ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸಮರ್ಪಕವಾಗಿ ಕಾರ್ಯನಿರ್ವಹಿಸದೇ ಇರುವ ವಿವಿಧ ಸಂಘಗಳಿಗೆ ನೋಟೀಸ್ ನೀಡಲಾಗುತ್ತಿದ್ದು, ೭ ದಿನದೊಳಗಾಗಿ ಕಚೇರಿಗೆ ಖುದ್ದಾಗಿ ಹಾಜರಾಗಿ ಹೇಳಿಕೆ ಹಾಗೂ ದಾಖಲೆಗಳನ್ನು ಸಲ್ಲಿಸಬೇಕು. ಇಲ್ಲವಾದಲ್ಲಿ ಯಾವುದೇ ಆಕ್ಷೇಪಣೆ ಇಲ್ಲವೆಂದು ಭಾವಿಸಿ ಸಂಘಗಳ ನೋಂದಣಿ ರದ್ದತಿಗಾಗಿ ಕ್ರಮ ಕೈಗೊಳ್ಳಲಾಗುವುದು. ೭ ದಿನಗಳ ಮೇಲೆ ಬರುವ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಸಹಕಾರಿ ಸಂಘಗಳ ಉಪನಿಬಂಧಕರು ತಿಳಿಸಿದ್ದಾರೆ.
ಮುದ್ರಣಾಲಯ ಸಹಕಾರ ಸಂಘ ನಿ, ವಿಜಯಪುರ, ವಿಜಾಪೂರ ಬ್ರಿಕ್ಸ್ ಮತ್ತು ಟಾಯಿಲ್ಸ್ ಕೂಲಿಕಾರರ ಸಹಕಾರ ಸಂಘ ನಿ, ವಿಜಯಪುರ. ಶ್ರೀ ಸಿದ್ದೇಶ್ವರ ಮಹಿಳಾ ವಿವಿದೋದ್ದೇಶಗಳ ಸಹಕಾರ ನಿ..ವಿಜಯಪುರ ಹಾಗೂ ಮಹಿಳಾ ವಿವಿದೋದ್ದೇಶಗಳ ವಿಜಯಪುರ. ಈ ಸಂಘಗಳು ಸಹಕಾರ ವರ್ಷದಿಂದ ಸ್ಥಗಿತಗೊಂಡಿದ್ದು, ಸಮರ್ಪಕವಾಗಿ ಕಾರ್ಯನಿರ್ವಹಿಸದೇ ಇರುವುದು ಗಮನಕ್ಕೆ ಬಂದಿದೆ.
ಈ ಸಂಘಗಳಿಗೆ ಅಂತಿಮ ಅವಕಾಶವಿದ್ದು, ಸಮಾಪನೆಗೊಂಡ ಸಹಕಾರ ಸಂಘಗಳ ವಿರುದ್ಧ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ ೧೯೫೯ ಕಲಂ ೭೨(೨)ರ ಮೇರೆಗೆ ಮೇಲಿನ ಸಂಘದ ಸದಸ್ಯರಿಗೆ ಹಾಗೂ ಆಡಳಿತ ಮಂಡಳಿಯವರು ಈ ಪ್ರಕಟಣೆಯನ್ನೇ ನೋಟೀಸ್ ಎಂದು ಪರಿಗಣಿಸಲು ಸಹಕಾರ ಸಂಘಗಳ ಉಪ ನಿಬಂಧಕರ ಪ್ರಕಟಣೆ ತಿಳಿಸಿದೆ.
