Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಯಾವಾಗ ಚುನಾವಣೆ ನಡೆದರೂ ಬಿಜೆಪಿಗೆ ಬಹುಮತ

ಡಿ.೨೯ರಂದು ವಿಶ್ವಮಾನವ ದಿನಾಚಾರಣೆ

೨ ಹೊಸ ಸಿಟಿ ಬಸ್‌ಗಳಿಗೆ ಚಾಲನೆ ನೀಡಿದ ಶಾಸಕ ಮನಗೂಳಿ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಸಕ್ಕರೆ ಸಚಿವರ ಮಾತಿನಂತೆ ರೂ.೫ ಲಕ್ಷ ಬಹುಮಾನ ನೀಡಲು ಆಗ್ರಹ
(ರಾಜ್ಯ ) ಜಿಲ್ಲೆ

ಸಕ್ಕರೆ ಸಚಿವರ ಮಾತಿನಂತೆ ರೂ.೫ ಲಕ್ಷ ಬಹುಮಾನ ನೀಡಲು ಆಗ್ರಹ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಸಂಗಮನಾಥ ಸಕ್ಕರೆ ಕಾರ್ಖಾನೆ ತೂಕದಲ್ಲಿ ೫೬೦ ಕೆ.ಜಿ ಮೋಸ | ಅಧಿಕಾರಿಗಳಿಂದ ತಪಾಸಣೆ | ಮೋಸ ಸಾಬೀತು

ಉದಯರಶ್ಮಿ ದಿನಪತ್ರಿಕೆ

ವಿಜಯಪುರ: ಸಿಂದಗಿ ತಾಲೂಕಿನ ಮನ್ನಾಪುರದ ಸಂಗಮನಾಥ ಸಕ್ಕರೆ ಕಾರ್ಖಾನೆಯಲ್ಲಿ ಬುಧವಾರ ಒಬ್ಬ ರೈತ ಸಂಶಯದಿಂದ ಹೊರಗಡೆ ತೂಕ ಮಾಡಿಕೊಂಡು ಬಂದಾಗ ಕಬ್ಬಿನ ತೂಕದಲ್ಲಿ ೧೦೦೦ ಕೆ,ಜಿ ಮೋಸ ಆಗಿರುವುದು ಕಂಡು ಬಂದಿರುವ ಹಿನ್ನಲೆಯಲ್ಲಿ ಕಾರ್ಖಾನೆ ಸಿಬ್ಬಂದಿಯವರಿಗೂ ಹಾಗೂ ರೈತರ ನಡುವೆ ವಾಗ್ವಾದ ಉಂಟಾಯಿತು.
ಈ ವೇಳೆ ಸ್ಥಳಕ್ಕೆ ಸಿಂದಗಿ ತಹಶಿಲ್ದಾರರು ಹಾಗೂ ಅಳತೆ ಮತ್ತು ತೂಕದ ಅಧಿಕಾರಿಗಳು ಬಂದಾಗ ಸರಿಯಾದ ತೂಕ ತೊರಿಸಿ ರೈತರಿಗೆ ಮೊಸ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ, ಅಧಿಕಾರಿಗಳು ಕೂಡಾ ಬಂದಾಗ ೫೬೦ ಕೆ.ಜಿ ವ್ಯಾತ್ಯಾಸ ಬಂದಿದೆ ಇದನ್ನು ತಪಾಸಣೆ ಮಾಡಬೇಕು ಎಂದರು.
ಈ ವಿಷಯವನ್ನು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡರಿಂದ ಬುಧವಾರ ಸಂಜೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಾಗ ಗುರುವಾರ ಇಂಡಿ ಉಪವಿಭಾಗಾಧಿಕಾರಿಗಳು, ಸಿಂದಗಿ ತಹಶಿಲ್ದಾರರು, ಆಹಾರ ಇಲಾಖೆ ನಿರ್ದೇಶಕರು ಹಾಗೂ ಅಳತೆ ಮತ್ತು ಮಾಪನ ಇಲಾಖೆಯ ಅಧಿಕಾರಿ, ಸಿಂದಗಿ ಪಿ.ಎಸ್.ಐ ಗಳೊಂದಿಗೆ ಸ್ಥಳಕ್ಕೆ ಹೋಗಿ ಕೂಲಂಕುಷವಾಗಿ ಪರಿಶೀಲನೆ ಮಾಡಿ ವರದಿ ಕೊಡುವಂತೆ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅವರು ನಿರ್ದೇಶನ ನೀಡಿದ್ದರು.
ಗುರುವಾರ ಬೆಳಿಗ್ಗೆ ಸಂಬಂಧಿಸಿದ ಎಲ್ಲಾ ಅಧಿಕಾರಿಗಳು ಪೋನ ಮೂಲಕ ತಿಳಿಸದೇ ಕಾರ್ಖಾನೆಗೆ ಬೇಟಿ ನೀಡಿ, ಈ ಮೇಲಿನ ವಿಷಯಗಳನ್ನು ಹಂತ ಹಂತವಾಗಿ ಕೂಲಂಕುಷವಾಗಿ ಪರಿಶೀಲನೆ ಮಾಡಿದರು.
ಕಬ್ಬು ಕಾರ್ಖಾನೆಗೆ ಬಂದ ನಂತರ ಒಟ್ಟು ೩ ಬಾರಿ ತೂಕ ಮಾಡಿದಾಗ ೩ ಬಾರಿ ಬೇರೆ ಬೇರ ತೂಕ ತೋರಿಸಲಾಗಿತ್ತು, ಹೊರಗಡೆಗಿಂತ ೯೯೫ ಕೆ.ಜಿ ಕಡಿಮೆ ತೋರಿಸಿತ್ತು, ನಂತರದಲ್ಲಿ ೫೬೦ ಕೆ.ಜಿ ಕಡಿಮೆ ತೊರಿಸಿತ್ತು, ಅಧಿಕಾರಿಗಳು ಬಂದ ನಂತರ ಎಲ್ಲವೂ ಸರಿಯಾಗಿ ತೋರಿಸಲಾಗಿತ್ತು, ಎಲ್ಲದಕ್ಕೂ ಸಿ,ಸಿ.ಟಿ.ವಿ ಕಣ್ಗಾವಲು ಹಾಗೂ ಅಧಿಕೃತ ಕಾರ್ಖಾನೆಯವರು ನೀಡಿರುವ ರಸೀಧಿಯ ಮೇಲೆ ೫೬೦ ಕೆ.ಜಿ ಮೋಸ ಆಗಿರುವುದಾಗಿ ಅಧಿಕಾರಿಗಳು ನಿರ್ಧರಿಸಿದರು.
ನಾಳೆ ಕಾರ್ಖಾನೆಯರಿಗೆ ಇದನ್ನು ಕೇಳಿ ಒಂದು ನೋಟಿಸ ಕೊಟ್ಟು ೨ ದಿನಗಳಲ್ಲಿ ಉತ್ತರ ಕೇಳುತ್ತೇವೆ, ಹಾಗೆ ಒಂದು ವಿಸ್ತೃತವಾದ ವರದಿಯನ್ನು ತಯಾರಿಸಿ ಜಿಲ್ಲಾಧಿಕಾರಿಗಳಿಗೆ ನೀಡುತ್ತೆವೆ , ನಂತರ ಈ ಕುರಿತು ಕಾನೂನು ಕ್ರಮ ಕುರಿತು ಚರ್ಚಿಸಿ ನಿರ್ಧರಿಸಲಾಗುವುದು ಎಂದರು.
ಈ ವೇಳೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಅವರು ಮಾತನಾಡುತ್ತಾ, ಒಂದು ಟ್ರಾಕ್ಟರ್ ಕಬ್ಬಿನಿಂದ ೫೬೦ ಕೆ.ಜಿ ಮೋಸ ಆಗಿದೆ ಎಂದಾದರೆ ಈ ಮೊದಲು ಬಂಧಿರುವ ಕಬ್ಬಿನ ತೂಕದಲ್ಲು ಮೋಸ ಆಗಿರುವ ಸಾಧ್ಯತೆಗಳಿವೆ, ಈ ಕುರಿತು ತಪಿತಸ್ಥರಿಗೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಮತ್ತು ಸಕ್ಕರೆ ಸಚಿವರ ಹೇಳಿಕೆಯಂತೆ ೫ ಲಕ್ಷ ಬಹುಮಾನ ಕೊಡಬೇಕು ಎಂದು ಈ ಮೂಲಕ ಒತ್ತಾಯ ಮಾಡುತ್ತೇವೆ ಎಂದರು
ಈ ವೇಳೆ ರೈತ ಮುಖಂಡರಾದ ಸಿದ್ರಾಮಪ್ಪ ರಂಜಣಗಿ, ಧರೆಪ್ಪಗೌಡ ಬಿರಾದಾರ, ಕ.ರ.ವೇ ರಾಜ್ಯ ಉಪಾಧ್ಯಕ್ಷರಾದ ಬಸವರಾಜ ತಾಳಿಕೋಟಿ, ರಾಘವೇಂದ್ರ ಹೂಗಾರ, ಸೇರಿದಂತೆ ನೂರಾರು ರೈತರು ಇದ್ದರು.

BIJAPUR NEWS bjp public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಯಾವಾಗ ಚುನಾವಣೆ ನಡೆದರೂ ಬಿಜೆಪಿಗೆ ಬಹುಮತ

ಡಿ.೨೯ರಂದು ವಿಶ್ವಮಾನವ ದಿನಾಚಾರಣೆ

೨ ಹೊಸ ಸಿಟಿ ಬಸ್‌ಗಳಿಗೆ ಚಾಲನೆ ನೀಡಿದ ಶಾಸಕ ಮನಗೂಳಿ

ಹಳೆ ವಿದ್ಯಾರ್ಥಿಗಳ ಸಂಘಗಳಿಂದ ಸರ್ಕಾರಿ ಶಾಲೆಗಳ ಅಭಿವೃದ್ಧಿ ಸಾಧ್ಯ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಯಾವಾಗ ಚುನಾವಣೆ ನಡೆದರೂ ಬಿಜೆಪಿಗೆ ಬಹುಮತ
    In (ರಾಜ್ಯ ) ಜಿಲ್ಲೆ
  • ಡಿ.೨೯ರಂದು ವಿಶ್ವಮಾನವ ದಿನಾಚಾರಣೆ
    In (ರಾಜ್ಯ ) ಜಿಲ್ಲೆ
  • ೨ ಹೊಸ ಸಿಟಿ ಬಸ್‌ಗಳಿಗೆ ಚಾಲನೆ ನೀಡಿದ ಶಾಸಕ ಮನಗೂಳಿ
    In (ರಾಜ್ಯ ) ಜಿಲ್ಲೆ
  • ಹಳೆ ವಿದ್ಯಾರ್ಥಿಗಳ ಸಂಘಗಳಿಂದ ಸರ್ಕಾರಿ ಶಾಲೆಗಳ ಅಭಿವೃದ್ಧಿ ಸಾಧ್ಯ
    In (ರಾಜ್ಯ ) ಜಿಲ್ಲೆ
  • ನಾಳೆ ದೇವರಹಿಪ್ಪರಗಿ ಪತ್ತಿನ ಸಹಕಾರಿ ಸಂಘದ ರಜತ ಮಹೋತ್ಸವ
    In (ರಾಜ್ಯ ) ಜಿಲ್ಲೆ
  • ಜ್ಞಾನದ ಸುವಾಸನೆ ವಿಶ್ವಕ್ಕೆ ಹರವಿದ ದಾರ್ಶನಿಕ ಸಿದ್ಧೇಶ್ವರ ಶ್ರೀ
    In (ರಾಜ್ಯ ) ಜಿಲ್ಲೆ
  • ದೇಶವನ್ನು ಅಭಿವೃದ್ಧಿ ಪಥದತ್ತ ಸಾಗಿಸಿದ ವಾಜಪೇಯಿ :ಪ್ರಭುಗೌಡ
    In (ರಾಜ್ಯ ) ಜಿಲ್ಲೆ
  • ಪ್ರದೇಶ ಕುರುಬ ಸಂಘದ ಅಧ್ಯಕ್ಷರಾಗಿ ಸಿದ್ದು ಕೆರಿಗೊಂಡ ಆಯ್ಕೆ
    In (ರಾಜ್ಯ ) ಜಿಲ್ಲೆ
  • 350ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ನಾನಾ ಕಂಪನಿಗಳಿಗೆ ಆಯ್ಕೆ
    In (ರಾಜ್ಯ ) ಜಿಲ್ಲೆ
  • ಡಿಸ್ಮೆನೋರಿಯಾ ಕುರಿತು ಆರೋಗ್ಯ ಉಚಿತ ತಪಾಸಣೆ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2025 udayarashminews.com. Designed by udayarashmi news .

Type above and press Enter to search. Press Esc to cancel.