Author: editor.udayarashmi@gmail.com

ಬಸವನಬಾಗೇವಾಡಿ: ತಾಲೂಕಿನ ವರದಿಗಾರ ಬಸವರಾಜ. ಎಸ್. ನಂದಿಹಾಳ ಅವರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಸಕ್ತ ವರ್ಷದ ವಾರ್ಷಿಕ ಪ್ರಶಸ್ತಿಗೆ ಭಾಜನರಾದ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ ಸ್ಥಳೀಯ ಬಸವೇಶ್ವರ ಸೇವಾ ಸಮಿತಿಯಿಂದ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಬಸವೇಶ್ವರ ಸೇವಾ ಸಮಿತಿಯ ಸದಸ್ಯ, ನಿವೃತ್ತ ಶಿಕ್ಷಕ ಎಂ.ಜಿ.ಆದಿಗೊಂಡ ಮಾತನಾಡಿ, ಕಳೆದ ೧೮ ವರ್ಷಗಳಿಂದ ಕನ್ನಡಪ್ರಭ ದಿನಪತ್ರಿಕೆಯ ತಾಲೂಕು ವರದಿಗಾರರಾಗಿ ಕಾರ್ಯನಿರ್ವಹಿಸುವ ಮೂಲಕ ಪತ್ರಿಕಾರಂಗಕ್ಕೆ ಸೇವೆ ಸಲ್ಲಿಸುತ್ತಿರುವ ಬಸವರಾಜ ನಂದಿಹಾಳ ಅವರ ಕಾರ್ಯ ಅನುಪಮ. ಇವರು ಪತ್ರಿಕಾ ರಂಗಕ್ಕೆ ಸೇವೆ ಸಲ್ಲಿಸಿರುವದನ್ನು ಗುರುತಿಸಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಶ್ಲಾಘನೀಯ. ಇವರು ಸಾಹಿತಿಕವಾದ ಚಟುವಟಿಕೆಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಶಿಕ್ಷಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಸೇವೆ ಇನ್ನಷ್ಟು ಸಮಾಜಕ್ಕೆ ಸಿಗುವಂತಾಗಲಿ ಎಂದು ಶುಭಹಾರೈಸಿದರು.ಈ ಸಂದರ್ಭದಲ್ಲಿ ಬಸವೇಶ್ವರ ಸೇವಾ ಸಮಿತಿ ಅಧ್ಯಕ್ಷ, ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ, ಬಸವೇಶ್ವರ ಸೇವಾ ಸಮಿತಿಯ ಸದಸ್ಯರಾದ ಬಸವರಾಜ ಗೊಳಸಂಗಿ, ಸಂಗಣ್ಣ ಕಲ್ಲೂರ, ಚಂದ್ರಶೇಖರಗೌಡ…

Read More

ಬಸವನಬಾಗೇವಾಡಿ: ಸೇವೆಯೇ ಬಾಳು ಎಂಬ ಧ್ಯೇಯ ವಾಕ್ಯದೊಂದಿಗೆ ಭಾರತ ಸೇವಾದಳ ಕಾರ್ಯನಿರ್ವಹಿಸುತ್ತಿದೆ. ವಿದ್ಯಾರ್ಥಿಗಳು ಭಾರತ ಸೇವಾದಳದಲ್ಲಿ ಭಾಗವಹಿಸಿದರೆ ಜೀವನದಲ್ಲಿ ಶಿಸ್ತು, ರಾಷ್ಟ್ರಪ್ರೇಮ ಮೈಗೂಡುತ್ತದೆ ಎಂದು ಭಾರತ ಸೇವಾದಳದ ವಲಯ ಸಂಘಟಕ ನಾಗೇಶ ಡೋಣೂರ ಹೇಳಿದರು.ತಾಲೂಕಿನ ಯರನಾಳ ಗ್ರಾಮದ ಹೆಣ್ಣುಮಕ್ಕಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾರತ ಸೇವಾದಳ ಜಿಲ್ಲಾ ಸಮಿತಿ, ತಾಲೂಕು ಸಮಿತಿ, ಶಾಲಾ ಶಿಕ್ಷಣ ಇಲಾಖೆ ಹಾಗೂ ಹೆಣ್ಣುಮಕ್ಕಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಭಾರತ ಸೇವಾದಳ ಘಟಕ ಉದ್ಘಾಟನೆ ಹಾಗೂ ರಾಷ್ಟ್ರೀಯ ಭಾವೈಕ್ಯತೆ, ರಾಷ್ಟ್ರಧ್ವಜ, ರಾಷ್ಟ್ರಗೀತೆ ಕುರಿತು ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ರಾಷ್ಟ್ರಪ್ರೇಮ, ಜನಸೇವೆ ಗುಣವನ್ನು ಅಳವಡಿಸಿಕೊಳ್ಳಬೇಕು. ಸಂಘಟನಾತ್ಮಕ ಬದಲಾವಣೆಗಳು ದೇಶವನ್ನು ಮುನ್ನಡೆಸುತ್ತಿವೆ. ಶಿಸ್ತು ಮತ್ತು ಶಾಂತಿ ಸೇವಾದಳದ ಮೂಲ ಆಧಾರ ಸ್ತಂಭಗಳಾಗಿವೆ ಎಂದರು.ಭಾರತ ಸೇವಾದಳವು ಜಾತ್ಯಾತೀತ, ಪಕ್ಷಾತೀತವಾದ ಸಂಸ್ಥೆಯಾಗಿದೆ. ಇದರ ಸಂಸ್ಥಾಪಕ ಡಾ.ನಾರಾಯಣ ಸುಬ್ಬರಾವ್ ಹರ್ಡೀಕರ್ ಆಗಿದ್ದಾರೆ. ಇವರ ತತ್ವಾದರ್ಶಗಳನ್ನು, ಸಂಘಟನಾ ಚಾತುರ್ಯವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳು…

Read More

ಸಿಂದಗಿ: ಮಗು ಜನಿಸಿದ ಮೊದಲ ಆರು ತಿಂಗಳ ಕಾಲ ಎದೆ ಹಾಲುಣಿಸುವಿಕೆಯನ್ನು ಉತೇಜಿಸುವ ಗುರಿಯೊಂದಿಗೆ ೧೯೯೧ರಲ್ಲಿ ವಿಶ್ವಸ್ತನ್ಯಪಾನ ಸಪ್ತಾಹ ಪ್ರಾರಂಭಿಸಲಾಯಿತು ಎಂದು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ.ಕುಲಕರ್ಣಿ ಹೇಳಿದರು.ಪಟ್ಟಣದ ಹೆಗ್ಗೇರಿ ಅಂಗನವಾಡಿ ಕೇಂದ್ರದಲ್ಲಿ ವಿಜಯಪುರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸಂತಾನೊತ್ಪತ್ತಿ ಹಾಗೂ ತಾಯಿ ಮಕ್ಕಳ ಆರೋಗ್ಯ ವಿಭಾಗ, ತಾಲೂಕು ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಿಂದಗಿ ಶಿಶು ಅಭಿವೃದ್ಧಿ ಯೋಜನಾ ಇಲಾಖೆಯ ವತಿಯಿಂದ ಹಮ್ಮಿಕೊಂಡ ಸಾರ್ವತ್ರಿಕ ಲಸಿಕಾಕರಣ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹೆರಿಗೆಯಾದ ಅರ್ದ ಗಂಟೆಯ ಒಳಗಾಗಿ ತಾಯಿ ಎದೆ ಹಾಲು ನೀಡಬೇಕು. ತಾಯಿಯ ಎದೆ ಹಾಲಿನಲ್ಲಿರುವ ಕೊಲೆಸ್ಟ್ರಮ್ ಅಂಶವು ಮಗುವಿನ ಸರ್ವಾಂಗೀಣ ಬೆಳವಣಿಗೆಗೆ ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮಗುವಿಗೆ ಆರು ತಿಂಗಳವರೆಗೆ ನೀರು ಕುಡಿಸುವುದಾಗಲಿ, ಜೇನುತುಪ್ಪ ನೀಡುವುದಾಗಲಿ ಮಾಡಬಾರದು. ಆರು ತಿಂಗಳ ನಂತರ ಪೂರಕ ಆಹಾರದೊಂದಿಗೆ ಎದೆ ಹಾಲು ಕನಿಷ್ಠ…

Read More

ಸಿಂದಗಿ: ನಾಡಿನ ಸಂಸ್ಕೃತಿ ಬಿಂಬಿಸುವ ಅಪ್ಪಟ ಗ್ರಾಮೀಣ ಕ್ರೀಡೆಗಳು ದಿನದಿಂದ ದಿನಕ್ಕೆ ನಶಿಸುತ್ತಿವೆ. ಮುಂಬರುವ ದಿನಮಾನಗಳಲ್ಲಿ ಆಧುನಿಕ ಅಬ್ಬರದ ಆಟಗಳ ಪ್ರವಾಹದಿಂದ ಗ್ರಾಮೀಣ ಆಟಗಳು ಮರೆಯಾಗಲಿವೆ. ಅವುಗಳನ್ನು ಉಳಿಸಿ ಬೆಳೆಸುವ ಕಾರ್ಯ ನಿಮ್ಮಿಂದಾಗಬೇಕು. ಇದರ ಜೊತೆಗೆ ಗ್ರಾಮೀಣ ಕ್ರೀಡೆಗಳ ಬಗ್ಗೆ ಅರಿವು ಮೂಡಿಸಬೇಕು ಎಂದು ಮಲಘಾಣ ಎಸ್.ಬಿ.ಪಪೂ ಕಾಲೇಜಿನ ಪ್ರಾಚಾರ್ಯ ಎಸ್.ಬಿ.ಜಾಧವ ಹೇಳಿದರು.ತಾಲೂಕಿನ ರಾಂಪುರ ಪಿಎ ಗ್ರಾಮದ ಸರ್ವೋದಯ ಶಿಕ್ಷಣ ಸಂಸ್ಥೆಯ ಜ್ಞಾನ ಸಿಂಚನ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪಪೂ ಕಾಲೇಜಿನಲ್ಲಿ ಹಮ್ಮಿಕೊಂಡ ೨೦೨೪-೨೫ನೆಯ ಸಾಲಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಹಾಗೂ ಪಠ್ಯಪೂರಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಸೀಮಿತವಾಗದೆ ಸಾಮಾನ್ಯ ಜ್ಷಾನದೆಡೆಗೆ ಗಮನ ಹರಿಸಬೇಕು. ಈ ನಿಟ್ಟಿನಲ್ಲಿ ಮಕ್ಕಳು ಪಠ್ಯಪೂರಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಕೇವಲ ಪಠ್ಯಬೋಧನೆ ಮಾಡಿದರೆ ಸಾಲದು. ಎಂದರು.ಈ ವೇಳೆ ಮಲಘಾಣ ಎಸ್.ಬಿ.ಪಪೂ ಕಾಲೇಜಿನ ಉಪನ್ಯಾಸಕ ವ್ಹಿ.ಕೆ.ಪಾಟೀಲ, ಕಸಾಪ ನಿಕಟಪೂರ್ವ ತಾಲೂಕಾಧ್ಯಕ್ಷ,…

Read More

ಮುದ್ದೇಬಿಹಾಳ: ಕಳೆದ ಮೂರು ವರ್ಷಗಳಿಂದ ಮುದ್ದೇಬಿಹಾಳದಿಂದ ಬಸವೇಶ್ವರರ ಐಕ್ಯ ಭೂಮಿ ಕೂಡಲ ಸಂಗಮಕ್ಕೆ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದ್ದು, ಪಾದಯಾತ್ರೆಯನ್ನು ಆ.೮ ರ ಬೆಳಿಗ್ಗೆ ೧೧ಕ್ಕೆ ಪಟ್ಟಣದ ಬಜಾರನಲ್ಲಿರುವ ಶ್ರೀ ದ್ಯಾಮವ್ವ ದೇವಿ ದೇವಸ್ತಾನದಿಂದ ಆರಂಭಿಸಲಾಗುತ್ತಿದೆ. ಸಂಗಮದಲ್ಲಿ ರವಿವಾರ ರಾತ್ರಿ ಉಳಿದುಕೊಳ್ಳಲು ಮಹಿಳೆಯರಿಗೂ ಸೇರಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಪಾದಯಾತ್ರೆಯ ನೇತೃತ್ವ ವಹಿಸಿರುವ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲಬುರ್ಗಿ ತಿಳಿಸಿದರು.ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಯಾತ್ರೆಗೆ ಬರುವವರು, ಹೊದಿಕೆ ಮತ್ತು ನಿತ್ಯೋಪಯೋಗಿ ವಸ್ತುಗಳನ್ನು ತರಬೇಕು. ಮಾರ್ಗದಲ್ಲಿ ಉಪಹಾರ, ಊಟದ ವ್ಯವಸ್ಥೆ ಇರುತ್ತದೆ. ಸಂಗಮದಲ್ಲಿಯೂ ರಾತ್ರಿ ಊಟ, ಮರುದಿನ ಬೆಳಿಗ್ಗೆ ಉಪಹಾರ ವ್ಯವಸ್ಥೆ, ಸೋಮವಾರ ಸಂಗಮನಾಥನಿಗೆ ರುದ್ರಾಭಿಷೇಕ ನೆರವೇರಿಸಿ ಮರಳಿ ಬರಲು ಮುದ್ದೇಬಿಹಾಳ ಘಟಕದಿಂದ ಬಸ್ ವ್ಯವಸ್ಥೆ ಇರಲಿದೆ. ಲಗೇಜ ಹೊತ್ತೊಯ್ಯಲು ಗೂಡ್ಸ್ ವಾಹನದ ವ್ಯವಸ್ಥೆಯನ್ನು ವಿಜಯ ಬೆಲ್ಲದ ಕಲ್ಪಿಸಿದ್ದು, ಸಂಗಮದಲ್ಲಿ ರಾತ್ರಿ ವಸತಿ ಸೇವೆಯನ್ನು ಅರವಿಂದ ಜಮಖಂಡಿ, ಮಾರ್ಗದಲ್ಲಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಸಂತೋಷ ಪಾಟೀಲ ಮತ್ತು ಕುಂಟೋಜಿಯ…

Read More

ಮುದ್ದೇಬಿಹಾಳ: ಕಳೆದ ಮೂರು ವರ್ಷಗಳಿಂದ ಮುದ್ದೇಬಿಹಾಳದಿಂದ ಬಸವೇಶ್ವರರ ಐಕ್ಯ ಭೂಮಿ ಕೂಡಲ ಸಂಗಮಕ್ಕೆ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದ್ದು, ಪಾದಯಾತ್ರೆಯನ್ನು ಆ.೮ ರ ಬೆಳಿಗ್ಗೆ ೧೧ಕ್ಕೆ ಪಟ್ಟಣದ ಬಜಾರನಲ್ಲಿರುವ ಶ್ರೀ ದ್ಯಾಮವ್ವ ದೇವಿ ದೇವಸ್ತಾನದಿಂದ ಆರಂಭಿಸಲಾಗುತ್ತಿದೆ. ಸಂಗಮದಲ್ಲಿ ರವಿವಾರ ರಾತ್ರಿ ಉಳಿದುಕೊಳ್ಳಲು ಮಹಿಳೆಯರಿಗೂ ಸೇರಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಪಾದಯಾತ್ರೆಯ ನೇತೃತ್ವ ವಹಿಸಿರುವ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲಬುರ್ಗಿ ತಿಳಿಸಿದರು.ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಯಾತ್ರೆಗೆ ಬರುವವರು, ಹೊದಿಕೆ ಮತ್ತು ನಿತ್ಯೋಪಯೋಗಿ ವಸ್ತುಗಳನ್ನು ತರಬೇಕು. ಮಾರ್ಗದಲ್ಲಿ ಉಪಹಾರ, ಊಟದ ವ್ಯವಸ್ಥೆ ಇರುತ್ತದೆ. ಸಂಗಮದಲ್ಲಿಯೂ ರಾತ್ರಿ ಊಟ, ಮರುದಿನ ಬೆಳಿಗ್ಗೆ ಉಪಹಾರ ವ್ಯವಸ್ಥೆ, ಸೋಮವಾರ ಸಂಗಮನಾಥನಿಗೆ ರುದ್ರಾಭಿಷೇಕ ನೆರವೇರಿಸಿ ಮರಳಿ ಬರಲು ಮುದ್ದೇಬಿಹಾಳ ಘಟಕದಿಂದ ಬಸ್ ವ್ಯವಸ್ಥೆ ಇರಲಿದೆ. ಲಗೇಜ ಹೊತ್ತೊಯ್ಯಲು ಗೂಡ್ಸ್ ವಾಹನದ ವ್ಯವಸ್ಥೆಯನ್ನು ವಿಜಯ ಬೆಲ್ಲದ ಕಲ್ಪಿಸಿದ್ದು, ಸಂಗಮದಲ್ಲಿ ರಾತ್ರಿ ವಸತಿ ಸೇವೆಯನ್ನು ಅರವಿಂದ ಜಮಖಂಡಿ, ಮಾರ್ಗದಲ್ಲಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಸಂತೋಷ ಪಾಟೀಲ ಮತ್ತು ಕುಂಟೋಜಿಯ…

Read More

ಮುದ್ದೇಬಿಹಾಳ: ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ಸುಮಾರು ೩೬ ವರ್ಷಗಳ ಸುದೀರ್ಘ ಕಾಲ ಸೇವೆಸಲ್ಲಿಸಿದ ಶುಶ್ರೂಷಕ ಅಧಿಕಾರಿ ಕಮಲಾಕ್ಷಿ ಕುಲಕರ್ಣಿ ಅವರು ಸೇವಾ ನಿವೃತ್ತಿ ಹೊಂದಿದ ಪ್ರಯುಕ್ತ ಅವರನ್ನು ಆಸ್ಪತ್ರೆಯ ಎಲ್ಲ ಅಧಿಕಾರಿ ಹಾಗೂ ಸಿಬ್ಬಂದಿಯವರು ಬಿಳ್ಕೊಟ್ಟರು.ಈ ವೇಳೆ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಅನೀಲಕುಮಾರ ಶೇಗುಣಸಿ ಮಾತನಾಡಿ, ಕುಲಕರ್ಣಿ ಅವರಿಂದ ಕಲಿಯುವುದು ಸಾಕಷ್ಟಿದೆ. ಅವರ ಸಮಯಪ್ರಜ್ಞೆ ಹಾಗೂ ಕಟ್ಟುನಿಟ್ಟಿನ ದಾಖಲಾತಿಗಳನ್ನು ಜೋಡಿಸುವುದು ಕಿರಿಯರಾದ ನಾವು ನಮ್ಮ ವೃತಿಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.ಈ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ. ಪರಶುರಾಮ ವಡ್ಡರ, ಡಾ. ಬಸವರಾಜ ಚೌದರಿ, ಹಸನ ಬಿಳಗಿ, ದಂತವೈದ್ಯಾಧಿಕಾರಿ ರಿಪತ್ ಇನಾಮದಾರ, ಹಿರಿಯ ಶುಶ್ರೂಷಕ ಅಧಿಕಾರಿ ಸಂಜಯ ಭೋಸಲೆ, ಹರಿ ದೇಶಪಾಂಡೆ, ಮಹಮ್ಮದರಫೀಕ ಬಾಗವಾನ, ಯಲಗೂರೇಶ ತೊನಶ್ಯಾಳ, ವಿಟ್ಟಲ್ ಕಿಲಾರಟ್ಟಿ, ಶಿವಣ್ಣ ಮಾಗಿ, ಕಾಶಿನಾಥ್ ವಗದುರ್ಗಿ, ಮುತ್ತು ಸಂಗಮ, ಸಚಿನ್ ರಾಥೋಡ, ಬಸಮ್ಮ ಸಾರವಾಡ, ರೇಣುಕಾ ಅರ್ಧವೂರ, ರೇಖಾ ಪಾಟೀಲ, ಅಖಿಲ ಬೇಗಂ, ಸಂತೋಷ ಅಂಗಡಿಗೇರಿ, ಪ್ರಬಂಜನ್ ಕುಂಟೋಜಿ, ಎಂ.ಎಸ್.ಗೌಡರ, ಬಸವರಾಜ ಹಾವೇರಿ, ವಿ.ವಿ.ಪವಾಡಶೆಟ್ಟಿ…

Read More

ಮುದ್ದೇಬಿಹಾಳ: ತಾಲೂಕಿನ ಕಂದಗನೂರು ಗ್ರಾಮದ ಕಬ್ಬಿನ ಹೊಲಗಳಲ್ಲಿ ಚಿರತೆಯೊಂದು ಅಲೆದಾಡುತ್ತಿರುವ ಬಗ್ಗೆ ವದಂತಿ ಹಬ್ಬಿದ್ದು ಈ ಬಗ್ಗೆ ಅಧಿಕಾರಿಗಳು ಭೇಟಿ ನೀಡಿ ಹೆಜ್ಜೆ ಗುರುತುಗಳನ್ನು ಪರಿಶೀಲಿಸಿ ಚಿರತೆಯ ಹೆಜ್ಜೆ ಗುರುತುಗಳನ್ನು ಹೋಲುವ ಕಾಡುಪ್ರಾಣಿ ಅಲೆದಾಡಿದ ಬಗ್ಗೆ ಖಚಿತ ಪಡಿಸಿ ಅದನ್ನು ಸೆರೆಹಿಡಿಯಲು ಪಂಜರವನ್ನು ಮತ್ತು ಸಿಸಿಟಿವಿ ಅಳವಡಿಸಿದ್ದರು.ಕಳೆದ ಎರಡು ದಿನಗಳಿಂದ ಯಾವುದೇ ಯಾವುದೇ ಪ್ರಾಣಿ ಅಲೆದಾಡಿದ ಬಗ್ಗೆ ಸಿಸಿಟಿವಿಯಲ್ಲಿ ಸೆರೆಯಾಗಿಲ್ಲ ಎಂದು ಅರಣ್ಯಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.ಜನಗಳು ಹೆಚ್ಚಾಗಿ ಓಡಾಡುವದರಿಂದ ಕಾಡುಪ್ರಾಣಿ ಮತ್ತೆ ಕಾಡಿನತ್ತ ಹೋಗಿರಬಹುದು ಎಂದು ಅಂದಾಜಿಸಿದ್ದಾರೆ.

Read More

ದೇವರಹಿಪ್ಪರಗಿ: ಶಿಕ್ಷಕ ವೃತ್ತಿ ಅತ್ಯಂತ ಶ್ರೇಷ್ಠವಾಗಿದ್ದು, ನಾವೆಲ್ಲ ಬದ್ಧತೆಯಿಂದ ಕಾರ್ಯ ನಿರ್ವಹಿಸೋಣ ಎಂದು ಮುಖ್ಯಶಿಕ್ಷಕ ಎಸ್.ಪಿ.ಇಂಗಳೇಶ್ವರ ಹೇಳಿದರು.ತಾಲ್ಲೂಕಿನ ಪಡಗಾನೂರ ಎಲ್‌ಟಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಗಂಗಾಬಾಯಿ ಗುಡಿಮನಿ ಸೇವಾನಿವೃತ್ತಿ ಹೊಂದಿದ ನಿಮಿತ್ಯ ಜರುಗಿದ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ಸಮಾಜಮುಖಿ ಚಿಂತನೆಗಳ ಮೂಲಕ ಸಧೃಢ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಿ ಪ್ರಾಥಮಿಕ ಶಾಲಾ ಸಹಶಿಕ್ಷಕಿಯಾಗಿ, ಶಿಕ್ಷಕ ಸಂಘಟನೆಯ ಪದಾಧಿಕಾರಿಯಾಗಿ ಗ್ರಾಮಸ್ಥರೆಲ್ಲರೂ ಮೆಚ್ಚುವಂತಹ ಕರ್ತವ್ಯವನ್ನು ನಿರ್ವಹಿಸಿದ ಗುಡಿಮನಿ ಶಿಕ್ಷಕಿಯ ಸೇವೆ ಶ್ಲಾಘನೀಯ ಎಂದರು.ನಿವೃತ್ತ ಶಿಕ್ಷಕಿ ಗಂಗಾಬಾಯಿ ಗುಡಿಮನಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಶಿಕ್ಷಕ ವೃತ್ತಿ ಅತ್ಯಂತ ತೃಪ್ತಿದಾಯಕ ಕಾಯಕ. ಮಕ್ಕಳ ಮನಗೆದ್ದು ಕಾರ್ಯನಿರ್ವಹಿಸಿದಾಗ ಯಶಸ್ವಿಯಾಗಲು ಸಾಧ್ಯ. ತಮ್ಮ ಸೇವಾವಧಿಯಲ್ಲಿ ಸಹಕರಿಸಿದ ಸರ್ವರನ್ನೂ ಸ್ಮರಿಸಿ ಧನ್ಯವಾದ ತಿಳಿಸಿದರು.ತಾಲ್ಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಎ.ಎಚ್.ವಾಲೀಕಾರ, ಸಂಘಟನಾ ಕಾರ್ಯದರ್ಶಿ ನಾಗೇಶ ನಾಗೂರ, ಗ್ರಾಮದ ಪ್ರಮುಖರಾದ ಗುರುರಾಜ ಆಕಳವಾಡಿ, ಶ್ರೀಕಾಂತ ರಾಠೋಡ, ಬಾಳು ರಾಠೋಡ, ಶಿಕ್ಷಕರಾದ ಎಮ್. ಎಚ್.ಖಾದ್ರಿ, ಮಲ್ಲಿಕಾರ್ಜುನ ತಳಕೇರಿ, ನಿವೃತ್ತಶಿಕ್ಷಕ ವಾಯ್.ಜಿ.ತಾವರಖೇಡ ಮಾತನಾಡಿದರು.ಸಹಶಿಕ್ಷಕಿ…

Read More

ದೇವರಹಿಪ್ಪರಗಿ: ಕುಟುಂಬಗಳಿಗೆ ಆಕಸ್ಮಿಕ ಘಟನೆಗಳಿಂದ ಉಂಟಾದ ನಷ್ಟವನ್ನು ವಿಮೆ ಹಣ ನೆರವು ನೀಡಬಲ್ಲದಾಗಿದೆ ಎಂದು ಕರ್ನಾಟಕ ಬ್ಯಾಂಕ್ ಕಲಬುರ್ಗಿ ವಿಭಾಗೀಯ ಮುಖ್ಯಸ್ಥ ಸೋಮಶೇಖರ ಜಿ. ಹೇಳಿದರು.ಪಟ್ಟಣದ ಕರ್ನಾಟಕ ಬ್ಯಾಂಕ್‌ನಲ್ಲಿ ಶುಕ್ರವಾರ ಪಟ್ಟಣದಲ್ಲಿ ಸಂಭವಿಸಿದ ಅಕಾಲಿಕ ಅಪಘಾತಗಳಲ್ಲಿ ಆದ ಜೀವಹಾನಿಗಳ ಸಂಬಂಧಿಗಳಿಗೆ ಚೆಕ್ ವಿತರಿಸಿ ಮಾತನಾಡಿದರು. ವನಿತಾ ಚವ್ಹಾಣ ಇವರಿಗೆ ಕೆಬಿಎಲ್ ಸುರಕ್ಷಾ ವಿಮೆ ಅಡಿಯಲ್ಲಿ ೧೦ ಲಕ್ಷ ಹಾಗೂ ಭಾಗ್ಯಶ್ರೀ ಪತ್ತಾರವರಿಗೆ ನಾಲ್ಕು ಲಕ್ಷ ರೂ.ಗಳ ಮೊತ್ತದ ವಿಮೆ ಚೆಕ್‌ಗಳನ್ನು ವಿತರಿಸಿ, ಅಕಾಲಿಕ ಅಪಘಾತಗಳಿಂದ ಕುಟುಂಬಗಳಿಗೆ ಆದ ನಷ್ಟವನ್ನು ಯಾವುದರಿಂದಲೂ ತುಂಬಲು ಸಾಧ್ಯವಿಲ್ಲ. ಆದರೆ ವಿಮೆಹಣ ಕುಟುಂಬದ ಭವಿಷ್ಯಕ್ಕೆ ತುಂಬಾ ಸಹಕಾರಿ ಆಗಬಲ್ಲದು. ಆದ್ದರಿಂದ ವಿಮೆಹಣವನ್ನು ಕುಟುಂಬಗಳು ಸದುಪಯೋಗ ಪಡಿಸಿಕೊಂಡು ದು:ಖದಿಂದ ಹೊರಬರುವಂತೆ ಸಾಂತ್ವನ ಹೇಳಿದರು.ಶಾಖಾ ವ್ಯವಸ್ಥಾಪಕ ಅಯ್ಯಪ್ಪಸ್ವಾಮಿ ಮಠಪತಿ, ಮನೋಜ ಅರ್ಕಸಾಲಿ(ಸಿಂದಗಿ ಶಾಖೆ), ಅತೀಶ ಪಾಟೀಲ, ದೈವೇನಕುಮಾರ, ಮಲ್ಲಿಕಾರ್ಜುನ ಸುಂಕದ, ಫಿರೋಜ್ ಮಕಾಂದಾರ, ಸಿದ್ದು ಬಡಕುರಿ, ರೂಪಾ ಕಂಬಾರ ಗ್ರಾಹಕರಾದ ಸಿದ್ಧನಗೌಡ ಪಾಟೀಲ, ಅಶೋಕ ನಾಡಗೌಡ, ನಾನಾಗೌಡ ಪಾಟೀಲ, ಗುರು…

Read More