ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕಾರ್ಯನಿರತ ಪತ್ರಕರ್ತರ ಸಂಘದ ವಿಜಯಪುರ ಜಿಲ್ಲಾ ಘಟಕದ ವಿವಿಧ ಸ್ಥಾನಗಳಿಗೆ ಹಿರಿಯ ಪತ್ರಕರ್ತರನ್ನು ನಾಮನಿರ್ದೇಶನ ಮಾಡಿ ಆದೇಶ ಹೊರಡಿಸಲಾಗಿದೆ.
ನಗರದ ಪತ್ರಿಕಾ ಭವನದಲ್ಲಿ ಜಿಲ್ಲಾಧ್ಯಕ್ಷ ಅಶೋಕ ಯಡಳ್ಳಿ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಪದಾಧಿಕಾರಿಗಳ ಸಭೆಯಲ್ಲಿ ಕೆಳಕಂಡ ಸ್ಥಾನಗಳಿಗೆ ಆಯ್ಕೆ ಪ್ರಕ್ರಿಯೆ ನಡೆಯಿತು.
ರಾಷ್ಟ್ರೀಯ ಮಂಡಳಿ ಸದಸ್ಯರಾಗಿ ಹಿರಿಯ ಪತ್ರಕರ್ತ ಶರಣಬಸಪ್ಪ ಮಸಳಿ
ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳಾಗಿ ಹಿರಿಯ ಪತ್ರಕರ್ತರಾದ ಮೋಹನ ಕುಲಕರ್ಣಿ, ಕೆ.ಕೆ.ಕುಲಕರ್ಣಿ ಮತ್ತು ದೇವೇಂದ್ರ ಹೆಳವರ
ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಹಿರಿಯ ಪತ್ರಕರ್ತರಾದ ಮಹೇಶ ವಿ. ಶಟಗಾರ, ಆನಂದ ಔದಿ, ಮಲ್ಲಿಕಾರ್ಜುನ ಅಲ್ಲಾಪೂರ, ಖಾಜಾಮೈನುದ್ದೀನ ಪಟೇಲ, ಸಂಜಯ ಕುಲಕರ್ಣಿ ಹಾಗೂ ಪರಶುರಾಮ ಪವಾರ
ಸಲಹಾ ಸಮಿತಿ ಸದಸ್ಯರಾಗಿ ಹಿರಿಯ ಪತ್ರಕರ್ತರಾದ ಗೋಪಾಲ ನಾಯಕ, ರಫೀ ಭಂಡಾರಿ, ರುದ್ರಪ್ಪ ಆಸಂಗಿ, ವಾಸುದೇವ ಹೆರಕಲ್, ಅಲ್ಲಮಪ್ರಭು ಮಲ್ಲಿಕಾರ್ಜುನಮಠ, ಕೆ.ಎನ್.ರಮೇಶ, ಜಿ.ಎಸ್.ಕಮತರ, ಸೀತಾರಾಮ ಕುಲಕರ್ಣಿ, ರಾಜು ಕೊಂಡಗೂಳಿ, ಟಿ.ಕೆ.ಮಲಗೊಂಡ, ಫಿರೋಜ ರೋಜಿನದಾರ, ಮಂಜುನಾಥ ಕೋಣಸೂರ, ಅಶೋಕ (ರಾಜು) ಕುಲಕರ್ಣಿ, ಬಸವರಾಜ ಸಂಪಳ್ಳಿ, ಬಾಬು ತಡಲಗಿ ಹಾಗೂ ಜಿಲ್ಲಾ ವಾರ್ತಾ ಮತ್ತು ಪ್ರಚಾರ ಅಧಿಕಾರಿ ಅಮರೇಶ ದೊಡಮನಿ
ಲೆಕ್ಕ ಪರಿಶೋಧಕರಾಗಿ (ಚಾರ್ಟರ್ಡ್ ಅಕೌಂಟೆಂಟ್) ಯಲ್ಲಾಲಿಂಗ ಜನವಾಡ, ಕಾನೂನು ಸಲಹೆಗಾರರಾಗಿ ಸಂಗಮೇಶ ಹೌದೆ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಂದುಶೇಖರ ಮಣೂರ ತಿಳಿಸಿದ್ದಾರೆ.
ಸಭೆಯಲ್ಲಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಪ್ರಕಾಶ ಬೆಣ್ಣೂರ, ಜಿಲ್ಲಾ ಉಪಾಧ್ಯಕ್ಷರಾದ ಶಶಿಕಾಂತ ಮೆಂಡೆಗಾರ, ಸಮೀರ ಇನಾಮದಾರ, ಬಸವರಾಜ ಉಳ್ಳಾಗಡ್ಡಿ, ಕೋಶಾಧಿಕಾರಿ ರಾಹುಲ್ ಆಪ್ಟೆ ಹಾಗೂ ಕಾರ್ಯದರ್ಶಿ ಸದ್ದಾಂಹುಸೇನ ಜಮಾದಾರ ಪಾಲ್ಗೊಂಡಿದ್ದರು.

