Author: editor.udayarashmi@gmail.com

ವಿಜಯಪುರ: ದೇಶದ್ಯಾಂತ ಇಂಡಿಯಾ ಟುಡೆ ಆಂಗ್ಲ ವಾರಪತ್ರಿಕೆ ಮತ್ತು ಎಂ. ಡಿ. ಆರ್. ಎ ಸಂಸ್ಥೆ ಜಂಟಿಯಾಗಿ ನಡೆಸಿದ ವೈದ್ಯಕೀಯ ವಿವಿಗಳ ಸಮೀಕ್ಷೆಯಲ್ಲಿ ಅತ್ಯುತ್ತಮ ವಿವಿ ಗಳ ಪಟ್ಟಿ ಸಿದ್ದಪಡಿಸಿದ್ದು, ದೆಹಲಿಯ ಏಮ್ಸ್ ಸಂಸ್ಥೆ ಪ್ರಥಮ ಸ್ಥಾನ, ಪಾಂಡಿಚೇರಿಯ ಜಿಪ್‌ಮೇರ್ ವಿವಿ ದ್ವಿತೀಯ, ಲಕ್ನೋದ ಕಿಂಗ್ ಜಾರ್ಜ್ ತೃತೀಯ ಸ್ಥಾನ ಹಾಗೂ ಬೆಂಗಳೂರಿನ ನಿಮಾನ್ಸ್ ಚಥುರ್ತ ಸ್ಥಾನ ಪಡೆದುಕೊಂಡಿದೆ. ಇದೇ ಪಟ್ಟಿಯಲ್ಲಿ ಇಡೀ ದೇಶದಲ್ಲಿಯೇ ವಿಜಯಪುರದ ಬಿ.ಎಲ್.ಡಿ.ಇ ಡೀಮ್ಡ್ ವಿವಿ 13ನೇ ಸ್ಥಾನ ಪಡೆದಿರುವುದು ಸಂತಸ ತಂದಿದೆ.ವೈದ್ಯಕೀಯ ಕ್ಷೇತ್ರದಲ್ಲಿನ ಸಂಶೋಧನೆಗಳು, ವಿಶ್ವವಿದ್ಯಾಲಯ ಅಗತ್ಯ ಮೂಲಭೂತ ಸೌಕರ್ಯಗಳು, ಸುಸಜ್ಜಿತ ಆಸ್ಪತ್ರೆ, ವಿದ್ಯಾರ್ಥಿಗಳ ಕಲಿಕೆ ಕ್ರಮ, ನುರಿತ ಬೋಧಕರು, ರಾಷ್ಟ್ರೀಯ, ಅಂತರ್ ರಾಷ್ಟ್ರೀಯ ಎಲ್ಲ ಮಾನದಂಡಗಳನ್ನು ಅಳವಡಿಸಿಕೊಂಡಿರುವದು ಈ ಸಾಧನೆಗೆ ಕಾರಣವಾಗಿದೆ ಎಂದು ಉಪಕುಲಪತಿ ಡಾ.ಆರ್. ಎಸ್. ಮುಧೋಳ ಹರ್ಷ ವ್ಯಕ್ತಪಡಿಸಿದ್ದಾರೆ.ಹಿರಿಯ ನಾಗರಿಕರಿಗೆ ಪ್ರತ್ಯೇಕ ಚಿಕಿತ್ಸಾ ವಿಭಾಗಕ್ಕೆ ರಾಜ್ಯ ಸರಕಾರದಿಂದ ಹಾಗೂ ವಿಕಲಚೇತನರಿಗೆ ಪ್ರತ್ಯೇಕ ಕೃತಕ ಅಂಗಾಂಗ ಜೋಡಣೆ ಕೇಂದ್ರಕ್ಕೆ ರಾಜ್ಯ ಹಾಗೂ ಕೇಂದ್ರ…

Read More

ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ನಡೆದ ವಿಶೇಷ ಉಪನ್ಯಾಸ ವಿಜಯಪುರ: ವಿದ್ಯಾರ್ಥಿಗಳಿಗೆ ಕಾನೂನಿನ ಅರಿವು ಅವಶ್ಯಕವಾಗಿದೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತ ಮತ್ತು ಭಾರತೀಯ ಸಾಕ್ಷಾ ಅಧೀನಿಯಮಗಳ ಬಗ್ಗೆ ಅರಿವು ಅವಶ್ಯಕವಾಗಿದೆ ಎಂದು ನಗರದ ಅಂಜುಮನ್ ಕಾನೂನು ವiಹಾವಿದ್ಯಾಲಯದ ಸಹಾಯಕ ಪ್ರಾದ್ಯಾಪಕರಾದ ಉಜ್ವಲ ಎ.ಸಿರಿನಾಡಗೌಡ ಪಾಟೀಲ ಹೇಳಿದರು.ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎಸ್ ಬಿ ಕಲಾ ಹಾಗೂ ಕೆಸಿಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ ಮತ್ತು ರಾಜ್ಯಶಾಸ್ತ್ರ ವಿಭಾಗ ಸಂಯೋಜನಡಿಯಲ್ಲಿ ದಿನಾಂಕ ೨೬-೦೭-೨೦೨೪ ರಂದು ಜರುಗಿದ ‘ಮಿಥ್ಸ್ ಆಂಡ್ ಟ್ರುಥ್ ಭಾರತೀಯ ನ್ಯಾಯ ಸನ್ಹಿತ’ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರದಲ್ಲಿ ಮಾತನಾಡಿದ ಅವರು ಕಾನೂನಿನ ಮಹತ್ವ ಮತ್ತು ಅದರ ಅವಶ್ಯಕತ ಅದರಂತೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತ ಮತ್ತು ಭಾರತೀಯ ಸಾಕ್ಷಾ ಅಧೀನಿಯಮಗಳ ಬಗ್ಗೆ ಕ್ರಮವಾಗಿ ತಿಳಿಸಿದರು. ಭಾರತೀಯ ನಾಗರಿಕ ಸುರಕ್ಷಾ ಸಂಹಿತ ಮತ್ತು ಭಾರತೀಯ ಸಾಕ್ಷಾ ಅಧೀನಿಯಮಗಳ ಐಪಿಸಿ ಇದು ಸಾರ್ವಜನಿಕರಿಗೆ ಹೇಗೆ ಸಹಾಯವಾಗಿದೆ, ಅದರಲ್ಲಿನ ಸಮಸ್ಯೆಗಳನ್ನು ನಿವಾರಿಸಿಕೊಳ್ಳುವುದು ಹೇಗೆ…

Read More

ಮಾನವ ಕಳ್ಳ ಸಾಗಾಣಿಕೆ ತಡೆ ಕಾರ್ಯಕ್ರಮದಲ್ಲಿ ನ್ಯಾಯಾಧೀಶ ರವೀಂದ್ರಕುಮಾರ ಅಭಿಮತ ಮುದ್ದೇಬಿಹಾಳ: ಮಾನವ ಕಳ್ಳ ಸಾಗಾಣಿಕೆ ಕಾನೂನು ರೀತ್ಯ ಅಪರಾಧ. ಈ ಅಪರಾಧವನ್ನು ತಡೆಯುವಲ್ಲಿ ಸಾರ್ವಜನಿಕರ ಜವಾಬ್ದಾರಿ ಜಾಸ್ತಿ ಇದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ರವೀಂದ್ರಕುಮಾರ ಕಟ್ಟಿಮನಿ ಹೇಳಿದರು.ಪಟ್ಟಣದ ನ್ಯಾಯಾಲಯದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ ಹಾಗೂ ಇತರ ಎಲ್ಲ ಸರಕಾರಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾನವ ಕಳ್ಳ ಸಾಗಾಣಿಕೆ ತಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಚಿಕ್ಕ ಮಕ್ಕಳನ್ನ, ಹೆಣ್ಣು ಮಕ್ಕಳನ್ನ ಕದ್ದು ಮಾರಾಟ ಮಾಡಿ ಬೇರೆ ಚಟುವಟಿಕೆಗಳಲ್ಲಿ ತೊಡಗಿಸುತ್ತಿರುವ ಪ್ರಕರಣ ಜಾಸ್ತಿಯಾಗಿದ್ದರಿಂದ ಕಾನೂನು ಸೇವಾ ಪ್ರಾಧಿಕಾರದವತಿಯಿಂದ ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆಯನ್ನು ಆಚರಿಸುವ ಮೂಲಕ ಜಾಗೃತಿ ನೀಡಲಾಗುತ್ತಿದೆ. ಮಾನವನಿಗೆ ಜೀವಿಸಲು ಸಂವಿಧಾನದಲ್ಲಿ ಅವಕಾಶ ನೀಡಲಾಗಿದೆ. ಅದನ್ನ ಯಾರಿಂದಲೂ ಕಸಿದುಕೊಳ್ಳಲು ಕಾನೂನಿನಲ್ಲಿ ಅವಕಾಶಗಳಿಲ್ಲ. ಸಾರ್ವಜನಿಕರು ಇಂತಹ ಪ್ರಕರಣಗಳನ್ನು ಕಂಡಲ್ಲಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡುವ ಮೂಲಕ ಮಾನವ ಕಳ್ಳ ಸಾಗಾಣಿಕೆಯನ್ನು ತಡೆಯಬೇಕು ಎಂದರು.ಈ ವೇಳೆ…

Read More

– ಗುಲಾಬಚಂದ ಜಾಧವಜಮಖಂಡಿ: ತಾಲೂಕಿನ ಚಿಕ್ಕಪಡಸಲಗಿ ಗ್ರಾಮದ ಸನಿಹದಲ್ಲೇ ಹರಿಯುತ್ತಿರುವ ಕೃಷ್ಣಾನದಿಯಲ್ಲಿ ಮಂಗಳವಾರ ಸಂಜೆ ಜಲರಾಶಿಯ ವ್ಯಯಾರ ಬಲು ಜೋರಾಗಿದೆ.ಇದರಿಂದ ಶ್ರಮಬಿಂದು ಡ್ಯಾಂ ನೀರಿನಿಂದ ತುಂಬಿ ತುಳುಕುತ್ತಿದೆ. ವಿಜಯಪುರ-ಜಮಖಂಡಿ ಮಧ್ಯೆ ಸಂಪರ್ಕ ಕಲ್ಪಿಸವ ಹಳೆಯದಾದ ಈ ಸೇತುವೆ ಕೆಳಗೆ ಈಗ ಜಲ ವೈಭವದ ಮೋಹಕ ನೋಟ ಹೃನ್ಮನ ತಣಿಸುತ್ತಿದೆ. ಅಪಾರ ಪ್ರಮಾಣದ ನೀರು ಕೃಷ್ಣಾನದಿಯಲ್ಲಿ ಕಂಗೊಳಿಸುತ್ತಿದೆ. ಸೇತುವೆ ಕೆಳಗೆ ನೀರಿನ ಅಲೆಗಳ ಸದ್ದು ಕ್ಷಣಕ್ಷಣವೂ ಹೆಚ್ಚಾಗಿದೆ. ಸೇತುವೆ ಮೇಲೆ ನೀರು ಬರಲು ಇನ್ನೂ ಭಾಗಶಃ 2.5 ಅಡಿ ಮಾತ್ರ ಬಾಕಿ ಇದೆ ಎನ್ನಲಾಗುತ್ತಿದೆ. ರಭಸದಿಂದ ಹರಿಯುತ್ತಿರುವ ನೀರಿನ ಅಲೆಗಳು ಪುಟಿದೆದ್ದು ಸೇತುವೆಗೆ ಅಪ್ಪಳಿಸುತ್ತಿದೆ. ಸೇತುವೆ ಮೇಲೆ ಜಲ ಸಿಂಚನದ “ಸ್ಪ್ರೈ” ಹನಿಗಳ ಚಿತ್ತಾರ ಅಗಾಗ ಮೂಡಿ ಬರುತ್ತಿದ್ದು ನೋಡುಗರ ಕಣ್ಮನ ಹಸಿಗೊಳಿಸಿ ಉಲ್ಲಾಸಮಯದಿಂದ ತೇಲುವಂತೆ ಮಾಡುತ್ತಿದೆ. ಗ್ರಾಮದ ಜಲ ಪ್ರೇಮಿಗಳು ಖುಷಿಯಿಂದ ಸೇತುವೆಯತ್ತ ತೆರಳಿ ಜಲರಾಶಿಯ ವೈವಿಧ್ಯಮಯ ದೃಶ್ಯ ಕಾವ್ಯವನ್ನು ತಮ್ಮ ಕಂಗಳಲ್ಲಿ ಸೆರೆ ಹಿಡಿದು ಸಂತಸದಿಂದ ನಿಟ್ಟುಸಿರು ಬಿಡುತ್ತಿದ್ದಾರೆ. ಅಬ್ಬಬ್ಬಾ…

Read More

ವಿಜಯಪುರ: ಭಾರತೀಯರು ಶಾಂತಿ ಪ್ರಿಯರು. ಯಾವ ದೇಶದ ಮೇಲೂ ಯುದ್ಧವನ್ನು ಸಾರಿಲ್ಲ. ಯುದ್ಧಕ್ಕೆ ಬಂದ ದೇಶವನ್ನು ಸೋಲಿಸದೆ ಬಿಟ್ಟಿಲ್ಲ. ಇಂದು ಭಾರತ ವಿಶ್ವದಲ್ಲಿಯೇ ಶಕ್ತಿಯುತ ರಾಷ್ಟ್ರ ಎಂದು ಶರಣಯ್ಯ. ಎಸ್. ಭಂಡಾರಿಮಠ ಹೇಳಿದರು.ನಗರದ ಪ್ರತಿಷ್ಠಿತ ಎಸ್. ಬಿ. ವಿಸ್ಢಮ್ ಕರಿಯರ್ ಅಕ್ಯಾಡೆಮಿಯಲ್ಲಿ ಜರುದಿದ ಕಾರ್ಗೀಲ್ ವಿಜಯ ದಿವಸ ಹಾಗೂ ಮಾಜಿ ಸೈನಿಕರಿಗೆ ಸನ್ಮಾನ ಸಮಾರಂಭದ ಅಧ್ಯಕ್ಷ ಸ್ಥಾನ ವಹಿಸಿಕೊಂಡು ಮಾತನಾಡಿದರು.ಮುಖ್ಯ ಅತಿಥಿಯಾಗಿ ಮಾತನಾಡಿದ ನ್ಯಾಯವಾದಿ ಚಂದ್ರಕಾಂತ ಉಂಡೋಡಿ ಜುಲೈ ೨೬ ಪ್ರತಿ ಭಾರತೀಯರು ಸ್ಮರಿಸಬೇಕಾದ ದಿನ. ಶತ್ರುರಾಷ್ಟ್ರದ ದಾಳಿಯಿಂದ ಸಂಕಷ್ಟದಲ್ಲಿದ್ದ ಭಾರತಾಂಬೆಯನ್ನು ನಮ್ಮ ಸೈನಿಕರು ರಕ್ಷಿಸಿದ ರೀತಿ ರೋಮಾಂಚನವನ್ನು ಉಂಟುಮಾಡುತ್ತದೆ. ಯಾವ ಭಾರತೀಯರೂ ಕಾರ್ಗಿಲ್ ಯುದ್ಧವನ್ನು ಮರೆಯಲು ಸಾಧ್ಯವೇ ಇಲ್ಲ. ಈ ಯುದ್ಧದಲ್ಲಿ ಭಾರತೀಯ ಸೈನಿಕರು ಕೆಚ್ಚೆದೆಯಿಂದ ಹೋರಾಡಿ ತನ್ನ ದೇಶದ ಘನತೆ, ಸಾಹಸವನ್ನು ಎತ್ತಿ ಹಿಡಿದಿದ್ದರು. ಇವರ ತ್ಯಾಗ, ಬಲಿದಾನ, ದೇಶಪ್ರೇಮ ಖಂಡಿತಾ ಎಲ್ಲಾ ಭಾರತೀಯರಿಗೂ ಸ್ಫೂರ್ತಿ, ದಾರಿದೀಪ ಎಂದು ಹುತಾತ್ಮರಾದ ಯೋದರನ್ನು ಸ್ಮರಿಸಿಕೊಂಡರು.ಇದೇ ಸಮಯದಲ್ಲಿ ಮಾಜಿ ಸೈನಿಕರಾದ ಸಂಗಮೇಶ…

Read More

ಆಲಮಟ್ಟಿ: ಬೆಳಗಾವಿ , ಬಾಗಲಕೋಟೆ ಜಿಲ್ಲೆಯಲ್ಲಿ ಪ್ರವಾಹ ಸೃಷ್ಟಿಯಾಗುತ್ತಿದ್ದು, ಮುಂಜಾಗ್ರತೆಯ ಕ್ರಮವಾಗಿ ಆಲಮಟ್ಟಿ ಜಲಾಶಯದ ಹೊರಹರಿವು ಮಂಗಳವಾರ ರಾತ್ರಿ 8 ಗಂಟೆಯಿಂದ 3,50,000 ಕ್ಯುಸೆಕ್ ಗೆ ಹೆಚ್ಚಿಸಲಾಗಿದೆ.ಸೋಮವಾರದಿಂದ 3 ಲಕ್ಷ ಕ್ಯುಸೆಕ್ ಇದ್ದ ಹೊರಹರಿವನ್ನು ಮಂಗಳವಾರ ರಾತ್ರಿ ಹೆಚ್ಚಿಸಲಾಯಿತು.ಇದರಿಂದ ಆಲಮಟ್ಟಿ ಜಲಾಶಯದ ಮುಂಭಾಗದ ಕೃಷ್ಣಾ ತೀರ ಪ್ರದೇಶದ 100 ಕ್ಕೂ ಹೆಚ್ಚು ಎಕರೆ ಪ್ರದೇಶಕ್ಕೆ ನೀರು ನುಗ್ಗುವ ಸಾಧ್ಯತೆ ದಟ್ಟವಾಗಿದೆ.ಮತ್ತಷ್ಟು ಜಮೀನುಗಳಿಗೆ ನೀರು , ಯಲಗೂರ, ಮಸೂತಿ ಗ್ರಾಮದ ಸುಮಾರು 100 ಎಕರೆ ಜಮೀನು ಜಲಾವೃತಗೊಂಡಿದ್ದು ಅಲ್ಲಿಯ ಕಬ್ಬು, ತೊಗರಿ ಬೆಳೆ ಜಲಾವೃತಗೊಂಡಿದೆ.ಮಹಾರಾಷ್ಟ್ರದ ಮಳೆಯ ಕಾರಣ ಆಲಮಟ್ಟಿ ಜಲಾಶಯದ ಒಳಹರಿವು 3 ಲಕ್ಷ ಕ್ಯುಸೆಕ್ ಇದೆ.519.6 ಮೀ ಗರಿಷ್ಠ ಎತ್ತರದ ಆಲಮಟ್ಟಿ ಜಲಾಶಯದ ಮಟ್ಟ ಮತ್ತಷ್ಟು ಕಡಿಮೆಯಾಗಿದ್ದು, 515.50 ಮೀಗೆ ತಲುಪಿದೆ. 123 ಟಿಎಂಸಿ ಅಡಿ ಗರಿಷ್ಠ ಎತ್ತರದ ಜಲಾಶಯದಲ್ಲಿ 68 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ.

Read More

ವಿಜಯಪುರ: ಬಸವನ ಬಾಗೇವಾಡಿ ತಾಲೂಕಿನ ಮಟ್ಟಿಹಾಳ ೧೧೦/೧೧ ಕೆವಿ ವಿದ್ಯುತ್ ವಿತರಣಾ ಉಪ ಕೇಂದ್ರದಲ್ಲಿ ಈಗಾಗಲೇ ಅಳವಡಿಸಿದ ಎಂವಿಎ ಶಕ್ತಿ ಪರಿವರ್ತಕದ ಕಾಮಗಾರಿ ಕೈಗೆತ್ತಿಕೊಂಡಿರುವುದರಿಂದ ಮಾರ್ಗ ಮುಕ್ತತೆಯನ್ನು ಪಡೆದುಕೊಳ್ಳಲಾಗಿದೆ. ೧೧೦ ಕೆವಿ ಮಟ್ಟಿಹಾಳ ಉಪ ಕೇಂದ್ರದ ೧೧ ಕೆವಿ ಮಾರ್ಗಗಳಲ್ಲಿ ಜುಲೈ ೩೧ ರಂದು ಬೆಳಗ್ಗೆ ೧೦ ರಿಂದ ಸಂಜೆ ೪ ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಬಸವನ ಬಾಗೇವಾಡಿಯ ಹೆಸ್ಕಾಂನ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ವಿಜಯಪುರ: ಹಲಸಂಗಿ ಗೆಳೆಯರ ಪ್ರತಿಷ್ಠಾನ ವತಿಯಿಂದ ಜುಲೈ ೩೧ರಂದು ಬೆಳಗ್ಗೆ ೧೦ ಗಂಟೆಗೆ ಬಾಲಕಿಯರ ಸರಕಾರಿ ಪದವಿಪೂರ್ವ ಕಾಲೇಜಿನ ಶಾರಾದಾ ಸಭಾ ಭವನದಲ್ಲಿ ಮಧುರ ಚೆನ್ನರ ೧೨೧ನೇ ಜನ್ಮ ದಿನಾಚರಣೆ ಹಮ್ಮಿಕೊಳ್ಳಲಾಗಿದೆ.ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಡಾ.ಸಿ.ಕೆ. ಹೊಸಮನಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸಾಹಿತಿ ಡಾ. ಸಂಗಮನಾಥ ಲೋಕಾಪುರ ಉಪನ್ಯಾಸ ನೀಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಸಿ.ಬಿ ನಾಟೀಕಾರ ಅವರು ವಹಿಸಲಿದ್ದಾರೆ. ಶ್ರೀಮತಿ ಶ್ರೀದೇವಿ ಪತ್ತಾರ ಸುಗಮ ಸಂಗೀತ ನಡೆಸಿಕೊಡಲಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ಭೋವಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಜುಲೈ ೩೧: ರೈತರಿಗೆ ಆನ್‌ಲೈನ್ ತರಬೇತಿ ವಿಜಯಪುರ: ಜಿಲ್ಲಾ ಕೃಷಿ ತರಬೇತಿ ಕೇಂದ್ರದ ವತಿಯಿಂದ ಜುಲೈ ೩೧ರಂದು ಮಧ್ಯಾಹ್ನ ೧೨ಕ್ಕೆ ‘೨೦೨೪-೨೫ನೇ ಸಾಲಿನ ರೈತರ ಬೆಳೆ ಸಮೀಕ್ಷೆ ಆ್ಯಪ್ ಕುರಿತು ಆನ್‌ಲೈನ್ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆಸಕ್ತರು ಕ್ಯೂಆರ್ ಕೋಡ್, ಗೂಗಲ್ ಮೀಟ್ ಲಿಂಕ್ ಬಳಸಿ(https://meet.google.com/xyj-juqo-mxy) ತರಬೇತಿಗೆ ಹಾಜರಾಗಬಹುದು, ಹೆಚ್ಚಿನ ಮಾಗಿತಿಗಾಗಿ ಕೃಷಿ ಅಧಿಕಾರಿ ಶ್ರೀಮತಿ ಫಾತೀಮಾ ಬಾನು ಸುತಾರ (ಮೊ:೯೮೮೬೧೩೪೩೧೦) ಸಂಪರ್ಕಿಸಬಹುದೆಂದು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಉಪ ಕೃಷಿ ನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Read More

ವಿಜಯಪುರ: ಆಗಸ್ಟ್ ೨ರಿಂದ ಆಗಸ್ಟ್ ೯ರವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ-೩ರ ಪರೀಕ್ಷೆ ಜರುಗಲಿದ್ದು, ಎಲ್ಲಾ ಸಂಬಂಧಿಸಿದ ಅಧಿಕಾರಿಗಳು ಅಗತ್ಯ ಸಿದ್ಧತೆಗಳನ್ನು ಕೈಗೊಂಡು ಪರೀಕ್ಷೆಗಳನ್ನು ವ್ಯವಸ್ಥಿತವಾಗಿ ಹಾಗೂ ಸುಸೂತ್ರವಾಗಿ ನಡೆಸಲು ಕ್ರಮವಹಿಸುವಂತೆ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.ಮಂಗಳವಾರ ಜಿಲ್ಲಾ ಪಂಚಾಯತಿಯ ಸಭಾಂಗಣದಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆ-೩ರ ಸಿದ್ಧತಾ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಪರೀಕ್ಷೆಗೆ ನಿಯೋಜಿಸಿದ ವಿವಿಧ ಇಲಾಖೆಯ ಅಧಿಕಾರಿಗಳು ಸಮನ್ವಯದಿಂದ ಯಾವುದೇ ಲೋಪವಾಗದಂತೆ ವ್ಯವಸ್ಥಿತವಾಗಿ ಪರೀಕ್ಷೆ ನಿರ್ವಹಿಸಬೇಕು ಎಂದು ಹೇಳಿದರು.ಜಿಲ್ಲೆಯಲ್ಲಿ ೧೩ ಪರೀಕ್ಷಾ ಕೇಂದ್ರಗಳಲ್ಲಿ ಆಗಸ್ಟ್ ೨ರಿಂದ ಆಗಸ್ಟ್ ೯ರವರೆಗೆ ನಡೆಯುವ ಪರೀಕ್ಷೆಯಲ್ಲಿ ೩,೨೬೫ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊAಡಿದ್ದಾರೆ. ಪರೀಕ್ಷಾ ಕೇಂದ್ರದಲ್ಲಿ ನಿಯೋಜನೆಗೊಂಡ ಅಧಿಕಾರಿಗಳು ಕಡ್ಡಾಯವಾಗಿ ಮೊಬೈಲ್ ಬಳಸುವುದನ್ನು ನಿಷೇಧಿಸಲಾಗಿದೆ ಎಂದು ಹೇಳಿದರು.ಪರೀಕ್ಷೆ ನಡೆಯುವ ದಿನದಂದು ಪರೀಕ್ಷಾ ಕೇಂದ್ರದ ೨೦೦ ಮಿಟರ್ ಸುತ್ತಲಿನ ಪ್ರದೇಶವನ್ನು ಕಲಂ ೧೬೩ರ ಪ್ರಕಾರ ನಿಷೇಧಿತ ಪ್ರದೇಶವೆಂದೂ ಘೊಷಿಸಲಾಗಿದ್ದು, ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ ಜೆರಾಕ್ಸ್ ಅಂಗಡಿಗಳು, ಕಂಪ್ಯೂಟರ್ ಸೆಂಟರ್, ಸೈಬರ್…

Read More