Author: editor.udayarashmi@gmail.com

ಚಿಮ್ಮಡ: ಗ್ರಾಮದ ಆರಾಧ್ಯ ದೇವತೆ ದುರ್ಗಾದೇವಿಯ ಜಾತ್ರಾ ಮಹೋತ್ಸವದ ನಿಮಿತ್ಯ ಉಡಿ ತುಂಬುವ ಕಾರ್ಯಕ್ರಮ ಶುಕ್ರವಾರ ಮುಂಜಾನೆ ಸಕಲ ವಾದ್ಯ ವೃಂದಗಳೊಂದಿಗೆ ವಿಜ್ರಂಭಣೆಯಿಂದ ನಡೆಯಿತು.ಮುಂಜಾನೆ ಆರು ಗಂಟೆಗೆ ನಡೆಯುವ ವಿಶೇಷ ಪೂಜೆಯೊಂದಿಗೆ ಪ್ರಾರಂಭಗೊಂಡ ಜಾತ್ರಾ ಮಹೋತ್ಸವದಲ್ಲಿ ಗ್ರಾಮದ ರೈತರು ತಮ್ಮ ವಾಹನಗಳಲ್ಲಿ ಸಮೀಪದ ಕೃಷ್ಣಾ ನದಿಯಿಂದ ಗಂಗಾಜಲ ತಂದು ಶ್ರೀ ದೇವಿಯ ಮೂರ್ತಿಗೆ ಗಂಗಾಭಿಷೇಕ ನೆರವೇರಿಸಿದರು. ನಂತರ ದೇವಿಯ ವಿಗ್ರಹ ಒಳಗೊಂಡ ಪಲ್ಲಕ್ಕಿಯನ್ನು ಸಕಲ ವಾದ್ಯ ವೃಂದಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸುತ್ತ ಸಕಲ ವಿಧಿ ವಿಧಾನಗಳಿಂದ ಅಲಂಕರಿಸಲಾಗಿದ್ದ ಗ್ರಾಮದ ದ್ಯಾಮವ್ವದೇವಿ, ಎಲ್ಲಮ್ಮದೇವಿ, ಶ್ರೀ ಬನಶಂಕರಿದೇವಿಯ ಮೂರು ಮೂಖದವ್ವದೇವಿ, ಲಕ್ಷಿö್ಮದೇವಿ ದೇವಸ್ಥಾನಗಳಿಗೆ ನೈವೆದ್ದೆ ಅರ್ಪಿಸಿ ದೇವಿಯ ಉಡಿ ತುಂಬುವ ಮೂಲಕ ಗ್ರಾಮದ ಜನ ಜಾನುವಾರುಗಳಿಗೆ ಬರುವ ಕಂಟಕ, ಮಾರಣಾಂತಿಕ ಕಾಯಿಲೆ ನಿವಾರಣೆಗಾಗಿ ಕಳೆದ ಐದು ವಾರಗಳ ಕಾಲ ಗ್ರಾಮದಲ್ಲಿ ರೊಟ್ಟಿ ಮಾಡುವುದು, ಪದಾರ್ಥಗಳನ್ನು ಕರಿಯುವುದು, ತೆಂಗಿನಕಾಯಿ ಒಡೆಯುವುದು ಅಲ್ಲದೇ ಯಾವುದೇ ಶುಭಕಾರ್ಯಗಳಿಗೆ ವಿಧಿಸಲಾಗಿದ್ದ ಸ್ವಯಂ ಪ್ರೇರಿತ ನಿಷೇಧಗೊಳಿಸುವ ‘ದೇವಿಯ ವಾರ ಆಚರಣೆಯನ್ನು…

Read More

ವಿಜಯಪುರ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಪತ್ರಿಕಾ ದಿನಾಚರಣೆ, ಪ್ರತಿಭಾ ಪುರಸ್ಕಾರ ಹಾಗೂ ಪತ್ರಕರ್ತರಿಗೆ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಜು. ೨೮ರಂದು ಮಧ್ಯಾಹ್ನ ೩ ಗಂಟೆಗೆ ನಗರದ ಪೊಲೀಸ್ ಕವಾಯತು ಮೈದಾನ ಎದುರಿಗಿರುವ ಪೊಲೀಸ್ ಸಮುದಾಯ ಭವನದಲ್ಲಿ ನಡೆಯಲಿದೆ.ಬೃಹತ್ ಕೈಗಾರಿಕೆ, ಮೂಲ ಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ಕಾರ್ಯಕ್ರಮ ಉದ್ಘಾಟಿಸುವರು. ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಮತ್ತು ಎಪಿಎಂಸಿ ಸಚಿವ ಶಿವಾನಂದ ಪಾಟೀಲ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸುವರು. ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪತ್ರಕರ್ತರಿಗೆ ವಾರ್ಷಿಕ ಪ್ರಶಸ್ತಿ ಪ್ರದಾನ ಮಾಡುವರು.ಈ ಸಮಾರಂಭಕ್ಕೆ ವಿಶೇಷ ಆಹ್ವಾನಿತರಾಗಿ ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಹಾಗೂ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಆಗಮಿಸುವರು. ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಟಿ. ಚೂರಿ ಅಧ್ಯಕ್ಷತೆ ವಹಿಸುವರು.ಮುಖ್ಯ ಅತಿಥಿಗಳಾಗಿ ಸಂಸದ ರಮೇಶ ಜಿಗಜಿಣಗಿ, ಶಾಸಕರಾದ ಯಶವಂತರಾಯಗೌಡ ಪಾಟೀಲ,…

Read More

ವಿಜಯಪುರ: ಇಲ್ಲಿಯ ಯುನಿಯನ್ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ಶುಭಶ್ರೀ ಹೊಟೆಲನಲ್ಲಿ ಲಘು, ಸಣ್ಣ ಹಾಗೂ ಮಧ್ಯಮ ಉದ್ಯಮಗಳ ಪ್ರದರ್ಶನ ಮತ್ತು ಗ್ರಾಹಕರ ಸಭೆ ಗುರುವಾರ ಜರುಗಿತು.ಕಾರ್ಯಕ್ರಮವನ್ನು ಬೆಂಗಳೂರಿನ ಅಂಚಲೀಯ ಕಾರ್ಯಲಯದ ಸಹಾಯಕ ಮಹಾಪ್ರಬಂಧಕ ಅನೀಲಕುಮಾರ ಉದ್ಘಾಟಿಸಿದರು. ಕಲಬುರ್ಗಿಯ ಕ್ಷೇತ್ರಿಯ ಸಹಾಯಕ ಮಹಾಪ್ರಬಂಧಕ ಶ್ರೀಮತಿ ತೇಜಸ್ವಿನಿ ಅಧ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮದ ನೇತೃತ್ವವನ್ನು ಮುಖ್ಯ ವ್ಯವಸ್ಥಾಪಕ ಶಿವಾನಂದ ರೆಡ್ಡಿ ಹಾಗೂ ಹಿರಿಯ ವ್ಯವಸ್ಥಾಪಕ ಸತೀಶ ಜೋಶಿ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಟಾಟಾ ಅಟೋಮೊಬೈಲ್‌ದ ಬಸವರಾಜ ಬಿಜ್ಜರಗಿ, ಉದ್ಯಮಿ ಸಜ್ಜನ, ಜಾಕೀರ ಸಮೂಹ ಸಂಸ್ಥೆಗಳ ಮುಖ್ಯಸ್ಥ ಎಚ್.ಎಂ. ಬಾಗವಾನ, ಗಣ್ಯ ಗ್ರಾಹಕ ಅನಿಲ ಅಣೆಪ್ಪನವರ ಗುತ್ತಿಗೆದಾರ ಸೋಮಶೇಖರ ಬಂಡಿ, ಟ್ರಾನ್ಸ್ಪೋರ್ಟ ಮಾಲಿಕ ಅಶೋಕ ಉಪ್ಪಿನ ಹಾಗೂ ಡಾ|| ಎಸ್.ಬಿ. ಮುದನೂರ ಭಾಗವಹಿಸಿದ್ದರು.ಸತೀಶ ಜೋಶಿ ಸ್ವಾಗತಿಸಿ, ನಿರೂಪಿಸಿದರು. ಕಲಬುರ್ಗಿಯ ಮುಖ್ಯ ಪ್ರಬಂಧಕ ಮನೋಜ ಕುಲಕರ್ಣಿ ಕೊನೆಯಲ್ಲಿ ವಂದಿಸಿದರು.

Read More

ಸಂತೋಷ್ ರಾವ್ ಪೆರ್ಮುಡ,ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ, ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ, ದೂ: ೯೭೪೨೮೮೪೧೬೦ ಮನುಷ್ಯನ ಆಲೋಚನೆಗಳು ನೂರಾರು ರೀತಿ ಇರುತ್ತವೆ. ಅವುಗಳನ್ನು ಪ್ರಮುಖವಾಗಿ ಸಕಾರಾತ್ಮಕ ಮತ್ತು ನಕಾರಾತ್ಮಕ ಎಂದು ಎರಡು ಭಾಗವಾಗಿ ವಿಂಗಡಿಸಬಹುದು. ಇದರಲ್ಲಿ ನಕಾತಾತ್ಮಕ ಚಿಂತನೆಗಳೆಂದರೆ ಎಲ್ಲರಿಗೂ ಭಯ. ನಕಾರಾತ್ಮಕ ಚಿಂತನೆಗಳು ಎಂದರೆ, ಮನುಷ್ಯನ ಆಲೋಚನೆಗಳು, ಅಭಿಪ್ರಾಯಗಳು ಅಥವಾ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಮನಸ್ಸಿನಲ್ಲಿ ಉಂಟಾಗುವ ಗೊಂದಲದ ಸ್ಥಿತಿಯಾಗಿದೆ. ಮನಸ್ಸಿನಲ್ಲಿ ಇರುವ ನಕಾರಾತ್ಮಕತೆಯಿಂದ ಮನುಷ್ಯನ ಒಟ್ಟಾರೆ ಆರೋಗ್ಯವೂ ಹಾಳಾಗುತ್ತದೆ. ಇದೇ ರೀತಿ ವಿವಿಧ ಮನೋಭಾವದ ಜನರು ಎಲ್ಲೆಡೆ ಇರುತ್ತಾರೆ. ನಾವು ಕೆಲಸ ಮಾಡುವ ಕಂಪನಿ, ಕಾರ್ಖಾನೆ, ಉದ್ಯಮಗಳು ಇತ್ಯಾದಿ ಇರಬಹುದು ಕೆಲವೊಮ್ಮೆ ಅಲ್ಲಿನ ಉದ್ಯೋಗಿಗಳು ವಿವಿಧ ರೀತಿಯ ಮನೋಭಾವ ಹೊಂದಿರುತ್ತಾರೆ. ಒಬ್ಬರು ಸಿಡುಕರಾದರೆ ಇನ್ನೊಬ್ಬರು ಸದಾ ಹಸನ್ಮುಖಿ. ಕೆಲವರು ಉತ್ತಮರಾದರೆ ಒಂದಷ್ಟು ಮಂದಿ ಸದಾ ಇತರರಿಗೆ ಕೆಡುಕು ಬಯಸುವವರು. ಕೆಲವರಿಗೆ ಕೆಲಸ ಮಾಡಲು ಆಸಕ್ತಿ ಇಲ್ಲದಿದ್ದರೆ ಇನ್ನು ಕೆಲವರು ಯಾವ ಕೆಲಸವನ್ನು ಎಷ್ಟು ಚೆನ್ನಾಗಿ ಮಾಡಿದರೂ…

Read More

ಶಾಲಾ ಸಂಸತ್ತು | ನೂತನ ಮಂತ್ರಿ ಮಂಡಲ ರಚನೆ | ಖಾತೆ ಪ್ರಮಾಣ ಪತ್ರ ವಿತರಣೆ ಚಿಕ್ಕಪಡಸಲಗಿ: ಇಂದಿನ ಯುವಜನತೆ ವಿದ್ಯಾರ್ಥಿಗಳಲ್ಲಿ ಮತದಾನದ ಮಹತ್ವ ಹಾಗೂ ಮತಹಕ್ಕು ಚಲಾಯಿಸುವ ಪಾವಿತ್ರ್ಯತೆಯ ಅರಿವು ಮೂಡಿಸುವ ನಿಟ್ಟಿನಲ್ಲಿ ಶಾಲಾ ಸಂಸತ್ತು ಚುನಾವಣೆ ಸಹಕಾರಿಯಾಗಿದೆ ಆ ಹಿನ್ನೆಲೆಯಲ್ಲಿ ಶಾಲೆಯಲ್ಲಿ ಅಣಕು ಸಂಸತ್ ರಚನೆ ಪ್ರಕ್ರಿಯೆ ನಡೆಸಲಾಗುತ್ತದೆ ಎಂದು ಪ್ರಭಾರ ಮುಖ್ಯೋಪಾಧ್ಯಾಯ ಬಸವರಾಜ ಜಾಲೋಜಿ ಹೇಳಿದರು.ಸ್ಥಳೀಯ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆಯಲ್ಲಿ ಜರುಗಿದ ಪ್ರಸಕ್ತ ಸಾಲಿನ ಶಾಲಾ ಸಂಸತ್ತು ಚುನಾವಣೆಯಲ್ಲಿ ಆಯ್ಕೆಯಾದ ಸಂಸತ್ತಿನ ನೂತನ ಮಂತ್ರಿ ಮಂಡಲದ ಸದಸ್ಯರಿಗೆ ಖಾತೆಗಳ ಹಂಚಿಕೆ ಪ್ರಮಾಣಪತ್ರ ವಿತರಿಸಿ ಅವರು ಮಾತನಾಡಿದರು.ಪ್ರೌಢಶಾಲಾ ಹಂತದಲ್ಲೇ ಮಕ್ಕಳಿಗೆ ಗಟ್ಟಿ ಪ್ರಜಾಪ್ರಭುತ್ವದ ತಿರುಳು ತಿಳಿ ಹೇಳಬೇಕಾಗಿದೆ. ಮತದಾನದ ಮೌಲ್ಯವನ್ನು ಅವರಿಗೆ ಮನವರಿಕೆ ಮಾಡಿಕೊಡಬೇಕಾಗಿದೆ.ಒಂದೊಂದು ಮತವು ನಿಣಾ೯ಯಕ ಪಾತ್ರ ವಹಿಸುತ್ತದೆ ಎಂಬ ಪರಿಕಲ್ಪನೆ ಮೂಡಿಸಿ ಜನಪ್ರತಿನಿಧಿಗಳು ಹೇಗೆ ಆಯ್ಕೆಗೊಳ್ಳತ್ತಾರೆ,ಸರಕಾರ ಹೇಗೆ ರಚನೆಯಾಗುತ್ತದೆ ಎಂಬಿತ್ಯಾದಿ ಅಂಶಗಳನ್ನು ತಿಳಿಸಿ ಸಾರ್ವತ್ರಿಕ ಚುನಾವಣೆ ನಿಯಮಾವಳಿಗಳ ಮಾದರಿಯಲ್ಲಿ ಪಾರದರ್ಶಕತೆಯಿಂದ ಶಾಲೆಯಲ್ಲಿ ಚುನಾವಣೆ ನಡೆಸಲಾಗಿದೆ…

Read More

ಇಂಡಿ: ಗ್ರಾಮ‌ ಆಡಳಿತ ಅಧಿಕಾರಿ ವಿರುದ್ಧ ಜಾತಿ ನಿಂದನೆ ಹಾಗೂ ಅವಾಚ್ಯ ಶಬ್ದಗಳ ಬಳಕೆ ಹಿನ್ನೆಲೆ ಶಿಸ್ತು ಕ್ರಮಕ್ಕಾಗಿ ಶಿರಸ್ತೆದಾರ ಎಸ್ ಆರ್ ಮುಜಗೊಂಡ ಅವರಿಗೆ ಲಂಬಾಣಿ ಸಮಾಜದ ಯುವಕರು ಮನವಿ ಸಲ್ಲಿಸಿದರು.ಶುಕ್ರವಾರ ತಾಲೂಕು ಆಡಳಿತ ಸೌಧಕ್ಕೆ ಆಗಮಿಸಿದ ಲಂಬಾಣಿ ಸಮಾಜದ ಯುವಕರು, ಅಥರ್ಗಾ ಗ್ರಾಮ‌ದ ಆಡಳಿತ ಅಧಿಕಾರಿ ಯುವರಾಜ ನಿಂಬರಗಿ ಎಂಬುವರು ಲಮಾಣಿ ಸಮಾಜಕ್ಕೆ ‌ ಅವಾಚ್ಯ, ಅಸಲಿಲ ಪದಗಳಿಂದ ಜಾತಿ‌ ನಿಂದನೆ ಮಾಡಿದ್ದು ಅತ್ಯಂತ ನೋವಾಗಿದೆ. ಆ ಗ್ರಾಮ ಆಡಳಿತ ಅಧಿಕಾರ ವಿರುದ್ಧ ಕೂಡಲೇ ‌ಶಿಸ್ತು ಕ್ರಮ ಜರಗಿಸಬೇಕು ಎಂದು ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಗಣಪತಿ ರಾಠೋಡ, ವಿಜಯಕುಮಾರ್ ರಾಠೋಡ, ಅಶೋಕ ಜಾಧವ, ಅವಿನಾಶ್ ರಾಠೋಡ, ವಿಶ್ವನಾಥ ರಾಠೋಡ, ಲಾಲು ಚವ್ಹಾಣ ಹಾಗೂ ಇನ್ನೂ ಅನೇಕ ಯುವಕರು ಉಪಸ್ಥಿತರಿದ್ದರು.

Read More

ಇಂಡಿ: ಇತ್ತೀಚಿಗೆ ರಾಜ್ಯ ಸರಕಾರ ಜನನ ಮತ್ತು ಮರಣ ಪ್ರಮಾಣ ಪತ್ರಗಳು ಹಾಗೂ ಕಂದಾಯ ಇಲಾಖೆ ಸೇವೆಗಳು ಗ್ರಾಮ ಪಂಚಾಯತ್ ಕಾರ್ಯಾಲಯದಲ್ಲಿ ವಿತರಿಸುವ ಮಹತ್ವದ ಯೋಜನೆ ರೂಪಿಸಿಗೊಂಡಿತ್ತು. ಅದರಂತೆ ಶುಕ್ರವಾರ ಗ್ರಾ.ಪಂ ಯಲ್ಲಿ ಮರಣ ಪ್ರಮಾಣ ಪತ್ರ ವಿತರಿಸಲಾಗಿದೆ ಎಂದು ಕಾರ್ಯದರ್ಶಿ ನಾಗಪ್ಪ ತೆಲಸಂಗ ಹೇಳಿದರು.ತಾಲ್ಲೂಕಿನ ಗುಬ್ಬೇವಾಡ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಗುಬ್ಬೇವಾಡ ಗ್ರಾಮದ ಗೌರಾಬಾಯಿ ವಿಠ್ಠಲ ಕೋಳಿ ಅವರ ಮರಣ ಪತ್ರ ಇಂದು ಅವರ ಕುಟುಂಬಕ್ಕೆ ವಿತರಿಸುವ ಮೂಲಕ ಸರಕಾರದ ಮಹತ್ವದ ಯೋಜನೆಗೆ ಗ್ರಾಮೀಣ ಪ್ರದೇಶದಲ್ಲಿ ಮೆಚ್ಚುಗೆ ಪಡೆಯುವಂತಾಗಿದೆ. ಸುಖಾ ಸುಮ್ನೆ ಪಟ್ಟಣ‌ ಮತ್ತು ಬೇರೆಬೇರೆ ಕಛೇರಿಗೆ ಅಲೆದಾಟ ತಪ್ಪಿದ್ದು, ಸ್ಥಳದಲ್ಲೆ ಪ್ರಮಾಣ ಪತ್ರ ದೊರೆಯುತ್ತಿದೆ‌ ಎಂದು ಹೇಳಿದರು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಕರವಸುಲಿಗಾರ ಎಸ್ ಐ ಕೋಳಿ‌ ಮಾತನಾಡಿದ ಅವರು, ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸಂಭವಿಸುವ ಜನನ ಹಾಗೂ ಮರಣದ ಘಟನೆಗಳಲ್ಲಿ 21 ದಿನಗಳೊಳಗೆ ಜನನ ಮತ್ತು ಮರಣ ಘಟನೆಗಳನ್ನು ನೋಂದಣಿ ಮಾಡಿದ ಪ್ರಸಂಗಗಳಲ್ಲಿ ಉಚಿತವಾಗಿ ಪ್ರಮಾಣ…

Read More

ಇಂಡಿ: ಇಂದಿನ ಯುವ ಜನತೆ ಕೇವಲ ಪುಸ್ತಕ ಜ್ಞಾನಕ್ಕೆ ಸೀಮಿತರಾಗುತ್ತಿದ್ದಾರೆ. ಸಮಾಜದಲ್ಲಿನ ವಿಚಾರಗಳನ್ನು ಅರಿಯದೆ ಜೀವನ ನಿರ್ವಹಣೆ ಕಷ್ಟಸಾಧ್ಯವಾಗಿ ವಿಚಲಿತರಾಗುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಕಾಸುಗೌಡ ಬಿರಾದಾರ ಹೇಳಿದರು.ಅವರು ಪಟ್ಟಣದ ಸಿಂದಗಿ ರಸ್ತೆಯಲ್ಲಿರುವ ಸಿ.ವಿ. ರಾಮನ್ ಪದವಿಪೂರ್ವ ವಿದ್ಯಾಲಯದಲ್ಲಿ ಹಮ್ಮಿಕೊಂಡ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳ ಸತ್ಕಾರ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದರು.ತಮ್ಮ ಮಾತಿನುದ್ದಕ್ಕೂ ವಿದ್ಯಾರ್ಥಿಗಳಿಗೆ ಜೀವನದ ಮೌಲ್ಯವನ್ನು ಉತ್ತಮವಾಗಿ ವಿವರಿಸಿದರು.ಶಿಕ್ಷಕ ಕೆ.ಎ. ತೆಲಸಂಗ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ತಾವು ಕಲಿಯುವ ಪ್ರತೀ ಸಂದರ್ಭದಲ್ಲಿಯೂ ತಂದೆ ತಾಯಿಯ ಶ್ರಮದ ಬಗ್ಗೆ ಮನವರಿಕೆ ಮಾಡಿಕೊಳ್ಳಬೇಕು. ಪಾಲಕರು ಕಷ್ಟದ ಪರಿಸ್ಥಿತಿಯಲ್ಲಿ ನಿಮಗೆ ಉತ್ತಮ ಶಿಕ್ಷಣ ನೀಡುವ ಹಂಬಲ ಹೊಂದಿ ನಿಮ್ಮನ್ನು ಉತ್ತಮ ಸಂಸ್ಥೆಗಳಲ್ಲಿ ಕಲಿಸುತ್ತಾರೆ. ಅವುಗಳನ್ನೆಲ್ಲ ಸ್ಮರಿಸಿಕೊಂಡು ವಿದ್ಯಾಭ್ಯಾಸ ಮಾಡಿದಾಗ ವಿದ್ಯಾರ್ಥಿ ಜೀವನ ಉನ್ನತ ಸ್ಥಾನಕ್ಕೇರಲು ಸಾಧಯವಾಗುತ್ತದೆ ಎಂದರು.ಅತಿಥಿ ಶಿಕ್ಷಕ ಆಂಜನೇಯ ಸ್ವಾಮಿ ಹೊಸಮನಿ ಮಾತನಾಡಿ, ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿದ್ದು ಶ್ರದ್ಧೆಯಿಂದ ಅಭ್ಯಾಸ ಮಾಡಿದ್ದಲ್ಲಿ ತಾಲೂಕು ಮತ್ತು…

Read More

ಹಡಗಲಿ(ದೇವರಹಿಪ್ಪರಗಿ): ಗ್ರಾಮದ ಮೂಲಕ ಸಂಚರಿಸುವ ವಿಜಯಪುರ-ಕಲಬುರ್ಗಿ, ಸಿಂದಗಿ-ವಿಜಯಪುರ ಬಸ್‌ಗಳನ್ನು ನಿಲುಗಡೆ ಮಾಡುವಂತೆ ಆಗ್ರಹಿಸಿ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ರಾಷ್ಟ್ರೀಯ ಹೆದ್ದಾರಿ-೫೦ರಲ್ಲಿ ಧರಣಿ ಕುಳಿತು ಪ್ರತಿಭಟಿಸಿದರು.ವಿಜಯಪುರ ತಾಲ್ಲೂಕಿನ ಹಡಗಲಿ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೇರಿದ ಗ್ರಾಮ ಹಾಗೂ ಗ್ರಾಮದ ಎರಡು ತಾಂಡಾಗಳ ವಿದ್ಯಾರ್ಥಿಗಳು ಬಸ್ ನಿಲುಗಡೆಗಾಗಿ ಆಗ್ರಹಿಸಿದರು.ಈ ಸಂದರ್ಭದಲ್ಲಿ ವಿದ್ಯಾರ್ಥಿನಿ ಗೌರಮ್ಮ ಗಂಗಶೆಟ್ಟಿ ಮಾತನಾಡಿ, ಪ್ರತಿದಿನ ಸಿಂದಗಿ-ವಿಜಯಪುರ ಬಸ್‌ಗಳು ನಿಲ್ಲುತ್ತವೆ. ಆದರೆ ಈಗೀಗ ಸಿಂದಗಿ-ವಿಜಯಪುರ ಬಸ್‌ಗಳು ತಡೆರಹಿತ ಎಂದು ನಾಮಫಲಕ ಹಾಕೊಕೊಂಡು ಸಂಚರಿಸುತ್ತಿವೆ. ಇದರಿಂದ ವಿದ್ಯಾರ್ಥಿಗಳು, ಶಿಕ್ಷಕರು ಬಸ್ ಸಿಗದೇ ಬಳಲುವಂತಾಗಿದೆ.ನಿತ್ಯ ಶಾಲಾ ಸಮಯಕ್ಕೆ ಬಹುತೇಕ ತಡೆರಹಿತ ಬಸ್‌ಗಳೇ ಬರುವುದರಿಂದ ವಿದ್ಯಾರ್ಥಿಗಳು ಶಾಲಾ, ಕಾಲೇಜುಗಳಿಗೆ ತಡವಾಗಿ ತೆರಳುವಂತಾಗಿದೆ. ವಿಜಯಪುರದಿಂದ ಬರುವಾಗ ಸಾಯಂಕಾಲವು ಸಹ ತಡೆರಹಿತ ಬಸ್‌ಗಳೇ ಇರುವುದರಿಂದ ವಿದ್ಯಾರ್ಥಿನೀಯರಿಗೆ ಮನೆಗೆ ತೆರಳಲು ತಡವಾಗುತ್ತಿದೆ. ಆದ್ದರಿಂದ ಗ್ರಾಮದ ಮೂಲಕ ತೆರಳುವ ವಿಜಯಪುರ-ಸಿಂದಗಿ ಹಾಗೂ ವಿಜಯಪುರ-ಕಲಬುರ್ಗಿ ಬಸ್‌ಗಳು ನಿಲುಗಡೆ ಮಾಡಿ ವಿದ್ಯಾರ್ಥಿ, ವಿದ್ಯಾರ್ಥಿನೀಯರ ಕಲಿಕೆಗೆ ಸಹಕಾರ ನೀಡುವಂತೆ ಆಗ್ರಹಿಸಿದರು.ಗ್ರಾಮದಲ್ಲಿ ಪ್ರತಿಭಟನೆ ಜರುಗುತ್ತಿರುವ ಸುದ್ದಿ ತಿಳಿದು ಸ್ಥಳಕ್ಕೆ…

Read More

ಸಿಂದಗಿ: ಪಟ್ಟಣದ ವಿದ್ಯಾಚೇತನ ಪ್ರಕಾಶನದಿಂದ ನೀಡುವ ರಾಜ್ಯಮಟ್ಟದ ಬಾಲಸಾಹಿತ್ಯ ಪುರಸ್ಕಾರ ಪ್ರದಾನ ಸಮಾರಂಭ ಜು.೨೮ ರಂದು ಬೆಳಿಗ್ಗೆ ೧೦.೩೦ಗಂಟೆಗೆ ಪಟ್ಟಣದ ಸಾರಂಗಮಠದ ಆವರಣದಲ್ಲಿ ನಡೆಯಲಿದೆ.ಬೆಂಗಳೂರಿನ ಲಲಿತಾ ಹೊಸಪ್ಯಾಟಿ (ಬ್ಯೂಟಿ ಬೆಳ್ಳಕ್ಕಿ—ಮಕ್ಕಳ ಕಥಾ ಸಂಕಲನ), ವಿಜಯಪುರ ಜಂಬುನಾಥ ಕಂಚ್ಯಾಣಿ (ಮತ್ತೆ ಅವತರಿಸಿದ ದೈತ್ಯರು—ಮಕ್ಕಳ ಕಾದಂಬರಿ), ಬೆಳಗಾವಿಯ ಎಂ.ಎಂ.ಸಂಗಣ್ಣವರ (ಅಮ್ಮ ಬೇಕು—ಮಕ್ಕಳ ಕವನ ಸಂಕಲನ) ಇವರಿಗೆ ಬಾಲಸಾಹಿತ್ಯ ಪುರಸ್ಕಾರ ಹಾಗೂ ಮಕ್ಕಳ ವಿಭಾಗದಲ್ಲಿ ಬಾಲಸಾಹಿತ್ಯ ಚಿಗುರು ಪುರಸ್ಕಾರವನ್ನು ಗದಗ ನಗರದ ವಿದ್ಯಾರ್ಥಿನಿ ಪ್ರಣತಿ ಗಡಾದ (ನಾನು ಮಳೆಯಾದರೆ—ಮಕ್ಕಳ ಕವನ ಸಂಕಲನ) ಅವರಿಗೆ ಪ್ರದಾನ ಮಾಡಲಾಗುವುದು. ಪ್ರಶಸ್ತಿಯು ತಲಾ ೫ ಸಾವಿರ ರೂ. ನಗದು ಮತ್ತು ಪ್ರಶಸ್ತಿ ಫಲಕ ಹಾಗೂ ಬಾಲ ಸಾಹಿತ್ಯ ಚಿಗುರು ಪ್ರಶಸ್ತಿ ೨ ಸಾವಿರ ರೂ. ನಗದು, ಪ್ರಶಸ್ತಿ ಫಲಕ ಒಳಗೊಂಡಿದೆ.ಕಾರ್ಯಕ್ರಮದ ಸಾನಿಧ್ಯವನ್ನು ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ವಹಿಸುವರು. ಕರ್ನಾಟಕ ರಾಜ್ಯ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಶಾಸಕ ಅಶೋಕ ಮನಗೂಳಿ ಸಮಾರಂಭವನ್ನು ಉದ್ಘಾಟಿಸುವರು.…

Read More