Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ದಿ ಖಾತೆ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಂ.ಬಿ.ಪಾಟೀಲ ಅವರು ಮಾ.೨೩ ಹಾಗೂ ೨೪ ರಂದು ವಿಜಯಪುರ ಜಿಲ್ಲಾ ಪ್ರವಾಸ ಕೈಗೊಂಡು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.ಮಾ.೨೩ರಂದು ಬೆಳಿಗ್ಗೆ ೧೧ ಗಂಟೆಗೆ ತಿಕೋಟಾ ವಾಡೆ ಆವರಣದಲ್ಲಿ ಹಮ್ಮಿಕೊಂಡ ತಿಕೋಟಾ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಸಂಜೆ ೬-೨೦ಕ್ಕೆ ನಗರದ ಕಿತ್ತೂರ ರಾಣಿ ಚೆನ್ನಮ್ಮ ಮಾರುಕಟ್ಟೆಯಲ್ಲಿ ಏರ್ಪಡಿಸಿರುವ ಇಫ್ತಿಹಾರ ಕೂಟದಲ್ಲಿ ಭಾಗವಹಿಸಲಿದ್ದಾರೆ. ರಾತ್ರಿ ೭.೧೫ಕ್ಕೆ ಕಣಮುಚನಾಳದಲ್ಲಿ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ವಿಜಯಪುರದಲ್ಲಿ ವಾಸ್ತವ್ಯ ಮಾಡಲಿದ್ದಾರೆ.ಮಾ.೨೪ರಂದು ಬೆಳಿಗ್ಗೆ ೧೦ ಗಂಟೆಗೆ ಮದಗುಣಕಿ ಗ್ರಾಮದಲ್ಲಿ ೪ ಕೋಟಿ ರೂ. ಅನುದಾನದಲ್ಲಿ ಶೇಗುಣಸಿ-ಮದಗುಣಕಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ಹಾಗೂ ಸಿ.ಎಸ್.ಆರ್. ೬೦ ಲಕ್ಷ ರೂ. ಅನುದಾನದಕಲ್ಲಿ ಶಾಲಾ ಕಟ್ಟಡದ ೫ ಕೊಠಗಿಳ ನವೀಕರಣಕ್ಕೆ ಮದಗುಣಕಿ ಸರಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಭೂಮಿ ಪೂಜೆ ನೆರವೇರಿಸಲಿದ್ದಾರೆ. ಬೆಳಿಗ್ಗೆ ೧೧ ಗಂಟೆಗೆ ಬೆಳ್ಳುಬ್ಬಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್…
ಸಾರ್ವಜನಿಕರು ಜಮೀನು-ಆಸ್ತಿ ಖರೀದಿಸುವಾಗ ಎಚ್ಚರಿಕೆ ವಹಿಸಿ | ವಿಜಯಪುರ ಜಿಲ್ಲಾಧಿಕಾರಿ ಟಿ.ಭೂಬಾಲನ್ ಸಲಹೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯ ತಿಕೋಟಾ ತಾಲೂಕಿನ ಇಟ್ಟಂಗಿಹಾಳ ಗ್ರಾಮದ ವ್ಯಾಪ್ತಿಯಲ್ಲಿ ಒತ್ತುವರಿಯಾಗಿರುವ ಅಂದಾಜು ೨೦ ಕೋಟಿ ರೂ. ಮೌಲ್ಯದ ಸರ್ಕಾರಿ ಜಮೀನನ್ನು ಒತ್ತುವರಿ ತೆರವುಗೊಳಿಸಿ ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ತಿಳಿಸಿದ್ದಾರೆ.ಇಟ್ಟಂಗಿಹಾಳ ಗ್ರಾಮದ ವ್ಯಾಪ್ತಿಯ ಅಂದಾಜು ೨೦ ಕೋಟಿ ರೂ. ಮೌಲ್ಯದ ಸರ್ಕಾರಿ ಜಮೀನನ್ನು ಕೆಲವರು ಅತಿಕ್ರಮಣ ಮಾಡಿಕೊಂಡು ಸದರಿ ಸರ್ಕಾರಿ ಜಮೀನನ್ನು ಮೋಸ ಮಾಡಿ ಮಾರಾಟ ಮಾಡುತ್ತಿರುವ ಬಗ್ಗೆ ತಿಳಿದು ಬಂದ ಹಿನ್ನಲೆಯಲ್ಲಿ ಮಾ.೨೨ರಂದು ವಿಜಯಪುರ ಉಪವಿಭಾಗಾಧಿಕಾರಿಗಳು, ತಿಕೋಟಾ ತಹಶೀಲ್ದಾರರನ್ನೊಳಗೊಂಡು ಕಂದಾಯ ಇಲಾಖೆ, ಪೊಲೀಸ್ ಇಲಾಖೆಯೊಂದಿಗೆ ಅತಿಕ್ರಮಣ ಕಾರ್ಯಾಚರಣೆ ಕೈಗೊಂಡು ಒತ್ತುವರಿಯಾದ ಜಾಗವನ್ನು ತೆರವುಗೊಳಿಸಿ ಸರ್ಕಾರಿ ಜಾಗವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.ಸರ್ಕಾರಿ ಜಮೀನನ್ನು ಯಾರೂ ಅತಿಕ್ರಮಣ ಮಾಡಬಾರದು. ಸಾರ್ವಜನಿಕರು ಸಹ ಜಮೀನು-ಆಸ್ತಿ ಖರೀದಿಸುವಾಗ ಎಚ್ಚರಿಕೆ ವಹಿಸಬೇಕು. ಯಾರಾದರೂ ಮೋಸ ಹೋದಲ್ಲಿ ದೂರು ಸಲ್ಲಿಸಬೇಕು. ಜಮೀನು ಒತ್ತುವರಿ ಮಾಡಿಕೊಂಡಿರುವವರ ಮೇಲೆ ಕಾನೂನು ರಿತ್ಯ ಕ್ರಿಮಿನಲ್…
ತಾಲೂಕಾಡಳಿತದಿಂದ 20 ಕೋಟಿ ರೂ. ಮೌಲ್ಯದ ಸರ್ಕಾರಿ ಜಮೀನು ವಶ | ನೋಟೀಸ್ ನೀಡದೇ ತೆರವು ಕಾರ್ಯಾಚರಣೆ | ವೃದ್ಧರು-ಮಹಿಳೆಯರ ಗೋಳಾಟ ಕೇಳುವವರಿಲ್ಲ ಉದಯರಶ್ಮಿ ದಿನಪತ್ರಿಕೆ ವರದಿ: ಚಂದ್ರಕಾಂತ ಬಿರಾದಾರವಿಜಯಪುರ: ನಗರದ ಹೊರವಲಯದ ಇಟ್ಟಂಗಿಹಾಳ ಎಲ್.ಟಿ ನಂಬರ್ 4 ಮತ್ತು 5ರಲ್ಲಿ ಶನಿವಾರ ಬೆಳ್ಳಂಬೆಳಿಗ್ಗೆ ಆರು ಗಂಟೆಗೆ 5-6 ಜೆಸಿಬಿಗಳ ಗರ್ಜನೆ. ಅಲ್ಲಿಯ ನಿವಾಸಿಗಳಿಗೆ ಇಲ್ಲಿ ಏನಾಗುತ್ತಿದೆ ಎಂದು ಅರಿಯುವುದರೊಳಗೆ ಹಲವು ಶೆಡ್ ಮತ್ತು ಗುಡಿಸಲುಗಳನ್ನು, ಮನೆಗಳನ್ನು ನಿರ್ದಾಕ್ಷಿಣ್ಯವಾಗಿ ನೆಲಸಮ ಮಾಡಿದ್ದರಿಂದ ಆ ವಲಯದಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು.ಬಬಲೇಶ್ವರ ಮತಕ್ಷೇತ್ರಕ್ಕೆ ಒಳಪಟ್ಟಿರುವ, ತಿಕೋಟಾ ತಾಲೂಕು ವ್ಯಾಪ್ತಿಯಲ್ಲಿರುವ ಈ ತಾಂಡಾಗಳು ಸರ್ಕಾರಿ ಗೋಮಾಳ ಜಾಗೆಯಲ್ಲಿದ್ದವು. ಇಲ್ಲಿ ಕಳೆದ ೧೫ – ೨೦ ವರ್ಷಗಳಿಂದ ಸುಮಾರು ೨೫೦ ಕ್ಕೂ ಅಧಿಕ ಬಹುತೇಕ ಲಂಬಾಣಿ ಕುಟುಂಬಗಳು ಸೇರಿದಂತೆ ಪರಿಶಿಷ್ಟ ವರ್ಗದ ಕುಟುಂಬಗಳು ವಾಸವಾಗಿದ್ದವು. ಈಗಿನ ಸರಕಾರದ ಸಚಿವರಾದ ಶಿವಾನಂದ ಪಾಟೀಲರು ಬಬಲೆಶ್ವರ ಶಾಸಕರಿದ್ದಾಗ ಕೆಲವು ಕುಟುಂಬಗಳಿಗೆ ಮನೆಯ ಹಕ್ಕುಪತ್ರ ದೊರಕಿಸಿಕೊಟ್ಟಿದ್ದರು. ಉಳಿದ ಕುಟುಂಬಗಳು ನಮಗೂ ಸಹ…
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ವಿಜಯಪುರ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ತಾಲೂಕು ಆರೋಗ್ಯಾಧಿಕಾರಿ ಡಾ.ಕವಿತಾ ದೊಡಮನಿ ಅವರ ನೇತೃತ್ವದ ತಂಡವು ಶುಕ್ರವಾರ ವಿವಿಧೆಡೆ ಖಾಸಗಿ ದಾಳಿ ಮಾಡಿ ಅಲ್ಲಿನ ವೈದ್ಯರು ನೋಂದಣಿ ಮಾಡದೇ ಇರುವದನ್ನು ಗಮನಿಸಿ ಇವುಗಳನ್ನು ಮುಚ್ಚಿಸಿ ಬಂದ್ ಮಾಡಿತು.ನೋಂದಣಿಯಾಗದೇ ಇರುವ ತಾಲೂಕಿನ ಮುತ್ತಗಿ ಗ್ರಾಮದಲ್ಲಿ ಒಂದು ಕ್ಲಿನಿಕ್, ಅಖಂಡ ತಾಲೂಕಿನ ಕೂಡಗಿಯಲ್ಲಿ ಎರಡು, ಕೊಲ್ಹಾರದಲ್ಲಿರುವ ಮೂರು ಖಾಸಗಿ ಕ್ಲಿನಿಕ್ಗಳನ್ನು ಬಂದ್ ಮಾಡಲಾಯಿತು. ಕೆಪಿಎಂಇ ನೋಂದಣಿ ಮಾಡಿಸಿಕೊಳ್ಳದೇ ಇರುವ ಖಾಸಗಿ ಆಸ್ಪತ್ರೆಗಳನ್ನು ರದ್ದು ಪಡಿಸಿ ಬಂದ್ ಮಾಡಲಾಗುವುದು. ಬಿಎಎಂಎಸ್ ಆದ ವೈದ್ಯರು ಹಸಿರು ಬಣ್ಣದ ಸೈನ್ ಬೋರ್ಡ್, ಎಂಬಿಬಿಎಸ್ ಆದ ವೈದ್ಯರು ನೀಲಿ ಬಣ್ಣದ ಬೋರ್ಡ್ ಅಳವಡಿಸಬೇಕು. ಈ ರೀತಿಯಾಗಿ ಅಳವಡಿಸದೇ ಇರುವರ ವೈದ್ಯರಿಗೆ ಕಾನೂನು ರೀತಿ ದಂಡ ವಿಽಸಲಾಗುವುದು ಎಂದು ತಾಲೂಕಾ ವೈದ್ಯಾಧಿಕಾರಿ ಡಾ.ಕವಿತಾ ದೊಡಮನಿ ಹೇಳಿದರು.ಈ ಸಂದರ್ಭದಲ್ಲಿ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಎಸ್.ಮೇಟಿ, ತಾಲೂಕು ಆಸ್ಪತ್ರೆಯ ಸಿಬ್ಬಂದಿ ತೌಸೀಫ್ ನಾಯ್ಕೋಡಿ ಇದ್ದರು..
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ತಾಲೂಕಿನ ನಾಗೂರ ಗ್ರಾಮ ಆರಾಧ್ಯದೈವ ಯಮನೂರೇಶ್ವರ ಜಾತ್ರೆಯಂಗವಾಗಿ ಗುರುವಾರ ವಿವಿಧ ಕಸರತ್ತಿನ ಸ್ಪರ್ಧೆ, ಜಂಗೀ ಕುಸ್ತಿ ಸ್ಪರ್ಧೆಗಳು ಗಮನ ಸೆಳೆದವು. ಎರಡು ಸ್ಪರ್ಧೆಯಲ್ಲಿ ಅಪಾರ ಜನರು ವೀಕ್ಷಿಸಿ ಸ್ಪರ್ಧಾಳುಗಳನ್ನು ಕೇಕೇ ಹಾಕಿ ಚಪ್ಪಾಳೆ ತಟ್ಟುವ ಮೂಲಕ ಹುರಿದುಂಬಿಸಿದರು.ಬೆಳಗ್ಗೆ ಜರುಗಿದ ಭಾರ ಎತ್ತುವ, ವಿವಿಧ ಕಸರತ್ತಿನ ಸ್ಪರ್ಧೆಯಲ್ಲಿ ವಿವಿಧೆಡೆಗಳಿಂದ ಆಗಮಿಸಿದ್ದ ಪೈಲ್ವಾನರು ಭಾಗವಹಿಸಿದ್ದರು. ಉಸುಕಿನ ಚೀಲ ಎತ್ತುವ ಸ್ಪರ್ಧೆಯಲ್ಲಿ ಜೈ ಹನುಮಾನ ಪಾದನಕಟ್ಟೆ ಪ್ರಥಮ, ವಿಠ್ಠಲ ರಾಮಣ್ಣ ಹಡಲಗಿ ದ್ವಿತೀಯ, ಸಂತೋಷ ಜಟ್ಟಿಗಿ ತೃತೀಯ ಸ್ಥಾನ ಪಡೆದುಕೊಂಡರು. ಒತಗಲ್ಲು ಸ್ಪರ್ಧೆಯಲ್ಲಿ ಶಿವಾನಂದ ಗೋಕಾಕ(ಬಳಬಟ್ಟಿ) ಪ್ರಥಮ, ವಿಠ್ಠಲ ಗುಳೇದಗುಡ್ಡ ದ್ವಿತೀಯ, ಮುತ್ತಪ್ಪ ಕಡ್ಲಿಮಟ್ಟಿ(ನಾಗೂರ) ತೃತೀಯ ಸ್ಥಾನ ಪಡೆದುಕೊಂಡರೆ, ಸಾಗಕಲ್ಲ ಸ್ಪರ್ಧೆಯಲ್ಲಿ ಮುತ್ತು ಬನಹಟ್ಟಿ ಪ್ರಥಮ, ಕಿರಣ ಬಿಸನಾಳ ದ್ವಿತೀಯ, ಸಂತೋಷ ಬಿಸನಾಳ ತೃತೀಯ ಸ್ಥಾನ ಪಡೆದುಕೊಂಡರು. ಚೀಲ ಎತ್ತುವ ಸ್ಪರ್ಧೆಯಲ್ಲಿ ಭೀಮಣ್ಣ ಬಳಬಟ್ಟಿ (ಬಿಸನಾಳ) ಪ್ರಥಮ, ಮಾಳು ಯಾಳವಾರ ದ್ವಿತೀಯ, ಕರಿಯಪ್ಪ ಯಡ್ರಾಮಿ ತೃತೀಯ ಸ್ಥಾನ ಪಡೆದುಕೊಂಡರು.ಸಂಜೆ ಜರುಗಿದ ಜಂಗೀಕುಸ್ತಿ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಬಾಲ್ಯದಲ್ಲಿಯೇ ಸನ್ಯಾಸತ್ವ ಸ್ವೀಕರಿಸಿ, ಸನಾತನ ಧರ್ಮ ಪ್ರಚಾರಕ್ಕೆ ಇಡೀ ದೇಶವನ್ನು ೩ ಬಾರಿ ಸುತ್ತಿ ಉಪದೇಶದ ಮೂಲಕ ಜನರ ಮನಃ ಪರಿವರ್ತಿಸಿದ ಶ್ರೇಯಸ್ಸು ಶಂಕರಾಚಾರ್ಯರಿಗೆ ಸಲ್ಲುತ್ತದೆ ಎಂದು ಶಾರದಾ ಪೀಠದ ಜಗದ್ಗುರು ಶಂಕರಾಚಾರ್ಯ ಶ್ರೀ ವಿಧುಶೇಖರ ಭಾರತಿ ಮಹಾಸ್ವಾಮಿಗಳು ಹೇಳಿದರು.ಸಿಂದಗಿ ಪಟ್ಟಣದ ಭೀಮಾಶಂಕರ ಮಠದಲ್ಲಿ ಜರುಗಿದ ಸುವರ್ಣ ಭಾರತಿ ಭೂಮಿಪೂಜೆ, ಶಿಲಾನ್ಯಾಸ ಮತ್ತು ಭಾರತಿ ಭವನ ನೀಲನಕ್ಷೆ ಅನಾವರಣ ಕಾರ್ಯಕ್ರಮ ನೇರವೇರಿಸಿ ಮಾತನಾಡಿದ ಅವರು, ಅನ್ಯಧರ್ಮಿಗಳ ದಬ್ಬಾಳಿಕೆಯಿಂದ ಭಾರತದಲ್ಲಿ ಹಿಂದು ಧರ್ಮ ನಲುಗಿ ಹೋಗಿದ್ದ ಸಂದರ್ಭದಲ್ಲಿ ಶ್ರೀ ಶಂಕರಾಚಾರ್ಯರು ಅವತರಿಸಿ ಧರ್ಮವನ್ನು ರಚಿಸಿದ್ದಾರೆ. ಶಂಕರಾಚಾರ್ಯರು ದೇಶದ ನಾಲ್ಕು ದಿಕ್ಕಿನಲ್ಲಿ ಶಾರದಾ ಪೀಠದ ಮಠಗಳನ್ನು ಸ್ಥಾಪಿಸಿ ಧರ್ಮ ಪ್ರಚಾರಕ್ಕಾಗಿ ಭರತಖಂಡದಲ್ಲಿ ಪರ್ಯಟನೆ ಮಾಡಿ ಸನಾತನ ಧರ್ಮವನ್ನು ಜಾಗೃತಗೊಳಿಸಿದ್ದಾರೆ. ಅವರ ಹಾದಿಯಲ್ಲಿ ನಾವೆಲ್ಲರೂ ಧರ್ಮದ ಕಾರ್ಯಗಳನ್ನು ಮಾಡುತ್ತಾ ಸಾಗೋಣ ಎಂದರು.ಬಾಕ್ಸ್: ಯುವಕರು ದುಶ್ಚಟಕ್ಕೆ ಬಲಿಯಾಗಿ ಜೀವನ ಹಾಳು ಮಾಡಿಕೊಳ್ಳಬೇಡಿ, ಸನ್ಮಾರ್ಗದಲ್ಲಿ ಸಾಗಿ ಸತಪ್ರಜೆಗಳಾಗಿ ಭವ್ಯ ಭಾರತದ ಕೀರ್ತಿ ಬೆಳೆಗಿಸಬೇಕು. ಯುವ…
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ವೆಬ್ ಕಾಸ್ಟಿಂಗ್ ಅಳವಡಿಸಿದ್ದರೂ ನಕಲು ಮಾಡುತ್ತಿರುವ ವಿದ್ಯಾರ್ಥಿಯನ್ನು ಹಿಡಿಯುವಲ್ಲಿ ಪರೀಕ್ಷಾ ಕರ್ತವ್ಯ ನಿರತ ಸಿಬ್ಬಂದಿ ವಿಫಲರಾದ ಘಟನೆ ಇಲ್ಲಿನ ಎಸ್ಎಸ್ಎಲ್ಸಿ ಪರೀಕ್ಷಾ ಕೇಂದ್ರದಲ್ಲಿ ನಡೆದಿದೆ.ಪರೀಕ್ಷೆ ಬರೆಯುತ್ತಿರುವ ಹಲವು ವಿದ್ಯಾರ್ಥಿಗಳ ಪೈಕಿ ಕೆಲವು ವಿದ್ಯಾರ್ಥಿಗಳು ಅಲ್ಲಲ್ಲಿ ನಕಲು ಮಾಡುತ್ತಿರುವದು ಸಾಮಾನ್ಯವಾಗಿತ್ತು. ನಕಲು ಮಾಡುತ್ತಿರುವ ವಿದ್ಯಾರ್ಥಿಗಳ ಮಾಹಿತಿ ತಿಳಿದಾಗ ವೆಬ್ಕಾಸ್ಟಿಂಗ್ ವೀಕ್ಷಿಸುತ್ತಿರುವ ಸಿಬ್ಬಂದಿ ಆಯಾ ಪರೀಕ್ಷಾ ಕೇಂದ್ರದ ಮುಖ್ಯಸ್ಥರುಗಳಿಗೆ ತಿಳಿಸಿದಾಗ ಚೀಟಿಯನ್ನು ಹೊರಗೆ ಎಸೆಯುವಂತೆ ತಿಳಿಸಿ, ಎಸೆದು ಬಂದ ಬಳಿಕ ಮತ್ತೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿ ಕೊಟ್ಟಿದ್ದಾರೆ. ಇನ್ನು ಒಂದು ಪರೀಕ್ಷಾ ಕೇಂದ್ರದಲ್ಲಂತೂ ವಿದ್ಯಾರ್ಥಿಯೊಬ್ಬ ನಕಲು ಮಾಡುತ್ತಿರುವದಾಗಿ ತಿಳಿದಿದ್ದರೂ ಸಂಬಂಧಿಸಿದ ಸೆಂಟರ್ ನ ಮುಖ್ಯಸ್ಥರಿಗೆ ನಕಲು ಮಾಡುತ್ತಿರುವ ವಿದ್ಯಾರ್ಥಿಯ ಕೊಠಡಿ ಸಿಗಬೇಕಾದರೆ ೨೦ ನಿಮಿಷಗಳ ಕಾಲ ಬೇಕಾಯ್ತು, ಅಲ್ಲಿಗೆ ಪರೀಕ್ಷೆಯ ಅವಧಿ ಮುಗಿದೇ ಹೋಗಿತ್ತು.ಅಧಿಕಾರಿಗಳು ಪರೀಕ್ಷೆಗಳನ್ನು ನಕಲು ಮುಕ್ತ ಮಾಡಬೇಕೆಂದು ಹಲವು ತಂತ್ರಜ್ಞಾನಗಳನ್ನು ಬಳಸಿದ್ದರೂ ನೀವು ಚಾಪೆ ಕೆಳಗೆ ತೂರಿದರೆ ನಾವು ರಂಗೋಲೆ ಕೆಳಗೆ ತೂರ್ತೀವಿ ಅನ್ನೋತರ ನಕಲುಗಳು…
ರಚನೆ-ಡಾ ಶಶಿಕಾಂತ ಪಟ್ಟಣರಾಮದುರ್ಗ ಉದಯರಶ್ಮಿ ದಿನಪತ್ರಿಕೆ ಗೆಳೆಯರೇಇಂದು ವಿಶ್ವ ಕಾವ್ಯ ದಿನನಾನು ಕವಿಯಲ್ಲಒಬ್ಬ ಕಾರ್ಯಕರ್ತಹೋರಾಟಗಾರ ನಾನು ಬರೆಯುವುದುಕವನ ಕಾವ್ಯವಲ್ಲನನ್ನವರ ಕೊಂದು ಬದುಕಿದನೀಚರ ವಿರುದ್ಧನಿತ್ಯ ಅಕ್ಷರಗಳ ದಾಳಿ ನನ್ನೆಲ್ಲ ಕೋಪ ಆಕ್ರೋಶಸಿಟ್ಟು ತಲ್ಲಣ ವೇದನೆಕಳವಳ ಚಿಂತನೆತಳಮಳ ನೋವುಗಳಬರೆದು ಹಂಚುವ ಕರಪತ್ರ ರಾತ್ರಿಯಿಡಿ ಮಲಗದೆಶೋಷಣೆ ವಿರುದ್ಧಲೇಖನಿ ಖಡ್ಗವ ಮಾಡಿಪ್ರತೀಕಾರದ ಘೋಷಣೆನಿಮಗೆ ವರದಿ ಒಪ್ಪಿಸುತ್ತೆನೆ ನಾನಲ್ಲ ಕವಿ ಸಾಹಿತಿರಂಜನೆಗೆ ಬರೆದು ಪ್ರಶಸ್ತಿಗೆಬೆನ್ನು ಬಿದ್ದವನಲ್ಲಬುದ್ಧಬಸವರ ಮಗಕವಿಯಲ್ಲ ನನ್ನ ತಪ್ಪೊಪ್ಪಿಕೊಳ್ಳಿ
ಲೇಖನ- ಸುಧಾ ಪಾಟೀಲವಿಶ್ವಸ್ಥರುಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರ – ಪುಣೆ ಉದಯರಶ್ಮಿ ದಿನಪತ್ರಿಕೆ ಭಾರತದ ಕೋಗಿಲೆ ಎಂದು ಹೆಸರಾದ ಸರೋಜಿನಿ ನಾಯ್ಡು, ಲಕ್ಷಾಂತರ ಜನರನ್ನು ಸ್ವಾತಂತ್ರ್ಯ ಹೋರಾಟಕ್ಕೆ ಸೇರುವಂತೆ ಮಾಡಿದರು. 1925 ರಲ್ಲಿ ಭಾರತದ ರಾಷ್ಟ್ರೀಯ ಕಾಂಗ್ರೆಸ್ಸಿನ ಅಧ್ಯಕ್ಷರಾಗಿದ್ದು ಸ್ವಾತಂತ್ರ್ಯ ಪೂರ್ವದ ಭಾರತದ ಪ್ರಮುಖ ನೇತಾರರಾಗಿದ್ದರು.ಅಘೋರೆನಾಥ್ ಚಟ್ಟೋಪಾಧ್ಯಾಯ ಮತ್ತು ವರದ ಸುಂದರಿ ದೇವಿ ತಂದೆ ತಾಯಿಗಳಿಗೆ 1879ರಲ್ಲಿ ಜನಿಸಿದ ಸರೋಜಿನಿ 8 ಮಕ್ಕಳಲ್ಲಿ ಹಿರಿಯವರು. ಸ್ವಾಭಾವಿಕವಾಗಿ ಇವರು ಓದು ಬರಹ ಮತ್ತು ಪದ್ಯಗಳ ಅಭ್ಯಾಸದಲ್ಲಿ ತೊಡಗಿಸಿಕೊಂಡವರು. ಬೀಜಗಣಿತ ಬೇಸರವೆನಿಸಿದಾಗ ತಮ್ಮ ನೋಟ್ ಬುಕ್ ಗಳಲ್ಲಿ ಪದ್ಯಗಳನ್ನು ಗೀಚುತ್ತಿದ್ದರು.ಇವರ ಪೋಷಕರು 1881 ರಲ್ಲಿ ಹೈದರಾಬಾದ್ ನಲ್ಲಿ ಹೆಣ್ಣು ಮಕ್ಕಳಿಗೆ ಆಂಗ್ಲೋ- ಹಿಂದೂ ದೇಶಿಯ ಶಾಲೆಯನ್ನು ಪ್ರಾರಂಭಿಸಿದರು. ಅವರ ಕುಟುಂಬ ವಾಸಿಸುತ್ತಿದ್ದ ಮನೆಗೆ ಸ್ವರ್ಣ ಹೊಸ್ತಿಲು ಎಂಬ ಹೆಸರಿತ್ತು.ಈ ಮನೆಗೆ ಅನೇಕ ವಿದ್ವಾಂಸರು ಭೇಟಿ ನೀಡುತ್ತಿದ್ದರು ಹಾಗೂ ಸರೋಜಿನಿಯವರಿಗೆ ಅವರ ಸಂಭಾಷಣೆಗಳು ಪ್ರೇರಣೆ ನೀಡುತ್ತಿದ್ದವು.ಸರೋಜಿನಿ ಅವರಿಗೆ ಮಗುವಾಗಿದ್ದಾಗಿನಿಂದಲೇ ಇಂಗ್ಲಿಷ್, ಬಂಗಾಳಿ, ಉರ್ದು, ಪರ್ಷಿಯನ್…
ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ಸಮೀಪದ ಯಲಗೂರು ಗ್ರಾಮದಲ್ಲಿ ಶ್ರೀ ಗುಂಡಗಿ ಸಿದ್ದೇಶ್ವರ ದೇವಸ್ಥಾನದಲ್ಲಿ ಬುಧವಾರ ಹಾಗೂ ಗುರುವಾರ ಎರಡು ದಿನಗಳ ಕಾಲ ನಾನಾ ಹೋಮ ಹವನ, ಧಾರ್ಮಿಕ ಕಾರ್ಯಕ್ರಮಗಳು ಸಹಸ್ರಾರು ಜನರ ಸಮ್ಮುಖದಲ್ಲಿ ಸಂಭ್ರಮದಿಂದ ಜರುಗಿದವು.ಬುಧವಾರ, ಸರ್ವದೋಷ ನಿವಾರಣೆಗಾಗಿ ಮಹಾಮೃತ್ಯುಂಜಯ ಹೋಮ, ಪಂಚ ಮಹಾ ರುದ್ರಾಭಿಷೇಕ, ನವಗ್ರಹ ಹೋಮ, ಗಣ ಹೋಮ ಸೇರಿದಂತೆ ನಾನಾ ಹೋಮಗಳು ಇಡೀ ದಿನ ಬಾಗಲಕೋಟೆಯ ಸಂತೋಷ ಗೋಟೂರ ಅವರ ನೇತೃತ್ವದಲ್ಲಿ 10 ಕ್ಕೂ ಹೆಚ್ಚು ಅರ್ಚಕರು ನಡೆಸಿಕೊಟ್ಟರು.ಗುರುವಾರ, ಬೆಳಿಗ್ಗೆ ಪುರ್ಣಾಹುತಿ ಹೋಮ, ಪಂಚ ಮಹಾ ರುದ್ರಾಭಿಷೇಕ, ಸಾವಿರಕ್ಕೂ ಅಧಿಕ ಜನರ ಸಾಮೂಹಿಕ ರುದ್ರ ಪಠಣ ಮತ್ತು ಮಹಾ ಮಂಗಾಳರತಿ ಜರುಗಿತು. ಇಡೀ ದಿನ ಅನ್ನಸಂತರ್ಪಣೆ ನಡೆಯಿತು.ಬಾಗಲಕೋಟೆ ಭಾವಸಾರ ಕ್ಷತ್ರಿಯ ಸಮಾಜದ ಚೇರಮನ್ ಕೃಷ್ಣಾಜಿ ಅಂಬೋರೆ ಮಾತನಾಡಿ, ಕಪಾಟೆ ಮತ್ತು ಝಿಂಗಾಡೆ ಪರಿವಾರದ ಕುಲದೇವತೆಯಾದ ಗುಂಡಗಿ ಸಿದ್ದೇಶ್ವರನ ಲೀಲೆ ಅಪಾರ. ದೇಶದ ನಾನಾ ಕಡೆ ಹಂಚಿಹೋಗಿರುವ ಈ ಪರಿವಾರದವರು ವರ್ಷಕ್ಕೊಮ್ಮೆ ಜಾತ್ರೆಗೆ ಕೂಡುವುದು ಮೊದಲಿಂದಲೂ ನಡೆದುಕೊಂಡು ಬಂದ…
