Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಗ್ರಾಮಸ್ಥರ ಬಹುದಿನಗಳ ಬೇಡಿಕೆಯಾಗಿದ್ದ ಸಿಂದಗಿ ಮತಕ್ಷೇತ್ರದ ಗುಗಿಹಾಳ ಗ್ರಾಮವನ್ನು ಕಂದಾಯ ಗ್ರಾಮವನ್ನಾಗಿ ಮಾಡಲಾಗಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಗುಗಿಹಾಳ ಗ್ರಾಮಸ್ಥರಿಂದ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅವರು, ಕಳೆದ ೨೦೨೩ರ ಸಿಂದಗಿ ಮತಕ್ಷೇತ್ರದ ಸಾರ್ವತ್ರಿಕ ಚುನಾವಣೆಯಲ್ಲಿ ಗುಗಿಹಾಳ ಗ್ರಾಮವನ್ನು ಕಂದಾಯ ಗ್ರಾಮವನ್ನಾಗು ಮಾಡುತ್ತೇನೆ ಎಂದು ಹೇಳಿದ್ದೆ. ಅವರಿಗೆ ಕೊಟ್ಟ ಮಾತಿನಂತೆ ಗುಗಿಹಾಳ ಗ್ರಾಮವನ್ನು ಕಂದಾಯ ಗ್ರಾಮವನ್ನಾಗಿ ಮಾಡಿರುವೆ. ಇದಕ್ಕೆ ಸಹಕರಿಸಿದ ರಾಜ್ಯ ಸರಕಾರದ ಸಿಎಂ, ಡಿಸಿಎಂ, ಕಂದಾಯ ಸಚಿವರಿಗೆ ಹಾಗೂ ಅಧಿಕಾರಿಗಳಿಗೆ ಕೃತಜ್ಞತೆಗಳನ್ನು ತಿಳಿಸುತ್ತೇನೆ ಎಂದರು.ಇದೇ ಸಂದರ್ಭದಲ್ಲಿ ಕಾಂತನಗೌಡ ಪಾಟೀಲ, ಹಮಿದ ಚೌಧರಿ, ಲಕ್ಷ್ಮಣ ಗುಗಿಹಾಳ, ಚಾಂದ ಕಸಾಬ, ಮಾಶ್ಯಾಕ ಕಸಬ್, ಸೈಪಾಂ ಕಸಬ್, ಸೈಪನ ಚೌಧರಿ, ಗುಲಾಮ ಕೊರಬು, ವಜೀರ ಗುಗಿಹಾಳ ಸೇರಿದಂತೆ ಅನೇಕರಿದ್ದರು.
ಶ್ರೀಶೈಲದ ಜಗದ್ಗುರು ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರ ಅಭಿಮತ ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ನಮ್ಮ ದೇಶ ಧರ್ಮಪ್ರಧಾನವಾಗಿರುವ ದೇಶ. ಧರ್ಮ ಮತ್ತು ದೇವರು ಈ ದೇಶದ ತಾಯಿ ಬೇರುಗಳಿದ್ದಂತೆ. ಪ್ರಸಂಗ ಬಂದರೆ ನಮ್ಮ ಜನತೆ ಧರ್ಮ ಮತ್ತು ದೇವರಿಗಾಗಿ ಎಂತಹ ತ್ಯಾಗಕ್ಕೂ ಸನ್ನದ್ಧರಾಗುತ್ತಾರೆ ಎಂದು ಶ್ರೀಶೈಲದ ೧೦೦೮ ಜಗದ್ಗುರು ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ನುಡಿದರು.ಪಟ್ಟಣದ ವಿನಾಯಕ ನಗರದ ಶ್ರೀ ವಿನಾಯಕ ಹಾಗೂ ಶ್ರೀ ಭದ್ರಕಾಳಿ ಸಮೇತ ಶ್ರೀ ವೀರಭದ್ರೇಶ್ವರರ ನೂತನ ದೇವಸ್ಥಾನ ಲೋಕಾರ್ಪಣೆ ಹಾಗೂ ಪ್ರಾಣ ಪ್ರತಿಷ್ಠಾಪನೆ ಸಮಾರಂಭದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಧರ್ಮಸಭೆಯಲ್ಲಿ ದಿವ್ಯ ಸಾನಿಧ್ಯವಹಿಸಿ ಅವರು ಆಶೀರ್ವಚನ ನೀಡಿದರು.ಪ್ರಪಂಚದಲ್ಲಿ ಎರಡು ಪ್ರಕಾರದ ದೇವಾಲಯಗಳಿವೆ. ದೇವರು ಬಂದು ನೆಲೆಸಲೆಂದು ಭಕ್ತರೆಲ್ಲ ಕೂಡಿ ನಿರ್ಮಿಸಿದ ದೇವಾಲಯಗಳು ಒಂದು ಪ್ರಕಾರದ್ದಾದರೆ ದೇವರು ಭಕ್ತರ ಕಷ್ಟಗಳನ್ನು ಪರಿಹರಿಸಲು ತಾನೇ ನಿರ್ಮಿಸಿಕೊಂಡ ದೇವಾಲಯಗಳು ಮತ್ತೊಂದು ಪ್ರಕಾರದ್ದಾಗಿವೆ. ಇಲ್ಲಿನ ದೇವಾಲಯ ನಿರ್ಮಿಸಲು ನೀವೆಲ್ಲ ಸಾಕಷ್ಟು ಶ್ರಮ ಪಟ್ಟಿದ್ದೀರಿ ಇದು ಮಾನವ ನಿರ್ಮಿತ ದೇವಾಲಯ. ಇನ್ನು ದೇವ ನಿರ್ಮಿತ ದೇವಾಲಯ ಎಂದರೆ…
ಉದಯರಶ್ಮಿ ದಿನಪತ್ರಿಕೆ ಇಂಡಿ: ಪಟ್ಟಣದ ತಾಲೂಕು ಕ್ರೀಡಾಂಗಣದ ಅಭಿವೃದ್ಧಿಗಾಗಿ ಸರಕಾರ ಯುವಜನ ಹಾಗೂ ಕ್ರೀಡಾ ಇಲಾಖೆಯ ಮೂಲಕ ಒಂದು ಕೋಟಿ ರೂಪಾಯಿ ಅನುದಾನ ನೀಡಿದ್ದು ಕ್ರೀಡಾಪಟುಗಳಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಅಲ್ಲಿ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ಶಾಸಕ ಯಶವಂತರಾಯ ಗೌಡ ಪಾಟೀಲ ತಿಳಿಸಿದರು.ಅವರು ಬುಧವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕ ಕ್ರೀಡಾಂಗಣದ ಅಭಿವೃದ್ಧಿಯ ಕುರಿತು ಹಮ್ಮಿಕೊಂಡ ಸಭೆಯಲ್ಲಿ ಮಾತನಾಡಿದರು,ತಾಲೂಕಿನ ಕ್ರೀಡಾಪಟುಗಳಿಗೆ ಅನುಕೂಲವಾಗುವ ರೀತಿಯಲ್ಲಿ ಯೋಜನೆಗಳನ್ನು ರೂಪಿಸಿ ಎಂದು ಸಲಹೆ ನೀಡಿದರು.ಕ್ರಿಕೆಟ್, ಹಾಕಿ, ಫುಟ್ಬಾಲ್,ವಾಲಿಬಾಲ್, ಸೇರಿದಂತೆ ಇಂಡೋರ್ ಹಾಗೂ ಔಟ್ ಡೋರ್ ಆಟಗಳನ್ನು ಆಡಿಸಲು ಪ್ರಯತ್ನಿಸಿ ಎಂದು ಅಧಿಕಾರಿಗಳಿಗೆ ತಿಳಿಸಿದರು.ಅಂಕ ಕ್ರೀಡಾಂಗಣ ಕ್ರೀಡಾಪಟುಗಳಿಗೆ ಅನುಕೂಲವಾಗಬೇಕು ವಿದ್ಯಾರ್ಥಿಗಳು ಹಾಗೂ ಹಿರಿಯರು ಅಲ್ಲಿ ಬಂದು ಕಾಲ ಕಳೆಯುವಂತಹ ವಾತಾವರಣ ನಿರ್ಮಾಣ ಆಗಬೇಕು.ಬೇರೆ ಬೇರೆ ತಾಲೂಕುಗಳು ಜನ ಇಂಡಿ ಕ್ರೀಡಾಂಗಣ ನೋಡಿ ಕ್ರೀಡಾಂಗಣ ನಿರ್ಮಾಣಕ್ಕೆ ಮುಂದಾಗುವಂತೆ ಮಾದರಿ ಕ್ರೀಡಾಂಗಣ ಮಾಡಲು ಸೂಚಿಸಿದರು.ಈ ಸಂದರ್ಭದಲ್ಲಿ ಯುವಜನ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರಾಜಶೇಖರ ದೈವಾಡಗಿ, ಪುರಸಭೆ ಮುಖ್ಯ…
ಶ್ರೀ ಪದ್ಮರಾಜ ಮಹಿಳಾ ಪದವಿ ಕಾಲೇಜು ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಸನ್ಮಾನ ಸಮಾರಂಭ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಓದಿನೊಂದಿಗೆ ಸಾಧನೆ ಮಾಡಲು ಬಡತನ ಎಂಬುದು ಅಡ್ಡಿಯಾಗಲಾರದು. ನನ್ನ ಈ ಸಾಧನೆಗೆ ನನ್ನ ಕುಟುಂಬ ಪಾತ್ರ ಹಿರಿದಾದದ್ದು ಎಂದು ವೈದ್ಯಾಧಿಕಾರಿ ಪ್ರಾ.ಆ.ಕೇಂದ್ರ ಮಡಕೇಶ್ವರ ಹಾಗೂ ಯುಪಿಎಸ್ಸಿ ಪರೀಕ್ಷೆಯಲ್ಲಿ ೪೮೨ ರ್ಯಾಂಕ್ ಪಡೆದ ಡಾ.ಮಹೇಶ ಆರ್.ಮಡಿವಾಳರ ಹೇಳಿದರು.ಪಟ್ಟಣದ ಶ್ರೀ ಪದ್ಮಾರಜ ಮಹಿಳಾ ಪದವಿ ಮಹಾವಿದ್ಯಾಲಯದ ಸಭಾಭವನದಲ್ಲಿ ಶ್ರೀಪದ್ಮರಾಜ ಮಹಿಳಾ ಪದವಿ ಕಾಲೇಜು ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಸನ್ಮಾನ ಸಮಾರಂಭದ ಮುಖ್ಯ ಅತಿಥಿ ಸ್ಥಾನವನ್ನು ಅಲಂಕರಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳ ದಿಕ್ಕು ಬದಲಾವಣೆ ಮಾಡುವುದೇ ಪದವಿ. ಮನೆಯ ಜವಾಬ್ದಾರಿಯಲ್ಲಿ ಪುರುಷನಷ್ಟೇ ಪಾತ್ರ ಮಹಿಳೆಯದ್ದು ಆಗಿರುತ್ತದೆ. ಮಹಿಳೆ ಹೆಚ್ಚಿನ ಸವಾಲುಗಳನ್ನು ಎದುರಿಸಬೇಕಾದ ಪರಿಸ್ಥಿತಿಯಲ್ಲಿಯೇ ಸಾಧನೆ ಮಾಡಲೇಬೇಕು. ಅಸಮಾನತೆ, ಬಡತನ ಇವೆಲ್ಲವನ್ನು ಮೆಟ್ಟಿನಿಂತು ಸಾಧನೆ ಮಾಡಬೇಕು. ವಿದ್ಯಾರ್ಥಿಗಳು ನಿರಂತರವಾಗಿ ಓದಿನಲ್ಲಿ ತೊಡಗಿಕೊಳ್ಳಬೇಕು. ಶಿಕ್ಷಣ. ಶಾಂತಿ, ಸತ್ಯ, ಅಹಿಂಸೆ ಮಾರ್ಗದಿಂದ ಮೊದಲು ಎಲ್ಲವನ್ನು ಪಾಲಿಸೋಣ. ವಿದ್ಯಾರ್ಥಿಗಳು ಓದಿನಲ್ಲಿ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ೧೧೦/೩೩/೧೧ ಕೆವ್ಹಿ ವಿದ್ಯುತ್ ವಿತರಣಾ ಕೇಂದ್ರ ವ್ಯಾಪ್ತಿಯ ಸಿಂದಗಿ ಪಟ್ಟಣ, ಯರಗಲ್ ಐಪಿ, ಸುಂಗಠಾಣ ಐಪಿ ಮತ್ತು ಯಂಕಂಚಿ ಐಪಿ ೧೧ ಕೆವ್ಹಿ ಮಾರ್ಗಗಳಲ್ಲಿ ಮೇ.೦೮ರಂದು ಬೆಳಿಗ್ಗೆ ೮ಗಂಟೆಯಿಂದ ಸಾಯಂಕಾಲ ೬ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಸದರಿ ಮಾರ್ಗಗಳ ಮೇಲೆ ಬರುವ ಗ್ರಾಹಕರು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು ಸಿಂದಗಿ ಹೆಸ್ಕಾಂ ಉಪ-ವಿಭಾಗದ ಸಹಾಯಕ ನಿರ್ವಾಹಕ ಅಭಿಯಂತರರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಷ್ಟ್ರೀಯ ಮೀನುಗಾರರ ಸಂಘದ ರಾಷ್ಟ್ರೀಯ ಉಪಾಧ್ಯಕ್ಷ ಡಾ. ಗೌತಮ್ ಆರ್ ಚೌಧರಿ ಶ್ಲಾಘನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: “ಆಪರೇಷನ್ ಸಿಂಧೂರ’ ಕಾರ್ಯಾಚರಣೆ ಭಾರತ ಸರ್ಕಾರದ ದಿಟ್ಟ ನಿರ್ಧಾರವಾಗಿದೆ. ಈಚೆಗೆ ಕಾಶ್ಮೀರದ ಪೆಹೆಲ್ಗಾಮ್ನಲ್ಲಿ ನಡೆದ ಘೋರ ಹತ್ಯಾಕಾಂಡಕ್ಕೆ ಉತ್ತರವಾಗಿ ನಮ್ಮ ಸೇನೆಯಿಂದ ಪಿಓಕೆ ಮತ್ತು ಪಾಕಿಸ್ತಾನದಲ್ಲಿರುವ ೨೧ ಉಗ್ರರ ತಾಣಗಳ ಮೇಲೆ ಧಾಳಿ ನಡೆಸಿ ಧ್ವಂಸಗೊಳಿಸಿ ಉಗ್ರರನ್ನು ಹತ್ಯೆಗೈದಿರುವುದು ನಮ್ಮ ಶಕ್ತಿ ಏನೆಂದು ಹೇಡಿ ಪಾಕಿಸ್ತಾನಕ್ಕೆ ತಿಳಿಸಿದಂತಾಗಿದೆ ಎಂದು ರಾಷ್ಟ್ರೀಯ ಮೀನುಗಾರರ ಸಂಘದ ರಾಷ್ಟ್ರೀಯ ಉಪಾಧ್ಯಕ್ಷರಾದ ಡಾ. ಗೌತಮ್ ಆರ್ ಚೌಧರಿ ಹೇಳಿದ್ದಾರೆ.ಬುಧವಾರ ಈ ಕುರಿತು ಪ್ರಕಟಣೆಯಲ್ಲಿ ತಿಳಿಸಿದ ಅವರು, ಈಚೆಗೆ ಕಾಶ್ಮೀರದ ಪೆಹಲ್ಗಾಮ್ದಲ್ಲಿ ಉಗ್ರರು ಮಾಡಿದ ದಾಳಿಗೆ ಅಮಾಯಕ ಪ್ರವಾಸಿಗರು ಬಲಿಯಾಗಿದ್ದರು. ಇದರಲ್ಲಿ ಅನೇಕ ಮಹಿಳೆಯರು ತಮ್ಮ ಸಿಂಧೂರವನ್ನು ಕಳೆದುಕೊಂಡಿದ್ದರು. ಇದಕ್ಕೆ ಪ್ರತಿಕಾರವಾಗಿ ಕೇಂದ್ರ ಸರ್ಕಾರವು ನಮ್ಮ ಸೈನಿಕರಿಂದ ನಿನ್ನೆ ಮಧ್ಯರಾತ್ರಿ “ಆಪರೇಶನ್ ಸಿಂಧೂರ” ಕಾರ್ಯಾಚರಣೆ ಮಾಡಿ ಮೂಲಕ ನೂರಾರು ಉಗ್ರರನ್ನು ಹತ್ಯೆ ಮಾಡುವ ಮೂಲಕ ಪ್ರತಿಕಾರ ನೀಡಿದೆ. ಇದು ನಾವೆಲ್ಲರೂ…
ರಾಷ್ಟ್ರೀಯ ಮೀನುಗಾರರ ಸಂಘದ ರಾಷ್ಟ್ರೀಯ ಉಪಾಧ್ಯಕ್ಷ ಡಾ.ಗೌತಮ್ ಚೌಧರಿ ಅವರ ಜನ್ಮದಿನದ ಪ್ರಯುಕ್ತ ಅವರನ್ನು ಸನ್ಮಾನಿಸಿದ “ಉದಯರಶ್ಮಿ” ಪತ್ರಿಕಾ ಬಳಗ ಉದಯರಶ್ಮಿ ದಿನಪತ್ರಿಕೆ ಬೆಂಗಳೂರು: ಬಡವರ ಸೇವೆಯಲ್ಲಿ ದೇವರನ್ನು ಕಾಣುತ್ತಿರುವ ಮಾನವೀಯ ಕಳಕಳಿಯ ಡಾ.ಗೌತಮ್ ಚೌಧರಿ ಅವರ ಸೇವೆಯನ್ನು ಇಂದಿನ ಯುವ ವೈದ್ಯರು ಅನುಸರಿಸಬೇಕು ಎಂದು “ಉದಯರಶ್ಮಿ” ಸಂಪಾದಕ ಇಂದುಶೇಖರ ಮಣೂರ ಹೇಳಿದರು.ಬುಧವಾರ ಸಂಜೆ ಬೆಂಗಳೂರಿನ ಅವರ ಆಸ್ಪತ್ರೆಯಲ್ಲಿ “ಉದಯರಶ್ಮಿ” ಪತ್ರಿಕಾ ಬಳಗದೊಂದಿಗೆ ರಾಷ್ಟ್ರೀಯ ಮೀನುಗಾರರ ಸಂಘದ ರಾಷ್ಟ್ರೀಯ ಉಪಾಧ್ಯಕ್ಷರಾದ ಡಾ.ಗೌತಮ್ ಚೌಧರಿ ಅವರ ಜನ್ಮದಿನದ ಪ್ರಯುಕ್ತ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು.ಡಾ.ಗೌತಮ್ ಚೌಧರಿ ಅವರು ಬಸವಾದಿ ಶರಣರ ಹಾದಿಯಲ್ಲಿ ಸಾಗುತ್ತಿದ್ದು, ವಿಜಯಪುರ ಜಿಲ್ಲೆಯ ಗ್ರಾಮಗಳಲ್ಲಿ ಆಗಾಗ ಆರೋಗ್ಯ ಉಚಿತ ಶಿಬಿರಗಳ ಮೂಲಕ ಸದ್ದಿಲ್ಲದೆ, ಪ್ರಚಾರದ ಹಂಗಿಲ್ಲದೇ ಆರೋಗ್ಯ ದಾಸೋಹದಲ್ಲಿ ತಮ್ಮನ್ನು ತೊಡಗಿಸಿಕೊಂಡದ್ದು ಅನುಕರಣೀಯ ನಡೆಯಾಗಿದೆ ಎಂದರು.ಈ ವೇಳೆ ಡಾ.ಗೌತಮ್ ಚೌಧರಿ ಮಾತನಾಡಿ, ಬಡರೋಗಿಗಳ ಸೇವೆಯಲ್ಲಿ ತಾವು ತಮ್ಮ ತಂದೆ ಮಾಜಿ ಸಚಿವ ದಿ. ಡಾ.ಆರ್.ಬಿ.ಚೌಧರಿ ಅವರನ್ನು ಕಾಣುತ್ತಿದ್ದು ಇದನ್ನು ನಿರಂತರ…
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಪಟ್ಟಣದ ಪುರಸಭೆ ಸದಸ್ಯ ಶಿವಪ್ಪ ಹರಿಜನ ಇವರು ದಿನಗೂಲಿ ನೌಕರ ಶಮುಶುದ್ಧಿನ್ ಮೂಲಿಮನಿ ಮೇಲೆ ಮಾಡಿರುವ ಆರೋಪಗಳು ಸುಳ್ಳು ಎಂದು ಮತ್ತು ಅವರು ಪುರಸಭೆಯ ಸಿಬ್ಬಂದಿಗಳಿಗೆ ಪದೇ ಪದೇ ಕಿರುಕುಳ ನೀಡುತ್ತಿದ್ದು ಅವರ ಮೇಲೆ ಶಿಸ್ತು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪುರಸಭೆಯ ಅಧ್ಯಕ್ಷ-ಉಪಾಧ್ಯಕ್ಷರು, ಸ್ಥಾಯಿ ಸಮಿತಿಯ ಅಧ್ಯಕ್ಷ, ಕೆಲ ಸದಸ್ಯರು ಮತ್ತು ಕೆಲ ನಾಮ ನಿರ್ದೇಶಿತ ಸದಸ್ಯರು ಸಹಿ ಹಾಕಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.ಪತ್ರದ ಸ್ವೀಕೃತಿ ಪ್ರತಿಯನ್ನು ಪತ್ರಿಕೆಗೆ ನೀಡಿದ್ದು, ಶಿವಪ್ಪ ಇವರು ಪದೇ ಪದೇ ಕಚೇರಿಗೆ ಬಂದು ಎಲ್ಲಾ ಸಿಬ್ಬಂದಿಗಳಿಗೆ ಅವ್ಯಾಚ್ಛ ಶಬ್ದಗಳಿಂದ ನಿಂದಿಸಿ ಸರಕಾರಿ ಕೆಲಸ ನಿರ್ವಹಿಸಲು ಬಿಡುತ್ತಿಲ್ಲ. ಪ್ರತ್ಯೇಕವಾಗಿ ಮತ್ತು ವೈಯಕ್ತಿಕವಾಗಿ ಸಿಬ್ಬಂದಿಗಳಿಗೆ ಕಿರುಕುಳ ನೀಡುತ್ತಿದ್ದು ಮತ್ತು ಸಿಬ್ಬಂದಿಗಳ ವಿರುದ್ಧ ತಮ್ಮ ಕಚೇರಿಗೆ ಇಲ್ಲಸಲ್ಲದ ಆರೋಪ ಮಾಡಿ ಪತ್ರಗಳು ನೀಡುತ್ತಿದ್ದು ಇದರ ಬಗ್ಗೆ ಸಿಬ್ಬಂದಿಗಳು ಸರಿಯಾಗಿ ಕೆಲಸ ಮಾಡದೇ ಪದೇ ಪದೇ ನಮ್ಮ ಕೋಠಡಿಗೆ ಬಂದು ಆರೋಪ ಮಾಡುತ್ತಿದ್ದಾರೆ.ಪುರಸಭೆಯಲ್ಲಿ ಶಮಶುದ್ದಿನ್…
ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ತಾಲೂಕಿನ ಆಲಗೂರ ಗ್ರಾಮದ ಶ್ರೀ ಮಹಾವೀರ ಅಲ್ಪಸಂಖ್ಯಾತರ ವಿದ್ಯಾವರ್ಧಕ ಸಂಘದ ಕನ್ನಡ/ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಶಾಲೆಯ ಫಲಿತಾಂಶ ಕನ್ನಡ ಮಾಧ್ಯಮ ಶೇಕಡ 89. 28 ಹಾಗೂ ಆಂಗ್ಲ ಮಾಧ್ಯಮ ಶೇಕಡ 88 ಆಗಿದೆ ಎಂದು ಶಾಲೆಯ ಮುಖ್ಯೋಪಾಧ್ಯಾಯರಾದ ಮುರುಗೇಶ ಚ ಲಿಗಾಡೆ ತಿಳಿಸಿದ್ದಾರೆ.ಕನ್ನಡ ಮಾಧ್ಯಮದ ವಿದ್ಯಾರ್ಥಿನಿಯಾದ ಕಲ್ಪನಾ ಸಿ ಬೆಳಗಲಿ 625ಕ್ಕೆ 619 (99.04%) ಅಂಕ ಪಡೆದು ರಾಜ್ಯಕ್ಕೆ 7ನೇ ಸ್ಥಾನ ಹಾಗೂ ಪರೀಕ್ಷಾ ಕೇಂದ್ರಕ್ಕೆ ಮತ್ತು ಶಾಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ, ಅಮೃತಾ ಮ.ತೆಲಿ 625ಕ್ಕೆ 615(98.4%) ಅಂಕ ಪಡೆದು ರಾಜ್ಯಕ್ಕೆ 11ನೇ ಸ್ಥಾನ ಹಾಗೂ ಶಾಲೆಗೆ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಐಶ್ವರ್ಯ ಮ. ತೊನಶ್ಯಾಳ ಹಾಗೂ ಸೃಷ್ಟಿ ಆ.ದಾಶ್ಯಾಳ 625 ಕ್ಕೆ 608(97.28%) ಅಂಕ ಪಡೆದು ಶಾಲೆಗೆ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. 12 ವಿದ್ಯಾರ್ಥಿಗಳು ಪ್ರತಿಶತ 90 ಕಿಂತ…
ಲೇಖನಜಯಶ್ರೀ.ಜೆ. ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರುಬೆಳಗಾವಿಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ಬಹುತೇಕ ಜನರಿಗೆ ಯಾವುದೇ ಕೆಲಸ ಹೇಳಿದರೂ ’ನಾನು ನಾಳೆಯಿಂದ ಪ್ರಾರಂಭಿಸುತ್ತೇನೆ’ ಎಂಬ ರೆಡಿಮೇಡ್ ಉತ್ತರ ರೆಡಿಯಾಗಿರುತ್ತದೆ. ಅಂದ್ಹಾಗೆ ನಾನು ನಾಳೆಯಿಂದ ಪ್ರಾರಂಭಿಸುತ್ತೇನೆ ಎಂಬ ಬಲೆಯಿಂದ ತಪ್ಪಿಸಿಕೊಳ್ಳುವುದು ಅಷ್ಟು ಸುಲಭವಲ್ಲ ಅನ್ನೋದು ಅನೇಕರ ಅಂಬೋಣ. ಹಾಗಂತ ಸಾಧ್ಯವಿಲ್ಲ ಅಂತಿಲ್ಲ. ಇಂದು ಎನ್ನುವುದು ಮುಂದೂಡುವ ಜನರಿಗೆ ಒಂದು ಸಮಸ್ಯೆಯಾಗಿದೆ. ನಾಳೆಯ ಬಲೆಯಲ್ಲಿ ಬಿದ್ದು ಒದ್ದಾಡುವುದೇ ಅವರ ಆಯ್ಕೆಯಾಗಿದೆ. ಯಾವುದನ್ನಾದರೂ ಮನಸ್ಸಿಗೆ ಬಂದಾಗ, ಆಗಾಗ, ವಿರಳವಾಗಿ ಮಾಡುವುದಕ್ಕಿಂತ ಪ್ರತಿದಿನ ಮಾಡುವುದು ಉತ್ತಮ. ಉದಾಹರಣೆಗೆ ತಿಂಗಳಿಗೆ ಒಮ್ಮೆ ೫ ಗಂಟೆಗಳಿಗಿಂತ ದಿನಕ್ಕೆ ೫ ನಿಮಿಷ ಹೊಸ ಭಾಷೆ ಕಲಿಯಲು ಕಳೆಯುವುದು ಉತ್ತಮ. ಪ್ರತಿದಿನ ಏನನ್ನಾದರೂ ಮಾಡಿದರೆ ಅದರಲ್ಲಿ ಕರಗತ ಮಾಡಿಕೊಳ್ಳುವ ಸಾಧ್ಯತೆಗಳು ತುಂಬಾ ಹೆಚ್ಚು. ಸವಾಲು ಎಂದರೆ ಒಂದು ದಿನದಲ್ಲಿ ಕೇವಲ ೨೪ ಗಂಟೆಗಳು ಮಾತ್ರ ಇರುತ್ತವೆ. ಈ ೨೪ ಗಂಟೆಗಳ ನಿರ್ಬಂಧವು ನಮಗೆ ನಿಜವಾಗಿಯೂ ಮುಖ್ಯವಾದುದನ್ನು ನಿರ್ಧರಿಸಲು ಒತ್ತಾಯಿಸುತ್ತದೆ. ನಾವು ಯಾವುದರ ಬಗ್ಗೆ ಗಂಭೀರವಾಗಿ ಯೋಚಿಸುತ್ತಿದ್ದೇವೆ? ಏನು…
