ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ನಗರ ಸೌಂದರ್ಯೀಕರಣಕ್ಕೆ ಸರಕಾರವನ್ನೇ ಅವಲಂಬಿತರಾಗದೆ ಇಂದಿನ ಯುವಜನತೆ ನಗರ ಸ್ವಚ್ಛತೆಗಾಗಿ ಸ್ವಯಂಪ್ರೇರಿತರಾಗಿ ಮುಂದೆ ಬರಬೇಕು ಎಂದು ಮಾಜಿ ಶಾಸಕ ಆನಂದ ನ್ಯಾಮಗೌಡ ಹೇಳಿದರು.
ನಗರದ ವಿಜಯಪುರ ರಸ್ತೆಯ ಪಕ್ಕದಲ್ಲಿ ಪೆಂಡಾರ ಗಲ್ಲಿ ನೂತನ ನಾಮಫಲಕ ಅನಾವರಣಗೊಳಿಸಿ ಅವರು ಮಾತನಾಡಿದರು.
ಯುವಕರ ಶಕ್ತಿ ನಗರ ಸ್ವಚ್ಛತೆಕಡೆ ಇರಬೇಕು. ಪ್ರತಿವಾರಕ್ಕೊಮ್ಮೆ ತಮ್ಮ ತಮ್ಮ ಗಲ್ಲಿಗಳಲ್ಲಿ ಸ್ವಚ್ಛತಾ ಕಾರ್ಯ ಮಾಡುವದರ ಮೂಲಕ ಸ್ವಚ್ಛ ಮಾದರಿ ನಗರ ನಿರ್ಮಿಸಬೇಕು ಎಂದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಈಶ್ವರ ವಾಳೆನ್ನವರ, ಹಾಜಿ ಇನ್ನಾ ಪೆಂಡಾರಿ, ಬಿ.ಎಸ್.ಸಿಂದೂರ, ಬದ್ರೋದ್ದೀನ್ ಪೆಂಡಾರಿ, ತೌಫೀಕ್ ಪಾರ್ಥನಳ್ಳಿ, ನಗರಸಭೆ ಸದಸ್ಯೆ ಫಾತೀಮಾ ಜಮಾದಾರ, ಪರಮಾನಂದ ಗವರೋಜಿ ಸೇರಿದಂತೆ ಇತರರು ಇದ್ದರು.

