ಉದಯರಶ್ಮಿ ದಿನಪತ್ರಿಕೆ
ಇಂಡಿ: ಅಧಿಕಾರ ಶಾಶ್ವತ ಅಲ್ಲ ಇರುವ ದಿನಗಳು ಸಾರ್ವಜನಿಕರ ಬಡವರ ನೊಂದವರ ದನಿಯಾಗಿ ಕಾರ್ಯ ಮಾಡೋಣ, ತಾಲೂಕಿನ ತಾಂಬಾ ಗ್ರಾಮದ ಅಭಿವೃದ್ಧಿಗೆ ಜೀತದಾಳಿನಂತೆ ದುಡಿದು ಗ್ರಾಮ ಮಾದರಿ ಗ್ರಾಮನ್ನಾಗಿಸುತ್ತೇನೆ ಎಂದು ಸಿಂದಗಿ ಶಾಸಕ ಅಶೋಕ ಮನಗೂಳಿ ಹೇಳಿದರು.
ಅವರು ೨೦೨೩-೨೪ನೇ ಸಾಲಿನ ಮುಖ್ಯ ಮಂತ್ರಿಗಳ ವಿಶೇಷ ಅನುದಾನದಡಿಯಲ್ಲಿ ಗ್ರಾಮದಲ್ಲಿ ಸಿಸಿ ರಸ್ತೆಗೆ ಅಂದಾಜು ರೂ ೫೦ ಲಕ್ಷ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ ಈ ರಸ್ತೆ ಸುಧಾರಣೆ ಮಾಡಬೇಕೆಂಬ ಸಂಕಲ್ಪದಂತೆ ಕಾಮಗಾರಿಗೆ ಅನುದಾನ ನೀಡಲಾಗಿದೆ.
ಯಾವುದೇ ಧರ್ಮ ಹಾಗೂ ಜಾತಿಗೆ ಅಂಟಿಕೊಂಡು ಕೆಲಸ ಮಾಡದೆಯೆ, ಎಲ್ಲ ಧರ್ಮ ಹಾಗೂ ಪ್ರತಿಯೊಂದು ಜಾತಿಯವರ ಕೆಲಸ ಕಾರ್ಯ ಮಾಡುತ್ತಿದ್ದೇನೆ. ಅದಕ್ಕೆ ಪ್ರತಿಯೊಂದು ಸಮಾಜದವರು ಯಾವುದೇ ಕೆಲಸ ಕಾರ್ಯಗಳಿದ್ದರೆ ನಿರ್ಭಿತಿಯಿಂದ ಬಳಿ ಬಂದು ಕೆಲಸ ಮಾಡಿಕೊಳ್ಳುವಂತೆ ಮನವಿ ಮಾಡಿದರು. ನಾನು ನಿಮ್ಮಂತೆ ಒಬ್ಬ ವ್ಯಕ್ತಿ. ನಿಮ್ಮ ಕಷ್ಟಗಳಿಗೆ ಸ್ಪಂದಿಸಿ, ಸಹಾಯ ಮಾಡುವ ಸೇವಕನಾಗಿದ್ದೇನೆ. ಹೊರತು ನಾಯಕನಲ್ಲ..! ಗ್ರಾಮದಲ್ಲಿ ಆಗದೆಯಿರುವ ಕೇಲಸಗಳನ್ನು ಈಗಿರುವ ಅಧಿಕಾರದಲ್ಲಿ ಮಾಡಿತೋರಿಸುವೆ. ಜನ ನನ್ನ ಮೇಲಿಟ್ಟಿರುವ ಪ್ರೀತಿಗೆ ಬೆರಗಾಗಿದ್ದೇನೆ. ಜನತೆಗೆ ಮೂಲಸೌಕರ್ಯ ಒದಗಿಸಲೂ ಬದ್ದನಾಗಿದ್ದೇನೆ. ಅವರ ಋಣ ಎಂದಿಗೂ ಮರೆಯೊದಿಲ್ಲ. ಕೈಲಾದಮಟ್ಟಿಗೆ ಎಲ್ಲರಿಗೂ ಒಳ್ಳೆಯದನ್ನೇ ಬಯಸುತ್ತೇನೆ. ತಾಂಬಾ ಗ್ರಾಮ ಸಮಗ್ರ ಅಭಿವೃದ್ಧಿಯ ನನ್ನ ಕನಸಿಗೆ ಜನತೆ ಕೈಜೋಡಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ರಜಾಕ ಚಿಕ್ಕಗಸಿ, ರಾಚಪ್ಪ ಗಳೇದ, ಅಪ್ಪಣ್ಣ ಕಲ್ಲೂರ, ಪರಶುರಾಮ ಬಿಸನಾಳ, ನೂರಹ್ಮದ ಅತ್ತಾರ, ಕೆ.ಎನ್.ಪಾಟೀಲ, ವಿಜಯಕುಮಾರ ದೊಡ್ಡಮನಿ, ದಯಾನಂದ ನಿಂಬಾಳ, ಗೋಪಾಲ ಅವರಾದಿ, ಫತ್ತೆಸಾಬ ಉಜನಿ, ಅಮರ್ ವಸ್ತ್ರದ, ಜಕ್ಕಪ್ಪ ತ.ಹತ್ತಳ್ಳಿ, ಶಾಂತಪ್ಪ ಹಚನಾಳ, ಗುರಪ್ಪಾ ಜಂಬಗಿ, ಸಿದ್ದನಗೌಡ ಪಾಟೀಲ, ಯೊಗಪ್ಪ ಹೋರಪೇಟಿ, ಬಸವರಾಜ ಅವಟಿ, ಮಹ್ಮದ ದಡೇದ, ಮುನ್ನ ನಾಗಠಾಣ, ಜೈಭೀಮ ರೂಗಿ, ಅನೇಕರು ಉಸ್ಥಿತರಿದ್ದರು.

