ಉದಯರಶ್ಮಿ ದಿನಪತ್ರಿಕೆ
ಆಲಮೇಲ: ತಾಲೂಕಿನ ಕುಮಸಗಿಯ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2026 27ನೇ ಸಾಲಿನ ವಿದ್ಯಾರ್ಥಿಗಳಿಗೆ ಸಂಸತ್ತು ಚುನಾವಣೆ ಮತದಾನ ಮತ ಎಣಿಕೆ ಕುರಿತು ಪ್ರತೀಕ್ಷಿತ ನಡೆಯಿತು
ಶಾಲೆಯಲ್ಲಿ ಮಿನಿ ಸಂಸತ್ತು ರಚಿಸುವ ಕಾರ್ಯಕ್ರಮ ಏರ್ಪಡಾಗಿತ್ತು. ಮೊಬೈಲ್ ಮತಯಂತ್ರವನ್ನು ಡೌನ್ಲೋಡ್ ಮಾಡಿಕೊಂಡು ಅಭ್ಯರ್ಥಿಗಳ ಹೆಸರು ಮತ್ತು ಭಾವಚಿತ್ರ ಸಹಿತ ಮತಯಂತ್ರದ ಸಹಾಯದಿಂದ ವಿದ್ಯಾರ್ಥಿಗಳು ಮೊಬೈಲಿನಲ್ಲಿ ಮತದಾನ ಮಾಡುವುದು ಮೊಬೈಲಿನಲ್ಲಿ ಮತ ಎಣಿಕೆ ಮಾಡಿದರೆ ಮಾಡಿದ್ದು ಶಿಕ್ಷಕರು ಮಕ್ಕಳಿಗೆ ಹೊಸ ಅನುಭವ ನೀಡಿತು. ಮನಸಾರೆ ವಿದ್ಯಾರ್ಥಿಗಳು ಸರದಿ ಸಾಲಿನಲ್ಲಿ ಬಂದು ಮತದಾನ ಮಾಡಿದ್ದು ಚುನಾವಣೆಯ ನೆನಪು ಮರುಕಳಿಸುವಂತೆ ಮಾಡಿತು.
ವಿದ್ಯಾರ್ಥಿಗಳಿಗೆ ಮೊದಲು ಚುನಾವಣೆ ಜನ ಪ್ರತಿನಿಧಿಯ ಆಯ್ಕೆ ಪ್ರಕ್ರಿಯೆ, ಮತಯಂತ್ರ ಮತದಾನ, ಮತಗಳ ಏಣಿಕೆ ತಿರಸ್ಕಾರವಾಗುವುದು, ಅದರ ಪದ್ಧತಿಗಳೇನು? ಮತ ಎಣಿಕೆ ಹಾಗೂ ಅಭ್ಯರ್ಥಿಗಳ ಘೋಷಣೆಗಳ ಕುರಿತು ಸವಿಸ್ತಾರವಾಗಿ ಶಾಲೆಯ ಮುಖ್ಯ ಗುರು ಪರಮೇಶ್ವರಯ್ಯ ಹಿರೇಮಠ್ ವಿವರಿಸಿದರು.
ನಂತರ ಚುನಾವಣೆಗೆ ಶಾಲೆಯ ಶಿಕ್ಷಕ ವರ್ಗ ಸಿದ್ಧತೆ ಮಾಡಿಕೊಂಡಿತ್ತು. ಚುನಾವಣೆಯಲ್ಲಿ ಶಾಲೆಯ ಸಹ ಶಿಕ್ಷಕರಾದ ಎಸ್ ಎಸ್ ಭಜಂತ್ರಿ, ಎಂ ಜಿ ಮೇಧಿ, ಏನ್ ಬಿ ನಾಯ್ಕೋಡಿ, ಶ್ರೀಮತಿ ಸವಿತಾ ಆರ್, ಶಿವಶರಣಪ್ಪ ಡಾಂಗಿ, ಎಸ್ ಪಿ ತಡಸ್, ಜಿ ಜಿ ಸಜ್ಜನ್, ಆರ್ ಬಿ ಕುಡುಗನೂರ, ಶ್ರೀಮತಿ ಪವಿತ್ರ ಎಂ, ಕುಮಾರಿ ಪೂಜಿತ ಆರ್ ಟಿ, ಅತಿಥಿ ಶಿಕ್ಷಕರಾದ ಪ್ರದೀಪ್ ದೊಡ್ಡಮನಿ, ಚನ್ನಬಸು ದೊಡ್ಡಮನಿ, ಪ್ರೇಮ ನಾಲ್ಕುಮಾನ ಭಾಗವಹಿಸಿದ್ದರು.

