Subscribe to Updates
Get the latest creative news from FooBar about art, design and business.
Author: editor.udayarashmi@gmail.com
ವಂದೇ ಭಾರತ ರೈಲು ಸೇವೆಗೆ ನಕಾರ ಸೂಚಿಸಿದ ರೇಲ್ವೆ ಇಲಾಖೆ | ವಿಧಾನ ಪರಿಷತ್ ಶಾಸಕ ಸುನೀಲಗೌಡ ಪಾಟೀಲ ಆರೋಪ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿಜಯಪುರ-ಬಾಗಲಕೋಟೆ-ಬೆಂಗಳೂರು ಮತ್ತು ಮುಂಬಯಿ-ವಿಜಯಪುರ ಮಧ್ಯೆ ವಂದೇ ಭಾರತ ರೈಲು ಸೇವೆ ಪ್ರಾರಂಭಿಸುವುದು ಕಾರ್ಯಸಾಧುವಲ್ಲ ಎಂದು ಕೇಂದ್ರ ರೇಲ್ವೆ ಇಲಾಖೆ ತಿಳಿಸಿದ್ದು, ಇದು ಕೇಂದ್ರ ಸರಕಾರ ಬಸವನಾಡಿನ ಬಗ್ಗೆ ಹೊಂದಿರುವ ಮಲತಾಯಿ ಧೋರಣೆ ಸಾಕ್ಷಿಯಾಗಿದೆ ಎಂದು ವಿಧಾನ ಪರಿಷತ್ ಶಾಸಕ ಸುನೀಲಗೌಡ ಪಾಟೀಲ ತಿಳಿಸಿದ್ದಾರೆ.ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ವಿಜಯಪುರ-ಬಾಗಲಕೋಟೆ-ಬೆಂಗಳೂರು ಮಧ್ಯೆ ಹೊಸದಾಗಿ ವಂದೇ ಭಾರತ ರೈಲು ಸೇವೆ ಪ್ರಾರಂಭಿಸಬೇಕು ಮತ್ತು ಮುಂಬಯಿ-ಸೋಲಾಪುರ ನಡುವೆ ಸಂಚರಿಸುವ ವಂದೇ ಭಾರತ ರೈಲನ್ನು ವಿಜಯಪುರವರೆಗೆ ವಿಸ್ತರಿಸುವಂತೆ ಆಗ್ರಹಿಸಿ 09.03.2024ರಂದು ಪ್ರಧಾನಿಗೆ ಪತ್ರ ಬರೆಯಲಾಗಿತ್ತು. ಈ ಹೊಸ ರೈಲು ಸೇವೆ ಪ್ರಾರಂಭಿಸಿ ಅಖಂಡ ವಿಜಯಪುರ ಜಿಲ್ಲೆಯ ಪ್ರಯಾಣಿಕರಿಗೆ ಹಾಗೂ ಈ ಭಾಗದ ಅಭಿವೃದ್ಧಿಗೆ ಸಹಕರಿಸುವಂತೆ ಪ್ರಧಾನಿಗೆ ಮನವಿ ಮಾಡಲಾಗಿತ್ತು. ಈ ಪತ್ರಕ್ಕೆ ಕೇಂದ್ರ ರೇಲ್ವೆ ಇಲಾಖೆಯಿಂದ ಉತ್ತರ ಬಂದಿದೆ.…
ಲೇಖನ- ಡಾ.ಶಶಿಕಾಂತ ಪಟ್ಟಣಸಾಹಿತಿ ಮತ್ತು ಸಂಶೋಧಕರುರಾಮದುರ್ಗ – ಪುಣೆ ಉದಯರಶ್ಮಿ ದಿನಪತ್ರಿಕೆ ಮಾನವೀಯ ಮೌಲ್ಯಗಳ ಜೊತೆಗೆ ಸದಾ ಸಹೃದಯದ ಸ್ನೇಹ ಜೀವಿ ಶ್ರೀ ಜಿ ಬಿ ಸಾಲಕ್ಕಿ ಅವರದ್ದು. ಮಾತು ಕಠೋರ ಮನಸ್ಸು ಮೃದು ಬದುಕನ್ನು ಅತ್ಯಂತ ಗಾಢವಾಗಿ ಪ್ರೀತಿಸುವ ಸೃಜನಶೀಲ ಮನಸ್ಸಿನವರು. ಬಿಎಸೆನ್ನೆಲ್ ನಲ್ಲಿ ತಮ್ಮ ಬದುಕನ್ನು ಕಟ್ಟಿಕೊಂಡು ಕಾರ್ಮಿಕ ಸಂಘಟನೆ ಸಂಘರ್ಷ ಹೋರಾಟದ ಜೊತೆಗೆ ಸಾಹಿತ್ಯ ಪ್ರೇಮ ಆಧ್ಯಾತ್ಮಿಕ ಚಿಂತನೆ ಸಾಮಾಜಿಕ ಸೇವೆ ಅಗಮ್ಯವಾದದ್ದು. ಆಧ್ಯಾತ್ಮಿಕ ಚಿಂತನೆಯು ಆತ್ಮ, ಆತ್ಮ ಅಥವಾ ಆತ್ಮವನ್ನು ಆಲೋಚಿಸುತ್ತಿದೆ. ನಾವು ಈ ದೇಹವಲ್ಲ ಎಂದು ನಾವು ಅರಿತುಕೊಳ್ಳುತ್ತೇವೆ, ದೇಹವು ನಿರಂತರವಾಗಿ ಬದಲಾಗುತ್ತಿರುತ್ತದೆ. ಮೊದಲು ನಾವು ಹುಟ್ಟಿದಾಗ ಮಗು, ನಂತರ ನಾವು ಬೆಳೆಯುತ್ತೇವೆ, ನಾಳೆ ನಾವು ವಯಸ್ಸಾಗುತ್ತೇವೆ ಮತ್ತು ಅಂತಿಮವಾಗಿ ದೇಹವು ಸಾಯುತ್ತದೆ. ನಾವು ಆಲೋಚಿಸಿದಾಗ, ನಾವು ಈ ದೇಹವಲ್ಲ ಎಂದು ಆತ್ಮಾವಲೋಕನ ಮಾಡಿದಾಗ, ನಾವು ಆತ್ಮ ಎಂಬ ದಿವ್ಯ ಸತ್ಯವನ್ನು ತಿಳಿದುಕೊಳ್ಳುತ್ತೇವೆ. ಇದು ಆಧ್ಯಾತ್ಮಿಕ ಚಿಂತನೆ. ನೀವು ಏನಲ್ಲ, ನೀವು ದೇಹವಲ್ಲ, ನೀವು…
Udayarashmi kannada daily newspaper
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕಾನೂನು ಬಾಹಿರವಾಗಿ ರೈತರ, ಸಂಘ-ಸಂಸ್ಥೆಗಳ, ಮಠ ಮಾನ್ಯಗಳ ಜಮೀನು, ಅಲ್ಲದೇ ಸರ್ಕಾರಿ ಜಮೀನು, ಇತ್ಯಾದಿ ಆಸ್ತಿಗಳ ಉತಾರೆಯಲ್ಲಿ ವಕ್ಪ್ ಆಸ್ತಿ ಎಂದು ಎಂಟ್ರಿ ಮಾಡಿರುವುದನ್ನು ತಕ್ಷಣ ತೆಗೆದು ಹಾಕುವುದು, ವಕ್ಫ್ ಕಾಯ್ದೆಯನ್ನೇ ದೇಶದಿಂದ ಕಿತ್ತಿ ಹಾಕುವುದು ಸೇರಿದಂತೆ ವಿವಿಧ ಬೇಡಿಕೆಗಳಿಗಾಗಿ ಒತ್ತಾಯಿಸಿ ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಹೊರಾಂಗಣದಲ್ಲಿ ನಡೆಯುತ್ತಿರುವ ಅನಿರ್ಧಿಷ್ಟಾವಧಿ ಅಹೋರಾತ್ರಿ ಧರಣಿಯ ಎರಡನೇ ದಿನವಾದ ಮಂಗಳವಾರ ಧರಣಿ ಸ್ಥಳಕ್ಕೆ ಆಗಮಿಸಿ ಶಂಕರಲಿಂಗ ಬಣಗಾರ (ನಾಗಲೀಕ) ಸಮಾಜ ಸೇವಾ ಸಂಘದವರು ಬೆಂಬಲ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಅಧ್ಯಕ್ಷರಾದ ಮಹೇಶ ಹೆರಲಗಿ, ಮಹಾನಗರ ಪಾಲಿಕೆ ಸದಸ್ಯರಾದ ಶಿವರುದ್ರ ಬಾಗಲಕೋಟ, ವಿರುಪಾಕ್ಷಪ್ಪ ಶಾಬಾದಿ, ಈರಪ್ಪ ಕುರ್ಲೆ, ಸಿದ್ರಾಮಪ್ಪ ಉಪ್ಪನಗಿ, ಶಂಕರ ಹೆರಲಗಿ, ಪಾವಡೆಪ್ಪ ಗಿಡವೀರ, ಶಶಿ ಜವಳಿ, ಉಮಾಕಾಂತ ಹೆರಲಗಿ, ಹುಚ್ಚಪ್ಪ ಕೇಶಟ್ಟಿ, ಸುವರ್ಣ ಕುರ್ಲೆ, ಜಯಶ್ರೀ ಗುರುಬಸಣ್ಣವರ, ಈರಣ್ಣ ಹೆರಲಗಿ, ಮಲ್ಲಿಕಾರ್ಜುನ ಹೆರಲಗಿ, ಅಮೀತ್ ಕುರ್ಲೆ, ಪ್ರಶಾಂತ ಕರಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಅ.೧೪ರಿಂದ ೧೬ರವರೆಗೆ ಕರ್ನಾಟಕ ವಿಧಾನಮಂಡಲದ ಸಮಿತಿಯಿಂದ ಅಧ್ಯಯನ ಪ್ರವಾಸ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ವಿಧಾನಮಂಡಲದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯು ಇದೇ ನ.೧೪ ರಿಂದ ೧೬ರವರೆಗೆ ಬೆಳಗಾವಿ ವಿಭಾಗದ ಧಾರವಾಡ, ಗದಗ, ಬಾಗಲಕೋಟೆ, ವಿಜಯಪುರ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಅಧ್ಯಯನ ಪ್ರವಾಸ ಕೈಗೊಂಡು ಈ ಜಿಲ್ಲೆಗಳಲ್ಲಿ ಎಸ್ಸಿ-ಎಸ್ಟಿ ಸಮುದಾಯದವರ ಅಭಿವೃದ್ದಿಗಾಗಿ ಹಮ್ಮಿಕೊಳ್ಳಲಾಗಿರುವ ವಿವಿಧ ಯೋಜನೆ-ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ನಡೆಸಲಿದೆ.ಪಿ.ಎಂ.ನರೇಂದ್ರಸ್ವಾಮಿಯವರ ಅಧ್ಯಕ್ಷತೆಯಲ್ಲಿರುವ ಸಮಿತಿಯಲ್ಲಿ ಸದಸ್ಯರುಗಳಾದ ರಮೇಶ ಜಾರಕಿಹೊಳಿ, ಡಾ.ಎಂ.ಚಂದ್ರಪ್ಪ, ದುರ್ಯೋಧನ ಐಹೊಳೆ, ಜಿ.ಹಂಪಯ್ಯ ನಾಯಕ್ ಬಲ್ಲಟಗಿ, ಎಸ್.ಎಸ್.ಸುಬ್ಬಾರೆಡ್ಡಿ, ಬಸನಗೌಡ ತುರುವಿಹಾಳ್, ಅಬ್ಬಯ್ಯ ಪ್ರಸಾದ್, ಬಸವರಾಜ್ ಮತ್ತಿಮುಡ, ನೇಮಿರಾಜ್ ನಾಯ್ಕೆ, ಎನ್.ಶ್ರೀನಿವಾಸಯ್ಯ, ಬಿ.ದೇವೆಂದ್ರಪ್ಪ, ಕೆ.ಸಿ.ವಿರೇಂದ್ರ ಪಪ್ಪಿ, ಕೃಷ್ಣಾ ನಾಯ್ಕ ಕೆ., ಕೆ.ಎಸ್.ಬಸವಂತಪ್ಪ, ಎನ್.ರವಿಕುಮಾರ, ಡಾ.ಡಿ.ತಿಮ್ಮಯ್ಯ, ರಾಜೇಂದ್ರ ರಾಜಣ್ಣ, ಸಿ.ಎನ್.ಮಂಜೇಗೌಡ, ಶ್ರೀಮತಿ ಹೇಮಲತಾ ನಾಯಕ್ ಸೇರಿದಂತೆ ಅಧಿಕಾರಿಗಳನ್ನೊಳಗೊಂಡ ತಂಡ, ನ.೧೪ರಂದು ಧಾರವಾಡ ಜಿಲ್ಲೆಗೆ ಭೇಟಿ ನೀಡಿ, ಅಂದು ಬೆಳಿಗ್ಗೆ ೧೦-೩೦ಕ್ಕೆ ಗದಗ ಜಿಲ್ಲೆಯ ಹಾಗೂ ಮಧ್ಯಾಹ್ನ ೨-೩೦ ಗಂಟೆಗೆ ಧಾರವಾಡ…
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪಟ್ಟಣದ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಸೋಮವಾರ ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ಮಾಸಿಕ ಸಭೆ ಸಂಘದ ತಾಲೂಕಾಧ್ಯಕ್ಷ ಎಫ್.ಡಿ.ಮೇಟಿ ಅಧ್ಯಕ್ಷತೆಯಲ್ಲಿ ಜರುಗಿತು.ಸಭೆಯಲ್ಲಿ ಪಿಂಚಣಿದಾರರು ಜೀವಿತ ಪ್ರಮಾಣ ಪತ್ರವನ್ನು ಭಾರತೀಯ ಸ್ಟೇಟ್ ಬ್ಯಾಂಕಿಗೆ ಸಲ್ಲಿಸುವದು. ಸೈಬರ್ ಕಳ್ಳರ ಬಗ್ಗೆ ಎಚ್ಚರಿಕೆ ವಹಿಸುವದು. ನಿವೃತ್ತ ನೌಕರರ ಬೇಡಿಕೆಗಳನ್ನು ಈಡೇರಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಂಘದ ಕೇಂದ್ರ ಅಧ್ಯಕ್ಷರು ಭೇಟಿ ಮಾಡಿರುವ ಕುರಿತು, ಈಚೆಗೆ ವಿಜಯಪುರದಲ್ಲಿ ಜರುಗಿದ ಜಿಲ್ಲಾ ನಿವೃತ್ತ ನೌಕರರ ಸಮಾವೇಶ ಕುರಿತು ಮಾಹಿತಿ ನೀಡಲಾಯಿತು. ಸಭೆಯಲ್ಲಿ ಇತರೇ ವಿಷಯಗಳನ್ನು ಚರ್ಚಿಸಲಾಯಿತು.ಇದೇ ಸಂದರ್ಭದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಸ್ಥಳೀಯ ಜನಪದ ಗಾಯಕ ಬಸವರಾಜ ಹಾರಿವಾಳ ಅವರನ್ನು ಸಂಘದಿಂದ ಸನ್ಮಾನಿಸಲಾಯಿತು.ಇವರ ಕುರಿತು ಎಂ.ಜಿ.ಆದಿಗೊಂಡ,ಸುರೇಶಗೌಡ ಪಾಟೀಲ, ಎಸ್.ಎಸ್.ಝಳಕಿ, ಎಸ್.ಕೆ.ಸೋಮನಕಟ್ಟಿ, ಎಫ್.ಡಿ.ಮೇಟಿ ಮಾತನಾಡಿದರು.ಸಭೆಯಲ್ಲಿ ಭಾರತೀಯ ಸ್ಟೇಟ್ ಬ್ಯಾಂಕಿನ ಸ್ಥಳೀಯ ಶಾಖೆಯ ಆರ್ಥಿಕ ಸಲಹೆಗಾರ ಚಿಮ್ಮಲಿಗ ಅವರು ಬ್ಯಾಂಕಿನ ಕುರಿತು ಮಾಹಿತಿ ನೀಡಿದರು. ಇದೇ ತಿಂಗಳು ಇವಣಗಿ ಗ್ರಾಮದಲ್ಲಿ ನಡೆಯುವ ತಾಲೂಕು ಹತ್ತನೇ ಕನ್ನಡ…
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ೧೨ ನೇ ಶತಮಾನದ ಬಸವಾದಿ ಶರಣರ ಸಂದೇಶಗಳನ್ನು ನಾಡಿನಲ್ಲಿ ಶರಣ ಸಾಹಿತ್ಯ ಪರಿಷತ್ತು ದತ್ತಿ ಉಪನ್ಯಾಸ, ಸಮ್ಮೇಳನ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಪ್ರಸಾರ ಮಾಡುತ್ತಿರುವುದು ಶ್ಲಾಘನೀಯ ಎಂದು ನಿವೃತ್ತ ಪ್ರಾಧ್ಯಾಪಕ ಪಿ.ಎಲ್.ಹಿರೇಮಠ ಹೇಳಿದರು.ಪಟ್ಟಣದ ಶಿವಾನಂದ ಪೂಜಾರಿ ಅವರ ನಿವಾಸದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತು ಲಿಂ. ಮಹಾದೇವಪ್ಪ ಶಿವಪ್ಪ ಪೂಜಾರಿ ಸ್ಮರಣಾರ್ಥ ಸೋಮವಾರ ಸಂಜೆ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಸವಾದಿ ಶರಣರು ರಚಿಸಿರುವ ವಚನಗಳಲ್ಲಿ ಮಾನವೀಯ ಮೌಲ್ಯಗಳಿವೆ. ವಚನಗಳಲ್ಲಿರುವ ಜೀವನ ಮೌಲ್ಯಗಳನ್ನು ಅರಿತು ನಡೆದರೆ ಸಮಾಜದಲ್ಲಿ ಸನ್ಮಾರ್ಗದಲ್ಲಿ ನಡೆಯಲು ಪೂರಕವಾಗಿದೆ. ಇಂತಹ ವಚನ ಸಂದೇಶವನ್ನು ಶರಣ ಸಾಹಿತ್ಯ ಪರಿಷತ್ತು ಶಾಲೆಗಳಲ್ಲಿ, ಗ್ರಾಮಾಂತರ ಪ್ರದೇಶಗಳಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಜನಮಾಸನಕ್ಕೆ ಮುಟ್ಟಿಸುವ ಕಾರ್ಯದಲ್ಲಿ ತೊಡಗಿಕೊಂಡಿದೆ ಎಂದರು.ನಿವೃತ್ತ ಬ್ಯಾಂಕ್ ವ್ಯವಸ್ಥಾಪಕ ವಿರೇಶ ಕುಂಟೋಜಿ ಮಾತನಾಡಿ, ವಿಶ್ವಗುರು ಬಸವೇಶ್ವರರು ಬಯಸಿದ ಉದಾತ್ತ ಸಮಾಜ ಕಟ್ಟುವ ಕಾರ್ಯವನ್ನು ಮತ್ತು ಧಾರ್ಮಿಕ ಪ್ರಪಂಚದಲ್ಲಿ ಉಂಟು ಮಾಡಿದ…
ಉದಯರಶ್ಮಿ ದಿನಪತ್ರಿಕೆ ಇಂಡಿ: ಕನ್ನಡ ನಾಡು ಹಲವು ವೈವಿದ್ಯ, ವೈಶಿಷ್ಟಗಳಿಂದ ಕೂಡಿದ್ದು ಕಲೆ, ಸಂಸ್ಕೃತಿ, ಸಾಹಿತ್ಯ, ಜ್ಞಾನ, ತ್ಯಾಗ, ಬಲಿದಾನಗಳ ಭಂಡಾರವನ್ನೆ ತುಂಬಿಕೊಂಡಿದೆ. ಅದರಂತೆ ಲಿಂಬೆ ನಾಡಿನಲ್ಲಿ ಸಿಂಪಿ ಲಿಂಗಣ್ಣ, ಮಧುರಚನ್ನರು, ಶ್ರೀಲಿಂಗರು, ದೂಲಾಸಾಭ ಸೇರಿದಂತೆ ಅನೇಕ ಮಹಾನ ವ್ಯಕ್ತಿಗಳು ಕನ್ನಡ ನಾಡಿಗೆ ಕೊಡುಗೆ ನೀಡಿದ್ದಾರೆ. ವಿಶೇಷವಾಗಿ ತಾಂಬಾ ಗ್ರಾಮದಲ್ಲಿ ಶ್ರೀ ಸಂಗನ ಬಸವೇಶ್ವರ ಸ್ವಾಮಿಜಿಗಳ ಶೈಕ್ಷಣಿಕ ಕ್ರಾಂತಿಯಿಂದಾಗಿ ತಾಲ್ಲೂಕಿನಲ್ಲಿಯೆ ಮಾದರಿ ಗ್ರಾಮವಾಗಿದೆ ಎಂದು ಗ್ರಾಮೀಣ ಠಾಣಾ ಸಿಪಿಐ ಎಮ್ ಎಮ್ ಡಪ್ಪಿನ ಹೇಳಿದರು.ತಾಲ್ಲೂಕಿನ ತಾಂಬಾ ಗ್ರಾಮದ ಹೃದಯಭಾಗದಲ್ಲಿರುವ ಶ್ರೀ ಸಂಗನ ಬಸವೇಶ್ವರ ವೃತದಲ್ಲಿ, ಭಗತಸಿಂಗ್ ಯುವಕ ಮಂಡಳಿ ಹಾಗೂ ಕನ್ನಡಪರ ಸಂಘಟನೆಯ ಸಂಯೋಜನೆಯಲ್ಲಿ ಜರುಗಿದ 69 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.ತಾಂಬಾ ಗ್ರಾಮ ತಾಲ್ಲೂಕಿನಲ್ಲಿಯೆ ಅತೀ ದೊಡ್ಡ ಗ್ರಾಮ ಹಾಗೂ ಅತ್ಯಂತ ಹೆಚ್ಚಿನ ಸಂಖ್ಯೆ ಹೊಂದಿದೆ. ಆದರೆ ಅಪರಾದ ಬಗ್ಗೆ ಗಮನಿಸಿದರೆ ಅತ್ಯಂತ ವಿರಳ ಎಂದು ಹೇಳಿದರು. ಇನ್ನೂ ವಿಶೇಷವಾಗಿ ಕನ್ನಡ ನಾಡಿನ ಬಗ್ಗೆ ತಿಳಿದುಕೊಳ್ಳಬೇಕಾದರೆ,…
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಧರ್ಮಗ್ರಂಥಗಳ ಜ್ಞಾನ ಪೀಳಿಗೆಯಿಂದ ಪೀಳಿಗೆಗೆ ನಿರಂತರವಾಗಿ ಸಾಗಿಸುವಲ್ಲಿ ಭಗವದ್ಗೀತಾ ಅಭಿಯಾನ ನಿರಂತರತೆಯನ್ನು ಕಾಯ್ದಕೊಳ್ಳುವ ಅನಿವಾರ್ಯತೆ ಇದೆ ಎಂದು ತಂಗಡಗಿ ಸಿದ್ದಾರೂಢ ಮಠದ ಮಾಧವಾನಂದ ಭಾರತೀ ಸ್ವಾಮೀಜಿಯವರು ನುಡಿದರು.ಪಟ್ಟಣದ ಹಡಲಗೇರಿ ರಸ್ತೆಯಲ್ಲಿರುವ ಪವಾಡ ಬಸವೇಶ್ವರ ಆಶ್ರಮದಲ್ಲಿ ಸರ್ವಜ್ಞೇಂದ್ರ ಸರಸ್ವತೀ ಪ್ರತಿಷ್ಠಾನ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಸೋಂದಾ ಸ್ವರ್ಣವಲ್ಲೀ ಸಂಸ್ಥಾನ ಶಿರಸಿ, ತಾಲೂಕಾ ಅಭಿಯಾನ ಸಮಿತಿ ಹಾಗೂ ಚೇತನ ಹಿರಿಯ ಪ್ರಾಥಮಿಕ ಶಾಲೆ ಇವರ ಸಹಯೋಗದಲ್ಲಿ ಭಗವದ್ಗೀತಾ ಅಭಿಯಾನ ಕರ್ನಾಟಕ-೨೦೨೪ ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯವಹಿಸಿ ಅವರು ಮಾತನಾಡಿದರು.ಮಗು ಚಿಕ್ಕವಯಸ್ಸಿನಲ್ಲಿರುವಾಗಲೇ ಸಂಸ್ಕಾರ ಮನೆಯಿಂದ ಪ್ರಾರಂಭವಾಗಬೇಕು. ನೋಡಿ, ಕೇಳಿ, ಮಾಡಿಕಲಿಯಲಿ ಎನ್ನುವ ರೀತಿಯಲ್ಲಿ ಅನ್ವಯಿಸಿಕೊಳ್ಳುವ ಪ್ರವೃತ್ತಿಯಿರುವುದರಿಂದ ಮನೆಯಲ್ಲಿ ತಂದೆ, ತಾಯಿ ಹಾಗೂ ಮನೆಯ ಸದಸ್ಯರ ವರ್ತನೆಯು ಸಂಸ್ಕಾರಭರಿತವಾಗಿರುವುದು ಅವಶ್ಯವಾಗಿದೆ. ನಾವು ನಮ್ಮ ಕಾಯಕವನ್ನು ಮಾಡುವುದೇ ನಿಜವಾದ ದೇವರ ಪೂಜೆ. ಗೀತೆಯ ತತ್ವದ ಪ್ರಸರಣ ನಿರಂತರವಾಗಿ ಸಾಗಬೇಕಾಗಿದೆ. ಮಾನಸಿಕ ಖಿನ್ನತೆಗೆ ಒಳಗಾಗಬಾರದು. ನಮ್ಮ ವಿಚಾರದಲ್ಲಿ ಕಲ್ಮಶ ವಿರಬಾರದು. ಸಮಾಜದಲ್ಲಿ ಗುರುತರವಾದ ಜವಾಬ್ದಾರಿ ಇರುವವರು ಸ್ವಅಧ್ಯಯನ…
ಮುದ್ದೇಬಿಹಾಳ, ಸಿಂದಗಿ, ಬಸವನಬಾಗೇವಾಡಿಗೆ ನೀರು ಯೋಜನೆ | ವಿಜಯಪುರಕ್ಕೆ ಕುಡಿವ ನೀರು ಸರಬರಾಜು | ಸಚಿವ ಎಂ.ಬಿ.ಪಾಟೀಲ ಸ್ಪಷ್ಟನೆ ಉದಯರಶ್ಮಿ ದಿನಪತ್ರಿಕೆ ಬೆಂಗಳೂರು: ವಿಜಯಪುರ ನಗರಕ್ಕೆ ಅಲಮಟ್ಟಿ ಹಿನ್ನೀರಿನಿಂದ ಕುಡಿಯುವ ನೀರು ಪೂರೈಸುವ ಸುಮಾರು ೧೦.೮ ಕಿ.ಮೀ ಉದ್ದದ ಕೊಳವೆ ಮಾರ್ಗ ಶಿಥಿಲವಾಗಿದ್ದು, ಅದನ್ನು ₹೫೨ ಕೋಟಿ ವೆಚ್ಚದಲ್ಲಿ ಬದಲಿಸಿ, ಹೊಸದಾಗಿ ಎಂ.ಎಸ್. ಪೈಪುಗಳನ್ನು ಅಳವಡಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಬೃಹತ್ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ತಿಳಿಸಿದರು.ವಿಧಾನಸೌಧದ ತಮ್ಮ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ವಿಜಯಪುರ ನಗರ ಸೇರಿದಂತೆ ಜಿಲ್ಲೆಯ ವಿವಿಧ ತಾಲ್ಲೂಕು ಕೇಂದ್ರಗಳಲ್ಲಿನ ಕುಡಿಯುವ ನೀರು ಸರಬರಾಜು ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಬಳಿಕ ಅವರು ಸುದ್ದಿಗಾರರಿಗೆ ಈ ಮಾಹಿತಿ ನೀಡಿದರು.ನಲವತ್ಮೂರು ಕಿ.ಮೀ ದೂರದ ಕೊಲ್ಹಾರದಿಂದ ವಿಜಯಪುರಕ್ಕೆ ಕುಡಿಯುವ ನೀರು ಸರಬರಾಜು ಆಗುತ್ತಿದೆ. ಇದರಲ್ಲಿ ಸುಮಾರು ೧೦.೮ ಕಿ.ಮೀ ಉದ್ದದ ಪಿ.ಎಸ್.ಸಿ ಕೊಳವೆ ಮಾರ್ಗ ಸಂಪೂರ್ಣ ಹಾಳಾಗಿದ್ದು, ಇದರಿಂದ ನೀರಿನ ಸೋರಿಕೆ ವಿಪರೀತ ಹೆಚ್ಚಾಗಿದೆ. ಇದನ್ನು…
