Author: editor.udayarashmi@gmail.com

ವಿಜಯಪುರ: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ದಿ.೧೦-೦೫-೨೦೨೩ ರಂದು ಮತದಾನ ಜರುಗಲಿದ್ದು, ಮತದಾನ ದಿನ ಹಾಗೂ ಮತದಾನ ಪೂರ್ವ ದಿನದಂದು ಜಿಲ್ಲೆಯ ವಿಧಾನಸಭಾ ಮತಕ್ಷೇತ್ರಗಳ ವ್ಯಾಪ್ತಿಯಲ್ಲಿ ಜರುಗುವ ಸಂತೆ, ಜಾತ್ರೆ ಮತ್ತು ಉತ್ಸವಗಳನ್ನು ನಿಷೇಧಿಸಿ ಜಿಲ್ಲಾ ದಂಡಾಧಿಕಾರಿಗಳಾದ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಆದೇಶ ಹೊರಡಿಸಿದ್ದಾರೆ.ಮತದಾನವು ಶಾಂತಿಯುತವಾಗಿ ಜರುಗಿಸುವ ದೃಷ್ಟಿಯಿಂದ ಮತದಾನ ಪೂರ್ವ ದಿನವಾದ ದಿನಾಂಕ : ೦೯-೦೫-೨೦೨೩ ಹಾಗೂ ಮತದಾನ ದಿನವಾದ ದಿನಾಂಕ : ೧೦-೦೫-೨೦೨೩ರ ಎರಡೂ ದಿನಗಳಂದು ಜಿಲ್ಲೆಯ ವಿಧಾನಸಭಾ ಮತಕ್ಷೇತ್ರಗಳ ವ್ಯಾಪ್ತಿಯಲ್ಲಿ ಜರುಗುವ ಸಂತೆ, ಜಾತ್ರೆ ಮತ್ತು ಉತ್ಸವಗಳನ್ನು ನಿಷೇಧಿಸಿ ಅವರು ಆದೇಶ ಹೊರಡಿಸಿದ್ದಾರೆ.

Read More

ದೇವರಹಿಪ್ಪರಗಿ: ಜೆಡಿಎಸ್ ಅಭ್ಯರ್ಥಿಯ ಕುರಿತಾಗಿ ಕಾಂಗ್ರೆಸ್ ಪಕ್ಷ ಇಲ್ಲಸಲ್ಲದ ಅಪಪ್ರಚಾರ ಮಾಡುತ್ತಿದ್ದು ಯಾವುದೇ ಕಾರಣಕ್ಕೂ ಸಮುದಾಯ ಇಂತಹ ಸುಳ್ಳುಪ್ರಚಾರಕ್ಕೆ ಮರುಳಾಗಬಾರದು ಎಂದು ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷ ರಿಯಾಜ್ ಯಲಗಾರ ಹೇಳಿದರು.ಪಟ್ಟಣದಲ್ಲಿ ಶನಿವಾರ ಜರುಗಿದ ಮುಸ್ಲಿಂ ಸಮುದಾಯದ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಸಾಮಾಜಿಕ ಜಾಲತಾಣಗಳಲ್ಲಿನ ಜೆಡಿಎಸ್ ಅಭ್ಯರ್ಥಿ ರಾಜುಗೌಡ ಪಾಟೀಲರ ಹಿಂದಿನ ಆರ್.ಎಸ್.ಎಸ್ ಫೋಟೋಗಳನ್ನು ಬಳಸಿಕೊಳ್ಳುವ ಮೂಲಕ ಮುಸ್ಲಿಮರಲ್ಲಿ ಅವರ ಕುರಿತಂತೆ ತಪ್ಪು ಭಾವನೆ ಮೂಡಿಸಲು ಪ್ರಯತ್ನಿಸುತ್ತಿದೆ. ಆದರೆ ವಾಸ್ತವಿಕವಾಗಿ ಈ ಎಲ್ಲ ಫೋಟೋಗಳು ೨೦೦೮ ಕ್ಕಿಂತ ಮುಂಚೆ ತೆಗೆದ ಪೋಟೋಗಳು. ಇವುಗಳ ಕುರಿತು ಈಗ ಮಾತನಾಡುವ ಅಗತ್ಯವಿಲ್ಲ. ಆದ್ದರಿಂದ ಮತಕ್ಷೇತ್ರದ ಮುಸ್ಲೀಂ ಸಮುದಾಯದವರು ಈ ಕುರಿತಂತೆ ಯಾವುದೇ ಸಂಶಯ ಪಡದೇ ಹಾಗೂ ಇತರ ಯಾವುದೇ ಪಕ್ಷಗಳ ಆಮಿಷಗಳಿಗೆ ಒಳಗಾಗದೇ ಜೆಡಿಎಸ್ ಅಭ್ಯರ್ಥಿ ಪರ ಮತ ನೀಡಬೇಕೆಂದು ವಿನಂತಿಸಿದರು.ವಕೀಲ ಎ.ಎಮ್.ತಾಂಬೋಳಿ, ಅಂಜುಮನ್ ಕಮೀಟಿ ಅಧ್ಯಕ್ಷ ಮಹಿಬೂಬ್ ಮನಿಯಾರ್, ಎ.ಡಿ.ಮುಲ್ಲಾ, ಮುನೀರ್ ಅಹ್ಮದ್ ಮಳಖೇಡ, ರಫೀಕ್ ಪಾನಪರೋಷ ಮಾತನಾಡಿ,…

Read More

ಮುದ್ದೇಬಿಹಾಳ: ಈ ನಾಡನ್ನು ಸೌಹಾರ್ಧಯುತವಾಗಿ ಉಳಿಸಿಕೊಳ್ಳಲು ವಿಧಾನಸಭೆಯ ಚುನಾವಣೆಯಲ್ಲಿ ಎಲ್ಲ ದಲಿತ ಬಾಂಧವರು ಕೋಮುವಾದದ ವಿರೋಧವಿರುವ ಸಮರ್ಥ ಅಭ್ಯರ್ಥಿಗೆ ಮತ ನೀಡಬೇಕು ಎಂದು ಬಂಡಾಯ ಸಾಹಿತಿ ಬಸವರಾಜ ಸೂಳಿಭಾವಿ ಹೇಳಿದರು.ಪಟ್ಟಣದ ಸಾಂಘವಿ ಹೋಟೆಲಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಸಧ್ಯ ಸಂವಿಧಾನವನ್ನೇ ಬದಲಿಸಲು ಹೊರಟಿರುವ, ಕನ್ನಡದ ಹಿತಾಸಕ್ತಿಗೆ ವಿರುದ್ಧವಾದ, ಕನ್ನಡದ ಅಸ್ಮಿತೆಗೆ ವಿರುದ್ಧವಾದ, ದಲಿತ ವಿರೋಧಿ, ರೈತ ವಿರೋಧಿ, ಮಹಿಳಾ ವಿರೋಧಿಯಾಗಿರುವ ರಾಜಕೀಯ ಪಕ್ಷ ನಮ್ಮ ನಡುವೆ ಇದೆ. ಒಂದು ಸಮುದಾಯವನ್ನು ಇನ್ನೊಂದು ಸಮುದಾಯದ ವಿರುದ್ಧ, ಒಂದು ಜಾತಿಯನ್ನು ಇನ್ನೊಂದು ಜಾತಿಯ ವಿರುದ್ಧ ಎತ್ತಿ ಕಟ್ಟಿ, ಒಗ್ಗೂಡಿಕೊಂಡು ಬಂದ ಪರಂಪರೆಯನ್ನು ನಾಶ ಮಾಡುತ್ತಿದೆ. ಹಾಗಾಗಿ ಎಲ್ಲ ದಲಿತ ಬಾಂಧವರು ಕೋಮುವಾದಿ ಪಕ್ಷಕ್ಕೆ ಮತ ನೀಡದೇ ದ್ವೇಷದ ರಾಜಕಾರಣದ ವಿರುದ್ಧ ಮತಚಲಾಯಿಸುವಂತೆ ತಿಳಿಸಿದರು.ಡಿಎಸ್‌ಎಸ್ ಜಿಲ್ಲಾ ಸಂಘಟನಾ ಸಂಚಾಲಕ ಚನ್ನು ಕಟ್ಟಿಮನಿ ಮಾತನಾಡಿ, ಸಧ್ಯದ ಆಡಳಿತದಲ್ಲಿ ದಲಿತರ ಮೇಲೆ, ರೈತರ ಮೇಲೆ ಹಲ್ಲೆಗಳಾದ ಸಾಕಷ್ಟು ಉದಾಹರಣೆಗಳಿವೆ. ದಲಿತರ ಕಲ್ಯಾಣಕ್ಕಾಗಿ ಇರುವ ಸಾಕಷ್ಟು ಯೋಜನೆಗಳನ್ನು ಬಿಜೆಪಿ…

Read More

ಕೊಲ್ಹಾರ: ಬಿಜೆಪಿ ಡಬಲ್ ಇಂಜಿನ್ ಸರ್ಕಾರದ ಒಂದು ದೊಡ್ಡ ಸಾಧನೆ ಏನೆಂದರೆ ಅವಳಿ ಜಿಲ್ಲೆಯಲ್ಲಿ ನಾಡಿನ ವಿವಿದೆಡೆ ರೈತರು ಬೆಳೆದ ಉಳ್ಳಾಗಡ್ಡಿ (ಈರುಳ್ಳಿ)ಗೆ ಯೋಗ್ಯ ಬೆಲೆ ನೀಡದೆ ರೈತರ ಕಣ್ಣಲ್ಲಿ ನೀರು ತರಿಸಿದ್ದೇ ಒಂದು ಮಹತ್ಸಾಧನೆಯಾಗಿದೆ ಎಂದು ಶಾಸಕ ಶಿವಾನಂದ ಪಾಟೀಲ ಹೇಳಿದರು.ವಿಧಾನಸಭಾ ಚುನಾವಣಾ ನಿಮಿತ್ಯವಾಗಿ ತಾಲೂಕಿನ ಮುಳವಾಡ ಗ್ರಾಮದಲ್ಲಿ ಹಮ್ಮಿಕೊಂಡ ಕೊಲ್ಹಾರ ತಾಲೂಕು ಕಾಂಗ್ರೆಸ್ ಪಕ್ಷದ ಚುನಾವಣೆ ಪ್ರಚಾರ ಸಭೆ ಹಾಗೂ ವಿವಿಧ ಪಕ್ಷಗಳಿಂದ ಆಗಮಿಸಿದ ಕಾರ್ಯಕರ್ತರ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಮತಯಾಚಿಸಿ ಅವರು ಮಾತನಾಡಿದರು.ಜನರಿಗೆ ಕಾಂಗ್ರೆಸ್ ಪಕ್ಷ ಗ್ಯಾರೆಂಟಿ ಕಾರ್ಡ ಕೊಟ್ಟಿದೆ, ಅಧಿಕಾರ ಬಂದ ೨೪ ಘಂಟೆಯಲ್ಲಿ ಕೊಟ್ಟ ಭರವಸೆಗಳನ್ನು ಈಡೇರಿಸುತ್ತೇವೆ. ಕಾಂಗ್ರೆಸ್ ಗ್ಯಾರೆಂಟಿ ಕಾರ್ಡಗೆ ವಾರಂಟಿ ಇಲ್ಲ ಎನ್ನುವ ಬಿಜೆಪಿ ಸರ್ಕಾರಕ್ಕೆ ಈ ಹಿಂದೆ ಸಿದ್ರಾಮಯ್ಯನವರ ಕೊಟ್ಟ ಭಾಗ್ಯಗಳ ಭರವಸೆಗಳನ್ನು ಈಡೇರಿಸಿ ನುಡಿದಂತೆ ನಡೆದಿದ್ದೇವೆ. ಬಿಜೆಪಿಯವರ ಸುಳ್ಳು ಭರವಸೆಗಳಿಗೆ ಮರುಳಾಗದೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದು ಮತದಾರರಲ್ಲಿ ವಿನಂತಿಸಿದರು.ಸುಪ್ರೀAಕೋರ್ಟನಲ್ಲಿ ಕೃಷ್ಣಾ ನದಿ ವ್ಯಾಜ್ಯ ಇತ್ಯರ್ಥವಾದರೆ ೮೪ ಟಿಎಮ್‌ಸಿ…

Read More

ಯಡ್ರಾಮಿ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶುಕ್ರವಾರ ಪಟ್ಟಣದ ಮುರುಗೇಂದ್ರ ಶಿವಯೋಗಿಗಳ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.ಈ ಸಂದರ್ಭದಲ್ಲಿ ಶ್ರೀಮಠದ ಸಿದ್ದಲಿಂಗ ಶ್ರೀಗಳ ಅನುಪಸ್ಥಿತಿಯಲ್ಲಿ ಅವರ ವತಿಯಿಂದ ಶ್ರೀಮಠದ ಭಕ್ತರಾದ ಬಸವರಾಜ ಹೋರಗಿನಮಠ, ಎನ್.ಆರ್.ಪಾಟೀಲ, ಪ್ರಕಾಶ ಬೆಲ್ಲದ, ಲಕ್ಷ್ಮಿಕಾಂತ ಸೊನಾರ, ಚನ್ನವೀರ ಬಂಡೆಪಗೋಳ, ರೇವಣಸಿದ್ಧ ಬೆಲ್ಲದ, ಸಂತೋಷ ಯತ್ನಾಳ, ಮಂಜುನಾಥ ಮಠ, ಶಿವಾನಂದ ಮಠ ಅವರು ಯಡಿಯೂರಪ್ಪನವರನ್ನು ಸನ್ಮಾನಿಸಿ ಗೌರವಿಸಿದರು.ಜೇವರ್ಗಿ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವರಾಜ ಪಾಟೀಲ ರದ್ದೇವಾಡಗಿ, ಬಿಜೆಪಿ ಮುಖಂಡರಾದ ರೇವಣಸಿದ್ದಪ್ಪ ಸಂಕಾಲಿ ಮತ್ತು ಶೋಭಾ ಬಾಣಿ ಇದ್ದರು.

Read More

ವಿಜಯಪುರ: ವಿಶ್ವಗುರು ಬಸವಣ್ಣನವರ ಸಾಮಾಜಿಕ ನ್ಯಾಯ ಅನುಸರಿಸುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಏ.೨೯ರಂದು ಶನಿವಾರ ಮಧ್ಯಾಹ್ನ ೧೨.೧೫ಕ್ಕೆ ಬಸವನಾಡು ವಿಜಯಪುರಕ್ಕೆ ಆಗಮಿಸಲಿದ್ದಾರೆ ಎಂದು ಭಾರತೀಯ ಜನತಾ ಪಕ್ಷದ ಜಿಲ್ಲಾದ್ಯಕ್ಷ ಆರ್.ಎಸ್.ಪಾಟೀಲ (ಕೂಚಬಾಳ) ತಿಳಿಸಿದ್ದಾರೆ.ಶುಕ್ರವಾರ ನಗರದ ಬಿಜೆಪಿ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಏ.೨೯ ರಂದು ಕರ್ನಾಟಕ ಚುನಾವಣೆ ಪ್ರಚಾರದ ಮೊದಲ ಸಭೆಯನ್ನು ಹುಮನಾಬಾದಲ್ಲಿ ಮುಗಿಸಿ ಅಲ್ಲಿಂದ ನೇರವಾಗಿ ನಗರದ ಸೈನಿಕ ಶಾಲೆಯಲ್ಲಿ ಪಕ್ಷವು ಆಯೋಜಿಸಲಾದ ಚುನಾವಣೆ ಪ್ರಚಾರದ ಬ್ರಹತ್ ಸಮಾವೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದರು. ಪ್ರಧಾನಿ ಮೋದಿ ಅವರ ಪ್ರಚಾರ ಸಭೆಗೆ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದ್ದು, ಸುಮಾರು ೨ಲಕ್ಷ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ೮೦ ಸಾವಿರ ಜನರಿಗೆ ಆಸನದ ವ್ಯವಸ್ಥೆ ಮಾಡಲಾಗಿದ್ದು ನಗರದ ನಾಲ್ಕು ಕಡೆಗೆ ವಾಹನಗಳ ನಿಲುಗಡೆಗೆ ಪಾರ್ಕಿಗಂಗ್ ವ್ಯವಸ್ಥೆ ಮಾಡಲಾಗಿದೆ. ವಿವಿಐಪಿಗಳಿಗೆ ೧೦೦೦ ಆಸನಗಳು, ವಿಐಪಿಗಳಿಗೆ ೩೦೦೦ ಆಸನಗಳ ವ್ಯವಸ್ಥೆ ಮಾಡಲಾಗಿದೆ ಎಂದರು.ವೇದಿಕೆ ಮೇಲೆ ಉಪಸ್ಥಿತರಿರಲು ೧೮-೧೯ ಗಣ್ಯರಿಗೆ ಅವಕಾಶವಿದ್ದು ಜಿಲ್ಲೆಯ ೮ ವಿಧಾನಸಭೆ ಕ್ಷೇತ್ರಗಳ ಮತ್ತು…

Read More

ವಿಜಯಪುರ: ಕೆಪಿಸಿಸಿ ಮಾಜಿ ಅಧ್ಯಕ್ಷ, ಮಾಜಿ ಡಿಸಿಎಂ ಮತ್ತು ಹಿರಿಯ ನಾಯಕ ಡಾ. ಜಿ. ಪರಮೇಶ್ವರ ಅವರ ಮೇಲೆ ನಡೆದಿರುವ ಹಲ್ಲೆಯನ್ನು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ತೀವ್ರವಾಗಿ ಖಂಡಿಸಿದ್ದಾರೆ.ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗಳು ಬರುತ್ತವೆ. ನಾವು ಜನರ ಬಳಿಗೆ ಹೋಗಿ ನಾವು ಮಾಡಿದ ಅಭಿವೃದ್ಧಿ ಕೆಲಸಗಳು ಮತ್ತು ಸಿದ್ದಾಂತಗಳನ್ನು ಹೇಳಿ ಮತಗಳನ್ನು ಪಡೆಯಬೇಕು ಹೊರತು ಈ ರೀತಿ ಹಲ್ಲೆ ಮಾಡುವುದು ಖಂಡನೀಯ. ಕಲ್ಲು ತೂರಿದ್ದರಿಂದ ಡಾ. ಜಿ. ಪರಮೇಶ್ವರ ಅವರ ತಲೆಗೆ ಗಾಯವಾಗಿದೆ. ಇದು ಅತ್ಯಂತ ಹೀನಾಯ ಕೃತ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ. ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ. ದೇವರ ಅವರಿಗೆ ಉತ್ತಮ ಆರೋಗ್ಯ ಕೊಡಲಿ. ಅವರು ಶೀಘ್ರ ಗುಣಮುಖವಾಗಿ ಚುನಾವಣೆಯ ಪ್ರಕ್ರಿಯೆಯಲ್ಲಿ ಭಾಗವಹಿಸಿ ಹೆಚ್ಚಿನ ಬಹುಮತದಿಂದ ಜಯಗಳಿಸಲಿ ಎಂದು ಎಂ. ಬಿ. ಪಾಟೀಲ ಶುಭ ಹಾರೈಸಿದ್ದಾರೆ. ಈ ಕುರಿತು ಟ್ವೀಟ್ ಕೂಡ ಮಾಡಿರುವ ಎಂ. ಬಿ. ಪಾಟೀಲರು, ಕೆಪಿಸಿಸಿ…

Read More

ವಿಜಯಪುರ: ಕಟಕದೊಂಡ ನಾಲ್ಕು ಒಳ್ಳೆಯ ಕೆಲಸ ಮಾಡ್ತಾರೆ, ಕೆಟ್ಟದ್ದಂತೂ ಅವರಿಂದ ಸಾಧ್ಯವೇ ಇಲ್ಲ ಎಂದು ಮಾಜಿ ಸಚಿವ ಎಂ.ಬಿ. ಪಾಟೀಲ್ ಹೇಳಿದರು.ಇಲ್ಲಿನ ಹನ್ನೆರಡನೆಯ ವಾರ್ಡನ್‌ನ ಗಚ್ಚಿನಕಟ್ಟಿ ಕಾಲೊನಿಯಲ್ಲಿ ನಾಗಠಾಣ ಕಾಂಗ್ರೆಸ್ ಅಭ್ಯರ್ಥಿ ವಿಠ್ಠಲ ಕಟಕದೊಂಡ ಅವರಿಗೆ ಮತ ಕೋರಿ ಮಾತನಾಡಿದರು.ರಾಜು ಆಲಗೂರ ತ್ಯಾಗದಿಂದ ಇವರಿಗೆ ಟಿಕೆಟ್ ಸಿಕ್ಕಿದೆ. ಇವರನ್ನು ಆರಿಸದಿದ್ದರೆ ಕೆಟ್ಟವರು ಬರ್ತಾರೆ ಎಂದರು.ಸಿಲಿಂಡರ್, ಪೆಟ್ರೋಲ್ ರೇಟು ಎರಡು ರೂಪಾಯಿ ಹೆಚ್ಚಿದರೂ ಬಿಜೆಪಿಯವರು ಆಗ ಬಾಯಿ ಬಡ್ಕೋತಿದ್ರು. ಈಗ ಅವರೇನು ಮಾಡ್ತಿದ್ದಾರೆ ಎಂದು ಪ್ರಶ್ನಿಸಿದ ಅವರು, ಮೋದಿ ಮೋದಿ ಅನ್ನುತ್ತಿದ್ದವರ ಭ್ರಮೆ ಈಗ ಇಳಿದಿದೆ. ಯುವಕರ ತಲೆಯಿಂದ ಬಿಜೆಪಿ ಹೋಗುತ್ತಿದೆ. 40 ಪರ್ಸೆಂಟ್ ತಿನ್ನೋದೆ ಇವರ ಸಾಧನೆ. ಡಬಲ್ ಇಂಜಿನ್ ಎರಡೂ ಫೇಲಾಗಿವೆ. ಇವನ್ನು ಕಿತ್ತು ಹಾಕಿ ಕಾಂಗ್ರೆಸ್ ತನ್ನಿ. ಬಿಜೆಪಿಯವರು ಕರ್ನಾಟಕದ ಘನತೆ ಹಾಳು ಮಾಡಿದ್ದಾರೆ. ತೋಟಗಾರಿಕೆ ಇಲಾಖೆ ಸೇರಿ ಎಲ್ಲ ಮುಚ್ಚಿದ್ದಾರೆ ಎಂದರು.ಜಿಲ್ಲೆಗೆ ಬೇಸಿಗೆಯಲ್ಲೂ ನೀರು ಒದಗಿಸಿದ್ದೇವೆ. ಹಲವಾರು ಕೆಲಸ ಮಾಡಿದ್ದೇವೆ. ಮತ್ತೆ ವಿಜಯಪುರ ಅಭಿವೃದ್ಧಿ ಪರ್ವ ಆರಂಭವಾಗಲಿದೆ.…

Read More

ಏ.30ರಂದು ಮತದಾನ ಜಾಗೃತಿ ಕಾರ್ಯಕ್ರಮ ಯಶಸ್ವಿಗೊಳಿಸಲು ಜಿಲ್ಲಾಧಿಕಾರಿ ಡಾ.ವಿಜಯ ಮಹಾಂತೇಶ ಕರೆ ವಿಜಯಪುರ: ಏಪ್ರಿಲ್ 30 ರಂದು ರಾಷ್ಟ್ರೀಯ ಹಬ್ಬದ ಮಾದರಿಯಲ್ಲಿ ಜರುಗುವ “ನಮ್ಮ ನಡೆ ಮತಗಟ್ಟೆಯ ಕಡೆ” ಕಾರ್ಯಕ್ರಮದಲ್ಲಿ ಎಲ್ಲರೂ ಅತ್ಯುತ್ಸಾಹದಿಂದ ಭಾಗವಹಿಸಿ, ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಗೊಳಿಸುವುದರ ಜೊತೆಗೆ ಮತದಾರರಲ್ಲಿ ಮತದಾನ ಅರಿವು ಮೂಡಿಸಬೇಕೆಂದು ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಾದ ಡಾ.ವಿಜಯ ಮಹಾಂತೇಶ ದಾನಮ್ಮನವರ ಅವರು ಕರೆ ನೀಡಿದರು.ಶುಕ್ರವಾರ ಜಿಲ್ಲಾ ಪಂಚಾಯತಿ ಸಭಾ ಭವನದಲ್ಲಿ “ನಮ್ಮ ನಡೆ ಮತಗಟ್ಟೆಯ ಕಡೆ” ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು ಈಗಾಗಲೇ ಮುಖ್ಯ ಚುನಾವಣಾಧಿಕಾರಿಗಳು ಈ ಕಾರ್ಯಕ್ರಮ ರೂಪರೇಷಗಳ ಕುರಿತು ಮಾರ್ಗಸೂಚಿಯಲ್ಲಿ ತಿಳಿಸಿದಂತೆ ಎಲ್ಲರೂ ಕಡ್ಡಾಯವಾಗಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿದರು.ಜಿಲ್ಲೆಯ ಎಲ್ಲ ಮತಗಟ್ಟೆಗಳಲ್ಲಿ ಈ ಕಾರ್ಯಕ್ರಮವನ್ನು ಏಕಕಾಲಕ್ಕೆ ಹಮ್ಮಿಕೊಂಡಿದ್ದು, ಏಪ್ರಿಲ್ 30ರ ಬೆಳಿಗ್ಗೆ 8 ಗಂಟೆಯೊಳಗಾಗಿ ಸಂಬAಧಿಸಿದ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಮತಗಟ್ಟೆಗಳಿಗೆ ತೆರಳಿ ಪೂರ್ವ ಸಿದ್ಧತೆ ಕೈಗೊಂಡು ನಿಯಮಾನುಸಾರ ಕಾರ್ಯಕ್ರಮ ಆಯೋಜಿಸಲು ಕ್ರಮವಹಿಸಬೇಕು. ಮತಗಟ್ಟೆ ಹಂತದಲ್ಲಿ ಮತಗಟ್ಟೆ…

Read More

ವಿಜಯಪುರ: ಪ್ರತಿಯೊಂದು ಮತ ಕೂಡ ಅಮೂಲ್ಯವಾಗಿವೆ. ನಗರದ ಸುರಕ್ಷತೆ ಹಾಗೂ ಅಭಿವೃದ್ಧಿ ಗಾಗಿ ಎಲ್ಲರೂ ಮತದಾನ ಮಾಡಬೇಕು ಎಂದು ಯುವ ನಾಯಕ ರಾಮನಗೌಡ ಬ ಪಾಟೀಲ ಯತ್ನಾಳ ಅವರು ಹೇಳಿದರು. ನಗರ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯ ವಾ.ನಂ.7ರ ಢೋರ ಗಲ್ಲಿಯಲ್ಲಿ ವೀರಶೈವ ಡೋರ ಕಕ್ಕಯ್ಯ ಸಮಾಜದ ಸಭೆ ಹಾಗೂ ಪಾದಯಾತ್ರೆ ಮೂಲಕ ಮತಯಾಚನೆ. ಕಲಾಲ ಗಲ್ಲಿ ಮತ್ತು ಅಗಸರ ಗಲ್ಲಿಯಲ್ಲಿ ಪಾದಯಾತ್ರೆ ಮೂಲಕ ಮತಯಾಚನೆ. ವಾ.ನಂ.31ರ ಅಜರೇಕರ ಚಾಳ, ಅಯೋಧ್ಯಾ ನಗರ, ಶಾಹುನಗರ, ತೆಗ್ಗಿನ ಹನುಮಾನ ಗುಡಿ, ಅಡಕಿ ಗಲ್ಲಿ, ಮಂಜಣ್ಣ ಗಲ್ಲಿಯಲ್ಲಿ ಪಾದಯಾತ್ರೆ ಮೂಲಕ ಮತಯಾಚನೆ ಮಾಡಿ ಅವರು ಮಾತನಾಡಿದರು. ಒಬ್ಬರು ಶಾಸಕರು ಹೇಗಿರಬೇಕು ಎಂಬುದು ತಂದೆಯ ಅಭಿವೃದ್ಧಿ ಕಾರ್ಯಗಳ ಮೂಲಕ ತಿಳಿದಿದೆ. ಬರೀ ಶಾಸಕರಾಗಿಯೇ ಇಷ್ಟೊಂದು ಒಳ್ಳೆಯ ಕೆಲಸ ಮಾಡಿದ್ದಾರೆಂದರೇ, ಮುಂದು ದೊಡ್ಡ ಹುದ್ದೆ ಸಿಗುವ ನಿರಿಕ್ಷೆಯಿದೆ. ಆಗ ನಗರ ಹಾಗೂ ಜಿಲ್ಲೆಯ ಚಿತ್ರಣ ಹೇಗೆ ಬದಲಾಗಬಹುದು ಯೋಚಿಸಿ, ತಂದೆಗೆ ಆಶೀರ್ವದಿಸಿ. ತಮ್ಮ ನಿರೀಕ್ಷೆ ಹುಸಿಯಾಗದಂತೆ ನಡೆದುಕೊಳ್ಳುತ್ತಾರೆ ಎಂದು…

Read More