Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಇಂಡಿ: ಕಲಿಯುಗದ ಕಾಮಧೇನು ಕಲ್ಪವೃಕ್ಷರಾದ ಶ್ರೀ ರಾಘವೇಂದ್ರ ಸ್ವಾಮಿಗಳ 354 ನೇ ಆರಾಧನಾ ಮಹೋತ್ಸವದ ಪ್ರಥಮಾರಾಧನೆ ಪಟ್ಟಣದ ರಾಯರ ಮಠದಲ್ಲಿ ಬೆಳ್ಳಿಗೆ ಸುಪ್ರಭಾತ, ಅಷ್ಟೋತ್ತರ, ರಥೋತ್ಸವ, ಪಲ್ಲಕ್ಕಿ ಉತ್ಸವ, ಭಜನೆ, ತೀರ್ಥ-ಪ್ರಸಾದ ಭಕ್ತಿಭಾವದೊಂದಿಗೆ ಜರುಗಿತ್ತು.ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಆರ್.ವ್ಹಿ. ದೇಶಪಾಂಡೆ, ಉಪಾಧ್ಯಕ್ಷ ಆನಂದ ಕುಲಕರ್ಣಿ,ಖಜಾಂಚಿ ಡಿ.ಎಸ್.ಜೋಶಿ, ಪ್ರಸನ್ನ ದೇಶಪಾಂಡೆ, ವೇಂಕಟೇಶ ಕುಲಕರ್ಣಿ, ರಾಘವೇಂದ್ರ ಕುಲಕರ್ಣಿ,ಜೆ.ವ್ಹಿ.ಪಾಟೀಲ, ಎನ್.ಕೆ. ನಾಡಪುರೋಹಿತ, ದತ್ತಾ ಕುಲಕರ್ಣಿ, ಮಹೇಶ ಜೋಶಿ, ರವಿ ನಾಯಿಕ,ಕೃಷ್ಣ ಚಟ್ಟರಕಿ, ಸಂಜೀವ ಚಟ್ಟರಕಿ, ಜಿ.ಎಸ್.ಜೋಶಿ,ರಾಜು ಕುಲಕರ್ಣಿ, ಅರ್ಚಕ ಜಗನಾಥ ಜಾಗೀರದಾರ ಸೇರಿದಂತೆ ನೂರಾರು ಜನ ಭಾಗವಹಿಸಿದರು.
ಉದಯರಶ್ಮಿ ದಿನಪತ್ರಿಕೆ ಇಂಡಿ: “ಎರಡು ನಕ್ಷತ್ರಗಳು ಕೃತಿ “ಸರ್ವೇ ಜನ ಸುಖಿನೋ ಭವಂತು ಎಂಬ ತತ್ವ, ಈ ಕೃತಿ ಒಳಗೊಂಡಿದೆ. ಮನುಷ್ಯ ಮನುಷ್ಯರನ್ನಾಗಿ ಕಾಣಬೇಕು. ಹಿರಿಯರಿಗೆ ಗೌರವಿಸಬೇಕು, ಕೂಡಿ ಬಾಳಿದರೆ ಸ್ವರ್ಗ ಸುಖ ಎಂಬ ಆಶಯ ಈ ಕೃತಿಯಲ್ಲಿ ಮೂಡಿಬಂದಿದೆ ಎಂದು ಕೃತಿ ಬಿಡುಗಡೆಗೊಳಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರಾಘವೇಂದ್ರ ಕುಲಕರ್ಣಿ ಹೇಳಿದರು.ಪಟ್ಟಣದ ಶ್ರೀ ಬಸವರಾಜೇಂದ್ರ ಸತ್ಸಂಗ ಸಮಿತಿ ಸಹಯೋಗ ಶ್ರೀ ಬಸವರಾಜೇಂದ್ರ ಗಜಾನನ ಯುವಕ ಮಂಡಳಿ ಹಾಗೂ ಶ್ರೀ ಅರವಿಂದೊ ಸೊಸೈಟಿ ಕೇಂದ್ರ ಇವರ ಸಂಯುಕ್ತ ಆಶ್ರಯದಲ್ಲಿ 96ನೇ ಹುಣ್ಣಿಮೆ ಬೆಳಕು ಶರಣರ ಸಂದೇಶ ಕಾರ್ಯಕ್ರಮದಲ್ಲಿ ಕೈಲಾಸವಾಸಿ ಶ್ರೀ ಶಂಕರ್ ರಾವ್ ಕುಲಕರ್ಣಿ ಹಾಗೂ ಉಪನ್ಯಾಸಕ ಸದಾನಂದ ಎಸ್ ಈರನಕೇರಿ ಅವರ ವಿರಚಿತ ಎರಡು ನಕ್ಷತ್ರಗಳು ಎಂಬ ವ್ಯಕ್ತಿ ಚಿತ್ರಣ ಪುಸ್ತಕ ಲೋಕಾರ್ಪಣೆಯಗೊಳಿಸಿದರು.ಎಸ್ ಆರ್ ಮಾಸ್ತರ್ ಎಂದು ಹೆಸರುವಾಸಿಯಾದ ಸಂಗಮೇಶ್ವರ ರೇವಣ್ಣವರ್ ಹಾಗೂ ಶರಣಬಸವ ಈರನಕೇರಿ ಇವರು ಬಾಳಿ ಬದುಕಿದ ವ್ಯಕ್ತಿ ಚಿತ್ರಣ ಇದಾಗಿದೆ. ಇರ್ವರು ಶರಣ ತತ್ವವನ್ನು…
ಲೇಖನ- ವೀಣಾ ಹೇಮಂತ್ ಗೌಡ ಪಾಟೀಲ್ಮುಂಡರಗಿಗದಗ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಚಿಕ್ಕಂದಿನಲ್ಲಿ ತನ್ನ ಮಗುವಿಗೆ.. ಅಯ್ಯೋ ಸಣ್ಣ ಮಕ್ಕಳು ಅವರಿಗೇನು ಗೊತ್ತಾಗುತ್ತೆ ಎಂದು ಹೇಳಿ ಮಗುವಿನ ಎಲ್ಲ ಕೆಲಸ ಕಾರ್ಯಗಳನ್ನು ತಾನೇ ಮಾಡುತ್ತಿದ್ದ ತಾಯಿ ಇದೀಗ ಮಗ ಮದುವೆಯ ವಯಸ್ಸಿಗೆ ಬಂದಿದ್ದರೂ ಕೂಡ ಆತನ ಕೆಲಸಗಳನ್ನು ತಾನೇ ಮಾಡುತ್ತಿದ್ದಾರೆ.ಇನ್ನೊಂದೆಡೆ ಪ್ರಚಲಿತದಲ್ಲಿರುವ ಜೋಕು ಹೀಗಿದೆ.. ದೈಹಿಕವಾಗಿ ಬೆಳೆದಿರುವ ತನ್ನ ಮಗನನ್ನು ನಿರ್ವಹಿಸಲು ಸಾಧ್ಯವಿಲ್ಲದೆ ಆತನಿಗೆ ತಾಯಿ ಮದುವೆ ಮಾಡಿ ಮತ್ತೊಂದು ಹೆಣ್ಣುಮಗಳ ಕೈಗೆ ಇಡುತ್ತಾರೆ ಎಂದು.ನಮ್ಮ ಸ್ವಂತ ಮಕ್ಕಳನ್ನು ನಾವು ಸಂಭಾಳಿಸಬಹುದು.. ಆದರೆ ನಮ್ಮ ಅತ್ತೆಯ ಮಗನನ್ನು ಅಲ್ಲ ಎಂಬ ಜೋಕು ಸೊಸೆಯಂದಿರಲ್ಲಿ ಕೇಳಬಹುದು.ಮೇಲಿನ ಘಟನೆಗಳು ನೋಡಲು ಕೇಳಲು ಹೇಳಲು ತಮಾಷೆ ಎಂದೆನಿಸಿದರೂ ಕೂಡ ನಮ್ಮ ಮಕ್ಕಳನ್ನು ನಾವು ಯಾವ ರೀತಿ ಬೆಳೆಸಬಾರದು ಎಂಬುದಕ್ಕೆ ಸೂಕ್ತ ಉದಾಹರಣೆಗಳಾಗುತ್ತವೆ. ಕೆಲವೊಮ್ಮೆ ಅತಿಯಾದಾಗ ಸಂಬಂಧಪಟ್ಟವರ ಬೇಸರಕ್ಕೂ ಕಾರಣವಾಗುತ್ತದೆ.ಇಂದಿನ ಮಕ್ಕಳೇ ಮುಂದಿನ ನಾಗರಿಕರು.. ತಮ್ಮ ವೈಯುಕ್ತಿಕ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳಲು ಸಾಧ್ಯವಾಗದವರು ಬೇರೇನು ಮಾಡಲು ಸಾಧ್ಯ ಎಂಬ…
ಸಂಗ್ರಹ- ಸುಧಾ ಪಾಟೀಲವಿಶ್ವಸ್ಥರುಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರಪುಣೆ ಉದಯರಶ್ಮಿ ದಿನಪತ್ರಿಕೆ 19 ನೆಯ ದಿನದ ಶರಣಮಾಸದ ಮಾಲಿಕೆಯಲ್ಲಿಡಾ. ಎಂ.ಎಸ್.ಮದಭಾವಿ ಅವರು ವಚನ ಪಿತಾಮಹ ಫ. ಗು. ಹಳಕಟ್ಟಿ ಅವರ ಬಗೆಗೆ ಅತ್ಯಂತ ಭಾವುಕರಾಗಿ ಅವರ ಜೀವನ ಚಿತ್ರಣವನ್ನು ಮನ ಮುಟ್ಟುವಂತೆ ಕಟ್ಟಿಕೊಟ್ಟರು.ಫ. ಗು.ಹಳಕಟ್ಟಿ ಅವರು 60 ವರ್ಷ ಸಂಗ್ರಹಿಸಿ ಪ್ರಕಟಿಸಿದ ಶರಣ ಸಾಹಿತ್ಯವನ್ನು ಓದಲು ನಮಗೆಲ್ಲರಿಗೂ ಆರು ದಶಕಗಳು ಬೇಕು, ಅವುಗಳನ್ನು ಅರ್ಥ ಮಾಡಿಕೊಳ್ಳಲು ಆರು ನೂರು ವರ್ಷಗಳು ಬೇಕು, ದೇವರೇ ಅವರನ್ನು ಶರಣತತ್ವದ ಕಾರ್ಯದ ಸಲುವಾಗಿ ಭೂಲೋಕಕ್ಕೆ ಕಳಿಸಿರಬೇಕು, 20 ನೆಯ ಶತಮಾನದ 771 ನೆಯ ಅಮರಗಣoಗಳು, 65 ನೆಯ ಪುರಾತನರು ಎಂದು ಅತ್ಯಂತ ಮಾರ್ಮಿಕವಾಗಿ ಹಂಚಿಕೊಂಡರು.ಅವರು ಬಾಲ್ಯದಲ್ಲಿಯೇ ತಾಯಿಯನ್ನು ಕಳೆದುಕೊಂಡು ತಂದೆ ಮತ್ತು ಅಜ್ಜಿಯ ಸಂಸ್ಕಾರದಲ್ಲಿ ಬೆಳೆದದ್ದು, ಹಾನಗಲ್ ಕುಮಾರ ಸ್ವಾಮಿಗಳ ಭಕ್ತರೆನ್ನುವುದು, ಪ್ರಾಥಮಿಕ, ಹೈಸ್ಕೂಲ್ ಶಿಕ್ಷಣವನ್ನು ಮುಗಿಸಿ, ಮುಂಬೈ ನ ಸಂತ. ಝೆವಿಯರ್ ನಲ್ಲಿ ವಿಜ್ಞಾನದ ವಿಷಯದಲ್ಲಿ ಡಿಗ್ರಿ ಮುಗಿಸಿ ನಂತರ ಕನ್ನಡ ಎಂ. ಎ…
ಉದಯರಶ್ಮಿ ದಿನಪತ್ರಿಕೆ ಅಫಜಲಪುರ: ರವಿವಾರ ಮದ್ಯಾಹ್ನ ೩ ಗಂಟೆ ಸುಮಾರಿಗೆ ಕಲಬುರಗಿ ಅಫಜಲ್ಪುರ ರಾಷ್ಟ್ರೀಯ ಹೆದ್ದಾರಿ ೧೫೦ಇ ನಲ್ಲಿ ಗೊಬ್ಬೂರ(ಕೆ) ಗ್ರಾಮದ ಬಳಿ ಕಾರು ಮತ್ತು ಸಾರಿಗೆ ಬಸ್ಸಿನ ನಡುವೆ ಭೀಕರ ಅಪಘಾತ ಸಂಭವಿಸಿದ್ದು ಕಾರಿನಲ್ಲಿದ್ದ ಇಬ್ಬರು ತಂದೆ, ಮಗ ಮೃತ ಪಟ್ಟಿರುವ ಘಟನೆ ನಡೆದಿದೆ.ಮೃತರನ್ನು ಸೋಮಶೇಖರ ಶಂಕ್ರಪ್ಪ ಭಾಸಗಿ(೫೮) ಹಾಗೂ ಪ್ರಕಾಶ ಸೋಮಶೇಖರ ಬಾಸಗಿ(೨೮) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ರೂಪಾ ಸೋಮಶೇಖರ ಭಾಸಗಿ ಅವರಿಗೆ ತೀವ್ರ ಗಾಯಗಳಾಗಿದ್ದು ಕಲಬುರಗಿ ನಗರದ ಮೇಟ್ರೋ ಪ್ಲಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೃತ ಸೋಮಶೇಖರ ಭಾಸಗಿ ಅವರು ಕುಟುಂಬ ಸಮೇತ ಕಲಬುರಗಿಯಲ್ಲಿನ ರಾಣಾಜ್ಪೀರ್ ದರ್ಗಾ ದರ್ಶನ ಮುಗಿಸಿಕೊಂಡು ತಮ್ಮ ಊರಾದ ಬಾಗಲಕೋಟ ಜಿಲ್ಲೆಯ ಬೀಳಗಿ ಪಟ್ಟಣಕ್ಕೆ ಹೊರಟಿದ್ದರೆಂದು ಮಾಹಿತಿ ಲಭ್ಯವಾಗಿದೆ.ದೇವಲ ಗಾಣಗಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸ್ಥಳಕ್ಕೆ ಹೆಚ್ಚುವರಿ ಎಸ್.ಪಿ ಮಹೇಶ ಮೇಘಣ್ಣವರ್, ಡಿವೈಎಸ್ಪಿ ತಮ್ಮಾರಾಯ ಪಾಟೀಲ್, ಸಿಪಿಐ ಚನ್ನಯ್ಯ ಹಿರೇಮಠ, ಪಿಎಸ್ಐ ಸಂಗೀತಾ ಸಿಂಧೆ ಸಿಬ್ಬಂದಿಗಳಾದ ಸಂಗಣ್ಣ ವಾಲಿಕಾರ, ಶಿವು ಮಲ್ಲಾಬಾದ, ವಿಠ್ಠಲ್…
ಉದಯರಶ್ಮಿ ದಿನಪತ್ರಿಕೆ ಅಫಜಲಪುರ: ಶುಕ್ರವಾರ ರಾತ್ರಿಯಿಂದ ಶುರುವಾದ ಮಳೆ ಶನಿವಾರ ಬೆಳಿಗ್ಗೆ, ರಾತ್ರಿಯೂ ಸುರಿದ ಪರಿಣಾಮ ಅಫಜಲಪುರ ತಾಲೂಕಿನ ಸಿಧನೂರ, ಭೈರಾಮಡಗಿ, ವಡ್ಡಳ್ಳಿ ತಾಂಡಾ ಸೇರಿದಂತೆ ಹಲವೆಡೆ ಹಳ್ಳ ಕೊಳ್ಳಗಳಲ್ಲಿ ನೀರು ತುಂಬಿಕೊಂಡ ಜನರ ಸಂಚಾರಕ್ಕೆ ಸಮಸ್ಯೆ ಉಂಟಾಯಿತು.ವಡ್ಡಳ್ಳಿ ತಾಂಡಾದ ಬಳಿ ಹಳ್ಳಕ್ಕೆ ಅಡ್ಡಲಾಗಿ ನಿರ್ಮಿಸಿರುವ ಕಿರು ಸೇತುವೆ ಮಳೆ ನೀರಲ್ಲಿ ಮುಳುಗಡೆಯಾದ ಪರಿಣಾಮ ಶಾಲಾ ಮಕ್ಕಳು, ರೈತರು, ಸಾರ್ವಜನಿಕರು ಹಳ್ಳ ದಾಟಲಾಗದೆ ಮೂರು ಗಂಟೆ ಕಾದು ನಿಲ್ಲುವಂತಾಯಿತು. ನೀರಿನ ಹರಿವು ಕಡಿಮೆಯಾದ ಬಳಿಕ ಹಳ್ಳ ದಾಟಿ ಮನೆ ಸೇರುವಂತಾಯಿತು. ಶಾಲಾ ಮಕ್ಕಳನ್ನು ಟ್ರ್ಯಾಕ್ಟರ್ ಸಹಾಯದಿಂದ ಹಳ್ಳ ದಾಟಿಸಿದ ಘಟನೆ ನಡೆಯಿತು. ಅಲ್ಲದೆ ಸಿಧನುರ ರೇವೂರ(ಬಿ) ರಸ್ತೆ ಸಂಪರ್ಕ ಕಡಿತಗೊಂಡು ಸಮಸ್ಯೆ ಉಂಟಾಯಿತು. ಹೊಲಗದ್ದೆಗಳಿಗೆ ಹೋಗಿದ್ದ ರೈತರು, ಶಾಲಾ ಕಾಲೇಜುಗಳಿಗೆ ಹೋಗಿದ್ದ ವಿದ್ಯಾರ್ಥಿಗಳು ಮಳೆಯಿಂದಾಗಿ ಹಳ್ಳ ದಾಟಲಾಗದೆ ಪರದಾಟ ನಡೆಸಿ ಮನೆ ಸೇರುವಂತಾಯಿತು. ಇಷ್ಟೇ ಅಲ್ಲದೆ ಅನೇಕ ಕಡೆಗಳಲ್ಲಿ ಹೊಲಗದ್ದೆಗಳಲ್ಲಿ ನೀರು ನಿಂತಿದ್ದರಿAದ ವಾಣಿಜ್ಯ ಬೆಳೆಗಳಿಗೆ ಅನುಕೂಲವಾದರೆ ತಗ್ಗು ಪ್ರದೇಶದ ಹೊಲಗದ್ದೆಗಳಲ್ಲಿ…
ಉದಯರಶ್ಮಿ ದಿನಪತ್ರಿಕೆ ಅಫಜಲಪುರ: ತಾಲೂಕಿನ ಮಾಶಾಳ ಗ್ರಾಮದ ಬಸ್ ನಿಲ್ದಾಣದ ಪಕ್ಕದಲ್ಲಿರುವ ಗ್ರಾಮಠಾಣಾ ಜಾಗದಲ್ಲಿ ಕಳೆದ ವರ್ಷ ಪ್ರತಿಷ್ಠಾಪಿಸಿರುವ ರಾಷ್ಟ್ರವೀರ ಸಂಗೋಳ್ಳಿ ರಾಯಣ್ಣನವರ ಪ್ರತಿಮೆಯನ್ನು ಈ ಬಾರಿಯ ಸ್ವಾತಂತ್ರೋತ್ಸವದಂದು ತಾಲೂಕು ಆಡಳಿತದವರೇ ಮುಂದೆ ನಿಂತು ಅನಾವರಣಗೊಳಿಸಬೇಕೆಂದು ದಲಿತ ಸೇನೆ ರಾಜ್ಯಾಧ್ಯಕ್ಷ ಹನುಮಂತ ಯಳಸಂಗಿ ಆಗ್ರಹಿಸಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಾಶಾಳ ಗ್ರಾಮದ ಗ್ರಾಮ ಪಂಚಾಯಿತಿಗೆ ಸಂಬಂಧಿಸಿದ ಜಾಗದಲ್ಲಿ ಸ್ವಾತಂತ್ರಕ್ಕಾಗಿ ಪ್ರಾಣಾರ್ಪಣೆ ಮಾಡಿದ ವೀರನ ಪ್ರತಿಮೆ ಪ್ರತಿಷ್ಠಾಪಿಸಿದರೆ ಮೇಲ್ವರ್ಗದ ಜನರು ವಿರೋಧ ಮಾಡುತ್ತಾರೆ ಎಂದರೆ ನಮ್ಮ ದೇಶಕ್ಕೆ ಸ್ವಾತಂತ್ರ ತಂದು ಕೊಡುವುದಕ್ಕಾಗಿ ಜಾತಿ, ಮತ, ಪಂಥ ಭೇದವಿಲ್ಲದೆ ತ್ಯಾಗ ಬಲಿದಾನ ಮಾಡಿದವರನ್ನು ಅವಮಾನಿಸಿದಂತೆ ಮತ್ತು ಅದು ರಾಷ್ಟ್ರದ್ರೋಹಕ್ಕೆ ಸಮ ಎಂದು ನಾವು ಭಾವಿಸಿದ್ದೇವೆ. ರಾಯಣ್ಣನಂತ ವೀರ ಇನ್ಯಾರು ಇರಲು ಸಾಧ್ಯ? ಅವರನ್ನು ಇಡೀ ದೇಶ ಕೊಂಡಾಡುತ್ತಿರುವಾಗ ಜಾತಿಯ ಕಾರಣಕ್ಕೆ ಪ್ರತಿಮೆಗೆ ವಿರೋಧ ಮಾಡುವುದು ಎಷ್ಟು ಸರಿ? ಒಂದು ವರ್ಷದಿಂದ ಈ ಕಾರಣಕ್ಕಾಗಿ ಮಾಶಾಳ ಗ್ರಾಮದಲ್ಲಿ ಪೊಲೀಸ್ ವಾಹನ ನಿಲ್ಲುವಂತಾಗಿದೆ.…
ಉದಯರಶ್ಮಿ ದಿನಪತ್ರಿಕೆ ವರದಿ: ದೇವೇಂದ್ರ ಹೆಳವರ ವಿಜಯಪುರ: ಇದು ವಿಜಯಪುರ ನಗರದ ಮನಗೂಳಿ- ಬಸವನ ಬಾಗೇವಾಡಿ ರಸ್ತೆ ಪಕ್ಕದ ಇಬ್ರಾಹಿಂಪುರ ಬಡಾವಣೆಯಲ್ಲಿರುವ ಪ್ರಾಚೀನವಾದ ಐತಿಹಾಸಿಕ ಹಿರೇಬಾವಿ. ಇದನ್ನು ವಿಜಯಪುರದ ಎರಡನೇ ‘ತಾಜ್ ಬಾವಡಿ’ ಎಂದರೂ ತಪ್ಪಾಗಲಿಕ್ಕಿಲ್ಲ.ನೂರಕ್ಕೂ ಅಧಿಕ ಕಟ್ಟೆಗಳು, ಹಲವು ಕಮಾನುಗಳಿರುವ ಅದ್ಭುತ, ಸುಸಜ್ಜಿತ ಹಾಗೂ ಅತ್ಯಾಕರ್ಷಕ ಕಟ್ಟಡವನ್ನು ಈ ಹಿರಿಬಾವಿ ಹೊಂದಿದೆ.ಈ ಬಾವಿ ಪಶ್ಚಿಮಾಭಿಮುಖವಾಗಿದ್ದು, ಪಶ್ಚಿಮ ದಡದಲ್ಲಿ ನಿಂತು ಪೂರ್ವಕ್ಕೆ ಕಲ್ಲು ಎಸೆದರೆ ಆ ಕಲ್ಲು ಆಚೆ ದಾಟುವುದೇ ಇಲ್ಲ. ಸಂಪೂರ್ಣ ಕಲ್ಲಿನಲ್ಲಿಯೇ ಕಟ್ಟಿರುವ ಹಿರಿಬಾವಿಯ ಕಟ್ಟಡ ಆಗಿನ ಶಿಲ್ಪಕಲೆಗೆ ಈಗಲೂ ಸಾಕ್ಷಿಯಾಗಿದೆ.ಬೇಸಿಗೆಯಲ್ಲೂ ಬತ್ತದ ಇಂಥದೊಂದು ಭವ್ಯವಾದ, ವಿಶಾಲವಾದ, ಅಪಾರ ಜಲರಾಶಿ ತುಂಬಿ ಕೊಂಡಿರುವ ಐತಿಹಾಸಿಕವಾದ ಸುಂದರ ಬಾವಿಯೊಂದು ಇಬ್ರಾಹಿಂಪುರದಲ್ಲಿದೆ ಎನ್ನುವುದೇ ವಿಜಯಪುರ ಜಿಲ್ಲೆಯಲ್ಲಿರುವ ಅನೇಕರಿಗೆ ಗೊತ್ತೇ ಇಲ್ಲ.ಸಚಿವ ಡಾ. ಎಂ.ಬಿ.ಪಾಟೀಲ ಅವರು ಈ ಹಿಂದೆ ಜಲಸಂಪನ್ಮೂಲ ಸಚಿವರಾಗಿದ್ದಾಗ ನೆಲಮಟ್ಟದ ಎತ್ತರಕ್ಕಿದ್ದ ಈ ಐತಿಹಾಸಿಕ ಬಾವಿಯನ್ನು ಪುನರುಜ್ಜೀವನಗೊಳಿಸಿ ಸುತ್ತಲೂ ರಕ್ಷಣಾ ಗೋಡೆ ನಿರ್ಮಿಸಿ ಎಲ್ಲ ಕಡೆಗೂ ಗ್ರಿಲ್ ಹಾಗೂ ಕಬ್ಬಿಣದ…
ಚಡಚಣ ಸರ್ಕಾರಿ ಆಸ್ಪತ್ರೆಗೆ ಲೋಕಾಯುಕ್ತರ ದಿಡೀರ್ ಬೇಟಿ | ಸಿಬ್ಬಂದಿ ಕೊರತೆ |ಬಂದಾದ ಮೆಡಿಕಲ್ ಸ್ಟೋರ್ ಉದಯರಶ್ಮಿ ದಿನಪತ್ರಿಕೆ ಚಡಚಣ: ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಭಾನುವಾರ ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಹೆಚ್ಚುವರಿ ನೋಂದಣಾಧಿಕಾರಿ ಎಂ.ವಿ.ನರಶಿಂಸಾ ಹಾಗೂ ರಾಯಚೂರ ಪೋಲಿಸ್ ಇನಸ್ಪೆಕ್ಟರ್ ರವಿ ಪುರುಷೋತ್ತಮ ಅವರು ಅಚ್ಚರಿಯ ಬೇಟಿ ನೀಡಿದರು.ಪರಿಶೀಲನೆಯ ವೇಳೆ ಅನೇಕ ವಿಭಾಗಗಳಲ್ಲಿ ಸಿಬ್ಬಂದಿ ಗೈರು ಇದ್ದದ್ದು ಕಂಡುಬಂದಿತು. ಆರೋಗ್ಯ ಕೇಂದ್ರದಲ್ಲಿ ಬಂದ್ ಇರುವ ಮೆಡಿಕಲ್ ಸ್ಟೋರ್, ಎಕ್ಸರೇ ಕೊಠಡಿ, ಪ್ರಯೋಗಾಲಯ, ಮಕ್ಕಳ ಆರೋಗ್ಯ ಪುನಶ್ಚೇತನ ಕೊಠಡಿ, ಕಣ್ಣು ತಪಾಸಣಾ ಕೊಠಡಿ, ಡಯಾಲಿಸಿಸ್ ಕೋಣೆ ಗಳಿಗೆ ಬೀಗ ಹಾಕಿರುವದು ಕಂಡುಬಂದಿತು.ಕೋಠಡಿ ಬೀಗ ತೆಗೆಯಲು ಬೀಗದ ಕೈ ಸಲುವಾಗಿ ಪರದಾಡಿದ ಸಿಬ್ಬಂದಿ, ಅದರ ಜೊತೆಗೆ ಡಾಕ್ಟರ್ ಎಲ್ಲಿ ಎಂಬ ಪ್ರಶ್ನೆಗಳಿಗೆ ಸಿಬ್ಬಂದಿಯಿಂದ ಬಂದ ಹಾರಿಕೆ ಉತ್ತರದಿಂದ ಕೆಂಡಾಮಂಡಲರಾದ ಲೋಕಾ ಅಧಿಕಾರಿಗಳು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.ರೋಗಿಗಳಿಗೆ ನೀಡಲಾಗುತ್ತಿರುವ ಸೌಲಭ್ಯಗಳು ಹಾಗೂ ಸ್ವಚ್ಛತೆಯನ್ನು ಪರಿಶೀಲಿಸಿದ ಅಧಿಕಾರಿಗಳು, ಸೇವೆಗಳಲ್ಲಿ ವ್ಯತ್ಯಯ ಉಂಟಾಗದಂತೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.ಈ…
ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ಹತ್ತಾರು ಗ್ರಾಮಗಳ ರೈತರಿಗೆ ನೀರಾವರಿಯ ಉಪಯೋಗ ದೊರೆಯಲಿ ಎಂಬ ಉದ್ದೇಶದಿಂದ ಚಿಕ್ಕಪಡಸಲಗಿ ಬ್ಯಾರೇಜ್ ನಿರ್ಮಿಸುವ ಮೂಲಕ ರೈತರ ಪಾಲಿಗೆ ಭಗಿರಥ ಎನಿಸಿದ್ದ ಮಾಜಿ ಕೇಂದ್ರ ಸಚಿವ ದಿ. ಸಿದ್ದು ನ್ಯಾಮಗೌಡ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹೇಶ ಕೋಳಿ ಹೇಳಿದರು.ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ದಿ. ಸಿದ್ದು ನ್ಯಾಮಗೌಡರ 77ನೇ ಜನ್ಮದಿನ ನಿಮಿತ್ತ ರೋಗಿಗಳಿಗೆ ಹಣ್ಣು ವಿತರಿಸಿ ಅವರು ಮಾತನಾಡಿದರು.ನಗರಸಭೆ ಅಧ್ಯಕ್ಷ ಈಶ್ವರ ವಾಳೆಣ್ಣವರ ಮಾತನಾಡಿದರು.ಮುಖಂಡರಾದ ಮೀರಾ ಒಂಟಮುರಿ, ಶ್ಯಾಮರಾವ ಘಾಟಗೆ, ದಿಲಾವರ ಶಿರೋಳ, ಅನ್ವರ್ ಮೋಮಿನ್, ಪರಮಾನದ ಗವರೋಜಿ, ಸಂಜು ಮೀಶಿ, ರೋಹಿತ್ ಸೂರ್ಯವಂಶಿ, ನವೀನ ಕಲೂತಿ, ಮೈನು ಕಾಟಿಕ, ನಾನಾ ಮೊರೆ, ನಾಗು ಮೀಶಿ, ಮಲ್ಲು ಶಿರಹಟ್ಟಿ, ಮುಂತಾದವರು ಇದ್ದರು.
