Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಲೇಖನ- ಜಯಶ್ರೀ.ಜೆ. ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರುಬೆಳಗಾವಿಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ಹೃದಯ ಕದ್ದ ಚೆಲುವೆಜಿಂಕೆಯಂಥ ಹೊಳೆಯುವ ನಿನ್ನ ಕಣ್ಣೋಟದ ಸನ್ನೆಗೆ ಮರು ಮಾತು ಬರದೇ ಮನಸೋತೆ. ಮರುಕ್ಷಣವೇ, ಮಿಡಿವ ಹೃದಯವ ನಿನ್ನ ಹೆಸರಿಗೆ ಬರೆದೆ. ಗಿಳಿಯಂಥ ಸವಿ ನುಡಿಗೆ ಕಿವಿಯಾದೆ.. ಪ್ರೀತಿ ಎನ್ನುವ ಮಾಯೆಯೇ ಹಾಗಿರಬೇಕು. ನೀ ನಗುತ ಕರೆದರೆ ಮುಗಿದೇ ಹೋಯಿತು. ಮನಸ್ಸು ನಿರಾಕರಿಸುವುದು ಉಂಟೆ ಚೆಲುವೆ? ರಸ ಕಾವ್ಯದಂಥ ನಿನ್ನ ಯೌವ್ವನಕೆ ಪ್ರಥಮ ನೋಟದಲ್ಲೇ ಒಲವಿನ ಕುಸುಮ ಅರಳಿತು. ಪ್ರೀತಿ ಹೊಸ ಶಕ್ತಿ ಉಲ್ಲಾಸ ಉತ್ಸಾಹ ತುಂಬುತ್ತೆ ಅಂತ ಕೇಳಿದ್ದೆ. ಅದು ನಿಜಕ್ಕೂ ನಿಜ ಅನಿಸ್ತಿದೆ. ಮೊದಲಿನಂತಿಲ್ಲ ನಾನೀಗ. ಏನೇನೋ ಹೊಸ ಕನಸು ಕಾಣ್ತಿದಿನಿ. ಹೊಸ ಹುರುಪಿನಿಂದ ನಿನ್ನ ಓಣಿಯಲ್ಲಿ ಹಾಡುತ್ತ ಕುಣಿಯುತ್ತ ಓಡಾಡ್ತಿದಿನಿ. ನನ್ನ ಹರೆಯದ ಗೋಡೆಯ ಮೇಲೆ ನಿನ್ನದೇ ಚಿತ್ರ ಬರೆದಿರುವೆ.ಎದೆಯ ಭಿತ್ತಿಯ ಮೇಲೂ ನಿನ್ನದೇ ಕಚಗುಳಿಯಾಟದ ನರ್ತನ. ಪ್ರತಿ ದಿನ ಪ್ರತಿ ಕ್ಷಣ ನಿನ್ನದೇ ಧ್ಯಾನ. ಕಂಡ ಕಂಡ ಹುಡುಗಿಯರಲ್ಲೂ ನಿನ್ನನ್ನೇ ಕಾಣುತಿರುವೆ. ಹೂ ನಗೆಯ…
ಸ್ವಯಂಕೃತ ಅಪರಾಧದಿಂದ ಪ್ರತಿಪಕ್ಷ ಸ್ಥಾನ | 130 ರಿಂದ 140 ಸ್ಥಾನ ಗೆಲ್ಲುವ ಮೂಲಕ ಅಧಿಕಾರಕ್ಕೆ | ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿಶ್ವಾಸ ಬೆಂಗಳೂರು: ರಾಜ್ಯದಲ್ಲಿ ಯಾವಾಗ ಚುನಾವಣೆ ನಡೆದರೂ ಬಿಜೆಪಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಪಕ್ಷದ ಕಚೇರಿಯಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 101ನೇ ಜನ್ಮದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾಳೆ ಅಥವಾ 2028 ರಲ್ಲಿ ಚುನಾವಣೆ ನಡೆದರೆ, ಬಿಜೆಪಿ ಸುಮಾರು 130 ರಿಂದ 140 ಸ್ಥಾನಗಳನ್ನು ಗೆಲ್ಲುವ ಮೂಲಕ ಸ್ವಂತವಾಗಿ ಅಧಿಕಾರಕ್ಕೆ ಬರುವ ವಿಶ್ವಾಸವಿದೆ ಎಂದು ಅವರು ಹೇಳಿದರು.ಕರ್ನಾಟಕವು ಮುಂದೊಂದು ದಿನ ದಕ್ಷಿಣ ಭಾರತದಲ್ಲಿ ಬಿಜೆಪಿಯ ಭದ್ರ ಕೋಟೆ ಆಗಲಿದೆ ಎಂಬ ದೂರದೃಷ್ಟಿತ್ವ ವಾಜಪೇಯಿ ಅವರಲ್ಲಿತ್ತು. ಕಾರ್ಯಕರ್ತರ ಕುರಿತು ಅದಮ್ಯ ವಿಶ್ವಾಸ ಅವರದಾಗಿತ್ತು. ಸೋಲಿನಿಂದ ಅಂಜುವ ಪ್ರಶ್ನೆಯೇ ಇಲ್ಲ ಎಂಬ ಮಾತನ್ನು ವಾಜಪೇಯಿ ಅವರು ಹೇಳುತ್ತಿದ್ದರು. ಪಕ್ಷವನ್ನು ದೃಢವಾಗಿ ಕಟ್ಟುವ ಆತ್ಮವಿಶ್ವಾಸವನ್ನು ಕಾರ್ಯಕರ್ತರಲ್ಲಿ ಅವರು…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾಡಳಿ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ರಾಷ್ಟçಕವಿ ಕುವೆಂಪು ಅವರ ಜನ್ಮದಿನದ ಅಂಗವಾಗಿ ವಿಶ್ವಮಾನವ ದಿನಾಚರಣೆಯನ್ನು ಡಿ.೨೯ರ ಬೆಳೆಗ್ಗೆ ೧೦ ಗಂಟೆಗೆ ವಿಜಯಪುರದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಆಯೋಜಿಸಲಾಗಿದೆ.ಕಾರ್ಯಕ್ರಮದ ಉದ್ಘಾಟನೆಯನ್ನು ಬೃಹತ್ ಮಧ್ಯಮ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವರಾದ ಡಾ. ಎಂ. ಬಿ. ಪಾಟೀಲ ಅವರು ನೆರವೇರಿಸಲಿದ್ದು, ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಎಸ್. ಪಾಟೀಲ ಅವರು ಗೌರವ ಉಪಸ್ಥಿತರಿರಲಿದ್ದಾರೆ.ನಗರ ಶಾಸಕ ಬಸವನಗೌಡ ಆರ್. ಪಾಟೀಲ ಯತ್ನಾಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕರಾದ ರವಿಕುಮಾರ ಎನ್, ಶಾಸಕರೂ ಆದ ನವದೆಹಲಿಯ ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿ-೨ ಪ್ರಕಾಶ ಬಿ. ಹುಕ್ಕೇರಿ,ಕರ್ನಾಟಕ ಸೋಪ್ಸ್ ಮತ್ತು ಡಿಟಜೆಂಟ್ ನಿಯಮಿತದ ಅಧ್ಯಕ್ಷರು ಹಾಗೂ ಶಾಸಕರಾದ ಅಪ್ಪಾಜಿ ಸಿ. ಎಸ್ ನಾಡಗೌಡ, ಸಂಸದರಾದ ರಮೇಶ ಜಿಗಜಿಣಗಿ, ಸುಧಾ ಮೂರ್ತಿ,…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಈಗಾಗಲೇ ಸಿಂದಗಿ ನಗರದಲ್ಲಿ ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ೨ಸಿಟಿ ಬಸ್ಗಳ ಸಂಚಾರ ನಡೆಯುತ್ತಿವೆ, ವಿದ್ಯಾರ್ಥಿಗಳ ಬೇಡಿಕೆಗೆ ಅನುಗುಣವಾಗಿ ಇನ್ನು ೨ಹೊಸ ಸಿಟಿ ಬಸ್ಗಳಿಗೆ ಚಾಲನೆ ನೀಡಲಾಗಿದೆ ಒಟ್ಟು ಸಿಂದಗಿ ನಗರದಲ್ಲಿ ೪ಬಸ್ಗಳು ಸಂಚಾರ ಪ್ರಾರಂಭವಾಗಿವೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಸಿಂದಗಿಯ ಶ್ರೀ ಚೆನ್ನವೀರ ಸ್ವಾಮೀಜಿ ಬಸ್ ನಿಲ್ದಾಣದಲ್ಲಿ ನೂತನ ೨ ಸಿಟಿ ಬಸ್ಗಳ ಸಂಚಾರಕ್ಕೆ ಹಸಿರು ನಿಶಾನೆ ತೋರಿ ಮಾತನಾಡಿದ ಅವರು, ಅನೇಕ ಕಾರ್ಯಕ್ರಮಗಳಿಗೆ ವಿವಿಧ ಗ್ರಾಮಗಳಿಗೆ ತೆರಳಿದ ಸಂದರ್ಭದಲ್ಲಿ ವಿದ್ಯಾರ್ಥಿಗಳು ಬಸ್ ನಿಲ್ದಾಣದಿಂದ ಶಾಲಾ ಕಾಲೇಜಿಗೆ ತೆರಳಲು ಸಿಟಿ ಬಸ್ಗಳನ್ನು ಮಾಡಿ ಎಂದು ಒತ್ತಾಯ ಮಾಡಿದ್ದರು. ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಮತ್ತೇ ೨ ಬಸ್ಗಳಿಗೆ ಚಾಲನೆ ನೀಡಲಾಗಿದೆ. ಈ ಬಸ್ಗಳು ಸಿಂದಗಿ ತಾಲೂಕಿನ ಯರಗಲ್, ರಾಂಪೂರ, ಬೆನಕೊಟಗಿ, ಚಿಕ್ಕಸಿಂದಗಿ, ಮನ್ನಾಪೂರ, ಬಂದಾಳ, ಅಂತರಗಂಗಿ ಸೇರಿದಂತೆ ೮-೧೦ಕಿಮೀ ಒಳಗಡೆ ಬರುವ ಗ್ರಾಮಗಳಿಗೆ ಈ ಬಸ್ಸಿನ ಸೌಲಭ್ಯ ಒದಗಿಸಲಾಗುವುದು. ಇದರ ಸದುಪಯೋಗವನ್ನು ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು. ಸಾರಿಗೆ ಇಲಾಖೆಯ…
ಓತಿಹಾಳ ಗ್ರಾಮದ ಸಮಾರಂಭದಲ್ಲಿ ಶಾಸಕ ಅಶೋಕ ಮನಗೂಳಿ ಅಭಿಮತ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಅನುದಾನವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಸದುಪಯೋಗ ಪಡಿಸಿಕೊಂಡು ಶಾಲಾ ಕಟ್ಟಡಗಳನ್ನು ನವೀಕರಿಸಿದ ಬಳಗಕ್ಕೆ ಅಭಿನಂದನೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಸಿಂದಗಿ ತಾಲೂಕಿನ ಓತಿಹಾಳ ಗ್ರಾಮದ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶಾಸಕರ ವಿಶೇಷ ಅನುದಾನದಡಿಯಲ್ಲಿ ಜಿಲ್ಲಾ ಪಂಚಾಯತ್, ವಿಜಯಪುರ ಸಾರ್ವಜನಿಕ ಶಿಕ್ಷಣ ಇಲಾಖೆ, ಸಿಂದಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಪ್ರಗತಿ ಸಂಘದ ಸಹಯೋಗದೊಂದಿಗೆ ಹಮ್ಮಿಕೊಂಡ ನೂತನ ಶಾಲಾ ಮತ್ತು ಗಣಕಯಂತ್ರ ತರಗತಿ ಕೊಠಡಿಗಳ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರತಿಯೊಂದು ಸರಕಾರಿ ಶಾಲೆಗಳಲ್ಲಿ ಹಳೆ ವಿದ್ಯಾರ್ಥಿಗಳ ಸಂಘಗಳು ಸ್ಥಾಪನೆಯಾದರೆ ಶಾಲೆ ಅಭಿವೃದ್ಧಿಯಾಗಲು ಸಾಧ್ಯ. ಓತಿಹಾಳ ಗ್ರಾಮದ ಯುವಕರು ಇಂತಹ ಪ್ರಗತಿ ಸಂಘವನ್ನು ಸ್ಥಾಪಿಸಿ ಸರಕಾರಿ ಶಾಲಾ ಅಭಿವೃದ್ಧಿಗೆ ನಿಂತಿರುವುದು ಸಂತಸ ತಂದಿದೆ. ಅವರ ಬೇಡಿಕೆಯಂತೆ ಶಾಲೆಗೆ ಕಂಪೌಂಡ ಬಹಳ ಅವಶ್ಯಕತೆ ಇದೆ. ಶಾಲಾ ಕಂಪೌಂಡಗೆ ಅತೀ ಶೀಘ್ರದಲ್ಲೇ ರೂ.೧೦ಲಕ್ಷ ಅನುದಾನ ಬಿಡುಗಡೆ…
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ದೇವರಹಿಪ್ಪರಗಿ ಪತ್ತಿನ ಸಹಕಾರಿ ಸಂಘದ ರಜತ ಮಹೋತ್ಸವ ಸಮಾರಂಭ ಇದೇ ದಿ:೨೮ ರಂದು ಭಾನುವಾರ (ನಾಳೆ) ಬೆಳಿಗ್ಗೆ ೧೨ ಗಂಟೆಗೆ ಇಂಡಿ ರಸ್ತೆಯ ಪಂಚಾಚಾರ್ಯ ಕಲ್ಯಾಣ ಮಂಟಪದಲ್ಲಿ ಜರುಗಲಿದೆ ಎಂದು ಅಧ್ಯಕ್ಷ ರಾಜೀವ ಗುತ್ತೇದಾರ ಹೇಳಿದರು.ಪಟ್ಟಣದ ಸಂಘದ ಕಟ್ಟಡದಲ್ಲಿ ಗುರುವಾರ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದರು.೨೦೦೦ನೇ ಡಿಸೆಂಬರ್ ೨ರಂದು ಆರಂಭಗೊಂಡ ನಮ್ಮ ಸಹಕಾರಿ ಸಂಘ ಹಿರಿಯರ ಮಾರ್ಗದರ್ಶನದಲ್ಲಿ ಮುನ್ನಡೆದು ತನ್ನ ದಶಮಾನೋತ್ಸವ ಸಮಯದಲ್ಲಿ ಸ್ವಂತ ಕಟ್ಟಡ ಹೊಂದಿತು. ಈಗ ರಜತ ಮಹೋತ್ಸವ ಆಚರಿಸಿಕೊಳ್ಳುವ ಸಂದರ್ಭದಲ್ಲಿ ಎರಡು ನೂತನ ಶಾಖೆಗಳನ್ನು ವಿಜಯಪುರ ನಗರ ಹಾಗೂ ಶಿವಣಗಿ ಗ್ರಾಮದಲ್ಲಿ ಆರಂಭಿಸಿ ಒಟ್ಟು ೩ ಶಾಖೆಗಳ ಮೂಲಕ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ನಾಳೆ ಜರುಗಲಿರುವ ಸಮಾರಂಭದಲ್ಲಿ ಸಚಿವರು, ಜಿಲ್ಲೆಯ ಆಹ್ವಾನಿತ ಗಣ್ಯರು, ನಿರ್ದೇಶಕರು, ಸರ್ವಸದಸ್ಯರು ಹಾಗೂ ಗ್ರಾಹಕರು ಆಗಮಿಸಲಿದ್ದಾರೆ ಎಂದರು.ಸಂಘದ ಮುಖ್ಯ ಕಾರ್ಯನಿರ್ವಾಹಕ ಮಹಾದೇವ ಹಿರೇಕುರುಬರ ಮಾತನಾಡಿ, ಸಂಘ ಕಳೆದ ೨೫ ವರ್ಷಗಳಲ್ಲಿ ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಕೊಡಮಾಡುವ…
ಉದಯರಶ್ಮಿ ದಿನಪತ್ರಿಕೆ ಇಂಡಿ: ಸಿದ್ದೇಶ್ವರ ಶ್ರೀಗಳು ಜ್ಞಾನದ ಸುವಾಸನೆಯನ್ನು ಭಾರತ ದೇಶದಲ್ಲಿ ಇಷ್ಟೇ ಅಲ್ಲ, ಬೇರೆ ದೇಶಕ್ಕೂ ಹರಿವಿದ ದಿವ್ಯತೆಯ ಅನುಭಾವಿ ಎಂದು ಅಮೃತಾನಂದ ಶ್ರೀಗಳು ಹೇಳಿದರು,ತಾಲೂಕಿನ ಶಿರಶ್ಯಾಡ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ನಡೆದ ಜ್ಞಾನಯೋಗಿ ಶ್ರೀ ಸಿದ್ದೇಶ್ವರಶ್ರೀಗಳ ಗುರು ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.ಸಾಲೋಟಗಿಯ ಸಂಗಮೇಶ್ವರ ಶ್ರೀಗಳು ಮಾತನಾಡಿ ಸಿದ್ದೇಶ್ವರ ಶ್ರೀಗಳು ಆಧ್ಯಾತ್ಮ ಲೋಕದ ಸೂರ್ಯ, ಶ್ರೀಗಳು ಗಳಿಸಿದ ಜ್ಞಾನಕ್ಕೆ ಜಗತ್ತಿನ ಯಾವ ಸಿರಿ ಸಂಪತ್ತು ಸರಿ ಆಗುವದಿಲ್ಲ. ಅವರು ಯುಗಪುರುಷರು, ಅವರದು ಯಾವದೇ ಕುರುಹು ಇಲ್ಲ, ಸಮಾಧಿ ಇಲ್ಲ ಜ್ಞಾನವೇ ಅವರ ಕುರುಗು ಎಂದರು.ರೋಡಗಿಯ ಶಿವಲಿಂಗೇಶ್ವರ ಶ್ರೀಗಳು ಮಾತನಾಡಿ, ಮಾನವನ ಸ್ವಾರ್ಥಕ ಬದುಕಿಗೆ ಬೇಕಾಗುವ ಸಂಸ್ಕಾರ ಸಾಮರಸ್ಯ ಉತ್ತಮ ಆಚಾರ ವಿಚಾರ ಮೌಲ್ಯಗಳು ಶ್ರೀಗಳ ಪ್ರವಚನದಲ್ಲಿದ್ದು ಅವರ ಪ್ರವಚನ ಮನುಕುಲಕ್ಕೆ ದಾರಿದೀಪವಾಗಿದ್ದವು ಎಂದರುಧಾರವಾಡದ ಬಸವಾನಂದ ಶ್ರೀಗಳು ಮಾತನಾಡಿ, ಸತ್ಯ ದರ್ಶನಗಳ ಪಾರಂಪರಿಕ ಹಾದಿಯನ್ನು ಹುಟ್ಟು ಹಾಕಿ ಜನರನ್ನು ಆಧ್ಯಾತ್ಮಿಕತೆಯ ಕಡೆಗೆ ಪಯಣಿಸಲು ದಾರಿಯನ್ನು ನಿರ್ಮಿಸಿ ತಾವು ಸಹ ಆಧ್ಯಾತ್ಮಿಕತೆಯ ಮೇರು…
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಹೆಮ್ಮೆಯ ಮಾಜಿಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ತಮ್ಮ ಉದಾತ್ತ ರಾಜಕೀಯ ಚಿಂತನೆಗಳ ಮೂಲಕ ದೇಶದ ರಾಜಕೀಯ ರಂಗದಲ್ಲಿ ಅಜಾತಶತ್ರು ಎನಿಸಿದ್ದರು ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಭುಗೌಡ ಬಿರಾದಾರ(ಅಸ್ಕಿ) ಹೇಳಿದರು.ಪಟ್ಟಣದ ಕರಿಸಿದ್ಧೇಶ್ವರ ದೇವಸ್ಥಾನದ ಆವರಣದಲ್ಲಿ ಗುರುವಾರ ಜರುಗಿದ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನಾಚರಣೆ( ಸ್ಮೃತಿದಿನ)ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಮುಖ್ಯಸ್ಥರಾಗಿ ಸಮ್ಮಿಶ್ರ ಸರ್ಕಾರದ ನೇತೃತ್ವ ವಹಿಸಿ ಎರಡು ಬಾರಿ ಪ್ರಧಾನಿಯಾಗಿ ಭಾರತವನ್ನು ಅಭಿವೃದ್ಧಿ ಪಥದತ್ತ ಸಾಗಿಸಿದ ಕೀರ್ತಿ ವಾಜಪೇಯಿ ಅವರದ್ದಾಗಿದೆ ಎಂದರು.ಬಿಜೆಪಿ ಹಿಂದುಳಿದ ಮೋರ್ಚಾ ಜಿಲ್ಲಾಧ್ಯಕ್ಷ ಸಿದ್ದು ಬುಳ್ಳಾ(ಕೆರೂಟಗಿ) ಹಾಗೂ ಮಂಡಲ ಅಧ್ಯಕ್ಷ ಅವ್ವಣ್ಣ ಗ್ವಾತಗಿ ಮಾತನಾಡಿ, ವಾಜಪೇಯಿ ಲೋಕಸಭೆಗೆ ಒಂಬತ್ತು ಬಾರಿ, ರಾಜ್ಯಸಭೆಗೆ ಎರಡು ಬಾರಿ ಆಯ್ಕೆಯಾಗಿ ದಾಖಲೆ ನಿರ್ಮಿಸಿದ ಮಹಾನ್ ಮುತ್ಸದ್ಧಿ ಎಂದರು.ಇದೇ ಸಂದರ್ಭದಲ್ಲಿ ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪನಮನ ಸಲ್ಲಿಸಿದರು.ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ರಮೇಶ ಮಸಬಿನಾಳ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಪ್ರಕಾಶ ದೊಡ್ಡಮನಿ, ಮಹಾಂತೇಶ ಬಿರಾದಾರ,…
ಉದಯರಶ್ಮಿ ದಿನಪತ್ರಿಕೆ ಆಲಮೇಲ: ತಾಲೂಕಿನ ಪ್ರದೇಶ ಕುರುಬ ಸಂಘದ ನೂತನ ಅಧ್ಯಕ್ಷರಾಗಿ ಮೋರಟಗಿ ಗ್ರಾಮದ ಸಿದ್ದು ಕೆರಿಗೊಂಡ ಅವರನ್ನು ಆಯ್ಕೆ ಮಾಡಿ ಸಮಾಜದ ಹಿರಿಯರು ಹಾಗೂ ಯುವಕರು ಸನ್ಮಾನಿಸಿದರು.ಗುರುವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕಿನ ಹಾಲುಮತ ಸಮಾಜದ ಹಿರಿಯರಿಗೆ ಹಾಗೂ ಯುವಕರಿಗೆ ಕರೆ ನೀಡಿ ಸಭೆ ಕರೆಯಲಾಗಿತ್ತು.ಸಭೆಯಲ್ಲಿ ಹಿರಿಯರ ಒಪ್ಪಿಗೆ ಮೇಲೆ ಅಧ್ಯಕ್ಷರಾಗಿ ಸಿದ್ದು ಕೆರಿಗೊಂಡ, ಉಪಾಧ್ಯಕ್ಷರಾಗಿ ಚಂದ್ರಮ ಕತ್ನಳ್ಳಿ, ಪ್ರಧಾನ ಕಾರ್ಯದರ್ಶಿಯಾಗಿ ಅಶೋಕ ಕಟ್ಟಿಮನಿ, ಸಹ ಕಾರ್ಯದರ್ಶಿಯಾಗಿ ಸಂಗಪ್ಪ ಪೂಜಾರಿ, ಖಜಾಂಚಿಯಾಗಿ ಸೋಮು ಪೂಜಾರಿ, ಸಂಘಟನಾ ಕಾರ್ಯದರ್ಶಿಯಾಗಿ ಸುರೇಶ ಪೂಜಾರಿ, ನಿರ್ದೇಶಕರುಗಳಾಗಿ ಸಿದ್ದು ಪೂಜಾರಿ ಕಾಶಿರಾಮ ಬಿರಾದಾರ, ಅಶೋಕ ಪೂಜಾರಿ, ಸಂತೋಷ ಪೂಜಾರಿ, ಕನ್ನಯ್ಯ ಪೂಜಾರಿ, ಹಾವಣ್ಣ ಹಿರೇಹಾವಳಗಿ, ಮಾಳಪ್ಪ ಪೂಜಾರಿ, ರಾಜು ಪೂಜಾರಿ, ಭೀಮಾಶಂಕರ ಪೂಜಾರಿ, ಅವರನ್ನು ಆಯ್ಕೆ ಮಾಡಿದ್ದಾರೆ.ನಂತರ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳಿಗೆ ಸನ್ಮಾನಿಸಿ ಮುಖಂಡ ರಮೇಶ ಭಂಟನೂರ ಮಾತನಾಡಿ, ಇಂದಿನ ರಾಜಕೀಯ ನಾಯಕರುಗಳು ನಮ್ಮ ಸಮುದಾಯವನ್ನು ಉಪಯೋಗಿಸ್ಕೊಂಡು ನಮ್ಮನ್ನು ವಡೆದಾಳುತ್ತಿದ್ದಾರೆ ವಿಷ ಕೊಟ್ಟವರಿಗೆ ಹಾಲುಣಿಸುವ…
ಬಿ.ಎಲ್.ಡಿ.ಇ ಸಂಸ್ಥೆಯ ಕೈಗಾರಿಕೆ ತರಬೇತಿ ಸಂಸ್ಥೆಯಲ್ಲಿ ನಡೆದ ಪ್ರಧಾನ ಮಂತ್ರಿ ರಾಷ್ಡ್ರೀಯ ಶಿಶಿಕ್ಷು(ಅಂಪ್ರೆಂಟಿಸ್) ಮೇಳ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಪ್ರತಿಷ್ಠಿತ ಬಿ.ಎಲ್.ಡಿ.ಇ ಸಂಸ್ಥೆಯ ಕೈಗಾರಿಕೆ ತರಬೇತಿ ಸಂಸ್ಥೆಯಲ್ಲಿ ನಡೆದ ಪ್ರಧಾನ ಮಂತ್ರಿ ರಾಷ್ಡ್ರೀಯ ಶಿಶಿಕ್ಷು(ಅಂಪ್ರೆಂಟಿಸ್) ಮೇಳದಲ್ಲಿ 350ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ನಾನಾ ಕಂಪನಿಗಳಿಗೆ ಆಯ್ಕೆಯಾಗಿದ್ದಾರೆ.ಮಂಗಳವಾರ ಬಿ.ಎಲ್.ಡಿ.ಇ ಕೈಗಾರಿಕೆ ತರಬೇತಿ ಸಂಸ್ಥೆ, ಕೈಗಾರಿಕೆ ತರಬೇತಿ ಮತ್ತು ಉದ್ಯೋಗ ಇಲಾಖೆಯ ಸರಕಾರಿ, ಅನುದಾನಿತ ಮತ್ತು ಖಾಸಗಿ ಐಟಿಐ ಹಾಗೂ ಉದ್ಯೋಗ ವಿನಿಮಯ ಕಚೇರಿ, ಕೌಶಾಲ್ಯಾಭಿವ್ಯದ್ಧಿ ಇಲಾಖೆ ಇವರ ಸಹಯೋಗದಲ್ಲಿ ನಡೆದ ಈ ಪ್ರಧಾನಮಂತ್ರಿ ರಾಷ್ಟೀಯ ಶಿಶಿಕ್ಷು ಮೇಳವನ್ನು ವಿಜಯಪುರ ಸರಕಾರಿ ಐಟಿಐ ಪ್ರಾಚಾರ್ಯ ರಮೇಶ ದೇಸಾಯಿ ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು, ವಿದ್ಯಾರ್ಥಿಗಳು ಕೇವಲ ಐಟಿಐ ತರಬೇತಿ ಪೂರ್ಣಗೊಳಿಸಿದರೆ ಸಾಲದು. ಕೈಗಾರಿಕೆಗಳಲ್ಲಿ ಒಂದು ವರ್ಷದ ಅಪ್ರೆಂಟಿಸ ತರಬೇತಿಯನ್ನು ಕೈಗಾರಿಕೆಗಳಲ್ಲಿ ಮುಗಿಸಿ ಸಂಪೂರ್ಣ ಕೌಶಲ್ಯ ಹೊಂದಬೇಕು ಎಂದು ಹೇಳಿದರು.ಒಟ್ಟು 650 ವಿದ್ಯಾರ್ಥಿಗಳು ಪಾಲ್ಗೊಂಡಿದ್ದ ಈ ಅಪ್ರೆಂಟಿಸ್ ಮೇಳದಲ್ಲಿ ಅದರಲ್ಲಿ 350ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು 20 ನಾನಾ…
