Subscribe to Updates
Get the latest creative news from FooBar about art, design and business.
What's Hot
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ತಾಲೂಕಿನ ಅವಿಮುಕ್ತ ಕ್ಷೇತ್ರ ಯರನಾಳ ಗ್ರಾಮದ ವಿರಕ್ತಮಠದ ಕರ್ತೃ ಜಗದ್ಗುರು ಪಂಪಾಪತಿ ಶಿವಯೋಗಿಗಲ ಜಾತ್ರಾಮಹೋತ್ಸವ, ಜ್ಞಾನ ದಾಸೋಹಿ ಬಂಥನಾಳದ ಸಂಗನಬಸವ ಶಿವಯೋಗಿಗಳ 125 ನೇ ಜಯಂತಿ, ನೂತನ ಮಹಾದ್ವಾರ ಲೋಕಾರ್ಪಣೆ ಮತ್ತು ದ್ವಿಸಹಸ್ರ ಮಾತೆಯರ ಉಡಿತುಂಬುವ ಕಾರ್ಯಕ್ರಮ ಹಾಗೂ ಮಹಾರಥೋತ್ಸವದಂಗವಾಗಿ ಭಾನುವಾರ ಶ್ರೀಮಠದಲ್ಲಿ ಉತ್ತರ ಕರ್ನಾಟಕ ಸಾಂಸ್ಕ್ರತಿಕ ಬಿಂಬಿಸುವಂತಹ ವಿಶೇಷ ಸದ್ಭಾವನ ಬುತ್ತಿ ಊಟ ಕಾರ್ಯಕ್ರಮದಲ್ಲಿ ಸದ್ಭಕ್ತರು ವಿವಿಧ ಭಕ್ಷ್ಯಗಳ ಸವಿಯನ್ನು ಸವಿದು ಸಂಭ್ರಮಿಸಿದರು.ಜಾತ್ರಾಮಹೋತ್ಸವದಂಗವಾಗಿ ಸದ್ಭಾವನ ಬುತ್ತಿ ಊಟದಂಗವಾಗಿ ಗ್ರಾಮದ ಮಹಿಳೆಯರು ತಮ್ಮ ತಮ್ಮ ಮನೆಗಳಲ್ಲಿ ರೊಟ್ಟಿ, ಚಪಾತಿ, ಹಿಟ್ಟಿನ ಪಲ್ಲ್ಯೆ, ಬದನೇಕಾಯಿ ಪಲ್ಯ್ಲೆ, ಪುಂಡಿ ಪಲ್ಯ್ಲೆ, ಕಾಳು ಪಲ್ಲ್ಯೆ, ಹಿಂಡಿ, ಮೆಣಸಿಕಾಯಿ ಚಟ್ನಿ, ಮೊಸರು, ರವೆ ಉಂಡಿ, ಶೇಂಗಾದ ಹೊಳಿಗೆ, ಮಾದಲಿ, ಉಳಿಬಾನ, ಅನ್ನ ಸಾರು ಸೇರಿದಂತೆ ವಿವಿಧ ಭಕ್ಷ್ಯಗಳನ್ನು ತಯಾರಿ ಮಾಡಿಕೊಂಡು ಬುತ್ತಿ ಕಟ್ಟಿಕೊಂಡು ಗ್ರಾಮದ ಗೌರಿಶಂಕರ ದೇವಸ್ಥಾನದಿಂದ ಮೆರವಣಿಗೆ ಮೂಲಕ ಶ್ರೀಮಠಕ್ಕೆ ಆಗಮಿಸಿದರು. ಶ್ರೀಮಠಕ್ಕೆ ತಲುಪಿದ ನಂತರ ಮಹಿಳೆಯರು ತಾವು ತಯಾರಿಸಿದ ವಿವಿಧ…
ಉದಯರಶ್ಮಿ ದಿನಪತ್ರಿಕೆ ಚಿಮ್ಮಡ: ಶಾಂತಿ, ಸಮಾನತೆಯ ಸಂಕೇತವಾಗಿರುವ ಪವಿತ್ರ ರಂಜಾನ್ ಹಬ್ಬವನ್ನು ಗ್ರಾಮದ ಮುಸ್ಲಿಂ ಬಾಂಧವರು ಸಡಗರ, ಸಂಭ್ರಮದೊಂದಿಗೆ ಪರಸ್ಪರ ಶುಭಾಷಯ ವಿನಿಮಯ ಮಾಡಿಕೊಳ್ಳುವ ಮೂಲಕ ಆಚರಿಸಿದರು.ಗ್ರಾಮದ ಇದ್ಗಾ ಮೈದಾನದಲ್ಲಿ ಗುರುವಾರ ಬೆಳಿಗ್ಗೆ ೯-೦೦ ಘಂ,ಗೆ ಸೇರಿದ ಬಾಂಧವರು ದುಆ ಮೂಲಕ ದೇಶಾದ್ಯಂತ ಶಾಂತಿ ಸೌಹಾರ್ದತೆ ಬೆಳಗಲಿ, ಪ್ರತಿಯೊಬ್ಬರು ಸನ್ಮಾರ್ಗದತ್ತ ಬರಲಿ, ಪ್ರತಿಯೊಬ್ಬರ ವಯಕ್ತಿಕ ತೊಂದರೆಗಳು ದೂರವಾಗಿ ನೆಮ್ಮದಿಯಿಂದ ಜೀವನ ನಡೆಸಲು ಅನುಗ್ರಹಿಸುವಂತೆ ಅಂಜುಮನ್ ಸಮೀತಿಯ ಅಧ್ಯಕ್ಷ ಹಾಫಿಜ ಸಲೀಮ ಜಮಖಂಡಿ, ಹಾಫಿಜ್ ಲಾಲ್ ಮೊಹಮ್ಮದ ಸಾಮೂಹಿಕ ಪ್ರಾರ್ಥನೆ ನೆರವೇರಿಸಿ ಅಲ್ಲಾಹನಲ್ಲಿ ಪ್ರಾರ್ಥಿಸಿದರು. ಹಾಫಿಜ ಕಳೆದ ಒಂದು ತಿಂಗಳ ಕಾಲ ಸಾಮೂಹಿಕ ಕುರಾನ ಪಠನವನ್ನು (ತರಾವಿಹ ನಮಾಜ) ನೆರವೇರಿಸಿದರು.ಶುಕ್ರವಾರ ಚಂದ್ರದರ್ಶನವಾದ ಪ್ರಯುಕ್ತ ಕಳೆದ ಒಂದು ತಿಂಗಳಿನಿಂದ ಆಚರಿಸಲಾಗುತಿದ್ದ ರೋಜಾ ( ಉಪವಾಸ ವೃತ ) ಹಾಗೂ ವಿಶೇಷ ತರಾವೀಹ್ ಪ್ರಾರ್ಥನೆಗೆ ವಿಧಾಯ ಹೇಳಲಾಯಿತು.ಸೌಹಾರ್ದತೆಯ ಅನಾವರಣ; ಕಳೆದ ಒಂದು ತಿಂಗಳಿನಿಂದ ಆಚರಿಸಲಾಗುತಿದ್ದ ರೋಜಾ ವ್ರತಧಾರಿಗಳಿಗೆ ರಾಜಕೀಯ ಮುಖಂಡರು ಸೇರಿದಂತೆ ಹಲವಾರು ಜನ ಹಿಂದೂ…
ಉದಯರಶ್ಮಿ ದಿನಪತ್ರಿಕೆ ಚಿಮ್ಮಡ: ಗ್ರಾಮದ ವಿರಕ್ತಮಠದಿಂದ ಅಕ್ಕಮಹಾದೇವಿ ಜಯಂತಿ ಅಂಗವಾಗಿ ಪ್ರತಿ ವರ್ಷ ನೀಡಲಾಗುವ ರಾಜ್ಯ ಮಟ್ಟದ ‘ಅಕ್ಕ ಪ್ರಶಸ್ತಿ’ಗೆ ಕೇಂದ್ರ ಮಾಜಿ ಸಚಿವ ದಿ.ಅನಂತಕುಮಾರ ಪತ್ನಿ ಡಾ.ತೇಜಸ್ವಿನಿ ಅನಂತಕುಮಾರ ಭಾಜನರಾಗಿದ್ದಾರೆ.ವಿಜ್ಞಾನ ಕ್ಷೇತ್ರ ಹಾಗೂ ಅದಮ್ಯಚೇತನ ಫೌಂಡೆಷನ್ ಮೂಲಕ ಸಾಹಿತ್ಯ, ಶೈಕ್ಷಣಿಕ, ಸಾಮಾಜಿಕವಾಗಿ ಮಾಡಿದ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.ಏ.೦೨ ರಂದು ಶ್ರೀಮಠದಲ್ಲಿ ನಡೆಯುವ ಲಿಂ. ವಿರಕ್ತ ಮಹಾಸ್ವಾಮಿಗಳ ಪುಣ್ಯ ಸ್ಮರಣೋತ್ಸವ ಹಾಗೂ ಅಕ್ಕ ಮಹಾದೇವಿ ಜಯಂತಿ ಉಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು’ ಎಂದು ವಿರಕ್ತಮಠದ ಶ್ರೀ ಪ್ರಭು ಮಹಾಸ್ವಾಮಿಗಳು ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಪ್ರತಿಷ್ಠಿತ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ ಕುಲಪತಿ ಡಾ.ಅರುಣ ಚಂ. ಇನಾಮದಾರ ಅವರು ಅಮೇರಿಕದಲ್ಲಿ ನಡೆಯಲಿರುವ ಅಮೇರಿಕನ್ ಅಕ್ಯಾಡೆಮಿ ಆಫ್ ಡರ್ಮೆಟಾಲಾಜಿ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ.ಅಮೇರಿಕದಲ್ಲಿರುವ ಡೆನವರ್ ನಲ್ಲಿ ಈ ಸಮ್ಮೇಳನ ಮಾರ್ಚ 26 ರಿಂದ ಮಾರ್ಚ್31ರ ವರೆಗೆ ಆರು ದಿನಗಳ ಕಾಲ ನಡೆಯಲಿದೆ.ಇದೇ ವೇಳೆ, ಮಾರ್ಚ್ 25ರಂದು ಚಿಕ್ಯಾಗೋದ ಪ್ರತಿಷ್ಠಿತ ಇಲಿನಾಯಿಸ ವಿಶ್ವವಿದ್ಯಾಲಯದಲ್ಲಿ ಚಿಕ್ಕ ಮಕ್ಕಳಲ್ಲಿ ಚರ್ಮ ರೋಗ ವಿಷಯ ಕುರಿತು ಇನಾಮದಾರ ಅವರು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಅಲ್ಲದೇ, ಬಿ.ಎಲ್.ಡಿ.ಇ ಡೀಮ್ಡ್ ವಿವಿ ಜೊತೆ ಪರಸ್ಪರ ಒಡಂಬಡಿಕೆ ಮಾಡಿಕೊಳ್ಳುವ ಕುರಿತು ಇಲಿನಾಯಿಸ ವಿವಿಯ ಅಸೋಶಿಯೇಟ್ ಡೀನ ಜೊತೆ ಚರ್ಚೆ ನಡೆಸಲಿದ್ದಾರೆ ಎಂದು ವಿವಿ ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.
ಕಾಮಗಾರಿ ಸ್ಥಳಾಂತರಿಸದಿದ್ದರೆ ಭೀಮರಾಜ ಸೇನೆಯ ರಾಜ್ಯ ಅಧ್ಯಕ್ಷ ಶಿವು ನಾಟೀಕಾರ, ಜಿಲ್ಲಾಧ್ಯಕ್ಷ ಶ್ರೀಕಾಂತ್ ಬಿಜಾಪುರ ಹೋರಾಟದ ಎಚ್ಚರಿಕೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬಿಂಜಲಭಾವಿ ಮತ್ತು ಬಿ.ಬಿ. ಇಂಗಳಗಿ ಗ್ರಾಮಗಳ ಮಧ್ಯ ಇರುವ ನಾಯಿ ಹಳ್ಳಕ್ಕೆ ಬ್ರಿಜ್ ಕಮ್ ಬಾಂಧಾರವನ್ನು ಅವೈಜ್ಞಾನಿಕವಾಗಿ ನಿರ್ಮಾಣ ಮಾಡುತ್ತಿರುವ ಕಾಮಗಾರಿಯನ್ನು ಕೂಡಲೆ ಸ್ಥಗಿತಗೊಳಿಸಬೇಕೆಂದು ಭೀಮರಾಜ ಸೇನೆಯ ರಾಜ್ಯ ಅಧ್ಯಕ್ಷ ಶಿವು ನಾಟೀಕಾರ ಮತ್ತು ಜಿಲ್ಲಾಧ್ಯಕ್ಷ ಶ್ರೀಕಾಂತ್ ಬಿಜಾಪುರ ಆಗ್ರಹಿಸಿದ್ದಾರೆ.ಮಂಗಳವಾರ ನಗರದ ನೂತನ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಭಿಂಜಲಭಾವಿ ಮತ್ತು ಬಿ.ಬಿ. ಇಂಗಳಗಿ ಗ್ರಾಮಗಳ ಮಧ್ಯ ಇರುವ ನಾಯಿ ಹಳ್ಳಕ್ಕೆ ಬ್ರಿಜ್ ಕಾಮ್ ಬಾಂಧಾರವನ್ನು ಅವೈಜ್ಞಾನಿಕವಾಗಿ ನಿರ್ಮಾಣ ಮಾಡುತ್ತಿದ್ದು ಇದರಿಂದ ಕೃಷಿ ಕಾಮಗಾರಿಗಳಿಗಾಗಲಿ, ರೈತರಿಗಾಗಲಿ, ಜಾನುವಾರಗಳಿಗಾಗಲಿ ಅಥವಾ ಜನರಿಗಾಗಲಿ ಉಪಯೋಗವಾಗುವುದಿಲ್ಲ. ಕಾರಣ ಅಲ್ಲಿ ಸಾಕಷ್ಟು ನೀರಿನ ಹರವು ಇರುವುದಿಲ್ಲ. ಕೇವಲ ಕೆಲವೇ ಕೆಲವು ಪ್ರಭಾವಿಗಳ ಅನುಕೂಲಕ್ಕಾಗಿ ನಿರ್ಮಾಣ ಮಾಡುತ್ತಿರುವ ಕಾಮಕಾರಿಯಾಗಿದ್ದು ಇದನ್ನು ಕೂಡಲೆ ಸ್ಥಗಿತಗೊಳಿಸಿ, ಬಿಂಜಲಬಾವಿ, ಕೆಸರಟ್ಟಿ, ಅಂಬಳನೂರ ಈ ಮೂರು ಊರುಗಳ ಹಳ್ಳಗಳು…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ವಿದ್ಯಾರ್ಥಿಗಳಲ್ಲಿನ ನೈತಿಕತೆ ಶಿಸ್ತು ಸಾಮಾಜಿಕ ಸೇವೆಗೆ ಮೂಲಪ್ರೇರಣೆಯಾಗುತ್ತದೆ, ಆ ಮೂಲಕ ಉತ್ತಮ ನಾಗರಿಕತ್ವ ಗುಣ ಬರುತ್ತದೆ ಎಂದು ರಾಂಪೂರಮಠದ ನಿತ್ಯಾನಂದ ಮಹಾರಾಜರು ಹೇಳಿದರು.ಅವರು ಸಿಂದಗಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ ಎಸ್ಎಸ್ ಘಟಕವು ಹಮ್ಮಿಕೊಂಡಿದ್ದ ದತ್ತುಗ್ರಾಮ ರಾಂಪೂರದಲ್ಲಿ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.ರಾಷ್ಟ್ರೀಯ ಸೇವಾ ಯೋಜನೆಗಳಲ್ಲಿ ರಾಷ್ಟ್ರೀಯತೆ ಸಂಕಲ್ಪ ಭಾವನೆ ಬೆಳಸುವದಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ಎಸ್. ಹಳೆಮನಿ ಹೇಳಿದರು.ಪ್ರಾಮಾಣಿಕತನ ನಿಷ್ಠೆ ಮತ್ತು ಕಾಯಕ ಪ್ರಜ್ಞೆ ಪ್ರತಿಯೊಬ್ಬರಲ್ಲಿಯೂ ಬರಬೇಕು ಆ ಉದ್ದೇಶವನ್ನಿಟ್ಟುಕೊಂಡು ಶಿಬಿರ ಆಯೋಜಿಸಲಾಗಿದೆ ಎಂದು ಎನ್ ಎಸ್ ಎಸ್ ಘಟಕದ ಸಂಯೊಜಕ ಡಾ. ಯಮನಪ್ಪ ಕೆಳಗೇರಿ ಪ್ರಸ್ತಾವಿಕ ಮಾತುಗಳಲ್ಲಿ ಹೇಳಿದರು.ದೈಹಿಕ ಶಿಕ್ಷಣ ನಿರ್ದೇಶಕ ಡಾ.ರಾಜಶೇಖರ ಬೆನಕನಹಳ್ಳಿ ಮಾತನಾಡಿದರು. ಘಟಕ ೨ರ ಸಂಯೋನಾಧಿಕಾರಿ ಪ್ರೊ.ರಾಜೇಸಾಬ ಶಿಬಿರದ ಉದ್ದೇಶಗಳನ್ನು ತಿಳಿಸಿದರು.ಅನೀಲ ಕುರಬತಳ್ಳಿ ಸ್ವಾಗತಿಸಿದರು. ಆಕಾಶ ಹೆಗಡೆ ವಂದಿಸಿದರು. ಐಶ್ವರ್ಯ ದೇವರಮನಿ ನಿರೂಪಿಸಿದರು.
ಉದಯರಶ್ಮಿ ದಿನಪತ್ರಿಕೆ ವರದಿ: ಎಸ್ ಎಮ್ ಇಟ್ಟಿಜಮಖಂಡಿ: ರಾಸಾಯನಿಕ ಗೊಬ್ಬರ ಮತ್ತು ಔಷಧಿಗಳ ಬಳಕೆಯಿಂದ ಮಣ್ಣಿನ – ಫಲವತ್ತತೆ ಹಾಳಾಗುವುದರ ಜೊತೆಗೆ ಆರ್ಥಿಕ ಸಂಕಷ್ಟ ಎದುರಿಸಬೇಕಾಗುತ್ತದೆ ಎಂಬುದನ್ನು ಮನಗಂಡಿರುವ ರೈತರು, ಈಗ ಮಣ್ಣಿನ ಫಲವತ್ತತೆ ಹೆಚ್ಚಿಸುವ ಬೆಳೆಗಳಿಗೆ ರೋಗ ನಿರೋಧಕ ಶಕ್ತಿ ಒದಗಿಸುವ ಸಗಣಿ ಗೊಬ್ಬರ ಬಳಕೆ ಮಾಡಲು ಮುಂದಾಗುತ್ತಿದ್ದಾರೆ.ಪ್ರತಿ ವರ್ಷ ರೈತರು ಯುಗಾದಿ ನಂತರ ಹೊಲಗಳನ್ನು ಹಸನು ಮಾಡಿ ಸಗಣಿ ಗೊಬ್ಬರ ಹಾಕುವುದು ವಾಡಿಕೆ. ಅದರಂತೆ ಸಧ್ಯ ಯುಗಾದಿ ಹಬ್ಬ ಮುಗಿದಿರುವುದರಿಂದ ರೈತರು ಹೊಲಗಳಿಗೆ ಸಗಣಿ ಗೊಬ್ಬರ ಹಾಕಿ, ಬಿತ್ತನೆಗೆ ಅಣಿ ಮಾಡಿ ಮಳೆಗಾಗಿ ಕಾಯುತ್ತಾರೆ.ಹಿಂದೆ ಊರುಗಳಲ್ಲಿ ತಿಪ್ಪೆಗಳು ಇರುತ್ತಿದ್ದವು. ರೈತರು ಜಾನುವಾರುಗಳ ಸಗಣಿ, ಮೂತ್ರ ಸೇರಿದಂತೆ ಮತ್ತಿತರ ಕಸ-ಕಡ್ಡಿಗಳನ್ನು ಪ್ರತಿನಿತ್ಯ ತಿಪ್ಪೆಗೆ ಹಾಕುತ್ತಿದ್ದರು. ತಿಪ್ಪೆಯಲ್ಲಿನ ತ್ಯಾಜ್ಯವನ್ನು ರೈತನ ಮಿತ್ರ ಎಂದೇ ಹೇಳಲಾಗುವ ಎರೆ ಹುಳುಗಳು ತಿಂದು ಉತ್ತಮವಾದ ಗೊಬ್ಬರವನ್ನು ತಯಾರಿಸುತ್ತಿದ್ದವು. ಹೀಗೆ ತಯಾರಾದ ಗೊಬ್ಬರವನ್ನು ಪ್ರತಿ ವರ್ಷ ರೈತರು ಹೊಲಗಳಿಗೆ ಹಾಕುತ್ತಿದ್ದರು. ಇಂಥ ಗೊಬ್ಬರ ಭೂಮಿಗೆ ಅಗತ್ಯವಾದ ಎಲ್ಲ…
ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಸೇತುವೆ ರಿಪೇರಿ ಯೋಜನೆಗೆ ಕೊನೆಗೂ ಚಾಲನೆ | ಗ್ರಾಮಸ್ಥರ ಹಲವು ವರ್ಷಗಳ ಪ್ರತಿಭಟನೆ ಫಲಪ್ರದ ಉದಯರಶ್ಮಿ ದಿನಪತ್ರಿಕೆ ವರದಿ: ಗುರು ಹಿರೇಮಠಆಲಮೇಲ: ವಿಜಯಪುರ ಮತ್ತು ಕಲಬುರಗಿ ಜಿಲ್ಲೆಗಳ ಪ್ರಮುಖ ಸಂಪರ್ಕ ಕೊಂಡಿಯಾಗಿರುವ, ಭೀಮಾ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಐತಿಹಾಸಿಕ “ದೇವಣಗಾಂವ ಸೇತುವೆ”ಯ ದುರಸ್ತಿ ಕಾರ್ಯಕ್ಕೆ ಕೊನೆಗೂ ಚಾಲನೆ ಸಿಕ್ಕಿದೆ. ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಈ ಸೇತುವೆ ರಿಪೇರಿ ಯೋಜನೆಗೆ ಸದ್ಯ ಚಾಲನೆ ದೊರೆತಿದೆ.65 ವರ್ಷ ಹಳೆಯದಾದ ಈ ಸೇತುವೆಯ ಮೇಲ್ಭಾಗ ಸಂಪೂರ್ಣ ಹಾಳಾಗಿತ್ತು ಸಂಚಾರಕ್ಕೆ ಯೋಗ್ಯವಾಗಿರಲಿಲ್ಲ. ಕಳೆದ ಹಲವು ವರ್ಷಗಳಿಂದ ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಲೇ ಬಂದಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಶಾಸಕ ಅಶೋಕ ಮನಗೂಳಿ ಅವರು, ಇಲಾಖೆ ಮೇಲೆ ಒತ್ತಡ ತಂದು ಅನುದಾನ ಬಿಡುಗಡೆಗೊಳಿಸಿ ಕಾಮಗಾರಿಗೆ ಚಾಲನೆ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. “ಜೀವ ಕೈಯಲ್ಲಿ ಹಿಡಿದು ಸಂಚರಿಸುತ್ತಿದ್ದ ನಮಗೆ ಈಗ ನೆಮ್ಮದಿ ಸಿಕ್ಕಿದೆ” ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.ವಿಜಯಪುರ, ಕಲಬುರಗಿ ಗಡಿ ರೇಖೆಯಾಗಿರುವ ಈ ಸೇತುವೆ ದುರಸ್ತಿನಿ ನಿಮಿತ್ಯ…
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಪ್ರಪಂಚದಲ್ಲಿ ಪ್ರಜಾಪ್ರಭುತ್ವ ಯಶಸ್ವಿಯಾಗಿದ್ದರೇ ಅದಕ್ಕೆ ಕಾರಣ ಸಂವಿಧಾನ ಎಂದು ಅಭಿಮಾನದಿಂದ ಹೇಳಬಹುದಾಗಿದೆ ಎಂದು ಇಂಡಿ ಕ್ಷೇತ್ರದ ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.ಪಟ್ಟಣದ ಬಿ.ಎಲ್.ಡಿ.ಇ ಸಂಸ್ಥೆಯ ಹಳೆಯ ಪ್ರೌಢಶಾಲಾ ಆವರಣದಲ್ಲಿ ಜರುಗಿದ ಸಂವಿಧಾನ ಜಾಗೃತಿ ಸಮಾವೇಶ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಸಂವಿಧಾನಕ್ಕೆ ಚ್ಯುತಿ ತರುವಂತ ಕಾರ್ಯವನ್ನು ನಾಗರಿಕ ಸಮಾಜ ಯಾವುದೇ ಕಾರಣಕ್ಕೂ ಎಂದಿಗೂ ಒಪ್ಪುವದಿಲ್ಲ. ಆದ್ದರಿಂದ ಸಂವಿಧಾನವನ್ನು ಎಲ್ಲರೂ ಅರಿಯುವುದು ಅಗತ್ಯವಾಗಿದೆ ಎಂದರು.ಸಿಂದಗಿ ಮತಕ್ಷೇತ್ರದ ಶಾಸಕ ಅಶೋಕ ಮನಗೂಳಿ ಮಾತನಾಡಿ, ಸಂವಿಧಾನ ಪೀಠಿಕೆಯನ್ನು ಅರಿತಾಗ ಮಾತ್ರ ಸಾಮಾಜಿಕ ನ್ಯಾಯದ ಮಹತ್ವ ತಿಳಿಯಬಹುದಾಗಿದೆ. ಸಮಾಜದಲ್ಲಿ ತುಳಿತಕ್ಕೆ ಒಳಗಾದವರ ಅಭಿವೃದ್ಧಿಗಾಗಿ ಇಂಥ ಜಾಗೃತಿ ಸಮಾವೇಶಗಳು ಅಗತ್ಯವಾಗಿವೆ ಎಂದರು.ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ.ಪ್ರಭುಗೌಡ ಲಿಂಗದಳ್ಳಿ(ಚಬನೂರ) ಮಾತನಾಡಿ, ದೇಶದ ಸಂವಿಧಾನವನ್ನು ಅರಿತುಕೊಂಡಾಗ ಮಾತ್ರ ನಾವು ಪ್ರಜಾಪ್ರಭುತ್ವದಲ್ಲಿ ಯಶಸ್ವಿಯಾಗಲು ಸಾಧ್ಯ. ದೇಶದಲ್ಲಿ ಸಮಾನವಾಗಿ ಎಲ್ಲರೂ ಬಾಳುವಂತಾಗಬೇಕು ಆಗ ಮಾತ್ರ ಸಂವಿಧಾನ ರಚನೆಯ ಮುಖ್ಯ ಉದ್ದೇಶ ಇಡೇರಿದಂತಾಗುತ್ತದೆ ಎಂದರು.ಅಧ್ಯಕ್ಷತೆ ವಹಿಸಿದ ಕರ್ನಾಟಕ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜೀವನ ಎಂಬ ರಥದಲ್ಲಿ ಭಕ್ತಿ ಎಂಬ ಕೀಲಿ ಪ್ರತಿಯೊಬ್ಬರಿಗೂ ಅತೀ ಮುಖ್ಯ ಎಂದು ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ ಅವರು ಹೇಳಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ಆಯೋಜಿಸಿದ ದೇವರ ದಾಸಿಮಯ್ಯ ಅವರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಅವರು ಮಾತನಾಡಿದರು. ಇಂದಿನ ಒತ್ತಡದ ಬದುಕಿನಲ್ಲಿ ಬಹುತೇಕರು ಭಕ್ತಿಮಾರ್ಗದಿಂದ ವಿಮುಖರಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದ್ದು, ಅದೆಷ್ಟೇ ಒತ್ತಡ ಇದ್ದರೂ ಪ್ರತಿಯೊಬ್ಬರೂ ಭಕ್ತಿ ಮಾರ್ಗವನ್ನು ಮರೆಯಬಾರದು ಎಂದು ಡಾ. ಔದ್ರಾಮ ಹೇಳಿದರು.ಎತ್ತಿನ ಬಂಡಿಗೆ ಕೀಲು ಇಲ್ಲದಿದ್ದರೆ ಅದು ಸರಾಗವಾಗಿ ಚಲಿಸುವುದಿಲ್ಲ ಅದರಂತೆ ಪ್ರತಿಯೊಬ್ಬರಿಗೂ ಭಕ್ತಿ ಎಂಬ ಕೀಲು ಇರಬೇಕು. ಭಕ್ತಿಯನ್ನು ಅಳವಡಿಸಿಕೊಂಡರೆ ಜೀವನ ಹೂವಿನಷ್ಟೇ ಹಗುರ ಹಾಗೂ ಸುಮಧುರವಾಗುತ್ತದೆ ಎಂದು ಡಾ. ಔದ್ರಾಮ ಭಕ್ತಿಯ ಮಹತ್ವ ಉಣಬಡಿಸಿದರು.ಬಿ.ಎಂ.ನೂಲವಿ ಮಾತನಾಡಿದರು.ಸಂತೋಷಕುಮಾರ ಎಸ್. ಬಂಡೆ ಉಪನ್ಯಾಸ ನೀಡಿದರು.ಈ ಕಾರ್ಯಕ್ರಮದಲ್ಲಿ ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರಾದ ರಾಹುಲ್ ಭಾವಿದೊಡ್ಡಿ, ಮಹಾನಗರ ಪಾಲಿಕೆಯ…
