ಇಂಡಿ: ತಾಲೂಕಿನಲ್ಲಿ ಕೃಷಿಗೆ ಯೋಗ್ಯವಾದ ಮಣ್ಣಿನ ಅಕ್ರಮ ಸಾಗಾಣೆ ಧಂದೆ ಅವ್ಯಾಹತವಾಗಿ ನಡೆಯುತ್ತಿದ್ದು, ಕೂಡಲೇ ಅಕ್ರಮ ಮಣ್ಣು ಸಾಗಾಟಗಾರರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಕರವೇ ಸ್ವಾಭಿಮಾನ ಬಣದ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಉಪ ತಹಶಿಲ್ದಾರ ಧನಪಾಲಶೆಟ್ಟಿ ದೇವೂರ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.
ಪಟ್ಟಣದ ಆಡಳಿತ ಸೌಧಕ್ಕೆ ತೆರಳಿದ ಕಾರ್ಯಕರ್ತರು ನದಿ ಪಾತ್ರದಲ್ಲಿನ ಮತ್ತು ರೈತರ ಜಮೀನಿನಲ್ಲಿನ ಮಣ್ಣನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದಾರೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು, ಅಕ್ರಮವಾಗಿ ಮಣ್ಣು ಸಾಗಾಟವನ್ನು ತಡೆಗಟ್ಟಬೇಕು. ಅಲ್ಲದೇ ಕಾನೂನು ಬಾಹಿರವಾಗಿ ಎಲ್ಲೆಲ್ಲಿ ಮಣ್ಣು ಶೇಖರಣೆ ಆಗಿದಿಯೋ ಅದನ್ನು ವಶಕ್ಕೆ ಪಡೆದುಕೊಂಡು ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು. ಒಂದು ವೇಳೆ ನಿರ್ಲಕ್ಷ್ಯ ತೋರಿದರೆ, ಉಗ್ರವಾದ ಹೋರಾಟಕ್ಕೆ ಸಹಕಾರ ನೀಡಿದಂತಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಕರವೇ ಸ್ವಾಭಿಮಾನ ಬಣದ ಉತ್ತರ ಕರ್ನಾಟಕ ಅಧ್ಯಕ್ಷ ಲಕ್ಷ್ಮಣ ಕೆಂಬಾಗೆ, ಜಿಲ್ಲಾಧ್ಯಕ್ಷ ಜಗದೇವ್ ಸೂರ್ಯವಂಶಿ, ತಾಲ್ಲೂಕು ಅಧ್ಯಕ್ಷ ಶಿವು ಬಡಿಗೇರ, ಗಿರೀಶ್ ಕಲಕಟ್ಟಿ, ನಿಂಗರಾಜು, ಸಂತೋಷ ಕಾಲೇಬಾಗ, ಪ್ರದೀಪ ಮೂರಮನ, ಪ್ರವೀಣ ಸುತಾರ್, ಅನುಪ್ ವಾಲಿ, ಭಾಗೇಶ ಮಲಘಾಣ, ಮಂಜುನಾಥ್ ಪಾಟೀಲ್, ಕಿರಣ ಇಂಗಳೆ, ಪಿಂಟು ಮಾನೆ, ಮಹೇಶ ಹೊಸಮನಿ, ಸಚೀನ ಹಿರೇಮಠ, ಅಜಯಸಿಂಗ್ ಕನ್ನೊಳ್ಳಿ, ತ್ರಿನೇತ್ರ ಹಿರೇಮಠ, ಗುರುಪ್ರಸಾದ್ ಪವಾರ, ಮಲ್ಲಿಕಾರ್ಜುನ ಕುಂಬಾರ, ಶೀವು ಕೋಳಿ, ಶಿವು ಬಡಿಗೇರ, ಪ್ರದೀಪ ಪವಾರ, ಮಲ್ಲು ಮೇತ್ರಿ, ಆನಂದ ದೇವರ, ಭಾಗೇಶ ತಳವಾರ, ಹಣಮಂತ ಹೋಟಗಿ, ರಜನಿಕಾಂತ್ ಕಲ್ಲೂರಕರ, ಸಂತೋಷ ಹೆಳವರ ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

