ಕೊಡಿಸುವ ಮೂಲಕ ವೇದಿಕೆಯಾಗುವ ಪತ್ರಿಕೆಗಳು ಮಾನವ ಕಳಕಳಿಯ ಪ್ರತಿಬಿಂಬಗಳು ಕೂಡಾ ಹೌದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲ ಹೇಳಿದರು.ವಿಜಯಪುರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಬುಧವಾರ ನಡೆದ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ ಪುಸ್ತಕ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸೀಟು ತೆಗೆದುಕೊಳ್ಳಲು ಪರದಾಡುವ ಬಡ ವಿದ್ಯಾರ್ಥಿಗಳು, ಚಿಕಿತ್ಸೆಗಾಗಿ ಹಂಬಲಿಸುವ ಬಡ ರೋಗಿಗಳು ಹೀಗೆ ಎಲ್ಲ ವಿಷಯಗಳನ್ನು ಮಾನವೀಯ ಅಂತ:ಕರಣದೊಂದಿಗೆ ಆ ಸುದ್ದಿಗಳನ್ನು ಪ್ರತಿಬಿಂಬಿಸುವ ಪತ್ರಿಕೆಗಳಿಂದಾಗಿ ಎಷ್ಟೋ ಬಡ ವಿದ್ಯಾರ್ಥಿಗಳಿಗೆ ಸೀಟು ದೊರಕಿದೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರಕಿದೆ ಎಂದರು.ಆಧುನಿಕ ಮಾಧ್ಯಮಗಳಿಂದ ಪತ್ರಿಕೆಗಳು ಅಸ್ತಿತ್ವವೇ ಕಳೆದುಕೊಳ್ಳಲಿವೆ ಎಂದು ಅನೇಕರು ಭಾವಿಸಿದ್ದರು, ಪರಿಸ್ಥಿತಿ ಸಹ ಅದೇ ರೀತಿ ಭಾಸವಾಗುವಂತೆ ಮಾಡಿದ್ದರು, ಆದರೆ ಇಂದಿಗೂ ಪತ್ರಿಕೆ ಓದಿದರೆ…

Read More

ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಭರವಸೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಶಾಲೆಗಳಲ್ಲಿ ಅಭಿವೃದ್ಧಿ ಕೆಲಸಗಳನ್ನು ಮುಂದುವರೆಸುವದರ ಮೂಲಕ ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಲು ಅಚಲ ಸಂಕಲ್ಪ ಹೊಂದಿರುವುದಾಗಿ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.ಬುಧವಾರ ತಿಕೋಟಾ ತಾಲೂಕಿನ ಅರಕೇರಿ ಗ್ರಾಮದ ಮೋಹಿತೆ ವಸ್ತಿ ಮತ್ತು ಅರಕೇರಿ ಗ್ರಾಮದಲ್ಲಿ ನಡೆದ ಎರಡು ಪ್ರತ್ಯೇಕ ಕಾರ್ಯಕ್ರಮಗಳಲ್ಲಿ ನಾನಾ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.ಮೋಹಿತೆ ವಸ್ತಿಯಲ್ಲಿ ಕೆ.ಎಸ್.ಐ.ಐ.ಡಿ.ಸಿ ವತಿಯಿಂದ ಸಿ.ಎಸ್.ಆರ್ ಅನುದಾನದಲ್ಲಿ ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಕೊಠಡಿಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಿ.ಎಸ್.ಆರ್ ಅನುದಾನದಲ್ಲಿ ಸರಕಾರಿ ಶಾಲೆಗಳಲ್ಲಿ ನೂತನ ಕೊಠಡಿಗಳ ನಿರ್ಮಾಣ ಹಾಗೂ ದುರಸ್ಥಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಈ ಮೂಲಕ ಮಹಾನಗರಗಳ ಕಾನ್ವೆಂಟ್ ಶಾಲೆಗಳಲ್ಲಿರುವ ಮಾದರಿಯ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದು ಹೇಳಿದರು.ಅರಕೇರಿಯಲ್ಲಿ ಕೆ.ಆರ್.ಐ.ಡಿ.ಎಲ್ ವತಿಯಿಂದ ಟಿ.ಎಸ್.ಇ ಯೋಜನೆಯಡಿ ನಿರ್ಮಿಸಿರುವ ನೂತನ ಸಮುದಾಯ ಭವನ ಕಟ್ಟಡ…

Read More

ನವದೆಹಲಿಯ ಸಿಸಿಐಎಂ ಮಾಜಿ ಸದಸ್ಯ, ಗದಗ ಡಿ. ಜಿ. ಎಂ ಆಯುರ್ವೇದ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ. ಜಿ.ಬಿ.ಪಾಟೀಲ ಸಲಹೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಆಯುರ್ವೇದ ಪ್ರಾಚೀನ ಕಾಲದ ಶಾಸ್ತ್ರೀಯ ವಿದ್ಯೆಯಾಗಿದೆ. ವೈದ್ಯಕೀಯ ಚಿಕಿತ್ಸೆಗೆ ನಾವಿನ್ಯತೆಯ ಸ್ಪರ್ಶನೀಡುವುದರ ಮೂಲಕ ಆಯುರ್ವೇದವನ್ನು ಉಳಿಸಬೇಕು ಹಾಗೂ ಬೆಳೆಸಬೇಕು ಎಂದು ನವದೆಹಲಿಯ ಸಿಸಿಐಎಂ ಮಾಜಿ ಸದಸ್ಯ ಮತ್ತು ಗದಗ ಡಿ. ಜಿ. ಎಂ ಆಯುರ್ವೇದ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ. ಜಿ. ಬಿ. ಪಾಟೀಲ ಹೇಳಿದ್ದಾರೆ.ನಗರದ ಬಿಎಲ್‌ಡಿಇ ಸಂಸ್ಥೆಯ ಎ.ವಿ.ಎಸ್ ಆಯುರ್ವೇದ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರದ ಹಳೆಯ ವಿದ್ಯಾರ್ಥಿಗಳ ಸ್ನೇಹ ಸಮಾಗಮ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ವಿಶ್ವಾದ್ಯಂತ ಜನರು ಈಗ ಆಯುರ್ವೇದ ಕಡೆಗೆ ಒಲವು ತೋರಿಸುತ್ತಿರುವುದು ಸಂತಸದ ವಿಷಯವಾಗಿದೆ. ನಿಖರವಾದ ಆಯುರ್ವೇದ ಚಿಕಿತ್ಸೆಯನ್ನು ಸಂಶೋಧನೆಯ ಮೂಲಕ ನೀಡಿ ಸಮಾಜದ ಸ್ವಾಸ್ಥ್ಯ ಕಾಪಾಡುವುದು ಆಯುರ್ವೇದ ವೈದ್ಯರ ಕರ್ತವ್ಯವಾಗಿದೆ. 77 ವರ್ಷಗಳ ಇತಿಹಾಸವಿರುವ ಈ ಮಹಾವಿದ್ಯಾಲಯವು ಉನ್ನತ ಮಟ್ಟದಲ್ಲಿ ಅಭಿವೃದ್ಧಿ ಹೊಂದಿರುವುದು ಸಂತಸ ತಂದಿದೆ. ಕಾಲೇಜಿನ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬಾಂಗ್ಲಾದಲ್ಲಿರುವ ಅಲ್ಪಸಂಖ್ಯಾತ ಹಿಂದೂಗಳಿಗೆ ಆ ದೇಶ ರಕ್ಷಣೆ ಒದಗಿಸಬೇಕು. ಭಾರತದಲ್ಲಿರುವ ಬಾಂಗ್ಲಾದೇಶದ ರಾಯಬಾರಿ ಆ ದೇಶಕ್ಕೆ ತುರ್ತು ಸಂದೇಶ ರವಾನಿಸಬೇಕು ಎಂದು ಬಿಜೆಪಿ ನಗರಘಟಕ ಅಧ್ಯಕ್ಷ ಸಂದೀಪ್ ಪಾಟೀಲ ಝಳಕಿ ಆಗ್ರಹಿಸಿದ್ದಾರೆ.ಬುಧವಾರ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ ಅವರು, ವಿಶ್ವವೇ ಒಂದೆ ಕುಟುಂಬವೆಂಬ ದೃಢ ನಂಬಿಕೆಯಲ್ಲಿದ್ದು ಯಾವುದೇ ದೇಶ ಸಂಕಷ್ಟದಲದಲಿದ್ದರೂ ಅದಕ್ಕೆ ಸ್ಪಂದಿಸುವ ಭಾರತ ದೇಶದ ಹಿರಿಮೆಯಾದರೇ, ಅದೇ ದೇಶದ ಮೂಲನಿವಾಸಿಗಳು ವಿಭಜಿತ ಬಾಂಗ್ಲಾದೇಶದಲ್ಲಿ ಹಿಂದೂ ಸಮಾಜದ ದೀಪು ಚಂದ್ರದಾಸ ಅವರ ಬರ್ಬರ ಹತ್ಯೆ ಖಂಡನೀಯ. ಅಪರಾಧಿಗಳನ್ನು ಬಂಧಿಸಿದರೇ ಸಾಲದು ಅವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ಕೆಂಭಾವಿ: ಸಮೀಪದ ಕರಡಕಲ್ ಗ್ರಾಮ ಪಂಚಾಯತಿಗೆ ಎರಡನೇ ಅವಧಿಗೆ ಅಧ್ಯಕ್ಷರಾಗಿ ದೇವಿಂದ್ರಪ್ಪ ಕುಂಭಾರ ಹಾಗೂ ಉಪಾದ್ಯಕ್ಷರಾಗಿ ಪಾರ್ವತಿ ವಿನಾಯಕ ದೊಡ್ಡಮನಿ ಅವಿರೋದವಾಗಿ ಆಯ್ಕೆಯಾದರು. 10 ಸದ್ಯಸರನ್ನು ಹೊಂದಿರುವ ಕರಡಕಲ್ ಗ್ರಾಮಪಂಚಾಯಿತಿಯಲ್ಲಿ 6 ಸದ್ಯಸರು ಕಾಂಗ್ರೇಸ್ ಪಕ್ಷದ ಬೆಂಬಲಿತರಾಗಿದ್ದು ಕಾಂಗ್ರೇಸ್ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿದಿದಂತಾಗಿದೆ.ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಸಜ್ಜನ ಚುನಾವಣಾಧಿಕಾರಿಯಾಗಿ ಕರಡಕಲ್ ಗ್ರಾಪಂ ಅಧ್ಯಕ್ಷ ಚುನಾವಣೆ ಸುಸೋತ್ರವಾಗಿ ನಡೆಸಿಕೊಟ್ಟರು. ಚುನಾವಣೆ ಮುಗಿಯುತ್ತಿದಂತೆ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳ, ಸಿಹಿ ಹಂಚಿ ಸಂಭ್ರಮಿಸಿದರು.ಪ್ರಮುಖರಾದ ಮಾಜಿ ಮಂಡಲ ಪ್ರಧಾನ ಸಂಗನಗೌಡ ಮರಡ್ಡಿ, ಮಾಜಿ ಜಿಪಂ ಉಪಾಧ್ಯಕ್ಷ ಶಂಕ್ರಣ್ಣ ವಣಿಕ್ಯಾಳ, ಕೆವೈಡಿಸಿಸಿ ಬ್ಯಾಂಕ್ ನಿರ್ದೇಶಕ ಬಸವರಾಜ ಚಿಂಚೋಳಿ, ಬಾಪುಗೌಡ ಪಾಟೀಲ, ಬೀಮಣ್ಣ ಯಲಗೋಡ, ಬಾಪುಗೌಡ ಪೋ ಪಾಟೀಲ, ಸಿದ್ದನಗೌಡ ಮಾಲಹಳ್ಳಿ, ಮಾನಸಣ್ಣ ಘಂಟಿ, ಹಣಮಂತ್ರಾಯ ದೊಡ್ಡಮನಿ, ರಾಜಾವೆಂಕಟಪ್ಪ ನಾಯಕ ಜಾಗಿರದಾರ, ಭೀಮಣ್ಣ ನಾರಾಯಣಪೂರ, ಶಿವನಗೌಡ ಪಾಟೀಲ, ಬಸನಗೌಡ ಮರಡ್ಡಿ, ನಿಂಗನಗೌಡ ಮರಡಿ, ವಿರುಪಾಕ್ಷಿ ಗುಡಿಮನಿ, ಪಿಡಿಒ ಮಲ್ಲಪ್ಪ ಸೇರಿದಂತೆ ಪಂಚಾಯತಿ ಸಿಬ್ಬಂದಿಗಳು…

Read More

ಸರಕಾರಿ ಪ್ರೌಢಶಾಲೆ ಕುಂಬಾರಹಳ್ಳದಲ್ಲಿ ರಾಷ್ಟ್ರೀಯ ಗಣಿತ ದಿನೋತ್ಸವ ಹಾಗೂ ರಾಷ್ಟ್ರೀಯ ರೈತ ದಿನಾಚರಣೆ ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ಗಣಿತ ವಿಷಯಕ್ಕೆ ಭಾರತದ ಕೊಡುಗೆ ಅದ್ವಿತೀಯವಾಗಿದ್ದು ಆರ್ಯಭಟರಿಂದ ಹಿಡಿದು ಶ್ರೀನಿವಾಸ ರಾಮಾನುಜನ್ ರವರೆಗೆ ಅದು ಹಬ್ಬಿದೆ. ಶ್ರೀನಿವಾಸ ರಾಮಾನುಜನ್ ಅವರು ಗಣಿತಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ. ಅವರು *ಗಣಿತದ ಅಗುಣಿತ ವಿನ್ಯಾಸವಾಗಿದ್ದಾರೆ ಮತ್ತು ಪ್ರತಿ ಧನ ಪೂರ್ಣಾಂಕದಲ್ಲೂ ಅವರ ವಿಳಾಸವಿದೆ ಎಂದು ಗಣಿತ ಶಿಕ್ಷಕ ಸಂಗನಬಸವ ಉಟಗಿ ಅಭಿಪ್ರಾಯಪಟ್ಟರು.ಅವರು ಕುಂಬಾರಹಳ್ಳ ಸರಕಾರಿ ಪ್ರೌಢಶಾಲೆಯ ಗಣಿತ ದಿನೋತ್ಸವದ ಹಾಗೂ ರೈತ ದಿನಾಚರಣೆಯ ಕಾರ್ಯಕ್ರಮದಲ್ಲಿ ಸಂಗನಬಸವ ಉಟಗಿ ಮಾತನಾಡಿ, ಗಣಿತ ಅತ್ಯಂತ ಸುಲಭದ ವಿಷಯವಾಗಿದೆ. ಜೀವನದ ಎಲ್ಲಾ ವಿಭಾಗದಲ್ಲೂ ಗಣಿತ ಹಾಸುಕೊಕ್ಕಾಗಿದೆ. ಗಣಿತಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ಶ್ರೀನಿವಾಸ ರಾಮಾನುಜನ್ ಅವರ ಜನ್ಮದಿನವನ್ನು ಗಣಿತ ದಿನವಾಗಿ ಆಚರಿಸಲಾಗುವುದು. ಮಕ್ಕಳು ಸಹ ಗಣಿತ ವಿಷಯವನ್ನು ಪ್ರೀತಿಸಬೇಕು ರಾಮಾನುಜನ್ ಅವರ ಆದರ್ಶವನ್ನು ಪಾಲಿಸಬೇಕು.ಅವರು ನೀಡಿದ ಕೊಡುಗೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ನುಡಿದರು. ರೈತ ದೇಶದ ಬೆನ್ನೆಲುಬು ಅವರು…

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳಿಗೆ ಶೀಘ್ರ ಪರಿಹಾರ ಕಲ್ಪಿಸುವ ಉದ್ದೇಶದಿಂದ “ಮೀಡಿಯೇಶನ್ ಫಾರ್ ದ ನೇಶನ್ ೨.೦” ಎಂಬ ರಾಷ್ಟ್ರಮಟ್ಟದ ವಿಶೇಷ ಮಧ್ಯಸ್ಥಿಕೆ ಅಭಿಯಾನವನ್ನು ಜ.೨ ೨೦೨೬ ರಿಂದ ರಾಜ್ಯದಾದ್ಯಂತ ಎಲ್ಲ ನ್ಯಾಯಾಲಯಗಳಲ್ಲಿ ಆರಂಭಿಸಲಾಗುತ್ತಿದೆ.ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಹಾಗೂ ಕರ್ನಾಟಕ ಹೈಕೋರ್ಟ್, ಬೆಂಗಳೂರು ಇವರ ನಿರ್ದೇಶನದಂತೆ ಈ ಅಭಿಯಾನವನ್ನು ೯೦ ದಿನಗಳ ಅವಧಿಗೆ ಹಮ್ಮಿಕೊಳ್ಳಲಾಗಿದ್ದು, ಪರಸ್ಪರ ರಾಜಿ ಸಂಧಾನದ ಮೂಲಕ ವಿವಾದಗಳನ್ನು ಬಗೆಹರಿಸುವುದಕ್ಕೆ ಒತ್ತು ನೀಡಲಾಗುತ್ತದೆ.ಈ ಅಭಿಯಾನದಡಿ ಜ.೩೧ ೨೦೨೬ ರವರೆಗೆ ಮಧ್ಯಸ್ಥಿಕೆಗೆ ಯೋಗ್ಯವಾದ ಪ್ರಕರಣಗಳನ್ನು ಗುರುತಿಸಲಾಗುತ್ತದೆ. ಗುರುತಿಸಲಾದ ಪ್ರಕರಣಗಳನ್ನು ಸಂಬಂಧಿತ ನ್ಯಾಯಾಲಯಗಳ ಅನುಮೋದನೆಯೊಂದಿಗೆ ಮಧ್ಯಸ್ಥಿಕೆ ಕೇಂದ್ರಗಳಿಗೆ ರವಾನಿಸಲಾಗುವುದು. ವಕೀಲರು, ನ್ಯಾಯಾಲಯದ ಸಿಬ್ಬಂದಿ, ಕಾನೂನು ಪ್ರಾಧ್ಯಾಪಕರು ಹಾಗೂ ಅಂತಿಮ ವರ್ಷದ ಕಾನೂನು ವಿದ್ಯಾರ್ಥಿಗಳ ಸಹಕಾರದಿಂದ ಪ್ರಕರಣಗಳ ಗುರುತಿಸುವ ಕಾರ್ಯ ನಡೆಯಲಿದೆ.ಕುಟುಂಬ ವ್ಯಾಜ್ಯಗಳು, ನಾಗರಿಕ ವಿವಾದಗಳು, ಚೆಕ್ ಬೌನ್ಸ್ ಪ್ರಕರಣಗಳು, ಹಣಕಾಸು ಸಂಬಂಧಿತ ವ್ಯಾಜ್ಯಗಳು ಸೇರಿದಂತೆ ಮಧ್ಯಸ್ಥಿಕೆಗೆ ಸೂಕ್ತವಾದ ಪ್ರಕರಣಗಳನ್ನು ಈ ಅಭಿಯಾನದಲ್ಲಿ ಪರಿಗಣಿಸಲಾಗುತ್ತದೆ. ಪಕ್ಷಗಾರರು…

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಮನೆಯಲ್ಲಿ ಕುಳಿತು ಇ-ಖಾತಾ ಪಡೆಯುವ ಕುರಿತು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಅಫ್ರೋಜ್ ಅಹ್ಮದ್ ಪಟೇಲ ಹಾಗೂ ಸಿಬ್ಬಂದಿ ಜಾಗೃತಿ ಮೂಡಿಸಿದರು.ಪಟ್ಟಣದಲ್ಲಿ ಬುಧವಾರ ಮನೆಯಲ್ಲೇ ಕುಳಿತು ಇ-ಖಾತಾವನ್ನು ಪಡೆದುಕೊಳ್ಳುವ ಬಗ್ಗೆ ಜಾಗೃತಿ ಮೂಡಿಸುವ ಅಂಗವಾಗಿ ಮುಖ್ಯಾಧಿಕಾರಿ ಮಾತನಾಡಿ, ಆಸ್ತಿ ಕಣಜದಲ್ಲಿನ ಮಾಹಿತಿ ಆಧಾರದ ಮೇಲೆ ಕರಡು ಇ-ಖಾತಾವನ್ನು ಪ್ರಕಟಿಸಲಾಗಿದ್ದು, ಸಾರ್ವಜನಿಕರು ಈ ಮಾಹಿತಿಗಳನ್ನು ನೇರವಾಗಿ ವೀಕ್ಷಿಸಬಹುದು. ಸದರಿ ಮಾಹಿತಿಗಳ ಬಗ್ಗೆ ತಕರಾರು ಇದ್ದಲ್ಲಿ ಇ-ಆಸ್ತಿ ತಂತ್ರಾಂಶದಲ್ಲಿ ಹೆಚ್ಚಿನ ಮಾಹಿತಿಯನ್ನು ನೇರವಾಗಿ ನಮೂದಿಸಬಹುದು. ನಮೂದಿಸಿದ ಮಾಹಿತಿಯ ನಿಖರತೆಯನ್ನು ನಗರ ಸ್ಥಳೀಯ ಸಂಸ್ಥೆಗಳು ಪರಿಶೀಲಿಸಿ, ಅನಮೋದಿಸಲಾಗುಗುವುದು. ಅಂತಿಮ ಇ- ಖಾತಾವನ್ನು ತಮ್ಮ ಮನೆಗಳಲ್ಲೇ ಕುಳಿತು ಪಡೆಯಬಹುದಾಗಿದೆ.ಇ-ಖಾತಾಗಾಗಿ ಮಾಲೀಕರ ಭಾವಚಿತ್ರ ಮತ್ತು ಆಧಾರ, ಆಸ್ತಿ ತೆರಿಗೆ ಎಸ್.ಎ.ಎಸ್ ಚಲನ ಸಂಖ್ಯೆ, ಸ್ವತ್ತಿನ ಕ್ರಯ ಅಥವಾ ನೋಂದಾಯಿತ ಪತ್ರ ಸಂಖ್ಯೆ, ವಿದ್ಯುತ್ ಆರ್.ಆರ್.ಸಂಖ್ಯೆ, ಸ್ವತ್ತಿನ ಛಾಯಾಚಿತ್ರ, ಇಸಿ ನಮೂನೆ ೧೫/೧೬, ಸ್ವತ್ತಿಗೆ ಸಂಬAಧಿಸಿದ ಇತರೆ ಪೂರಕ ಅಗತ್ಯ ದಾಖಲೆಗಳು ಅಗತ್ಯವಾಗಿವೆ ಎಂದು ಮಾಹಿತಿ ನೀಡಿದರು.ಸಿಬ್ಬಂದಿ…

Read More