Author: editor.udayarashmi@gmail.com

*- ಸಿದ್ರಾಮ .ಎಂ. ಮಾಳಿ*ಚಡಚಣ: ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ರೇವತಗಾಂವ ಗ್ರಾಮವು ಮಹಾರಾಷ್ಟ್ರದ ಗಡಿಭಾಗದ ದೇಗುಲವು, ಸೂಕ್ಷ್ಮ ವಾಸ್ತುಶಿಲ್ಪ ಶೈಲಿಯ ದೇವಾಲಯವು ಪ್ರವಾಸಿಗರ ಗಮನವನ್ನು ಸೆಳೆಯುತ್ತದೆ. ಗ್ರಾಮದಲ್ಲಿರುವ ಶ್ರೀ ಸದ್ಗುರು ಸಿಂಹಗಢ ಮಹಾರಾಜರ ದೇವಾಲಯವು ಅತ್ಯಂತ ಪ್ರಸಿದ್ಧಿ ಪಡೆದ ಈ ದೇವಾಲಯವು ಹಲವಾರು ವರ್ಷಗಳ ಇತಿಹಾಸ ಹೊಂದಿದೆ.ಈ ಸಿಂಹಗಢ ಮಹಾರಾಜರ ದೇವಾಲಯವು ದ್ರಾವಿಡ ಶೈಲಿಯ ಸಭಾಮಂಟಪ , ಪ್ರದಕ್ಷಣಾಪಥ ಕುರುಹುಗಳನ್ನು ಇರುವದು ನೋಡಿದರೆ, ಈ ದೇವಾಲಯಗಳು ಹಂಪಿ ಮಾದರಿಯಲ್ಲಿ ನಿರ್ಮಿಸಲಾಗಿದೆ ಎಂಬುದು ತಿಳಿದುಬರುತ್ತದೆ. ಈ ದೇವಾಲಯದಲ್ಲಿ ಬೃಹತ್ ಗಾತ್ರದ ಮಹಾದೇವನ ಲಿಂಗವೂ ಇದೆ. ಸುಮಾರು ೬೪ ವರ್ಷಗಳ ಹಿಂದೆ ಅಂದರೆ, ೧೯೫೯ ರಲ್ಲಿ ಮಹಾದೇವನ ದೇವಾಲಯವೆಂದು ಕರೆಯುತ್ತಾರೆ.ಸುಮಾರು ೬೪ ವರ್ಷಗಳ ಹಿಂದೆ ರೇವತಗಾಂವ ಗ್ರಾಮಕ್ಕೆ ಆಗಮಿಸಿದ ಸಿಂಹಗಢ ಮಹಾರಾಜರು ಮೂಲತಃ ಮಹಾರಾಷ್ಟ್ರದ ಪುಣೆ ಜಿಲ್ಲೆಯ ಸಮೀಪದಲ್ಲಿರುವ ಸಿಂಹಗಢ ಎಂಬ ಪುಟ್ಟ ಗ್ರಾಮದಲ್ಲಿ ಜನಿಸಿದರು. ವಾಹನ ಚಾಲಕರಾಗಿ ಕಾರ್ಯ ನಿರ್ವಹಿಸುತಿದ್ದ ಸಮಯದಲ್ಲಿ ಆ ವಾಹನವು ಅಪಘಾತಕ್ಕಿಡಾಗಿ ಬದುಕಿ ಉಳಿದ ಅವರು ಮುಂದೆ…

Read More

ಆಲಮೇಲ: ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು ಮನುಕುಲವನ್ನು ಆಧ್ಯಾತ್ಮದಿಂದ ಜಾಗೃತ ಮೂಡಿಸಿದವರು, ಅವರ ಜೀವನದ ಉದ್ದಕ್ಕೂ ಗಾಳಿ, ನೀರು, ಬೆಳಕು, ನಿಸರ್ಗವನ್ನು ಪ್ರೀತಿಸುತ್ತಿದ್ದರು ಎಂದು ಪೂಜ್ಯ ಅಮೃತಾನಂದ ಶ್ರೀಗಳು ಹೇಳಿದರು.ಅವರು ಪಟ್ಟಣದ ಅಳ್ಳೋಳ್ಳಿಮಠದಲ್ಲಿ ಹಮ್ಮಿಕೊಳ್ಳಲಾದ ಗುರುನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.ಮಹಾಂತ ಶ್ರೀಗಳು ಮಾತನಾಡಿ, ಪ್ರತಿಯೊಬ್ಬರು ಸಿದ್ದೇಶ್ವರ ಶ್ರೀಗಳು ಹಾಕಿಕೊಟ್ಟ ಜ್ಞಾನ ದಾಸೋಹದ ಮೂಲಕ ಜನರ ಬದುಕನ್ನು ಪರಿವರ್ತನೆ ಮಾಡಿ ಪ್ರತಿಯೊಬ್ಬರ ಬದುಕಿನಲ್ಲಿ ಬೆಳಕನ್ನು ಚೆಲ್ಲಿ, ಪ್ರತಿಯೊಬ್ಬರಲ್ಲಿ ಅವರ ಆರ್ದಶಗಳನ್ನು, ತತ್ವಗಳನ್ನು ಸರಳತೆಯ ಮೂಲಕ ಜನರಲ್ಲಿ ಬಿತ್ತಿದ ಅಪರೂಪದ ವ್ಯಕ್ತಿತ್ವ ಅವರದು ಎಂದು ಗುಣಗಾನ ಮಾಡಿದರು.ಆಲಮೇಲ ಹಿರೇಮಠದ ಚಂದ್ರಶೇಖರ ಶ್ರೀಗಳು, ಅಫಜಲಪುರ ಹಿರೇಮಠದ ವಿಶ್ವರಾಧ್ಯಮಳೇಂದ್ರ ಶ್ರೀಗಳು, ಮಲಘಾಣದ ಜಡೆಯಶಾಂತಲಿಂಗೇಶ್ವರ ಶ್ರೀಗಳು, ಪೀಠಾಧಿಪತಿ ಶ್ರೀಶೈಲ ಅಳ್ಳೊಳ್ಳಿಮಠ, ಪ್ರೋ.ಅರವಿಂದ ಮನಗೂಳಿ, ಸಂತ ಸಿದ್ದೇಶ್ವರ ಶ್ರೀಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.ಕಾರ್ಯಕ್ರಮದಲ್ಲಿ ಐಶ್ವರ್ಯ ಕೊಳಾರಿ ಅವರ ಸಂಗಡಿಗರಿಂದ ಸಂಗೀತ ಸೇವೆ ನಡೆಯಿತು.

Read More

ಇಂಡಿ: ನ್ಯಾಯಾಂಗ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪಟ್ಟಣದ ನಿವಾಸಿ ಸುನೀಲ ಪಾಟೀಲ ಅವರನ್ನು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಇಂಡಿ ಘಟಕದ ಉಪಾಧ್ಯಕ್ಷರಾಗಿ ನೇಮಕ ಮಾಡಿ. ನೌಕರರ ಸಂಘದ ಅಧ್ಯಕ್ಷ ಎಸ್.ಡಿ. ಪಾಟೀಲ್ ಆದೇಶ ಹೊರಡಿಸಿದ್ದಾರೆ.

Read More

ದೇವರಹಿಪ್ಪರಗಿ: ಪಟ್ಟಣ ಪಂಚಾಯಿತಿ ಹಾಗೂ ಕರ್ನಾಟಕ ಮಾನವ ಕಲ್ಯಾಣ ಹಾಗೂ ಜನಾಭಿವೃದ್ಧಿ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಕೇಂದ್ರ ಸರ್ಕಾರದ ಎಂಟು ಕಲ್ಯಾಣ ಯೋಜನೆಗಳ ಕುರಿತು ಬೀದಿ ನಾಟಕ ಪ್ರದರ್ಶಿಸಲ್ಪಟ್ಟವು.ಪಟ್ಟಣದಲ್ಲಿ ಬುಧವಾರ ಡಾ. ಅಂಬೇಡ್ಕರ್ ವೃತ್ತ ಸೇರಿದಂತೆ ಜನಸಂದಣಿಯ ಮೂರು ಪ್ರದೇಶಗಳಲ್ಲಿ ಶಂಕರ ತೋಂಟಾಪೂರ ನೇತೃತ್ವದ ವಿಜಯಪುರ ರೇಣುಕಾ ಕಲಾ ತಂಡ, ಸ್ವನಿಧಿ ಸಮೃದ್ಧಿ ಯೋಜನೆಯಡಿ , ಬೀದಿ ಬದಿಯ ವ್ಯಾಪಾರ ಸೇರಿದಂತೆ ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ, ಜೀವನಜ್ಯೋತಿ ಬಿಮಾ ಯೋಜನೆ, ಶ್ರಮಯೋಗಿ ಮನ್‌ಧನ್ ಯೋಜನೆ, ಒಂದು ರಾಷ್ಟ್ರ, ಒಂದು ಪಡಿತರ ವಿತರಣೆ, ಜನ್‌ಧನ್ ಯೋಜನೆ, ಕಾರ್ಮಿಕ ಇಲಾಖೆಯ ಸೌಲಭ್ಯಗಳು, ಜನನಿ ಸುರಕ್ಷಾ ಯೋಜನೆ, ಮಾತೃ ವಂದನಾ ಯೋಜನೆಗಳ ಕುರಿತು ಬೀದಿ ನಾಟಕಗಳನ್ನು ಪ್ರದರ್ಶಿಸುವುದರ ಮೂಲಕ ಕೌಟುಂಬಿಕ ಜೀವನ ಸುಖಮಯವಾಗಿರಲಿ, ಸ್ವನಿಧಿಯಿಂದ ಸಮೃದ್ಧಿ, ಸುರಕ್ಷಿತ ಬ್ಯಾಂಕಿಂಗ್ ಸೌಲಭ್ಯ ಬಳಸಿ’ ಹೇಳಿಕೆಗಳಂತ ಘೋಷಣೆಗಳಿಂದ ಜನಜಾಗೃತಿ ಮೂಡಿಸಿತು.ಕಲಾವಿದರಾದ ರೇಣುಕಾ ತೋಂಟಪೂರ, ಪರಶುರಾಮ ವಿಜಾಪೂರ, ಪ್ರೀತಿ ಹೊಸಮನಿ, ರಾಜೇಶ್ವರಿ ಮಂಜಣ್ಣಿ, ಪಟ್ಟಣ ಪಂಚಾಯಿತಿ ಸಿಬ್ಬಂದಿ ಸೋಮಶೇಖರ…

Read More

ಸಿಂದಗಿ: ತಾಲೂಕಿನ ಗಬಸಾವಳಗಿ ಹಂಚನಾಳ ಗ್ರಾಮದ ನಡುವಿನ ಹೆದ್ದಾರಿಯಲ್ಲಿ ಸರ್ಕಾರಿ ಬಸ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದೆ.ಈ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಹೇಳಲಾಗುತ್ತಿದೆ.ಈ ಬಸ್ಸು ಕಲಬುರಗಿ ಕಡೆಯಿಂದ ಬರುತ್ತಿತ್ತು. ಹಾಗೂ ಸಿಂದಗಿ ಕಡೆಯಿಂದ ಹೊರಟಿದ್ದ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಅಪಘಾತದ ಪರಿಣಾಮ ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡು ಸುಟ್ಟು ಕರಕಲಾಗಿದೆ.ಅದೃಷ್ಟವಶಾತ್ ದೊಡ್ಡ ಅನಾಹುತವೊಂದು ತಪ್ಪಿದೆ.ಈ ಘಟನೆ ಸಿಂದಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಸ್ಥಳಕ್ಕೆ ಸಿಪಿಐ ಡಿ ಹುಲುಗಪ್ಪ ಹಾಗೂ ಪಿ.ಎಸ್.ಐ ಭೀಮಪ್ಪ ರಭಕವಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಮೃತ ವ್ಯಕ್ತಿ ಯಾರೆಂದು ಮಾಹಿತಿ ತಿಳಿದು ಬಂದಿಲ್ಲ.

Read More

– ಸಂಪದಾ ಹಿರೇಮಠಆಲಮಟ್ಟಿ: ಆಹಾ ! ಹೂವಾ ನೋಡು ಎಂಥಾ ಅಂದವಾಗಿದೆ.ಹಸಿರೆಲೆಗಳ ನಡುವೆ ಎಷ್ಟೊಂದು ಮಧುರ ಭಾವ ಬೀರಿದೆ. ಬೆಳ್ಳನೆಯ ದೈವೀ ಸೌಗಂಧಿತ ಹೂವಿನ ದಳಗಳು ಕಗ್ಗತ್ತಿನಲ್ಲಿ ರಾಣಿಯಂತೆ ಮಿನುಗಿ ಸುಗಂಧಿತ ಸುವಾಸನೆಯುತ ಪರಿಮಳ ತೆಲ್ಲಿದೆ.!      ಇದು ವರ್ಷಕ್ಕೊಮ್ಮೆ ತನ್ನ ವಿಶೇಷ ವ್ಯಯಾರ ಮೊನಚಿನೊಂದಿಗೆ ಅರಳಿ ಘಮಘಮಿಸುವ ದೈವೀ ಪುಷ್ಪ ಖ್ಯಾತಿಯ ಬ್ರಹ್ಮ ಕಮಲ ಹೂವಿನ ವರ್ಣಲೇಪನ !   ಆಲಮಟ್ಟಿ ರೈಲ್ವೆ ಸ್ಟೇಷನ್ ಬಡಾವಣೆಯಲ್ಲಿನ ನಿವೃತ್ತ ಹೈಸ್ಕೂಲ್ ನೌಕರ ಬಾಬು ಪಿ.ಲಮಾಣಿ ಅವರ ಮನೆ ಅಂಗಳದಲ್ಲಿ ಮಂಗಳವಾರ ರಾತ್ರಿ ಬ್ರಹ್ಮಕಮಲ ನಾಲ್ಕೈದು ಹೂವುಗಳು ವೈವಿಧ್ಯಮಯವಾಗಿ ಅರಳಿ ಪುಷ್ಪರಸ ದೌತಣದೊಂದಿಗೆ ಹೃನ್ಮನ ತಣಿಸಿದವು.     ಪವಿತ್ರ ಭಾವದ ಈ ಬ್ರಹ್ಮ ಕಮಲದ ಬಳ್ಳಿ ಎಲೆಯಿಂದಲೇ ನಿರ್ಮಾಣಗೊಳ್ಳುತ್ತದೆ. ಹೂವು  ಮೊಗ್ಗುಗಳು ಎಲೆಯಿಂದಲೇ ಅರಳಿ ರಾತ್ರಿ ವೇಳೆ ಅರಳುವುದನ್ನು ಕಂಡು ಮನೆ ಮಂದಿ ಸಂತಸಗೊಂಡರು.ಈ ಹೂವು ಕಣ್ತುಂಬಿಸಿಕೊಂಡರೆ ಅದೃಷ್ಟ ಖುಲಾಯಿಸುತ್ತೆ ಎಂಬ ನಂಬಿಕೆಯ ಪರಿಕಲ್ಪನೆಯಿಂದ ತನ್ನದೇ ವಿಶಿಷ್ಟತೆ ಛಾಪು ಬ್ರಹ್ಮ ಕಮಲ ಹೂವಿಗಿದೆ. ಹೀಗಾಗಿ ಅಪರೂಪಕ್ಕೆ ಅರಳುವ…

Read More

ಮೋರಟಗಿ: ಗ್ರಾಮದ ಸರ್ಕಾರಿ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಕೆಜಿಎಸ್ ಶಾಲೆಗೆ ಎಸ್‌ಡಿಎಂಸಿ ನೂತನ ಅಧ್ಯಕ್ಷರಾಗಿ ಬಿಳಿಯನಿಸಿದ್ದ ಒಡಿಯರ್ ಮತ್ತು ಉಪಾಧ್ಯಕ್ಷರಾಗಿ ಚನ್ನಬಸಪ್ಪ ಬಳಗಾನೂರ ಅವಿರೋಧ ಆಯ್ಕೆಯಾದರು.ಬುಧವಾರ ಗ್ರಾಮದ ಕೆಜಿಎಸ್ ಶಾಲೆಯಲ್ಲಿ ಎಸ್‌ಡಿಎಂಸಿ ರಚನಾ ಸಭೆ ಚುನಾವಣೆ ನಡೆಯಿತು. ಎಲ್ಲರ ಸಹಮತದೊಂದಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನವನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.ಶಿಕ್ಷಣ ಸಂಯೋಜಕ ಆರ್. ಎಸ್. ಬಿರಾದಾರ ಮಾತನಾಡಿದರು.ಇದೇ ಸಂದರ್ಭದಲ್ಲಿ ಗ್ರಾ. ಪಂ. ಸದಸ್ಯರಾದ ಇನಾಯತ ದೊಡಮನಿ, ಶ್ರೀಮಂತ ಮಳಗಿ, ಸಂತೋಷ ಮದರಿ, ಶ್ರೀಶೈಲ್ ಕೆರಿಗೊಂಡ, ಶರಣು ವಸ್ತಾರಿ, ಶಿವು ಕೆರಿಗೊಂಡ, ಸುನೀಲ ಸಿಂಗೆ, ತಿಪ್ಪಣ್ಣ ಸಿನ್ನೂರ, ಸೇರಿದಂತೆ ಅನೇಕರಿದ್ದರು.

Read More

ಬಸವನಬಾಗೇವಾಡಿ: ತಾಲೂಕಿನ ಉಪ್ಪಲದಿನ್ನಿ ತಾಂಡಾ ಆಶಾ ಕಾರ್ಯಕರ್ತೆ ತಾಂಡಾ ಜನರಿಗೆ ಆಮಿಷಯೊಡ್ಡಿ ಮತಾಂತರ ಮಾಡುತ್ತಿದ್ದಾಳೆ ಎಂದು ಆರೋಪಿಸಿ ಮಂಗಳವಾರ ಉಪ್ಪಲದಿನ್ನಿ ತಾಂಡಾದ ಜನರು ವಾಹನ ಮುಖಾಂತರ ತಹಶೀಲ್ದಾರ ಕಚೇರಿ ಆಗಮಿಸಿ ಕಚೇರಿಯ ಮುಂದೆ ಧರಣಿ ನಡೆಸಿ ತಹಶೀಲ್ದಾರ ವಾಯ್.ಎಸ್.ಸೋಮನಕಟ್ಟಿ ಅವರಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಜೈ ಸೇವಾ ಲಾಲ, ಜೈ ದುರ್ಗಾ ಮಾತಾ ಎಂದು ಘೋಷಣೆ ಕೂಗಿ ಅನ್ಯ ಧರ್ಮಕ್ಕೆ ತಾಂಡಾದ ಮುಗ್ಧ ಜನರನ್ನು ಮತಾಂತರಗೊಳ್ಳಿಸುತ್ತಿರುವ ಆಶಾ ಕಾರ್ಯಕರ್ತೆ ವಿಜಯಲಕ್ಷ್ಮೀ ಅಶೋಕ(ಕುಮಾರ) ಲಮಾಣಿ ಅವರನ್ನು ಆಶಾ ಕಾರ್ಯಕರ್ತೆಯರ ಸ್ಥಾನದಿಂದ ತಗೆದು ಹಾಕಿ ಅವರ ಮೇಲೆ ಕಠಿಣ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ಡಾ. ಬಸವರಾಜ ಚವ್ಹಾಣ ಮಾತನಾಡಿದರು.ಈ ಸಂದರ್ಭದಲ್ಲಿ ಸುರೇಶ ಕಾರಬಾರಿ, ರವಿ ಲಮಾಣಿ, ರಾಜು ಲಮಾಣಿ, ಮೋತಿಲಾಲ ಲಮಾಣಿ, ಸುರೇಶ ಲಮಾಣಿ, ಪುನೀತ ಲಮಾಣಿ, ಶಂಕರ ಲಮಾಣಿ, ಪ್ರಕಾಶ ಲಮಾಣಿ, ಗ್ರಾಪಂ ಸದಸ್ಯರಾದ ಸಂಗೀತಾ ಲಮಾಣಿ, ಸುಮಿತ್ರಾ ಲಮಾಣಿ, ನಾನು ಲಮಾಣಿ, ರಾಮಸ್ವಾಮಿ ಲಮಾಣಿ, ರಾಜು ನಾಯಕ, ತಾವರು ಲಮಾಣಿ, ಗಂಗಾಬಾಯಿ…

Read More

ಜಯ್ ನುಡಿ- ಜಯಶ್ರೀ.ಜೆ. ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರು, ಬೆಳಗಾವಿ, ಮೋ.ನಂ. ೯೪೪೯೨೩೪೧೪೨ ಈ ದಿನ ಮಾಡಲು ಮತ್ತೆ ಸಾಕಷ್ಟು ಕೆಲಸಗಳಿವೆ. ನಿನ್ನೆಯೇ ಮಾಡಿ ಮುಗಿಸಬೇಕಿದ್ದ ಬಹಳಷ್ಟು ಕೆಲಸಗಳು ಹಾಗೇ ಬಾಕಿ ಉಳಿದುಕೊಂಡಿವೆ. ಕೆಲಸದ ಹೊರೆ ಹೆಚ್ಚುತ್ತಿದೆ ಅದರೊಂದಿಗೆ ತಲೆನೋವು ಹೆಚ್ಚುತ್ತಿದೆ. ನಾವು ಮಾಡುವ ಕೆಲಸವನ್ನು ಇಷ್ಟಪಡದಿದ್ದರೆ, ಭಾರ ಎಂದುಕೊಂಡರೆ, ಕೆಲಸ ಮಾಡದೇ ನಿರ್ಲಕ್ಷಿಸುವುದನ್ನು ಮುಂದುವರೆಸಿದರೆ, ಸಿಗುವ ಫಲಿತಾಂಶವಾದರೂ ಏನು? ಹೊಟ್ಟೆ ತುಂಬಿಸಿಕೊಳ್ಳುವುದಕ್ಕೆ ಉಪಜೀವನಕ್ಕೆ ಮಾತ್ರ ಗೊಣಗುತ್ತ ಮಾಡುವ ಕೆಲಸ ಆಗುತ್ತದೆಯೇ ಹೊರತು ನಿಜವಾಗಿ ಸಂತೃಪ್ತಿ ನೀಡುವ ಕೆಲಸವಾಗಲಾರದು. ಕಾಯಕ ಸಂತೃಪ್ತಿ ತರಲಾರದು. ನಾವು ಇಷ್ಟ ಪಡುವ ಕೆಲಸದಲ್ಲಿ ತೊಡಗಿದ್ದರೆ ಕೆಲಸ ಕಷ್ಟವೆನಿಸುವುದಿಲ್ಲ. ಇನ್ನಷ್ಟು ಮತ್ತಷ್ಟು ಮಾಡಬೇಕು ಮಾಡುತ್ತಲೇ ಇರಬೇಕು ಎಂದನಿಸುವುದು ಸಹಜ.*ಕೆಲಸದ ಪ್ರತಿ ಪ್ರೀತಿ*ಇಷ್ಟ ಪಟ್ಟು ಮಾಡುವ ಕೆಲಸದಲ್ಲಿ ಸಾಹಸ ಮಾಡಿ ಸಾಧನೆ ಮಾಡಬಹುದು. ಮುಂದಿನ ಪೀಳಿಗೆಗೆ ಸಾಹಸಗಾಥೆಯನ್ನು ಬಿಟ್ಟು ಹೋಗಬಹುದು ಯುವ ಜನರು ಹುಚ್ಚು ಹತ್ತಿಸುವಂತಹ ಸಾಹಸಮಯ ಪ್ರೋತ್ಸಾಹದಾಯಕ ಕತೆಗಳನ್ನು ಕೇಳಿದಾಗ ತಾವೂ ಅವರಂತೆ ಆಗಬೇಕೆಂದು ಬಯಸುತ್ತಾರೆ. ಇಷ್ಟ ಪಟ್ಟ ಕೆಲಸವನ್ನು…

Read More

ಆಲಮೇಲ: ತಾಲೂಕಿನ ಸುಕ್ಷೇತ್ರ ದೇವರನಾವದಗಿಯ ಜ್ಞಾನಲಿಂಗ ದೇವಸ್ಥಾನದ ಜಾತ್ರೆ ಅದ್ದೂರಿಯಾಗಿ ಜರುಗಿತು.ಬೆಳಿಗ್ಗೆ ಗದ್ದುಗೆಗೆ ರುದ್ರಾಭಿಷೇಕ, ಅರ್ಚನೆ, ಮಂಗಳಾರತಿ, ಪ್ರಸಾದವಿತರಣೆ ನಡೆಯಿತು.ಸಾಯಂಕಾಲ ಪಲ್ಲಕ್ಕಿ, ಕಳಸದ ಮೆರವಣಿಗೆ, ಪುರವಂತರ ಸೇವೆಯೊಂದಿಗೆ ರಥೊತ್ಸವವು ಅದ್ದೂರಿಯಾಗಿ ನೆರವೇರಿತು.ಜಾತ್ರಾ ಮಹೋತ್ಸವದಲ್ಲಿ ನಿರಗುಡಿಯ ಪರಮ ಪೂಜ್ಯ ಹವಾಮಲ್ಲಿನಾಥ ಮಹಾರಾಜ ಸಾನಿಧ್ಯವಹಿಸಿ ಭಕ್ತರಿಗೆ ದರ್ಶನ ಆಶೀರ್ವಾದ ನೀಡಿದರು.ಸಹಸ್ರಾರು ಭಕ್ತರು ಹವಾಮಲ್ಲಿನಾಥ ಮಹಾರಾಜರ ದರ್ಶನ ಪಡೆಯಲೆಂದೆ ಆಗಮಿಸಿ ಆಶಿರ್ವಾದ ಪಡೆದುಕೊಂಡರು.ದೇವರನಾವದಗಿ, ಆಸಂಗಿಹಾಳ,ಗುಂದಗಿ,ಬಮ್ಮನಹಳ್ಳಿ ಗ್ರಾಮಗಳ ಗಡಿರೇಖೆಯ ಮದ್ಯದಲ್ಲಿ ಈ ಜ್ಞಾನಲಿಂಗ ದೇವಸ್ಥಾನ ಇರುವದರಿಂದ ಸುತ್ತಮುತ್ತಲಿನ ಎಲ್ಲಗ್ರಾಮಗಳ ಜನರು ಇಲ್ಲಿ ಸೇರಿ ಜಾತ್ರೆಯನ್ನು ಅದ್ದೂರಿಯಾಗಿ ಆಚರಿಸಿದರು.

Read More