Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ ತಾಯಿ ಭುವನೇಶ್ವರಿಗೆ ನಮಿಸುತ್ತಾ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕೇಂದ್ರ ಸಮನ್ವಯ ಕನ್ನಡ ಸಂಘ ಬಾಗಲಕೋಟೆ ವಿಭಾಗದ ಜಮಖಂಡಿ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಹಾಗೂ ಕ್ರಿಸ್ಮಸ್ ಅಂಗವಾಗಿ ಯೇಸುಕ್ರಿಸ್ತನ ಜನ್ಮದಿನಾಚರಣೆ ಸಮಾರಂಭವನ್ನು ಜಮಖಂಡಿಯಲ್ಲಿ ಭವ್ಯವಾಗಿ ಹಮ್ಮಿಕೊಳ್ಳಲಾಯಿತು.ಕಾರ್ಯಕ್ರಮಕ್ಕೆ ಬಿ.ವ್ಹಿ. ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದು, ಮುಖ್ಯ ಅತಿಥಿಗಳಾಗಿ ಅಶೋಕ ಬಜಂತ್ರಿ, ತಿರುಪತಿ ಪತ್ತಾರ, ಸಿ.ವ್ಹಿ. ಶಿಕ್ಕೇರಿ, ಕೇಂದ್ರ ಸಮನ್ವಯ ಕನ್ನಡ ಸಂಘ ಬೆಂಗಳೂರು ರಾಜ್ಯ ಕಾರ್ಯದರ್ಶಿ ಪ್ರಭು ಬಿದರಿ, ಬಾಗಲಕೋಟೆ ವಿಭಾಗದ ಅಧ್ಯಕ್ಷ ಸಿ.ಕೆ. ನಾಡದಾಳ, ಕಾರ್ಯಾಧ್ಯಕ್ಷ ಪ್ರಕಾಶ ಆಸಂಗಿ, ಪ್ರಚಾರ ಸಮಿತಿ ಅಧ್ಯಕ್ಷ ಆರ್.ಟಿ. ವಜ್ರಮಟ್ಟಿ, ಖಜಾಂಚಿ ಸುಭಾಷ್ ಸುರಗೊಂಡ ಹಾಗೂ ಕಾರ್ಮಿಕ ಮುಖಂಡರು ಕುಂದೇನಾಯಕ, ಶರಣು, ಬಡ್ಡಿ, ಮುಧೋಳ ಹಾಜರಿದ್ದರು.ಜಮಖಂಡಿ ಘಟಕದ ಚಾಲಕರು, ನಿರ್ವಾಹಕರು ಹಾಗೂ ಆಡಳಿತ ಸಿಬ್ಬಂದಿಗಳು ಸಮಾರಂಭದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ಯಶಸ್ವಿಗೊಳಿಸಿದರು.ರಾಜ್ಯ ಕಾರ್ಯದರ್ಶಿ ಪ್ರಭು ಬಿದರಿ ಅವರು, “ಜಮಖಂಡಿ ಘಟಕದ…
ಲೇಖನ- ಡಾ.ಮಲ್ಲಿಕಾರ್ಜುನ ಎಸ್ ಆಲಮೇಲಯಡ್ರಾಮಿಕಲಬುರ್ಗಿ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ನಮ್ಮ ಭಾರತೀಯ ಪರಂಪರೆಯ ನೂತನ ವರುಷ, ಹರುಷದ ಯುಗಾದಿಯಾದರು. ನಾವೆಲ್ಲ ಒಗ್ಗಿಕೊಂಡಿರುವ ಮತ್ತು, ಅತಿ ಆಡಂಬರದಿ ಸ್ವಾಗತಿಸುವ. ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಪಂಚದಲ್ಲಿ ಅತಿ ಹೆಚ್ಚಾಗಿ ಉಪಯೋಗಿಸಲ್ಪಡುವ ಕ್ಯಾಲೆಂಡರ್ (ಪಂಚಾಂಗ). ಅಲೋಸಿಯಸ್ ಲಿಲಿಯಸ್ ಎಂಬ ವೈದ್ಯನಿಂದ ಪ್ರಸ್ತಾಪಿಸಲ್ಪಟ್ಟ ಈ ಕ್ಯಾಲೆಂಡರ್, ಫೆಬ್ರುವರಿ 24, 1582ರಂದು( ಇಶ್ವಿ ಒಂದೆಯಾದರು,ದಿನಾಂಕ, 4-10-1582 ಅನ್ನೋ ಅನ್ನೋ ವಾದ ಕೂಡಾ ಇದೆ ) ಪೋಪ್ ಹದಿಮೂರನೆ ಗ್ರೆಗೊರಿಯ ಆದೇಶದ ಮೇರೆಗೆ ಜಾರಿಗೆ ಬಂದಿತು. ಅಲ್ಲಿಯವರೆಗೆ ಪಾಶ್ಚಿಮಾತ್ಯ ದೇಶಗಳಲ್ಲಿ ಉಪಯೋಗಿಸಲ್ಪಡುತ್ತಿದ್ದ ಜುಲಿಯನ್ ಕ್ಯಾಲೆಂಡರ್ನ ಲೆಕ್ಕದಲ್ಲಿ ವರ್ಷದ ಉದ್ದವು ಹೆಚ್ಚಾಗಿತ್ತು,ಇದು ಪ್ರತಿ ವರ್ಷ ೩೬೫ ದಿನಗಳ ೬ ಗಂಟೆಗಳ ಉದ್ದ ಇತ್ತು. ಆದರೆ ಲೆಕ್ಕಾಚಾರಗಳು ಒಂದು ವರ್ಷದ ನಿಜವಾದ ಸರಾಸರಿ ಉದ್ದ ಸ್ವಲ್ಪ ಕಡಿಮೆ (365 ದಿನ, 5 ಗಂಟೆ 49 ನಿಮಿಷ) ಎಂದು ತೋರಿಸಿದರು, ಆದಕಾರಣಗ್ರೆಗೋರಿಯನ್ ಕ್ಯಾಲೆಂಡರನ್ನು ವಿಶ್ವದ ನಮ್ಮ ದೇಶವು ಸೇರಿಕೊಂಡು ಬಹುತೇಕ ದೇಶಗಳು, ಒಪ್ಪಿ, ಅಪ್ಪಿಕೊಂಡು ಜನೇವರಿ…
ವಿಜಯಪುರದಲ್ಲಿ ಖ್ಯಾತ ಚಿತ್ರನಟ ಡಾ.ಸಂಗಮೇಶ ಉಪಾಸೆ ಸುದ್ದಿಗೋಷ್ಟಿ | ಜನರ ಮನದಲ್ಲಿ ಅಚ್ಚಳಿಯದೇ ಉಳಿದ ಸಿಲ್ಲಿಲಲ್ಲಿ ಗೋವಿಂದ ಪಾತ್ರ ವಿಜಯಪುರ: ಹಾಸ್ಯ, ಅನಾಥ ಮಕ್ಕಳ ರಕ್ಷಣೆಯ ಸಂದೇಶದ ಸಾರವನ್ನು ಹೊಂದಿರುವ ಗಲಿಬಿಲಿ ಗೋವಿಂದ ಚಿತ್ರೀಕರಣ ಆರಂಭವಾಗಿದ್ದು,ಇಂಚಗೇರಿ ಮಠದಲ್ಲಿ ಚಿತ್ರದ ಮುಹೂರ್ತ ನಡೆದಿದೆ ಎಂದು ಖ್ಯಾತ ಕಲಾವಿದ, ಹಿರಿಯ ಕೆಎಎಸ್ ಅಧಿಕಾರಿ ಡಾ.ಸಂಗಮೇಶ ಉಪಾಸೆ ವಿವರಿಸಿದರು.ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ವಿವರಣೆ ನೀಡಿದ ಅವರು, ಹಾಸ್ಯ, ಅನಾಥಮಕ್ಕಳ ರಕ್ಷಣೆಯ ಸಂದೇಶ, ವೈಜ್ಞಾನಿಕ-ವೈಚಾರಿಕೆ ಹೀಗೆ ಹಲವು ಆಯಾಮಗಳಲ್ಲಿ ಹೊರ ಬರುತ್ತಿರುವ ಚಿತ್ರವಾಗಿದ್ದು, ಸಿಲ್ಲಿಲಲ್ಲಿ ಗೋವಿಂದ ಪಾತ್ರ ಅತ್ಯಂತ ಜನಪ್ರಿಯವಾಗಿದೆ, ಎಲ್ಲೇ ಹೋದರೂ ಸಹ ನನ್ನನ್ನು ಗೋವಿಂದ ಎಂದೇ ಕರೆಯುತ್ತಿದ್ದಾರೆ, ಅನೇಕ ಪಾತ್ರಗಳನ್ನು ಮಾಡಿದ್ದರೂ ಸಹ ಇಂದಿಗೂ ಗೋವಿಂದ ಪಾತ್ರವೇ ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ, ಹೀಗಾಗಿ ಅದನ್ನೇ ಚಿತ್ರದ ಇಡೀ ಆಕರ್ಷಣೆಯ ಕೇಂದ್ರಬಿಂದುವಾಗಿ ಮಾಡಿಕೊಳ್ಳಲಾಗಿದೆ ಎಂದರು.ಕಲಾ ಸೇವೆ ಮಾಡುತ್ತಾ ಬದುಕು ಕಟ್ಟಿಕೊಂಡವನು ನಾನು, ನಂತರ ಕೆಎಎಸ್ ಅಧಿಕಾರಿಯಾಗಿ ಬದುಕಿನ ಪಯಣ ಸಾಗಿಸಿದ್ದೇನೆ, ಜೀವನ ಏನೂ ಎಂಬುದು…
ವಿಜಯಪುರದಲ್ಲಿ ಹಿಂದೂ ಹೋರಾಟಗಾರ ರಾಘವ ಅಣ್ಣಿಗೇರಿ ಆಗ್ರಹ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ದೇಶದಲ್ಲಿ ಜನಸಂಖ್ಯಾ ನಿಯಂತ್ರಣ ಕಾಯ್ದೆಯನ್ನು ಹಾಗೂ ಏಕ ರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವಂತೆ ಒತ್ತಾಯಿಸಿ ಪ್ರಧಾನಮಂತ್ರಿ ಹಾಗೂ ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆದಿದ್ದೇನೆ, ಉತ್ತರಾಖಂಡ, ಗುಜರಾತ್ ಈಗಾಗಲೇ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸಿದ್ದು, ಕರ್ನಾಟಕ ಮುಖ್ಯಮಂತ್ರಿಗಳು ಏಕೆ ಏಕರೂಪದ ನಾಗರಿಕ ಸಂಹಿತೆ ಜಾರಿಗೊಳಿಸುತ್ತಿಲ್ಲ ಎಂದು ಹಿಂದೂ ಹೋರಾಟಗಾರ ರಾಘವ ಅಣ್ಣಿಗೇರಿ ಪ್ರಶ್ನಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತ ರಕ್ಷಣೆ ಸುಲಭದ ಮಾತಲ್ಲ, ೨೦೨೫ ರ ಚೈನಾವನ್ನು ಹಿಂದಿಕ್ಕಿ ಭಾರತ ಜನಸಂಖ್ಯೆಯಲ್ಲಿ ಅಗ್ರಸ್ಥಾನ ಪಡೆದಿದೆ, ೧೪೬ ಕೋಟಿಗೂ ಜನಸಂಖ್ಯೆ ಮಿಕ್ಕಿದೆ, ಇದನ್ನು ನಿಯಂತ್ರಿಸುವುದು ಹೇಗೆ? ಈ ಜನಸಂಖ್ಯೆಯನ್ನು ನಿಯಂತ್ರಿಸದೇ ಹೋದರೆ ಭಯೋತ್ಪಾದನೆ ನಿಯಂತ್ರಣ ಕಷ್ಟ ಸಾಧ್ಯವಾಗಲಿದೆ.ಹಿಂದೂ-ಮುಸ್ಲಿಂರು ಎಲ್ಲರೂ ರಾಷ್ಟ್ರಭಕ್ತರು, ನಮ್ಮಲ್ಲಿ ದ್ವೇಷ ಬಿತ್ತುವವರ ವಿರುದ್ಧ ನನ್ನ ಸಮರ. ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿಗಳು ವಿಶೇಷ ಸಚಿವ ಸಂಪುಟ ಸಭೆ ಕರೆದು ಈ ಜನಸಂಖ್ಯೆ ನಿಯಂತ್ರಣ ಕಾಯ್ದೆ ಹಾಗೂ ಏಕರೂಪದ ನಾಗರಿಕ ಸಂಹಿತೆ…
ಉದಯರಶ್ಮಿ ದಿನಪತ್ರಿಕೆ ದಾವಣಗೆರೆಯಲ್ಲಿ ನಡೆದ ವಿಶ್ವ ದರ್ಶನ ಪತ್ರಿಕೆ ಹಾಗೂ ರಾಷ್ಟ್ರೀಯ ಐಕಾನ್ ಅವಾರ್ಡ್ ಪ್ರಶಸ್ತಿ ಸಮಾರಂಭದಲ್ಲಿ ಜಿಲ್ಲೆಯ ಕೊಲ್ಹಾರ ತಾಲೂಕಿನ ಹಳ್ಳದ ಗೆಣ್ಣೂರು ಗ್ರಾಮದ ಇರ್ಫಾನ್ ಶ ಬೀಳಗಿ ಅವರಿಗೆ “ರಾಷ್ಟ್ರೀಯ ಮಾಧ್ಯಮ ಕಾಯಕ ಸೇವಾ ರತ್ನ” ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ವಿಶ್ವ ದರ್ಶನ ಫೌಂಡೇಶನ್ ಅಧ್ಯಕ್ಷರು ಹಾಗೂ ವಿಶ್ವ ದರ್ಶನ್ ಪತ್ರಿಕೆಯ ಸಂಪಾದಕ ಎಸ್ ಎಸ್ ಪಾಟೀಲ್,ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಧ್ವನಿ ಸಂಘದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ್ ಬಂಗ್ಲೆ, ಮಠಾಧೀಶರು, ಸೂಫಿ-ಸಂತರು ಇದ್ದರು.
ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ರಾಜ್ಯದಲ್ಲಿ ಬೀದರನಿಂದ ಚಾಮರಾಜನಗರ ಜಿಲ್ಲೆಯ ವರೆಗೆ ಎಲ್ಲ ಕಬ್ಬು ಬೆಳೆಗಾರರಿಗೆ ಸಿದ್ಧರಾಮಯ್ಯ ನೇತೃತ್ವದ ನಮ್ಮ ಸರ್ಕಾರ ಐತಿಹಾಸಿಕ ದರ ನೀಡಿದೆ. ಇದರೊಂದಿಗೆ ಕೇಂದ್ರ ಸರ್ಕಾರವೂ ಮಾಡದ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡಿದೆ ಎಂದು ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ ಹೇಳಿದರು.ತಾಲೂಕಿನ ಮಲಘಾಣ ಗ್ರಾಮದಲ್ಲಿ ಸರ್ಕಾರಿ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್, ಗ್ರಾಮ ಹಾಗೂ ತಾಂಡಾದಲ್ಲಿ ತಲಾ ಒಂದೊಂದು ಅಂಗನವಾಡಿ ಕಟ್ಟಡ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ನಮ್ಮ ಸರ್ಕಾರದ ನಿರ್ಧಾರದಿಂದ ಕಬ್ಬು ಬೆಳೆಗಾರರಿಗೆ ಪ್ರತಿ ಟನ್ ಕಬ್ಬು ಬೆಳೆಗೆ 200-350 ರೂ. ಹೆಚ್ಚಿನ ದರ ಸಿಕ್ಕಿದೆ ಎಂದರು.ರೈತರು ಹೆಚ್ಚು ಇಳುವರಿ ಪಡೆಯುವ ವೈಜ್ಞಾನಿಕ ಕೃಷಿ ಮಾಡಬೇಕು. ಕೃಷಿಯಲ್ಲಿ ಕಬ್ಬು ಬೆಳೆ ಅಧಿಕ ಉತ್ಪಾದನೆ ನಿಟ್ಟಿನಲ್ಲಿ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಕ್ಕರೆ ಕಾರ್ಖಾನೆ ಮಾಲೀಕರು ಸಮನ್ವಯದಿಂದ ಕಬ್ಬು ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.ಮಲಘಾಣ ಭಾಗದಲ್ಲಿ ನೀರಾವರಿ ಕ್ರಾಂತಿಯಾಗಿ ಬರಡು…
ಬಬಲೇಶ್ವರದಲ್ಲಿ ನಡೆದ ಬಸವಾದಿ ಶರಣರ ಹಿಂದೂ ಸಮಾವೇಶದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಗುಡುಗು ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕನೇರಿ ಶ್ರೀಗಳು ದೇವರು, ಈ ದೇವರು ಕ್ಷಮೆ ಕೋರಬೇಕು ಎಂದು ಹೇಳಿದವರೇ ಮೊದಲು ಸಮಸ್ತ ಹಿಂದೂ ಸಮಾಜದ ಕ್ಷಮೆಯಾಚಿಸಬೇಕು, ಕನೇರಿ ಶ್ರೀಗಳ ಹಿಂದೂ ದೇವತೆಗಳನ್ನು ಅಪಮಾನ ಮಾಡಿದವರ ವಿರುದ್ದ ಸಹಜ ಭಾಷೆಯಲ್ಲಿ ಉತ್ತರ ನೀಡಿದ್ದಾರೆ ಅಷ್ಟೇ, ಶ್ರೀಗಳ ಜೊತೆ ಇಡೀ ದೇಶವೇ ಇದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.ಬಬಲೇಶ್ವರದಲ್ಲಿ ನಡೆದ ಬಸವಾದಿ ಶರಣರ ಹಿಂದೂ ಸಮಾವೇಶದಲ್ಲಿ ಪಾಲ್ಗೊಂಡು ಪ್ರಧಾನ ಭಾಷಣ ಮಂಡಿಸಿದ ಅವರು, ಹಿಂದೂ ಧರ್ಮದ ದೇವಾನು ದೇವತೆಗಳನ್ನು ಹೊಳೆಗೆ ಎಸೆಯಿರಿ ಎಂದರೆ ನಮ್ಮ ರಕ್ತ ಕುದಿಯುವುದಿಲ್ಲವೇ? ಇದೇ ತೆರನಾಗಿ ಪೂಜ್ಯರ ರಕ್ತರ ಕುದಿದಿದೆ, ಅದಕ್ಕಾಗಿ ಸಹಜ ಭಾಷೆಯಲ್ಲಿ ಅವರನ್ನು ಟೀಕಿಸಿದ್ದಾರೆ, ಪೂಜ್ಯರು ಯಾವ ವ್ಯಕ್ತಿಯನ್ನು ಟೀಕಿಸಿಲ್ಲ, ಹಿಂದೂ ಸಿದ್ಧಾಂತವನ್ನು ಟೀಕಿಸಿದವರ ವಿರುದ್ದ ಗುಡುಗಿದ್ದಾರೆ, ಶ್ರೀಗಳನ್ನು ನಿಷೇಧ ಮಾಡುವ ಹಿಂದಿರುವ ವ್ಯಕ್ತಿಗಳು ಇದೇ ಜನ್ಮದಲ್ಲಿ ಪಾಪ ಅನುಭವಿಸುತ್ತಾರೆ…
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ಧ್ವನಿ (ಚಂದ್ರಕಾಂತ ಕಾದ್ರೊಳ್ಳಿ ಬಣ) ಸಂಘಟನೆಯ ವಿಜಯಪುರ ಜಿಲ್ಲಾಧ್ಯಕ್ಷರಾಗಿ ತಾಲೂಕಿನ ಬಾಲಚಂದ್ರ ಹುಲ್ಲೂರ ಅವರನ್ನು ಆಯ್ಕೆ ಮಾಡಿ, ಸಂಘಟನೆಯ ರಾಜ್ಯಾಧ್ಯಕ್ಷ ಚಂದ್ರಕಾಂತ ಕಾದ್ರೊಳ್ಳಿ ಆದೇಶಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಸೊಲ್ಲಾಪುರ ರಸ್ತೆಯಲ್ಲಿರುವ ಕೃಷ್ಣಾ ಪ್ಯಾಲೇಸ್ ದಲ್ಲಿ ಸೋಮವಾರ ನಸುಕಿನಜಾವ ಆಕಸ್ಮಿಕ ಬೆಂಕಿ ಹೊತ್ತಿಕೊಂಡು, ಕಟ್ಟಡ ಸುಟ್ಟು ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿರುವ ಹಿನ್ನೆಲೆ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ರವರು ಭೇಟಿ ನೀಡಿ ಪ್ಯಾಲೇಸ್ ಮಾಲೀಕರಿಗೆ ಸಾಂತ್ವನ ಹೇಳಿ, ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡರು.ಹೊಟೇಲು, ಅಂಗಡಿ ಮಾಲೀಕರು ಅಗ್ನಿ ಸುರಕ್ಷತೆ ಬಗ್ಗೆ ಸೂಕ್ತ ಮುಂಜಾಗ್ರತಾ ಕ್ರಮ ವಹಿಸಿ, ಅಗ್ನಿ ನಂದಿಸುವ ಉಪಕರಣಗಳು, ತುರ್ತು ನಿರ್ಗಮನ ಬಾಗಿಲುಗಳು ಹಾಗೂ ಈ ರೀತಿ ಅವಘಡಗಳು ಆದಾಗ ಆರ್ಥಿಕವಾಗಿ ಹೊರೆಯಾಗದಿರಲು ವಿಮೆ ಮಾಡಿಸಿಕೊಳ್ಳಬೇಕೆಂದು ಸಲಹೆ ನೀಡಿದ್ದಾರೆ.
ಭಕ್ತ ಕನಕದಾಸರ ಜಯಂತೋತ್ಸವ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ರಮೇಶ ಭೂಸನೂರ ಅಭಿಮತ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ದಾಸರ ಕೀರ್ತನೆಗಳು ಸಮಾಜದಲ್ಲಿ ಬದಲಾವಣೆ ಮತ್ತು ಸಾಮಾಜಿಕ ಚಿಂತನೆಯನ್ನು ಮಾಡುವ ದೃಷ್ಟಿಯಿಂದ ಸೃಷ್ಟಿಯಾದವು ಎಂದು ಮಾಜಿ ಶಾಸಕ ರಮೇಶ ಭೂಸನೂರ ಹೇಳಿದರು.ಸಿಂದಗಿ ಪಟ್ಟಣದ ಸಂಗಮೇಶ್ವರ ದೇವಸ್ಥಾನದ ಆವರಣದಲ್ಲಿ ತಾಲೂಕು ಕುರುಬರ ಸಂಘದ ವತಿಯಿಂದ ಹಮ್ಮಿಕೊಂಡ ಭಕ್ತ ಕನಕದಾಸರ ೫೩೮ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ಡೊಳ್ಳು ಬಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದಾಸಶ್ರೇಷ್ಠ ಸಂತಕವಿ ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಸಮಾಜದಲ್ಲಿನ ಕಂದಾಚಾರ, ಮೌಢ್ಯವನ್ನು ಹೋಗಲಾಡಿಸಲು ಮುಂದಾಗಿದ್ದರು. ಅಂತಹ ಮಹಾನ್ ವ್ಯಕ್ತಿಯ ಕೀರ್ತನೆಗಳು ಇಡೀ ದೇಶಕ್ಕೆ ಮಾದರಿ. ಒಂದು ಉತ್ತಮ ಕುಟುಂಬದಲ್ಲಿ ಜನಿಸಿದಂತಹ ಕನಕದಾಸರು ಸಮಾಜದಲ್ಲಿರುವ ತಾರತಮ್ಯ ಹಾಗೂ ಮೌಢ್ಯತೆಗಳನ್ನು ತಿಳಿದು, ತಮ್ಮ ಸಿರಿತನವನ್ನು ತ್ಯಜಿಸಿ ಬಡವರಿಗಾಗಿ ಬಂದವರು ಕನಕದಾಸರು ಎಂದರು.ಈ ವೇಳೆ ನಿವೃತ್ತ ಪ್ರಾಧ್ಯಾಪಕ ಡಾ.ಅರವಿಂದ ಮನಗೂಳಿ ಮಾತನಾಡಿ, ಜನರಲ್ಲಿದ್ದಂತಹ ಭೇದದ ಮನೋಭಾವ, ಶ್ರೇಷ್ಠತೆಯ ಮನೋಭಾವವನ್ನು ಹೋಗಲಾಡಿಸಿ ಎಲ್ಲರೂ ಒಂದೇ ಎಂಬುದನ್ನು…
