ಚಡಚಣ: ಬರಲಿರುವ ವಿದಾನಸಭೆ ಚುನಾವಣೆಯಲ್ಲಿ ನಾಗಠಾಣ ಮೀಸಲು ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಮಾಜಿ ಶಾಸಕ ರಾಜು ಆಲಗೂರ ಅವರಿಗೆ ಟಿಕೆಟ್ ನೀಡಬೇಕು. ಒಂದು ವೇಳೆ ಅವರಿಗೆ ಟಕೆಟ್ ಕೈ ತಪ್ಪಿದರೆ ಜಿಲ್ಲೆಯಾದ್ಯಂತ ಎಸ್ ಸಿ ಬಲಗೈ ಸಮುದಾಯವು ಉಗ್ರ ಹೋರಾಟ ಮಾಡುವುದಾಗಿ ಚಲವಾದಿ ಸಮಾಜದ ಮುಖಂಡರು ಎಚ್ಚರಿಕೆ ನೀಡಿದ್ದಾರೆ.
ಪಟ್ಟಣದಲ್ಲಿ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಎಸ್ ಸಿ ಘಟಕದ ಉಪಾಧ್ಯಕ್ಷ ರಾಜು ಸಿಂಗೆ ಮಾತನಾಡಿ,
ರಾಜು ಆಲಗೂರ ಅವರು ೧೯೯೦ ರಿಂದಲೂ ಅವಳಿ ಜಿಲ್ಲೆಯಲ್ಲಿ ಡಿಎಸ್ಸೆಸ್ ಸಂಘಟನೆ ಮೂಲಕ ಹತ್ತು ಹಲವು ಹೋರಾಟಗಳಿಂದ ಜನನಾಯಕರಾಗಿ ಬೆಳೆದವರು. ಮಾಜಿ ಸಚಿವ ದಿ. ಬಿ.ಎಂ. ಪಾಟೀಲರು ಇವರಿಗೆ ರಾಜಕೀಯಕ್ಕೆ ಕರೆ ತಂದು ಅವಕಾಶ ಒದಗಿಸಿದರು. ಈಗ ಶಾಸಕ ಎಂ.ಬಿ. ಪಾಟೀಲ ಅವರು ಸಹ ಆಲಗೂರ ಅವರಿಗೆ ಒತ್ತಾಸೆಯಾಗಿ ನಿಂತಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಎಂ.ಬಿ.ಪಾಟೀಲರು ಇವರನ್ನು ಲೋಕಸಭೆಗೆ ಸ್ಪರ್ಧಿಸಲು ತಿಳಿಸಿದ್ದರಿಂದ ವಿಧಾನಸಭೆಗೆ ಅವಕಾಶ ಸಿಗಲಿಲ್ಲ. ಹೀಗಿರುವಾಗ ಈ ಸಲವೂ ರಾಜು ಆಲಗೂರ ಅವರಿಗೆ ಟಿಕೆಟ್ ಕೈ ತಪ್ಪುವ ಮಾತುಗಳು ಕೇಳಿಬರುತ್ತಿದ್ದು, ಅದೇನಾದರೂ ನಿಜವಾದರೆ ತಾವೆಲ್ಲ ಆಲಗೂರ ಅವರ ಪರವಾಗಿ ಹೋರಾಟಕ್ಕಿಳಿಯುವುದಾಗಿ ಘೋಷಿಸಿದರು.
ಜಿಲ್ಲಾ ಕಾಂಗ್ರೆಸ್ ಕಮಿಟಿ ಸಂಚಾಲಕರು ಹಾಗೂ ನಾಗಠಾಣ ಮತಕ್ಷೇತ್ರದ ಕಾಂಗ್ರೆಸ್ ವಕ್ತಾರರಾದ ವಕೀಲ ಜಗದೀಶ್ ಕಾಂಬಳೆ ಮಾತನಾಡಿ, ಜಿಲ್ಲೆಯಲ್ಲಿ 3.20 ಲಕ್ಷಕ್ಕೂ ಅಧಿಕ ಚಲವಾದಿ (ಬಲಗೈ) ಸಮುದಾಯವಿದೆ. ನಾಗಠಾಣ ಮತಕ್ಷೇತ್ರದಲ್ಲಿ 35 ಸಾವಿರಕ್ಕೂ ಅಧಿಕ ಚಲವಾದಿ ಸಮಾಜ ಬಾಂಧವರಿದ್ದಾರೆ. ಸಮಾಜದ ಬೆಂಬಲವುಳ್ಳ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಹಿರಿಯ ನಾಯಕರೂ, ಮಾಜಿ ಶಾಸಕರೂ ಆದ ರಾಜು ಆಲಗೂರ ಅವರಿಗೆ ನಾಗಠಾಣ ಮೀಸಲು ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಟಿಕೆಟ್ ಕೊಡಬೇಕೆಂದು ತಾವು ಶಾಸಕ ಎಂ.ಬಿ.ಪಾಟೀಲ ಅವರಿಗೆ ಮತ್ತು ರಾಜ್ಯ ನಾಯಕರಿಗೆ ಆಗ್ರಹಿಸುವುದಾಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸನ ಹಿರಿಯ ಮುಖಂಡರಾದ ಜಟ್ಟೆಪ್ಪ ಬನಸೋಡೆ, ಭಾರತೀಯ ಬೌದ್ಧ ಮಹಾಸಭಾ ಅಧ್ಯಕ್ಷರಾದ ದಶರಥ. ಬನಸೋಡೆ, ಸರ್ವೇಶ್. ಕಾಂಬಳೆ, ಸುರೇಶ್ ಕಾಂಬಳೆ, ರಾಜು ನಿಂಬರಗಿ, ಸಿದ್ದರಾಯ್ ಬನಸೋಡೆ, ಸುಶೀಲ ಬನಸೋಡೆ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment