Author: editor.udayarashmi@gmail.com

ವಿಜಯಪುರ: ಮಾನವ ಹಕ್ಕುಗಳ ಪಾಲನೆ ಮಾಡುವುದು ಪ್ರತಿಯೊಬ್ಬ ನಾಗರಿಕರ ಹೊಣೆಯಾಗಿದ್ದು, ಮಾನವ ಹಕ್ಕುಗಳ ಉಲ್ಲಂಘನೆಯಾಗದಂತೆ ಪರಿಪಾಲಿಸುವ ಜವಾಬ್ದಾರಿ ನಮ್ಮದಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಅವರು ಅಭಿಮತ ವ್ಯಕ್ತಪಡಿಸಿದರು.ಭಾನುವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಮಾನವ ಹಕ್ಕುಗಳ ದಿನಾಚರಣೆಗೆ ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾನವ ಹಕ್ಕುಗಳ ದಿನಾಚರಣೆಯ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿದ ಅವರು, ಹಕ್ಕು ಮತ್ತು ಕರ್ತವ್ಯಗಳನ್ನು ಸರಿಯಾಗಿ ಪಾಲನೆ ಮಾಡಬೇಕು. ಮಾನವ ಹಕ್ಕುಗಳ ಪಾಲನೆ ಕುರಿತು ಮಕ್ಕಳಲ್ಲಿ ಅರಿವು ಮೂಡಿಸಬೇಕು ಎಂದು ಹೇಳಿದರು.ಮಾನವ ಹಕ್ಕುಗಳು ಸ್ವಾಭಾವಿಕವಾಗಿ ಪ್ರದತ್ತವಾದ ಹಕ್ಕುಗಳಾಗಿವೆ. ರಕ್ಷಣೆಗೆ ಆಯೋಗ ಇವೆ. ರಾಜ್ಯದಲ್ಲಿಯೂ ಸಹ ರಾಜ್ಯ ಮಾನವ ಹಕ್ಕುಗಳ ಆಯೋಗವು ಕಾರ್ಯ ನಿರ್ವಹಿಸುತ್ತಿದೆ.ಮಾನವ ಹಕ್ಕುಗಳ ಕುರಿತು ಜಾಗೃತಿ ಹೊಂದಬೇಕು. ನಮ್ಮ ಕರ್ತವ್ಯಗಳನ್ನು ಸಹ ನಿಷ್ಠೆಯಿಂದ ನಿರ್ವಹಿಸಬೇಕು. ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬಂತೆ ಪ್ರತಿಯೊಬ್ಬ ವ್ಯಕ್ತಿ ಘನತೆ ಹೊಂದಿರುತ್ತಾನೆ. ಘನತೆಗೆ ಕುಂದು ಬಾರದಂತೆ ನಡೆದುಕೊಳ್ಳಬೇಕು ಎಂದು ಹೇಳಿದರು.ಹಕ್ಕುಗಳ ಉಲ್ಲಂಘನೆ ತಡೆಯುವುದು,…

Read More

ದೇವರಹಿಪ್ಪರಗಿ: ಉಡಿ ತುಂಬುವಂಥ ಕಾರ್ಯಕ್ರಮದಲ್ಲಿ ಮಹಿಳೆಯರ ಹೆಚ್ಚಿನ ಭಾಗವಹಿಸುವಿಕೆ ನಮ್ಮ ಸಂಪ್ರದಾಯದ ಪಾಲನೆ ಹಾಗೂ ಬೆಳವಣಿಗೆಯನ್ನು ಸೂಚಿಸುತ್ತದೆ ಎಂದು ಜಡಿಮಠದ ಜಡಿಸಿದ್ಧೇಶ್ವರ ಶ್ರೀಗಳು ಹೇಳಿದರು.ಪಟ್ಟಣದಲ್ಲಿ ಶುಕ್ರವಾರ ಗುಡ್ಡಾಪೂರ ಶ್ರೀದಾನಮ್ಮದೇವಿ ಪುರಾಣದ ಅಂಗವಾಗಿ ಜರುಗಿದ ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.ಮಹಿಳೆ ಹಿಂದೆ, ಇಂದು, ಎಂದಿಗೂ ಮಮತೆ, ಮಮಕಾರದ ಮಾತೃ ಸ್ವರೂಪಿ. ಅಂತೆಯೇ ನಮ್ಮ ನೆಲದ ಸಂಪ್ರದಾಯ, ಸಂಸ್ಕೃತಿಗಳನ್ನು ಪಾಲಿಸಿ ಮುಂದುವರೆಸಿಕೊಂಡು ಹೋಗುವಲ್ಲಿ ಅವಳು ಸದಾ ಮುಂದು, ಅಂತೆಯೇ ಅವಳಿಗೆ ಪೂಜ್ಯನೀಯ ಸ್ಥಾನ ನೀಡಿದ್ದೇವೆ. ಎಂದು ಹೇಳುತ್ತಾ ಇಂದಿನ ಉಡಿ ತುಂಬುವ ಕಾರ್ಯದಲ್ಲಿ ಪಟ್ಟಣದ ಬಹುತೇಕ ಮಾತೆಯರು ಭಾಗವಹಿಸಿ ಯಶಸ್ವಿಗೊಳಿಸಿದ್ದು ಅತ್ಯಂತ ಸಂತೋಷದ ವಿಷಯ ಎಂದರು.ಕಾರ್ಯಕ್ರಮದಲ್ಲಿ ಇಂದ್ರಾಬಾಯಿ ಕುದರಿ, ಸಾವಿತ್ರಿ ಹಿರೇಮಠ, ಮಹಾದೇವಿ ಪಾಟೀಲ, ನಿರ್ಮಲಾ ಯಾಳಗಿ, ರೇಣುಕಾ ಪಾಟೀಲ, ಪ್ರೇಮಾ ಬುದ್ನಿ, ದ್ರಾಕ್ಷಾಯಣಿ ಸೌದಿ, ಭಾರತಿ ಪಾಟೀಲ, ಸುರೇಖಾ ಬುದ್ನಿ, ಮಂಜುಳಾ ಕಕ್ಕಳಮೇಲಿ, ಭಾರತಿ ಬುದ್ನಿ, ಲಕ್ಷ್ಮೀ ಸಾಸಾಬಾಳ, ವಿಜಯಲಕ್ಷ್ಮಿ ಬುದ್ನಿ, ಗಂಗವ್ವ ಒಣರೋಟ್ಟಿ, ಮಾಯಾ ಪಾಟೀಲ,…

Read More

ದೇವರಹಿಪ್ಪರಗಿ: ಮಾತು ಬಾರದೇ, ಕಿವಿ ಕೇಳದೇ ಇದ್ದರೂ ಜೀವನ ಸಾಗಿಸಬಹುದು. ಆದರೆ ಕಣ್ಣು ಕಾಣದೇ ಜೀವನ ನಡೆಸುವುದು ಅತ್ಯಂತ ಕಠಿಣಕರವಾಗಿದೆ ಎಂದು ವಿಜಯಪುರ ಅನುಗ್ರಹ ಕಣ್ಣಿನ ಆಸ್ಪತ್ರೆಯ ತಜ್ಞ ಡಾ. ಪ್ರಭುಗೌಡ ಲಿಂಗದಳ್ಳಿ(ಚಬನೂರ) ಹೇಳಿದರು.ಪಟ್ಟಣದಲ್ಲಿ ಭಾನುವಾರ ಕಲ್ಮೇಶ್ವರ ದೇವಸ್ಥಾನದ ಆವರಣದಲ್ಲಿ ಜರುಗಿದ ಉಚಿತ ನೇತ್ರ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಜೀವನದಲ್ಲಿ ನಲವತ್ತು ವರ್ಷದ ನಂತರ ಬಿ.ಪಿ. ಸಕ್ಕರೆ ಕಾಯಿಲೆಯಂತೆ ಕಣ್ಣಿನ ಸಮಸ್ಯೆಯು ಗಮನಾರ್ಹವಾಗಿ ಕಂಡು ಬರುತ್ತಿದೆ. ಅದರಲ್ಲೂ ಗ್ರಾಮೀಣ ಭಾಗದಲ್ಲಿ ದೃಷ್ಟಿದೋಷ ಈಗೀಗ ಸಾಮಾನ್ಯವಾಗಿದ್ದು, ಇದರ ನಿಯಂತ್ರಣಕ್ಕಾಗಿ ಉಚಿತ ನೇತ್ರ ತಪಾಸಣಾ ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.ದೇವರಹಿಪ್ಪರಗಿ ಪಟ್ಟಣದ ಹಿರಿಯ ವೈದ್ಯ ಆರ್.ಆರ್.ನಾಯಿಕ್ ಹಾಗೂ ತಾಲ್ಲೂಕು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಕೆ.ಕುದರಿ ಮಾತನಾಡಿ, ಅನುಗ್ರಹ ಕಣ್ಣಿನ ಆಸ್ಪತ್ರೆಯ ಡಾ.ಪ್ರಭುಗೌಡರು ಬಡವರ ಪಾಲಿಗೆ ಕಣ್ಣಾಗಿ ಜಿಲ್ಲೆಯ ವಿವಿಧೆಡೆ ನೇತ್ರ ತಪಾಸಣೆ, ಉಚಿತ ಶಸ್ತ್ರಚಿಕಿತ್ಸೆ ಕೈಗೊಂಡಿರುವುದು ಶ್ಲಾಘನೀಯ ಎಂದರು.ಉದ್ಘಾಟನಾ ಕಾರ್ಯಕ್ರಮಕ್ಕೆ ಸ್ಥಳೀಯ ಮಠಗಳ ಶ್ರೀಗಳು ಸಾನಿಧ್ಯ ವಹಿಸಿದ್ದರು.…

Read More

ಸಿಂದಗಿ: ಕಟ್ಟಡ ಕಾರ್ಮಿಕರಲ್ಲಿ ಅತಿ ಹೆಚ್ಚು ಸಕ್ಕರೆ ಖಾಯಿಲೆ ಹಾಗೂ ರಕ್ತದೊತ್ತಡದಿಂದ ಬಳಲುತ್ತಿರುತ್ತಾರೆ ಆದರು ಕೂಡಾ ಅವರು ಎಲ್ಲಿ ಕೂಡಾ ತಪಾಸಣೆ ಮಾಡಿಕೊಂಡಿರುವುದಿಲ್ಲ ಎಂದು ಆರ್.ಕೆ ಆಸ್ಪತ್ರೆಯ ಆಡಳಿತಾಧಿಕಾರಿ ಅನೀಲಕುಮಾರ ರಾಠೋಡ ಹೇಳಿದರು.ಪಟ್ಟಣದ ಸಂಗಮ ಸಂಸ್ಥೆಯಲ್ಲಿ ಸಂಗಮ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯಲ್ಲಿ ಕಟ್ಟಡ ಕಾರ್ಮಿಕರಿಗೆ ಹಮ್ಮಿಕೊಂಡ ಉಚಿತ ಆರೋಗ್ಯ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಟ್ಟಡ ಕಾರ್ಮಿಕರು ದಿನನಿತ್ಯ ದುಡಿಮೆ ಮಾಡಿ ಜೀವನ ಸಾಗಿಸುತ್ತಾರೆ. ಅವರಿಗೆ ಆಸ್ಪತ್ರೆಗೆ ಹೊಗಲು ನಿರ್ಲಕ್ಷ್ಯ ವಹಿಸುತ್ತಾರೆ. ಯಾವುದೇ ತಪಾಸಣೆ ಮಾಡಿಕ್ಕೊಳ್ಳುವುದಿಲ್ಲ. ಆದ್ದರಿಂದ ಪ್ರತಿಯೊಬ್ಬರು ಆರೋಗ್ಯವಾಗಿ ಇರಬೇಕು ಎಂಬ ಉದ್ದೇಶದಿಂದ ಕರ್ನಾಟಕ ಸರ್ಕಾರ ತಮ್ಮ ಮನೆ ಬಾಗಿಲಿಗೆ ವೈದ್ಯರನ್ನು ಕಳುಹಿಸಿದ್ದಾರೆ. ತಾವೆಲ್ಲರೂ ಈ ಉಚಿತ ಆರೋಗ್ಯ ತಪಾಸಣೆಯ ಸದುಪಯೋಗ ಪಡೆದುಕೊಂಡು ಆರೋಗ್ಯವಾಗಿರಿ ಎಂದರು.ಈ ವೇಳೆ ಸಂಗಮ ಸಂಸ್ಥೆಯ ನಿರ್ದೇಶಕ ಫಾದರ್ ಸಂತೋಷ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಈ ಕಾರ್ಯಕ್ರಮದಲ್ಲಿ ಕಟ್ಟಡ ಕಾರ್ಮಿಕ ಸಂಘದ ಪದಾಧಿಕಾರಿಗಳು ಮತ್ತು ವಿವಿಧ ಹಳ್ಳಿಗಳಿಂದ ಬಂದ ಇತರೆ ಕಟ್ಟಡ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ಮಾಡಲಾಯಿತು.…

Read More

ಸಿಂದಗಿ: ಇಂದಿನ ಯಾಂತ್ರಿಕ ಯುಗವು ಮಾನವೀಯ ಮೌಲ್ಯಗಳಿಂದ ನಮ್ಮನ್ನು ದೂರ ಮಾಡಿದೆ. ಇಂತಹ ಆದ್ಯಾತ್ಮಿಕ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ನಾಲತವಾಡದ ಶ್ರೀಗುರು ಸ್ವಾಮಿಗಳು ಹೇಳಿದರು.ಶನಿವಾರದಂದು ತಾಲೂಕಿನ ಯಂಕಂಚಿ ಸಂಸ್ಥಾನ ಹಿರೇಮಠದಲ್ಲಿ ಲಿ.ಶ್ರೀ ರುದ್ರಮುನಿ ಶಿವಾಚಾರ್ಯರ ೪೬ನೆಯ ಪುಣ್ಯಾರಾದನೆಯ ನಿಮಿತ್ಯವಾಗಿ ಹಮ್ಮಿಕೊಂಡ ಶ್ರೀ ಅಮ್ಮೋಘ ಸಿದ್ದೇಶ್ವರರ ಪುರಾಣವನ್ನು ಪ್ರಾರಂಭಿಸಿ ಮಾತನಾಡಿದ ಅವರು, ಅಮೋಘ ಸಿದ್ದೇಶ್ವರರು ಒಬ್ಬ ಪವಾಡ ಪುರುಷರು ಅಂತಹ ಮಹಾನ ಶರಣರ ಸಂದೇಶ, ಜೀವನ ಚರಿತ್ರೆ ಇಂದಿನ ಯುವ ಪೀಳಿಗೆಗೆ ತುಂಬಾ ಅವಶ್ಯಕವಾಗಿದೆ. ಶ್ರೀಮಠದ ಪೂಜ್ಯರು ಈ ಸುಂದರ ಪ್ರವಚನವನ್ನು ಹಮ್ಮಿಕೊಂಡಿದ್ದು ಶ್ಲಾಘನೀಯ ಎಂದರು.ಈ ವೇಳೆ ಮಳ್ಳಿ ಹಿರೇಮಠದ ರುದ್ರಮುನಿ ಶಿವಾಚಾರ್ಯರು, ಚಿಕ್ಕರೂಗಿಯ ಈರಣ್ಣ ಶಾಸ್ತ್ರೀಗಳು ಮಾತನಾಡಿ, ಎಲ್ಲ ಸದ್ಭಕ್ತರು ಇದರ ಪಡೆದುಕೊಳ್ಳಬೇಕು. ಏಕೆಂದರೆ ಇಂದಿನ ದಿನಮಾನಗಳಲ್ಲಿ ಪುರಾಣ ಪ್ರವಚನ ಆಲಿಸುವುದರಿಂದ ಹಾಗೂ ಶರಣ ಸಂತರ ಜೀವನದ ಆದರ್ಶವನ್ನು ಪಾಲಿಸಿಕೊಂಡು ಅನುಸರಿಸಿಕೊಂಡು ಸಾಗಿದರೆ ನಮ್ಮ ಬದುಕು ಬಂಗಾರವಾಗುವದರಲ್ಲಿ ಸಂಶಯವಿಲ್ಲ. ಮಾನವ ಪ್ರತಿ ಕ್ಷೇತ್ರದಲ್ಲೂ ಅಪ್ಪಟ ಸಾಧನೆ ಮಾಡಿದ್ದಾನೆ. ಆದರೆ…

Read More

ಬ್ರಹ್ಮದೇವನಮಡು: ಸಿಂದಗಿ ತಾಲೂಕಿನ ಸುಕ್ಷೇತ್ರ ಹೊನ್ನಳ್ಳಿ ಗ್ರಾಮದಲ್ಲಿ ಗುರು ವೀರಘಂಟೈ ಮಡಿವಾಳೇಶ್ವರ ಜಾತ್ರೆ ನಿಮಿತ್ಶ ಡಿ.೧೧ ರಿಂದ ಡಿ.೨೫ರ ವರೆಗೆ ಪ್ರತಿದಿನ ಸಂಜೆ ೭.೩೦ ರಿಂದ ವೈರಾಗ್ಶನಿಧಿ ಮಾತೆ ಅಕ್ಕಮಹಾದೇವಿ ಮಹಾ ಪುರಾಣವನ್ನು ಕೊಡೆಕಲ್ ಕುಮಾರ ಶ್ರೀ ಪ್ರಶಸ್ತಿ ಪುರಸ್ಕ್ರತ, ಪ್ರವಚನಕಾರ ಗಂಗಾಧರ ಶಾಸ್ತ್ರಿಗಳಿಂದ ನಡೆಯಲಿದೆ. ಗದಗಿನ ವಿರೇಶ್ವರ ಪುಣ್ಶಾಶ್ರಮದ ವಿರೇಶಕುಮಾರ ಯಡ್ರಾಮಿ ಸಂಗೀತ ಸೇವೆ ನೀಡಲಿದ್ದಾರೆ. ಗದಗಿನ ಹಣಮಂತಕುಮಾರ ಸುಂಕದ ತಬಲಾಸಾತ್ ನೀಡುವವರು. ಶ್ರೀಮಠದ ಪೀಠಾಧ್ಶಕ್ಷ ಗುರುಲಿಂಗಯ್ಶ ಮಹಾಸ್ವಾಮೀಜಿ ಅಧ್ಶಕ್ಷತೆಯಲ್ಲಿ ಪುರಾಣ ಕಾಯ೯ಕ್ರಮ ಉದ್ಘಾಟನೆ ನಡೆಯಲಿದ್ದು,ಭಕ್ತರು ಪಾಲ್ಗೊಳ್ಳಬೇಕು ಎಂದು ಪ್ರಕಟಣೆ ತಿಳಿಸಿದೆ.

Read More

ಮುದ್ದೇಬಿಹಾಳ: ರಾಷ್ಟ್ರೀಯ ಸಮಾಜ ಪಕ್ಷದ ತಾಲೂಕು ಅಧ್ಯಕ್ಷರನ್ನಾಗಿ ತಾಲೂಕಿನ ಕೇಸಾಪೂರ ಗ್ರಾಮದ ನಾಗರಾಜ ಹಿರೇಕುರುಬರ ಅವರನ್ನ ಆಯ್ಕೆ ಮಾಡಲಾಗಿದೆ.ಪಕ್ಷದ ಸಂಸ್ಥಾಪಕ ಅಧ್ಯಕ್ಷ ಮಹಾದೇವ ಜಾನಕರ ಅವರ ಮೌಖಿಕ ಆದೇಶದನ್ವಯ ಈ ಆದೇಶ ಮಾಡಲಾಗಿದೆ ಎಂದು ರಾಜ್ಯಾಧ್ಯಕ್ಷ ಥರ್ಮಣ್ಣ ತೊಂಟಾಪೂರ ತಿಳಿಸಿದ್ದಾರೆ.

Read More

ಮುದ್ದೇಬಿಹಾಳ: ಸಾಮಾಜಿಕ ಚಿಂತನೆ ಧರ್ಮೋಪದೇಶವನ್ನು ಇಡೀ ಜಗತ್ತಿನ ಜನತೆ ಒಪ್ಪಿಕೊಳ್ಳುತ್ತಿದ್ದಾರೆ. ಅಮೇರಿಕಾ, ಜಪಾನ, ರಶಿಯಾ ದೇಶಗಳಲ್ಲಿ ಭಾರತೀಯರನ್ನು ಬಸವಣ್ಣನವರ ನಾಡಿನವರು ಎಂದು ಗೌರವಿಸುತ್ತಾರೆ. ಬಸವಣ್ಣನವರುಸಾರಿದ ಸಂದೇಶ ಎಲ್ಲರಿಗೂ ಕಲ್ಯಾಣವಾಗುತ್ತಿದೆ ಎಂದು ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಹೇಳಿದರು.ಪಟ್ಟಣದ ವಿಬಿಸಿ ಹೈಸ್ಕೂಲ್ ಮೈದಾನದಲ್ಲಿ ಹಮ್ಮಿಕೊಳ್ಳಲಾದ ಬಸವ ಪುರಾಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ವಿಜ್ಞಾನದಲ್ಲಿ ಭಾರತ ಮುಂದಿದೆ. ಅದರೆ ಮಾನವೀಯ ಮೌಲ್ಯಗಳು ಇಲ್ಲ. ಇಂದಿನ ದಿನ ಮಹಾಪುರುಷರ ಜಯಂತಿಗಳನ್ನು ಆಯಾ ಜಾತಿಯವರೇ ಮಾಡುತ್ತಾರೆ. ದೇವ ಮಾನವರನ್ನ ಜಾತಿಗೆ ಸೀಮಿತಗೊಳಿಸಿದ್ದರಿಂದ. ಸಮಾಜದಲ್ಲಿ ಒಡಕು, ವಿರಸಗಳು ಮೂಡಿವೆ. ಇವುಗಳನ್ನ ತೊಡೆದು ಹಾಕಿ ಬಸವಣ್ಣನವರ ತತ್ವಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು ಎಂದರು.ದಿವ್ಯ ಸಾನಿಧ್ಯ ವಹಿಸಿದ್ದ ಕುಂಟೋಜಿ ಸಮಸ್ಥಾನ ಹಿರೇಮಠದ ಡಾ.ಚನ್ನವೀರ ದೇವರು ಮಾತನಾಡಿ, ಪುರಾಣ ಪ್ರವಚನಗಳು ಜನತೆಯನ್ನ ಸನ್ಮಾರ್ಗದಲ್ಲಿ ನಡೆಸುತ್ತವೆ. ಕಾರಣ ಪ್ರತಿಯೊಬ್ಬರೂ ಭಾಗಿಯಾಗಬೇಕು ಎಂದರು.ಸಮಾಜ ಸೇವಕ ಸಿ.ಬಿ.ಅಸ್ಕಿ ಮಾತನಾಡಿದರು.ಬಸವ ಪುರಾಣ ಸಮಿತಿಯ ಕಾರ್ಯಾಧ್ಯಕ್ಷ ಪ್ರಭುಗೌಡ ದೇಸಾಯಿ, ಕಸಾಪ ನಿಕಟಪೂರ್ವ ಅಧ್ಯಕ್ಷ ಎಂ.ಬಿ.ನಾವದಗಿ, ರಾಜಕೀಯ ಮುಖಂಡರಾದ ಶಂಕರಗೌಡ ಹಿರೇಗೌಡರ, ಶಾಂತಗೌಡ ಪಾಟೀಲ…

Read More

ದೇವರಹಿಪ್ಪರಗಿ: ಜಿಲ್ಲಾ ಆದರ್ಶ ಶಿಕ್ಷಕರ ವೇದಿಕೆ ಕೊಡಮಾಡುವ ಜಿಲ್ಲಾ ಆದರ್ಶ ಶಿಕ್ಷಕ ಹಾಗೂ ಶಿಕ್ಷಕಿ ಪ್ರಶಸ್ತಿಗೆ ದೇವರಹಿಪ್ಪರಗಿ ಎಲ್.ಟಿ ಕನ್ನಡ ಪ್ರಾಥಮಿಕ ಶಾಲೆಯ ಶಿಕ್ಷಕಿ ರೇಣುಕಾ ಒಡೆಯರ್ ಹಾಗೂ ಆದರ್ಶ ಶಿಕ್ಷಕ ಪ್ರಶಸ್ತಿಗೆ ಕೋರವಾರ ಎಲ್.ಟಿ ನಂ.೧ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಯ ಸಹಶಿಕ್ಷಕ ಭೀಮನಗೌಡ ಸಿದರಡ್ಡಿ ಭಾಜನರಾಗಿದ್ದಾರೆ.ವಿಜಯಪುರ ಕಂದಗಲ್ಲ ಹಣಮಂತ್ರಾಯ ರಂಗಮಂದಿರದಲ್ಲಿ ಶುಕ್ರವಾರ ಜರುಗಿದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಇರ್ವರಿಗೂ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Read More

ವಿಜಯಪುರ: ಜಿಲ್ಲೆಯಲ್ಲಿ ನೊಂದಣಿಯಾದ ಲೇವಾದೇವಿ, ಗಿರವಿ ಹಾಗೂ ಹಣಕಾಸು ಸಂಸ್ಥೆಗಳು ಪರವಾನಿಗೆಯನ್ನು ೨೦೨೪ರ ಜನವರಿ ೩೧ರೊಳಗಾಗಿ ನಿಗದಿತ ಶುಲ್ಕ ಪಾವತಿಸಿ ನವೀಕರಣಗೊಳಿಸಿಕೊಳ್ಳುವಂತೆ ಸಹಕಾರ ಸಂಘಗಳ ಉಪನಿಬಂಧರಾದ ಶ್ರೀಮತಿ ಎಸ್.ಕೆ.ಭಾಗ್ಯಶ್ರೀ ಅವರು ತಿಳಿಸಿದ್ದಾರೆ.೨೦೨೪ರ ಮಾರ್ಚ್ ೩೧ಕ್ಕೆ ಮುಕ್ತಾಯಗೊಳ್ಳುತ್ತಿರುವ ಎಲ್ಲಾ ಹಣಕಾಸು ಸಂಸ್ಥೆಗಳು ಪರವಾನಿಗೆ ನವೀಕರಿಸಿಕೊಳ್ಳಬೇಕು. ನಿಗದಿತ ಅವಧಿಯಲ್ಲಿ ನವೀಕರಿಸದೇ ಇದ್ದಲ್ಲಿ ನಂತರ ಬಂದ ಅರ್ಜಿಗಳಿಗೆ ಕಾಯ್ದೆ ೬(೪) ರಲ್ಲಿ ನಿರ್ದಿಷ್ಟಪಡಿಸಲಾದ ದರದ ದುಪ್ಪಟ್ಟು ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ ಹಾಗೂ ಕಾಯ್ದೆ ಕಲಂ ೭ಎ(೨)ರ ಪ್ರಕಾರ ವ್ಯವಹಾರದಲ್ಲಿ ತೊಡಗಿಸಿ ಮೊತ್ತಕ್ಕೆ ಅನುಗುಣವಾಗಿ ಭದ್ರತಾ ಠೇವಣಿಯನ್ನು ಪಾವತಿಸಿ ಸಹಕಾರ ಸಂಘಗಳ ಸಹಾಯಕ ನಿಬಂಧಕರು ವಿಜಯಪುರ-ಇಂಡಿರವರ ಮೂಲಕ ನವೀಕರಣಕ್ಕೆ ಪ್ರಸ್ತಾವನೆ ಸಲ್ಲಿಸಬೇಕಾಗಿರುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Read More