Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಅಫಜಲಪುರ: ರವಿವಾರ ಮದ್ಯಾಹ್ನ ೩ ಗಂಟೆ ಸುಮಾರಿಗೆ ಕಲಬುರಗಿ ಅಫಜಲ್ಪುರ ರಾಷ್ಟ್ರೀಯ ಹೆದ್ದಾರಿ ೧೫೦ಇ ನಲ್ಲಿ ಗೊಬ್ಬೂರ(ಕೆ) ಗ್ರಾಮದ ಬಳಿ ಕಾರು ಮತ್ತು ಸಾರಿಗೆ ಬಸ್ಸಿನ ನಡುವೆ ಭೀಕರ ಅಪಘಾತ ಸಂಭವಿಸಿದ್ದು ಕಾರಿನಲ್ಲಿದ್ದ ಇಬ್ಬರು ತಂದೆ, ಮಗ ಮೃತ ಪಟ್ಟಿರುವ ಘಟನೆ ನಡೆದಿದೆ.ಮೃತರನ್ನು ಸೋಮಶೇಖರ ಶಂಕ್ರಪ್ಪ ಭಾಸಗಿ(೫೮) ಹಾಗೂ ಪ್ರಕಾಶ ಸೋಮಶೇಖರ ಬಾಸಗಿ(೨೮) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ರೂಪಾ ಸೋಮಶೇಖರ ಭಾಸಗಿ ಅವರಿಗೆ ತೀವ್ರ ಗಾಯಗಳಾಗಿದ್ದು ಕಲಬುರಗಿ ನಗರದ ಮೇಟ್ರೋ ಪ್ಲಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೃತ ಸೋಮಶೇಖರ ಭಾಸಗಿ ಅವರು ಕುಟುಂಬ ಸಮೇತ ಕಲಬುರಗಿಯಲ್ಲಿನ ರಾಣಾಜ್‌ಪೀರ್ ದರ್ಗಾ ದರ್ಶನ ಮುಗಿಸಿಕೊಂಡು ತಮ್ಮ ಊರಾದ ಬಾಗಲಕೋಟ ಜಿಲ್ಲೆಯ ಬೀಳಗಿ ಪಟ್ಟಣಕ್ಕೆ ಹೊರಟಿದ್ದರೆಂದು ಮಾಹಿತಿ ಲಭ್ಯವಾಗಿದೆ.ದೇವಲ ಗಾಣಗಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸ್ಥಳಕ್ಕೆ ಹೆಚ್ಚುವರಿ ಎಸ್.ಪಿ ಮಹೇಶ ಮೇಘಣ್ಣವರ್, ಡಿವೈಎಸ್‌ಪಿ ತಮ್ಮಾರಾಯ ಪಾಟೀಲ್, ಸಿಪಿಐ ಚನ್ನಯ್ಯ ಹಿರೇಮಠ, ಪಿಎಸ್‌ಐ ಸಂಗೀತಾ ಸಿಂಧೆ ಸಿಬ್ಬಂದಿಗಳಾದ ಸಂಗಣ್ಣ ವಾಲಿಕಾರ, ಶಿವು ಮಲ್ಲಾಬಾದ, ವಿಠ್ಠಲ್…

Read More

ಉದಯರಶ್ಮಿ ದಿನಪತ್ರಿಕೆ ಅಫಜಲಪುರ: ಶುಕ್ರವಾರ ರಾತ್ರಿಯಿಂದ ಶುರುವಾದ ಮಳೆ ಶನಿವಾರ ಬೆಳಿಗ್ಗೆ, ರಾತ್ರಿಯೂ ಸುರಿದ ಪರಿಣಾಮ ಅಫಜಲಪುರ ತಾಲೂಕಿನ ಸಿಧನೂರ, ಭೈರಾಮಡಗಿ, ವಡ್ಡಳ್ಳಿ ತಾಂಡಾ ಸೇರಿದಂತೆ ಹಲವೆಡೆ ಹಳ್ಳ ಕೊಳ್ಳಗಳಲ್ಲಿ ನೀರು ತುಂಬಿಕೊಂಡ ಜನರ ಸಂಚಾರಕ್ಕೆ ಸಮಸ್ಯೆ ಉಂಟಾಯಿತು.ವಡ್ಡಳ್ಳಿ ತಾಂಡಾದ ಬಳಿ ಹಳ್ಳಕ್ಕೆ ಅಡ್ಡಲಾಗಿ ನಿರ್ಮಿಸಿರುವ ಕಿರು ಸೇತುವೆ ಮಳೆ ನೀರಲ್ಲಿ ಮುಳುಗಡೆಯಾದ ಪರಿಣಾಮ ಶಾಲಾ ಮಕ್ಕಳು, ರೈತರು, ಸಾರ್ವಜನಿಕರು ಹಳ್ಳ ದಾಟಲಾಗದೆ ಮೂರು ಗಂಟೆ ಕಾದು ನಿಲ್ಲುವಂತಾಯಿತು. ನೀರಿನ ಹರಿವು ಕಡಿಮೆಯಾದ ಬಳಿಕ ಹಳ್ಳ ದಾಟಿ ಮನೆ ಸೇರುವಂತಾಯಿತು. ಶಾಲಾ ಮಕ್ಕಳನ್ನು ಟ್ರ್ಯಾಕ್ಟರ್ ಸಹಾಯದಿಂದ ಹಳ್ಳ ದಾಟಿಸಿದ ಘಟನೆ ನಡೆಯಿತು. ಅಲ್ಲದೆ ಸಿಧನುರ ರೇವೂರ(ಬಿ) ರಸ್ತೆ ಸಂಪರ್ಕ ಕಡಿತಗೊಂಡು ಸಮಸ್ಯೆ ಉಂಟಾಯಿತು. ಹೊಲಗದ್ದೆಗಳಿಗೆ ಹೋಗಿದ್ದ ರೈತರು, ಶಾಲಾ ಕಾಲೇಜುಗಳಿಗೆ ಹೋಗಿದ್ದ ವಿದ್ಯಾರ್ಥಿಗಳು ಮಳೆಯಿಂದಾಗಿ ಹಳ್ಳ ದಾಟಲಾಗದೆ ಪರದಾಟ ನಡೆಸಿ ಮನೆ ಸೇರುವಂತಾಯಿತು. ಇಷ್ಟೇ ಅಲ್ಲದೆ ಅನೇಕ ಕಡೆಗಳಲ್ಲಿ ಹೊಲಗದ್ದೆಗಳಲ್ಲಿ ನೀರು ನಿಂತಿದ್ದರಿAದ ವಾಣಿಜ್ಯ ಬೆಳೆಗಳಿಗೆ ಅನುಕೂಲವಾದರೆ ತಗ್ಗು ಪ್ರದೇಶದ ಹೊಲಗದ್ದೆಗಳಲ್ಲಿ…

Read More

ಉದಯರಶ್ಮಿ ದಿನಪತ್ರಿಕೆ ಅಫಜಲಪುರ: ತಾಲೂಕಿನ ಮಾಶಾಳ ಗ್ರಾಮದ ಬಸ್ ನಿಲ್ದಾಣದ ಪಕ್ಕದಲ್ಲಿರುವ ಗ್ರಾಮಠಾಣಾ ಜಾಗದಲ್ಲಿ ಕಳೆದ ವರ್ಷ ಪ್ರತಿಷ್ಠಾಪಿಸಿರುವ ರಾಷ್ಟ್ರವೀರ ಸಂಗೋಳ್ಳಿ ರಾಯಣ್ಣನವರ ಪ್ರತಿಮೆಯನ್ನು ಈ ಬಾರಿಯ ಸ್ವಾತಂತ್ರೋತ್ಸವದಂದು ತಾಲೂಕು ಆಡಳಿತದವರೇ ಮುಂದೆ ನಿಂತು ಅನಾವರಣಗೊಳಿಸಬೇಕೆಂದು ದಲಿತ ಸೇನೆ ರಾಜ್ಯಾಧ್ಯಕ್ಷ ಹನುಮಂತ ಯಳಸಂಗಿ ಆಗ್ರಹಿಸಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಾಶಾಳ ಗ್ರಾಮದ ಗ್ರಾಮ ಪಂಚಾಯಿತಿಗೆ ಸಂಬಂಧಿಸಿದ ಜಾಗದಲ್ಲಿ ಸ್ವಾತಂತ್ರಕ್ಕಾಗಿ ಪ್ರಾಣಾರ್ಪಣೆ ಮಾಡಿದ ವೀರನ ಪ್ರತಿಮೆ ಪ್ರತಿಷ್ಠಾಪಿಸಿದರೆ ಮೇಲ್ವರ್ಗದ ಜನರು ವಿರೋಧ ಮಾಡುತ್ತಾರೆ ಎಂದರೆ ನಮ್ಮ ದೇಶಕ್ಕೆ ಸ್ವಾತಂತ್ರ ತಂದು ಕೊಡುವುದಕ್ಕಾಗಿ ಜಾತಿ, ಮತ, ಪಂಥ ಭೇದವಿಲ್ಲದೆ ತ್ಯಾಗ ಬಲಿದಾನ ಮಾಡಿದವರನ್ನು ಅವಮಾನಿಸಿದಂತೆ ಮತ್ತು ಅದು ರಾಷ್ಟ್ರದ್ರೋಹಕ್ಕೆ ಸಮ ಎಂದು ನಾವು ಭಾವಿಸಿದ್ದೇವೆ. ರಾಯಣ್ಣನಂತ ವೀರ ಇನ್ಯಾರು ಇರಲು ಸಾಧ್ಯ? ಅವರನ್ನು ಇಡೀ ದೇಶ ಕೊಂಡಾಡುತ್ತಿರುವಾಗ ಜಾತಿಯ ಕಾರಣಕ್ಕೆ ಪ್ರತಿಮೆಗೆ ವಿರೋಧ ಮಾಡುವುದು ಎಷ್ಟು ಸರಿ? ಒಂದು ವರ್ಷದಿಂದ ಈ ಕಾರಣಕ್ಕಾಗಿ ಮಾಶಾಳ ಗ್ರಾಮದಲ್ಲಿ ಪೊಲೀಸ್ ವಾಹನ ನಿಲ್ಲುವಂತಾಗಿದೆ.…

Read More

ಉದಯರಶ್ಮಿ ದಿನಪತ್ರಿಕೆ ವರದಿ: ದೇವೇಂದ್ರ ಹೆಳವರ ವಿಜಯಪುರ: ಇದು ವಿಜಯಪುರ ನಗರದ ಮನಗೂಳಿ- ಬಸವನ ಬಾಗೇವಾಡಿ ರಸ್ತೆ ಪಕ್ಕದ ಇಬ್ರಾಹಿಂಪುರ ಬಡಾವಣೆಯಲ್ಲಿರುವ ಪ್ರಾಚೀನವಾದ ಐತಿಹಾಸಿಕ ಹಿರೇಬಾವಿ. ಇದನ್ನು ವಿಜಯಪುರದ ಎರಡನೇ ‘ತಾಜ್ ಬಾವಡಿ’ ಎಂದರೂ ತಪ್ಪಾಗಲಿಕ್ಕಿಲ್ಲ.ನೂರಕ್ಕೂ ಅಧಿಕ ಕಟ್ಟೆಗಳು, ಹಲವು ಕಮಾನುಗಳಿರುವ ಅದ್ಭುತ, ಸುಸಜ್ಜಿತ ಹಾಗೂ ಅತ್ಯಾಕರ್ಷಕ ಕಟ್ಟಡವನ್ನು ಈ ಹಿರಿಬಾವಿ ಹೊಂದಿದೆ.ಈ ಬಾವಿ ಪಶ್ಚಿಮಾಭಿಮುಖವಾಗಿದ್ದು, ಪಶ್ಚಿಮ ದಡದಲ್ಲಿ ನಿಂತು ಪೂರ್ವಕ್ಕೆ ಕಲ್ಲು ಎಸೆದರೆ ಆ ಕಲ್ಲು ಆಚೆ ದಾಟುವುದೇ ಇಲ್ಲ. ಸಂಪೂರ್ಣ ಕಲ್ಲಿನಲ್ಲಿಯೇ ಕಟ್ಟಿರುವ ಹಿರಿಬಾವಿಯ ಕಟ್ಟಡ ಆಗಿನ ಶಿಲ್ಪಕಲೆಗೆ ಈಗಲೂ ಸಾಕ್ಷಿಯಾಗಿದೆ.ಬೇಸಿಗೆಯಲ್ಲೂ ಬತ್ತದ ಇಂಥದೊಂದು ಭವ್ಯವಾದ, ವಿಶಾಲವಾದ, ಅಪಾರ ಜಲರಾಶಿ ತುಂಬಿ ಕೊಂಡಿರುವ ಐತಿಹಾಸಿಕವಾದ ಸುಂದರ ಬಾವಿಯೊಂದು ಇಬ್ರಾಹಿಂಪುರದಲ್ಲಿದೆ ಎನ್ನುವುದೇ ವಿಜಯಪುರ ಜಿಲ್ಲೆಯಲ್ಲಿರುವ ಅನೇಕರಿಗೆ ಗೊತ್ತೇ ಇಲ್ಲ.ಸಚಿವ ಡಾ. ಎಂ.ಬಿ.ಪಾಟೀಲ ಅವರು ಈ ಹಿಂದೆ ಜಲಸಂಪನ್ಮೂಲ ಸಚಿವರಾಗಿದ್ದಾಗ ನೆಲಮಟ್ಟದ ಎತ್ತರಕ್ಕಿದ್ದ ಈ ಐತಿಹಾಸಿಕ ಬಾವಿಯನ್ನು ಪುನರುಜ್ಜೀವನಗೊಳಿಸಿ ಸುತ್ತಲೂ ರಕ್ಷಣಾ ಗೋಡೆ ನಿರ್ಮಿಸಿ ಎಲ್ಲ ಕಡೆಗೂ ಗ್ರಿಲ್ ಹಾಗೂ ಕಬ್ಬಿಣದ…

Read More

ಚಡಚಣ ಸರ್ಕಾರಿ ಆಸ್ಪತ್ರೆಗೆ ಲೋಕಾಯುಕ್ತರ ದಿಡೀರ್ ಬೇಟಿ | ಸಿಬ್ಬಂದಿ ಕೊರತೆ |ಬಂದಾದ ಮೆಡಿಕಲ್ ಸ್ಟೋರ್ ಉದಯರಶ್ಮಿ ದಿನಪತ್ರಿಕೆ ಚಡಚಣ: ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಭಾನುವಾರ ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಹೆಚ್ಚುವರಿ ನೋಂದಣಾಧಿಕಾರಿ ಎಂ.ವಿ.ನರಶಿಂಸಾ ಹಾಗೂ ರಾಯಚೂರ ಪೋಲಿಸ್ ಇನಸ್ಪೆಕ್ಟರ್ ರವಿ ಪುರುಷೋತ್ತಮ ಅವರು ಅಚ್ಚರಿಯ ಬೇಟಿ ನೀಡಿದರು.ಪರಿಶೀಲನೆಯ ವೇಳೆ ಅನೇಕ ವಿಭಾಗಗಳಲ್ಲಿ ಸಿಬ್ಬಂದಿ ಗೈರು ಇದ್ದದ್ದು ಕಂಡುಬಂದಿತು‌. ಆರೋಗ್ಯ ಕೇಂದ್ರದಲ್ಲಿ ಬಂದ್ ಇರುವ ಮೆಡಿಕಲ್ ಸ್ಟೋರ್, ಎಕ್ಸರೇ ಕೊಠಡಿ, ಪ್ರಯೋಗಾಲಯ, ಮಕ್ಕಳ ಆರೋಗ್ಯ ಪುನಶ್ಚೇತನ ಕೊಠಡಿ, ಕಣ್ಣು ತಪಾಸಣಾ ಕೊಠಡಿ, ಡಯಾಲಿಸಿಸ್ ಕೋಣೆ ಗಳಿಗೆ ಬೀಗ ಹಾಕಿರುವದು ಕಂಡುಬಂದಿತು.ಕೋಠಡಿ ಬೀಗ ತೆಗೆಯಲು ಬೀಗದ ಕೈ ಸಲುವಾಗಿ ಪರದಾಡಿದ ಸಿಬ್ಬಂದಿ, ಅದರ ಜೊತೆಗೆ ಡಾಕ್ಟರ್ ಎಲ್ಲಿ ಎಂಬ ಪ್ರಶ್ನೆಗಳಿಗೆ ಸಿಬ್ಬಂದಿಯಿಂದ ಬಂದ ಹಾರಿಕೆ ಉತ್ತರದಿಂದ ಕೆಂಡಾಮಂಡಲರಾದ ಲೋಕಾ ಅಧಿಕಾರಿಗಳು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.ರೋಗಿಗಳಿಗೆ ನೀಡಲಾಗುತ್ತಿರುವ ಸೌಲಭ್ಯಗಳು ಹಾಗೂ ಸ್ವಚ್ಛತೆಯನ್ನು ಪರಿಶೀಲಿಸಿದ ಅಧಿಕಾರಿಗಳು, ಸೇವೆಗಳಲ್ಲಿ ವ್ಯತ್ಯಯ ಉಂಟಾಗದಂತೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.ಈ…

Read More

ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ಹತ್ತಾರು ಗ್ರಾಮಗಳ ರೈತರಿಗೆ ನೀರಾವರಿಯ ಉಪಯೋಗ ದೊರೆಯಲಿ ಎಂಬ ಉದ್ದೇಶದಿಂದ ಚಿಕ್ಕಪಡಸಲಗಿ ಬ್ಯಾರೇಜ್ ನಿರ್ಮಿಸುವ ಮೂಲಕ ರೈತರ ಪಾಲಿಗೆ ಭಗಿರಥ ಎನಿಸಿದ್ದ ಮಾಜಿ ಕೇಂದ್ರ ಸಚಿವ ದಿ. ಸಿದ್ದು ನ್ಯಾಮಗೌಡ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹೇಶ ಕೋಳಿ ಹೇಳಿದರು.ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ದಿ. ಸಿದ್ದು ನ್ಯಾಮಗೌಡರ 77ನೇ ಜನ್ಮದಿನ ನಿಮಿತ್ತ ರೋಗಿಗಳಿಗೆ ಹಣ್ಣು ವಿತರಿಸಿ ಅವರು ಮಾತನಾಡಿದರು.ನಗರಸಭೆ ಅಧ್ಯಕ್ಷ ಈಶ್ವರ ವಾಳೆಣ್ಣವರ ಮಾತನಾಡಿದರು.ಮುಖಂಡರಾದ ಮೀರಾ ಒಂಟಮುರಿ, ಶ್ಯಾಮರಾವ ಘಾಟಗೆ, ದಿಲಾವರ ಶಿರೋಳ, ಅನ್ವರ್ ಮೋಮಿನ್, ಪರಮಾನದ ಗವರೋಜಿ, ಸಂಜು ಮೀಶಿ, ರೋಹಿತ್ ಸೂರ್ಯವಂಶಿ, ನವೀನ ಕಲೂತಿ, ಮೈನು ಕಾಟಿಕ, ನಾನಾ ಮೊರೆ, ನಾಗು ಮೀಶಿ, ಮಲ್ಲು ಶಿರಹಟ್ಟಿ, ಮುಂತಾದವರು ಇದ್ದರು.

Read More

ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ನಗರ ಸೌಂದರ್ಯೀಕರಣಕ್ಕೆ ಸರಕಾರವನ್ನೇ ಅವಲಂಬಿತರಾಗದೆ ಇಂದಿನ ಯುವಜನತೆ ನಗರ ಸ್ವಚ್ಛತೆಗಾಗಿ ಸ್ವಯಂಪ್ರೇರಿತರಾಗಿ ಮುಂದೆ ಬರಬೇಕು ಎಂದು ಮಾಜಿ ಶಾಸಕ ಆನಂದ ನ್ಯಾಮಗೌಡ ಹೇಳಿದರು.ನಗರದ ವಿಜಯಪುರ ರಸ್ತೆಯ ಪಕ್ಕದಲ್ಲಿ ಪೆಂಡಾರ ಗಲ್ಲಿ ನೂತನ ನಾಮಫಲಕ ಅನಾವರಣಗೊಳಿಸಿ ಅವರು ಮಾತನಾಡಿದರು.ಯುವಕರ ಶಕ್ತಿ ನಗರ ಸ್ವಚ್ಛತೆಕಡೆ ಇರಬೇಕು. ಪ್ರತಿವಾರಕ್ಕೊಮ್ಮೆ ತಮ್ಮ ತಮ್ಮ ಗಲ್ಲಿಗಳಲ್ಲಿ ಸ್ವಚ್ಛತಾ ಕಾರ್ಯ ಮಾಡುವದರ ಮೂಲಕ ಸ್ವಚ್ಛ ಮಾದರಿ ನಗರ ನಿರ್ಮಿಸಬೇಕು ಎಂದರು.ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಈಶ್ವರ ವಾಳೆನ್ನವರ, ಹಾಜಿ ಇನ್ನಾ ಪೆಂಡಾರಿ, ಬಿ.ಎಸ್.ಸಿಂದೂರ, ಬದ್ರೋದ್ದೀನ್ ಪೆಂಡಾರಿ, ತೌಫೀಕ್ ಪಾರ್ಥನಳ್ಳಿ, ನಗರಸಭೆ ಸದಸ್ಯೆ ಫಾತೀಮಾ ಜಮಾದಾರ, ಪರಮಾನಂದ ಗವರೋಜಿ ಸೇರಿದಂತೆ ಇತರರು ಇದ್ದರು.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಾಣಿಜ್ಯ ಮತ್ತು ವ್ಯವಹಾರ ನಿರ್ವಹಣೆ ಕ್ಷೇತ್ರದಲ್ಲಿ ವ್ಯಾಪಕ ಅವಕಾಶಗಳಿದ್ದು ಎಂ.ಬಿ.ಎ ವಿದ್ಯಾರ್ಥಿಗಳು ಉತ್ತಮ ಜ್ಞಾನಾರ್ಜನೆ ಮತ್ತು ವೃತ್ತಿ ಕೌಶಲ್ಯಗಳನ್ನು ಬೆಳೆಸಿಕೊಂಡು ಯುವ ಉದ್ಯಮಿಗಳಾಗಿ ನಾಡಿನ ಕೀರ್ತಿ ಬೆಳಗಬೇಕು ಎಂದು ಬಿ.ಎಲ್.ಡಿ.ಇ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ಕರೆ ನೀಡಿದ್ದಾರೆ.ಸೋಮವಾರ ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎ.ಎಸ್.ಪಿ ಕಾಮರ್ಸ್ ಅಟೊನಾಮಸ್ ಕಾಲೇಜಿನಲ್ಲಿ ಡಿಪಾರ್ಟಮೆಂಟ್ ಆಫ್ ಮ್ಯಾನೇಜಮೆಂಟ್ ಸ್ಟಡೀಸ್ ಮತ್ತು ಸಂಶೋಧನ ಕೇಂದ್ರ ಆಯೋಜಿಸಿದ್ದ ಪಾಲಕರು ಮತ್ತು ಕಾಲೇಜು ಆಳಡಳಿತ ಮಂಡಳಿ ಸಭೆಯಲ್ಲಿ 14 ಜನ ವಿದ್ಯಾರ್ಥಿಗಳಿಗೆ ನೇಮಕಾತಿ ಆದೇಶ ಪತ್ರ ವಿತರಿಸಿ ಅವರು ಮಾತನಾಡಿದರು.ಈಗ ಮೆಡಿಕಲ್ ಮತ್ತು ಎಂಜಿನಿಯರಿಂಗ್ ಕೋರ್ಸುಗಳಿಗೆ ಸರಿಸಮನಾಗಿ ಮ್ಯಾನೇಜಮೆಂಟ್ ಕೋರ್ಸ್ ಗಳಿಗೆ ಹೆಚ್ಚಿನ ಬೇಡಿಕೆ ಇದೆ. ವೃತ್ತಿಕೌಶಲ್ಯ ಹೊಂದಿದವರಿಗೆ ಮಾರುಕಟ್ಟೆಯಲ್ಲಿ ಉತ್ತಮ ಅವಕಾಶಗಳೂ ಇವೆ. ವಿದ್ಯಾರ್ಥಿಗಳು ಆಧುನಿಕ ಅವಶ್ಯಕತೆಗಳಿಗೆ ತಕ್ಕಂತೆ ಅಧ್ಯಯನ ಮತ್ತು ಸಂಶೋಧನೆ ನಡೆಸಿ ಹೊಸ ತಂತ್ರಜ್ಞಾನ ಸದುಪಯೋಗ ಪಡಿಸಿಕೊಂಡ ವ್ಯವಹಾರ ಪ್ರಾರಂಭಿಸಿ ಜೀವನದಲ್ಲಿ ಯಶಸ್ವಿ ಉದ್ಯಮಿಯಾಗಬೇಕು.…

Read More

ವಿಜಯಪುರ ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಎಂ.ಎಸ್.ಕರಡಿ ಹಾಗೂ ಉಪಮೇಯರ್ ಆಗಿ ಸುಮಿತ್ರಾ ಜಾಧವ ಆಯ್ಕೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮಹಾನಗರ ಪಾಲಿಕೆಯಲ್ಲಿ ಕಮಲ‌ ಅರಳಿದ್ದು, ನೂತನ ಮೇಯರ್ ಆಗಿ ಆಯ್ಕೆಯಾದ ಎಂ.ಎಸ್. ಕರಡಿ ಹಾಗೂ ಉಪಮೇಯರ್ ಆಗಿ ಆಯ್ಕೆಯಾದ ಸುಮಿತ್ರಾ ಜಾಧವ ಅವರು ಬಿಜೆಪಿ ಕಾರ್ಯಾಲಯಕ್ಕೆ ಭೇಟಿ ನೀಡಿದರು.ಈ ವೇಳೆ ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು, ಪಾಲಿಕೆಯ ಬಿಜೆಪಿ ಸದಸ್ಯರು ಅವರನ್ನು ಆತ್ಮೀಯವಾಗಿ ಸನ್ಮಾನಿಸಿದರು.ಸನ್ಮಾನ ಸ್ವೀಕರಿಸಿದ ನೂತನ ಮೇಯರ್ ಎಂ.ಎಸ್. ಕರಡಿ ಮಾತನಾಡಿ, ನಗರದ ಸರ್ವತೋಮುಖ ಪ್ರಗತಿಗಾಗಿ ಪ್ರಾಮಾಣಿಕವಾಗಿ ಶ್ರಮಿಸುವೆ ಎಂದರು.ಉಪಮೇಯರ್ ಸುಮಿತ್ರಾ ಜಾಧವ ಮಾತನಾಡಿದರು.ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಲಿಂಬೆ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಚಂದ್ರಶೇಖರ ಕವಟಗಿ, ಪಾಲಿಕೆ ಸದಸ್ಯರಾದ ರಾಜಶೇಖರ ಮಗಿಮಠ, ಶಿವರುದ್ರ ಬಾಗಲಕೋಟ, ಮಳುಗೌಡ ಪಾಟೀಲ, ರಾಹುಲ್ ಜಾಧವ, ಸ್ವಪ್ನಾ ಕಣಮುಚನಾಳ, ಪ್ರೇಮಾನಂದ ಬಿರಾದಾರ, ವಿಠ್ಠಲ ಹೊಸಪೇಟ, ಗಿರೀಶ ಪಾಟೀಲ, ಕಿರಣ ಪಾಟೀಲ, ಜವಾಹರ ಗೋಸಾವಿ, ಭೀಮಾಶಂಕರ ಹದನೂರ, ಮಂಜುನಾಥ ಮೀಸೆ, ಮಹೇಂದ್ರ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಪ್ರತಿಭೆ ಎನ್ನುವುದು ಜನ್ಮದಿಂದ ಬಂದ ಗುಣ, ಪಾಂಡಿತ್ಯ ಎನ್ನುವುದು ಸತತ ಅಧ್ಯಯನ, ಕಠಿಣ ಪರಿಶ್ರಮದಿಂದ ಪ್ರಾಪ್ತಿಯಾಗುವಂತಹದ್ದು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ಬಿಎಲ್‌ಡಿಇ ಸಂಸ್ಥೆಯ ಉಪಾಧ್ಯಕ್ಷ ಜಿ.ಕೆ. ಪಾಟೀಲ ಹೇಳಿದರು.ವಿಜಯಪುರದ ಜಿ.ಕೆ. ಪಾಟೀಲ ಸಭಾಂಗಣದಲ್ಲಿ ಶ್ರೀ ಲಿಂಗರಾಜ ವಿವಿಧೋದ್ದೇಶ ಸಂಸ್ಥೆ, ಶಿರಸಂಗಿ ಲಿಂಗರಾಜ ಪತ್ತಿನ ಸಹಕಾರಿ ಸಂಘ ಹಾಗೂ ಜಿಲ್ಲಾ ಲಿಂಗಾಯತ ಕುಡುವಕ್ಕಲಿಗ ನೌಕರರ ಕ್ಷೇಮಾಭಿವೃದ್ಧಿ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಪ್ರತಿಭಾ ಪುರಸ್ಕಾರ ಹಾಗೂ ಕಮಲಾದೇವಿ ಬಸನಗೌಡ ಪಾಟೀಲ ಚಾರಿಟೇಬಲ್ ಟ್ರಸ್ಟ್ ಉದ್ಘಾಟನೆ ಸಮಾರಂಭದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಪ್ರತಿ ಮಗುವಿನಲ್ಲಿ ಪ್ರತಿಭೆ ಅಡಗಿರುತ್ತದೆ, ಪ್ರತಿಭೆಯನ್ನು ಪೋಷಿಸಿ ಬೆಳೆಸುವುದು ಶಿಕ್ಷಕರ ಹಾಗೂ ಪಾಲಕರ ಆದ್ಯ ಜವಾಬ್ದಾರಿ, ಪ್ರತಿಭೆ ಎನ್ನುವುದು ಜನ್ಮದಿಂದಲೇ ಬಂದಿರುತ್ತದೆ, ಅದು ಪಾಂಡಿತ್ಯವಾಗಿ ಬೆಳಗಲು ಸತತ ಅಧ್ಯಯಯನ, ಕಠಿಣ ಪರಿಶ್ರಮ ಎಂಬ ಸಾಧನಗಳು ಅಗತ್ಯ ಎಂದರು.ಸಮಾಜ ಸೇವೆಯ ದೃಷ್ಟಿಯಿಂದ ನೂತನ ಟ್ರಸ್ಟ್ ಆರಂಭಗೊಂಡಿರುವುದು ಸಂತೋಷದ ಸಂಗತಿ, ಈ ಟ್ರಸ್ಟ್ ಅಡಿಯಲ್ಲಿ ಮಹಿಳಾ…

Read More