ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಗೆ ರಾಜ್ಯ ಸಂಸ್ಥೆಯ ಉಪಾಧ್ಯಕ್ಷ ಗಜಾನನ ಮನ್ನಿಕೇರಿ, ರಾಜ್ಯ ಕಾಯ೯ಕಾರಿ ಸಮಿತಿ ಸದಸ್ಯ ಸಿ ಎ ಸಾವಳಗಿ, ರಾಜ್ಯ ಸಂಘಟನಾ ಆಯುಕ್ತೆ(ಗೈಡ್) ಮಂಜುಳಾ ಸಿ ರವರು ಗುರುವಾರ ಭೇಟಿ ನೀಡಿದರು.
ಈ ವೇಳೆ ವಿಜಯಪುರ ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ತಳವಾರ ಮತ್ತು ನಗರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ರಾಘವೇಂದ್ರ ಹೊಸೂರ ರವರನ್ನು ಭೇಟಿಮಾಡಿ ಸ್ಕೌಟ್ ಮತ್ತು ಗೈಡ್ ಚಟುವಟಿಕೆಗಳಿಗೆ ಸಹಕರಿಸಲು, ಪ್ರಾರಂಭಿಕ ತರಬೇತಿ ಆಯೋಜನೆ ಹಾಗೂ ಮೂಲ ತರಬೇತಿ ಸಂಘಟನೆಗೆ ಸಂಪೂರ್ಣವಾಗಿ ಸಹಕರಿಸಲು ತಿಳಿಸಿದರು.
ನಂತರ ಲೊಯೋಲ ಆಂಗ್ಲ ಮಾಧ್ಯಮ ಶಾಲೆಯ ಪ್ರಾಚಾರ್ಯರನ್ನು ಭೇಟಿ ಮಾಡಿ ಬನ್ನಿ ಮತ್ತು ಕಬ್ ಬುಲ್ ಬುಲ್ ದಳಗಳನ್ನು ಪ್ರಾರಂಭಿಸುವಂತೆ ವಿನಂತಿಸಿದರು.
ಮಧ್ಯಾಹ್ನ ಸ್ಕೌಟ್ ಭವನದಲ್ಲಿ ನಡೆದ ಜಿಲ್ಲಾ ಪದಾಧಿಕಾರಿಗಳ ಸಭೆಯು ಜಿಲ್ಲಾ ಮುಖ್ಯ ಆಯುಕ್ತ ಸಿದ್ದಣ್ಣ ಸಕ್ರಿ ಅಧ್ಯಕ್ಷತೆಯಲ್ಲಿ ಜರುಗಿತು.
ಸಭೆಯಲ್ಲಿ ಜಿಲ್ಲಾ ಸಂಸ್ಥೆಯ ಅಭಿವೃದ್ದಿಯ ಕುರಿತು ಚಚಿ೯ಸಲಾಯಿತು.
ಸದರಿ ಸಭೆಯಲ್ಲಿ ಮಾನ್ಯ ಉಪನಿರ್ದೇಶಕರು(ಆಡಳಿತ) ಶಾಲಾ ಶಿಕ್ಷಣ ಇಲಾಖೆ ವಿಜಯಪುರ ಎಂ ಎ ಗುಳೇದಗುಡ್ಡ ರವರು ಉಪಸ್ಥಿತರಿದ್ದು ಇಲಾಖೆಯಿಂದ ಸಂಪೂರ್ಣ ಸಹಕಾರ ನೀಡುತ್ತೇವೆಂದು ಹೇಳಿದರು.
ಸಭೆಯ ನಂತರ ಶ್ರೀಮತಿ ಬಂಗಾರಮ್ಮ ಸಜ್ಜನ ಮಹಿಳಾ ಪದವಿ ಕಾಲೇಜಿನ ಪ್ರಾಂಶುಪಾಲ ವೈ ತಮ್ಮಣ್ಣ ರವರೊಂದಿಗೆ ಪ್ರೇರಣಾ ಕಾಯ೯ಕ್ರಮದ ಕುರಿತು ಚಚಿ೯ಸಲಾಯಿತು.
ಡಾ. ಫ ಗು ಹಳಕಟ್ಟಿಯವರು ಪ್ರಥಮವಾಗಿ ಸ್ಕೌಟ್ ದಳ ಪ್ರಾರಂಭಿಸಿದ ಎಸ್ ಎಸ್ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರನ್ನು ಕಂಡು ಸ್ಕೌಟ್ ದಳದ ಪ್ರಗತಿ ಕುರಿತು ಚಚಿ೯ಸಲಾಯಿತು.
ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಉಪನಿರ್ದೇಶಕರಾದ ಕೆ ಎ ಉಪ್ಪಾರ ರವರನ್ನು ಭೇಟಿಯಾಗಿ ಪದವಿಪೂರ್ವ ಕಾಲೇಜುಗಳಲ್ಲಿ ರೋವರ್, ರೇಂಜರ್ ಘಟಕಗಳನ್ನು ಹೆಚ್ಚಿಸಲು ಸಹಕರಿಸುವಂತೆ ಗಜಾನನ ಮನ್ನಿಕೇರಿ ವಿನಂತಿಸಿದರು.
ಕಾಯ೯ಕ್ರಮದಲ್ಲಿ ಜಿಲ್ಲಾ ಉಪಾಧ್ಯಕ್ಷ ಪೂಜಪ್ಪ ಪೂಜಾರಿ, ಜಿಲ್ಲಾ ತರಬೇತಿ ಆಯುಕ್ತ (ಗೈಡ್) ಶ್ರೀಮತಿ ಪಿ ಎಂ ಪೂಜಾರಿ, ಜಂಟಿ ಕಾಯ೯ದಶಿ೯ ಶ್ರೀಮತಿ ಡಿ ಎಲ್ ಪಿಜಾರ, ಜಿಲ್ಲಾ ಕೇಂದ್ರ ಸ್ಥಾನಿಕ ಆಯುಕ್ತ ಶರಣು ಸಬರದ, ಜಗದೀಶ ಬೋಳಸೂರ, ಜಿಲ್ಲಾ ಕಾಯ೯ದಶಿ೯ಗಲಾದ ಪಿ ಎಸ್ ಕುಂಬಾರ, ಆರ್ ಆರ್ ಅಲಕುಂಟೆ ಉಪಸ್ಥಿತರಿದ್ದರು.

