Subscribe to Updates
Get the latest creative news from FooBar about art, design and business.
What's Hot
Author: editor.udayarashmi@gmail.com
ಚಡಚಣ: ಸಮೀಪದ ಝಳಕಿ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ವಿಜಯಪುರದಿಂದ ಸೋಲಾಪುರಕ್ಕೆ ತೆರಳುತ್ತಿರುವ ಲಾರಿಯಲ್ಲಿ ದಾಖಲೆ ಇಲ್ಲದೆ ಲಾರಿಯಲ್ಲಿ ಸಾಗಿಸುತ್ತಿದ್ದ ರೂ.54.49 ಲಕ್ಷ ರೂಪಾಯಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಚಡಚಣ ಸಿಪಿಐ ಸಾಹೇಬಗೌಡ ಪಾಟೀಲ ತಿಳಿಸಿದ್ದಾರೆ.ಖಚಿತ ಮಾಹಿತಿ ಆಧರಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಡಿವೈಎಸ್ಪಿ ಅವರ ಮಾರ್ಗದರ್ಶನದಲ್ಲಿ ಝಳಕಿ ಪಿಎಸ್ಐ ಸಿದ್ದಪ್ಪ ಯಡಳ್ಳಿ ಹಾಗೂ ಸಿಬ್ಬಂದಿಯೊಂದಿಗೆ ವಿಜಯಪುರದಿಂದ ಸೋಲಾಪುರದ ಕಡೆ ಸಾಗುತ್ತಿದ್ದ ಲಾರಿಯನ್ನು ತಡೆದು ವಿಚಾರಣೆ ನಡೆಸಿದಾಗ ದಾಖಲೆ ಇಲ್ಲದ ಲಾರಿಯಲ್ಲಿದ್ದ ರೂ.54.49 ಲಕ್ಷ ನಗದು ಹಣ ವಶಪಡಿಸಿಕೊಳ್ಳಲಾಗಿದೆ ಎಂದು ಸಿಪಿಐ ಸಾಹೇಬಗೌಡ ಪಾಟೀಲ ತಿಳಿಸಿದ್ದಾರೆ. ಝಳಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೇವರಹಿಪ್ಪರಗಿ: ಕಾಂಗ್ರೆಸ್ ಪಕ್ಷದ ವರಿಷ್ಠರು ಟಿಕೇಟ್ ನೀಡಿದಲ್ಲಿ ಮಾತ್ರ ಅವರು ಸೂಚಿಸಿದ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದು ವಿಧಾನ ಪರಿಷತ್ತಿನ ವಿರೋಧಪಕ್ಷದ ಮಾಜಿನಾಯಕ ಎಸ್.ಆರ್.ಪಾಟೀಲ ಹೇಳಿದರು.ತಾಲ್ಲೂಕಿನ ಕೋರವಾರ ಗ್ರಾಮದಲ್ಲಿ ಭಾನುವಾರ ಜರುಗಿದ ಕಾಂಗ್ರೆಸ್ ಪಕ್ಷ ಸೇರ್ಪಡೆ ಹಾಗೂ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಕಾಂಗ್ರೆಸ್ ಪಕ್ಷಕ್ಕೆ ನಿಷ್ಠೆಯಿಂದ ೩೦ ವರ್ಷಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿ ಮೇಲ್ಮನೆಯ ಸದಸ್ಯನಾಗಿ, ವಿರೋಧ ಪಕ್ಷದ ನಾಯಕನಾಗಿ, ಸಚಿವನಾಗಿ ಕಾರ್ಯ ನಿರ್ವಹಿಸಿದ್ದೇನೆ. ನಾನು ಅವಿಭಜಿತ ವಿಜಯಪುರ ಜಿಲ್ಲೆಯ ೧೫ ಕ್ಷೇತ್ರಗಳ ಮತದಾರರ ನಾಡಿಮಿಡಿತ ಅರಿತವನು ಯಾವುದೇ ಕಾರಣಕ್ಕೂ ನಾನು ಕುರ್ಚಿಗೆ ಅಂಟಿಕೊAಡಿಲ್ಲ. ನಮ್ಮಿಂದ ಕುರ್ಚಿಗೆ ಬೆಲೆ ಬರಬೇಕು ವಿನಹ ಕುರ್ಚಿಯಿಂದ ನಮಗೆ ಬೆಲೆ ದೊರೆಯಬಾರದು. ಈಗ ಪಕ್ಷ ಅಧಿಕೃತ ಅಭ್ಯರ್ಥಿಯಾಗಿ ಯಾರನ್ನಾದರೂ ಘೋಷಣೆ ಮಾಡಲಿ ಆಕಾಂಕ್ಷಿಗಳು ಎಲ್ಲರೂ ಒಮ್ಮತದಿಂದ ಚುನಾವಣೆ ಎದುರಿಸಿ ಪಕ್ಷದ ಗೆಲುವಿಗಾಗಿ ಶ್ರಮಿಸೋಣ ಎಂದು ಹೇಳುತ್ತಾ ಪಕ್ಷದ ನಿರ್ದೇಶನದಂತೆ ಯಾವುದೇ ಕ್ಷೇತ್ರದಲ್ಲಿ ಸ್ಪರ್ಧಿಸಲು ಸಿದ್ದ ಎಂದು ಮನದಿಂಗಿತ ವ್ಯಕ್ತಪಡಿಸಿದರು. ಜೊತೆಗೆ ಮಾಜಿಶಾಸಕ ಶಿವಪುತ್ರಪ್ಪ…
ಆಲಮಟ್ಟಿ: ಸುಪ್ರಸಿದ್ಧ ಹನುಮಾನ ದೇವಸ್ಥಾನದಿಂದ ಇಡೀ ರಾಜ್ಯಾದ್ಯಂತ ಪ್ರಸಿದ್ಧವಾಗಿರುವ ಸುಕ್ಷೇತ್ರ ಯಲಗೂರ ಬಳಿ ಆರಂಭಗೊAಡಿರುವ ಜೂಜಾಟ ಕೇಂದ್ರವನ್ನು ತಕ್ಷಣವೇ ರದ್ದುಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ (ವಾಸುದೇವ ಮೇಟಿ ಬಣ) ಪದಾಧಿಕಾರಿಗಳು ಆಗ್ರಹಿಸಿದರು. ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂತಹ ಪವಿತ್ರ ಸ್ಥಳದಲ್ಲಿ ಎಂಎಸ್ ಐಎಲ್ ಮದ್ಯದ ಮಾರಾಟ ಮಳಿಗೆಯನ್ನು ಆರಂಭಿಸಲು ಅನುಮತಿ ನೀಡಲಾಗಿದೆ. ಶೀಘ್ರವೇ ಮದ್ಯದ ಮಾರಾಟ ಮಳಿಗೆ ಆರಂಭವಾಗಲಿದೆ. ಅದನ್ನು ನಿಲ್ಲಿಸಬೇಕು ಎಂದು ಅವರು ಆಗ್ರಹಿಸಿದರು.ಜೂಜಾಟ ಕೇಂದ್ರದಿAದ ಸುತ್ತಮುತ್ತಲಿನ ಸಾಂಸ್ಕೃತಿಕ ವಾತಾವರಣವೂ ಕಲುಷಿತಗೊಂಡಿದೆ. ಜೂಜಾಟ ಕೇಂದ್ರಕ್ಕೆ ನೀಡಿದ ಅನುಮತಿ ರದ್ದುಗೊಳಿಸಬೇಕು ಎಂದರು.ಶಾAತಿ, ಸಾಂಸ್ಕೃತಿಕ ಹಾಗೂ ಧಾರ್ಮಿಕತೆಯಿಂದ ಯಲಗೂರ ಪ್ರಸಿದ್ದವಾಗಿದೆ, ಮಂತ್ರಾಲಯ ಮಾದರಿಯಲ್ಲಿ ಧಾರ್ಮಿಕ ನೆಲೆಯಾಗಿ ಅಭಿವೃದ್ಧಿಯಾಗುತ್ತಿದೆ. ಇಂತಹ ವಾತಾವರಣವನ್ನು ಈ ಜೂಜಾಟ ಕೇಂದ್ರ ಹಾಗೂ ಮದ್ಯ ಮಾರಾಟ ಕೇಂದ್ರ ಕೆಡಿಸುತ್ತಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ತಿರುಪತಿ ಬಂಡಿವಡ್ಡರ, ಕೆ.ಎಂ. ಬಿರಾದಾರ ಗುಡ್ನಾಳ, ಎ.ಎಂ. ಲಷ್ಕರಿ, ಬುಡ್ಡೇಸಾಬ್ ಡವಳಗಿ, ವಿಠ್ಠಲ ಬಂಡಿವಡ್ಡರ, ರಾಮಣ್ಣ ಕೂಚಬಾಳ ಇನ್ನೀತರರು ಇದ್ದರು.
ವಿಜಯಪುರ: ನಗರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಅವರು ಭಾನುವಾರ ಭೂಮಿಪೂಜೆ ನೆರವೇರಿಸಿದರು.ಅಲ್ಪಸಂಖ್ಯಾತರ ಇಲಾಖೆಯಿಂದ ಮಂಜೂರಿಸಿದ ರೂ.೬ ಕೋಟಿ ಅನುದಾನಲ್ಲಿ, ಕೇಂದ್ರ ಬಸ್ ನಿಲ್ದಾಣದಿಂದ ಸರ್ದಾರ ವಲ್ಲಭ ಬಾಯಿ ಪಟೇಲ್ ರಸ್ತೆವರೆಗಿನ ರಸ್ತೆ ಕಾಮಗಾರಿಗೆ, ರೂ.೨ ಕೋಟಿ ಅನುದಾನದಲ್ಲಿ ವಾ.ನಂ.೩೦ರ ವಿಶ್ವೇಶ್ವರಯ್ಯ ರಸ್ತೆಯ ನೀರಿನ ಗಂಜ ಮೂಲಕ ದರ್ಬಾರ್ ಗಲ್ಲಿಯ ಖಾದಿ ಗ್ರಾಮೋದ್ಯೋಗ ವರೆಗೆ ಆಂತರಿಕ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.ಮಹಾನಗರ ಪಾಲಿಕೆಯಿಂದ ಮಂಜೂರಿಸಿದ ರೂ.೨ ಕೋಟಿ ಅನುದಾನದಲ್ಲಿ ವಾ.ನಂ.೪ರ ಸೇವಾಲಾಲ ನಗರ ಮತ್ತು ಚಂದು ನಗರದ ಆಂತರಿಕ ರಸ್ತೆ ಕಾಮಗಾರಿಗೆ, ಮಹಾನಗರ ಪಾಲಿಕೆಯಿಂದ ಮಂಜೂರಿಸಿದ ರೂ.೩೦ ಲಕ್ಷ ಅನುದಾನದಲ್ಲಿ ಭೂತನಾಳದಲ್ಲಿ ಮಳೆ ನೀರು ಚರಂಡಿ ಕಾಮಗಾರಿಗೆ, ರೂ.೫೬ ಲಕ್ಷ ಅನುದಾನದಲ್ಲಿ ಸೊಲ್ಲಾಪುರ ಮುಖ್ಯ ರಸ್ತೆಯಿಂದ ಭೂತನಾಳ ತಾಂಡಾ ಮೂಲಕ ಅರಕೇರಿ ಕೂಡುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಹಾಗೂ ರೂ.೧.೯೪ ಕೋಟಿ ಅನುದಾನದಲ್ಲಿ ಸುಕುನ್ ಕಾಲೊನಿಯಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಘಟಕ (ವೆಟ್ ವೆಲ್) ನಿರ್ಮಾಣ…
ವಿಜಯಪುರ: ಪರಿಶಿಷ್ಟ ಜಾತಿಯಲ್ಲಿರುವ ಸಮಾನ ಅವಕಾಶ ವಂಚಿತ ಶೋಷಿತ ತಳ ಸಮುದಾಯಗಳನ್ನು ಮರುವರ್ಗೀಕರಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರ ಇರುವುದಿಲ್ಲ. ಆದರೂ ಸಹ ಮುಖ್ಯಮಂತ್ರಿ ಬೊಮ್ಮಾಯಿಯವರು ಒಳ ಮೀಸಲಾತಿ ಘೋಷಿಸಿ ಲಂಬಾಣಿ, ಭೋವಿ ಮೊದಲಾದ ಸಮುದಾಯಗಳಿಗೆ ಅನ್ಯಾಯವೆಸಗಿದ್ದಾರೆಂದು ವಿರೋಧ ಪಕ್ಷದ ಮುಖ್ಯ ಸಚೇತಕ ಮತ್ತು ಕೆಪಿಸಿಸಿ ವಕ್ತಾರ ಪ್ರಕಾಶ್ ಕೆ ರಾಠೋಡ ಆಕ್ರೋಶ ವ್ಯಕ್ತಪಡಿಸಿದರು.ನಗರದಲ್ಲಿ ಭಾನುವಾರ ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.ಸರ್ಕಾರವು ಮೀಸಲಾತಿಯ ಮೂಲ ಪರಿಕಲ್ಪನೆಯಾದ ಸಾಮಾಜಿಕ, ಶೈಕ್ಷಣಿಕ, ಹಿಂದುಳಿದಿರುವಿಕೆಯ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಯಾವ ಪ್ರಮಾಣದಲ್ಲಿ ಯಾವ ಯಾವ ಜಾತಿಗಳು ಹಿಂದುಳಿದಿವೆ ಎಂಬುದನ್ನು ವೈಜ್ಞಾನಿಕ ಮಾನದಂಡಗಳ ಮೂಲಕ ಅಧ್ಯಾಯನ ಮಾಡಿ, ವಸ್ತುನಿಷ್ಠ, ವರದಿ ಆಧಾರದ ಮೇಲೆ ಹಿಂದುಳಿದಿರುವಿಕೆಯನ್ನು ಪರಿಗಣಿಸದೇ “ಕೇವಲ ಜನಸಂಖ್ಯೆಯ ಆಧಾರದ ಮೇಲೆ ಪರಿಶಿಷ್ಟ ಜಾತಿಯ ಪಟ್ಟಿಯನ್ನು ತಿದ್ದಿ, ಪಹಚ್ಚಿ, ಮರು ವರ್ಗೀಕರಿಸಿ ಮೇಲ್ನೋಟಕ್ಕೆ 5 ಗುಂಪುಗಳನ್ನಾಗಿ ಮಾಡುತ್ತಿರುವುದು ಕಾರ್ಯಸಾಧುವಲ್ಲ. ಕಾರಣ ಮೀಸಲಾತಿಗೆ ಹಿಂದುಳಿದಿರುವಿಕೆ ಮಾನದಂಡವಾದ ಮೇಲೆ ಒಳಮೀಸಲಾತಿ ಹಿಂದುಳಿದಿರುವಿಕೆಯೇ ಮಾನದಂಡವಾಗಬೇಕೆ ಹೊರತು ಜನಸಂಖ್ಯೆಯಲ್ಲ” ಆದ್ದರಿಂದ ಈ ವರ್ಗೀಕರಣ ಅಸಂವಿಧಾನಿಕವಾಗಿದೆ.…
ಕೊಲ್ಹಾರ: ಧಾರ್ಮಿಕ ಸಮನ್ವತೆ ಸಾಮಾಜಿಕ ಸಮಾನತೆಯ ಸಂದೇಶವನ್ನು ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಲು ಸರಳ ಭಾಷೆಯ ವಚನಗಳ ಮೂಲಕ ನಾಗರಿಕ ಬಂಧುಗಳಿಗೆ ಮನಮುಟ್ಟುವಂತಹ ಕಾರ್ಯವನ್ನು ೧೨ನೇ ಶತಮಾನದಲ್ಲಿ ಶರಣರು ಮಾಡಿರುವದು ದೇಶಕ್ಕೆ ಕೊಟ್ಟ ಬಹುದೊಡ್ಡ ಕೊಡುಗೆಯಾಗಿದೆ ಎಂದು ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಹೇಳಿದರು.ಪಟ್ಟಣದ ದೇವಾಂಗ ಸಮಾಜದ ಸಮುದಾಯಭವನದಲ್ಲಿ ಹಮ್ಮಿಕೊಂಡಿದ್ದ ಆದ್ಯ ವಚನಕಾರ ದೇವರ ದಾಸಿಮಯ್ಯನವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ದಿಗAಬರೇಶ್ವರ ಸಂಸ್ಥಾನ ಮಠದ ಕಲ್ಲಿನಾಥ ದೇವರು ಮಾತನಾಡಿದರು.ಹಿರೇಮಠದ ವೇದಮೂರ್ತಿ ಮುರುಗಯ್ಯ ಹಿರೇಮಠ ದಿಗಂಬರೇಶ್ವರ ಮಠದ ಕಲ್ಲಿನಾಥ ದೇವರು ಸಾನಿಧ್ಯ ವಹಿಸಿದ್ದರು.ಸಮಾಜದ ಅಧ್ಯಕ್ಷ ಸಂಗಪ್ಪ ಚೌಡಪ್ಪಗೋಳ, ಉಪಾದ್ಯಕ್ಷ ಸಂಗಪ್ಪ ಗೋಕಾಂವಿ, ಪಟ್ಟಣ ಪಂಚಾಯತ ಸದಸ್ಯ ಅಪ್ಪಸಿ ಮಟ್ಯಾಳ, ವಿಶೇಷ ಉಪನ್ಯಾಸಕರಾಗಿ ಶ್ರೀನಿವಾಸ ಐಹೊಳ್ಳಿ, ಈರಣ್ಣ ಔರಸಂಗ, ದೇವಾಂಗ ಸಮಾಜದ ಪ್ರಮುಖರು ಭಾಗವಹಿಸಿದ್ದರು.
ಕೊಲ್ಹಾರ: ನಾವುಗಳು ಬರೆಯುವ ಸಾಹಿತ್ಯ ಜಾನಪದವಾಗಿರಲಿ, ಭಾವಗೀತೆಯಾಗಿರಲಿ, ಕವನಗಳೇ ಆಗಿರಲಿ ಸಮಾಜಕ್ಕೆ ಉತ್ತಮ ಸಂದೇಶಗಳನ್ನು ಕೊಡುವ ರಚನೆಗಳಾಗಿರಬೇಕು. ಅಂದಾಗ ಮಾತ್ರ ಓದಲು, ಕೇಳಲು ಜನರು ಆಸಕ್ತರಾಗಿರುತ್ತಾರೆ ಎಂದು ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಹೇಳಿದರು.ಪಟ್ಟಣದ ೩ನೇ ವಾರ್ಡಿನ ಶಿವಾಜಿ ಬಡಾವಣೆಯಲ್ಲಿ ಹೆಬ್ಬಾಳೆಮ್ಮ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಹಳ್ಳಿ ಹುಡಗಿ ಮಸರ ಗಡಿಗಿ ಎಂಬ ಸಾಮಾಜಿಕ ನಾಟಕದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.ಸಾಹಿತ್ಯದಲ್ಲಿ ಅಶ್ಲೀಲ, ಅಸಹ್ಯಕರವಾದ ಶಬ್ದಗಳನ್ನು ಕವಿಗಳು ಬಳಸುವುದನ್ನು ತಮ್ಮಷ್ಟಕ್ಕೆ ತಾವೇ ಕಡಿವಾಣ ಹಾಕಿಕೊಳ್ಳಬೇಕು. ಭಾರತೀಯರಾದ ನಾವು ಹೆಣ್ಣನ್ನು ಪೂಜ್ಯತಾ ಭಾವದಲ್ಲಿ ಕಾಣುವ ಸ್ವಭಾವದವರು. ಆದಿಶಕ್ತಿ ಅವತಾರದಲ್ಲಿ ಗೌರವಿಸುತ್ತೇವೆ. ಒಬ್ಬ ಮಹಿಳೆ ಮಡದಿಯಾಗಿ, ತಂಗಿಯಾಗಿ, ಅಕ್ಕಳಾಗಿ, ತಾಯಿಯಾಗಿ ಒಂದಿಲ್ಲ ಒಂದು ರೀತಿಯಲ್ಲಿ ಪುರುಷರಿಗೆ ಸಹಕಾರಿಯಾಗಿರುತ್ತಾಳೆ ಅಂತಹ ನಾರಿಯರಿಗೆ ನಾವುಗಳು ಗೌರವ ಕೊಡುವದನ್ನು ಕಲಿಯುವದರ ಜೊತೆಗೆ ಬರವಣಿಗೆಯೂ ಕೂಡ ಗೌರವ ಪೂರ್ವಕವಾಗಿ ಇರಬೇಕೆಂದು ಸಲಹೆ ಕೊಟ್ಟರು.ಗ್ರಾ ಪಂ ಮಾಜಿ ಉಪಾಧ್ಯಕ್ಷ ಈರಯ್ಯ ಮಠಪತಿ ಮಾತನಾಡಿದರು.ಮಾಜಿ ಸಚಿವ ಬೆಳ್ಳುಬ್ಬಿಯವರು ಸರ್ವಜನರನ್ನು ಸಮಾನ ಭಾವದಿಂದ…
ಚಡಚಣ: ಪರೋಪಕಾರವನ್ನೇ ಜೀವನವನ್ನಾಗಿಟ್ಟುಕೊಂಡು ಬದುಕುವ ಆದರ್ಶ ಪುರುಷರಲ್ಲಿ ಜೇಡರ ದಾಸಿಮಯ್ಯ ಪ್ರಮುಖರಾಗಿದ್ದಾರೆ. ಮಹಿಳಾ ಸಮಾನತೆ, ಅಸ್ಮಿತೆಯ ಬಗ್ಗೆ ತನ್ನ ವಚನದ ಮೂಲಕವೇ ತಿಳಿಸಿದ ಶ್ರೇಷ್ಠ ವಚನಕಾರರಾಗಿದ್ದು, ಆತ್ಮಕ್ಕೆ ಯಾವುದೇ ಜಾತಿ, ಲಿಂಗ ಭೇದವಿಲ್ಲವೆಂದು ಅಂದಿನ ಕಾಲದಲ್ಲಿಯೇ ತಿಳಿಸಿದ ವಚನಕಾರ ಎಂದು ಮೈಂದರಗಿ ಗುರು ಹಿರೇಮಠದ ರೇವಣಸಿದ್ಧ ಪಟ್ಟದದೇವರು ಹೇಳಿದರು.ಪಟ್ಟಣದಲ್ಲಿ ಆಯೋಜಿಸಲಾದ ದೇವರದಾಸೀಮಯ್ಯ ಜಯಂತಿಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.ಸಾಹಿತಿ ಹಾಗೂ ಸಮುದಾಯದ ಹಿರಿಯ ಮುಖಂಡ ಬಸವರಾಜ ಯಂಕಂಚಿ ಮಾತನಾಡಿ, ಬಸವಣ್ಣ, ದೇವರದಾಸಿಮಯ್ಯ ಹೀಗೆ ಅನೇಕ ವಚನಕಾರರು ತಮ್ಮ ಕಾಲದಲ್ಲಿಯೇ ಮಹಿಳೆ ಮತ್ತು ಪುರುಷರಿಗೆ ಸಮಾನ ಹಕ್ಕು ನೀಡಿದರು. ವಚನಗಳ ಮೂಲಕ ಸಾಮಾಜಿಕ ಕ್ರಾಂತಿ ಮಾಡಿದರು. ದೇವರ ದಾಸಿಮಯ್ಯ ಅವರ ವಚನಗಳು ಮನುಷ್ಯನ ದಿಕ್ಕನ್ನೇ ಬದಲಿಸುತ್ತವೆ. ಜೀವನದ ಅನುಭವ ಅವರ ವಚನಗಳಲ್ಲಿವೆ. ಜಯಂತಿ ಆಚರಿಸುವ ಮೂಲಕ ಅವರ ಬದುಕಿನ ಅನೇಕ ಮಜಲುಗಳನ್ನು ನಾವೆಲ್ಲರು ಅಳವಡಿಸಿಕೊಳ್ಳಬೇಕು ಎಂದರು.ಮೈoದರಗಿ ವಿರಕ್ತ ಮಠದ ಮೃತ್ಯುಂಜಯ ಮಹಾಸ್ವಾಮೀಜಿ ಮಾತನಾಡಿ,ಮಾನವ ಕುಲಕ್ಕೆ ಸನ್ಮಾರ್ಗವನ್ನು ತಮ್ಮ ವಚನಗಳ ಮೂಲಕ ತೋರಿಸಿದ ಆದ್ಯ…
ಚಡಚಣ: ಬರಲಿರುವ ವಿದಾನಸಭೆ ಚುನಾವಣೆಯಲ್ಲಿ ನಾಗಠಾಣ ಮೀಸಲು ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಮಾಜಿ ಶಾಸಕ ರಾಜು ಆಲಗೂರ ಅವರಿಗೆ ಟಿಕೆಟ್ ನೀಡಬೇಕು. ಒಂದು ವೇಳೆ ಅವರಿಗೆ ಟಕೆಟ್ ಕೈ ತಪ್ಪಿದರೆ ಜಿಲ್ಲೆಯಾದ್ಯಂತ ಎಸ್ ಸಿ ಬಲಗೈ ಸಮುದಾಯವು ಉಗ್ರ ಹೋರಾಟ ಮಾಡುವುದಾಗಿ ಚಲವಾದಿ ಸಮಾಜದ ಮುಖಂಡರು ಎಚ್ಚರಿಕೆ ನೀಡಿದ್ದಾರೆ.ಪಟ್ಟಣದಲ್ಲಿ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಎಸ್ ಸಿ ಘಟಕದ ಉಪಾಧ್ಯಕ್ಷ ರಾಜು ಸಿಂಗೆ ಮಾತನಾಡಿ,ರಾಜು ಆಲಗೂರ ಅವರು ೧೯೯೦ ರಿಂದಲೂ ಅವಳಿ ಜಿಲ್ಲೆಯಲ್ಲಿ ಡಿಎಸ್ಸೆಸ್ ಸಂಘಟನೆ ಮೂಲಕ ಹತ್ತು ಹಲವು ಹೋರಾಟಗಳಿಂದ ಜನನಾಯಕರಾಗಿ ಬೆಳೆದವರು. ಮಾಜಿ ಸಚಿವ ದಿ. ಬಿ.ಎಂ. ಪಾಟೀಲರು ಇವರಿಗೆ ರಾಜಕೀಯಕ್ಕೆ ಕರೆ ತಂದು ಅವಕಾಶ ಒದಗಿಸಿದರು. ಈಗ ಶಾಸಕ ಎಂ.ಬಿ. ಪಾಟೀಲ ಅವರು ಸಹ ಆಲಗೂರ ಅವರಿಗೆ ಒತ್ತಾಸೆಯಾಗಿ ನಿಂತಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಎಂ.ಬಿ.ಪಾಟೀಲರು ಇವರನ್ನು ಲೋಕಸಭೆಗೆ ಸ್ಪರ್ಧಿಸಲು ತಿಳಿಸಿದ್ದರಿಂದ ವಿಧಾನಸಭೆಗೆ ಅವಕಾಶ ಸಿಗಲಿಲ್ಲ. ಹೀಗಿರುವಾಗ ಈ ಸಲವೂ ರಾಜು ಆಲಗೂರ ಅವರಿಗೆ…
ಸಿಂದಗಿ: ಮುಸ್ಲಿಮರು, ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಮುಂದುವರೆಯಲು ಚಿನ್ನಪ್ಪ ರೆಡ್ಡಿ ಆಯೋಗ ಶೇ ೪ರಷ್ಟು ಮೀಸಲಾತಿ ನೀಡಿ ಈ ಸಮುದಾಯದ ಬಲವರ್ಧನೆಗೆ ಅನುಕೂಲ ಮಾಡಿತ್ತು. ಆದರೆ ರಾಜ್ಯ ಬಿಜೆಪಿ ಸರ್ಕಾರ ಶೇಕಡ ನಾಲ್ಕು ಮೀಸಲಾತಿಯನ್ನು ಕಿತ್ತು ಹಾಕಿರುವುದರ ಮೂಲಕ ಈ ಸಮುದಾಯಕ್ಕೆ ಅನ್ಯಾಯ ಮಾಡಿದ್ದು ಇದನ್ನು ಉಗ್ರವಾಗಿ ಖಂಡಿಸುತ್ತೇವೆ ಎಂದು ಕಾಂಗ್ರೆಸ್ ಮುಖಂಡ ಅಶೋಕ್ ಮನಗೂಳಿ ಹೇಳಿದರು.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಮುಸ್ಲಿಂ ಸಮಾಜದಲ್ಲಿ ಅನೇಕ ಜನ ಬಡವರಿದ್ದಾರೆ ಇದನ್ನು ಅರಿಯದೆ ಕೇವಲ ರಾಜಕಾರಣಕ್ಕಾಗಿ ದ್ವೇಷದ ಬೀಜ ಬಿತ್ತಲು ಮೀಸಲಾತಿ ಕಸಿದು ಈ ಸಮುದಾಯದ ಬಡ ಮಕ್ಕಳ ಶಿಕ್ಷಣ ಆರ್ಥಿಕತೆಗೆ, ಸ್ವಾವಲಂಬನೆಗೆ ಧಕ್ಕೆ ಉಂಟು ಮಾಡಿದ್ದಾರೆ. ಇದು ಒಂದು ವರ್ಗಕ್ಕೆ ಮಾಡಿದ ಅಪಮಾನ ಎಂದರು.ಪಂಚಮಸಾಲಿ ಸಮುದಾಯ ತನ್ನ ಮೀಸಲಾತಿ ಹಕ್ಕಿಗಾಗಿ, ಜಯ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ನಿರಂತರ ಹೋರಾಟ ಮಾಡುತ್ತಲೇ ಬಂದಿದೆ. ಆದರೆ ರಾಜ್ಯ ಸರ್ಕಾರ ಈ ಸಮುದಾಯಕ್ಕೂ ಮೀಸಲಾತಿ ವಿಚಾರದಲ್ಲಿ ನಿರಂತರ ಅನ್ಯಾಯ ಮಾಡುತ್ತಿರುವುದು ಖಂಡನೀಯವಾಗಿದೆ. ಮೀಸಲಾತಿ…