ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಯಾವುದೇ ಕೆಲಸ ಕಷ್ಟದಿಂದ ಮಾಡುವ ಬದಲಿಗೆ ಇಷ್ಟಪಟ್ಟು ನಿಷ್ಠೆಯಿಂದ ಕೆಲಸ ಮಾಡಿದರೆ ಯಶಸ್ವಿ ಆಗುವುದು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಮಂಗಳವಾರ ಪಟ್ಟಣದ ಬಸವೇಶ್ವರ ಶಾಲೆಯ ನೂತನ ಶಾಲಾ ಕಟ್ಟಡ ಉದ್ಘಾಟಿಸಿ ಮಾತನಾಡುತ್ತಾ ಹೇಳಿದರು.
ಯಾವುದೇ ಕೆಲಸವಿರಲಿ ಗೌರವದಿಂದ ಮಾಡಬೇಕು ಅದು ಯೋಗ್ಯ. ಖಾಸಗಿ ಶಿಕ್ಷಣ ಸಂಸ್ಥೆಗಳು ನಡೆಸಿಕೊಂಡು ಹೋಗುವುದು ಕಷ್ಟದ ಕೆಲಸವಾಗಿದೆ. ಗ್ರಾಮೀಣ ಭಾಗದ ಬಡಜನರ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲಕ್ಕಾಗಿ ಇಂಥ ಶಿಕ್ಷಣ ಸಂಸ್ಥೆಗಳು ಬೆಳೆಯಬೇಕಾಗಿದೆ. ಅದಕ್ಕಾಗಿ ಈ ಬಸವೇಶ್ವರ ಶಾಲೆಗೆ ಸಮಾಜ ಕಲ್ಯಾಣ ಇಲಾಖೆಯಿಂದ 50 ಲಕ್ಷ ರೂಪಾಯಿ ಅನುದಾನ ಕೊಡಿಸಲಾಗಿದೆ. ಅನುದಾನ ಪಡೆದುಕೊಂಡು ಉತ್ತಮ ಸುಸಜ್ಜಿತ ಶಾಲಾ ಕಟ್ಟಡ ನಿರ್ಮಿಸಿದ್ದು ಈ ಸಂಸ್ಥೆ ಬಡ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವಂಥಾಗಲಿ ಎಂದು ಹೇಳಿದರು.
ಮಾಜಿ ಶಾಸಕ ರಮೇಶ್ ಭೂಸನೂರ, ಸಾನಿಧ್ಯ ವಹಿಸಿದ ಶಂಕ್ರಾನಂದ ಮಹಾರಾಜರು, ಸಂಸ್ಥೆಯ ಅಧ್ಯಕ್ಷ ವಿಜಯಕುಮಾರ ಎಂಟುಮಾನ ಮುಂತಾದವರು ಮಾತನಾಡಿದರು.
ಸಿಂದಗಿಯ ಧಮ್ಮ ವಿಜಯ ಯುದ್ಧ ಬಿಹಾರದ ಪೂಜ್ಯಂತೆ ಸಂಘಪಾಲ ಸಾನಿಧ್ಯ ವಹಿಸಿದ್ದರು. ಮಾಜಿ ಜಿ.ಪಂ. ಸದಸ್ಯ ಸಿದ್ದುಗೌಡ ಪಾಟೀಲ, ರಾಜಶೇಖರ ಕೂಚಬಾಳ, ಸಿ.ಎಂ. ಬಂಡಗಾರ, ಸಂತೋಷಕುಮಾರ ಬೀಳಗಿ ಸಾಧಿಕ ಸುಂಬಡ, ಯಶವಂತರೇಗೌಡ ರೋಗಿ, ಬಸವರಾಜ ಬಾಗೇವಾಡಿ, ಅಶೋಕ್ ಕೊಳಾರಿ, ಸುರೇಶ ಹಳ್ಳೂರ, ಪ್ರದೀಪ ಗೌರ, ಸಂಸ್ಥೆಯ ಉಪಾಧ್ಯಕ್ಷ ಗುಂಡು ಮೇಲಿನಮನಿ, ಶಿವಾನಂದ ಜಗತಿ, ಬಸವರಾಜ, ಗುಂದಗಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ. ಎಸ್. ಚೌಧರಿ, ಬಸವರಾಜ ಹೂಗಾರ, ದತ್ತುಸಿಂಗ ರಜಪೂತ, ಶಿವಾನಂದ್ ಹಷ್ಟಗಿ, ಅಪ್ಪು ಶೆಟ್ಟಿ, ದಾದಾ ಯಲಗಾರ, ಮುಖ್ಯ ಶಿಕ್ಷಕ ಅನಂತ ಪಾಟೀಲ, ಆಡಳಿತ ಅಧಿಕಾರಿ ಅಜಿತ ಇನಾಮದ, ಮುಂತಾದವರು ಇದ್ದರು.
ಶಿಕ್ಷಕ ಮಲಿಕ್ ಮುಲ್ಲಾ ಸ್ವಾಗತಿಸಿ ವಂದಿಸಿದರು.

