Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದಲ್ಲಿ ಡಿಸೆಂಬರ್ 7 ರಂದು ನಡೆಯಲಿರುವ ವೃಕ್ಷಥಾನ್ ಹೆರಿಟೇಜ್ ರನ್-2025ರ ಅಂಗವಾಗಿ ಮಕ್ಕಳಿಗೆ ಸ್ಥಳದಲ್ಲಿಯೇ ಚಿತ್ರ ಬಿಡಿಸುವ ಸ್ಪರ್ಧೆ ರವಿವಾರ ನಗರದ ಪ್ರಾಚೀನ ಸ್ಮಾರಕ ಗಗನ ಮಹಲ ಆವರಣದಲ್ಲಿ ನಡೆಯಿತು.ಪ್ರಾಥಮಿಕ ವಿಭಾಗ, ಹೈಸ್ಕೂಲು ವಿಭಾಗ ಹಾಗೂ ಪಿಯು ಕಾಲೇಜು ವಿಭಾಗ ಒಟ್ಟು ಮೂರು ವಿಭಾಗಗಳಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಸುಮಾರು 400 ವಿದ್ಯಾರ್ಥಿಗಳು ಪಾಲ್ಗೊಂಡರು. ವಿದ್ಯಾರ್ಥಿಗಳಿಗಿಂತ ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದು ಗಮನ ಸೆಳೆಯಿತು.ಹೆರಿಟೇಜ್ ರನ್ 21 ಕಿ. ಮೀ. ಓಟದಲ್ಲಿ ಪಾಲ್ಗೋಳ್ಳುವ ಕ್ರೀಡಾಪಟುಗಳು ಓಡುವ ವಿಜಯಪುರ ನಗರದಲ್ಲಿರುವ ಪ್ರಾಚೀನ ಸ್ಮಾರಕಗಳಾದ ಗೋಳಗುಮ್ಮಟ, ಸುಂದರೇಶ್ವರ ಮಂದಿರ, ಗಗನ ಮಹಲ್, ಶ್ರೀ ನರಸಿಂಹ ದೇವಸ್ಥಾನ, ಬಾರಾಕಮಾನ, ಇಬ್ರಾಹಿಂ ರೋಜಾ, ಶಿಕ್ಷಣ ಸಂಸ್ಥೆಗಳಾದ ಸೈನಿಕ ಶಾಲೆ, ಬಿ.ಎಲ್.ಡಿ.ಇ ಸಂಸ್ಥೆ ಶಾಲೆಗಳು, ಜ್ಞಾನಯೋಗಾಶ್ರಮ ಹಾಗೂ ವಿಜಯಪುರ ನಗರದೇವತೆ ಶ್ರೀ ಸಿದ್ಧೇಶ್ವರ ದೇವಸ್ಥಾನ ಸ್ಮಾರಕಗಳ ಮಹತ್ವ ಸಾರುವ ಚಿತ್ರಗಳನ್ನು ಬಿಡಿಸುವ ವಿಷಯವನ್ನು ನೀಡಲಾಗಿತ್ತು.ಕೈಯಲ್ಲಿ ಕುಂಚ ಮತ್ತು ಬಣ್ಣ ಹಿಡಿದು ಬಿಳಿಯ ಹಾಳೆಯ ಮೇಲೆ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎ.ವಿ.ಎಸ್ ಆಯರ್ವೇದ ಮಹಾವಿದ್ಯಾಲಯದ ಪುರುಷರ ಹಗ್ಗ ಜಗ್ಗಾಟ ತಂಡ ಶುಕ್ರವಾರ ನಡೆದ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಕಲಬುರಗಿ ವಲಯ ಮಟ್ಟದ ಪುರುಷರ ಹಗ್ಗ ಜಗ್ಗಾಟ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಕಾಲೇಜು ಮತ್ತು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.ಬಾಗಲಕೋಟೆ ಜಿಲ್ಲೆಯ ಇಳಕಲ ನಗರದ ಎಸ್. ವಿ. ಎಂ ಆಯುರ್ವೇದ ಮಹಾವಿದ್ಯಾಲಯದಲ್ಲಿ ನಡೆದ ಈ ಪಂದ್ಯಾವಳಿಯಲ್ಲಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಈರಪ್ಪ ಇಕ್ಕಳಕಿ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದು ಪ್ರಥಮ ಸ್ಥಾನ ಪಡೆದಿದ್ದಾರೆ.ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಪ್ರಾಚಾರ್ಯ ಡಾ. ಅಶೋಕ ಪಾಟೀಲ, ಉಪಪ್ರಾಚಾರ್ಯ ಡಾ. ಶಶಿಧರ ನಾಯಕ, ಶೈಕ್ಷಣಿಕ ಸಂಯೋಜಕ ಡಾ. ಕೆ. ಎ. ಪಾಟೀಲ, ಬೋಧಕ ಹಾಗೂ ಬೋಧಕರ ಹೊರತಾದ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿ ಶುಭ ಕೋರಿದರು.
ಉದಯರಶ್ಮಿ ದಿನಪತ್ರಿಕೆ ಚಡಚಣ: ಪಟ್ಟಣದ ಆರಾಧ್ಯದೈವ ಶ್ರೀ ವೀರಭದ್ರೇಶ್ವರ ಜಾತ್ರೆಯು ಛಟ್ಟಿ ಅಮವಾಸ್ಯೆ ಬುಧವಾರ ದಿ. 19 ರಿಂದ 23 ರವರೆಗೆ 5 ದಿನಗಳ ಕಾಲ ಸಡಗರದಿಂದ ಜರುಗುವದು.ದಿ. 19 ಬುಧವಾರದಂದು ನಸುಕಿನ 4 ಗಂಟೆಗೆ ಶ್ರೀ ಸಿದ್ದಯ್ಯಾ ಸ್ವಾಮಿ ಇವರಿಂದ ದೇವರಿಗೆ ಎಣ್ಣೆ ಮಜ್ಜಲು, ಮಹಾರುದ್ರಾಭಿಷೇಕ, ಕಾಶಿ ಬಟ್ಟೆ ತೊಡಿಸುವದು, ಹೂ ಏರಿಸುವುದು, ಮಹಾಮಂಗಳಾರುತಿ ಜರುಗುವದು. ಶ್ರೀ ವೀರಭದ್ರ ದೇವರಿಗೆ ಎಲೆ ಪೂಜೆ, ಹೋಮ-ಹವನ, ಇತ್ಯಾದಿ ಪೂಜೆಗಳು ಜರುಗುವದು.ಮಧ್ಯಾಹ್ನ 3 ಗಂಟೆಗೆ ವೇದಮೂರ್ತಿ ಶ್ರೀ ಬಸಯ್ಯಶಾಸ್ತ್ರಿಗಳಿಂದ ಮಂತ್ರೋಪದೇಶಗಳೊಂದಿಗೆ ಅಗ್ನೀ ದೇವತೆಯ ಆವಾಹನೆ,ಪೂಜೆ,ಅಗ್ಗಿಪುಟುವು ಕಾರ್ಯಕ್ರಮವು ನಡೆಯುವುದು. ಸಾಯಂಕಾಲ 4 ಗಂಟೆಗೆ ಬಳ್ಳಾರಿಯ ಪ್ರಸಿದ್ದ ಕಲಾವಿದರಿಂದ ವೀರಗಾಸೆ ಕುಣಿತ. 5 ಗಂಟೆಯಿಂದ ಭಕ್ತಾದಿಗಳಿಂದ ದೀಪೋತ್ಸವ ಕಾರ್ಯಕ್ರಮ ಜರುಗುವುದು. ರಾತ್ರಿ 10:30 ಗಂಟೆಗೆ ವಿವಿಧ ಗ್ರಾಮಗಳಿಂದ ಬಂದ ಪ್ರಸಿದ್ದ ಪುರವಂತರು ಒಡುಪುಗಳನ್ನು ವೀರಭದ್ರದೇವರ ಲೀಲೆಗಳನ್ನು ಪುರವಂತರು ತಮ್ಮ ರುದ್ರಾವೇಷದೊಂದಿಗೆ ಹಾಡಿ ಕುಣಿಯುವ ಕಾರ್ಯಕ್ರಮ ಮತ್ತು ಸಾಂಭಾಳ ವಾದನ, ಪಲ್ಲಕ್ಕಿ ಸಮೇತ ಅಗ್ಗಿ ಪ್ರವೇಶ ಕಾರ್ಯಕ್ರಮ…
ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಡಾ.ಅರವಿಂದಕುಮಾರ್ ಕೋಟಗೊಂಡ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸಂಶೋಧನೆ, ನಾವೀನ್ಯತೆ ಮತ್ತು ಉದ್ಯಮಶೀಲತೆಗಾಗಿ ಅಗತ್ಯವಾದ ಜ್ಞಾನ ಮತ್ತು ಸಾಧನಗಳ ಅರಿವು ಇಂದಿನ ಬೋಧಕರಿಗೆ ಮತ್ತು ವಿದ್ಯಾರ್ಥಿಗಳು ಅವಶ್ಯಕವಾಗಿದೆ ಎಂದು ಬಿಎಲ್ಡಿಇ ಸಂಸ್ಥೆಯ ವಿ.ಪಿ ಡಾ. ಪಿ. ಜಿ. ಹಳಕಟ್ಟಿ ಇಂಜಿನಿಯರಿಂಗ್ ಕಾಲೇಜಿನ, ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಅರವಿಂದಕುಮಾರ್ ಕೋಟಗೊಂಡ ಹೇಳಿದರು.ನಗರದ ಬಿ ಎಲ್ ಡಿ ಇ ಸಂಸ್ಥೆಯ ಎಸ್ ಬಿ ಕಲಾ ಮತ್ತು ಕೆ ಸಿ ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ, ಕಾಲೇಜಿನ ಸಂಸ್ಥೆಯ ನಾವೀನ್ಯತಾ ಪರಿಷತ್ತು (ಐಐಸಿ), ಸಂಶೋಧನೆ ಮತ್ತು ಅಭಿವೃದಿ ಕೋಶ, ಎಂಎಚ್ಆರ್ಡಿ ಇನ್ನೋವೇಶನ್ ಸೆಲ್ (ಭಾರತ ಸರ್ಕಾರ) ಸಹಯೋಗದಲ್ಲಿ ದಿನಾಂಕ ೧೭-೧೧-೨೦೨೫ ಸೋಮವಾರದಂದು ಜುರುಗಿದ “ನಿಮ್ಮ ಆಲೋಚನೆಗಳ ರಕ್ಷಣೆ: ಐಪಿಆರ್ (ಬೌದ್ಧಿಕ ಆಸ್ತಿ ಹಕ್ಕು) ಅವಲೋಕನ” ಎಂಬ ವಿಷಯದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದ ಅವರು ಸಂಶೋಧನೆ ಮತ್ತು ನಾವೀನ್ಯತೆಯಲ್ಲಿ ತೊಡಗಿರುವ…
ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಯೋಗ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, ಬೆಂಗಳೂರಿನ ಕೆ.ಸಿ.ಟಿ.ಯು ಹಾಗೂ ಬೆಂಗಳೂರಿನ ವಿ ಕೇರ್ ಸೊಸೈಟಿ ಇವರ ಸಹಯೋಗದಲ್ಲಿ ಎಂ.ಎಸ್. ಎಂ.ಇ. ಇವರ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು ಮತ್ತು ವೇಗಗೊಳಿಸುವ ಯೋಜನೆಯಡಿಯಲ್ಲಿ ಇನಕ್ಯೂಬೆಶನ್ ಅರಿವು ಮೂಡಿಸುವ ಕಾರ್ಯಕ್ರಮವನ್ನು ಸಿಕ್ಯಾಬ್ ಇನ್ ಸ್ಟಿಟ್ಯೂಟ್ ಆಫ್ ಇಂಜನಿಯರಿಂಗ್ ಮತ್ತು ಟೆಕ್ನಾಲಜಿ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿತ್ತು.ಸಿಡಾಕ್ನ ಜಂಟಿ ನಿರ್ದೇಶಕರಾದ ಸುಪ್ರಿತಾ ಬಳ್ಳಾರಿ ಮಾತನಾಡಿ, ಇಂಜಿನಿಯರಿಂಗ್ ಪದವಿಯ ನಂತರ ಸ್ವಂತ ಉದ್ಯಮ ಸ್ಥಾಪಿಸಲು ಪಡೆಯಬೇಕಾದ ಅಗತ್ಯ ವೃತ್ತಿ ನೈಪುಣ್ಯತೆ ತರಬೇತಿ ಮತ್ತು ಕೈಗಾರಿಕೆಗಳನ್ನು ಸ್ಥಾಪಿಸಲು ತೆಗೆದುಕೊಳ್ಳುವ ಕ್ರಮಗಳ ಕುರಿತಾಗಿ ವಿಸ್ತೃತವಾಗಿ ವಿವರಿಸಿದರು. ಸ್ವ ಉದ್ಯೋಗ ಸ್ಥಾಪಿಸುವ ಮೂಲಕ ತಾವು ಉದ್ಯೋಗಿಯಾಗುವುದಲದೇ ಇತರರಿಗೂ ಉದ್ಯೋಗ ನೀಡಲು ವಿಫುಲ ಅವಕಾಶ ಕಲ್ಪಿಸಿದಂತಾಗುತ್ತದೆ ಎಂದು ಅವರು ಹೇಳಿದರು.ಆರ್ಥಿಕ ಸಾಕ್ಷರತಾ ಆಪ್ತ ಸಮಾಲೋಚಕರಾದ ಈರಣ್ಣ ಚಿಮ್ಮಲಗಿ ಅವರು ಸ್ವುದ್ಯೋಗ ಕೈಗೊಳ್ಳಲು ಬ್ಯಾಂಕಿನ ಮೂಲಕ ದೊರೆಯುವ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ತುಮಕೂರಿನ ಗಾರ್ಡನ್ ರಸ್ತೆಯ ಅಯ್ಯಪ್ಪ ಸ್ವಾಮಿ ದೇವಾಲಯ ಸಾರಥ್ಯದಲ್ಲಿ ನಡೆದ ಪೊಲೀಸ್ ರಮೇಶ ಹಾಡಿರುವ ಶ್ರೀ ಶಾಸ್ತ ಗಾನಾಮೃತ ಧ್ವನಿ ಸುರುಳಿ ಬಿಡುಗಡೆ ಸಮಾರಂಭದಲ್ಲಿ ಜಿಲ್ಲೆಯ ಸಿಂದಗಿ ತಾಲೂಕಿನ ಬೋರಗಿ ಗ್ರಾಮದ (ಬೆಂಗಳೂರು ಪೊಲೀಸ್ ಹೆಟ್ ಕಾನ್ಸ್ಟೇಬಲ್) ಮೌಲಾಲಿ ಆಲಗೂರಗೆ ಸಾಹಿತ್ಯ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು.ಇದೇ ವೇಳೆ ತುಮಕೂರಿನ ಹಿರೇಮಠದ ಸಂಸ್ಥಾನದ ಶ್ರೀ ಶಿವಾನಂದ ಶಿವಾಚಾರ್ಯ ಮಹಾಸ್ವಾಮಿಗಳು, ಬೆಳ್ಳಾವಿ ಖಾರದ ಮಠದ ಶ್ರೀ ವೀರ ಬಸವ ಮಹಾಸ್ವಾಮಿಗಳು, ಅಯ್ಯಪ್ಪ ಸ್ವಾಮಿ ಮಠದ ಅಧ್ಯಕ್ಷರಾದ ಟಿ.ಬಿ ಶೇಖರ ಗುರುಸ್ವಾಮಿಗಳು, ಗಾಯಕ ಹೆಡ್ ಕಾನ್ಸ್ಟೇಬಲ್ ರಮೇಶ, ಖ್ಯಾತ ಹಿಂದುಸ್ತಾನಿ ಗಾಯಕ ಸಿದ್ದೇಂದ್ರಕುಮಾರ್ ಹಿರೇಮಠ, ಸಾಹಿತಿ ರಮೇಶ ನಂದಿಕೋಲ್ ಆಕಾಶವಾಣಿ ನಿರೂಪಕಿ ಸಂಧ್ಯಾ ಭಟ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಲೇಖಕರು- ಪ್ರಶಾಂತ ಕುಲಕರ್ಣಿಉಪನ್ಯಾಸಕರುಶ್ರೀ ಪದ್ಮರಾಜ ಬಿ.ಇಡ್ ಕಾಲೇಜು, ಸಿಂದಗಿ.ಫೋ: 9845442237 ಉದಯರಶ್ಮಿ ದಿನಪತ್ರಿಕೆ ಮಲ್ಲೇಶ ಎಂಬ ಹುಡುಗ ಸಣ್ಣ ಹಳ್ಳಿಯ ಬಡ ಮನೆಗೆ ಜನಿಸಿದ್ದರೂ, ಅವನ ಕನಸುಗಳು ಬಡತನಕ್ಕಿಂತಲೂ ಬಹಳ ದೊಡ್ಡವು. ತಂದೆ ಕಲ್ಲು ತೋಡಿ ಜೀವನ ನಡೆಸುವ ಕೂಲಿ ಕಾರ್ಮಿಕ. ತಾಯಿ ಮನೆಯ ಕೆಲಸಗಳಲ್ಲಿ ತೊಡಗಿಕೊಂಡ ಸರಳ ಗೃಹಿಣಿ. ಬದುಕು ಕಠಿಣ ಆದರೆ ಮಲ್ಲೇಶನ ಮನಸ್ಸು ಮಣ್ಣಿಗಿಂತ ಗಟ್ಟಿಯಾಗಿತ್ತು.ಹಳ್ಳಿಯವರಿಗಂತೂ ಅವನ ಕನಸು ನಕ್ಕು ನೋಡುವ ವಿಷಯ:“ಕಲ್ಲು ಹೊರುವವನ ಮಗ ಇಂಜಿನಿಯರ್ ಆಗ್ತಾನಾ?”ಆದರೆ ಮಲ್ಲೇಶ ಕೇಳುತ್ತಿರಲಿಲ್ಲ; ಕೇಳಿದರೂ ಮನಸ್ಸಿಗೆ ಹಾಕುತ್ತಿರಲಿಲ್ಲ.ಬೆಳಿಗ್ಗೆ ತಂದೆಯ ಜೊತೆ ಕಲ್ಲು ಹೊರುವ ಕೆಲಸ, ಮಧ್ಯಾಹ್ನ ಶಾಲೆ, ರಾತ್ರಿ ಓದು ಅವನ ಪ್ರತಿದಿನದ ಹೋರಾಟ. ಕೈಗಳಲ್ಲಿ ಕಲ್ಲಿನ ಧೂಳು ಇರ್ತಿದ್ದರೂ ಮನಸ್ಸಿನಲ್ಲಿ ಬೆಳಕಿನ ಕನಸು ಇದ್ದಿತು. ಗಣಿತ ಕಲಿಯುವಾಗ ಅವನು ಅಂಕೆಗಳನ್ನೇ ತನ್ನ ಮೇರೆಯ ಮೆಟ್ಟಲುಗಳಂತೆ ನೋಡುತ್ತಿದ್ದ.ಒಮ್ಮೆ ಶಾಲೆಯಲ್ಲಿ ಗುರುಗಳು ಹೇಳಿದ ಮಾತು ಅವನ ಬದುಕಿನ ದಿಕ್ಕು ಬದಲಿಸಿತು:“ಪ್ರತಿಯೊಂದು ದೊಡ್ಡ ಸಾಧನೆಯ ಹಿಂದೆ ಸಣ್ಣ ಸಣ್ಣ ಹೋರಾಟಗಳಿರುತ್ತವೆ.”ಈ ಮಾತೆ…
ಉದಯರಶ್ಮಿ ದಿನಪತ್ರಿಕೆ ಬೆಳಗಾವಿ: ಕಾವ್ಯ ಸಮಯ ಸಂದರ್ಭ ನೋಡಿ ಹುಟ್ಟುವುದಿಲ್ಲ ಅದು ಅಂತಃಸ್ಪೂರ್ತಿಯಾಗಿ ಸ್ಪಂದಿಸಿ ಕವಿಯ ಕಾವ್ಯವಾಗಿ ಹೊರಹೊಮ್ಮುತ್ತದೆ ಪುಸ್ತಕ ಪ್ರೀತಿಸುವವರು ಪುಸ್ತಕ ಓದುವವರು ನಿಜವಾದ ಸುಖಿಗಳು. ಇಂದಿನ ಧಾವಂತದ ದಿನಗಳಲ್ಲಿ ಪುಸ್ತಕ ಸಂಸ್ಕೃತಿ ತೀರಾ ಅಗತ್ಯವಾಗಿದೆ ಎಂದು ವಿದ್ವಾಂಸ ಡಾ ಬಸವರಾಜ ಜಗಜಂಪಿ ನುಡಿದರು.ಅವರಿಂದು ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದಿಂದ ನಡೆದ ಡಾ ಭವ್ಯಾ ಅಶೋಕ ಸಂಪಗಾರರವರ ನಾಳೆಗಳ ನೆಚ್ಚಿ ಕವನ ಸಂಕಲನ ಬಿಡುಗಡೆ ಸಮಾರಂಭದಲ್ಲಿ ಅಧ್ಯಕ್ಷ ಸ್ಥಾನದಿಂದ ಮಾತನಾಡುತ್ತಿದ್ದರು.ಮುಂದುವರಿದು ಸಾಹಿತ್ಯ ಪ್ರವೇಶಿಕರಿಗೆ ಹಿರಿಯ ಸಾಹಿತಿಗಳ ಸಾಹಿತ್ಯದ ಅಭ್ಯಾಸ ಅಗತ್ಯವಿದೆ. ಬರೆದಿದ್ದೆಲ್ಲ ಸಾಹಿತ್ಯವಾಗಲಾರದು. ಸತತ ಅಧ್ಯಯನ ಒಂದು ಒಳ್ಳೆಯ ಕೃತಿಗೆ ಕಾರಣವಾಗುತ್ತದೆಂದರು.ಬಾಲವಿಕಾಸ ಅಕಾಡೆಮಿ ಗೌರವ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಬಸವರಾಜ ಗಾರ್ಗಿ ಮುಖ್ಯ ಅತಿಥಿ ಸ್ಥಾನದಿಂದ ಬೆಳಗಾವಿ ಜಿಲ್ಲೆಯ ವೈದ್ಯ ಸಾಹಿತ್ಯ ಪರಂಪರೆ ಮತ್ತು ಮಹಿಳಾ ಸಾಹಿತಿಗಳ ಸಾಹಿತ್ಯ ಪರಂಪರೆ ಕುರಿತು ಮಾತನಾಡಿದರು.ಬೀಮ್ಸ ಆಡಳಿತಾಧಿಕಾರಿ ಡಾ ಸಿದ್ದು ಹುಲ್ಲೋಳಿ ಮಾತನಾಡಿ, ವೈದ್ಯಕೀಯ ಲೋಕದ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಛತ್ರಪತಿ ಶಿವಾಜಿ ಮಹಾರಾಜ ಶಿಕ್ಷಣ ಸಂಸ್ಥೆಯ ವತಿಯಿಂದ ವಿಜಯಪುರ ಜಿಲ್ಲಾ ಕಾರ್ಯ ನಿರತ ಪತ್ರಕರ್ತ ಸಂಘದ ಅಧ್ಯಕ್ಷರಾಗಿ ಚುನಾಯಿತರಾದ ಅಧ್ಯಕ್ಷ ಹಾಗೂ ಪದಾಧಿಕಾರಿಗಳಿಗೆ ಸನ್ಮಾನಿಸಲಾಯಿತು.ನಗರದ ರವೀಂದ್ರನಾಥ ಠಾಗೋರ್ ಶಾಲಾ ಕಾಲೇಜಿನ ಆಡಳಿತ ಮಂಡಳಿಯ ಕಚೇರಿಯಲ್ಲಿ ಸಂಸ್ಥೆಯ ಅಧ್ಯಕ್ಷ ಶಿವಾಜಿ ಗಾಯಕವಾಡ ಇವರು ನೂತನ ಅಧ್ಯಕ್ಷ ಅಶೋಕ ಯಡಳ್ಳಿ, ಉಪಾಧ್ಯಕ್ಷ ಶಶಿ ಮೆಂಡೆಗಾರ, ಖಜಾಂಜಿ ರಾಹುಲ್ ಆಪ್ಟೆ ಹಾಗೂ ಕಾರ್ಯಕಾರಣಿ ಸದಸ್ಯ ಗುರುರಾಜ ಗದ್ದನಕೇರಿ ಇವರನ್ನು ಆತ್ಮೀಯವಾಗಿ ಸನ್ಮಾನಿಸಿದರು.ಈ ವೇಳೆ ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ವಿಜಯಕುಮಾರ ಸಾರವಾಡ, ಪ್ರಿನ್ಸಿಪಲ್ ಅಭಿಜಿತ ಗಾಯಕವಾಡ, ಶಿಕ್ಷಕರಾದ ಗಜಾನನ ಕಾಳೆ, ಪ್ರಲ್ಹಾದ ಹೂಗಾರ ಸೇರಿದಂತೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಅಖಂಡ ಕರ್ನಾಟಕ ರೈತ ಸಂಘದ ವತಿಯಿಂದ ಪ್ರತಿಭಟನೆ | ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಮೂಲಕ ಮುಖ್ಯಮಂತ್ರಿಗಳಿಗೆ ಪತ್ರ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ತೊಗರಿ, ಹತ್ತಿ, ಶೇಂಗಾ, ಮೆಕ್ಕೆ ಜೋಳ, ಸಜ್ಜಿ, ಈರುಳ್ಳಿ ಸೇರಿದಂತೆ ಇನ್ನಿತರ ಬೆಳೆಗಳು ನಿರಂತರ ಮಳೆಯಿಂದ ಸಂಪೂರ್ಣ ಹಾನಿಯಾಗಿದ್ದು ಈರುಳ್ಳಿ ಪರಿಸ್ಥಿತಿಯಂತೂ ಕಣ್ಣಾರೆ ನೋಡದಂತಾಗಿದೆ. ಈರುಳ್ಳಿ ಹತ್ತಿರ ಹೋದರೆ, ಕೊಳೆತ ಈರುಳ್ಳಿ ಕೊಳೆತ ಹೆಣಕ್ಕಿಂತಲೂ ಕನಿಷ್ಠ ನಾರುತ್ತವೆ. ಇಂತಹ ಸಂದರ್ಭದಲ್ಲಿ ಸರ್ಕಾರ ಹಾನಿಗೊಳಗಾದ ಬೆಳೆಗೆ ಪರಿಹಾರ ನೀಡದೇ ಉದ್ದೇಶ ಪೂರ್ವಕವಾಗಿ ವಿಳಂಬ ನೀತಿ ಅನುಸಿರುತ್ತಿದ್ದು, ಇದನ್ನು ಖಂಡಿಸಿ ಅಖಂಡ ಕರ್ನಾಟಕ ರೈತ ಸಂಘದ ವತಿಯಿಂದ ವಿಜಯಪುರ ನಗರದ ಅಂಬೇಡ್ಕರ್ ವೃತ್ತದಲ್ಲಿ ನೂರಾರು ಕಾರ್ಯಕರ್ತರು ಜಮಾಯಿಸಿ ಬೃಹತ್ ಪ್ರತಿಭಟನೆ ನಡೆಸಿ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿಗಳ ಕಚೇರಿ ತಲುಪಿ ಮುಖ್ಯಮಂತ್ರಿಗಳಿಗೆ ಬರೆದ ಪತ್ರವನ್ನು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅವರಿಗೆ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ…
