Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಲೇಖನ- ಜಯಶ್ರೀ.ಜೆ. ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರುಬೆಳಗಾವಿಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ಎಂದಿಗೂ ಯಶಸ್ಸು ರಾತ್ರೋರಾತ್ರಿ ಬರುವುದಿಲ್ಲ. ಏಕೆಂದರೆ ಯಶಸ್ಸಿಗೆ ಅಡ್ಡದಾರಿಗಳಿಲ್ಲ. ಆದ್ದರಿಂದ ಯಶಸ್ಸಿಗೆ ಒಂದು ದೊಡ್ಡ ಹೋರಾಟ ಮಾಡಲೇಬೇಕಾಗುತ್ತದೆ. ಯಾವುದೇ ಯಶಸ್ವಿ ವ್ಯಕ್ತಿ ತನ್ನನ್ನು ತಾನು ಅಗಾಧವಾಗಿ ಬದಲಿಸಿಕೊಳ್ಳುತ್ತಾನೆ. ಬದಲಾಗುವುದು ಅಷ್ಟೊಂದು ಸರಳ ಪ್ರಕ್ರಿಯೆ ಅಲ್ಲ. ಅದು ಕಂಬಳಿ ಹುಳುವೊಂದು ಚಿಟ್ಟೆಯಾಗುವ ಪ್ರಕ್ರಿಯೆಯಂತೆ. ಇಷ್ಟವಾದದ್ದನ್ನೆಲ್ಲ ಬಿಡುವುದು ಕಷ್ಟವಾದುದನ್ನು ಮಾಡುವುದು ಯಶಸ್ವಿಯಾಗಲು ಅಗತ್ಯವಿದೆ. ಯಶಸ್ಸಿಗೆ ಬೇಕಾಗಿರುವುದು ಇಷ್ಟವಾದುದನ್ನು ಮಾಡುವುದಲ್ಲ ಗುರಿಗೆ ಸಂಬಂಧಿಸಿದ ಅಗತ್ಯವಾದುದನ್ನು ಮಾಡುವುದು. ಪ್ರಿಯವಾದವುಗಳು ಹಲವೊಮ್ಮೆ ಜೀವನಕ್ಕೆ ಜರೂರ ಮಾಡಲೇಬೇಕಾದ ಸಂಗತಿಗಳು ಆಗಿರುವುದಿಲ್ಲ. ಕೆಲವೊಮ್ಮೆ ಅವುಗಳು ಅಷ್ಟು ಉಪಯುಕ್ತವೂ ಆಗಿರುವುದಿಲ್ಲ.ಕೊರತೆನೀವು ದೊಡ್ಡದನ್ನೇನು ಸಾಧಿಸಲು ಆಗುತ್ತಿಲ್ಲ ಎಂದರೆ ನಿಮ್ಮಲ್ಲಿ ಯೋಗ್ಯತೆ ಇಲ್ಲ ಎಂದಲ್ಲ. ನಮ್ಮಲ್ಲಿ ಪ್ರತಿಯೊಬ್ಬರಿಗೂ ಯೋಗ್ಯತೆ ಇದ್ದೆ ಇದೆ. ವೈಫಲ್ಯಕ್ಕೆ ಕಾರಣ ಯೋಗ್ಯತೆಯ ಕೊರತೆಯಲ್ಲ ಬದಲಾಗಿ ಕಲ್ಪನಾಶಕ್ತಿಯ ಕೊರತೆ. ಸಾವಿರ ಸಾವಿರ ಕೋಟಿ ಗಳಿಸುವ ಸಿನಿಮಾಗಳು ಮೊದಲು ತಯಾರಾಗುವುದು ಕಲ್ಪನಾಶಕ್ತಿಯಲ್ಲಿಯೇ ಅಲ್ಲವೇ? ಸಾಹಸ ಕಥೆಗಳು ಸಹ ಕಲ್ಪನಾಶಕ್ತಿಯ ಭಾಗಗಳಲ್ಲದೇ ಮತ್ತೇನು? ಅತ್ಯದ್ಭುತವಾದ ಕಲ್ಪನೆಯು…
ಉದಯರಶ್ಮಿ ದಿನಪತ್ರಿಕೆ ಆಲಮೇಲ: ವಿಶ್ವೇಶ್ವರ ಬಾಲ ಭಾರತಿ ಅನುದಾನಿತ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾಲೂಕು ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ಮಾಡಿ ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗಿರುವ ವಿದ್ಯಾರ್ಥಿಗಳಿಗೆ ಶಾಲೆಯ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.ಈ ವೇಳೆ ಸಂಸ್ಥೆಯ ಅಧ್ಯಕ್ಷರು ಎಸ್.ಐ. ಜೋಗುರ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಿ ಮಾತನಾಡುತ್ತಾ ವಿದ್ಯಾರ್ಥಿಗಳ ಸಾಧನೆಯು ಅಭಿನಂದನರ್ಹವಾಗಿದೆ, ಅವರ ಕಠಿಣ ಪರಿಶ್ರಮ ಹಾಗೂ ನಿರಂತರ ಪ್ರಯತ್ನದ ಫಲವಾಗಿ ಉತ್ತಮ ಆಟ ಆಡಿ ಉತ್ತಮ ಕ್ರೀಡಾಪಟೂಗಳಾಗಿ ಹೊರ ಹೊಮ್ಮಿದ್ದಾರೆ. ಈ ವಿದ್ಯಾರ್ಥಿಗಳ ಏಕಾಗ್ರತೆ ಇವರ ಸಾಧನೆಯ ಮೂಲಮಂತ್ರ ಹಾಗಾಗಿ ಎಲ್ಲಾ ವಿದ್ಯಾರ್ಥಿಗಳು ಇವರ ಸಾಧನೆಯನ್ನು ಪ್ರೇರಣೆಯಾಗಿ ತೆಗೆದುಕೊಳ್ಳಬೇಕು ಎಂದರು.ಈ ಸಂದರ್ಭದಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ ಆದ ವಿದ್ಯಾರ್ಥಿಗಳಾದ ಸಾಕ್ಷಿ ಬಬಲೇಶ್ವರ , ಅಭಿಷೇಕ ಕೊಬ್ರೆ,ಮಹಾದೇವ ಮಡಿವಾಳ ಹಾಗೂ ಕ್ರೀಡಾ ಮಾರ್ಗದರ್ಶನ ಮಾಡಿದ ದೈಹಿಕ ಶಿಕ್ಷಕಿಯರಾದ ಸೀತಾ ಆರೇಶಂಕರ ರವರನ್ನು ಸನ್ಮಾನಿಸಲಾಯಿತು.ಈ ವೇಳೆ ಸಂಸ್ಥೆಯ ಕೋಶಾಧ್ಯಕ್ಷರು ಅರವಿಂದ ಕುಲಕರ್ಣಿ, ಮುಖ್ಯ ಶಿಕ್ಷಕ ಲಕ್ಷ್ಮೀಪುತ್ರ ಕಿರನಳ್ಳಿ, ಚಂದ್ರಕಾಂತ ದೇವರಮನಿ,…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಹ.ಮ ಪೂಜಾರ ತಮ್ಮ ಶಿಕ್ಷಕ ವೃತಿಯ ಜೊತೆಗೆ ಶಿಶು ಸಾಹಿತ್ಯ ರಚಿಸಿ ಮಕ್ಕಳಿಗೆ ನ್ಯಾಯ, ನೀತಿ, ಸ್ನೇಹ, ಪ್ರೀತಿ ಒಳಗೊಂಡ ಮಾನವೀಯ ಮೌಲ್ಯಾಧಾರಿತ ಬದುಕು ಕಟ್ಟಿಕೊಡುವಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ ಎಂದು ನಿವೃತ್ತ ಪ್ರಾಧ್ಯಾಪಕ ಅರವಿಂದ ಮನಗೂಳಿ ಹೇಳಿದರು.ಪಟ್ಟಣದ ಹೊರ ವಲಯದ ಎಲೈಟ್ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲದಲ್ಲಿನಬಿರೋಶನ್ ಪ್ರಕಾಶನ, ಬೋರಗಿ ಎಲೈಟ್ ಶಿಕ್ಷಣ ಸಂಸ್ಥೆ ವತಿಯಿಂದ ಹ.ಮ ಪೂಜಾರರಿಗೆ ಅಭಿನಂದನಾ ಸಮಾರಂಭ ಹಾಗೂ ಸಾಧಕರಿಗೆ ರಾಜ್ಯೋತ್ಸವ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿ ಪೂಜಾರರು ಕವನ, ಕಥೆ, ಕಾದಂಬರಿ ಸೇರಿದಂತೆ ವಿವಿಧ ಪ್ರಕಾರದ ಸಾಹಿತ್ಯ ಕೃಷಿಯ ಮೂಲಕ ತಮ್ಮ ಜೀವನದುದ್ದಕ್ಕೂ ಮಕ್ಕಳ ಸಾಹಿತ್ಯಾಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ಹೀಗಾಗಿ ಕರ್ನಾಟಕ ಸರ್ಕಾರ ಇವರ ಸಾಹಿತ್ಯ ಸೇವೆ ಗುರುತಿಸಿ 2025 ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ನಾವೇ ಪ್ರಶಸ್ತಿಗೆ ದುಂಬಾಲು ಬದಲು, ಪ್ರಶಸ್ತಿಯೇ ನಮ್ಮ ಹುಡುಕಿಕೊಂಡು ಬರಬೇಕು ಅದು ನಿಜವಾದ ಸಾಧನೆ ಎಂದರು..ಚಾಣಕ್ಯ ಕೆರಿಯರ್ ಅಕಾಡೆಮಿಯ ಎನ್.ಎಂ ಬಿರಾದಾರ…
ಉದಯರಶ್ಮಿ ದಿನಪತ್ರಿಕೆ ಆಲಮೇಲ: ಕಡಣಿ ರಸ್ತೆಯಲ್ಲಿರುವ ಕೆ.ಪಿ.ಆರ್ ಸಕ್ಕರೆ ಕಾರ್ಖಾನೆ ಎದುರು ಕಟಾವು ವಾಹನ ಮಾಲೀಕರು ಮಂಗಳವಾರ ಧರಣಿ ಸತ್ಯಾಗ್ರಹ ಆರಂಭಿಸಿದರು.ಕೆಪಿಆರ್ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿ ೨೦೨೩ ಮತ್ತು ೨೪ ನೇ ಸಾಲಿನ ಕಬ್ಬು ಕಟಾವು ಹಾಗೂ ಸಾಗಾಣಿಕೆ ಮಾಡಿದ ಗುತ್ತಿಗೆದಾರರ ಹೆಚ್ಚುವರಿ ಬಾಕಿ ಹಣ 114.ರೂಪಾಯಿಗಳು ನೀಡಬೇಕಾಗಿದ್ದು. ಅದರಲ್ಲಿ 57 ಹಾಗೂ 28.50 ನೀಡಿದ್ದು ಉಳಿದ ಹಣ ಈವರೆಗೂ ಪಾವತಿ ಮಾಡಿಲ್ಲ ಎಂದು ದೂರಿದರು.ಸಂಘದ ಅಧ್ಯಕ್ಷ ಶಿಶಿಧರ ಮಾತನಾಡಿ ಕೆಲವು ವಾಹನ ಮಾಲೀಕರಿಗೆ ಟನ್ ಗೆ ಕೇವಲ 57 ರೂ. ಮಾತ್ರ ನೀಡಿದ್ದು ಬಾಕಿ ಹಣ ಪಾವತಿಸಲು ಆಡಳಿತ ಮಂಡಳಿಗೆ ಹಲವು ಬಾರಿ ಮನವಿ ಮಾಡಿದ್ದರೂ ಯಾವುದಕ್ಕೂ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.ಬಾಕಿ ಪಾವತಿವಾಗುವ ವರೆಗೂ ಧರಣಿ ನಿರಂತರವಾಗಿರುತ್ತದೆ ಎಂದರು.ಅಧ್ಯಕ್ಷ ಶಶಿಧರ್ ನಾಯ್ಕೋಡಿ, ಉಪಾಧ್ಯಕ್ಷ ಮಹಾಂತೇಶ ಕತ್ತಿ, ಶಿವಕುಮಾರ್ ಮೇಲಿನಮನಿ, ರಾಜು ಮೇತ್ರಿ, ಕೆ ಆರ್ ಪೂಜಾರಿ, ದಾದಾ ಯಲಗಾರ ಲಕ್ಷ್ಮಣ ಗುಡ್ಡಳ್ಳಿ, ಮಹೇಶ್ ಹೂವಿನಹಳ್ಳಿ , ಲಕ್ಷ್ಮೀಪುತ್ರ ಬಾಗೇವಾಡಿ,…
ನ.೧೪ ರಿಂದ ನ.೧೮ ರ ವರೆಗೆ ತಡವಲಗಾ ಶ್ರೀ ಮರುಳಸಿದ್ದೇಶ್ವರ ಜಾತ್ರೆ | ಲಕ್ಷ ದೀಪೋತ್ಸವ ಉದಯರಶ್ಮಿ ದಿನಪತ್ರಿಕೆ ಇಂಡಿ: ತಾಲೂಕಿನ ಸುಕ್ಷೇತ್ರ ತಡವಲಗಾ ಜೋಡಗುಡಿ ಗ್ರಾಮದ ಶ್ರೀ ಮರುಳಸಿದ್ದೇಶ್ವರ ಕಾರ್ತಿಕ ಮಾಸದ ಪ್ರಯುಕ್ತ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ಕಳಸಾರೋಹಣ ಹಾಗೂ ಸರಳ ಸಾಮೂಹಿಕ ವಿವಾಹ ಹಾಗೂ ಧರ್ಮಸಭೆ ಶ್ರೀ ಮರುಳಸಿದ್ದೇಶ್ವರ ಮಹಾರಥೋತ್ಸವ ಹಾಗೂ ಲಕ್ಷ ದೀಪೋತ್ಸವ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಅದ್ದೂರಿಯಾಗಿ ಜರುಗಲಿವೆ ಎಂದು ತಡವಲಗಾ ಹಿರೇಮಠದ ಶ್ರೀ ಅಭಿನವ ರಾಚೋಟೇಶ್ವರ ಶ್ರೀಗಳು ತಿಳಿಸಿದ್ದಾರೆ.ಪಟ್ಟಣದಲ್ಲಿ ಸುದ್ದಿಗಾರರೊಡನೆ ಮಾತನಾಡಿದ ಅವರು ನ ೧೪ ರಿಂದ ೧೮ ರ ವರೆಗೆ ಬೃಹತ್ ಜಾನುವಾರು ಜಾತ್ರೆ ಮತ್ತು ೧೪ ರಂದು ಸಾಯಂಕಾಲ ೬ ಗಂಟೆಗೆ ಬಾಲ ವಾಗ್ಮೀ ಕುಮಾರಿ ಹಾರಿಕಾ ಮಂಜುನಾಥ ಇವರಿಂದ ಉಪನ್ಯಾಸ,ನ. ೧೫ ರಂದು ಬೆಳಗ್ಗೆ ೧೦.೩೦ ಗಂಟೆಗೆ ತಡವಲಗಾ ಸಾಂಸ್ಕೃತಿಕ ಉತ್ಸವ ಉದ್ಘಾಟನೆ ಸಂಕೀರ್ಣ ಗೋಷ್ಠಿ ಕವಿಗೋಷ್ಠಿ ವಿಶ್ವ ಚೇತನ ಪ್ರಶಸ್ತಿ ಸಮಾರಂಭ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ,…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮಾತೋಶ್ರೀ ಶಂಕ್ರೆಮ್ಮಾತಾಯಿ ಪ್ರಾಥಮಿಕ ಶಾಲೆ ಕತಕನಹಳ್ಳಿಯ ವಿದ್ಯಾರ್ಥಿಗಳು ಹಿಟ್ಟಿನಹಳ್ಳಿ ಕ್ಲಸ್ಟರ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮವಾದ ಪ್ರತಿಭಾ ಕಾರಂಜಿ ಸ್ಪರ್ದೆಯಲ್ಲಿ ಭಾಗವಹಿಸಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನವನ್ನು ಪಡೆದಿದ್ದಾರೆ.ಚೈತ್ರಾ ಬಿರಾದಾರ ಅಭಿನಯ ಗೀತೆ, ಮಾದೇಗೌಡ ಅಲ್ಲಾಪೂರ ಇಂಗ್ಲೀಷ ಕಂಠಪಾಠ, ಪ್ರದೀಪ ಹಂಡಿ ಮಿಮಿಕ್ರಿ ಈರಣ್ಣ ಬಿರಾದಾರ ಚಿತ್ರಕಲೆ, ಸೈದು ವಾಲಿಕಾರ ಕ್ಲೇಮಾಡಲಿಂಗ, ಲಕ್ಷ್ಮಿ ಮೋದಿ ಕಥೆೆ ಹೇಳುವುದು, ಸ್ಪಂದನಾ ಸೋಲಾಪೂರ ಕನ್ನಡ ಕಂಠಪಾಠದಲ್ಲಿ ಪ್ರಥಮ ಸ್ಥಾನ ಪಡೆದು ತಾಲೂಕಾ ಮಟ್ಟದ ಸ್ಟರ್ದೇಯಲ್ಲಿ ಆಯ್ಕೆಯಾಗಿದ್ದಾರೆ, ಸಮೃದ್ದಿ ಕಲ್ಯಾಣಿ ದೇಶಭsಕ್ತಿಗೀತೆ, ಜವೇರಿಯಾ ದಳವಾಯಿ ಧಾರ್ಮಿಕ ಪಠಣ, ಸನ್ನಿಧಿ ಶಿರಮಗೊಂಡ ಪ್ರಬಂಧದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಸುಕೃತಾ ಬಿರಾದಾರ ಇಂಗ್ಲೀಷ ಕಂಠಪಾಠ, ಅಖಿಲ ಬಡಿಗೇರ ಕಥೆ ಹೇಳುವುದು, ಮುಫಿಜ್ ಕೊಟೆಖಾನ ಕ್ಲೇಮಾಡಲಿಂಗ ಚೈತ್ರಾ ಬಬಲೇಶ್ವರ ದೇಶಭಕ್ತಿಗೀತೆ, ಗೌತಮಿ ಬಬಲೇಶ್ವರ ಪದ್ಯವಾಚನದಲ್ಲಿ ತೃತೀಯ ಸ್ಥಾನ ಪಡೆದು ತಮ್ಮ ಶಾಲೆಯ ಹಾಗೂ ತಂದೆ ತಾಯಿಯ ಹೆಸರು ತರುವಲ್ಲಿ ಯಶಸ್ವಿಯಾಗಿದ್ದಾರೆ. ಎಂದು ಹೇಳಲು ಹರ್ಷವೆನಿಸುತ್ತದೆ. ಈ…
ಉದಯರಶ್ಮಿ ದಿನಪತ್ರಿಕೆ ಹೊನವಾಡ: ನಿತ್ಯ ಸಂಚಾರದಲ್ಲಿ ಅನಾನುಕೂಲತೆ ಊಂಟಾಗಿ ಬಹಳ ದಿನಗಳಿಂದ ಕಾಡುತ್ತಿದ್ದ ಸಮಸ್ಯೆಗೆ ಕೈಗಾರಿಕಾ ಸಚಿವ ಎಮ್ ಬಿ ಪಾಟೀಲ್ ಅವರು ಸ್ಪಂದಿಸಿ ವಿದ್ಯಾರ್ಥಿಗಳ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಿದ್ದಾರೆನಿತ್ಯ ಸಂಚರಿಸಲು ವಿಜಯಪುರ-ಹೊನವಾಡ-ತೆಲಸಂಗದವರೆಗೆ ಎರಡು ಸಿಟಿ ಬಸ್ಸುಗಳ ಸೇವೆ ಕಲ್ಪಿಸಿ ವಿದ್ಯಾರ್ಥಿಗಳಿಗೆ ಸಾರ್ವಜನಿಕರಿಗೆ ಅನುಕೂಲ ಮಾಡಿದ್ದಾರೆ.ಬುಧವಾರ ಬಂದ ಎರಡು ಬಸ್ಸುಗಳಿಗೆ ಸಚಿವರ ಆಪ್ತ ಸಹಾಯಕರಾದ ಸಂತೋಷ ಲೋಕುರಿ ಅವರು ಪೂಜೆ ಸಲ್ಲಿಸಿದರು.ಈ ಸಂದರ್ಭದಲ್ಲಿ ಸಾರಿಗೆ ಇಲಾಖೆಯ ವಿಭಾಗೀಯ ನಿಯಂತ್ರಣ ಅಧಿಕಾರಿಗಳು, ಗ್ಯಾರಂಟಿ ಯೋಜನೆಯ ಸಮಿತಿಯ ಎಲ್ಲ ಸದಸ್ಯರು, ಮಾಜಿ ತಾಲುಕಾ ಪಂಚಾಯತ್ ಅಧ್ಯಕ್ಷರಾದ ಸಿದ್ದು ಬೆಳಗಾವಿ, ಮಾಜಿ ಗ್ರಾ ಪಂ ಅಧ್ಯಕ್ಷರಾದ ದುಂಡಪ್ಪಾ ವಾಲಿಕಾರ, ಮುಖಂಡರಾದ ಸುರೇಶ ಪಾಟೀಲ, ವಿಜಯಕುಮಾರ ಹಿರೇಮಠ, ದುಂಡಪ್ಪಾ ಮಾಲಗಾರ, ಸಂಜಯಕುಮಾರ ಯಚ್ಚಿ, ಭೀಮರಾಯ ಮೋಳೆ, ಅರುಣ ಉಪ್ಪಾರ, ಸುರೇಶ ನರಳೆ, ಅನೀಲ ನಾಟಿಕಾರ, ಗ್ರಾಮದ ಹಿರಿಯರು, ಅನೇಕ ಯುವಕರು ಉಪಸ್ಥಿತರಿದ್ದರು.
ನಾದ ಕೆಡಿ ಗ್ರಾಮದ ಸಕ್ಕರೆ ಕಾರ್ಖಾನೆಗೆ ಬೃಹತ್ ಪ್ರಮಾಣದಲ್ಲಿ ಮುತ್ತಿಗೆ ಹಾಕಿ ರೈತರ ಪ್ರತಿಭಟನೆ ಉದಯರಶ್ಮಿ ದಿನಪತ್ರಿಕೆ ಇಂಡಿ: ತಾಲೂಕಿನ ಜಮಖಂಡಿ ಸಕ್ಕರೆ ಕಾರ್ಖಾನೆ ಘಟಕ ೨ ರ ನಾದ ಕೆಡಿ ಗ್ರಾಮದ ಸಕ್ಕರೆ ಖಾರ್ಖಾನೆ ಮುಂದೆ ತಾಲೂಕಿನ ಸುಮಾರು ಸಾವಿರಕ್ಕೂ ಹೆಚ್ಚು ರೈತರು ಬಾಳು ಮುಳಜಿಯವರ ನೇತೃತ್ವದಲ್ಲಿ ಮೊದಲು ಒಂದು ಟನ್ ಕಬ್ಬಿಗೆ ಕಾರ್ಖಾನೆಯವರು ದರ ನಿಗದಿ ಪಡಿಸಿ ನಂತರ ಕಾರ್ಖಾನೆ ಪ್ರಾರಂಭಿಸಿ ಎಂದು ಕಾರ್ಖಾನೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.ಅಲ್ಲಿ ಮಾತನಾಡಿದ ರೈತ ಮುಖಂಡ ಬಾಳು ಮುಳಜಿಯವರು, ಜಿಲ್ಲಾಧಿಕಾರಿಗಳು ಟನ್ ಕಬ್ಬಿಗೆ ರೂ ೩೩೦೦ ರೂ ಎಂದು ಹೇಳುತ್ತಾರೆ, ಕಾರ್ಖಾನೆಯವರು ಎಫ್ಆರ್ಪಿ ಆಧಾರದ ಮೇಲೆ ಟನ್ ಕಬ್ಬಿಗೆ ಎಷ್ಟು ಹಣ ನೀಡಬೇಕೆಂದು ಒಂದು ವಾರದಲ್ಲಿ ಜಿಲ್ಲಾಧಿಕಾರಿಗಳಿಗೆ ಲಿಖಿತ ರೂಪದಲ್ಲಿ ಕೋಡುವದಾಗಿ ಹೇಳುತ್ತಾರೆ. ಹೀಗಾಗಿ ರೈತರು ಗೊಂದಲದಲ್ಲಿದ್ದು ದರ ನಿಗದಿ ಮಾಡಿ ಕಾರ್ಖಾನೆ ಪ್ರಾರಂಭಿಸಬೇಕು. ಇಲ್ಲದಿದ್ದರೆ ಕಾರ್ಖಾನೆ ಪ್ರಾರಂಭ ಮಾಡಲು ಬಿಡುವದಿಲ್ಲ ಎಂದರು.ಶ್ರೀಶೈಲ ಮದರಿ ಮಾತನಾಡಿ, ಜಿಲ್ಲಾಧಿಕಾರಿಗಳು ಮೊದಲು ದರ ಘೋಷಣೆ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮುಖ್ಯಮಂತ್ರಿಯವರ ಮೂಲಕಸೌಕರ್ಯ ಅಭಿವೃದ್ಧಿ ಯೋಜನೆಯಡಿ ನಗರಾಭಿವೃದ್ಧಿ ಇಲಾಖೆಯಡಿ ವಿವಿಧ ಸಮುದಾಯ ಭವನಗಳ ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯಮಂತ್ರಿಗಳು ಅನುಮೋದನೆ ನೀಡಿದ್ದಾರೆ ಎಂದು ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ರವರು ತಿಳಿಸಿದ್ದಾರೆ.ವಾ.ನಂ.2ರ ದರ್ಗಾದ ಕರಿಸಿದ್ದೇಶ್ವರ ದೇವಸ್ಥಾನ ಹತ್ತಿರ ರೂ.50 ಲಕ್ಷ, ವಾ.ನಂ.13ರ ಶಹಾಪೇಟೆಯ ಮಹಾದೇವಪ್ಪ ದೇವಸ್ಥಾನ ಹತ್ತಿರ ರೂ.25 ಲಕ್ಷ, ವಾ.ನಂ.8ರ ವೆಂಕಟರಮಣ ಗಲ್ಲಿಯ ವೆಂಕಟೇಶ್ವರ ದೇವಸ್ಥಾನ ಹತ್ತಿರ ರೂ.25 ಲಕ್ಷ, ವಾ.ನಂ.2ರ ಶಕ್ತಿನಗರದ ಶಿವಶಿಂಪಿ ಸಮಾಜದ ಸಮುದಾಯ ಭವನ ರೂ.25 ಲಕ್ಷ, ವಾ.ನಂ.17 ರಂಭಾಪುರ ರಾಮಲಿಂಗೇಶ್ವರ ದೇವಸ್ಥಾನ ಹತ್ತಿರ ರೂ.15 ಲಕ್ಷ, ವಾ.ನಂ.22 ವಿವೇಕನಗರದ ಜಾಗೃತ ಹನುಮಾನ ದೇವಸ್ಥಾನದ ಹತ್ತಿರ ರೂ.15 ಲಕ್ಷ, ವಾ.ನಂ.24ರ ಕಮಲಖಾನ ಬಜಾರ್ ಈಶ್ವರಲಿಂಗ ದೇವಸ್ಥಾನ ಹತ್ತಿರ ರೂ.15 ಲಕ್ಷ, ವಾ.ನಂ.23ರ ಪಿಡಿಜೆ ಸ್ಕೂಲ್ ಹತ್ತಿರದ ಅಖಿಲ ಭಾರತ ಮಧ್ವ ಮಹಾಂಡಳ ರೂ.25 ಲಕ್ಷ, ವಾ.ನಂ.21ರ ಗುರುಪಾದೇಶ್ವರ ನಗರದ ಯೋಗಿಶ್ವರ ಯಾಜ್ಞವಲ್ಕ್ಯ ಮಂದಿರ ನಿರ್ಮಾಣ ರೂ.15 ಲಕ್ಷ, ವಾ.ನಂ.2ರ ಗಂಗಾಪುರಂ ಬಡಾವಣೆಯ ಮರ್ಚಂಟ್ಸ್…
ಪರಪ್ಪನ ಅಗ್ರಹಾರದಲ್ಲಿ ಉಗ್ರರಿಗೆ ರಾಜಾತಿಥ್ಯ ಪ್ರಕರಣ | ರಾಜ್ಯದಲ್ಲಿ ಹದಗೆಟ್ಟಿರುವ ಕಾನೂನು-ಸುವ್ಯವಸ್ಥೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಪರಪ್ಪನ ಅಗ್ರಹಾರದಲ್ಲಿ ಉಗ್ರರಿಗೆ ರಾಜಾತಿಥ್ಯ ನೀಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಬೇಕು ಎಂದು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಅಮಾಯಕ ಜನರ ಪ್ರಾಣ ತೆಗೆದ ಮಾನವೀಯತೆಯ ವಿರೋಧಿಗಳಾದ ಭಯೋತ್ಪಾದಕರಿಗೆ ಜೈಲಿನಲ್ಲಿ ರಾಜಾತೀಥ್ಯ ನೀಡಿರುವುದು ಎಷ್ಟರಮಟ್ಟಿಗೆ ಸರಿ? ಎಂದು ಪ್ರಶ್ನಿಸಿದರು.ಭಯೋತ್ಪಾದನ ಚಟುವಟಿಕೆಗಳಲ್ಲಿ ಭಾಗಿಯಾದ ಉಗ್ರರಿಗೆ ಜೈಲಲ್ಲಿ ರಾಜಾತಿಥ್ಯ ನೀಡುವುದರಿಂದ ಇನ್ನೊಬ್ಬ ಉಗ್ರ ತಯಾರಾಗಲು ಪ್ರಚೋದನೆ ನೀಡಿದಂತಾಗುತ್ತದೆ, ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಜೈಲಿನಲ್ಲಿ ಉಗ್ರರಿಗೂ ರಾಜಾತೀಥ್ಯ ದೊರಕುವ ಮಟ್ಟಿಗೆ ವ್ಯವಸ್ಥೆ ಹಾಳಾಗಿದೆ, ಕೂಡಲೇ ಗೃಹ ಸಚಿವರು ರಾಜಿನಾಮೆ ನೀಡಬೇಕು ಎಂದು ಪಟ್ಟಣಶೆಟ್ಟಿ ಒತ್ತಾಯಿಸಿದರು.ಭಯೋತ್ಪಾದನಾ ಚಟುವಟಿಕೆ ಸೇರಿದಂತೆ ಗಂಭೀರ ಆರೋಪ ಪ್ರಕರಣಗಳಲ್ಲಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳು ರಾಜಾರೋಷವಾಗಿ ಮೊಬೈಲ್ ಬಳಕೆ ಹಾಗೂ ವಿಲಾಸಿ ಜೀವನದಲ್ಲಿ ತೊಡಗಿದ್ದಾರೆ, ಐಸಿಸ್ ಸಂಘಟನೆಯ ಸದಸ್ಯರು ಐಷಾರಾಮಿಯಾಗಿ ಎಲ್ಲ…
