Author: editor.udayarashmi@gmail.com

ಮನವಿಗೆ ಸಿಎಂ ಮಾಧ್ಯಮ ಸಲಹೆಗಾರ ಪ್ರಭಾಕರ್ ರಿಂದ ಪೂರಕ ಸ್ಪಂದನೆ ಉದಯರಶ್ಮಿ ದಿನಪತ್ರಿಕೆ ಬೆಂಗಳೂರು: ಮಹಿಳಾ ಸಂಪಾದಕತ್ವದ ದಿನಪತ್ರಿಕೆಗಳನ್ನು ಉತ್ತೇಜಿಸುವ ಉದ್ದೇಶದಿಂದ ತಿಂಗಳಿಗೆ ಒಂದು ಪುಟ ಹೆಚ್ಚುವರಿ ಸರ್ಕಾರಿ ಜಾಹೀರಾತು ನೀಡುವಂತೆ ಕರ್ನಾಟಕ ರಾಜ್ಯ ಮಹಿಳಾ ದಿನಪತ್ರಿಕೆಗಳ ಸಂಪಾದಕರ ಸಂಘವು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಾಧ್ಯಮ ಸಲಹೆಗಾರರಾದ ಕೆ.ವಿ. ಪ್ರಭಾಕರ್ ಅವರಿಗೆ ಮನವಿ ಸಲ್ಲಿಸಲಾಯಿತು.ಬುಧವಾರ ವಿಧಾನಸೌಧದಲ್ಲಿ ಮನವಿ ಸಲ್ಲಿಸಿದ ಬಳಿಕ ಸಂಘದ ಅಧ್ಯಕ್ಷೆ ರಶ್ಮಿ ಪಾಟೀಲ್ ಮಾತನಾಡಿ, ರಾಜ್ಯದಲ್ಲಿ ಮಹಿಳೆಯರ ನೇತೃತ್ವದಲ್ಲಿ ಪ್ರಕಟವಾಗುತ್ತಿರುವ ದಿನಪತ್ರಿಕೆಗಳು ಸಾಮಾಜಿಕ ಜಾಗೃತಿ, ಮಹಿಳಾ ಸಬಲೀಕರಣ ಹಾಗೂ ಗ್ರಾಮೀಣ ಸಮಸ್ಯೆಗಳ ಕುರಿತಾಗಿ ನಿರಂತರವಾಗಿ ಧ್ವನಿ ಎತ್ತುತ್ತಿವೆ. ಇಂತಹ ಪತ್ರಿಕೆಗಳಿಗೆ ಸರ್ಕಾರದ ಮಟ್ಟದಲ್ಲಿ ಪ್ರೋತ್ಸಾಹ ಅಗತ್ಯವಿದ್ದು, ಹೆಚ್ಚುವರಿ ಜಾಹೀರಾತು ಸೌಲಭ್ಯ ದೊರೆತರೆ ಮಹಿಳಾ ಸಂಪಾದಕತ್ವದ ಪತ್ರಿಕೆಗಳು ಆರ್ಥಿಕವಾಗಿ ಬಲಿಷ್ಠವಾಗುವ ಜೊತೆಗೆ ಗುಣಮಟ್ಟದ ಪತ್ರಿಕೋದ್ಯಮಕ್ಕೂ ಉತ್ತೇಜನ ಸಿಗಲಿದೆ ಎಂದು ಹೇಳಿದರು.ಕಳೆದ ಏಳು ವರ್ಷಗಳಿಂದ ಸಂಘದ ವತಿಯಿಂದ ನಿರಂತರವಾಗಿ ಮನವಿ ಸಲ್ಲಿಸುತ್ತಿದ್ದರೂ ಸಮರ್ಪಕ ಸ್ಪಂದನೆ ದೊರಕಿಲ್ಲ. ಈ ಬಾರಿಯಾದರೂ ಮನವಿಯನ್ನು ಗಂಭೀರವಾಗಿ ಪರಿಗಣಿಸಬೇಕೆಂದು…

Read More

ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ಸುಪ್ರಸಿದ್ಧ ಯಲಗೂರ ಕ್ಷೇತ್ರದ ಶ್ರೀ ಯಲಗೂರೇಶನ ಕಾರ್ತಿಕೋತ್ಸವವು ಪಾಲ್ಗುಣ ಮಾಸ ಷಷ್ಠಿ, ಸಪ್ತಮಿ ೦೭ ಮತು ೮ ರಂದು ಅದ್ದೂರಿಯಾಗಿ ಜರುಗುವುದು. ಆ ದಿನ ಬೆಳಿಗ್ಗೆ ಪಂಚಾಮೃತ ಅಭಿಷೇಕ ಪವಮಾನ ಹೋಮ, ಮಹಾಪೂಜೆ, ಮುಂಜಾನೆ ೧೦ ಗಂಟೆಗೆ ದಿಂಡಿನ ಸ್ಪರ್ಧೆ, ತೀರ್ಥ ಪ್ರಸಾದ, ಹರಿದಾಸರ ಕೀರ್ತನೆ ಹಾಗೂ ಈ ಕೆಳಗಿನಂತೆ ಸಂಗೀತ ಕಾರ್ಯಕ್ರಮಗಳು ನಡೆಯುತ್ತಿದು ್ದ, ರಾತ್ರಿ ಕಾರ್ತಿಕೋತ್ಸವ ನಡೆಯಲಿದೆ. ಪಂ. ಬಸವರಾಜ ಭಜಂತ್ರಿ, ಸಹನಾಯಿ, ಶ್ರೀಮತಿ ಅದಿತಿ ದೇಸಾಯಿ, ಕುಮಾರ ಹೃಷಿಕೇಶ ಅರಬಟ್ಟಿ, ಕುಮಾರಿ ವೈಷ್ಣವಿ ಜೋಶಿ, ಶ್ರೀಮತಿ ಪ್ರೇಮಾ, ಸ್ನೇಹಾ ಕಡಿವಾಲ, ಡಾ.ಶ್ರೀಮತಿ ಸಂಗೀತಾ ಕಾಖಂಡಕಿ, ಶ್ರೀ ನಾರಾಯಣ ತಾಸಗಾವ, ಶ್ರೀ ಸಂತೋಷ ಗದ್ದನಕೇರಿ, ಶ್ರೀಮತಿ ಪರಿಮಳ ಗಿರಿಯಾಚಾರ್ಯ, ಶ್ರಿ ಬಿ.ಬಿ. ಕುಲಕರ್ಣಿ, ಕುಮಾರಿ ಭಾಗ್ಯ ಕುಲಕರ್ಣಿ, ಕುಮಾರಿ ಸುನಯನಾ ಮನೋಹರ ದೇಶಪಾಂಡೆ, ವಿಧೂಷಿ ಶ್ರೀಮತಿ ರೇಣುಕಾ ನಾಕೋಡ್, ಪಂ. ಶ್ರೀ ರಘುನಾಥ ನಾಕೋಡ್ ಮತು ್ತ ಪಂ. ಶ್ರೀ ರವಿಕಿರಣ ನಾಕೋಡ್, ಕುಮಾರಿ…

Read More

ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ;ಇಲ್ಲಿ ಪಾರ್ವತಿ ಕಟ್ಟಾ ಸೇತುವೆ ಬಳಿಯಆಲಮಟ್ಟಿ ಎಡದಂಡೆ ಮುಖ್ಯ ಕಾಲುವೆಯಲ್ಲಿ ವ್ಯಕ್ತಿಯೊಬ್ಬ ‌ಬಿದ್ದು ಮೃತಪಟ್ಟ ಘಟನೆ ಬುಧವಾರ ಜರುಗಿದೆ.ಮೃತ ವ್ಯಕ್ತಿ ಆಲಮಟ್ಟಿ ಆರ್.ಎಸ್. ಗ್ರಾಮದ ಮಹೇಂದ್ರಕುಮಾರ ಶಂಕ್ರಪ್ಪ ರಾಠೋಡ (43).ಈ ವ್ಯಕ್ತಿ ಕಳೆದ ಎರಡು ದಿನದಿಂದ ಕಾಣೆಯಾಗಿದ್ದ ಎನ್ನಲಾಗಿದೆ.ಬುಧವಾರ ಮೃತನ ಶವ ಕಾಲುವೆಯಲ್ಲಿ ತೇಲುತ್ತಿತ್ತು. ಸಂಜೆ ಪೊಲೀಸರ ಸಮ್ಮುಖದಲ್ಲಿ ಮೃತ ವ್ಯಕ್ತಿಯ ದೇಹ ಹೊರ ತೆಗೆಯಲಾಯಿತು.ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಕ್ಯಾನ್ಸರ್ ತಡೆಗಟ್ಟಲು ಸಮುದಾಯ ಮಟ್ಟದಲ್ಲಿ ಜಾಗೃತಿ ಮೂಡಿಸುವುದು ಅತ್ಯವಶ್ಯವಾಗಿದೆ ಎಂದು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ.ಕುಲಕರ್ಣಿ ಹೇಳಿದರು.ಮೋರಟಗಿ ಸಮುದಾಯ ಆರೋಗ್ಯ ಕೇಂದ್ರ, ಸಿಂದಗಿ ತಾಲೂಕಿನ ಗಬಸಾವಳಗಿ ಆಯುಷ್ಮಾನ್ ಆರೋಗ್ಯ ಕೇಂದ್ರ, ಸಾಂಕ್ರಾಮಿಕ ರೋಗಗಳ ನಿಯಂತ್ರಣ ಘಟಕದ ಸಹಯೋಗದೊಂದಿಗೆ ಗಬಸಾವಳಗಿ ಗ್ರಾಮದಲ್ಲಿ ಹಮ್ಮಿಕೊಂಡ ವಿಶ್ವ ಕ್ಯಾನ್ಸರ್ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕ್ಯಾನ್ಸರ್ ತಡೆಗಟ್ಟುವಿಕೆ, ಪತ್ತೆ ಮತ್ತು ಚಿಕಿತ್ಸೆಯ ಬಗ್ಗೆ ಜಾಗೃತಿ ಮೂಡಿಸಲು, ಕ್ಯಾನ್ಸರ್ ರೋಗಿಗಳ ಜೀವನದ ಗುಣಮಟ್ಟವನ್ನು ಸುಧಾರಿಸಲು ಮತ್ತು ಈ ಮಾರಣಾಂತಿಕ ಕಾಯಿಲೆಯ ಜಾಗತಿಕ ಹೊರೆಯನ್ನು ಕಡಿಮೆ ಮಾಡಲು ಇದನ್ನು ಆಚರಿಸಲಾಗುತ್ತದೆ. ನಿಯಮಿತ ಆರೋಗ್ಯ ತಪಾಸಣೆ ದೈಹಿಕ ಚಟುವಟಿಕೆ ಹಾಗೂ ತಂಬಾಕು ಉತ್ಪನ್ನಗಳನ್ನು ಸೇವನೆ ಮಾಡದೆ ಇರುವದರಿಂದ ರೋಗವನ್ನು ತಡೆಗಟ್ಟಬಹುದು ಎಂದು ಹೇಳಿದರು.ಈ ವೇಳೆ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಆರ್.ಮಾಶಾಳ, ಹಿರಿಯ ಆರೋಗ್ಯ ಸುರಕ್ಷತಾಧಿಕಾರಿ ಜಿ.ಎಂ.ಸದಬ, ಗಬಸಾವಳಗಿ ಆಯುಷ್ಮಾನ್ ಆರೋಗ್ಯ ಕೇಂದ್ರದ ಸಮುದಾಯ ಆರೋಗ್ಯ ಅಧಿಕಾರಿ ವಿದ್ಯಾರಾಣಿ ಮಾತನಾಡಿದರು.ಇದೇ ಸಂದರ್ಭದಲ್ಲಿ 60ಕ್ಕೂ ಅಧಿಕ ಜನ…

Read More

ನಿವೃತ್ತ ಪ್ರಾಚಾರ್ಯ ಡಾ. ಎಸ್.ಬಿ.ಮಟೋಳಿ ಬಣ್ಣನೆ ಉದಯರಶ್ಮಿ ದಿನಪತ್ರಿಕೆ ಜಮಖಂಡಿ : ಕಲಾವಿದರಿಂದಲೇ ತುಂಬಿರುವ ಹುನ್ನೂರು ಬಯಲಾಟ ಮತ್ತು ನಾಟಕ ಕಲೆಯಲ್ಲಿ ಪಳಗಿದೆ ಎಂದು ಬನಹಟ್ಟಿ ಎಸ್‌ಟಿಸಿ ಕಾಲೇಜ್ ನಿವೃತ್ತ ಪ್ರಾಚಾರ್ಯ ಡಾ.ಎಸ್.ಬಿ.ಮಟೋಳಿ ಬಣ್ಣಿಸಿದರು.ಗ್ರಾಮದ ಶ್ರೀ ಗ್ರಾಮದೇವಿ ದೇವಸ್ಥಾನದಲ್ಲಿ ಗುರುವಾರ ಸಂಜೆ ಹಮ್ಮಿಕೊಂಡ ಬಾಗಲಕೋಟೆ ಹಿರಿಯ ಸಾಹಿತಿ ಹಣಮಂತ ತಾಸಗಾಂವಕರ ಅವರ ಹುನ್ನೂರು ಬಯಲಾಟಗಳು ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಕ್ರೀಡೆ, ಶಿಕ್ಷಣ ಇತರೆ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ಹುನ್ನೂರು ಗ್ರಾಮದ ಕಲಾವಿದರು ಪ್ರದರ್ಶಿಸುವ ದೀಪಾವಳಿ ಬಯಲಾಟ ನಾಡಿನಾದ್ಯಂತ ಪ್ರಸಿದ್ಧಿ ಪಡೆದಿದೆ. ದೀಪಾವಳಿ ಬಯಲಾಟದ ಗ್ಯಾರಂಟಿ ಮತ್ತು ಬಾಲಿ ಪಾತ್ರದ ದಿ. ಪ್ರಹ್ಲಾದ ಗುರವ, ಚಿನ್ನಪ್ಪ ಕಾಮಗೊಂಡ ಅವರ ಅಭಿನಯ ಪ್ರೇಕ್ಷಕರಲ್ಲಿ ಹಚ್ಚ ಹಸಿರಾಗಿ ಉಳಿದಿದೆ. ಸಾಂಸ್ಕೃತಿಕವಾಗಿ ಮುಂಚೂಣಿಯಲ್ಲಿರುವ ಗ್ರಾಮದ ಬಯಲಾಟ, ನಾಟಕಗಳ ಕುರಿತು ಪುಸ್ತಕ ಹೊರ ತಂದಿರುವುದು ಔಚಿತ್ಯ ಪೂರ್ಣವಾಗಿದೆ ಎಂದರು.ಕೃತಿ ಪರಿಚಯಿಸಿದ ಹಿರಿಯ ಸಾಹಿತಿ ವಸಂತ ಅಗಸಿಮನಿ ಮಾತನಾಡಿ, ಹುನ್ನೂರಲ್ಲಿ ನಾಟಕ ಸಂಘಗಳು ನಡೆದು ಬಂದ ದಾರಿ, ಗ್ರಾಮದ…

Read More

ಉದಯರಶ್ಮಿ ದಿನಪತ್ರಿಕೆಕೊಲ್ಹಾರ: ಸಮಾಜ ಸಂಘಟನೆ ಮಾಡುವದು ಜನರ ಪ್ರೀತಿ, ವಿಶ್ವಾಸ, ನಂಬಿಕೆ ಉಳಿಸಿಕೊಂಡು ಸಾಗುವದು ಇಂದಿನ ದಿನಮಾನಗಳಲ್ಲಿ ಅವಶ್ಯಕವಾಗಿದೆ ಎಂದು ನಿಪ್ಪಾಣಿ ಕ್ಷೇತ್ರದ ಶಾಸಕಿ ಶ್ರೀಮತಿ ಶಶಿಕಲಾ ಜೊಲ್ಲೆ ಹೇಳಿದರು. ಪಟ್ಟಣದ ತೆರಪಿ ಯಲ್ಲಮ್ಮ ದೇವಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡ ನಂತರ ಕೊಲ್ಹಾರದ ಅವರ ಅಭಿಮಾನಿಗಳು ಹಾಗೂ ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿಯವರು ಏರ್ಪಡಿಸಿದ್ದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಬಸವನ ಬಾಗೇವಾಡಿ ಮತಕ್ಷೇತ್ರದಲ್ಲಿ ನಾಡಿನ ಜನರು ಮೆಚ್ಚುವಂತಹ ಜನಪರವಾದ ಕೊರ್ತೀ ಕೊಲ್ಹಾರ ಸೇತುವೆ ನಿರ್ಮಾಣ, ಕೂಡಗಿ ಎನ್ ಟಿಪಿಸಿ ಸೇರಿದಂತೆ ಹಲವಾರು ಅಭಿವೃದ್ದಿ ಕಾಮಗಾರಿಗಳನ್ನು ಜಾರಿಗೆ ತಂದಿರುವದು ಅತ್ಯಂತ ಶ್ಲಾಘನೀಯ ಕಾರ್ಯವಾಗಿದೆ ಎಂದರು. ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಮಾತನಾಡಿ, ಸಮಾಜದಲ್ಲಿ ಯುವಜನತೆ ಪರಿಶ್ರಮದಿಂದ ತಾವು ಮಾಡುವ ಕಾಯಕದಲ್ಲಿ ನಿರತರಾದಾಗ ಯಶಸ್ವಿ ಹೆಜ್ಜೆಯತ್ತ ದಾಪುಗಾಲು ಹಾಕಲು ಸಾದ್ಯವಾಗುತ್ತದೆ ಎಂದರು. ಜೇನು ಹುಳಗಳು ಗೂಡು ಕಟ್ಟಿ ಸಿಹಿಯನ್ನು ಕೊಡುವಂತೆ ಬದುಕಿನಲ್ಲಿ ನಾವುಗಳು ಕೂಡಾ ಕಹಿ ನೆನಪು ಮರೆತು ಸರ್ವ ಜನರಲ್ಲಿ ಸಿಹಿಯಾದ…

Read More

ವಿಶ್ವಪರ್ವ ಕಾರ್ಯಕ್ರಮದಲ್ಲಿ ಅಧ್ಯಕ್ಷ ವಿಶ್ವನಾಥ ಶೇಷಾಚಲ ಹೇಳಿಕೆ ಉದಯರಶ್ಮಿ ದಿನಪತ್ರಿಕೆ ಹೆಚ್ ಡಿ ಕೋಟೆ : ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿ ಸಿಬಿಎಸ್ಇ ಶಾಲೆ, ಬಿಎಡ್ ಕಾಲೇಜು ಹಾಗೂ ಎಲ್ ಕೆಜಿ, ಯುಕೆಜಿಯಿಂದಲೇ ಇಂಗ್ಲಿಷ್ ಮಾಧ್ಯಮ ಆರಂಭಿಸಲು ಉತ್ಸಕನಾಗಿದ್ದೇನೆ ಎಂದು ಶ್ರೀ ವಿಶ್ವಭಾರತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಿಶ್ವನಾಥ ಶೇಷಾಚಲ ಅವರು ಹೇಳಿದರು. ಪಟ್ಟಣದಲ್ಲಿ ಶ್ರೀ ವಿಶ್ವಭಾರತಿ ಶಿಕ್ಷಣ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವಪರ್ವ 2026 ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಶಿಕ್ಷಣ ಅನ್ನೋದು ಆಹಾರ ಇದ್ದಂತೆ. ಒಂದು ದೇಶ ಬಲಿಷ್ಠವಾಗಬೇಕಾದರೆ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಡಾ. ಬಿ.ಆರ್. ಅಂಬೇಡ್ಕರ್ ಅವರು ಹೇಳಿದ್ದರು. ಸಮಾಜದ ಅಭಿವೃದ್ಧಿ ದೃಷ್ಟಿಯಿಂದ ಶಿಕ್ಷಣ ಮಾಡೆಲ್ ಇದ್ದಂತೆ. ಹೀಗಾಗಿ ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಗುಣಾತ್ಮಕ ಶಿಕ್ಷಣ ನೀಡಲು ಹೆಚ್ಚಿನ ಆದ್ಯತೆ ನೀಡುತ್ತಿದ್ದೇವೆ. ಕಳೆದ ಮೂರು ವರ್ಷಗಳಿಂದ ನಾವು ಮೌಲ್ಯಾಧಾರಿತ ಶಿಕ್ಷಣ ನೀಡುತ್ತಾ ಬರುತ್ತಿದ್ದು, ಮಕ್ಕಳಿಗೆ ಯಾವುದರಲ್ಲಿಯೂ ಕೊರತೆ ಆಗದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸಲಾಗಿದೆ. ವಿದ್ಯಾಭ್ಯಾಸದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ…

Read More

ಉದಯರಶ್ಮಿದಿನಪತ್ರಿಕೆ ಚಡಚಣ : ಸಮೀಪದ ಹಾವಿನಾಳ ಗ್ರಾಮದ ಶ್ರೀ ದತ್ತ ಇಂಡಿಯಾ ಶುಗರ್ಸ್ ಸಕ್ಕರೆ ಕಾರ್ಖಾನೆಯಲ್ಲಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದ್ದು, ಲಕ್ಷಾಂತರ ರೂ. ಹಾನಿ ಸಂಭವಿಸಿದ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ.ಕಾರ್ಖಾನೆಯಲ್ಲಿ ಶೇಖರಿಸಿಟ್ಟಿದ್ದ ಅಪಾರ ಪ್ರಮಾಣದ ಬಗ್ಯಾಸ್ (ಕಬ್ಬಿನ ಸಿಪ್ಪೆ)ಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಬೆಂಕಿ ತನ್ನ ಕೆನ್ನಾಲಿಗೆಯಿಂದ ಕ್ಷಣಾರ್ಧದಲ್ಲಿ ಬಾಯಲರ್ ಅಗ್ನಿ ಪ್ರದೀಪನ ಯಂತ್ರೋಪಕರಣಗಳಿಗೂ ಕೂಡ ಬೆಂಕಿ ಆವರಿಸಿದ ಪರಿಣಾಮ ಲಕ್ಷಾಂತರ ರೂ. ಮೌಲ್ಯದ ನಷ್ಟವಾಗಿರುವ ಶಂಕೆ ವ್ಯಕ್ತವಾಗಿದೆ ನಿಖರ ಹಾನಿಯ ಅಂದಾಜನ್ನು ತಜ್ಞರ ಪರಿಶೀಲನೆಯ ಬಳಿಕ ತಿಳಿದುಬರಲಿದೆ.ಬೆಂಕಿಹೊತ್ತಿಕೊಳ್ಳಲು ಶಾರ್ಟ ಸಕ್ಯೂಟ್ ಅಥವಾ ತಾಂತ್ರೀಕ ದೋಷ ಕಾರಣವಿರಬಹುದು ಅಥವಾ ಕಿಡಿಗೇಡಿಗಳ ಪಾಲು ಇದೆ ಎಂಬುದನ್ನು ತನಿಖೆಯ ನಂತರ ತಿಳಿದು ಬರಲಿದೆ.ಆದರೆ, ಎರಡು ದಿನಗಳ ಹಿಂದೆಯಷ್ಟೇ ಕಬ್ಬು ನುರಿಸಲು ಸಾಗಿಸುವ ಬೆಲ್ಟ್ ತುಂಡಾಗಿದ್ದರಿಂದ ಕಾರ್ಖಾನೆಯ ಎಲ್ಲ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸಲಾಗಿತ್ತು. ಆದ್ದರಿಂದ ಕಾರ್ಖಾನೆಯಲ್ಲಿ ಹೆಚ್ಚು ಕಾರ್ಮಿಕರಿಲ್ಲದ್ದರಿಂದ ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಆದರೆ, ಭಾರೀ ಪ್ರಮಾಣದ ನಷ್ಟ…

Read More

B……ಅತೀ ಶೀಘ್ರದಲ್ಲಿಯೇ ನಗರದಲ್ಲಿ ರೂ.30ಕೋಟಿ ವೆಚ್ಚದಲ್ಲಿ ಸಿಸಿ ರಸ್ತೆಗಳಿಗೆ ಚಾಲನೆ: ಶಾಸಕ ಮನಗೂಳಿ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ನಗರ ಮತ್ತು ಸಿಂದಗಿ ಮತಕ್ಷೇತ್ರದ ಅಭಿವೃದ್ಧಿಗಾಗಿ ಈಗಾಗಲೇ ಸಾವಿರಾರು ಕೋಟಿ ರೂಪಾಯಿ ಅನುದಾನವನ್ನು ತಂದು ಅಭಿವೃದ್ಧಿ ಪಡಿಸಲಾಗುತ್ತಿದೆ. ಇನ್ನು ನನ್ನ ಅಧಿಕಾರದ ಅವಧಿಯಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತೇನೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಸಿಂದಗಿ ನಗರದ ಸ್ವಾಮಿ ವಿವೇಕಾನಂದ ವೃತ್ತದಿಂದ ಕನಕದಾಸ ವೃತ್ತದವವರೆಗಿನ ರೂ.2ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಡಾಂಬರ್ ರಸ್ತೆ ಹಾಗೂ ವಿದ್ಯುತ್ ದೀಪಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಸವೇಶ್ವರ ವೃತ್ತದಿಂದ, ಸ್ವಾಮಿ ವಿವೇಕಾನಂದ ವೃತ್ತದವರೆಗೆ, ಚಿಕ್ಕಸಿಂದಗಿ ಬೈಪಾಸ್‌ದಿಂದ ಅಂಬೇಡ್ಕರ್ ವೃತ್ತದವರೆಗೆ, ಅಂಬೇಡ್ಕ‌ರ ವೃತ್ತದಿಂದ ಗಾಂಧಿ ವೃತ್ತದವರೆಗೆ, ಮೊರಟಗಿ ಬೈಪಾಸ್‌ವರೆಗೆ ಸೇರಿದಂತೆ ಸಿಂದಗಿ ನಗರದ ಸುತ್ತಲೂ ಬೀದಿ ದೀಪಗಳ ಕಾರ್ಯ ಈಗಾಗಲೇ ಪೂರ್ಣಗೊಂಡಿದೆ.ಹೆಗ್ಗೆರೇಶ್ವರ ದೇವಸ್ಥಾನಕ್ಕೆ ಹೋಗುವ ರಸ್ತೆಗೆ ರೂ.1ಕೋಟಿ 15ಲಕ್ಷ ಡಾಂಬರೀಕರಣಕ್ಕೆ ಅನುದಾನ ಮಂಜೂರಾಗಿದೆ. ಸೋಂಪುರ ರಸ್ತೆಯಿಂದ ಹಳೆಯ ಚಾಂದಕವಟೆ ಮಾರ್ಗಕ್ಕೆ ಸೇರುವ ರಸ್ತೆ ಹಾಗೂ ಬಂದಾಳ ರಸ್ತೆಗಳಿಗೆ ಬೀದಿ…

Read More

ಉದಯರಶ್ಮಿ ದಿನಪತ್ರಿಕೆ ಆಲಮೇಲ: ಕೃಷಿ ಪತ್ತಿನ ಸಹಕಾರಿ ಸಂಘ ಆಲಮೇಲ ನೂತನವಾಗಿ ಆಯ್ಕೆಯಾದ ಎಲ್ಲಾ ಸದಸ್ಯರಿಗೆ ಬಿಜೆಪಿಯ ಜಿಲ್ಲಾ ಮುಖಂಡರಾದ ಹಾಗೂ KPR ಸಕ್ಕರೆ ಕಾರ್ಖಾನೆಯ ನಿರ್ದೇಶಕರಾದ ಮಲ್ಲಿಕಾರ್ಜುನ ಜೋಗುರ ಇವರು ಇಂದು ಆಲಮೇಲ ಕೆಪಿಆರ್ ಆಫೀಸ್ ನಲ್ಲಿ ಎಲ್ಲಾ ಸದಸ್ಯರಿಗೆ ಗೌರವ ಸನ್ಮಾನ ಸಮಾರಂಭ ನೆರವೇರಿಸಿದರು. ಸಂದರ್ಭದಲ್ಲಿ ಗೊಲ್ಲಾಳ ಉಪ್ಪಿನ ಸಿದ್ದಲಿಂಗ ಸುಬೇದಾರ್ ಬಾಬು ಮೇಟಿ ಮುತ್ತು ನಣದಿ ಪ್ರಶಾಂತ್ ನಾಸಿ ನಾಗರಾಜ್ ಆಳೂರ ಬಸವರಾಜ ನಂದೂರ ಕೃಷ್ಣಕುಮಾರ ಗೌಂಡಿ ವಿಜಯಕುಮಾರ್ ಶ್ರೀ ಗಿರಿ ಹಾಗೂ ಕೆಪಿಆರ್ ಸಿಬ್ಬಂದಿಗಳು ಭಾಗಿಯಾಗಿದ್ದರು.

Read More