ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಮಹಾಶಿವಶರಣೆ ಅಕ್ಕಮಹಾದೇವಿಯು ಪ್ರಥಮ ಕನ್ನಡ ಕವಯತ್ರಿ ಹಾಗೂ ಅಪ್ರತಿಮ ವಚನಗಾರ್ತಿಯಾಗಿದ್ದಳು. ೩೫೪ ಅವರ ವಚನಗಳು ದೊರಕಿದ್ದು, ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ಅವರದ್ದಾಗಿದೆ ಎಂದು ಶರಣ ಚಿಂತಕಿ ಜಗದೇವಿ ಬಿರಾದಾರ ಹೇಳಿದರು.
ಸಿಂದಗಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಜರುಗಿದ ಮಹಾಶಿವಶರಣೆ ಅಕ್ಕಮಹಾದೇವಿ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಕ್ಕಮಹಾದೇವಿ ಅವರು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಬಸವಾದಿ ಶರಣರೊಂದಿಗೆ ಅನುಭವ ಮಂಟಪದಲ್ಲಿ ಚರ್ಚೆ, ಅನುಭಾವ ಹಂಚಿಕೆಯ ಸಂವಾದ ಮಾಡಿ ಶೈ ಎನೆಸಿಕೊಂಡವಳು. ಬಸವಣ್ಣ ಹಾಗೂ ಅಲ್ಲಮಪ್ರಭುದೇವರು ಅವರ ಆಗಾದವಾದ ಜ್ಞಾನವನ್ನು ಗಮನಿಸಿ ಮಹಾದೇವಿಗೆ ಅಕ್ಕ ಎಂದು ಕರೆದರು ಎಂದರು.
ಈ ವೇಳೆ ನ್ಯಾಯವಾದಿ ವಿ.ಜಿ.ಮಾನವಿ ಮಾತನಾಡಿ, ಅಲ್ಲಮಪ್ರಭುದೇವರು, ಬಸವಣ್ಣ, ಚನ್ನಬಸವ, ಮಾದಾರ ಚನ್ನಯ್ಯ, ಅಂಬಿಗೇರ ಚೌಡಯ್ಯ ಸೇರಿದಂತೆ ಮುಂತಾದವರೊAದಿಗೆ ಚರ್ಚಿಸಿದ ನಂತರ ಅಕ್ಕಮಹಾದೇವಿ ಅವರ ಜ್ಞಾನದ ಅರಿವು ಎಲ್ಲರಿಗಾಯಿತು. ವೈರಾಗ್ಯ ನಿಧಿ ಅಕ್ಕಮಹಾದೇವಿ ಆಧ್ಯಾತ್ಮಿಕ ಜೀವನಕ್ಕೆ ಹೊಸ ಭಾಷ್ಯ ಬರೆದರು. ಶಿವನೇ ತನ್ನ ಪತಿ ಎಂದು ಸ್ವೀಕರಿಸಿ ಲೌಕಿಕ ಜಗತ್ತನ್ನು ದಿಕ್ಕರಸಿ ಕೇಶಾಂಬರೆಯಾಗಿ ನಡೆದ ಅಕ್ಕ ಹಲವಾರು ಭಕ್ತರಿಗೆ ಮಾದರಿಯಾಗಿದ್ದರೆ ಎಂದರು.
ಇದೇ ಸಂದರ್ಭದಲ್ಲಿ ಹಿಕ್ಕನಗುತ್ತಿ ಸರಕಾರಿ ಶಾಲೆಯ ಮುಖ್ಯಗುರುಮಾತೆ ಸೈನಾಬಿ ಮಸಳಿ, ಮಹಾನಂದಾ ಬಮ್ಮಣ್ಣಿ, ಸುನಂದಾ ಯಂಪೂರೆ, ಶೋಭಾ ಚಿಗರಿ, ವರ್ಷಾ ಪಾಟೀಲ, ಅನಸೂಯ ಪರಗೊಂಡ ಮಾತನಾಡಿದರು. ಕಾರ್ಯಕ್ರದಲ್ಲಿ ಕಾನಿಪ ಸಂಘದ ತಾಲೂಕಾಧ್ಯಕ್ಷ ಮಹಾಂತೇಶ ನೂಲಾನವರ, ಡಾ.ಪ್ರಕಾಶ ರಾಗರಂಜಿನಿ, ಶಾಂತು ರಾಣಾಗೋಳ, ಖಾದರ ವಾಲೀಕಾರ, ಜೈಭೀಮ ನಾಟೀಕಾರ, ಪ್ರಭು ಬಿರಾದಾರ, ಎಸ್.ಎಸ್.ಸಾತಿಹಾಳ, ಜಗದೀಶ ಸಿಂಗೆ, ಎಸ್.ಜಿ.ಶಿವಸಿಂಪಿ, ಬಿ.ಎಸ್.ಹಿರೇಮಠ, ಪ್ರಕಾಶ ರಾಠೋಡ ಸೇರಿದಂತೆ ಅನೇಕರು ಇದ್ದರು. ಕಸಾಪ ತಾಲೂಕಾಧ್ಯಕ್ಷ ವಾಯ್.ಸಿ.ಮಯೂರ ಪ್ರಾಸ್ತಾವಿಕ ಮಾತನಾಡಿದರು. ಕಸಾಪ ಗೌರವ ಕಾರ್ಯದರ್ಶಿ ಆನಂದ ಶಾಬಾದಿ ಸ್ವಾಗತಿಸಿದರು. ಡಾ.ಯಂಕಪ್ಪ ನಾಟೀಕಾರ ನಿರೂಪಿಸಿದರು. ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ ವಂದಿಸಿದರು.

