Author: editor.udayarashmi@gmail.com

ವಿಜಯಪುರ: ವಾರ್ಡ್ ನಂ. ೧೬ರಲ್ಲಿ ಜಿಲ್ಲೆಯ ವೀರ ಮಹಾರಾಣಾ ಪ್ರತಾಪ್ ಸಿಂಹ ಸೇವಾ ಅಭಿವೃದ್ಧಿ ಸಂಘದ ಪದಾಧಿಕಾರಿಗಳಿಗೆ ಸನ್ಮಾನ ಜರುಗಿತು.ಜಿಲ್ಲಾ ರಜಪೂತ್ ಸಮಾಜದ ಅಧ್ಯಕ್ಷ ಪರಶುರಾಮ್ ಸಿಂಗ್ ರಜಪೂತ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಸಿದ್ದು ಸಿಂಗ್ ರಜಪುತ್, ದತ್ತು ಸಿಂಗ್ ರಜಪೂತ, ಮೋಹನ್ ಸಿಂಗ್ ರಜಪೂತ, ಪ್ರಕಾಶ್ ರಜಪೂತ, ಕಾರ್ಯದರ್ಶಿಗಳಾದ ರಮೇಶ್ ಸಿಂಗ್ ಹಜೇರಿ ಹಾಗೂ ಪುಂಡಲಿಕ್ ರಜಪೂತ, ಸಂತೋಷ್ ತೇಲಿ, ಸುನಿಲ್ ಸಿಂಗ್ ಸದಿವಾಲೆ, ಪ್ರತಾಪ್ ಸಿಂಗ್ ಹಜೇರಿ, ದುಂಡಿ ಸಿಂಗ್ ಹಜೇರಿ, ಮನೋಹರ್ ಸಿಂಗ್ ರಜಪೂತ, ಅಂಬಾಭವಾನಿ ದೇವಸ್ಥಾನದ ಅರ್ಚಕರು ಹಾಗೂ ಗುಲಾಬ್ ಚೌಹಾನ್, ರವಿ ಚೌಹಾನ್, ನಬಿ ಬಿಜಾಪುರ್, ರಾಜು ಸಿಂಗ್ ರಜಪೂತ, ಕೆ ಎಸ್ ಟಿ ಸಂಘದ ಅಧ್ಯಕ್ಷ ಶಿವಾನಂದ್ ಹಿರೇಕುರುಬರ, ರಾಣಿ ಚೆನ್ನಮ್ಮ ಸಂಘದ ಅಧ್ಯಕ್ಷ ಚನ್ನು ಬೆಳೇಗಾವ್, ಬಸವರಾಜ ದೊಡ್ಡಮನಿ, ಸಂತೋಷ್ ರಜಪೂತ, ಇಂದಿರಾಬಾಯಿ ರಜಪೂತ, ಜಯಶ್ರೀ ರಜಪೂತ, ಲಕ್ಷ್ಮಿ ರೈಚೂರ್, ಸವಿತಾ ಚೌಹಾನ್ ಸೇರಿದಂತೆ ಇನ್ನು ಹಲವರು ಭಾಗಿಯಾಗಿದ್ದರುಈ ಸಮಯ ಜಿಲ್ಲಾ…

Read More

ವಿಜಯಪುರ: ಶರೀರ ಕ್ರಿಯಾ ಶಾಸ್ತ್ರಜ್ಞರ ರಾಷ್ಟ್ರೀಯ 34ನೇ ಸಮ್ಮೇಳನ ನವೆಂಬರ್ 1ರಿಂದ ನವೆಂಬರ್ 3ರ ವರೆಗೆ ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದಲ್ಲಿ ನಡೆಯಲಿದೆ.ಸಮ್ಮೇಳನ ಆರಂಭದ ಒಂದು ದಿನ ಮುಂಚೆ ನಿರಂತರ ವೈದ್ಯಕೀಯ ಶಿಕ್ಷಣ ಅಂಗವಾಗಿ ಆರೋಗ್ಯ ಮತ್ತು ಸುಖಃಸ್ಥಿತಿ ಶಾರೀರಿಕ ಶಾಸ್ತ್ರ ಕುರಿತು ಕಾರ್ಯಾಗಾರ ನಡೆಯಲಿದೆ.ಈ ರಾಷ್ಟ್ರಿಯ ಸಮ್ಮೇಳನದಲ್ಲಿ ದೆಹಲಿಯ, ಎ.ಐ.ಐ.ಎಂ.ಎಸ್. ನ ನಿವೃತ್ತ ಡೀನ್ ಹಾಗೂ ಐಐಟಿ ಯ ಪ್ರಾಧ್ಯಾಪಕ ಡಾ. ಕೆ. ಕೆ. ದೀಪಕ ಮುಖ್ಯ ಅತಿಥಿಯಾಗಿ ಪಾಲ್ಗೋಳ್ಳುತ್ತಿದ್ದು, 88 ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಖ್ಯಾತಿಯ ಭಾಷಣಕಾರರ ಪ್ರಬಂಧ ಮಂಡನೆ ಸೇರಿದಂತೆ ಸುಮಾರು 250 ಪ್ರತಿನಿಧಿಗಳು ಈ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ. ರಾಷ್ಟ್ರೀಯ ಶರೀರಕ್ರಿಯಾ ಶಾಸ್ತ್ರಜ್ಞರ ಸೊಸೈಟಿ ನೀಡುವ 6 ರಾಷ್ಟ್ರೀಯ ಭಾಷಣ ಪ್ರಶಸ್ತಿಗಳನ್ನು ಈ ಸಮ್ಮೇಳನದಲ್ಲಿ ನೀಡಿ ಗೌರವಿಸಲಾಗುವುದು.ರಕ್ತನಾಳ, ನರಮಂಡಲ, ನಿರ್ನಾಕಗ್ರಂಥಿ ಶರೀರಕ್ರಿಯಾ ಶಾಸ್ತ್ರ್ರ, ರೋಗವಿಜ್ಞಾನ ಮುಂತಾದ ವಿಷಯಗಳ ಕುರಿತು ವಿಚಾರ ಸಂಕಿರಣಗಳನ್ನು ನಡೆಸಿಕೊಡಲಾಗುತ್ತದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಬ್ರೆಝಿಲ್ ನ ಸಾವೋ ಪಾಲೋ ವಿಶ್ವವಿದ್ಯಾಲಯದ ಡಾ.…

Read More

ವಿಜಯಪುರ: ಪರಿಸರ ಸಂರಕ್ಷಣೆ ಮತ್ತು ಪ್ರಾಚೀನ ಸ್ಮಾರಕಗಳ ಸಂರಕ್ಷಣೆ ಉದ್ದೇಶದಿಂದ ಡಿಸೆಂಬರ್ 24 ರಂದು ನಗರದಲ್ಲಿ ಆಯೋಜಿಸಲಾಗಿರುವ ವೃಕ್ಷೋತ್ಥಾನ್ ಹೆರಿಟೇಜ್ ರನ್- 2023 ಪೂರ್ವ ಸಿದ್ಧತೆಗಳ ಕುರಿತು ಕೋರ್ ಕಮಿಟಿ ಸಭೆ ಶನಿವಾರ ಸಂಜೆ ನಡೆಯಿತು.ಡಾ. ಮಹಾಂತೇಶ ಬಿರಾದಾರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪಾಲ್ಗೋಂಡ ಕೋರ್ ಕಮಿಟಿಯ ನಾನಾ ಉಪಸಮಿತಿಗಳ ಪ್ರಮುಖರು, ಈವರೆಗೆ ಕೈಗೊಳ್ಳಲಾಗಿರುವ ಕ್ರಮಗಳ ಕುರಿತು ಮಾಹಿತಿ ನೀಡಿದರು.ರೂಟ್ ಕಮಿಟಿ ಉಸ್ತುವಾರಿ ಸೋಮಶೇಖರ ಸ್ವಾಮಿ ಮತ್ತು ಸಂತೋಷ ಅವರಸಂಗ ಮಾತನಾಡಿ, ಈ ಸ್ಪರ್ಧೆಯಲ್ಲಿ ಪಾಲ್ಗೋಳ್ಳಲಿರುವ ಓಟಗಾರರಿಗೆ ಚೇತೋಹಾರಿ ಪಾನೀಯ(ಎನರ್ಜೆಲ್) ನೀಡಲು ಎಫ್.ಡಿ.ಸಿ ಕಂಪನಿ ಮುಂದೆ ಬಂದಿದೆ. ಏಳು ಹೈಡ್ರೆಶನ್ ಪಾಯಿಂಟ್ಸ್ ಗಳಲ್ಲಿ ಈ ಕಂಪನಿಯ ಸದಸ್ಯರು ಓಟಗಾರರಿಗೆ ಚೇತೋಹಾರಿ ಪಾನೀಯ ವ್ಯವಸ್ಥೆ ಮಾಡಲಿದ್ದಾರೆ. ಒಟ್ಟು ಏಳು ವಿಭಾಗಗಳಲ್ಲಿ ಈ ಓಟ ನಡೆಯಲಿದ್ದು, 21 ಕಿ. ಮೀ., 10 ಕಿ. ಮೀ., 5 ಕಿ. ಮೀ, 3.50 ಕಿ.ಮೀ., ಹಿರಿಯ ನಾಗರಿಕರು, ವಿಕಲಚೇತನರು ಹಾಗೂ ಮಕ್ಕಳ ವಿಭಾಗದಲ್ಲಿ ಈ ಓಟ ನಡೆಯಲಿದೆ.…

Read More

ಕಾರ್ಯನಿರತ ಪತ್ರಕರ್ತರ ಸಂಘದಿಂದ ಸಚಿವ ಶಿವಾನಂದ ಪಾಟೀಲರಿಗೆ ಸನ್ಮಾನ ವಿಜಯಪುರ: 37ನೇ ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನವನ್ನು ವಿಜಯಪುರ ಜಿಲ್ಲಾ ಘಟಕ ಸಂಘಟಿಸಿ, ಮಾದರಿ ಸಮ್ಮೇಳನ ಮಾಡುವ ಮೂಲಕ ರಾಜ್ಯದ ಪತ್ರಕರ್ತರ ಪ್ರಶಂಸೆಗೆ ಪಾತ್ರವಾಗಿದ್ದು ಸ್ತುತ್ಯ ಕಾರ್ಯ ಎಂದು ಜವಳಿ, ಸಕ್ಕರೆ ಅಭಿವೃದ್ಧಿ ಹಾಗೂ ಎಪಿಎಂಸಿ ಸಚಿವ ಶಿವಾನಂದ ಪಾಟೀಲ ಹೇಳಿದರು.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾಗಿ ಪುನರಾಯ್ಕೆಯಾದ ಹಿನ್ನೆಲೆಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕ ಸಚಿವರ ನಿವಾಸದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸನ್ಮಾನ ಸ್ವೀಕರಿಸಿ, ಅವರು ಮಾತನಾಡಿದರು.ಸಮ್ಮೇಳನದ ಯಶಸ್ಸಿಗೆ ಜಿಲ್ಲೆಯ ಜನಪ್ರತಿನಿಧಿಗಳು, ಮಾಜಿ ಜನಪ್ರತಿನಿಧಿಗಳು ನಾನಾ ಸಂಘ-ಸಂಸ್ಥೆಗಳ ಸಹಕಾರದಲ್ಲಿ ವಿಜಯಪುರ ಸಮ್ಮೇಳನ ಯಶಸ್ಸು ಕಂಡಿತು. ಇದಕ್ಕೆ ಸಂಘದ ಸದಸ್ಯರು ಹಾಗೂ ಪದಾಧಿಕಾರಿಗಳ ದಣಿವರಿಯದ ಕಾರ್ಯವೂ ಕಾರಣವಾಗಿದೆ ಎಂದರು.ಭವಿಷ್ಯದ ದಿನಗಳಲ್ಲಿ ಸಂಘ ನಿರಂತರ ಚಟುವಟಿಕೆಗಳನ್ನು ಹಮ್ಮಿಕೊಂಡರೆ, ಸಂಘದ ಚಟುವಟಿಕೆಗಳಿಗೆ ಕೈ ಜೋಡಿಸುವುದಾಗಿ ಸಚಿವರು ಭರವಸೆ ನೀಡಿದರು.ಸಮ್ಮೇಳನದ ಸವಿನೆನಪಿಗಾಗಿ ಸಂಘ ಹೊರತಂದ ಪತ್ರಕರ್ತ ಸ್ಮರಣ ಸಂಚಿಕೆ ಮೇಲೆ ಕಣ್ಣಾಡಿಸಿದ ಸಚಿವರು, ಸ್ಮರಣ…

Read More

ಭಾವರಶ್ಮಿ ಒಂದೂರಲ್ಲಿ ಒಬ್ಬ ಬಾಲಕನಿದ್ದ. ಅವನಿಗೆ ಗೆಲುವಿನ ಹುಚ್ಚು. ಗೆಲ್ಲಬೇಕು ಯಶಸ್ಸು ಪಡೆಯಬೇಕು ಎಂಬ ಅತಿಯಾದ ಹಸಿವು. ಅವನಿಗೆ ಗೆಲ್ಲುವುದೆಂದರೆ ಎಲ್ಲವೂ ಆಗಿತ್ತು. ಯಶಸ್ಸು ಎನ್ನುವುದು ಗೆಲುವಿನಿಂದಲೆ ಅಳೆಯುವವನಾಗಿದ್ದ. ಅವನು ಅದ್ಭುತವಾದಂತಹ ಓಟಗಾರನಾಗಿದ್ದ. ಅಲ್ಲಿ ನಡೆಯುವ ಓಟದ ಸ್ಪರ್ಧೆ ಅಥವಾ ಪಂದ್ಯಗಳಲ್ಲಿ ಗೆಲುವನ್ನು ಇನ್ನಾರಿಗೂ ಅವನು ಬಿಟ್ಟುಕೊಟ್ಟಿರಲಿಲ್ಲ. ತುಂಬಾ ಪ್ರಖ್ಯಾತನಾಗಿಬಿಟ್ಟ. ಹೀಗೆ ಒಂದು ದಿನ ಆ ಊರಿನಲ್ಲಿ ಒಂದು ಪಂದ್ಯ ಏರ್ಪಾಡಾಯಿತು. ಅದರ ತಯಾರಿಯಲ್ಲಿ ಅವನಿದ್ದ. ಅತೀ ದೊಡ್ಡ ಜನ ಸಾಗರವೆ ಪಂದ್ಯ ನೋಡಲು ಅಲ್ಲಿ ಸೇರಿತ್ತು. ಅವನ ಪ್ರಖ್ಯಾತಿಯನ್ನು ಕೇಳಲ್ಪಟ್ಟ ಪಕ್ಕದ ಊರಿನ ವಯಸ್ಕ ಅನುಭವಿ ಮುದುಕನೊಬ್ಬ ಅವನ ಗೆಲುವನ್ನು ನೋಡಲು ಅಲ್ಲಿ ನಡೆಯುತ್ತಿರುವ ಓಟದ ಸ್ಪರ್ಧೆಗೆ ಆಗಮಿಸುತ್ತಾನೆ. ಪಂದ್ಯ ಪ್ರಾರಂಭವಾಯ್ತು. ಅತೀ ಕಷ್ಟಕರವಾದ ಸ್ಪರ್ಧೆ ಅದಾಯಿತು. ಅದಾಗ್ಯೂ ಆ ಬಾಲಕ ಗೆಲುವು ಸಾಧಿಸಿದ. ನೆರೆದ ಜನಸ್ತೋಮ ಹರ್ಷ ಭರಿತರಾಗಿ ಚಪ್ಪಾಳೆಯ ಮಳೆಯನ್ನೇ ಹರಿಸುತ್ತ, ಆ ಬಾಲಕನತ್ತ ಕೈ ಬೀಸುತ್ತಾ ಇವನ ಗೆಲುವಿಗೆ ಸಾಕ್ಷಿಯಾದರು. ಆದರೆ ಆ ವಯಸ್ಕ ಮುದುಕ…

Read More

ಕಾವ್ಯರಶ್ಮಿ -ಡಾ. ವೆಂಕಟಕೃಷ್ಣ ಕೆ. ಭುವಿಯ ಶಕ್ತಿಗಳು ಗರ್ಭದಲಿ ಸಂಚಯಿಸಿಅದರೊಳಗೆ ಸರ್ವ ಸದ್ಗುಣಗಳು ಮೇಳೈಸಿರೂಪಿತ ಕುಸುಮವದು ಮನಸಾರೆ ಹಾರೈಸಿ ಸಹನೆ ಜಾಣ್ಮೆಗಳೊಡನೆ ಆಸೀಮ ಬಲವಂತೆದೃಢ ಮನಸಿನೊಡನೆ ಸಾಧಿಸುವ ಛಲವಂತೆಭರವಸೆ ಭರಪೂರ ಧೈರ್ಯದ ಸಂಕೇತವಂತೆ ಪ್ರಳಯಕ್ಕೂ ತಳಮಳಿಸದ ಅದಮ್ಯ ಮನೋಬಲಬದುಕಲ್ಲಿ ಏಳುವ ಸುಳಿಗಾಳಿಮಳೆಯಲ್ಲೂ ಅಚಲಸಂಸಾರ ಸಂಕಟಕೂ ಕೆಂಗೆಡದ ಅಖಂಡ ಆತ್ಮಬಲ ಹೆಣ್ಣೆಂದರೆ ಸಾಮರ್ಥ್ಯ ಮುತ್ತು ಹವಳಗಳ ವಾರಿಧಿಮನ ಮಾಡಿದರೆ ಸಾಧನೆಗಿಲ್ಲ ಯಾವುದೇ ಪರಿಧಿಮಾನಿನಿಯು ಮೇದಿನಿಗೆ ದೇವರ ಅಮೂಲ್ಯ ನಿಧಿ ॥

Read More

ಹೊನವಾಡ: ತಿಕೋಟಾ ತಾಲ್ಲೂಕಿನ ಹೊನವಾಡ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಶನಿವಾರ ಆಚರಿಸಲಾಯಿತು.ರಾವಸಾಬ ಶೇಡ್ಯಾಳ ಶಿಕ್ಷಕರು ವಾಲ್ಮೀಕಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.ವ್ಹಿ ವ್ಹಿ ಎಸ್ ಪದವಿ ಪೂರ್ವ ಕಾಲೇಜನಲ್ಲಿ ನಡೆದ ಕಾರ್ಯಕ್ರಮದಲ್ಲಿಪ್ರಾಧ್ಯಪಕರಾದ ಎಂ ಜಿ ಕುಲಕರ್ಣಿ ಮಾತನಾಡಿ, ಮಹನೀಯರುಗಳ ಜೀವನ ಸಾಧನೆ ಹಾಗೂ ಆದರ್ಶಗಳು ಪ್ರೇರಣೆ ನೀಡುತ್ತವೆ. ಅವುಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವುದೇ ಅವರಿಗೆ ಸಲ್ಲಿಸುವ ನಿಜವಾದ ಗೌರವವಾಗಿರುತ್ತದೆ. ದೃಢ ನಿರ್ಧಾರ ಹಾಗೂ ನಿರಂತರ ಪ್ರಯತ್ನದಿಂದ ನಮ್ಮಲ್ಲಿರುವ ದುರ್ಗುಣಗಳನ್ನು ಮೆಟ್ಟಿ ಸದ್ಗುಣಗಳನ್ನು ಬೆಳಸಿಕೊಂಡು ಉತ್ತಮ ವ್ಯಕ್ತಿಗಳಾಗಿ ಬದಲಾವಣೆ ಹೊಂದಲು ಸಾಧ್ಯ ಎಂಬುದನ್ನು ರತ್ನಾಕರ ಎಂಬ ಒಬ್ಬ ಸಾಮಾನ್ಯ ಬೇಟೆಗಾರ ವೃತ್ತಿಯ ವ್ಯಕ್ತಿ ಮಹರ್ಷಿ ವಾಲ್ಮೀಕಿಯಾಗಿ ಪರಿವರ್ತನೆ ಹೊಂದಿರುವುದೇ ಉತ್ತಮ ನಿದರ್ಶನ. ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣ ಗ್ರಂಥವು ಇಡೀ ಜಗತ್ತಿಗೆ ಆದರ್ಶ ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ತಿಳಿಸುವ ಶ್ರೇಷ್ಠ ಮಹಾ ಕಾವ್ಯವಾಗಿದೆ. ಮಹರ್ಷಿ ವಾಲ್ಮೀಕಿಯ ಜೀವನ ಸಂದೇಶಗಳು ಇಂದಿಗೂ ಪ್ರಸ್ತುತ ಎಂದು ಹೇಳಿದರು.ಪ್ರಾಚಾರ್ಯರಾದ ಎಂ ಎ ಹಿರೇಮಠ, ಮಮತಾ ಹಿರೇಮಠ, ಮಂಜುನಾಥ್…

Read More

ಸಿಂದಗಿ: ವಿಶ್ವಕ್ಕೆ ರಾಮಾಯಣದಂತಹ ಮಹಾನ್ ಗ್ರಂಥವನ್ನು ನೀಡಿದ ಮಹರ್ಷಿ ವಾಲ್ಮೀಕಿ ಅವರು ಮಾನವ ಕುಲಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಹಾಗೆಯೇ ಮಾನವೀಯತೆಯೇ ಧರ್ಮ ಎಂಬುದನ್ನು ಪ್ರತಿಪಾದಿಸಿದ್ದರು ಎಂದು ಪ್ರಾಚಾರ್ಯ ವಿಮಲಕಾಂತ ಪಾಟೀಲ ಹೇಳಿದರು.ಪಟ್ಟಣದ ಶ್ರೀ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆಯ ಆರ್.ಡಿ.ಪಾಟೀಲ ಪ.ಪೂ.ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡ ವಾಲ್ಮೀಕಿ ಜಯಂತಿ ಅಂಗವಾಗಿ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.ವಾಲ್ಮೀಕಿ ಮಹರ್ಷಿ ಯಾವುದೇ ಒಂದು ಸಮುದಾಯಕ್ಕೆ ಮಾತ್ರ ಸೀಮಿತವಾದವರಲ್ಲ. ಇಡೀ ವಿಶ್ವಕ್ಕೆ ರಾಮರಾಜ್ಯ ಪರಿಚಯಿಸಿದ ಕೀರ್ತಿ ಮಹರ್ಷಿ ವಾಲ್ಮೀಕಿ ಅವರದ್ದಾಗಿದ್ದು, ರಾಮಾಯಣ ಮಹಾಕಾವ್ಯ ಬರೆಯುವ ಮೂಲಕ ಸತತ ಪರಿಶ್ರಮವಿದ್ದಲ್ಲಿ ಸಾಧನೆ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದರು.ಉಪ ಪ್ರಾಚಾರ್ಯ ಭೀಮನಗೌಡ ಸಿಂಗನಳ್ಳಿ ಮಾತನಾಡಿದರು.ಇದೇ ಸಂದರ್ಭದಲ್ಲಿ ಪಿ.ವ್ಹಿ.ಮಹಲಿನಮಠ, ಎನ್.ಬಿ.ಪೂಜಾರಿ, ಎಸ್.ಜಿ.ಮಾರ್ಸನಳ್ಳಿ, ಎಸ್.ಎಚ್.ಜಾಧವ, ಬಿ.ಬಿ.ಜಮಾದಾರ, ರಾಹುಲ ನಾರಾಯಣಕರ್, ಎನ್.ಎಂ.ಶೆಳ್ಳಗಿ, ವ್ಹಿ.ಕೆ.ಹಿರೇಮಠ, ಐ.ಎಸ್.ಶಿವಸಿಂಪಿಗೇರ್, ವ್ಹಿ.ಪಿ.ನಂದಿಕೋಲ, ಸುಭಾಸ ಹೊಸಮನಿ, ಆರ್.ಎಂ.ಕೊಳ್ಳೂರೆ, ನೀಲಕಂಠ ಮೇತ್ರಿ, ಅಡಿವೆಪ್ಪ ದಸ್ಮಾ, ಎ.ಬಿ.ಬಮ್ಮಣ್ಣಿ, ಭಾಗಮ್ಮ ಕೋರಿ, ಶರಣು ಹೂಗಾರ, ಗವಿಸಿದ್ದಪ್ಪ ಆನೆಗುಂದಿ, ಮೇಘಾ…

Read More

ಇಂಡಿ: ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಟ ವೇಳೆ ಆಹಾರ ನಿರೀಕ್ಷಿಕ ಪರಮಾನಂದ ‌ಹೂಗಾರ ಹಾಗೂ ಗ್ರಾಮೀಣ ಪೋಲಿಸ್ ಠಾಣಾ ಸಬ್ ಇನ್ಸ್ಪೆಕ್ಟರ್ ಸೋಮೇಶ ಗೆಜ್ಜೆ ಹಾಗೂ ಪೊಲೀಸರು ದಾಳಿಗೈದು ಅಕ್ಕಿ ಹಾಗೂ ವಾಹನ ಜಪ್ತಿ ಮಾಡಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಬರಗುಡಿ ಅಹಿರಸಂಗ ರಸ್ತೆಯಲ್ಲಿ ನಡೆದಿದೆ.ಸೂರ್ಯಕಾಂತ ಗೌಡಗಾಂವ ಬಂಧಿತ ಆರೋಪಿ. ಹಾಗೂ ಈತನಿಗೆ ಸೋಲಾಪುರದ ಸೋಹೇಲ್ ಕಲಬುರಗಿ ಅಕ್ಕಿ ತರಲು ಹೇಳಿದ್ದ ಎನ್ನಲಾಗಿದೆ.ಆರೋಪಿ ಟಾಟಾ ಎಸಿ ವಾಹನದಲ್ಲಿ 450 ಕೆಜಿ ಅಕ್ಕಿ ಸಾಗಾಟ ಮಾಡುವಾಗ ಖಚಿತ ಮಾಹಿತಿ ಆಧರಿಸಿ ಪೊಲೀಸರು ದಾಳಿಗೈದು ಅಕ್ಕಿ, ವಾಹನ ಜಪ್ತಿಗೈದಿದ್ದಾರೆ.ಈ ಕುರಿತು ಇಂಡಿ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More