ಹಣದ ಆಮಿಷವೊಡ್ಡಿ ಸೂಪರ್ ಸೀಡ್ ಮಾಡಲು ಯತ್ನ | ಟಿ ವೆಂಕಟೇಶ್ ಗಂಭೀರ ಆರೋಪ
ಉದಯರಶ್ಮಿ ದಿನಪತ್ರಿಕೆ
ಎಚ್ ಡಿ ಕೋಟೆ: ತಾಲೂಕಿನಿಂದ ತಾಲೂಕಿನಗೆ ಬಂದು ಶಾಸಕ ಅನಿಲ್ ಚಿಕ್ಕಮಾದು ಹಣ ದಂದೆಯಲ್ಲಿ ನಿರತರಾಗಿದ್ದಾರೆ. ಅಧಿಕಾರ ದುರುಪಯೋಗ ಮಾಡಿಕೊಂಡು 3 ಲಕ್ಷದವರೆಗೂ ಬಡ್ಡಿ ರಹಿತ ಸಾಲ ನೀಡುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಸೂಪರ್ ಸೀಡ್ ಮಾಡುವ ಮೂಲಕ ಅವುಗಳನ್ನು ನಿಷ್ಕ್ರಿಯಗೊಳಿಸಿ , ರೈತರಿಗೆ ಮೋಸ ಮಾಡುತ್ತಿದ್ದಾರೆ. ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ನಿರ್ದೇಶಕರ ಚುನಾವಣೆಯಲ್ಲಿ ಅಧಿಕಾರ ದುರುಪಯೋಗ ಮಾಡಲು ನಾವು ಬಿಡುವುದಿಲ್ಲ. ಟಿಎಪಿಸಿಎಂಎಸ್ ನ ೮ ಸ್ಥಾನಗಳಲ್ಲೂ ( ಬಿಜೆಪಿ -೦೫, ಜೆಡಿಎಸ್ -೦೩) ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆ. ನಿಮಗೆ ತಕ್ಕಪಾಠ ಕಳಿಸುತ್ತಾರೆ ಎಂದು ತಾಲೂಕು ಬಿಜೆಪಿ ಅಧ್ಯಕ್ಷ ಟಿ ವೆಂಕಟೇಶ್ ವಾಗ್ದಾಳಿ ನಡೆಸಿದರು.
ತಾಲೂಕಿನ ಗಂಗಡಹೊಸಹಳ್ಳಿಯಲ್ಲಿ ಮೈತ್ರಿ ಅಭ್ಯರ್ಥಿಗಳ ಪರ ಮತಯಾಚನೆ ಬಳಿಕ ಮಾತನಾಡಿದ ಅವರು, ಶಾಸಕ ಅನಿಲ್ ಚಿಕ್ಕಮಾದುಗೆ ಪಾಪದ ಕೊಡ ತುಂಬಿದೆ. ರೈತರಿರುವ ಸೊಸೈಟಿ ಚುನಾವಣೆಗಳಲ್ಲೂ ಕೀಳು ಮಟ್ಟದ ರಾಜಕೀಯ ಮಾಡುತ್ತಿದ್ದಾರೆ. ಶಾಸಕರ ಜವಾಬ್ದಾರಿ ಮರೆತು, ವಾಮಮಾರ್ಗದಲ್ಲಿ ಅಧಿಕಾರ ಹಿಡಿಯಲು ಮುಂದಾಗಿದ್ದಾರೆ. ಟಿಎಪಿಸಿಎಂಎಸ್ ನಿರ್ದೇಶಕರ ಚುನಾವಣೆಯಲ್ಲೂ ಮತ ಚಲಾಯಿಸದಂತೆ ಮಾದಾಪುರ ಹಾಗೂ ಹೆಚ್ ಡಿ ಕೋಟೆ ಪ್ರಾಥಮಿಕ ಕೃಷಿ ಪತ್ತಿನ ಸಂಘ ಸೂಪರ್ ಸೀಡ್ ಮಾಡಲು ಹೋಗಿ ನ್ಯಾಯಾಲಯದಲ್ಲಿ ಮುಖಭಂಗ ಅನುಭವಿಸಿದ್ದಾರೆ. ಇದೀಗ ಮನುಗನಹಳ್ಳಿ, ಕ್ಯಾತನಹಳ್ಳಿ, ಚಕ್ಕೂರು ಸೊಸೈಟಿಗಳಲ್ಲೂ ಡೆಲಿಗೇಟ್ ಗಳನ್ನು ವಜಾಮಾಡಲು ಮುಂದಾಗಿದ್ದೀರಿ, ಇದು ನಿಮ್ಮ ಸ್ಥಾನಕ್ಕೆ ಶೋಭೆ ತರುವುದಿಲ್ಲ. ಎರಡು ಬಾರಿ ನೀವು ತಂದೆ ಸಾವಿನ ಅನುಕಂಪದಿಂದ ಗೆದ್ದಿದ್ದೀರಿ, ಮುಂಬರುವ ಚುನಾವಣೆಯಲ್ಲಿ ಸೋಲು ಅನುಭವಿಸುತ್ತೀರಿ. ಮತದಾರರು ನಿಮ್ಮನ್ನು ಮನೆಗೆ ಕಳಿಸುತ್ತಾರೆ, ಹೋಗಲು ರೆಡಿಯಾಗಿರಿ ಎಂದು ವೆಂಕಟೇಶ್ ಭವಿಷ್ಯ ನುಡಿದರು.
ಜೆಡಿಎಸ್ ಮುಖಂಡ ಯತೀಶ್ ಕುಮಾರ್ ಮಾತನಾಡಿ, ತಾಲೂಕಿನಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ-ಜೆಡಿಎಸ್ ಒಟ್ಟಾಗಿ ಟಿಎಪಿಸಿಎಂಎಸ್ ನಿರ್ದೇಶಕರ ಚುನಾವಣೆ ಎದುರಿಸುತ್ತಿದ್ದೀವಿ. ಇದನ್ನ ಸಹಿಸಲಾರದೆ ಶಾಸಕ ಅನಿಲ್ ಚಿಕ್ಕಮಾದು ಹಿಂಬಾಗಿಲಿನ ರಾಜಕಾರಣ ಮಾಡುತ್ತಿದ್ದಾರೆ. ಕ್ಯಾತನಹಳ್ಳಿ, ಮನುಗನಹಳ್ಳಿ ಸೊಸೈಟಿಗಳಲ್ಲಿ ಎನ್ ಡಿಎ ಬೆಂಬಲಿತ ಡೆಲಿಗೇಟ್ ಗಳಿಗೆ ಹಣದ ಆಮಿಷವೊಡ್ಡಿ, ಬಲವಂತವಾಗಿ ರಾಜೀನಾಮೆ ಕೊಡಿಸುವ ಮೂಲಕ ಸೂಪರ್ ಸೀಡ್ ಮಾಡಲು ಮುಂದಾಗಿದ್ದಾರೆ. ಶಾಸಕರು ನೇರವಾಗಿ ರಾಜಕೀಯ ಮಾಡೋದನ್ನು ಬಿಟ್ಟು, ಈ ರೀತಿಯ ಕೀಳುಮಟ್ಟದ ರಾಜಕಾರಣ ಮಾಡುತ್ತಿರುವುದು ತಾಲೂಕಿನ ಇತಿಹಾಸದಲ್ಲೇ ಇದೆ ಮೊದಲು ಎಂದು ಆರೋಪಿಸಿದರು.
ಈ ವೇಳೆ ಜೆಡಿಎಸ್ ತಾಲೂಕು ಅಧ್ಯಕ್ಷ ರಾಜೇಂದ್ರ, ಗುಂಡತ್ತೂರು ಪ್ರಕಾಶ್, ಮೊತ್ತ ಬಸವರಾಜಪ್ಪ, ಗುರುಸ್ವಾಮಿ, ಯತೀಶ್ ಕುಮಾರ್, ಪ್ರಕಾಶ್ ಗಂಗಡ ಹೊಸಹಳ್ಳಿ, ಅರವಿಂದ, ನವೀನ್, ಪ್ರಕಾಶ್, ಕೃಷ್ಣೇಗೌಡ, ಕುನ್ನೇಗೌಡ, ನೂರ್ ಮಹಮ್ಮದ್ , ಭುಜಂಗನಾಯಕ, ಮಾದಯ್ಯ, ವೈಲಾ, ಶಿವಮಲ್ಲಪ್ಪ, ಶುಭಮಂಗಳ ಸೇರಿದಂತೆ ಬಿಜೆಪಿ, ಜೆಡಿಎಸ್ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

