Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಸಿಂದಗಿಯ ಶಾಂತವೀರ – ಶ್ವೇತಾ ಮಣೂರ ದಂಪತಿಯ ಪುತ್ರ ನೀಲ್ ಸಿಂದಗಿಯ ಬಸವೇಶ – ಮೇನಕಾ ಮಣೂರ ದಂಪತಿಯ ಅವಳಿ ಜವಳಿ ಪುತ್ರರಾದ ಸಿದ್ದಾಂತ ಮತ್ತು ರಾಜೀವ ಸಿಂದಗಿಯ ರಚಿತ ಚಾಗಶೆಟ್ಟಿ ಮಹಾಂತೇಶ ಶೆಟ್ಟರ್ಶ್ರೀಗುರು ಕೃಪಾ ಆಂಗ್ಲ ಮಾಧ್ಯಮ ಶಾಲೆ ಸಿಂದಗಿ
ಸಿಂದಗಿ: ಅಯೋಧ್ಯೆ ಶ್ರೀ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನಾ ನಿಮಿತ್ಯವಾಗಿ ಸೋಮವಾರ ಸಿಂದಗಿ ಸಾರಂಗಮಠದಲ್ಲಿ ಡಾ.ಪ್ರಭುಸಾರಂಗದೇವ ಶಿವಾಚಾರ್ಯರ ಸಮ್ಮುಖದಲ್ಲಿ ರಾಜಸ್ಥಾನದ ವ್ಯಾಪಾರಸ್ಥರು ಶ್ರೀರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಸಾರ್ವಜನಿಕರಿಗೆ ಪ್ರಸಾದ ವ್ಯವಸ್ಥೆ ಕೈಗೊಂಡಿದ್ದರು.ಈ ವೇಳೆ ರಾಮು ಭೀಕಾರಾಮ್, ಶರ್ಮಾ, ಗ್ರೇವ್ ರಾಮ್, ಶಂಕರ್ಸುತಾರ್ ಮಹೇಂದ್ರಸಿಂಗ್, ಮಹೇಂದ್ರ ಸೋಲಂಕಿ, ವಿಷ್ಣು ರಾಮ್ ಸೇರಿದಂತೆ ಶ್ರೀಮಠದ ಭಕ್ತ ಮಂಡಳಿ ಪ್ರಸಾದ ಸ್ವೀಕರಿಸಿ ಪುನೀತರಾದರು.ಬಸವೇಶ್ವರ ವೃತ್ತ: ಪಟ್ಟಣದ ಪ್ರಥಮ ದರ್ಜೆ ಗುತ್ತಿಗೆದಾರರು ಹಾಗೂ ಸಿಂದಗಿಯ ಶ್ರೀರಾಮನ ಸಮಸ್ತ ಭಕ್ತ ವೃಂದದ ವತಿಯಿಂದ ಬಸವೇಶ್ವರ ವೃತ್ತದಲ್ಲಿ ಶ್ರೀ ರಾಮಲಲ್ಲಾ ಮೂರ್ತಿ ಪೂಜೆ ಹಾಗೂ ಪ್ರಸಾದ ಸೇವೆ ಹಾಗೂ ಬೆಳಿಗ್ಗೆ ೧೧ಗಂಟೆಯಿಂದ ಕಾರ್ಯಕ್ರಮದ ನೇರ ಪ್ರಸಾರ ಹಮ್ಮಿಕೊಂಡು ಸಾರ್ವಜನಿಕರಿಗೆ ವೀಕ್ಷಣೆ ಅವಕಾಶ ಕಲ್ಪಿಸಿತು.ಪಟ್ಟಣದ ಸ್ವಾಮಿ ವಿವೇಕಾನಂದ ವೃತ್ತ, ಆರ್.ಡಿ ಪಾಟೀಲ ಕಾಲೇಜಿನ ಎದುರುಗಡೆ, ಅಶೋಕ ಚೌಕ, ಸೋಮಲಿಂಗೇಶ್ವರ ಚೌಕ, ನೀಲಗಂಗಾದೇವಿ ದೇವಸ್ಥಾನ ಬಳಿ, ವಜ್ರಹನುಮಾನ ದೇವಸ್ಥಾನ, ಮಲ್ಲಿಕಾರ್ಜುನ ನಗರ, ನಾಗೂರ ಲೇವೌಟ್ ಶಿವನ ಗುಡಿ ಸೇರಿದಂತೆ ವಿವಿಧ ಭಾಗಗಳಲ್ಲಿ ಶ್ರೀರಾಮನ…
ಮೋರಟಗಿ ಕಲ್ಪವೃಕ್ಷ ಕಾಲೇಜಿನ ಸಮಾರಂಭದಲ್ಲಿ ಇಸ್ರೋ ವಿಜ್ಞಾನಿ ಸಂಜೀವ್ ಗೌರ ಅಭಿಮತ ಮೋರಟಗಿ: ಒಬ್ಬ ವ್ಯಕ್ತಿ ಎಷ್ಟು ವರ್ಷ ಬದುಕಿದ್ದಾನೆ ಎನ್ನುವುದು ಮುಖ್ಯವಲ್ಲ ಹೇಗೆ ಬದುಕಿದ್ದಾನೆ ಎನ್ನುವುದು ಮುಖ್ಯ, ಸಾಧನೆಯ ಹಾದಿ ಹಿಡಿದಾಗ ಸಮಸ್ಯೆಗಳು ಬರುವುದು ಸಹಜ, ಸಮಸ್ಸೆಗಳಿಗೆ ಎದೆ ಕೊಟ್ಟು ನಿಂತು ಸಾಧನೆಗೆ ಮುಂದಾಗಬೇಕು, ವಿದ್ಯಾರ್ಥಿಗಳ ಮನಸ್ಸು ಹತೋಟಿಯಲ್ಲಿ ಇದ್ದಾಗ ಮಾತ್ರ ಶಿಕ್ಷಣ ವಶೀಕರಣವಾಗುತ್ತದೆ ಎಂದು ಹಿರಿಯ ವಿಜ್ಞಾನಿ ಸಂಜೀವ್ ಗೌರ ಅಭಿಮತ ವ್ಯಕ್ತಪಡಿಸಿದರು.ಗ್ರಾಮದ ಕಲ್ಪವೃಕ್ಷ ಕಾಲೇಜಿನಲ್ಲಿ ಹಮ್ಮಿಕೊಂಡ ಪಿಯುಸಿ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಶುಭಕೋರುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಒಂದು ಚಲನಚಿತ್ರ ನೋಡಿದ ಒಬ್ಬ ಸಾಮಾನ್ಯ ವಿದ್ಯಾರ್ಥಿ ಅದರಲ್ಲಿ ಬರುವಂತಹ ಎಲ್ಲ ಸನ್ನಿವೇಶಗಳನ್ನು ಮದ್ಯರಾತ್ರಿ ಎಬ್ಬಿಸಿ ಕೇಳಿ ಅದನ್ನು ತಡ ಮಾಡದೆ ಉತ್ತರಿಸುತ್ತಾನೆ, ಅದೇ ವಿದ್ಯಾರ್ಥಿಗೆ ಇಂದು ಹೇಳಿದ ಪಾಠ ಎರಡು ಗಂಟೆ ಬಳಿಕ ಕೇಳಿದರೆ ನನಗೆ ವಿದ್ಯೆ ತೆಲೆಗೆ ಹತ್ತುತ್ತಿಲ್ಲ ಎನ್ನುತ್ತಾನೆ. ಮನಸಿದ್ದರೆ ಎಲ್ಲ ಮಾರ್ಗವೂ ಸರಳ ಎನ್ನುವಂತೆ ಇಚ್ಛಾಶಕ್ತಿಯಿಂದ ವಿದ್ಯಾಭ್ಯಾಸ ಮಾಡಿ ಸರಸ್ವತಿ ನಿಮ್ಮನ್ನು ಯಾವತ್ತೂ…
ವಿಜಯಪುರ: ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ ರಾಜ್ಯ ಘಟಕ ಹಾಗೂ ಜಿಲ್ಲಾ ಘಟಕ ವಿಜಯಪುರ ಇವರು ಕೊಡಮಾಡುವ ಜಿಲ್ಲಾ ಅತ್ಯುತ್ತಮ ಸಾವಿತ್ರಿಬಾಯಿ ಪುಲೆ ಶಿಕ್ಷಕಿ ಪ್ರಶಸ್ತಿಗೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಅಲಿಯಾಬಾದ ಶಾಲೆಯ ಗುರುಗಳಾದ ಒ.ಅ.ಬೀಳುರ ಆಯ್ಕೆಯಾಗಿದ್ದಾರೆ.ಇವರಿಗೆ ವಿಜಯಪುರ ಗ್ರಾಮೀಣ ತಾಲೂಕಿನ ಶಿಕ್ಷಕರು ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಗ್ರಾಮೀಣ ಘಟಕ ಹಾಗೂ ಸದರಿ ಶಾಲೆಯ ಶಿಕ್ಷಕರು, ಎಸ್ಡಿಎಂಸಿ ಅಧ್ಯ್ಯಕ್ಷರು, ಸದಸ್ಯರು ಅಭಿನಂದಿಸಿದ್ದಾರೆ.
ವಿಜಯಪುರ: ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ ರಾಜ್ಯ ಘಟಕ ಹಾಗೂ ಜಿಲ್ಲಾ ಘಟಕ ವಿಜಯಪುರ ಇವರು ಕೊಡಮಾಡುವ ಜಿಲ್ಲಾ ಅತ್ಯುತ್ತಮ ಸಾವಿತ್ರಿಬಾಯಿ ಪುಲೆ ಶಿಕ್ಷಕಿ ಪ್ರಶಸ್ತಿಗೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿವಣಗಿ ಶಾಲೆಯ ಗುರು ಅನುಸೂಯಾ ಸ. ಲಂಬು ( ನಾಟೀಕಾರ) ಆಯ್ಕೆಯಾಗಿದ್ದಾರೆ.ಇವರಿಗೆ ವಿಜಯಪುರ ಗ್ರಾಮೀಣ ತಾಲೂಕಿನ ಶಿಕ್ಷಕರು ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಗ್ರಾಮೀಣ ಘಟಕ ಹಾಗೂ ಸದರಿ ಶಾಲೆಯ ಎಚ್ ಎಸ್ ಇಂಡಿ ಶಿಕ್ಷಕರು, ಎಸ್ಡಿಎಂಸಿ ಅಧ್ಯ್ಯಕ್ಷರು, ಸದಸ್ಯರು ಅಭಿನಂದಿಸಿದ್ದಾರೆ.
ಚಿಮ್ಮಡ: ಶ್ರೀರಾಮ, ಶ್ರೀ ಹನುಮಾನ ಪ್ರತಿಯೊಬ್ಬರ ಆರಾದ್ಯ ದೈವ ಅವರನ್ನು ಗುತ್ತಿಗೆ ಪಡೆದವರಂತೆ ಬಿಜೇಪಿಯವರು ಏಕಪಕ್ಷೀಯವಾಗಿ ವಿಜಯೋತ್ಸವ ಆಚರಿಸುತ್ತಿರುವುದು ಹಾಗೂ ದೇವಸ್ಥಾನಗಳನ್ನು ದುರುಪಯೋಗ ಪಡೆಸಿಕೊಳ್ಳುತ್ತಿರುವುದು ಸ್ಥಳಿಯ ಕಾಂಗ್ರೆಸ್ ಘಟಕದ ಆಧ್ಯಕ್ಷ ಉಮೇಶ ಪೂಜಾರಿ ಖಂಡಿಸಿದ್ದಾರೆ.ಗ್ರಾಮದ ಹನುಮಾನ ದೇವಸ್ಥಾನದಲ್ಲಿ ರವಿವಾರ ರಾತ್ರಿ ಸ್ಥಳಿಯ ಕಾರ್ಯಕರ್ತರೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು ಗ್ರಾಮದಲ್ಲಿ ಯಾವುದೇ ಧಾರ್ಮಿಕ ಕಾರ್ಯ, ಕಟ್ಟಡ ನಿರ್ಮಾಣ, ಜಾತ್ರೆ ಸೇರಿದಂತೆ ಯಾವುದೇ ಸಾರ್ವಜನಿಕ ಧಾರ್ಮಿಕ ಕಾರ್ಯಕ್ರಮ ಮಾಡುವಾಗ ಪಕ್ಷಾತೀತವಾಗಿ ಸರ್ವ ಸಮಾಜದ ಪ್ರಮುಖರ ಸಭೆ ಕರೆದು ಕಾರ್ಯಕ್ರಮದ ರೂಪುರೇಷೆ ತಯಾರಿಸಿ ಸರ್ವರ ನೇತ್ರತ್ವದಲ್ಲಿ ಕಾರ್ಯಕ್ರಮಗಳು ನಡೆಸುವ ಪದ್ದತಿ ನಡೆದುಕೊಂಡು ಬಂದಿದೆ. ಆದರೆ ಶ್ರೀ ರಾಮ ಪ್ರಾಣ ಪ್ರತೀಷ್ಠಾನದ ನಿಮಿತ್ತ ಗ್ರಾಮದಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳು ಏಕಪಕ್ಷೀಯವಾಗಿ ನಡೆಯುತ್ತಿರುವುದು ದುರದೃಷ್ಠಕರ. ದೇವರ ವಿಷಯದಲ್ಲಿ ರಾಜಕೀಯ ಮಾಡುವ ಬಿಜೆಪಿ ನಡೆ ಖಂಡನೀಯವಾಗಿದ್ದು ಇದಕ್ಕೆ ಗ್ರಾಮದ ಪ್ರಮುಖರು ಅವಕಾಶ ನೀಡಬಾರದಾಗಿತ್ತು. ಮುಂಬರುವ ದಿನಗಳಲ್ಲಿಯಾದರೂ ಹಿಂದಿನ ಪದ್ದತಿಯಂತೆ ಧಾರ್ಮಿಕ ಕಾರ್ಯಕ್ರಮ ನಡೆಯುವಂತೆ ಗ್ರಾಮದ ಪ್ರಮುಖರು ಕ್ರಮ ಕೈಗೊಳ್ಳಬೇಕೆಂದರು.ಗ್ರಾಮದ ಪ್ರಮುಖರಾದ…
ಚಿಮ್ಮಡ: ಅಯೋಧ್ಯೆಯಲ್ಲಿ ನಡೆದ ಶ್ರೀರಾಮ ಮಂದಿರದ ಲೋಕಾರ್ಪಣೆ ನಿಮಿತ್ತ ಗ್ರಾಮದಲ್ಲಿ ರವಿವಾರ ಹಾಗೂ ಸೋಮವಾರ ವಿವಿಧ ಧಾರ್ಮಿಕ, ಸಾಂಸೃತಿಕ, ಅದ್ಯಾತ್ಮಿಕ ಕಾರ್ಯಕ್ರಮಗಳು ವಿಜ್ರಂಬಣೆಯಿಂದ ನಡೆದವು.ಸ್ಥಳಿಯ ಗ್ರಾ.ಪಂ. ಸದಸ್ಯ ಪ್ರಕಾಶ ಪಾಟೀಲ, ಹಣಮಂತ ಪೂಜಾರಿ, ಚನ್ನಪ್ಪಾ ತೇಲಿ, ಕಾಳು ಬಡಿಗೇರ, ಮೋನೇಶ ಬಡಿಗೇರ, ಈಶ್ವರ ಅರುಟಗಿ, ಶಿವಾನಂದ ದಿನ್ನಿಮನಿ ಹಾಗೂ ಭಗತ್ಸಿಂಗ ಯುವಕ ಮಂಡಲದ ನೇತ್ರತ್ವದಲ್ಲಿ ಸೋಮವಾರ ಶ್ರೀ ಪ್ರಭುಲಿಂಗೇಶ್ವರ ಹಾಗೂ ಶ್ರೀ ಹನುಮಾನ ದೇವಸ್ಥಾನಗಳ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.ಮಂಗಳವಾರ ಮುಂಜಾನೆ ಶ್ರೀ ಪ್ರಭು ಮಹಾಸ್ವಾಮಿಗಳು ಹಾಗೂ ಶ್ರೀ ಜನಾರ್ಧನ ಮಹಾರಾಜರ ಸಾನಿಧ್ಯದಲ್ಲಿ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಆಯೋಜಿಸಲಾಗಿತ್ತು. ಈ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ನೂರಾರು ಮಹಿಳೆಯರು ಕುಂಭದೊಂದಿಗೆ ಆಗಮಿಸಿ ಭಕ್ತಿ ಮೆರೆದರು.ಮದ್ಯಾಹ್ನ ಇಡೀ ಗ್ರಾಮಕ್ಕೆ ಹುಗ್ಗಿ, ಕಿಚಡಿ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಗಣವೇಶಧಾರಿ ಮಕ್ಕಳಿಗೆ ಹನುಮಾನ ಚಾಲಿಸಾ ನೀಡಿ ಪುರಸ್ಕರಿಸಲಾಯಿತು, ಸಾಯಂಕಾಲ ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿತ್ತು.ಗ್ರಾಮದ ಪ್ರಮುಖರಾದ ರಾಮಣ್ಣ ಮುಗಳಖೋಡ, ಪುಂಡಲಿಕಪ್ಪಾ ಪೂಜಾರಿ, ಪಿಕೆಪಿಎಸ್ ಅಧ್ಯಕ್ಷ ಶಂಕರ ಬಟಕುರ್ಕಿ, ಗ್ರಾ.ಪಂ.…
ಮುದ್ದೇಬಿಹಾಳ: ಅಯೋಧ್ಯೆಯಲ್ಲಿ ಶ್ರೀ ರಾಮದೇವರ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಮುದ್ದೇಬಿಹಾಳ ತಾಲೂಕಿನ ಯರಗಲ್ಲ ಗ್ರಾಮದ ಕಲಾವಿದ ಬಸವರಾಜ ಹಡಪದ ತಮ್ಮ ಕುಂಚದಲ್ಲಿ ಶ್ರೀ ರಾಮರ ಹಾಗೂ ಮಂದಿರದ ಚಿತ್ರ ಬಿಡಿಸುವ ಮೂಲಕ ಭಕ್ತಿ ಸಮರ್ಪಿಸಿದರು.
ಜೆಎಸ್ಸೆಸ್ ಆಸ್ಪತ್ರೆಯಲ್ಲಿ ೬೧ ಉಚಿತ ಹೆರಿಗೆ | ತಾಯಿ-ಮಕ್ಕಳು ಕ್ಷೇಮ | ರಾಮ – ಸೀತೆ ನಾಮಕರಣ ವಿಜಯಪುರ: ರಾಮ ಮಂದಿರ ನಿರ್ಮಾಣ ಎನ್ನುವುದು ಸಮಸ್ತ ಹಿಂದೂ ಬಾಂಧವರ ಕನಸಾಗಿತ್ತು. ಇಂದು ಆ ಕನಸು ನನಸಾಗುವ ಮೂಲಕ ಮಾರ್ಯದಾ ಪುರುಷೋತ್ತಮ ಪ್ರಭು ಶ್ರೀರಾಮನ ಪ್ರತಿಷ್ಠಾಪನೆಯಾಗಿದೆ. ನಮ್ಮ ಪರಂಪರೆಯ ಹೆಗ್ಗಳಿಕೆಯಾಗಿರುವ ಶ್ರೀರಾಮ ಇಂದು ಅಯೋಧ್ಯೆಯ ಮಂದಿರದಲ್ಲಿ ವಿರಾಜಮಾನವಾಗಿರುವುದು ಹಿಂದೂ ಹೃದಯಗಳಲ್ಲಿ ಐನೂರು ವರ್ಷಗಳಿಂದ ಉಳಿದಿದ್ದ ಕತ್ತಲೆಯ ಮೇಲೆ ಬೆಳಕು ಚಲ್ಲಿದಂತಾಗಿದೆ ಎಂದು ರಾಮನಗೌಡ ಬ ಪಾಟೀಲ್ ಯತ್ನಾಳ ಹೇಳಿದರು.ನಗರದ ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸೋಮವಾರ ರಾಮಮಂದಿರ ಲೋಕಾರ್ಪಣೆ ಹಾಗೂ ರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಯ ಅಂಗವಾಗಿ ಆಯೋಜಿಸಲಾಗಿದ್ದ ಅಯೋಧ್ಯಾ ಸಂಭ್ರಮೋತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ರಾಮಮಂದಿರ ಲೋಕಾರ್ಪಣೆಯನ್ನು ನೆನಪುಳಿಯುವಂತೆ ಮಾಡುವುದಕ್ಕೆಂದು ನಿರ್ಧಾರ ಮಾಡಿ ನಮ್ಮ ಆಸ್ಪತ್ರೆಯಲ್ಲಿ ಕಳೆದ ೫ ದಿನಗಳಿಂದ ಉಚಿತ ಹೆರಿಗೆ ಮಾಡಿಸುವ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಭಾರತದ ಇತಿಹಾಸದಲ್ಲಿಯೇ ರಾಮನ ಹೆಸರಿನಲ್ಲಿ ಇಂಥ ಸೇವೆಯನ್ನು ಒದಗಿಸಿದ್ದು…
ಮುದ್ದೇಬಿಹಾಳ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಗರಕ್ಕೆ ಆಗಮಿಸುತ್ತಿರುವ ಹಿನ್ನೆಲೆ ಅವರಿಗೆ ಅಭಿನಂದನಾ ಸಮಾರಂಭದ ಬಗ್ಗೆ ಮತ್ತು ಲೋಕಸಭೆ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಪಂಚಾಯತಿ ಚುನಾವಣೆಗಳ ಬಗ್ಗೆ ಚರ್ಚಿಸಲು ಜ.೨೪ ರಂದು ಬೆಳಿಗ್ಗೆ ೧೧ಗಂಟೆಗೆ ಪಟ್ಟಣದ ಆಲಮಟ್ಟಿ ರಸ್ತೆಯಲ್ಲಿರುವ ಮದರಿ ಕಲ್ಯಾಣ ಮಂಟಪದಲ್ಲಿ ಕಾಂಗ್ರೇಸ್ ಪಕ್ಷದ ಪೂರ್ವ ಭಾವಿ ಸಭೆ ಕರೆಯಲಾಗಿದೆ. ಪಕ್ಷದ ವಿವಿಧ ಘಟಕಗಳ ಎಲ್ಲ ಪದಾಧಿಕಾರಿಗಳು ಸೇರಿದಂತೆ ಸರ್ವ ಸದಸ್ಯರು ಹಾಜರಿರುವಂತೆ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗುರು ತಾರನಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
