Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಜಮಖಂಡಿ 02-01 : ‘ನಮ್ಮ ಸಂಸ್ಕೃತಿ, ಸಂಸ್ಕಾರವನ್ನು ಮಕ್ಕಳಿಗೆ ಪಾಲಕರು ಕಲಿಸಬೇಕು, ಗುರುಗಳಿಗೆ, ಹಿರಿಯರಿಗೆ ಗೌರವ ನೀಡಬೇಕು’ ಎಂದು ಶಾಲಾ ಸ್ಥಾನಿಕ ಆಡಳಿತ ಮಂಡಳಿ ಅಧ್ಯಕ್ಷ ಡಾ ಎˌ ಜೆˌ ನ್ಯಾಮಗೌಡ ಹೇಳಿದರು. ತಾಲ್ಲೂಕಿನ ಚಿಕ್ಕಪಡಸಲಗಿ ಗ್ರಾಮದ ಗದುಗಿನ ಜಗದ್ಗುರು ತೊಂಟದಾರ್ಯ ವಿದ್ಯಾಪೀಠದ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢ ಶಾಲೆಯಲ್ಲಿ 1999-2002ನೇ ಸಾಲಿನಲ್ಲಿ ಕಲಿತ 8 ರಿಂದ 10ನೇ ತರಗತಿ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಗುರುವಂದನೆ ಹಾಗೂ ಸ್ನೇಹ ಸಂಗಮ-ಕಾರ್ಯಕ್ರಮದಲ್ಲಿ ಮಾತನಾಡಿದರು. ಮಾತೃ ದೇವೋ ಭವ, ಪಿತೃ ದೇವೋ ಭವ, ಆಚಾರ್ಯ ದೇವೋ ಭವ, ಅತಿಥಿ ದೇವೋ ಭವ ಎನ್ನುತ್ತದೆ. ನಮ್ಮ ಸಂಸ್ಕೃತಿ ತಾಯಿ ತಂದೆ ನಂತರ ಗುರುವೇ ಮುಖ್ಯ ಎಂಬ ಶ್ರದ್ದಾಪೂರ್ವಕ ನಂಬಿಕೆಯ ಕಾರ್ಯಕ್ರಮ ಇದಾಗಿದೆ ಎಂದರು. ಗುರು – ಶಿಷ್ಯರ ಸಂಬಂಧ ಹೇಗೆಲ್ಲ ಇರಬಹುದು ಎಂಬುದನ್ನು ಈ ಕಾರ್ಯಕ್ರಮದ ಮೂಲಕ ಹಳೆ ವಿದ್ಯಾರ್ಥಿಗಳು ತೋರಿಸಿಕೊಟ್ಟರು, ಸುಮಾರು 4 ಗಂಟೆಗಳಿಗೂ ಹೆಚ್ಚು ಸಮಯ ನಡೆದ ಗುರುವಂದನಾ ಕಾರ್ಯಕ್ರಮ ತಮಗೆ…

Read More

ಡಂಬಳ ಗ್ರಾಮದಲ್ಲಿ ತೋಂಟದಾರ್ಯ ಜಾತ್ರಾ ಮಹೋತ್ಸವ ಪೆ.3 ರಿಂದ ಆರಂಭ ಉದಯರಶ್ಮಿ ದಿನಪತ್ರಿಕೆ ಡಂಬಳ: ಗದಗ ಜಿಲ್ಲೆಯ ಡಂಬಳ ಗ್ರಾಮದಲ್ಲಿ ಜಗದ್ಗುರುತೋಂಟದಾರ್ಯ ಮಠದ 286 ನೇ ಜಾತ್ರಾಮಹೋತ್ಸವ ಕಾರ್ಯಕ್ರಮಗಳು ಇದೇ ಪೆಬ್ರವರಿ 3 ರಿಂದ ಪ್ರಾರಂಭವಾಗಲಿದೆ. ಎರಡು ದಿನಗಳಕಾಲ ಸರಳತೆಯ ವೈಭವೋಪೇತದಲ್ಲಿ ನಡೆಯಲಿದೆ.ಲಿಂ.ತೋಂಟದ ಡಾ, ಸಿದ್ದಲಿಂಗ ಮಹಾಸ್ವಾಮೀಜಿಯವರ ಪ್ರಕಾಶದಲ್ಲಿ, ಡಾ.ತೋಂಟದ ಸಿದ್ದರಾಮ ಮಹಾಸ್ವಾಮಿಗಳವರ ಸಾನಿಧ್ಯದಲ್ಲಿ ಹಾಗೂ ಸಕಲ ಭಕ್ತರ ಸಮ್ಮುಖದಲ್ಲಿ ಸಡಗರ-ಸಂಭ್ರಮದ ವೈಭವದಲ್ಲಿ ವೈವಿಧ್ಯಮಯವಾಗಿ ಜರುಗಲಿವೆ.ಇದೇ ಪೆಬ್ರುವರಿ 3 ರಿಂದ ಅಸಂಖ್ಯಾತ ಭಕ್ತಗಣದ ಆರಾಧ್ಯದೈವ ಶ್ರೀ ತೋಂಟದಶ್ರೀಮಧರ್ದನಾರೀಶ್ವರ ಜಾತ್ರಾ ಮಹೋತ್ಸವದ ಕಾರ್ಯಕ್ರಮಗಳು ವಿದ್ಯುಕ್ತವಾಗಿ ಪ್ರಾರಂಭವಾಗಲಿದೆ.ಫೆಬ್ರುವರಿ 3 ರಂದು ಮಂಗಳವಾರ ಡಂಬಳದ ಭಕ್ತರಾದ ಚನ್ನಬಸಪ್ಪ. ಎಂ.ಪಟ್ಟಣಶೆಟ್ಟರ ಇವರ ಮನೆಗೆ ಪೂಜ್ಯ ಡಾ,ಸಿದ್ದರಾಮ ಶ್ರೀಗಳವರು ದಯಪಾಲಿಸಿ ಸಂಪ್ರದಾಯದಂತೆ ಪ್ರಸಾದ ಸ್ವೀಕರಿಸಿದ ಬಳಿಕ ಡಂಬಳ ಜೆ.ಟಿ. ಶ್ರೀಮಠಕ್ಕೆ ಸಂಜೆ 4 ಗಂಟೆಗೆ ಸಕಲವಾದ್ಯ ಮೇಳಗಳೊಂದಿಗೆ ಆಗಮಿಸಿ ಜಾತ್ರ್ಯೋತ್ಸವಕ್ಕೆ ಮೆರಗು ನೀಡಲಿದ್ದಾರೆ.ಜಾತ್ರಾ ಪ್ರಯುಕ್ತ ತೋಂಟದ ಮಧರ್ದನಾರೀಶ್ವರ ಶಿವಯೋಗಿಗಳವರ 286 ವರ್ಷದ ಮಹಾರಥೋತ್ಸವವು ಸಂಜೆ 6-30 ಗಂಟೆಗೆ ವಾದ್ಯಮೇಳಗಳೊಂದಿಗೆ…

Read More

ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ತಾಲ್ಲೂಕಿನ ಚಿಕ್ಕಪಡಸಲಗಿಯ ಶಿವಕರಣ ಹರಳಯ್ಯ ಸ್ಮಾರಕ ಪ್ರೌಢ ಶಾಲಾ ಆವರಣದಲ್ಲಿ ಫೆಬ್ರವರಿ 1ರಂದು ಹಳೆ ವಿದ್ಯಾರ್ಥಿಗಳ ಸ್ನೇಹ ಸಂಗಮ ಹಾಗೂ ವಿದ್ಯಾರ್ಥಿಗಳಿಂದ ಕಲಿಸಿದ ಗುರುಗಳಿಗೆ ಗುರುವಂದನೆ ಕಾರ್ಯಕ್ರಮ ನಡೆಯಲಿದೆ. 1999–2002ನೇ ಸಾಲಿನ 8 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಂದ 25ನೇ ವರ್ಷದ “ಗುರುವಂದನೆ ಹಾಗೂ ಸ್ನೇಹ ಸಂಗಮ” ರಜತ ಸಂಭ್ರಮದ ಕಾರ್ಯಕ್ರಮ ನಡೆಯಲಿದೆ.ಈ ಕಾರ್ಯಕ್ರಮವು ಶಾಲೆಯ ಹಳೆಯ ವಿದ್ಯಾರ್ಥಿಗಳ ಭಾವನಾತ್ಮಕ ಪುನರ್ಮಿಲನವಾಗಿದ್ದು, ತಮ್ಮ ಶಿಕ್ಷಕರಿಗೆ ಗೌರವ ಸಲ್ಲಿಸುವ ಹಾಗೂ ಹಳೆಯ ನೆನಪುಗಳನ್ನು ಹಂಚಿಕೊಳ್ಳುವ ವೇದಿಕೆಯಾಗಲಿದೆ. ಬೆಳಿಗ್ಗೆ 9 ಗಂಟೆಗೆ ಆರಂಭವಾಗಲಿದೆ ಎಂದು ಶಾಲೆಯ ಹಳೆಯ ವಿದ್ಯಾರ್ಥಿ ಹಾಗೂ ಶಿಕ್ಷಕ ಬಾಳು ಮಠೋಳಿ ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ತಾಲೂಕಿನ ನಾದ ಕೆಡಿ ಗ್ರಾಮದ ಜಮಖಂಢಿ ಸುಗರ್ಸ ಯುನಿಟ್ ೨ ಕಾರ್ಖಾನೆಗೆ ಕಂದಾಯ ಉಪವಿಬಾಗಾಧಿಕಾರಿ ಚಿದಾನಂದ ಗುರುಸ್ವಾಮಿ ನೇತೃತ್ವದಲ್ಲಿ ಕಬ್ಬು ಪರಿಶೀಲನಾ ಸಮಿತಿ ಭೇಟಿ ನೀಡಿತು.ಕಬ್ಬಿನ ತೂಕ, ಮಷಿನ ಮತ್ತು ಇಳುವರಿ ಪರಿಶೀಲಿಸಿತು.ಕಬ್ಬಿನ ತೂಕದ ಮಷೀನು ಡಿಜಿಟಲ್ ಮತ್ತು ಎರಡು ತೂಕದ ಮಷಿನ್ ಇರುವದನ್ನು ಪರಿಶೀಲಿಸಿತು.ಅದರಂತೆ ಕಬ್ಬಿನ ರಿಕವರಿ ರೈತರ ಸಮ್ಮುಖದಲ್ಲಿ ಪ್ರಯೋಗಾಲಯದಲ್ಲಿ ಖಚಿತ ಪಡಿಸಿಕೊಂಡಿತು.ಅದಲ್ಲದೆ ರೈತರಿಗೆ ಕಬ್ಬಿನ ತೂಕದ ಪಾವತಿ ವಿತರಣೆ ಯಾಗುತ್ತಿರುವ ಬಗ್ಗೆ ಪರಿಶೀಲಿಸಿದರು.ರೈತರಿಗೆ ತೂಕದಲ್ಲಿ ಯಾವದೇ ರೀತಿಯ ವ್ಯತ್ಯಾಸ ಆಗದಂತೆ ನೋಡಿ ಕೊಳ್ಳಲು ಕಾರ್ಖಾನೆ ಸಿಬ್ಬಂದಿಗೆ ಸೂಚಿಸಿತು. ಕಬ್ಬಿನ ಹಣ ನೀಡುವದನ್ನು ಸಮಿತಿ ಖಚಿತ ಪಡಿಸಿಕೊಂಡಿತು.ತಹಸೀಲ್ದಾರ ಬಿ.ಎಸ್.ಕಡಕಬಾವಿ, ಕೃಷಿ ಅಧಿಕಾರಿ ಶ್ರೀಶೈಲ ಗುರುಬೆಟ್ಟಿ, ಆಹಾರ ನೀರಿಕ್ಷಕ ಸಿದ್ದು ಹಲಸಂಗಿ, ಅಬಕಾರಿ ಅಧಿಕಾರಿ ರಾಹುಲ ನಾಯಕ, ಎಎಸ್‌ಐ ಇಂಡಿ ತೂಕ ಮತ್ತು ಅಳತೆ ಅಧಿಕಾರಿ ಶಶಿಕಾಂತ ಚವ್ಹಾಣ ರೈತ ಮುಖಂಡರಾದ ಸಿದ್ದರಾಮ ತಳವಾರ, ಮತ್ತಿತರಿದ್ದರು.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದಲ್ಲಿ ನಡೆದ ರಾಜ್ಯ ಸರಕಾರಿ ನೌಕರರ ಕ್ರೀಡಾಕೂಟದ ಕುಸ್ತಿ ಸ್ಪರ್ಧೆಯಲ್ಲಿ ಸಿಂದಗಿ ತಾಲ್ಲೂಕಿನ ಚಿಕ್ಕ ಅಲ್ಲಾಪುರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಭೈರವ್ ಬನ್ನೆ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರು ಸತತ ನಾಲ್ಕು ವರ್ಷಗಳಿಂದ ಕುಸ್ತಿಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗುತ್ತಿದ್ದಾರೆ.ಶಿಕ್ಷಕರ ಈ ಕ್ರೀಡಾ ಸಾಧನೆಗೆ ಸಿಂದಗಿ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಮಹಾಂತೇಶ್ ಯಡ್ರಾಮಿ, ಕ್ಷೇತ್ರ ಸಮನ್ವಯಾಧಿಕಾರಿ ಐ ಎಸ್ ಟಕ್ಕೆ, ಗೋಲಗೇರಿ ಕ್ಲಸ್ಟರ್ ಸಿಆರ್ ಪಿ ಶರಣು ಚಟ್ಟಿ, ಎಸ್.ಡಿ.ಎಂ.ಸಿ ಅಧ್ಯಕ್ಷ ಶಾಂತಪ್ಪ ನಾಯ್ಕೋಡಿ, ಶಿಕ್ಷಕರಾದ ಸೈಪನ್ ನದಾಫ್, ಮಡಿವಾಳ ನಾಯ್ಕೋಡಿ ಸೇರಿದಂತೆ ಚಿಕ್ಕ ಅಲ್ಲಾಪುರ ಗ್ರಾಮಸ್ಥರು ಹಾಗೂ ಗೋಲಗೇರಿ ಕ್ಲಸ್ಟರ್ ನ ಎಲ್ಲಾ ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕರು ಅಭಿನಂದಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಭಾವಸಾರ ಕ್ಷತ್ರೀಯ ಕೊ-ಆಫ್ ಕ್ರೆಡಿಟ್ ಸೊಸಾಯಿಟಿಯ 2026-2031 ನೇ ಸಾಲಿನ 5 ವರ್ಷ ಅವಧಿಗಾಗಿ ಅಧ್ಯಕ್ಷರಾಗಿ ರಾಜೇಶ ದೇವಗಿರಿ ಹಾಗೂ ಉಪಾಧ್ಯಕ್ಷರಾಗಿ ದೀಪಕ ಶಿಂತ್ರೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣೆ ಅಧಿಕಾರಿ ಎ. ಎಸ್. ಕನ್ನೂರ ಅವರು ಘೋಷಿಸಿದ್ದಾರೆ.ಸೊಸಾಯಿಟಿ ಕಾರ್ಯಾಲಯದಲ್ಲಿ ನಡೆದ ಸಭೆಯಲ್ಲಿ ನೂತನವಾಗಿ ಅವಿರೋಧ ಆಯ್ಕೆಯಾದ ಆಡಳಿತ ಮಂಡಳಿ ನಿರ್ದೇಶಕರಾದ ನ್ಯಾಯವಾದಿ ಅಶೋಕ ವಾಯ್ ಮಿರಜಕರ, ನ್ಯಾಯವಾದಿ ತುಕಾರಾಮ ಡಿ ಜವಳಕರ, ವಿಜಯಕುಮಾರ ಎಸ್ ನವಲೆ, ಶ್ರೀಕಾಂತ ಎಸ್ ದೇವಗಿರಿ, ವಿಜಯ ಪಿ ಸುಲಾಖೆ, ಶ್ರೀನಿವಾಸ ಎಮ್ ಜವಳಕರ, ಶಶಿಕುಮಾರ ಎ ಚೌಡಿಹಾಳ, ಶ್ರೀಮತಿ ರಾಧಾಬಾಯಿ ಎಮ್ ದೇವಗಿರಿ, ಶ್ರೀಮತಿ ದೀಪಾ ಜಿ ಇಜಂತಕರ, ಕಾರ್ಯದರ್ಶಿಯಾದ ಗಣೇಶ ಎಸ್ ದೇವಗಿರಿ ಉಪಸ್ಥಿತರಿದ್ದರು.

Read More

ಉದಯರಶ್ಮಿ ದಿನಪತ್ರಿಕೆ ಚಡಚಣ: ಸಮೀಪದ ಉಮರಜದ ಶ್ರೀ ರೇವಣಸಿದ್ದೇಶ್ವರ ಜಾತ್ರೆಯಲ್ಲಿ ಭಕ್ತರು ದೀರ್ಘದಂಡ ನಮಸ್ಕಾರ ಹಾಕಿ ಹರಕೆ ಸಲ್ಲಿಸಿದರು.ಶನಿವಾರದ ನಸುಕಿನ ಜಾವಗ ೪ ಗಂಟೆಯಿಂದ ಸಾಮೂಹಿಕವಾಗಿ ಭೀಮೆಯಲ್ಲಿ ಮಿಂದ ಭಕ್ತರು ಶ್ರೀ ರೇವಣಸಿದ್ಧೇಶ್ವರ ದೇವಾಸ್ಥಾನದವರಗೆ ದೀರ್ಘದಂಡ ನಮಸ್ಕಾರ ಹಾಕಿದರು. ಭಾವೈಕ್ಯತೆ ಸಾರುವ ಎಲ್ಲ ಧರ್ಮದ ಕಿರಿಯರಿಂದ ಹಿರಿಯ ಎಲ್ಲ ವಯೋಮಾನದವರು ದೀರ್ಘದಂಡ ನಮಸ್ಕಾರವನ್ನು ಹಾಕಿ ದೇವರ ದರ್ಶನ ಪಡೆದರು.ನಸುಕಿನ ಜಾವ ೬ ಗಂಟೆಗೆ ರೇವಣಸಿದ್ದೇಶ್ವರ ದೇವಾಸ್ಥಾನಕ್ಕೆ ಮಹಾಮಜ್ಜನ ಹಾಗೂ ಮಹಾ ರುದ್ರಾಭಿಷೇಕ ಮತ್ತು ವಿಶೇಷ ಪೂಜೆ ನೆರವೇರಿತು. ಮುಂಜಾನೆ ೧೦ ಗಂಟೆಗೆ ವಿಶೇಷ ಆಹ್ವಾನಿತರ ಸಮ್ಮುಖದಲ್ಲಿ ಶ್ರೀ ರೇವಣಸಿದ್ದೇಶ್ವರ ದೇವಾಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಕಾಣಿಕೆ ನೀಡಿದ ದಾನಿಗಳಿಗೆ ಸನ್ಮಾನಿಸಲಾಯಿತು.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ೧೨ ನೇಯ ಶತಮಾನದ ಬಸವಾದಿ ಶರಣರು ಸಮಾಜದಲ್ಲಿನ ಸಮಾನತೆ, ಜಾತಿ-ಜನಾಂಗದ ಭೇದ, ಸಾಮಾಜಿಕ ಅನಿಷ್ಟ, ಮೌಢ್ಯತೆಗಳನ್ನು ಹೋಗಲಾಡಿಸಿ, ಸಮ ಸಮಾಜ ನಿರ್ಮಾಣಕ್ಕಾಗಿ ವಚನಗಳ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸಿದ್ದರು ಎಂದು ಪಂಡಿತ ಮಧುಸೂದನ ಆಚಾರ್ಯ ಕಟ್ಟಿ ಅವರು ಹೇಳಿದರು.ಅವರು ನಗರದ ಅಥಣಿ ರಸ್ತೆಯ ಅಲ್-ಅಮೀನ್ ಆಸ್ಪತ್ರೆ ಎದುರಿಗೆ ಇರುವ ಆಂಜನೇಯ ದೇವಸ್ಥಾನದ ೬ ನೇಯ ವರ್ಷದ ಜಾತ್ರಾ ಮಹೋತ್ಸವದ ಸಮಾರೋಪ ಮತ್ತು ಸನ್ಮಾನ ಸಮಾರಂಭದಲ್ಲಿ ಮಾತನಾಡುತ್ತಿದ್ದರು.ಸಾನಿಧ್ವ ವಹಿಸಿದ್ದ ಜಮಖಂಡಿ ಓಲೇಮಠದ ಆನಂದ ದೇವರು ತಮ್ಮ ಮಾತನಾಡಿ, ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಎಲ್ಲರೂ ಏಕೋಭಾವದಿಂದ ಪಾಲ್ಗೊಂಡು ನಮ್ಮ ಧರ್ಮ, ಸಂಸ್ಕೃತಿ, ಸಂಸ್ಕಾರ, ಆಚರಣೆ, ಸಂಪ್ರದಾಯ ಮತ್ತು ಪರಂಪರೆಯನ್ನು ಎತ್ತಿ ಹಿಡಿದರೆ, ಸಮಾಜದಲ್ಲಿ ಸಾಮರಸ್ಯತೆ ಸಾಧಿಸಲು ಸಹಕಾರಿಯಾಗುತ್ತದೆ ಎಂದರು.ಸಮಾರಂಭದಲ್ಲಿ ದೇವಾಲಯದ ಅಧ್ಯಕ್ಷ ಸಂತೋಷ ಪಾಟೀಲ, ಲಕ್ಷಣ ಶಿಂಧೆ, ಬಲವಂತ ಬಳೂಲಗಿಡದ, ಸಿದ್ದಾರೂಢ ಹಿರೇಮಠ, ನಾಗೇಂದ್ರ ಯಾದವ, ಸಂಗಣ್ಣ ತೆನಿಹಳ್ಳಿ, ರೇವತಿ ಬುದ್ನಿಮಠ, ಇನ್ನಿತರರು ವೇದಿಕೆಯ ಮೇಲಿದ್ದರು,ನಂತರ ಮಕ್ಕಳು ಮತ್ತು…

Read More

ಉದಯರಶ್ಮಿ ದಿನಪತ್ರಿಕೆ ಗದಗ: ಉತ್ತರ ಕರ್ನಾಟಕ ಕಲಾವಿದರ ಹಾಗೂ ಕಲಾ ಪೋಷಕರ ಸಂಘಟನೆಯಾದ, ಕಲಾ ವಿಕಾಸ ಪರಿಷತ್ ನಿಂದ, ದಿನಾಂಕ ೦೨ ಫೆಬ್ರುವರಿ ೨೦೨೬. ಸೋಮವಾರ ಇಳಿಹೊತ್ತು ೩ ಗಂಟೆಗೆ ನಗರದ ಮುಂಡರಗಿ ರಸ್ತೆಯಲ್ಲಿ ಇರುವ, ಚಿಕ್ಕಟ್ಟಿ ಸಭಾ ಭವನದಲ್ಲಿ, ಗದಗು ಸಂಗೀತದ ಗದ್ದುಗೆ ಮಾಡಿದ ಗಾನಯೋಗಿ ಪಂಚಾಕ್ಷರಿ ಗವಾಯಿಗಳವರ ೧೩೪ ನೆಯ ಜಯಂತಿಯನ್ನು, ಅಮರ ಸ್ವರ ಸಮಾರೋಹವನ್ನಾಗಿ ಆಚರಿಸಲಾಗುತ್ತಿದೆ.ಈ ಸಮಾರಂಭದ ಉದ್ಘಾಟನೆಯನ್ನು ಭಾರತೀಯ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ಪ್ರೊ. ಎಸ್. ವಾಯ್. ಚಿಕ್ಕಟ್ಟಿ ಇವರು ನಡೆಸಿಕೊಡುವರು. ಅಧ್ಯಕ್ಷತೆಯನ್ನು ಕಲಾ ವಿಕಾಸ ಪರಿಷತ್ ಸಂಸ್ಥಾಪಕ ಅಧ್ಯಕ್ಷರಾದ ರವಿ ಎಲ್. ಗುಂಜೀಕರ್ ಇವರು ವಹಿಸಿಕೊಳ್ಳುವರು. ಕಲಾ ವಿಕಾಸ ಪರಿಷತ್ ಅಧ್ಯಕ್ಷರಾದ ಶ್ರೀ ಸಿ. ಕೆ. ಹೆಚ್. ಶಾಸ್ತ್ರೀ (ಕಡಣಿ) ಇವರು ನುಡಿನಮನ ಸಲ್ಲಿಸಲಿದ್ದಾರೆ.ಇದೇ ಸಂದರ್ಭದಲ್ಲಿ ಬೆಂಗಳೂರಿನ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಬಸವರಾಜ ಬಳ್ಳಾರಿಯವರನ್ನು ಮತ್ತು ಎಲ್.ಎಲ್.ಎಮ್. ಪದವಿಯಲ್ಲಿ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರ ವ್ಯಾಪ್ತಿಯಲ್ಲಿ ಮತದಾರರ ಪರಿಷ್ಕರಣೆ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ, ಪ್ರತಿ ಮನೆ -ಮನೆಗೆ ತೆರಳಿ ಮತದಾನ ಪರಿಷ್ಕರಣೆ ಕಾರ್ಯವನ್ನು ಸಮರ್ಪಕವಾಗಿ ನಡೆಸುವಂತೆ ನಿಯೋಜಿತ ಬೂತ್ ಮಟ್ಟದ ಅಧಿಕಾರಿಗಳಿಗೆ ನಿರ್ದೇಶನ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಿಜೆಪಿ ಜಿಲ್ಲಾ ಘಟಕದ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿಗಳಿಗೆ ಲಿಖಿತ ಮನವಿ ಸಲ್ಲಿಸಿದರು.ನೇತೃತ್ವ ವಹಿಸಿದ್ದ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿ, ಚುನಾವಣೆ ಹಾಗೂ ಮತದಾನ ಪ್ರಜಾಪ್ರಭುತ್ವದ ಮಹತ್ವದ ಅಂಗಗಳು, ಮತದಾನದ ಹಕ್ಕನ್ನು ಖಾತ್ರಿಪಡಿಸುವ ಮತದಾರರ ಗುರುತಿನ ಚೀಟಿ ಪರಿಷ್ಕರಣೆ ಕಾರ್ಯ ಅತ್ಯಂತ ಮಹತ್ವ ಹಾಗೂ ಜವಾಬ್ದಾರಿಯುತ ಕಾರ್ಯವಾಗಿದೆ, ಈಗ ಸರ್ಚ್, ಐಡೆಂಟಿಟಿ ಹಾಗೂ ಮ್ಯಾಪಿಂಗ್ (ಸರ್) ಹೆಸರಿನಲ್ಲಿ ಮತದಾರರ ಪಟ್ಟಿ ಪರಿಷ್ಕರಣಾ ಕಾರ್ಯಾ ಆರಂಭಗೊಂಡಿದೆ, ಆದರೆ ಈ ಕಾರ್ಯಕ್ಕೆ ನಿಯೋಜಿತಗೊಂಡಿರುವ ಬಿಎಲ್‌ಓಗಳು ವಿವಿಧ ಬಡಾವಣೆಗಳ ಪ್ರತಿ ಮನೆ-ಮನೆಗೂ ಭೇಟಿ ನೀಡುತ್ತಿಲ್ಲ, ಪ್ರತಿ ಮನೆಗೂ ಖುದ್ದಾಗಿ ಭೇಟಿ ನೀಡಿ ಮಾಹಿತಿ ಸಂಗ್ರಹಣೆ, ಪರಿಷ್ಕರಣೆ ಮಾಡಬೇಕು…

Read More