Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಮುದ್ದೇಬಿಹಾಳ: ರೈತರಿಗೆ ಸರಕಾರದಿಂದ ಬಿಡುಗಡೆ ಮಾಡುತ್ತಿರುವ ಬೆಳೆ ಪರಿಹಾರ ಬರದೇ ಇದ್ದಲ್ಲಿ ವಿಚಾರಣೆಗಾಗಿ ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ಸಹಾಯವಾಣಿಯನ್ನು ಆರಂಭಿಸಲಾಗಿದ್ದು, ಇಲ್ಲಿ ಕಂದಾಯ ಇಲಾಖೆಯ ಮತ್ತು ಕೃಷಿ ಇಲಾಖೆಯ ತಲಾ ಒಬ್ಬರು ಸಿಬ್ಬಂದಿಗಳು ಹಾಜರಿರುತ್ತಾರೆ. ಬೆಳೆ ಪರಿಹಾರ ಬರದ ರೈತರು ಸಂಪರ್ಕಿಸಬಹುದು ಅಥವಾ ೦೮೩೫೬-೨೦೨೨೭ ಈ ಸಂಖ್ಯೆಗೆ ಸಂಪರ್ಕಿಸಬಹುದು ಎಂದು ತಹಶೀಲ್ದಾರ ಬಸವರಾಜ ನಾಗರಾಳ ತಿಳಿಸಿದ್ದಾರೆ.
ಅಪಾಯದಲ್ಲಿ ಸರಕಾರಿಶಾಲೆಗಳು | ಮಕ್ಕಳು ಪೋಷಕರಲ್ಲಿ ಆತಂಕ | ಕೆಲವೆಡೆ ರೂಂಗಳು ಅಧ್ವಾನ ಇಂಡಿ: ಸರಕಾರಿ ಶಾಲೆಗೆ ಮಕ್ಕಳನ್ನು ಸೇರಿಸಿ, ದಾಖಲಾತಿ ಅಂದೋಲನ ಎಂದೆಲ್ಲ ದುಡಿಯುತ್ತಿರುವ ಶಿಕ್ಷಣ ಇಲಾಖೆಯೂ ತನ್ನ ಸರಕಾರಿ ಶಾಲಾ ಕೊಠಡಿಗಳ ದುರಸ್ತಿ ಕಾರ್ಯವನ್ನೇ ಮರೆತಿದ್ದು ತಾಲೂಕಿನಲ್ಲಿ ೫೦ ಕ್ಕೂ ಹೆಚ್ಚು ಕೊಠಡಿಗಳು ಶಿಥಿಲಾವಸ್ತೆ ತಲುಪಿ ಈ ವರೆಗೂ ದುರಸ್ತಿ ಭಾಗ್ಯವನ್ನೇ ಕಾಣ ದಂತಾಗಿದೆ.ಇಂಡಿ ತಾಲೂಕಿನಲ್ಲಿ ೨೭೮ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿದ್ದು ಅದರಲ್ಲಿ ೧೮ ಸರಕಾರಿ ಪ್ರೌಢಶಾಲೆಗಳಿವೆ. ಇದರಲ್ಲಿ ೩೦ ಕ್ಕೂ ಹೆಚ್ಚು ಮೇಜರ್ ರಿಪೇರಿ ಆಗಬೇಕಾಗಿದ್ದು ೨೦ ಕ್ಕೂ ಹೆಚ್ಚು ಕೊಠಡಿಗಳು ಮೈನರ್ ರಿಪೇರಿ ಆಗಬೇಕಿದೆ. ಹೀಗಾಗಿ ಇಷ್ಟು ಶಾಲೆಗಳ ಕೊಠಡಿ ಗಳಲ್ಲಿ ಓದುವ ಮಕ್ಕಳ ಜೀವ ಕೈಯಲ್ಲಿ ಹಿಡಿದುಕೊಂಡು ಓದಬೇಕಿದೆ.ಪ್ರತಿ ವರ್ಷವೂ ಕೊಠಡಿಗಳ ಗುಣಮಟ್ಟದ ಬಗ್ಗೆ ರಿಪೋರ್ಟ ಕಾರ್ಡು ಸಿದ್ಧ ಪಡಿಸುವ ಶಿಕ್ಷಣ ಇಲಾಖೆ ಸರಕಾರಕ್ಕೆ ವರದಿ ಸಲ್ಲಿಸುತ್ತದೆ. ಆದರೆ ಈ ವರೆಗೂ ಕೊಠಡಿಗಳ ದುರಸ್ತಿಗೆ ಜಾಣಮೌನ ವಹಿಸಿರುವದು ವಿಪರ್ಯಾಸಮೇಜರ ಸಮಸ್ಯೆ: ೫೦ ಕೊಠಡಿಗಳಲ್ಲಿ…
ಇಂಡಿ: ಶೈಕ್ಷಣಿಕ, ಸಮಾಜಿಕ, ಆರ್ಥಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಅವಕಾಶ ವಂಚಿತರಿಂದ ಉಪ್ಪಾರ ಸಮಾಜ ಅತ್ಯಂತ ಹೀನಾಯ ಸ್ಥಿತಿಯಲ್ಲಿದೆ ಎಂದು ಭಗೀರಥ ಮಹರ್ಷಿ ಸಮಾಜ ಸೇವಾ ಸಂಘದ ತಾಲ್ಲೂಕು ಅಧ್ಯಕ್ಷ ಸುರೇಶ ಕರಂಡೆ ಹೇಳಿದರು.ಮಂಗಳವಾರ ಭಗೀರಥ ಮಹರ್ಷಿ ಜಯಂತಿ ಅಂಗವಾಗಿ ತಾಲ್ಲೂಕಿನ ಹಿರೇರೂಗಿ ಗ್ರಾಮ ಪಂಚಾಯತ, ಕೃಷಿ ಪತ್ತಿನ ಸಹಕಾರಿ ಸಂಘದ ಕಾರ್ಯಾಲಯದಲ್ಲಿ ಹಾಗೂ ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ಭಗೀರಥ ಮಹರ್ಷಿ ವೃತದಲ್ಲಿ ಭಗೀರಥ ಮಹರ್ಷಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರು ಉಪ್ಪಿನ ಮೇಲೆ ತೆರಿಗೆ ಹೇರುವುದನ್ನು ತಡೆಯಲು ಉಪ್ಪಾರ ಜನಾಂಗ ಮಹಾತ್ಮಾ ಗಾಂಧೀಜಿಯೊಂದಿಗೆ ಗುಜರಾತಿನಲ್ಲಿ ಉಪ್ಪಿನ ಸತ್ಯಾಗ್ರಹದಲ್ಲಿ ತೊಡಗಿದ್ದರು. ಈ ಹೋರಾಟ ದೇಶವನ್ನು ಸ್ವತಂತ್ರಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು. ಅದರಲ್ಲಿ ಉಪ್ಪಾರರ ಸೇವೆ ಸ್ಮರಣೀಯ ಎಂದರು.ತಾಯಿ, ಉಪ್ಪಿನ ಋಣ ತೀರಿಸಲು ಸಾಧ್ಯವಿಲ್ಲ ಎಂಬಂತೆ ಉಪ್ಪಿನ ಋಣ ಎಲ್ಲ ಸಮಾಜದ ಮೇಲಿದೆ. ಆದರೆ ಸದ್ಯ ಸಮಾಜಕ್ಕೆ ರಾಜಕೀಯ ಸ್ಥಾನಮಾನ ಸಿಗದೆಯಿರುವುದರಿಂದ ಪ್ರಗತಿ ಕಾಣದಂತಾಗಿದೆ. ಎಲ್ಲಿಯವರೆಗೆ ರಾಜಕೀಯ ಅವಕಾಶ…
ವಿಜಯಪುರ: ಜಿಲ್ಲೆಯ ಎಲ್ಲ ತಾಲೂಕುಗಳನ್ನು ಈಗಾಗಲೇ ಸರ್ಕಾರ ಬರಪೀಡಿತ ತಾಲೂಕುಗಳೆಂದು ಘೋಷಿಸಿದ್ದು, ಬೆಳೆಹಾನಿಯಾದ ರೈತರ ಖಾತೆಗಳಿಗೆ ನೇರವಾಗಿ ಡಿಬಿಟಿ ಮೂಲಕ ಪರಿಹಾರ ಹಣ ಜಮೆ ಮಾಡಲಾಗುತ್ತಿದ್ದು, ಜಿಲ್ಲೆಯಲ್ಲಿ ೩೬೦೧೦.೨೦ ಲಕ್ಷ ರೂ.ಗಳನ್ನು ೨,೫೦,೦೬೩ ರೈತರಿಗೆ ಜಮೆ ಮಾಡಲಾಗಿದೆ. ರೈತರು ತಮ್ಮ ಬ್ಯಾಂಕ್ ಖಾತೆಗಳಿಗೆ ಪರಿಹಾರ ಧನ ಜಮೆಯಾಗಿರುವ ಕುರಿತುhಣಣಠಿs://ಠಿಚಿಡಿihಚಿಡಿಚಿ.ಞಚಿಡಿಟಿಚಿಣಚಿಞಚಿ.gov.iಟಿ/seಡಿviಛಿe೯೨/ ಜಾಲತಾಣದಿಂದ ಪರಿಶೀಲಿಸಬಹುದಾಗಿದ್ದು, ಈ ಕುರಿತಂತೆ ಹೆಚ್ಚಿನ ಮಾಹಿತಿಯನ್ನು ಈ ಕೆಳಗಿನ ಸಹಾಯವಾಣಿ ಸಂಖ್ಯೆಗೆ ಸಂಪರ್ಕಿಸಿ ಪಡೆದುಕೊಳ್ಳಬಹುದಾಗಿದೆ.ಸಹಾಯವಾಣಿ : ಜಿಲ್ಲಾಧಿಕಾರಿಗಳ ಕಚೇರಿ ವಿಜಯಪುರ ದೂ: ೦೮೩೫೨-೨೨೧೨೬೧ ಹಾಗೂ ಟೋಲ್ ಫ್ರೀ ಸಂಖ್ಯೆ ೧೦೭೭, ಉಪವಿಭಾಗಾಧಿಕಾರಿಗಳು ವಿಜಯಪುರ ದೂ: ೦೮೩೫೨೧-೨೯೫೨೮೬, ಉಪವಿಭಾಗಾಧಿಕಾರಿಗಳು ಇಂಡಿ ದೂ: ೦೮೩೫೯-೨೨೫೦೦೩, ಉಪನಿರ್ದೇಶಕರು ತೋಟಗಾರಿಕೆ ಇಲಾಖೆ, ವಿಜಯಪುರ ದೂ: ೦೮೩೫೨-೨೫೦೨೪೪, ತಹಶೀಲ್ದಾರ ವಿಜಯಪುರ ದೂ:೦೮೩೫೨-೩೫೫೭೩೧, ತಹಶೀಲ್ದಾರ ಬಬಲೇಶ್ವರ ದೂ: ೮೩೧೦೫೦೪೨೦೫, ೯೬೮೬೦೭೩೩೯೦, ತಹಶೀಲ್ದಾರ ತಿಕೋಟಾ ದೂ: ೮೭೬೨೪೮೦೮೧೧, ೯೪೮೦೫೩೨೬೯೬, ತಹಶೀಲ್ದಾರ ಬ.ಬಾಗೇವಾಡಿ ದೂ:೮೦೫೦೪೨೬೬೬೩, ೯೧೦೮೪೮೨೫೯೯, ತಹಶೀಲ್ದಾರ ನಿಡಗುಂದಿ ದೂ: ೭೦೧೯೧೭೮೦೭೫,೯೯೦೨೬೩೪೧೮೬, ತಹಶೀಲ್ದಾರ ಕೊಲ್ಹಾರ ದೂ: ೦೮೪೨೬-೨೦೦೨೫೨, ತಹಶೀಲ್ದಾರ ಮುದ್ದೇಬಿಹಾಳ ದೂ:…
ವಿಜಯಪುರ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ ವತಿಯಿಂದ ಮೇ.೧೬ರಂದು ಬಿ.ಎಲ್.ಡಿ.ಇ ಸಂಸ್ಥೆಯ ಆವರಣದಲ್ಲಿರುವ ಡಾ.ಫ.ಗು. ಹಳಕಟ್ಟಿ ಇಂಜಿನಿಯರಿಂಗ ಕಾಲೇಜಿನ ಸಭಾಗೃಹದಲ್ಲಿ “Navigating Youth Towards Amrutha Kal: Knowledge Transfer Through Technology and Skill Development” ಎಂಬ ವಿಷಯದ ಕುರಿತು ಒಂದು ದಿನದ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.ಈ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಬೆಳಗಾವಿಯ ಶ್ರೀನಿವಾಸ ಪಿ ಇವರು Revolutionising Artificial Intelligence in Knowledge Trnasfer ಎಂಬ ವಿಷಯದ ಕುರಿತು, ಐಐಟಿ ದೆಹಲಿಯ ಡಿ.ಎಸ್ .ಮಂಜುನಾಥ ಇವರು ToC Critical Chain-Theory of Constraints Tools Industry 4.0 Innovation,ಎಂಬ ವಿಷಯದ ಕುರಿತು, ಎಆರ್ಕೆ ವೈಡ್ ಇಂಡಸ್ಟೀಸ್ ಬೆಂಗಳೂರ ಇದರ ಡೈರೆಕ್ಟರ ಆದ ಸೂರಜ ಪಿ.ನಾಡಿಗ , ಇವರು Empowering Institutions Through Skill Development and Entrepreneurship ಎಂಬ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ.ಕಾರ್ಯಾಗಾರದ ಅಧ್ಯಕ್ಷತೆಯನ್ನು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೋ.ಸಿ.ಎಂ.ತ್ಯಾಗರಾಜ ಅವರು ವಹಿಸಲಿದ್ದಾರೆ. ಕುಲಸಚಿವರಾದ ರಾಜೇಶ್ವರಿ ಜೈನಾಪೂರ,…
ವಿಜಯಪುರ: ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಮಂಗಳವಾರ ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶ್ರೀ ಭಗಿರಥ ಜಯಂತಿಯನ್ನು ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ನೀತಿ ಸಂಹಿತೆ ಜಾರಿ ಇರುವುದರಿಂದ ಸರಳವಾಗಿ ಆಚರಿಸಲಾಯಿತು. ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಅವರು ಶ್ರೀ ಭಗಿರಥ ಅವರ ಭಾವಚಿತ್ರಕ್ಕೆ ಪೂಜೆಯೊಂದಿಗೆ ಪುಷ್ಪಾರ್ಚನೆಯನ್ನು ಸಲ್ಲಿಸಿ ನಮಿಸಿದರು.ಈ ಸಂದರ್ಭದಲ್ಲಿ ತಹಶೀಲ್ದಾರ ಕವಿತಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಯ್ಯೂಬ್ ದ್ರಾಕ್ಷಿ, ಉಪ್ಪಾರ ಸಮಾಜದ ಜಿಲ್ಲಾ ಅಧ್ಯಕ್ಷರಾದ ಜಕ್ಕಪ್ಪ ಯಡವೆ, ಮುಖಂಡರುಗಳಾದ ಮುತ್ತಪ್ಪ ಕೆ.ಶಿವಣ್ಣನವರ, ಅನಿಲ್ ಅವಳೆ, ಯಲ್ಲಪ್ಪ ಬಂಡಿ, ಡಾ.ಸುರೇಶ ಕಾಗಲಕರ್ರೆಡ್ಡಿ, ಸಿದ್ದು ಗೆರಳೆ, ಸಾಬು ಕಾತ್ರಾಳ, ಜೆ.ಎಲ್. ಕಸ್ತೂರಿ, ಶ್ರೀನಿವಾಸ್ ಅಂಬಲಿ, ಸುರೇಶ ಶಹಾಪೂರ, ಪುಂಡಲಿಕ್ ಉಪ್ಪಾರ, ವಿದ್ಯಾವತಿ ಅಂಕಲಗಿ ಹಾಗೂ ಇತರರು ಉಪಸ್ಥಿತರಿದ್ದರು.
ವಿಜಯಪುರ: ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಬಿಎಲ್ಡಿಐ ಐಟಿಐ ವಿಜಯಪುರ ಇವರ ಸಹಯೋಗದೊಂದಿಗೆ ಮೇ.೧೭ ರಂದು ಬೆಳಗ್ಗೆ ೯ ಗಂಟೆಗೆ ಕಿರ್ಲೋಸ್ಕರ್ ಟೊಯೋಟಾ ಟೆಕ್ಸ್ಟಟೈಲ್ ಮಶಿನರಿ ಪ್ರೈವೆಟ್ ಲಿಮಿಟೆಡ್ ಬೆಂಗಳೂರು ಇವರ ವತಿಯಿಂದ ಐಟಿಐ ಪಾಸಾದ ಹಾಗೂ ಅಂತಿಮ ವರ್ಷದ ಪರೀಕ್ಷೆಗೆ ಹಾಜರಾಗಿರುವ, ೨೩ ವರ್ಷದೊಳಗಿನ ಅಭ್ಯರ್ಥಿಗಳಿಗೆ ಅಪ್ರೆಂಟಿಶಿಪ್ಗಾಗಿ ಸಂದರ್ಶನವನ್ನು ಬಿಎಲ್ಡಿಈ ಐಟಿಐ/ಪಾಲಿಟೆಕ್ನಿಕ್ ಕಾಲೇಜು ಆವರಣ, ಆಶ್ರಮ ರಸ್ತೆ ವಿಜಯಪುರದಲ್ಲಿ ಆಯೋಜಿಸಲಾಗಿದೆ.ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಒಂದು ಪ್ರತಿ ಶಾಲಾ ದಾಖಲಾಗಳು, ಎರಡು ಭಾವಚಿತ್ರ ಹಾಗೂ ರೆಸ್ಯೂಮ್ನೊಂದಿಗೆ ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನುಮಯ ಕೇಂದ್ರ ಕಚೇರಿಗೆ ಅಥವಾ ಮೊಬೈಲ್ ಸಂಖೆ ೯೯೧೬೮೫೩೬೦೫/೯೪೯೪೫೦೦೦೭೯ಕ್ಕೆ ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗ ವಿನಿಮಯದ ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯಪುರ: ಕೊಲ್ಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಚಂದ್ರಭಾಗಾ ವಿಠ್ಠಲ ಹುಗ್ಗೆನವರ(೩೦ ವರ್ಷ) ಹಾಗೂ ಆಕೆಯ ಮಕ್ಕಳಾದ ಫ್ರಥಮ(೧೧ ವರ್ಷ), ಸಜನಿ(೯ ವರ್ಷ), ಸಾನವಿ(೭ ವರ್ಷ)ರವರನ್ನು ಅಪಹರಣ ಮಾಡಲಾಗಿದೆ ಎಂದು ದೂರು ದಾಖಲಾಗಿದೆ. ಅಬ್ದುಲ್ಗಫಾರ ನೂರಲಿಖಾನ ಕಲಾದಗಿ ಎಂಬ ವ್ಯಕ್ತಿಯು ತಾಯಿ ಮಕ್ಕಳನ್ನು ಅಪಹರಣ ಮಾಡಿದ್ದಾನೆ ಎಂದು ಅಪಹರಣಗೊಂಡ ಮಹಿಳೆಯ ಚಿಕ್ಕಪ್ಪನಾದ ಲಕ್ಷö್ಮಣ ಬಸಲಿಂಗಪ್ಪ ಬ್ಯಾಲ್ಯಾಳ ಇವರು ದೂರು ದಾಖಲಿಸಿದ್ದಾರೆ.ಅಪಹರಣಗೊಂಡ ತಾಯಿ ಹಾಗೂ ಮಕ್ಕಳ ಬಗ್ಗೆ ಸುಳಿವು ಅಥವಾ ಗುರುತು ಪತ್ತೆಯಾದಲ್ಲಿ ಹತ್ತಿರದ ಪೊಲೀಸ್ ಠಾಣೆ ಅಥವಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಕಚೇರಿ ೦೮೩೫೨-೨೫೦೧೫೨ ಮೊಬೈಲ್ ಸಂಖ್ಯೆ ೯೪೮೦೮೦೪೨೦೧, ವಿಜಯಪುರ ಕಂಟ್ರೋಲ್ ರೂಮ್ ನಂ. ೦೮೩೫೨-೨೫೦೮೪೪,೨೫೦೭೫೧, ಡಿಎಸ್ಪಿ ಬಸವನ ಬಾಗೇವಾಡಿ ಇವರ ಮೊಬೈಲ್ ನಂಬರ್ ೯೪೮೦೮೦೪೨೨೧ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಬೇಕೆಂದು ಬಸವನ ಬಾಗೇವಾಡಿಯ ಪೊಲೀಸ್ ಉಪ ವಿಭಾಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೆಂಭಾವಿ ಪಟ್ಟಣದಲ್ಲಿ ಲೋಕಸಭಾ ಚುನಾವಣೆ ಮುಗಿದು ಒಂದು ವಾರ ಕಳೆದರೂ ಸಿಬ್ಬಂದಿ ಅವರೋಹಣ ಮಾಡದ್ದರಿಂದ ರಾಜಾರೋಷವಾಗಿ ಚುನಾವಣಾ ಧ್ವಜ ಹಾರಾಡುತ್ತಿದೆ.ಮಾನ್ಯ ಮುಖ್ಯ ಚುನಾವಣಾ ಅಧಿಕಾರಿಗಳ ಕಚೇರಿಯ ಆದೇಶ ಸಮಯ ಬೆಳಿಗ್ಗೆ 7ರಿಂದ ಸಂಜೆ 6 ರವರೆಗೆ ಇದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಕಾರಣ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಎಂದು ಭಾರತೀಯ ದಲಿತ ಪ್ಯಾಂಥರ್ ಸಂಘದ ಅಧ್ಯಕ್ಷ ಲಕ್ಷ್ಮಣ್ ಬಸರಿಗಿಡ ಆಗ್ರಹಿಸಿದ್ದಾರೆ.
ವಿಜಯಪುರ: ಮೂವರು ಕಳ್ಳರನ್ನು ಬಂಧಿಸಿರುವ ವಿಜಯಪುರ ಪೊಲೀಸರು, ಬಂಧಿತರಿಂದ 2.40 ಲಕ್ಷ ರೂ. ಮೌಲ್ಯದ40 ಗ್ರಾಂ ತೂಕದ ಬಂಗಾರದ ಆಭರಣಗಳು ಜಪ್ತ ಮಾಡಿದ್ದಾರೆ.ಬೆಳಗಾವಿ ಶಿವಬಸವ ನಸವಿತಾ ಸಂಜು ಲೊಂಡೆ (40), ನಿಪ್ಪಾಣಿಯ ಸ್ವಪ್ನಾ ವಿಕಾಸ ಜಾಧವ (30), ಪ್ರೇರಣಾ ಸತೀಶ ಚೌಗಲೆ(22) ಬಂಧಿತ ಆರೋಪಿತರು.ನಗರದ ಸ್ಯಾಟ್ ಲೈಟ್ ಬಸ್ ನಿಲ್ದಾಣದಲ್ಲಿ ಮಂಗಳವಾರ ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದಾಗ ಇವರನ್ನು ಹಿಡಿದು ವಿಚಾರಣೆಗೊಳಪಡಿಸಿದಾಗ ಚಿನ್ನಾಭರಣ ಕಳ್ಳತನ ಮಾಡಿದ್ದನ್ನು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಬಸ್ ಹತ್ತುವಾಗ ಬಂಗಾರದ ಆಭರಣ ಕಳ್ಳತನವಾದ ಪ್ರಕರಣ ದಾಖಲಾಗಿದ್ದು, ಈ ಪ್ರಕರಣ ಭೇದಿಸಲು ಎಸ್ಪಿ ಋಷಿಕೇಶ್ ಸೋನಾವಣೆ ಅವರು ಹೆಚ್ಚುವರಿ ಎಸ್ಪಿ ಶಂಕರ ಮಾರಿಹಾಳ, ರಾಮನಗೌಡ ಹಟ್ಟಿ, ಡಿವೈಎಸ್ಪಿ ಬಸವರಾಜ ಎಲಿಗಾರ ಅವರ ಮಾರ್ಗದರ್ಶನದಲ್ಲಿ ಗಾಂಧಿಚೌಕ್ ಠಾಣೆ ಸಿಪಿಐ ಮಹಾಂತೇಶ ದ್ಯಾಮಣ್ಣವರ ನೇತೃತ್ವದಲ್ಲಿ ಒಂದು ವಿಶೇಷ ತನಿಖಾ ತಂಡ ರಚಿಸಿದ್ದರು. ಈ ತನಿಖಾ ತಂಡವು ಕಾರ್ಯಾಚರಣೆ ನಡೆಸಿ ಆರೋಪಿತರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಆರೋಪಿತರನ್ನು ಬಂಧಿಸಿರುವ ತನಿಖಾ ತಂಡ್ ಪೊಲೀಸ್…
